Jump to content

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು

From Wikisource

[ ಮುಖಪುಟ ]
[ ಪುಸ್ತಕ ವಿವರ ]


ತುಳುನಾಡಿನಲ್ಲಿ ಬಾಸೆಲ್ ಮಿಶನ್

ಮತ್ತಿತರ ಲೇಖನಗಳು...






ಬೆನೆಟ್ ಜಿ. ಅಮ್ಮನ್ನ





ಅಂಕನಹಳ್ಳಿ ಪ್ರಕಾಶನ

ಅಂಕನಹಳ್ಳಿ, ಬನ್ನಿಕುಪ್ಪೆ ಅಂಚೆ, ಕೈಲಾಂಚ ಹೋ, ರಾಮನಗರ ತಾಲ್ಲೂಕು,

ರಾಮನಗರ ಜಿಲ್ಲೆ. ಮೊ: 9632497558

[ ಪುಸ್ತಕ ವಿವರ ]Tulunadinalli Basel Mission Matthithara Lekhanagalu (Basel Mission in Tulunad and other Research Articles) By BENET G. AMANNA, Department of Archives, Karnataka Theological College, Balmatta, Mangalore -575001, Mob: 9449367982, Published by: Ankanahalli Prakashana, Ankanahalli, Bannikuppe Post, Ramanagara Talluk, Ramanagara Dist. Mobile:9632497558

ISBN 978-81-947424-4-9

Paper used: NS Maplitho 70 GSM ⅛ Demi


ಹಕ್ಕುಗಳು: ಲೇಖಕರದ್ದು ©: Author

ಮೊದಲ ಮುದ್ರಣದ ಮಾರಾಟದ ಹಕ್ಕುಗಳು: ಪ್ರಕಾಶಕರದ್ದು

ಪುಟಗಳು:xiv+೨೧೨=೨೨೬
Pages:xiv+212 = 226

ಮುಖಪುಟ: ಬಾಸೆಲ್ ಮಿಶನ್ ಇಂಡಸ್ಟ್ರಿ ನಿರ್ಮಿಸಿದ ಉಜಿರೆಯಲ್ಲಿದ್ದ ಸೇತುವೆ, 1903
ಫೋಟೋ ಕೃಪೆ: Mission 21/ BM Archives ಮುಖಪುಟ: ಗಂಗರಾಜು ಎನ್. ಮತ್ತೀಕೆರೆ
ಆಕಾರ ಡಿಸೈನಿಂಗ್, ಬೆಂಗಳೂರು

ಪ್ರಥಮ ಮುದ್ರಣ: ಜೂನ್ ೨೦೨೦
First Edition: Jun 2020

ಬೆಲೆ ರೂ. ೨೦೦-೦೦
Rs. 200-00

ಮುದ್ರಣ: ಅನ್ನಪೂರ್ಣೇಶ್ವರಿ ಪ್ರಿಂಟರ್ಸ್

ನಂ. 563, 10ನೇ ಸಿ ಮುಖ್ಯರಸ್ತೆ, 6ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು [ ಅರ್ಪಣೆ ]

ಅರ್ಪಣೆ

1-7-1915 18-7-1929
(13-4-1951)
23-8-1979 19-9-2015

ನನ್ನ ಬದುಕು, ಓದು, ಹವ್ಯಾಸಗಳಿಗೆ ಕರ್ತೃಗಳಾದ ನನ್ನ ತಂದೆ

ಪಾಂಗಾಳ ಗುಡ್ಡೆ ಜೇಮ್ಸ್ ರಮಣ ಅಮ್ಮನ್ನ(ಶಿಕ್ಷಕರು)

ಮತ್ತು ನನ್ನ ತಾಯಿ

ಪರಂಗಡಿ ಪಡ್ಡಯ್ ಬಿತ್ತಿಲ್ ಸರೋಜಿನಿ ಪ್ರೇಮಾವತಿ ಅಮನ್ನ

(ಪಾರಂಪರಿಕ ವೈದ್ಯೆ)ರವರ

ಸವಿನೆನಪಿಗೆ

‘ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.’

ಕೃತಿ ಅರ್ಪಿತ

[ ಮುನ್ನುಡಿ ]

ಮುನ್ನುಡಿ

ತುಳುನಾಡಿನ ಚರಿತ್ರೆಯಲ್ಲಿ ಬಾಸೆಲ್ ಮಿಶನ್‌ನ ಪಾತ್ರವು ಬಹಳ ಮಹತ್ವದ್ದು. ಶಿಕ್ಷಣ, ಉದ್ಯೋಗ, ಕೈಗಾರಿಕೆ, ಮುದ್ರಣ, ಕೃಷಿ, ವೈದ್ಯಕೀಯ ಹೀಗೆ ಹಲವು ಕ್ಷೇತ್ರಗಳಲ್ಲಿ ಬಾಸೆಲ್ ಮಿಶನ್ ಸಂಸ್ಥೆಯು ಕಳೆದ 186 ವರ್ಷಗಳಲ್ಲಿ ಕೈಗೊಂಡಿರುವ ಕಾರ್ಯಗಳಿಗೆ ಒಟ್ಟು ಭಾರತೀಯ ಚರಿತ್ರೆಯಲ್ಲಿಯೇ ಪ್ರಮುಖ ಸ್ಥಾನವಿದೆ. ಬಾಸೆಲ್ ಮಿಶನ್ ಸಂಸ್ಥೆಯ ಕೊಡುಗೆಗಳ ಬಗ್ಗೆ ಎಂ.ಫಿಲ್, ಪಿ.ಎಚ್.ಡಿ ಪದವಿಗಳಿಗಾಗಿ ಅನೇಕ ಉತ್ತಮ ಸಂಶೋಧನೆಗಳು ನಡೆದಿವೆ, ಸ್ನಾತಕೋತ್ತರ ಪದವಿಯ ಅವಶ್ಯಕತೆಗಾಗಿ ಪೂರಕ ಪ್ರಬಂಧಗಳೂ ರೂಪುಗೊಂಡಿವೆ. ಸಾಹಿತ್ಯ, ಸಂಸ್ಕೃತಿ ಕ್ಷೇತ್ರಗಳಿಗೆ ವಿಭಿನ್ನ ಆಯಾಮವನ್ನು ನೀಡಬಲ್ಲ, ಇನ್ನೂ ಸಂಶೋಧನೆ ನಡೆಯಬೇಕಾದ ಹಲವಾರು ವಿಷಯಗಳು ಬಾಸೆಲ್ ಮಿಶನ್ ಸಂಬಂಧೀ ಕ್ಷೇತ್ರದಲ್ಲಿವೆ. ಇಂದು ಬಾಸೆಲ್ ಮಿಶನ್‌ಗೆ ಸಂಬಂಧಿಸಿದ ಸಂಶೋಧನೆಗಳ ಸಂದರ್ಭದಲ್ಲಿ ಮೊದಲ ಸಾಲಿನಲ್ಲಿ ನೆನಪಿಗೆ ಬರುವ ಹೆಸರು ಮಿತ್ರರಾದ ಶ್ರೀಯುತ ಬೆನೆಟ್ ಜಿ. ಅಮ್ಮನ್ನರವರದು. ಸರಳ, ಸಜ್ಜನಿಕೆಯ ವ್ಯಕ್ತಿತ್ವದ ಅವರು ಕಳೆದ 38 ವರ್ಷಗಳಿಂದ ಗ್ರಂಥಾಲಯ ಮತ್ತು ಪತ್ರಾಗಾರದಲ್ಲಿ ಸೇವೆ ಸಲ್ಲಿಸುತ್ತಿರುವವರು. ತಮ್ಮ ನಿರಂತರ ಅಧ್ಯಯನದ ಮೂಲಕ ನೂರಾರು ಸಂಶೋಧಕರಿಗೆ ನೆರವಾಗಿ ಮೂಲ ಅಕರಗಳನ್ನು ಒದಗಿಸಿಕೊಟ್ಟು ಹೊಸ ಹೊಳಹುಗಳಿಗೆ ಕಾರಣರಾದವರು. ಬೆನೆಟ್‌ರವರು ಕಳೆದ ಮೂರು ದಶಕಗಳಿಂದ ತಮ್ಮ ಬರವಣಿಗೆಯ ಮೂಲಕ ಅನೇಕ ಮಹತ್ವದ ಆಕರಗಳನ್ನು ದಾಖಲಿಸಿ ಪ್ರಕಟಿಸುತ್ತಾ ಬಂದಿದ್ದಾರೆ. ಹಲವಾರು ವಿದ್ವತ್ ಲೇಖನಗಳನ್ನೂ, ಪುಸ್ತಕಗಳನ್ನು ನೀಡಿದ್ದಾರೆ. ಅವರು ಪತ್ರಾಗಾರದಲ್ಲಿ ಸೇವೆ ಸಲ್ಲಿಸುತ್ತಿರುವುದರಿಂದ ದಾಖಲೀಕರಣಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಾ ಬಂದಿದ್ದಾರೆ. ಸಮಗ್ರ ಮಾಹಿತಿಯಿಲ್ಲದ ವಿಭಾಗಗಳನ್ನು ಗುರುತಿಸಿ ಅವುಗಳನ್ನು ಸಂಶೋಧಕರಿಗೆ ದೊರಕಿಸಿಕೊಡುವ ಬಗ್ಗೆ, ಅದನ್ನು ದಾಖಲೀಕರಣ ಮಾಡುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ. ಕನ್ನಡ ತುಳು ಸಾಹಿತ್ಯಕ್ಕೆ ವಿದೇಶಿಯರ ಕೊಡುಗೆ, [ ಮುನ್ನುಡಿ ]ಬಿಂಬಿಸುತ್ತಿದೆ. ತುಳುನಾಡಿನ ಅಧ್ಯಯನಕ್ಕೆ ಅವಶ್ಯವಾಗಿ ಬೇಕಾಗಿರುವ ಚಿಂತನೆಗಳು ಅಲ್ಲಿಲ್ಲಿ ಚದುರಿಹೋಗದೆ ಈ ಲೇಖನಗಳ ಮೂಲಕ ದಾಖಲಾಗಿ ಮುಂದಿನ ಆಸಕ್ತರಿಗೆ ಉಳಿದುಕೊಳ್ಳುತ್ತಿರುವುದು ಸಂತಸದ ಸಂಗತಿ. ಇಲ್ಲಿ ಕನ್ನಡ ಮತ್ತು ತುಳು ಲೇಖನಗಳೆರಡೂ ಜೊತೆಜೊತೆಯಾಗಿ ಬಂದಿವೆ. ಇವು ಬಹುಮುಖ್ಯವಾಗಿ ತುಳುನಾಡಿನ ಓದುಗರನ್ನು ಗಮನದಲ್ಲಿರಿಸಿಕೊಂಡು ಬಂದಿವೆ. ಬಹಳ ಮುಖ್ಯವಾಗಿ ತುಳುನಾಡಿಗೆ ಸಂಬಂಧ ಪಟ್ಟ ವಿಚಾರಗಳು ತುಳುವಿನಲ್ಲಿಯೂ ದಾಖಲಾಗತೊಡಗಿರುವುದು ಮಂಗಳೂರು ವಿಶ್ವವಿದ್ಯಾಲಯವು ತುಳು ಸ್ನಾತಕೋತ್ತರ ಪದವಿಯನ್ನು ಪ್ರಾರಂಭಿಸಿರುವ ಈ ಸಂದರ್ಭದಲ್ಲಿ ಒಳ್ಳೆಯ ಬೆಳವಣಿಗೆ. ಶ್ರೀಯುತರಿಂದ ಇಂತಹ ಬರವಣಿಗೆಗಳು ಇನ್ನೂ ಮುಂದುವರಿಯಲಿ. ಓದುಗರು ಈ ಸಂಕಲನವನ್ನು ಆತ್ಮೀಯತೆಯಿಂದ ಸ್ವಾಗತಿಸಲಿ, ಈ ಮೂಲಕ ಸಂಶೋಧಕರು ಬಾಸೆಲ್ ಮಿಶನ್ ಸಂಬಂಧೀ ವಿವಿಧ ಕ್ಷೇತ್ರದಲ್ಲಿ ಸಂಶೋಧನೆ ನಡೆಸುವಂತಾಗಲಿ ಎಂದು ಹಾರೈಸುತ್ತಾ ಅಮ್ಮನ್ನರವರಿಗೆ ತಮ್ಮ ವಿದ್ವತ್ ಲೇಖನಗಳ ಸಂಗ್ರಹಗಳ ಕೃತಿಯನ್ನು ಹೊರತರುವುದಕ್ಕಾಗಿ ಸಂಶೋಧಕರೆಲ್ಲರ ಪರವಾಗಿ ಶುಭವನ್ನು ಹಾರೈಸುತ್ತೇನೆ.

ಡಾ. ಎಂ. ಎಸ್. ದುರ್ಗಾಪ್ರವೀಣ್

ಮುಖ್ಯಸ್ಥರು, ಕನ್ನಡ ಭಾಷೆ ಮತ್ತು ಅನುವಾದ ಅಧ್ಯಯನ ವಿಭಾಗ

ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂ, ಆಂಧ್ರಪ್ರದೇಶ

ಜೂನ್ 2020
 
[ ಪ್ರಕಾಶಕರ ಮಾತು ]

ಪ್ರಕಾಶಕರ ಮಾತು

ಉತ್ತಮ ಪುಸ್ತಕಗಳನ್ನು ಪ್ರಕಟಿಸಿ ಓದುಗರಿಗೆ ತಲುಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ನಮ್ಮ ಪ್ರಕಾಶನವು ಇದೀಗ ಬಾಸೆಲ್ ಮಿಶನ್ ಕಾರ್ಯಕ್ಷೇತ್ರದಲ್ಲಿ ಚಿರಪರಿಚಿತರಾಗಿರುವ ಶ್ರೀಯುತ ಬೆನೆಟ್ ಜಿ. ಅಮ್ಮನ್ನ ಅವರ ಲೇಖನಗಳ ಈ ಸಂಕಲನವನ್ನು ಹೊರತರುತ್ತಿದೆ.

ನಿರಂತರ ಸಂಶೋಧನೆಯಲ್ಲಿ ತೊಡಗಿಕೊಂಡವರು ಬೆನೆಟ್ ಅಮ್ಮನ್ನ ಅವರು. ಪ್ರಸ್ತುತ 'ಕುರಲ್ ಇಷ್ಟೆರ್ ಕುಡ್ಲ, 'ತುಳು ಪರಿಷತ್', 'ತುಳು ಬೈಬಲ್ ತರ್ಜುಮೆ ಸಮಿತಿ'ಯ ಸದಸ್ಯರಾಗಿ, 'ತುಳು ವಿಕಿಪಿಡಿಯಾ' ಸಂಪಾದಕರಾಗಿ, 'ಬಲ್ಮಕೊ'ದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. 2015-2017 ಸಾಲಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದು ಅಕಾಡೆಮಿಯ ಗ್ರಂಥಾಲಯ ಮತ್ತು ಪತ್ರಾಗಾರವನ್ನು ವ್ಯವಸ್ಥಿತವಾಗಿ ರೂಪಿಸಿದ್ದಾರೆ. 'ಮದಿಪು' ಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ. 'ಚಿಗುರಿದ ಬದುಕು' (ಕಿರು ಕಾದಂಬರಿ) (1996), 'ಬಿಲ್ಲವರು ಮತ್ತು ಬಾಸೆಲ್ ಮಿಶನ್ (2005), 'ಗಾನ ಗೊಂಚಲು'(ಸಂ.2006), 'ಜಾನ್ ಜೇಮ್ಸ್ ಬ್ರಿಗೆಲ್'(2012, ಕನ್ನಡ ವಿ.ವಿ., ಹಂಪಿ) ಕೃತಿಗಳನ್ನು ಬರೆದು ಪ್ರಕಟಿಸಿರುವುದಲ್ಲದೆ, 'ಬಾಸೆಲ್ ಮಿಶನರಿಗಳ ತುಳು ಟಿಪ್ಪಣಿಗಳು (2015)ಮತ್ತು 'ತುಳು ವಿಕ್ರಮಾರ್ಕ ಕತೆ' (2014) ಕೃತಿಗಳನ್ನು ಡಾ. ದುರ್ಗಾಪ್ರವೀಣ್‌ರರೊಂದಿಗೆ ಸಂಪಾದಿಸಿರುತ್ತಾರೆ. ಬಾಸೆಲ್ ಮಿಶನ್-200 ಮತ್ತು 2009ರಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ಪುಸ್ತಕ ಪ್ರಕಟಣೆಗಳ ಸಂಪಾದಕ ಮಂಡಳಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಇದೀಗ ನಮ್ಮ ಪ್ರಕಾಶನದಿಂದ ಹೊರಬರುತ್ತಿರುವ ಈ 'ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತು ಇತರ ಲೇಖನಗಳು' ಎಂಬ ಈ ಕೃತಿಯು ತುಳುನಾಡು, ನುಡಿ ಸಂಸ್ಕೃತಿಗೆ ಬಹುಮುಖ್ಯ ಕೊಡುಗೆ ಎಂಬುದರಲ್ಲಿ ಸಂಶಯವಿಲ್ಲ. ಇಲ್ಲಿನ ಲೇಖನಗಳು ಸಂಶೋಧನಾಸಕ್ತರಿಗೆ ಅಗತ್ಯವಾಗಿ ಬೇಕಾಗುವಂತವು. ಬಾಸೆಲ್ ಮಿಶನ್‌ನವರು ಶಿಕ್ಷಣ, ಆರೋಗ್ಯ, ಉದ್ಯೋಗ ಕ್ಷೇತ್ರಗಳ ಮೂಲಕ ಸಂಪರ್ಕಸೇತು [ ಪ್ರಕಾಶಕರ ಮಾತು ]ನಿರ್ಮಿಸುವ ಕಾರ್ಯವನ್ನು ಮಾಡಿದ್ದು, ಮುಖಪುಟದ 1903ರ ಸೇತುವೆಯ ಚಿತ್ರ ಅದನ್ನು ಪ್ರತಿಬಿಂಬಿಸಿದೆ. ಇದನ್ನು ಕೊಂಡು ಓದುವ ಸಹೃದಯರು ನೀಡುವvಅಭಿಪ್ರಾಯಗಳನ್ನು ನಮಗೆ ಬಹುಮುಖ್ಯ.

ನಮ್ಮ ಪ್ರಕಾಶನವು ಇದುವರೆಗೆ ಅನೇಕ ಉತ್ತಮ ಕೃತಿಗಳನ್ನು ನೀಡಿದ್ದು ಈ ವಿಶಿಷ್ಟ ಕೃತಿಯೂ ಓದುಗರಿಗೆ ಇಷ್ಟವಾಗುತ್ತದೆ ಎಂಬ ಭರವಸೆ ನಮ್ಮದು.

ಇದಕ್ಕೆ ಸೊಗಸಾದ ಮುನ್ನುಡಿಯನ್ನು ಬರೆದಿರುವ ಆತ್ಮೀಯ ಡಾ.ಎಂ.ಎಸ್‌.ದುರ್ಗಾಪ್ರವೀಣ ಅವರಿಗೆ ವಂದನೆಗಳು. ಮುಖಪುಟವನ್ನು ರೂಪಿಸಿರುವ ಗಂಗರಾಜು ಎನ್, ಮತ್ತೀಕೆರೆ. ಮುದ್ರಿಸಿರುವ ಅನ್ನಪೂರ್ಣೇಶ್ವರಿ ಪ್ರಿಂಟರ್ ಅವರಿಗೆ ಕೃತಜ್ಞತೆಗಳು.

ಅಂಕನಹಳ್ಳಿ ಪಾರ್ಥ

[ ಮೊದಲ ಮಾತು ]

ಮೊದಲ ಮಾತು.

“ಎಷ್ಟು ಲೇಖನಗಳನ್ನು ಬರಿ ಅದು ಯಾವುದೇ ಹೊಸ ವಿಚಾರವಾಗಿರಲಿ ಅಥವಾ ದಾಖಲೀಕರಣವಿರಲಿ ನಿಯತಕಾಲಿಕೆಗಳಲ್ಲಿ ಸ್ಮರಣ ಸಂಚಿಕೆಗಳಲ್ಲಿ ಬರೆದು ಸುಮ್ಮನಿರಬೇಡ ಯಾಕಂದರೆ ಅದು ಶಾಶ್ವತವಾಗಿ ಉಳಿಯುವುದಿಲ್ಲ. ಅದನ್ನು ಪುಸ್ತಕ ರೂಪದಲ್ಲಿ ಹೊರ ತರಬೇಕು, ಯಾವುದೇ ಪುಸ್ತಕಕ್ಕೆ ಓದುಗರು ಇಲ್ಲವೆಂದಿಲ್ಲ ಪ್ರತೀ ಪುಸ್ತಕಕ್ಕೆ ಒಬ್ಬ ಓದುಗ ಇರುತ್ತಾನೆ. ಅದಕ್ಕೆ ದೀರ್ಘ ಬಾಳಿಕೆ ಇರುತ್ತದೆ. ಆದ್ದರಿಂದ ಲೇಖಕ ಸಂಶೋಧನೆಯ ಬರಹಗಳ ಪುಸ್ತಕಗಳು ಯಾವುದಾದರೂ ಒಂದು ಗ್ರಂಥಾಲಯದಲ್ಲಿರುತ್ತದೆ” ಎನ್ನುತ್ತಿದ್ದ ಡಾ. ಶ್ರೀನಿವಾಸ ಹಾವನೂರರನ್ನು ಸ್ಮರಿಸಿಕೊಂಡು ನನ್ನ ಲೇಖಗಳ ಸಂಗ್ರಹವನ್ನು ಹೊರತರುತ್ತಿದ್ದೇನೆ.

ಬೇರೆ ಬೇರೆ ವಸ್ತು ವಿಷಯಗಳನ್ನೊಳಗೊಂಡ ಸಾವಿರಾರು ಲೇಖನಗಳನ್ನು ನಾವು ಓದಿ ಮನನ ಮಾಡಿಕೊಳ್ಳುತ್ತೇವೆ. ಇವುಗಳಲ್ಲಿ ಸಾಹಸಪಟ್ಟು ಬರೆದ ಅಮೂಲ್ಯ ಲೇಖನಗಳೂ, ಈ ತನಕ ಬೆಳಕಿಗೆ ಬಾರದ ವಿಷಯಗಳೂ ಸೇರಿದ್ದು ಸಂಗ್ರಹಕ್ಕೆ ಯೋಗ್ಯವಾಗಿರುತ್ತದೆ. ಆದರೆ ನಿಯತಕಾಲಿಕ ಹಾಗೂ ಸ್ಮರಣ ಸಂಚಿಕೆಗಳಲ್ಲಿ ಬರುವ ಲೇಖನಗಳನ್ನು ಸಂಗ್ರಹಿಸಿ ಬಳಸಿಕೊಳ್ಳುವ ಹವ್ಯಾಸಗಳು ನಮ್ಮಲ್ಲಿಲ್ಲ. ಇತ್ತೀಚಿಗಿನ ವರ್ಷಗಳಲ್ಲಿ ಲೇಖಕರುಗಳು ಬರೆದ ಲೇಖನಗಳ ಸಂಗ್ರಹದ ಕೃತಿಗಳು ಸಮಗ್ರ ಸಾಹಿತ್ಯ, ಅಭಿನಂದನಾ ಗ್ರಂಥ, ಸಂಸ್ಮರಣಾ ಗ್ರಂಥ ಇಂತಹ ಶಿರೋನಾಮೆಗಳ ಮೂಲಕ ಪ್ರಕಟಗೊಳ್ಳುತ್ತಿದ್ದು ಸಂಶೋಧಕರು ತಾಳ್ಮೆಯಿಂದ ಬರೆದ ಬರಹಗಳಿಗೆ ಗ್ರಂಥ ಸಂಗ್ರಹಗಳ ಕಪಾಟಿನಲ್ಲಿ ಸ್ಥಳ ಸಿಕ್ಕಂತಾಗಿ ಓದುಗನಿಗೆ ಜ್ಞಾನ ಒದಗಿಸುವ ಕಾರ್ಯವನ್ನು ಮಾಡುತ್ತಿವೆ.

ಪುಸ್ತಕಗಳ ನಡುವೆ ಕಳೆದ 38 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಾನು ದಾಖಲೀಕರಣದ ಬಗ್ಗೆ ಹೆಚ್ಚು ಗಮನ ಕೊಡುವುದರಿಂದ ನನ್ನ ಬರಹಗಳು ದಾಖಲೀಕರಣದಂತೆ ಇರುತ್ತದೆ. ವಿವಿಧ ವಸ್ತು ವಿಷಯಗಳನ್ನೊಳಗೊಂಡ ಲೇಖನಗಳು ಪುಸ್ತಕ ರೂಪದಲ್ಲಿದ್ದು ಓದುಗರಿಗೆ ಉಪಯೋಗವಾಗಬೇಕು ಎಂಬ ದೃಷ್ಟಿಯಿಂದ ಹಲವಾರು ವರ್ಷಗಳಿಂದ ನಿಯತಕಾಲಿಕೆ, ಸ್ಮರಣ ಸಂಚಿಕೆ, ಉಪನ್ಯಾಸ, ಆಕಾಶವಾಣಿಯಲ್ಲಿ ಪ್ರಕಟಗೊಂಡ ನನ್ನ ಬರಹಗಳನ್ನು 'ತುಳುನಾಡಿನಲ್ಲಿ ಬಾಸೆಲ್‌ಮಿಶನ್‌ ಮತ್ತಿತರ ಲೇಖನಗಳು . . ., ಎಂಬ ಹೆಸರಿನೊಂದಿಗೆ ಈ ಕೃತಿಯನ್ನು ಓದುಗರಾದ ತಮ್ಮ ಮುಂದಿಡಲು ಬಯಸುತ್ತೇನೆ. [ ಮೊದಲ ಮಾತು ]ಈ ತನಕ ನನ್ನ ಲೇಖನಗಳನ್ನು ಪ್ರಕಟಿಸಿದ ಪತ್ರಿಕೆಗಳ ಹಾಗೂ ಸ್ಮರಣ ಸಂಚಿಕೆಗಳ ಸಂಪಾದಕರುಗಳು, ಹಾಗೂ ನನ್ನ ಬರವಣಿಗೆಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಟ್ಟ ಶಿಕ್ಷಣ ಸಂಸ್ಥೆಯವರು, ಸಂಘ ಸಂಸ್ಥೆಯವರು ಈ ಕೃತಿ ಹೊರಬರುವಲ್ಲಿ ಕಾರಣಕರ್ತರಾಗಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ನನ್ನ ಬರವಣಿಗೆಗಳಿಗೆ ಪ್ರೋತ್ಸಾಹ ಕೊಡುತ್ತಿರುವ ಕರ್ನಾಟಕ ತಿಯೊಲಾಜಿಕಲ್ ಕಾಲೇಜ್‌ಗೆ ಮತ್ತು ಎಲ್ಲ ಸಹೋದ್ಯೋಗಿಗಳಿಗೂ, 2015-2017 ಸಾಲಿನ 'ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ'ಯ ಅಧ್ಯಕ್ಷರಾದ ಎ.ಸಿ.ಭಂಡಾರಿ, ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ., ಅಕಾಡೆಮಿಯ ಸದಸ್ಯರು ಹಾಗೂ ಎಲ್ಲಾ ಉದ್ಯೋಗಿಗಳು, ಗುಡ್ಡೆ, ಮಡಿಕೇರಿ ಗುಡ್ಡೆ, ಬಲ್ಮಠ, ವಾಮಂಜೂರು ಸಭೆಯ ಸದಸ್ಯರಿಗೆ, "ತುಳು ಪರಿಷತ್' ಹಾಗೂ 'ಕುರಲ್ ಇಷ್ಟೆರ್ ಕುಡ್ಲ'ದ ನನ್ನ ಎಲ್ಲ ಮಿತ್ರರು, ಕೆ.ಟಿ.ಸಿ. ಪತ್ರಾಗಾರದಲ್ಲಿ ಸಂಶೋಧಕರಾಗಿ ನನ್ನ ಮಿತ್ರರಾದ ಸಾಹಿತಿಗಳು, ಸಂಶೋಧಕರುಗಳಾದ ನನ್ನ ಎಲ್ಲ ಅತ್ಮೀಯರನ್ನು ಇಲ್ಲಿ ನೆನೆಯುವುದು ಯುಕ್ತವೆನಿಸುತ್ತದೆ. ನನ್ನ ಬರವಣಿಕೆಗಳಲ್ಲಿ ಸದಾ ನೆರವಾಗುತ್ತಿರುವ ಸಹೋದರ ಲೆನಿನ್ ಅಮ್ಮನ್ನರವರಿಗೆ, ಪ್ರಕಾಶಕರಾದ ಡಾ.ಅಂಕನಹಳ್ಳಿ ಪಾರ್ಥ ಅವರಿಗೆ, ಅಂದವಾಗಿ ಮುದ್ರಿಸಿದ ಮುದ್ರಕರಾದ ಅನ್ನಪೂರ್ಣೇಶ್ವರಿ ಪ್ರಿಂಟರ್‌ರವರಿಗೆ, ಮುಖಚಿತ್ರ ಬರೆದ ಗಂಗರಾಜು ಎನ್ ಮತ್ತೀಕೆರೆ ಅವರಿಗೆ ಮುನ್ನುಡಿ ಮತ್ತು ಬೆನ್ನುಡಿ ಬರೆದು ಓದುಗರಿಗೆ ಪುಸ್ತಕವನ್ನು ಪರಿಚಯಿಸಿದ ನನ್ನ ಸಂಶೋಧನಾ ಮಿತ್ರ ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದ ಡಾ.ಎಂ.ಎಸ್.ದುರ್ಗಾಪ್ರವೀಣ್‌ ರವರಿಗೆ ನನ್ನ ನಮನಗಳು.

ನನ್ನ ತಂದೆಯವರಾದ ದಿ. ಜೇಮ್ಸ್ ರಮಣ ಅಮ್ಮನ್ನರವರು ಶಿಕ್ಷಕ ವೃತ್ತಿಯಲ್ಲಿದ್ದವರು. ನನ್ನ ಓದು, ಹವ್ಯಾಸಗಳಿಗೆ ಅವರೇ ಕರ್ತೃ ಮತ್ತು ನನ್ನ ತಾಯಿ ನನಗೆ ಹಲವಾರು ಹವ್ಯಾಸಗಳನ್ನು ಕಲಿಸಿದ ಅಮ್ಮನಾಗಿದ್ದು ಅವರ ಸವಿನೆನಪಿಗಾಗಿ ಈ ಕೃತಿಯನ್ನು ಅರ್ಪಿಸುತ್ತಿದ್ದೇನೆ. ನನ್ನ ಬದುಕು ಬರವಣಿಗೆ, ಹವ್ಯಾಸಗಳಲ್ಲಿ ಯಾವಾಗಲೂ ನನ್ನೊಂದಿಗೆ ಸಹಕಾರ ನೀಡುತ್ತಿರುವ ತಮ್ಮಂದಿರು, ಅಣ್ಣಂದಿರು, ಅತ್ತಿಗೆಯಂದಿರು ಅಕ್ಕ, ಭಾವ ಮತ್ತೆಲ್ಲ ಕುಟುಂಬವರ್ಗದವರಿಗೂ, ಪತ್ನಿ ಐಲಿನ್ ಮಕ್ಕಳಾದ ಶೆರಿಲ್, ರಂಜಿತ್, ಅಳಿಯ ಪ್ರಶಾಂತ್‌ರಿಗೆ ನನ್ನ ಕೃತಜ್ಞತೆಗಳು.

ತಪ್ಪು ಒಪ್ಪುಗಳಿಗೆ ಹೊರತಾಗಿರದ ಈ ಕೃತಿಯಲ್ಲಿ ನನ್ನ ಅಜ್ಞಾನದಿಂದ ನುಸುಳಿದ ಭಿನ್ನ ವಿಭಿನ್ನ ಮಾಹಿತಿಗಳಿದ್ದರೆ ಓದುಗರು ಅದನ್ನು ತಿದ್ದಿ ಗಮನಕ್ಕೆ ತರುವುದಾದರೆ ಅದೇ ತಾವು ನನ್ನ ಬರಹಕ್ಕೆ ನೀಡುವ ಸಹಕಾರ.

“ಮ೦ದಾರ”, ವಾಮಂಜೂರು, ಮಂಗಳೂರು
ಬೆನೆಟ್. ಜಿ. ಅಮ್ಮನ್ನ
 
ಜೂನ್ 2020
 
amannagudde@rediffmail.com
 
[ ಪರಿವಿಡಿ ]

ಪರಿವಿಡಿ

1. ತುಳುನಾಡಿನಲ್ಲಿ ಬಾಸೆಲ್ ಮಿಶನ್ 01
2. ತುಳುನಾಡಿನ ಮೊದಲ ಮುದ್ರಣಾಲಯ(1841) 05
3. ತುಳು ಭಾಷೆದ ಬುಳೆಚ್ಚಿಲ್ ಬೊಕ್ಕ ಬಾಸೆಲ್ ಮಿಶನ್ 28
4. ತುಳು ಬಾಸೆಡ್ ಪ್ರಕಟವಾಯಿನ ಸುರುತ ಪಾಡ್ಡನ ಸಂಗ್ರಹ (1886) 37
5. ತುಳು ಬಾಸೆದ ಸುರುತ್ತ ವ್ಯಾಕರಣ (1872) 47
6. ಕನ್ನಡ ಪತ್ರಿಕೋದ್ಯಮದ ಮೊದಲ ದಿನಗಳು (1843) 57
7. ತುಳು ಜಿಲ್ಲೆಯಲ್ಲಿ ಪತ್ರಿಕೋದ್ಯಮ ಮತ್ತು ಕೆಲವು ಕ್ರೈಸ್ತ ಪತ್ರಿಕೆಗಳಲ್ಲಿ ತುಳುನಾಡು 80
8. ತುಳುನಾಡಿನಲ್ಲಿ ಮೊದಲ ಪ್ರಾಥಮಿಕ ಶಾಲೆ (1836) 87
9. ಬಾಸೆಲ್ ಮಿಶನ್ ನಂತರದ ದೇಶೀಯ ಸಹಾಯಕ ಸಂಘ ಸಂಸ್ಥೆಗಳು 93
10. ಮಂಗಳೂರಿನಲ್ಲಿ ಬ್ರಿಟೀಷರು ನಿರ್ಮಿಸಿದ ಸಂತ ಪೌಲನ ದೇವಾಲಯ (1843) 103
11. ಮಿಶನರಿ ಸಾಹಿತ್ಯ ಮಾಹಿತಿ ಕೋಶ ಡಾ. ಶ್ರೀನಿವಾಸ್ ಹಾವನೂರು-ಒಂದು ನೆನಪು 107
12. ತುಳು ಭಾಷೆ ಮತ್ತು ಕ್ರೈಸ್ತರು 144
13. ಸ್ವಾತಂತ್ರ್ಯ ಪೂರ್ವೊದ ತುಳುನಾಡ ಸಾಹಿತಿಳು ಬೊಕ್ಕ ಸ್ವಾತಂತ್ರ್ಯ ಚಳವಳಿಡ್ ತುಳುನಾಡ್ 120
14. ಬಿಲ್ಲವರು ಕ್ರೈಸ್ತರಾಗಲು ಕಾರಣಗಳು ಮತ್ತು ನಂತರದ ಸಮಸ್ಯೆಗಳು 126
15. ಸ್ವಾತಂತ್ರ್ಯಪೂರ್ವ ಪಠ್ಯಗಳಲ್ಲಿ ಭಾಷೆ 130
16. ಬಾಸೆಲ್ ಮಿಶನ್ ಮತ್ತು ಬುಡಕಟ್ಟು ಜನಾಂಗ 140
17. ಬಾಸೆಲ್ ಮಿಶನ್ ಮತ್ತು ಮಹಿಳೆಯರ ವಿದ್ಯಾಭ್ಯಾಸ 143
18. ಬಾಸೆಲ್ ಮಿಶನ್‌ನ ಸೇವೆಯಲ್ಲಿ ಕೃಷಿ, ವಸತಿ, ಸ್ವಾವಲಂಬನೆ 147
[ ಪರಿವಿಡಿ ]
19. ಬಾಸೆಲ್ ಮಿಶನ್‌ನ ಸ್ವದೇಶಾಭಿಮಾನ 161
20. ಕರಾವಳಿ ಕ್ರೈಸ್ತರ ಆರಾಧನೆಗಳಲ್ಲಿ ಪಲ್ಲಟ 166
21. ಕ್ರಿಸ್ತ ಹುಟ್ಟಿದ ಹಬ್ಬ ಕ್ರಿಸ್ಮಸ್ 171
22. ಸಾಂತಾ ಕ್ಲಾಸ್- ಕ್ರಿಸ್ಮಸ್ ಫಾದರ್ 174
23. ನವೋದಯದ ಪದ್ಯಗಳಲ್ಲಿ ಕ್ರಿಸ್ತ ಜಯಂತಿ 182
24. ತುಳುನಾಡ್‌ ಸಾಹಿತ್ಯ ಚರಿತ್ರೆಡ್ ನೆಂಪು ಸಂಚಿಳೆ ಪಾತ್ರ 187
25. ತುಳುನಾಡ್‌ದ ಕ್ರೈಸ್ತರ್‌ ಒರಿಪಾವೊಂದು ಬತ್ತಿ ಪಾರಂಪರಿಕ ಗೇನ 191
26. ಪರಂಪರೆಡ್ಡಿ ಅಧುನಿಕತೆತ್ತಂಚಿ ಕೈಕಸುಬುಲು 197
27. ಪುಸ್ತಕ ಪ್ರೀತಿ, ಸಂಗ್ರಹ ಯಾಕೆ ಹೇಗೆ ? 204
[ 1 ]

186 ವರ್ಷಗಳ ಹಿಂದೆ ತುಳುನಾಡಿನ ಮಣ್ಣಿಗೆ ಕಾಲಿರಿಸಿದ ಇವಾಂಜಲಿಕಲ್ ಮಿಷನರಿ ಸೊಸ್ಯಾಟಿ (ಬಾಸೆಲ್ ಮಿಷನ್) ಎಂಬ ಸಂಸ್ಥೆಯಿಂದ ಬಂದ ವಿದೇಶಿ ಮಿಶನರಿಗಳು ತುಳು ನಾಡಿನ ಅಭಿವೃದ್ಧಿಗೆ ನೀಡಿದ ಕೊಡುಗೆ ಅಪಾರ. 1815 ರಲ್ಲಿ ಸ್ವಿಜರ್‌ಲ್ಯಾಂಡ್‌ನ ಬಾಸೆಲ್‌ನಲ್ಲಿ ಸ್ಥಾಪನೆಯಾದ ಸಂಸ್ಥೆಯು ಭಾರತವನ್ನು ತನ್ನ ಕಾರ್ಯಕ್ಷೇತ್ರವನ್ನಾಗಿ ಅರಿಸಿಕೊಂಡು 3 ಮಿಶನರಿಗಳ ಮೊದಲ ತಂಡವನ್ನು ಭಾರತಕ್ಕೆ ಕಳುಹಿಸಲು ನಿರ್ಧರಿಸಿತು. ಮಿಷನರಿಗಳಾದ ಜೆ.ಸಿ. ಲೆಹ್ನರ್, ಸಿ. ಎಲ್.ಗ್ರೈನರ್ ಮತ್ತು ಸಾಮ್ಯುವೆಲ್ ಹೆಬಿಕ್‌ರವರು 23 ಮಾರ್ಚ್ 1834ರಂದು ಬಾಸೆಲ್‌ನಿಂದ ಹೊರಟು ಇಂಗ್ಲೆಂಡಿಗೆ ಹೋಗಿ ಅಲ್ಲಿಂದ ಜುಲೈ 15ಕ್ಕೆ ಹಡಗಿನಲ್ಲಿ ಹೊರಟು ಸುಮಾರು 7 ತಿಂಗಳುಗಳ ಕಾಲ ಪ್ರಯಾಣ ಮಾಡಿ 30 ಅಕ್ಟೋಬರ್ 1834 ರಂದು ಮಂಗಳೂರಿನ ಸುಲ್ತಾನ್ ಬತ್ತೇರಿ ರಸ್ತೆಯಲ್ಲಿ ಈಗಿರುವ ಸೋವರಿನ್ ಟೈಲ್ಸ್ ಪಕ್ಕದಲ್ಲಿ ಆಗ ಇದ್ದ ದಕ್ಕೆಯಲ್ಲಿ (ಆಗ ಇದೇ ಮಂಗಳೂರಿನ ಬಂದರಾಗಿತ್ತು.) ಇಳಿದರು. ಮಂಗಳೂರಿನ ಮೀನುಗಾರಿಕಾ ಬಂದರು ಪರಿಸರದಲ್ಲಿರುವ ನೀರೆಶ್ವಾಲ್ಯ ಎಂಬಲ್ಲಿ ಒಂದು ಮನೆಯಲ್ಲಿ ಬಾಸೆಲ್ ಮಿಷನ್ ತನ್ನ ಕಾರ್ಯಕ್ಷೇತ್ರವನ್ನು ಪ್ರಾರಂಭಿಸಿತು.

ಕ್ರಿಸ್ತನ ಸುವಾರ್ತೆ ಸಾರುವ ಏಕೈಕ ಉದ್ದೇಶದಿಂದ ತುಳುನಾಡಿಗೆ ಆಗಮಿಸಿದ ಮಿಶನರಿಗಳು ಇಲ್ಲಿ ಸುವಾರ್ತೆ ಸಾರುವುದಕ್ಕಿಂತ ಹೆಚ್ಚು ಜಿಲ್ಲೆಯ ಅಭಿವೃದ್ಧಿಗೆ ಪಣತೊಟ್ಟಿರುವುದು ಈಗ ಚರಿತ್ರೆಗೆ ಸೇರಿದ ವಿಚಾರಗಳಾಗಿವೆ. ಮುದ್ರಣ, ವೈದ್ಯಕೀಯ ಶಿಕ್ಷಣ, ಪತ್ರಿಕೆ, ಕನ್ನಡ, ತುಳು, ಮಲಯಾಳಂ ಭಾಷಾ ಸಾಹಿತ್ಯ, ಜಾನಪದ ಸಾಹಿತ್ಯ, ಹಂಚು ಉದ್ಯಮ, ನೇಯಿಗೆ, ಕೃಷಿ, ಹೀಗೆ ಎಲ್ಲಾ ಪ್ರಕಾರಗಳಲ್ಲಿ ಸೇವೆ ಮಾಡಿರುವುದನ್ನು ನಾವು ಕಣ್ಣಾರೆ ಕಾಣುತ್ತಿದ್ದೇವೆ. ಅದರ ಒಳ್ಳೆಯ ಫಲಗಳನ್ನು ಅನುಭವಿಸುತ್ತಿದ್ದೇವೆ.

1836ರಲ್ಲಿ ಮೊದಲ ಕನ್ನಡ ಪ್ರಾಥಮಿಕ ಶಾಲೆ, 1838ರಲ್ಲಿ ಮೊದಲ ಆಂಗ್ಲ ಮಾಧ್ಯಮ ಶಾಲೆ, 1847ರಲ್ಲಿ ವೈದಿಕ ಶಾಲೆ ಪ್ರಾರಂಭಿಸಿದ ಕೀರ್ತಿ ಇವರದಾದರೆ,

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... ●—— 01
 
[ 2 ]1841ರಲ್ಲಿ ತುಳುನಾಡಿನಲ್ಲಿ ಮೊದಲ ಪ್ರೆಸ್‌ನ್ನು ಸ್ಥಾಪಿಸಿ ಕಲ್ಲಚ್ಚಿನಲ್ಲಿ ತುಳುವಿನ ಮುದ್ರಣ ಆರಂಭಿಸಿ ಇವರು ತುಳು ಸಾಹಿತ್ಯಕ್ಕೆ ಪ್ರೇರಕರಾದರು. 1843ರಲ್ಲಿ ಕನ್ನಡದ

ಮೊದಲ ಪತ್ರಿಕೆ 'ಮಂಗಳೂರ ಸಮಾಚಾರ' ಮುದ್ರಿಸಿದ ಇವರು ಮುದ್ರಣದ ಕ್ರಾಂತಿ ಮಾಡಿ ಲೆಟರ್‌ಪ್ರೆಸ್‌ನ್ನು ಬೆಳಕಿಗೆ ತಂದು ಮುದ್ರಣ ಕ್ಷೇತ್ರದಲ್ಲಿ ಕನ್ನಡ, ತುಳು, ಕೊಡವ, ಬಡಗ, ಮಲಯಾಳಂ ಸಾಹಿತ್ಯದಲ್ಲಿ ಮಹತ್ತರ ಸಾಧನೆ ಮಾಡಿರುತ್ತಾರೆ. 1874 ಬರ್ನೆಲನ ಲಿಪಿಶಾಸ್ತ್ರದ ಪುಸ್ತಕ, 1872ರಲ್ಲಿ ಗುಂಡರ್ಟ್‌ನ ಮಲಯಾಳಂ-ಇಂಗ್ಲಿಷ್ ನಿಘಂಟು, I872ರಲ್ಲಿ ಬ್ರಿಗೆಲ್‌ನ ತುಳು ವ್ಯಾಕರಣ, 1886ರಲ್ಲಿ ಮೆನ್ನರ್‌ನ 21 ಭೂತಗಳ ಪಾಡ್ಡನಗಳಿರುವ ಕೃತಿ, ತುಳು ಗಾದೆಗಳು, ಕನ್ನಡ ಪಂಚಾಂಗ, ವಿಚಿತ್ರ ವರ್ತಮಾನ ಸಂಗ್ರಹ, 1894ರಲ್ಲಿ ಕಿಟೆಲ್‌‌ರ ಕನ್ನಡ ಇಂಗ್ಲಿಷ್ ನಿಘಂಟು, 1883ರಲ್ಲಿ ಪ್ರಾನ್ಸಿಸ್ ಝೇವಿಯರ್‌ರವರ ಕೊಂಕಣಿ ನಿಘಂಟು ಮತ್ತು ಕೊಂಕಣಿ ವ್ಯಾಕರಣ, 1886ರಲ್ಲಿ ಮೆನ್ನರ್‌ನ ತುಳು ಇಂಗ್ಲಿಷ್ ನಿಘಂಟು ಹಾಗೂ 1888ರಲ್ಲಿ ಇಂಗ್ಲಿಷ್ ತುಳು ನಿಘಂಟು ಮುಂತಾದ ಮುದ್ರಣದಿಂದ ಪ್ರತಿಯೊಂದು ವಿಭಾಗದಲ್ಲಿಯೂ ಮೊದಲಿಗರೆನಿಸಿಕೊಂಡಿರುತ್ತಾರೆ.

186 ವರ್ಷಗಳ ಹಿಂದೆ ಸ್ಥಾಪನೆಗೊಂಡ ಧಾರ್ಮಿಕ ಸಂಸ್ಥೆಯೊಂದು ಜಿಲ್ಲೆಯ ವಿದ್ಯಾ ಕ್ಷೇತ್ರ, ವೈದ್ಯಕೀಯ, ಕಾರ್ಖಾನೆ, ಕೃಷಿ, ನೇಯಿಗೆ, ಮುದ್ರಣ, ಸಾಹಿತ್ಯ ಮುಂತಾದ ಕ್ಷೇತ್ರಗಳಲ್ಲಿ ಮಹತ್ತರ ಸೇವೆಯನ್ನು ಮಾಡಿದೆ.ಮಂಗಳೂರಿನಲ್ಲಿ ಸ್ಥಾಪನೆಯಾದ ಕೇಂದ್ರವು ಮುಂದುವರೆಯುತ್ತಾ ಕದಿಕೆ, ಹಳೆಯಂಗಡಿ, ಬೊಲ್ಕ ಅಮ್ಮೆಂಬಳ, ಉಚ್ಚಿಲ, ಕಾರ್ನಾಡ್, ಕುತ್ಯಾರ್, ಸಾಂತೂರು, ಪಾಂಗಾಳ ಗುಡ್ಡೆ, ಪಾದೂರು, ಉದ್ಯಾವರ, ಅಂಬಾಡಿ, ಶಿರ್ವ, ಮಣಿಪುರ, ಕುರ್ಕಾಲ್, ಪಾದೂರು, ಬೈಲೂರು, ಕಾರ್ಕಳ, ಮೂಡಬಿದ್ರೆ, ಬೈಲೂರು, ಮುಡಾರ್, ಮುಲ್ಕಿ, ಸಂಕಲಕರಿಯ, ಉಡುಪಿ, ಮಲ್ಪೆ, ಚಾರ, ಹೊನ್ನಾವರ, ಹೆಬ್ರಿ, ಬನ್ನೂರು, ಕುಂದಾಪುರ, ಬೈಂದೂರು ಕಾರವಾರ, ಕುಮಟಾ, ಶಿರಸಿ, ಬೆಳ್ತಂಗಡಿ, ಉಜಿರೆ, ಬಂಟ್ವಾಳ, ಗುರುಪುರ, ಕಲ್ಯಾಣಪುರ, ಬಾರಕೂರು, ಬೇಕಲಕೊಟೆ, ಕಾಸರಗೋಡು, ಹೀಗೆ ಹಲವಾರು ಕಡೆಗಳಲ್ಲಿ ಸಭೆಗಳನ್ನು ಸ್ಥಾಪಿಸಿದರು ಹಾಗೂ ಸುಮಾರು 75 ಶಾಲೆಗಳನ್ನು ಪ್ರಾರಂಭಿಸಿದರು.

1865ರಲ್ಲಿ ಜಪ್ಪು, 1882ರಲ್ಲಿ ಕುದ್ರೋಳಿ, 1886ರಲ್ಲಿ ಮಲ್ಪೆ ಹೀಗೆ ತುಳುನಾಡಿನಲ್ಲಿ 3 ಹಂಚಿನ ಕಾರ್ಖಾನೆಗಳನ್ನು ಸ್ಥಾಪಿಸಿ ಇಂದಿಗೂ “ಮಂಗಳೂರು ಹಂಚು” ಎಂಬ ಹೆಸರು ಜಗತ್ತಿನಾದ್ಯಂತ ಪ್ರಚಲಿತದಲ್ಲಿದೆ. ಜಿಲ್ಲೆಯ ಜನರಿಗೆ ಹಾಗೂ ವಿಶೇಷವಾಗಿ ಮಹಿಳೆಯರಿಗೆ ವಿದ್ಯಾಭ್ಯಾಸ ಕಲ್ಪಿಸಿಕೊಟ್ಟಿರುವುದು

02

೦2 ——•ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು..
 
[ 3 ]ಮಾತ್ರವಲ್ಲದೆ ಅಡಿಗೆ ಕೋಣೆಗೆ ಸೀಮಿತವಾಗಿದ್ದ ಮಹಿಳೆಯರೂ ಹೊರಗೆ ಹೋಗಿ ದುಡಿಯುವಂತೆ ಅವಕಾಶ ಕಲ್ಪಿಸಿದ್ದಾರೆ.

ತಮ್ಮ ಕಬ್ಬಿಣ ಕಾರ್ಖಾನೆಗಳಲ್ಲಿ ಗಟ್ಟಿಮುಟ್ಟಾದ ಲಾಕರ್‌ಗಳನ್ನು ನಿರ್ಮಿಸುತ್ತಿದ್ದ ಇವರು ಕಡಂಬಿಲ(1903), ಕಾಸರಗೋಡು(1894), ಪರಂಗಿಪೇಟೆ(1879) ಈ ಮೂರು ಕಡೆಗಳಲ್ಲಿರುವ ಕಬ್ಬಿಣದ ಸೇತುವೆ ನಿರ್ಮಿಸಿರುತ್ತಾರೆ. ಗಡಿಯಾರ ತಯಾರಿಯ ಕಾರ್ಯದಲ್ಲಿಯೂ ಇವರು ತೊಡಗಿದ್ದು ಇವರು ನಿರ್ಮಿಸಿದ ಬೃಹತ್ ಗಡಿಯಾರವೊಂದು ಮಂಗಳೂರಿನ ಸ್ಟೇಟ್‌ ಬ್ಯಾಂಕ್ ಬಳಿಯಲ್ಲಿರುವ ಸೈಂಟ್ ಪೌಲ್ ಚರ್ಚ್‌ನ ಗೋಪುರದಲ್ಲಿ ಇಂದಿಗೂ ಇದ್ದು ಚರಿತ್ರೆ ಹೇಳುತ್ತಿದೆ.

ಮುಲ್ಕಿ ಮತ್ತು ಮಂಗಳೂರಿನಲ್ಲಿ ನೇಯಿಗೆ ಕಾರ್ಖಾನೆಯನ್ನು ಸ್ಥಾಪಿಸಿದ ಇವರು ಜಿಲ್ಲೆಯಾದ್ಯಂತ ದೇಶೀಯವಾಗಿ ಬಳಕೆಯಲ್ಲಿದ್ದ ಮಗ್ಗವನ್ನು ಉನ್ನತ ಮಟ್ಟಕ್ಕೇರಿಸಿ ಜಿಲ್ಲೆಯ ಜನರು ಹೆಚ್ಚೆಚ್ಚಾಗಿ ಇದರಲ್ಲಿ ತೊಡಗಿಸಿಕೊಳ್ಳುವಂತೆ ಕಾರ್ಯಪ್ರವರ್ತರಾದರು. ಮಲ್ಪೆ, ಕೊರಂಗ್ರಪಾಡಿ, ಉಡುಪಿ, ಪಾಂಗಾಳ, ಮುಲ್ಕಿ, ಮಂಗಳೂರು ಮುಂತಾದ ಪ್ರದೇಶಗಳಲ್ಲಿದ್ದ ಮಗ್ಗಗಳೇ ಅವಕ್ಕೆ ಸಾಕ್ಷಿ. ಬಟ್ಟೆ ತಯಾರಿಸುವ ಕಾರ್ಯದಲ್ಲಿ ತೊಡಗಿ ಖಾಕಿ ಬಟ್ಟೆಯನ್ನು ಕಂಡುಹಿಡಿದು ಪೋಲಿಸ್ ಇಲಾಖೆ ಹಾಗೂ ಮೆಕ್ಯಾನಿಕಲ್ ವಿಭಾಗದಲ್ಲಿ ಖಾಕಿ ಬಳಕೆಗೆ ತಂದ ಕೀರ್ತಿ ಬಾಸೆಲ್ ಮಿಶನರಿಗಳಿಗೆ ಸೇರಿದ್ದಾಗಿದೆ.

ಅವಿದ್ಯಾವಂತರಿಗೆ ವಿದ್ಯೆ,ಉದ್ಯೋಗವಿಲ್ಲದವರಿಗೆ ಉದ್ಯೋಗ, ವಸತಿಹೀನರಿಗೆ ವಸತಿ ಸೌಕರ್ಯ, ಭೂಮಿ ಕಳೆದುಕೊಂಡವರಿಗೆ ಕೃಷಿ ಭೂಮಿ, ಸಂಸ್ಥೆಯ ಆದಾಯ ಹೆಚ್ಚಿಸಲು ಹಾಗೂ ಜನಸಾಮಾನ್ಯರ ಆರ್ಥಿಕಾಭಿವೃದ್ಧಿ ದೃಷ್ಟಿಯಿಂದ ಕೃಷಿ ಸಂಬಂಧವಾಗಿ, ಮೂಡಬಿದ್ರೆ, ಮುಲ್ಕಿ, ಸಂಕಲಕರಿಯ, ಬೊಲ್ಮ ಅಮ್ಮೆಂಬಳ, ಆನಂದಪುರ, ಉಚ್ಚಿಲ ಮುಂತಾದ ಕಡೆಗಳಲ್ಲಿ ಸಾವಿರಾರು ಎಕ್ರೆ ಭೂಮಿ ಖರೀದಿ ಮಾಡಿದ್ದರು. ಕುತ್ಯಾರ್, ಕಾರ್ಕಳ, ಬೈಲೂರು ಸಂಕಲಕರಿಯಗಳಲ್ಲಿ ಕಾಡು ಕಡಿದು ವ್ಯವಸಾಯ, ಕೃಷಿ ತರಬೇತಿ ಮುಂತಾದ ಹತ್ತು ಹಲವಾರು ಕಾರ್ಯಗಳನ್ನು ಮಾಡಿದ್ದರು. ಕೃಷಿಕ್ಷೇತ್ರದಲ್ಲಿ ಇವರು ಮಾಡಿದ ಕಾರ್ಯಗಳನ್ನು ಕೂಲಂಕಶವಾಗಿ ಪರಿಶೀಲಿಸಿದರೆ ಕಾಡು ಕಡಿದು ಗದ್ದೆ ಮಾಡಿದ್ದು, ವ್ಯರ್ಥವಾಗಿ ಹರಿಯುವ ನೀರನ್ನು ಬಳಸಿ ಕೃಷಿ ಮಾಡುವುದು, ಬೊಟ್ಟುಗದ್ದೆ ಅಥವಾ ಕಡಿಮೆ ನೀರಿರುವ ಪ್ರದೇಶಗಳಲ್ಲಿ ಕೃಷಿ, ಮುಂತಾದ ಹತ್ತು ಹಲವಾರು ವಿದಧ ಯೋಗ್ಯ ವಿಚಾರಗಳು ನಮಗೆ ತಿಳಿಯುತ್ತದೆ. [ 4 ]ತುಳುನಾಡಿನಲ್ಲಿ ಮಿಶನರಿಗಳು ಸ್ಥಾಪಿಸಿದ ಶಿಕ್ಷಣ ಕೇಂದ್ರಗಳ ಪರಿಸರದಲ್ಲಿ ಪ್ರಸ್ತುತ 21 ಪ್ರಾಥಮಿಕ, 6 ಹೈಸ್ಕೂಲ್, 3 ಕಾಲೇಜು, 3 ವಸತಿ ಶಾಲೆ, 4 ಬಾಲವಾಡಿ, 1ವಿಶೇಷ ಮಕ್ಕಳ ಶಾಲೆ, 4 ಹೊಲಿಗೆ ತರಬೇತಿ ಕೇಂದ್ರ, 1 ತಾಂತ್ರಿಕ ತರಬೇತಿ ಕೇಂದ್ರ, ಆಸ್ಪತ್ರೆ 1, ವೃದ್ಧಾಶ್ರಮ, 1 ವೈದಿಕ ಶಾಲೆ, 1 ಪ್ರೆಸ್, 3 ಇತರ ತರಬೇತಿ ಕೇಂದ್ರಗಳು ಮಂಗಳೂರಿನಲ್ಲಿ ಕೇಂದ್ರವಿರುವ ಕರ್ನಾಟಕ ಸದರ್ನ್ ಡಯಾಸಿಸ್ ಆಡಳಿತದಲ್ಲಿದ್ದರೆ, 8 ಶಾಲೆಗಳು ಪ್ರತ್ಯೇಕ ಆಡಳಿತದಲ್ಲಿವೆ. ಅಲ್ಲದೆ ದೇಶೀಯ ಕ್ರೈಸ್ತರು ಸ್ಥಾಪಿಸಿ ನಡೆಸುತ್ತಿರುವ 4 ಶಾಲೆಗಳಿವೆ. ಅಲ್ಲದೆ ವಸತಿ ನಿಲಯಗಳು, ನರ್ಸಿಂಗ್ ತರಬೇತಿ ಕೇಂದ್ರ, ಕಂಪ್ಯೂಟರ್ ತರಬೇತಿ ಕೇಂದ್ರಗಳು ಇದ್ದು ವಿದೇಶಿ ಮಿಶನರಿಗಳು ಪ್ರಾರಂಭಮಾಡಿದ ಹತ್ತು ಹಲವಾರು ಸಾಮಾಜಿಕ ಕಳಕಳಿಯ ಸೇವೆಯನ್ನು ಇವು ಇನ್ನೂ ಮುಂದುವರಿಸಿ ತುಳು ಜಿಲ್ಲೆಯಲ್ಲಿ ಸರ್ವರ ಸೇವೆಗೈಯುತ್ತಿದೆ.

ಕನ್ನಡ ಅಕ್ಷರ ಬಳಸಿ ಮೊದಲ ತುಳು ಮುದ್ರಣ. ಮೊದಲ ತುಳು ನಿಘಂಟು, ಮೊದಲ ತುಳುವ್ಯಾಕರಣ, ಮೊದಲ ಪಾಡ್ಡನ ಸಂಗ್ರಹ, ಮೊದಲ ಪ್ರೆಸ್, ಮೊದಲ ಕನ್ನಡ ಪತ್ರಿಕೆ, ಮೊದಲ ಶಾರ್ಟ್‌ ಹ್ಯಾಂಡ್ ಪುಸ್ತಕ, ಮೊದಲ ಕನ್ನಡ ಪಂಚಾಂಗ, ಮೊದಲ ದಾಸರ ಪದಗಳ ಮುದ್ರಣ, ಮೊದಲ ಕಾದಂಬರಿ ಮುದ್ರಣ, ಮೊದಲ ಮಂಗಳೂರು ಹಂಚು, ಮೊದಲ ಕಬ್ಬಿಣದ ಸೇತುವೆ, ಮೊದಲ ಖಾಕಿ ಬಟ್ಟೆ ಕಂಡುಹಿಡಿಯುವಿಕೆ, ಮೊದಲ ಶಾಲೆ, ಮೊದಲ ಕೃಷಿ ತರಬೇತಿ ಕೇಂದ್ರ, ಮಹಿಳೆಯರಿಗೆ ಉದ್ಯೋಗ, ಮೊದಲ ಕಿಂಡರ್ ಗಾರ್ಟನ್, ಮೊದಲ ರಾತ್ರಿ ಶಾಲೆ, ಮೊದಲ ವಸತಿ ಶಾಲೆ, ಹೀಗೆ ಪ್ರತಿಯೊಂದರಲ್ಲಿಯೂ ಮೊದಲಿಗರಾದ ಇವರು ತುಳುವರು ಮರೆಯಲಾಗದ ಮೊದಲಿಗರು ಎನ್ನುವುದಕ್ಕೆ ಯಾವುದೇ ಸಂಶಯವಿಲ್ಲ.

186 ವರ್ಷಗಳ ಹಿಂದೆ ವಿದೇಶಿಯರಿಂದ ಸ್ಥಾಪಿತವಾದ ಸಂಸ್ಥೆಯು ತುಳುನಾಡಿನಿಂದ ಕಾರವಾರದವರೆಗೆ, ಕಾಸರಗೋಡು, ಕೇರಳ, ನೀಲಗಿರಿ, ಹುಬ್ಬಳ್ಳಿ, ಧಾರವಾಡ, ಬೊಂಬಾಯಿ ಕಡೆಗಳಲ್ಲಿ ನೀಡಿದ ಕೊಡುಗೆ ಅಪಾರ. ವಿದೇಶಿ ಮಿಶನರಿಗಳು ಅಭಿವೃದ್ಧಿಯನ್ನು ಕೈಗೊಳ್ಳದ ಕಾರ್ಯಕ್ಷೇತ್ರವಿಲ್ಲವೆಂದರೆ ತಪ್ಪಾಗದು. ಇವೆಲ್ಲವೂ ಸಂಶೋಧನೆಗೆ ಯೋಗ್ಯವಾದ ವಿಚಾರವಾಗಿದ್ದು ಇನ್ನೂ ಹಲವಾರು ಬೆಳಕಿಗೆ ಬಾರದ ಕೊಡುಗೆಗಳು ಅವರ ಸೇವೆಗೆ ಮೂಕ ಸಾಕ್ಷಿಗಳಾಗಿವೆ.

04
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
 
[ 5 ]ಹತ್ತೊಂಬತ್ತನೇ ಶತಮಾನಕ್ಕಿಂತ ಮುಂಚಿನ ಪ್ರಾಚೀನ ಕನ್ನಡ ಸಾಹಿತ್ಯವು ತಾಳೆಗರಿ ಇಲ್ಲವೆ ಕಾಗದ ಪ್ರತಿಗಳಲ್ಲಿ ಬರೆದವುಗಳಾಗಿವೆ. ತಾಡವೋಲೆ ಅಥವಾ ಕಾಗದದ ಕೃತಿಗಳು ಬಹುತೇಕ ಖಾಸಗಿ ವಸ್ತು ಎನ್ನಿಸಿಕೊಳ್ಳುತ್ತಿದ್ದವು. ಯಾಕಂದರೆ ಅವು ಹೆಚ್ಚು ಪ್ರತಿಗಳೂ ಆಗುತ್ತಿರಲಿಲ್ಲ. ಅಲ್ಲದೆ ಹೆಚ್ಚು ಪ್ರಸಾರವೂ ಆಗುತ್ತಿರಲಿಲ್ಲ. ತದನಂತರ ಬಂದ ಅಚ್ಚಿನ ಮೊಳೆಗಳನ್ನು ಬಳಸಿ ಮುದ್ರಾಯಂತ್ರದಿಂದ ನೂರಾರು ಪ್ರತಿಗಳನ್ನು ಏಕಕಾಲಕ್ಕೆ ಮುದ್ರಿಸುವ ಸೌಕರ್ಯ ಲಭ್ಯವಾಯಿತು, ಆಗ ಅದು ಸಾರ್ವಜನಿಕ ಸ್ವತ್ತಾಗತೊಡಗಿತು. ಮುದ್ರಣ ವ್ಯವಸ್ಥೆಯು ನಮ್ಮ ನಾಡಿಗೆ ಇತ್ತೀಚೆಗೆ ಬಂದುದಾದರೂ ಮುದ್ರಣ ಕಲೆಯು ಚೀನಾ ದೇಶದಲ್ಲಿ ಬಹು ಹಿಂದಿನ ಕಾಲದಿಂದಲೂ ಇತ್ತು. ಕ್ರಿ.ಶ. 868ರಲ್ಲಿ ಮುದ್ರಿತಗೊಂಡ ಪುಸ್ತಕಗಳು ಲಭ್ಯವಿತ್ತು ಎನ್ನಲಾಗಿದೆ. ಬಿಡಿ ಅಕ್ಷರಗಳಿಂದ ಮುದ್ರಿಸುವುದನ್ನು ಪಿಶುಂಗನೆಂಬ ಚೀನಿಯನು ಕ್ರಿ.ಶ. ಹನ್ನೊಂದನೇ ಶತಮಾನದಲ್ಲಿಯೇ ಕೈಗೊಂಡಿದ್ದನು. ಈವರೆಗೆ ಸಿಕ್ಕಿದ ಸಂಪೂರ್ಣ ಮುದ್ರಿತ ಗ್ರಂಥಗಳಲ್ಲಿ ಅತೀ ಪುರಾತನವಾದುದೆಂದರೆ ಗುಟೆನ್‌ ಬರ್ಗ್ ಮುದ್ರಿಸಿದ ಬೈಬಲ್ ಎಂದು ಪ್ರಖ್ಯಾತಿ ಹೊಂದಿದೆ. 1764 ಪುಟಗಳಿರುವ ಈ ಬೃಹತ್ ಗ್ರಂಥ 1476ರಲ್ಲಿ ಪ್ರಕಟವಾಯಿತು. ಯುರೋಪಿನಲ್ಲಿ ಮಧ್ಯಯುಗದಲ್ಲಿ ಮುದ್ರಾಯಂತ್ರ ರೂಪಿಸಲ್ಪಟ್ಟಿತು. ಗುಟೆರ್ನ್‌ಬರ್ಗ್ ಎಂಬವರು ಬಿಡಿ ಮೊಳೆಗಳನ್ನು ತಯಾರಿಸತೊಡಗಿದ್ದರಿಂದ ಮುದ್ರಣ ಕಾರ್ಯ ವ್ಯವಸ್ಥಿತವಾಗಿ ನೆಲೆಗೊಂಡಿತ್ತಲ್ಲದೆ ಗ್ರಂಥ ಪ್ರಸರಣೆ ಭರದಿಂದ ಹೆಚ್ಚಿತು. ಆದರೆ ಅವೆಲ್ಲವೂ ರೋಮನ್ ಲಿಪಿಯಲ್ಲಿ ನಡೆಯಿತು. ನಂತರ ಯುರೋಪ್‌ನ ಭಾಷೆಗಳೆಲ್ಲವೂ ಅದರ ಪ್ರಯೋಜನ ಪಡೆದವು.

ಕ್ರೈಸ್ತ ಮತ ಪ್ರಚಾರಕ್ಕಾಗಿ ಪೋರ್ಚುಗೀಸ್, ಇಂಗ್ಲೆಂಡ್, ಇಟಲಿ ಮೊದಲಾದ ದೇಶಗಳಿಂದ ಮತ ಪ್ರಚಾರಕರು ಇವೆ. 16ನೇ ಶತಮಾನದಷ್ಟು ಹಿಂದಿನಿಂದಲೂ ಭಾರತಕ್ಕೆ ಬರುತ್ತಿದ್ದರು. ಭಾರತದ ಎಲ್ಲಾ ಭಾಷೆಗಳಲ್ಲಿ ಮುದ್ರಣ ವ್ಯವಸ್ಥೆಯನ್ನು ಮಾಡಿಕೊಟ್ಟವರು ಇವರೇ ಎನ್ನಬಹುದು. ಭಾಷಾ ಶಾಸ್ತ್ರವನ್ನು ಕ್ರಮವಾಗಿ ಇಲ್ಲಿ ಬೆಳೆಸಿದವರೂ ಇವರೇ, ಭಾರತೀಯ ವಿವಿಧ ಭಾಷೆಗಳನ್ನು

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು..
05
 
[ 6 ]ಕಲಿಯುವುದರಲ್ಲಿ ಮಗ್ನರಾದ ಪಾಶ್ಚಾತ್ಯರಿಗೆ ಹತ್ತಾರು ಬಗೆಯ ಲಿಪಿಗಳೂ, ಅವುಗಳ ವಕ್ರತೆ ಮತ್ತು ಭಾರ ಇವೆಲ್ಲಾ ಬಹಳ ಕಷ್ಟವನ್ನುಂಟುಮಾಡಿರಬೇಕು. ಭಾರತದ ಎಲ್ಲಾ ಭಾಷೆಗಳಿಗೆ ರೋಮನ್ ಲಿಪಿಯಲ್ಲಿ ಇತರ ಸ್ವರಸೂಚಕ ಚಿಹ್ನೆಗಳೊಂದಿಗೆ ಉಪಯೋಗಿಸುವ ಕ್ರಮವನ್ನು ಬಳಕೆಗೆ ತಂದರು

ಈಸ್ಟ್ ಇಂಡಿಯಾ ಕಂಪೆನಿಯು ತಮ್ಮ ಅಧಿಕಾರವನ್ನುಪಯೋಗಿಸಿ ರೋಮನ್ ಲಿಪಿಯನ್ನು ದೇಶದ ಭಾಷೆಗಳಿಗೆಲ್ಲ ರೂಢಿಗೆ ತರಬೇಕೆಂಬ ಪ್ರಯತ್ನದಲ್ಲಿದ್ದರೂ ಹೊಸಗನ್ನಡ ಸಾಹಿತ್ಯದ ತೇರನ್ನು ಮೊದಲಿಗೆ ಎಳೆದ ಬ್ರಿಟಿಷ್ ಅಧಿಕಾರಿಗಳು ಮಿಶನರಿಗಳು ಹಾಗೂ ದೇಶೀಯರ ನೆರವನ್ನು ಪಡೆದು ಮೊಳೆಗಳನ್ನು ತಯಾರಿಸಿ 1817ರಿಂದ ಕನ್ನಡ ಮುದ್ರಣವನ್ನು ಆರಂಭಿಸಿದರು. ತೆಲುಗು ಹಾಗೂ ಕನ್ನಡಕ್ಕೆ ಒಂದೇ ಬಗೆಯ ಅಚ್ಚುಮೊಳೆಗಳನ್ನು ಕೊಲೆಜ್ ಪ್ರೆಸ್‌ನವರು ಬಳಸುತ್ತಿದ್ದರೆಂಬ ದಾಖಲೆಗಳು ಸಿಗುತ್ತವೆ. ಆದ್ದರಿಂದ ಮೊದಲು ಮುದ್ರಣಗೊಂಡ ಕೃತಿಗಳು ತೆಲುಗು ಅಕ್ಷರದಂತೆ ಕಾಣುವ ಅಕ್ಷರದ ಮೊಳೆಗಳನ್ನು ಉಪಯೋಗಿಸಿಕೊಂಡು ಕನ್ನಡ ಪುಸ್ತಕಗಳನ್ನು ಮುದ್ರಿಸಿದ ಹಲವಾರು ಕೃತಿಗಳು ಲಭ್ಯವಿದೆ. ಉದಾ. 1817ರಲ್ಲಿ ಕಲ್ಕತ್ತದಲ್ಲಿ ಮುದ್ರಣವಾದ ವಿಲಿಯಂ ಕೇರಿಯ ಮೊದಲ ಕನ್ನಡ ವ್ಯಾಕರಣ, ಮತ್ತು 1824ರ ಸತ್ಯವೇದದ ಭಾಗವಾಗಿರುವ ಹೊಸ ಒಡಂಬಡಿಕೆ. ನಂತರ ಬಳ್ಳಾರಿ ಮಿಶನ್‌ ಪ್ರೆಸ್‌ನಲ್ಲಿ ಜಾನ್ ಹಾಂಡ್ಸ್ನಿಂದ ಪ್ರಕಟವಾದ ಕನ್ನಡ ಸತ್ಯವೇದದ ಹಲವು ಭಾಗಗಳು, 1844ರಲ್ಲಿ ಬಳ್ಳಾರಿಯಲ್ಲಿ ಪ್ರಕಟವಾದ ಹೆರ್ಮನ್ ಮೋಗ್ಲಿಂಗ್‌ನ "ಕನ್ನಡ ಸಮಾಚಾರವು", ಪತ್ರಿಕೆಯು ಇದೇ ಕನ್ನಡ ಅಚ್ಚುಮೊಳೆಯನ್ನು ಬಳಸಿಕೊಂಡು ಮುದ್ರಣಗೊಂಡುದು ಕಂಡು ಬರುತ್ತದೆ.

ಕಂಪೆನಿ ಸರಕಾರವು ತಮ್ಮ ಆಡಳಿತದ ಸೌಕರ್ಯಕ್ಕಾಗಿ ಕನ್ನಡ, ತೆಲುಗು, ತಮಿಳು ಕೋಶಗಳನ್ನು ತಜ್ಞರಾದ ಮಿಶನರಿಗಳಿಗೆ ಧನಸಹಾಯ ನೀಡಿ ಸಂಗ್ರಹಿಸಿ ಅಚ್ಚುಹಾಕಿಸಿದರು. ಲಂಡನ್ ಮಿಶನ್‌ ವಿಲಿಯಂ ರೀವ್ ಮದ್ರಾಸ್ ಸರಕಾರದ ಆದೇಶದ ಮೇರೆಗೆ ಇಂಗ್ಲಿಷ್ ಕನ್ನಡ (1824) ಮತ್ತು ಕನ್ನಡ ಇಂಗ್ಲಿಷ್ (1832) ಈ ಎರಡು ಶಬ್ದಕೋಶಗಳನ್ನು ತಯಾರಿಸಿದ. 1830ರಲ್ಲಿ ಕೃಷ್ಣಮಾಚಾರ್ಯರವರ ಕನ್ನಡ ವ್ಯಾಕರಣ ಮುದ್ರಣಗೊಂಡಿತು. ಈ ಮೂರು ಅಪೂರ್ವ ಕೃತಿಗಳು ಮದ್ರಾಸ್‌ನಲ್ಲಿ ಪ್ರಕಟಗೊಂಡದ್ದು. ಆಗ ಇಂಗ್ಲಿಷ್ ಮೊಳೆಗಳನ್ನು ಜೋಡಿಸುವುದು ಸುಲಭವಾಗಿತ್ತು. ಯಾಕಂದರೆ ಇಂಗ್ಲೀಷ್ ಮೊಳೆಗಳು ವಿದೇಶದಿಂದ ಆಮದಾಗಿ ಬರುತ್ತಿತ್ತು. ಆದರೆ ಸೇರಿಸಿಕೊಳ್ಳಬೇಕಾದ ಕನ್ನಡ ಅಕ್ಷರಗಳಿಗಾಗಿ ಈ ಮೊದಲೇ ಬಳಕೆಯಲ್ಲಿದ್ದ ಮರದ ತುಂಡಿನ (Wooden Block) ಮೇಲೆ ಚಿತ್ರಗಳನ್ನು ಕೊರೆಯುವ ಕ್ರಮವನ್ನನುಸರಿಸಿ


06
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.
 
[ 7 ]ಕನ್ನಡ ಅಕ್ಷರಗಳನ್ನು ಕೈಯಲ್ಲಿಯೇ ಕೊರೆದು ಬರೆಸಿ ಮುದ್ರಣ ಮಾಡಲಾಗಿತ್ತು.

ಕನ್ನಡದ ಅಚ್ಚುಮೊಳೆಗಳ ಮುದ್ರಣ ಬಳಕೆಗೆ ಬರುವ ಮೊದಲು ಇನ್ನೊಂದು ಬಗೆಯ ಮುದ್ರಣವಿದ್ದಿತು. ಅದುವೇ ಶಿಲಾ ಮುದ್ರಣ ಅಥವಾ ಕಲ್ಲಚ್ಚು ಮುದ್ರಣ (stone print / lithography print), ಮಧ್ಯಯುಗ ಕಾಲದಿಂದ ಯುರೋಪಿನಲ್ಲಿ ಮುದ್ರಾಯಂತ್ರಗಳು ಲಭ್ಯವಿದ್ದವು. ರೋಮನ್, ಇಂಗ್ಲಿಷ್ ಇತ್ಯಾದಿ ಲಿಪಿಗಳ ಅಕ್ಷರಗಳೂ ನಿರ್ಮಿತವಾಗಿ ಮುದ್ರಣ ಕಾರ್ಯ ನಿಯಮಿತವಾಗಿ ಜಗತ್ತಿನಾದ್ಯಂತ ಪ್ರಸಾರವಾಯಿತು. ಆದರೆ ಕನ್ನಡ ಲಿಪಿಯ ಅಕ್ಷರ ಮೊಳೆಗಳು ಲಭ್ಯವಿಲ್ಲದಿದ್ದಾಗ ಆ ಮಧ್ಯಂತರದ ಅವಧಿಯಲ್ಲಿ ಕಲ್ಲಚ್ಚು ಮುದ್ರಣ ಅಸ್ತಿತ್ವಕ್ಕೆ ಬಂದಿತು.

ಈ ಶಿಲಾ ಮುದ್ರಣವನ್ನು ಎಲೋಯ್ಡ್ ಸೆನೆಫೆಲ್ಸ್ ಎಂಬ ಪ್ರೇಗ್ ನಿವಾಸಿ 1796ರಲ್ಲಿ ಕಂಡು ಹಿಡಿದ. ಇದಕ್ಕಾಗಿ ಕ್ಯಾಲ್ಸಿಯಂ ಕಾರ್ಬೊನೇಟ್ ಇರುವ ಕಲ್ಲು ಮತ್ತು ಗ್ರೀಸ್‌ನಂತಹ ದ್ರವ ಇವುಗಳನ್ನು ಬಳಸಿದ. ಇದನ್ನೇ ಕಲ್ಲಚ್ಚು ಅಥವಾ ಲಿಥೋಗ್ರಫಿ ಮುದ್ರಣ ಎನ್ನುವರು. ನಮ್ಮಲ್ಲಿ ಕಲ್ಲಿನ ಮೇಲೆ ಶಾಸನಗಳನ್ನು ಕೆತ್ತಿಸುವ ಬಗೆ ತಿಳಿದೇ ಇತ್ತು. ಆದರೆ ಹೆಚ್ಚು ಪ್ರತಿಗಳನ್ನು ಪಡೆಯುವ ವಿಧಾನ ಗೊತ್ತಿರಲಿಲ್ಲ. ಭಾರತದಲ್ಲಿ ಯುರೋಪದಿಂದ ಈ ತಂತ್ರವನ್ನು ನೇರವಾಗಿ ಎತ್ತಿಕೊಂಡಿರಲಿಲ್ಲ. ಕಾವಟೆ ಮುಳ್ಳು, ಮುಳ್ಳುಗಳನ್ನು ಹೊಂದಿದ ಹೊಂಗಾರ ಮರದ ತುಂಡು ಅಥವಾ ಮೆದುವಾದ ಮರದ ತುಂಡುಗಳ ಮೇಲೆ ಅಕ್ಷರಗಳನ್ನು ಕೆತ್ತಿ ಮುದ್ರಿಸುತ್ತಿದ್ದರು. ತದನಂತರ ಮೆದುವಾದ ಕಲ್ಲು. ಜಿಡ್ಡಿನ ಎಣ್ಣೆ, ಕಾಗದ, ಲೇಖನಿ ಇವಿಷ್ಟನ್ನು ಬಳಸಿ ಶಿಲಾ ಮುದ್ರಣವನ್ನು ಮಾಡುತ್ತಿದ್ದರು. ಮುಂದೆ ಅದು ಅವಿಷ್ಕಾರಗೊಂಡು ಹೆಚ್ಚು ಪ್ರತಿ ತೆಗೆಯುವಂತೆ ಮಾನವ ಚಾಲಿತ ಯಂತ್ರವೂ ತಯಾರಿಸಲ್ಪಟ್ಟು ಅದು ನಂತರ ಲಿಥೋಗ್ರಫಿ ಮುದ್ರಣವೆಂದಾಯಿತು (Lithography Print), ಹಳದಿ ಬಣ್ಣದ ಕಡಬ ಕಲ್ಲಿನಂತೆ ಹೋಲುವ ಕಲ್ಲನ್ನು ನಯಗೊಳಿಸಿ ಕಾಗದದಲ್ಲಿ ಬರೆದ ಅಕ್ಷರಗಳನ್ನು ಕನ್ನಡಿಯಲ್ಲಿ ನೋಡಿ ತಿರುಗುಮುರುಗಾಗಿ ಬರೆದು ಕಪ್ಪು ಶಾಯಿ ಬಳಸಿ ಕಾಗದಕ್ಕೆ ಬರೆದ ಅಕ್ಷರಗಳನ್ನು ಒತ್ತುವ ವಿಧಾನದಿಂದ ಕಲ್ಲಚ್ಚು ಮುದ್ರಣ ಮಾಡಲಾಗುತ್ತಿತ್ತು.

ಕನ್ನಡ ಭಾಷೆಯ ಪಠ್ಯ ಪುಸ್ತಕಗಳನ್ನು ಹೊರತರಲು ಮೊದಲು ಹೆಜ್ಜೆ ಇಟ್ಟವರು ಆಗಿನ ಮುಂಬಯಿ ಸರಕಾರದಲ್ಲಿ ಶಿಕ್ಷಣಾಧಿಕಾರಿಗಳಾಗಿದ್ದ ಬಾಳಶಾಸ್ತ್ರಿ ಜಾಂಬೇಕರರು, ಮರಾಠಿ, ಗುಜರಾತಿ ಮಕ್ಕಳಿಗಿದ್ದಂತೆ ಕನ್ನಡದ ಮಕ್ಕಳಿಗೂ ಕನ್ನಡದಲ್ಲಿಯೇ ಶಿಕ್ಷಣ ದೊರೆಯಬೇಕು. ಅದಕ್ಕಾಗಿ ಕನ್ನಡ ಪಠ್ಯಗಳು

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
07
 
[ 8 ]ತಯಾರಾಗಬೇಕು ಎಂಬುದು ಸರಕಾರದ ನಿಯಮವಾಗಿತ್ತು. ಮುಂಬಯಿಯಲ್ಲಿ ಕಲ್ಲಚ್ಚು ಮುದ್ರಣದಲ್ಲಿ ಕೆಲವು ಕನ್ನಡ ಪುಸ್ತಕಗಳನ್ನು ಮುದ್ರಿಸಿ ಶಾಲಾ ಪಠ್ಯವಾಗಿ ಉಪಯೋಗ ಮಾಡಲಾಗುತ್ತಿತ್ತು. ಕಲ್ಲಚ್ಚು ಮುದ್ರಣದ ಶಿಲೆಗಾಗಿ ಕರ್ನೂಲಿನಿಂದ ಮೆದುವಾದ ಕಲ್ಲಿನ ಹಲಗೆಗಳನ್ನು ತರಿಸಲಾಗುತ್ತಿತ್ತು. ಈ ಮುದ್ರಣದಿಂದ ನೂರಾರು ಪ್ರತಿಗಳು ಏಕಕಾಲಕ್ಕೆ ಮುದ್ರಿಸಲು ಅಸಾಧ್ಯವಾಗಿತ್ತು. ಇಂಗ್ಲಿಷ್ ಭಾಷೆಯ ಅಚ್ಚುಮೊಳೆಗಳಂತೆ ಕನ್ನಡದ ಅಚ್ಚು ಮೊಳೆಗಳನ್ನು ಎಲ್ಲಿಂದಲೂ ಎರವಲು ಪಡೆಯಲು ಸಾದ್ಯವಿರಲಿಲ್ಲ. ಇದಕ್ಕಾಗಿಯೇ ಕಲ್ಲಚ್ಚು ಅಥವಾ ಶಿಲಾ ಮುದ್ರಣವು ಬಿಡಿಮೊಳೆಗಳ ಬದಲಾಗಿ ಬಂದವು. ಮುಂಬಯಿಯ ಗವರ್ನಮೆಂಟ್ ಸೆಂಟ್ರಲ್ ಪ್ರೆಸ್, ಮುಂಬಯಿಯ ಆನಂದರಾಯ ಕಲ್ಲಿನ ಮದ್ರಣ ಮೊದಲಾದ ಕಲ್ಲಚ್ಚು ಮುದ್ರಣ ಛಾಪಖಾನೆಗಳ ಹೆಸರುಗಳು ಕನ್ನಡವನ್ನು ಕಲ್ಲಚ್ಚು ಮುದ್ರಣದಲ್ಲಿ ಮುದ್ರಿಸಿದ ಮೊದಲು ಛಾಪಖಾನೆಗಳಾದರೆ ಮುದ್ರಣ ವ್ಯವಸ್ಥೆಯಲ್ಲಿ ಕ್ರಾಂತಿಯನ್ನೇ ಮಾಡಿದ ಬಾಸೆಲ್ ಮಿಶನ್ ಪ್ರೆಸ್ ಎರಡನೆಯದು. ಕಲ್ಲಚ್ಚು ಮುದ್ರಣಗಳನ್ನು ಮಾಡುತ್ತಿದ್ದ ಜಗನ್ಮೋಹನ ಮುದ್ರಣಶಾಲೆ ಮತ್ತು ಕೃಷ್ಣರಾಜ ಮುದ್ರಣ, ಮೈಸೂರು, ಜ್ಞಾನಬೋಧಕ ಛಾಪಖಾನೆ ಮತ್ತು ಸನ್ಮಾರ್ಗ ದರ್ಶನ ಭಾಪಖಾನೆ ಧಾರವಾಡ, ಹಿಂದೂ ಪ್ರೆಸ್, ಮಂಗಳೂರು ಮುಂತಾದ ಹಲವಾರು ಛಾಪಖಾನೆಗಳ ಹೆಸರುಗಳು ಸಿಗುತ್ತವೆ.

ಮಂಗಳೂರಿನಲ್ಲಿ ಮುದ್ರಣ: ತುಳುನಾಡಿನ ಮೊದಲ ಮುದ್ರಣಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾದ ಬಾಸೆಲ್ ಮಿಶನ್ ಪ್ರೆಸ್ ತುಳು ಜಿಲ್ಲೆಗೆ ವಿದೇಶಿಯರ ಕೊಡುಗೆಗಳಲ್ಲೊಂದು. 179 ವರ್ಷಗಳ ಹಿಂದೆ ಸ್ಥಾಪನೆಗೊಂಡ ಈ ಮುದ್ರಣಾಲಯವು ಈಗಲೂ ಹೊಸಅವಿಷ್ಕಾರ ದೊ೦ದಿಗೆ ಕಾರ್ಯವೆಸಗುತ್ತಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿರುತ್ತದೆ. 1834ರಿಂದಲೇ ಆರಂಭವಾದ ಕ್ರೈಸ್ತರ ಆರಾಧನೆ ಹಾಗೂ 1835ರಲ್ಲಿ ಪ್ರಾರಂಭವಾದ ಪ್ರಾಥಮಿಕ ಶಾಲೆ ಮುಂತಾದವುಗಳಿಗೆ ಮುದ್ರಿತ ಪಠ್ಯ ಪುಸ್ತಕಗಳ ಅಗತ್ಯವಿತ್ತು. ಕನ್ನಡದ ಧಾರ್ಮಿಕ ಹಾಗೂ ಪಠ್ಯ ಪುಸ್ತಕಗಳನ್ನು ಬೊಂಬಾಯಿ ಮತ್ತು ಮದ್ರಾಸ್‌ನಲ್ಲಿ ಕಲ್ಲಚ್ಚು ಮುದ್ರಣದಿಂದ ಮುದ್ರಿಸಿ ತರಲಾಗುತ್ತಿತ್ತು. ಮಲಯಾಳಂ ಪುಸ್ತಕಗಳನ್ನು ಕಲ್ಲಿಕೋಟೆಯಿಂದ ಮುದ್ರಿಸಿ ತರಿಸಲಾಗುತ್ತಿತ್ತು. 1840ರಲ್ಲಿ ಬಾಸೆಲ್ ಮಿಶನ್‌ಗೋಸ್ಕರ ಮಲಯಾಳಂ ಭಾಷೆಯಲ್ಲಿ ಬೈಬಲಿನ ಮೊದಲ ಪುಸ್ತಕವಾದ ಉತ್ಪತಿ ಪುಸ್ತಕವು ಕಲ್ಲಿಕೋಟೆಯಲ್ಲಿಯೂ, ಬಾಸೆಲ್ ಮಿಶನ್‌ನ ಮೊದಲ ಸಂಗೀತ ಪುಸ್ತಕವಾದ ಗೀತಗಳು(1842) ಮುಂಬಯಿಯಲ್ಲಿಯೂ ಮುದ್ರಣಗೊಂಡಿದೆ. ಬಳ್ಳಾರಿ, ಮದ್ರಾಸ್,


08
ತುಳುನಾಡಿನಲ್ಲಿ ಬಾಸೆಲ್ ಮಿಷನ್ ಮತ್ತಿತರ ಲೇಖನಗಳು...
 
[ 9 ]ಮುಂಬಯಿ ಕಡೆಗಳಲ್ಲಿ ಕಲ್ಲಚ್ಚಿನಿಂದ ಮುದ್ರಣಗೊಳ್ಳುತ್ತಿದ್ದ ಕನ್ನಡ ಪುಸ್ತಕಗಳ ಅಕ್ಷರಗಳು ಸುಂದರವಾಗಿರಲಿಲ್ಲ.

1841ರಲ್ಲಿ ಮಂಗಳೂರಿನಲ್ಲಿ ಮುದ್ರಣವನ್ನು ಆರಂಭಿಸಿದವರು ಜಿ. ಎಚ್‌. ವೈಗ್ಲೆ(GOTTFRIED HARTMAN WEIGLE). ಇವರು ಜನಿಸಿದ್ದು 1ನೇ ಜುಲೈ 1816, ವುಟೆಂಬರ್ಗ್‌ ನೆಕಾರ್ ಎಂಬ ನದಿಯ ತಪ್ಪಲು ಪ್ರದೇಶವಾದ ಸುಂದರವಾದ ತಾಣದಲ್ಲಿದ್ದ ಜೆಲ್ ಎಂಬ ಹಳ್ಳಿಯಲ್ಲಿದ್ದ ಸಭಾಪಾಲಕರ ಮನೆಯಲ್ಲಿ. ವಿದ್ಯಾಭ್ಯಾಸದ ಬಳಿಕ 1834ರಲ್ಲಿ ದೈವಜ್ಞಾನ ತರಬೇತಿಗೆ ಸೇರಿದರು. ಇವರು ತರಬೇತಿಗೆ ಸೇರುವಾಗ ಬೋಧಕೋದ್ಯೋಗಕ್ಕೆ ಮಾತ್ರವಲ್ಲ ವಿವಿಧ ತರಬೇತಿಯಲ್ಲಿಯೂ ಪರಿಣಿತರಾಗಿದ್ದರು. 1836ರಲ್ಲಿ ಬೋಧಕೋದ್ಯೋಗಕ್ಕೆ ಸೈಂಟ್ ಜೋರ್ಜ್ ದೇವಾಲಯದಲ್ಲಿ ದೀಕ್ಷೆ ಹೊಂದಿದ ಬಳಿಕ ಬಾಸೆಲ್‌ನಲ್ಲಿ ಉಪನ್ಯಾಸಕರಾಗಿ ಸೇವೆಸಲ್ಲಿಸಿ 1840ರಲ್ಲಿ ಜೆ. ಮುಲ್ಲರ್ (FILLER), ಜೆ. ಅಮ್ಮನ್ (JAMANN), ಎಮ್, ಫಿಟ್ಸ್ (M, R17) ಪ್ರೀತಿಗೂಡಿ ಭಾರತಕ್ಕೆ ಬಂದರು.

ಕೆಗೆ ಭಾರತಕ್ಕೆ ಒಂದಾಗ ಮುಂಬಯಿಗರು ಇಂದು ದೇಶೀಯ ಏಕೊಳ್ಳುವುದು ಮಾತ್ರವಲ್ಲದೆ ಪದಗಳನಲ್ಲಿ ಸ್ಥಾಪಿಸಬೇಕಾದ ಕಲತ್ತು ಮುದ್ರಣದ ಸಂಪೂರ್ಣ ಮಾಹಿತಿಯನ್ನು ಪಡೆಯುವುದಕ್ಕಾಗಿ ಬೊಂಬಾಯಿಯಲ್ಲಿದ್ದ ಅಮೇರಿಕನ್ ಮರಾಠಿ ಮಿಶನ್‌ನವರ ಪ್ರೆಸ್ ಮುಂತಾದ ಕಡೆಗಳಲ್ಲಿ ಆಳದಾಡಿದ್ದು ಮಾತ್ರವಲ್ಲದೆ ಮಂಗಳೂರಿನ ಕೈಸ್ತ ಸಭೆಗಳ ಉಪಯೋಗಕ್ಕಾಗಿದ್ದ ತಾನು ಮತ್ತು ಮೊಗ್ಲಿಂಗ್ ಮತ್ತಿತರರು ಭಾಷಾಂತರಿಸಿ ಕಲ್ಲಚ್ಚು ಮುದ್ರಣದಲ್ಲಿ ಮುದ್ರಿಸಲು ಮುಂಬಯಿಯಲ್ಲಿಯೇ ತಯಾರು ಮಾಡಿದರು. ಒಂದು ಲಿಥೋ ಪ್ರೆಸ್ (ಕಲ್ಲಚ್ಚು ಮುದ್ರಣ ಯಂತ್ರ), ಜರ್ಮನಿಯ ನಾಲ್ಕು ಕಲ್ಲಚ್ಚಿನ ಕಲ್ಲು ಮತ್ತು ಇಬ್ಬರು ನುರಿತ ಮರಾಠಿ ಮುದ್ರಕರೊಂದಿಗೆ ಬಂದರು. ಮುಂಬಯಿಯಲ್ಲಿದ್ದ ಹಲವು ಕ್ರೈಸ್ತ ಸ್ನೇಹಿತರು ಇದಕ್ಕಾಗಿ ಸಹಾಯ ಮಾಡಿದ್ದರು. ಮೊದಲು ತಂದ 50 ಗೀತೆಗಳನ್ನೊಳಗೊಂಡ "ಗೀತಗಳು" ಎಂಬ ಹೆಸರಿನ ಪುಸ್ತಕದಲ್ಲ್ಲಿ ಮೊಗ್ಲಿಂಗ್‌ರವರ 16, ವೈಯವರ 10, ಲೇಯರ್‌ರವರ (Layer) 2 ಗೀತೆಗಳು ಮತ್ತಿತರ ಗೀತೆಗಳಿವೆ. ಮುದ್ರಣದ ಬಗ್ಗೆ ಪುಸ್ತಕದ ಮುಖ ಪುಟದಲ್ಲಿ ಮುಂಬಾಯಿ ಪಟ್ಟಣದಲ್ಲಿ ಪಂಡಿತನಾದ ಆನಂದರಾಯರ ಬರಹದಿಂದ ಕಲ್ಲಿನ ಮೇಲೆ ಚಾಪಿಸಿದ್ದು 1842 ಎಂದು ನಮೂದಿಸಲಾಗಿದೆ.

ವೈಗ್ಲೆ ಮಂಗಳೂರಿಗೆ ಬಂದಾಗ ಅತ್ಯಂತ ಖುಷಿಪಟ್ಟವರು ಹರ್ಮನ್

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
09
 
[ 10 ]ಮೊಗ್ಲಿಂಗ್. ಇವರು 1836ರಲ್ಲಿ ಭಾರತಕ್ಕೆ ಬಂದವರು. ಮಂಗಳೂರಿನಲ್ಲಿ ಮುದ್ರಣ ವ್ಯವಸ್ಥೆ ಸ್ಥಾಪಿಸಲು ಸೂಕ್ತ ವ್ಯಕ್ತಿಯನ್ನು ಎದುರು ನೋಡುತ್ತಿದ್ದ ಇವರು ವೈಗ್ಲೆಯವರ ಜೀವನ ಚರಿತ್ರೆಯಲ್ಲಿ ಹೀಗೆ ಬರೆಯುತ್ತಾರೆ. He brought with him to his India-Mission Service stores of knowledge rarely in the possession of a fresh-man from Europe, and talents of the first order.He was a very fair Latin and Greek scholar, well at home in Hebrew, had gone deep into medieval German had studied Arabic and Sanskrit under professor Ewald with much zeal and success, and had made himself acquainted with all the principal languages of Europe from Russian to Portuguese. On his arrival at Bombay in June 1840 be commenced Canarese, and looked about him in Mahrathi, Guzarathi and Hindusthani, to which afterwards Malayalam, Tulu and Tamil were added. On his landing at Mangalore on the 19th September, as above stated he found me in my room boring at Krishnamachary's Canarese Grammar.

7-6-18585ನಿಧನರಾದ ವೈಗ್ಲೆಯವರ ವಿಚಾರವಾಗಿ ಪತ್ರಿಕೆಯೊಂದರಲ್ಲಿ ಹೀಗೆ ಬರೆದಿದ್ದಾರೆ: "ಇವರು ಅಗ್ರಗಾಮಿ ಮಿಶನರಿಗಳಲ್ಲಿದ್ದ ವಿದ್ವಾಂಸರಲ್ಲಿ ಒಬ್ಬರಾಗಿದ್ದರು. ಇವರು ಆ ಕಾಲದ ವೈದಿಕ ಶಾಲೆಯ ಪ್ರೊಫೆಸರರೂ, ದೇವ ವಾಗೃಂಥವನ್ನು ಕನ್ನಡಕ್ಕೆ ಭಾಷಾಂತರಿಸಿದವರಲ್ಲಿ ಒಬ್ಬರೂ, ಇನ್ನು ಅನೇಕ ಕನ್ನಡ ಗ್ರಂಥಗಳನ್ನು ರಚಿಸಿದವರೂ ಆಗಿದ್ದರು ಇವರು ತನ್ನ ದಾಯಾದಿಯಾಗಿದ್ದ ಮಿಶನರಿ ರೆವೆ. ಮೋಗ್ಲಿಂಗ್ ದೊರೆಯವರಿಗೆ ಪ್ರೀಯನಾದ ಬಲಗೈಯಂತೆ ಇದ್ದರು". (ಕ್ರೈಸ್ತ ಹಿತವಾದಿ, 1926)

1841ರಲ್ಲಿ ಬೊಂಬಾಯಿಯಿಂದ ಕಲ್ಲಚ್ಚು ಮುದ್ರಣ ಯಂತ್ರ ತಂದಾಗ ಇಲ್ಲಿ ಮೊದಲು ಮುದ್ರಿಸಿದ್ದು ಸತ್ಯವೇದದ ಒಂದು ಭಾಗವಾಗಿರುವ ಗ್ರೇನರ್ ಎಂಬ ಮಿಷನರಿಯ ತುಳು ಭಾಷಾಂತರವಾದ 'ಮತ್ತಾಯೆ ಬರೆತಿ ಸುವಾರ್ತಮಾನ'. 1842ರಲ್ಲಿ ಮತ್ತೊಂದು ಶಿಲಾಯಂತ್ರವನ್ನು ಮದ್ರಾಸಿನಿಂದ ತರಿಸಲಾಯಿತು. ಈ ಶಿಲಾಯಂತ್ರದಲ್ಲಿ ಕೇವಲ ಧಾರ್ಮಿಕ, ಪ್ರಾಥಮಿಕ ಪಠ್ಯಗಳನ್ನು ಮಾತ್ರ ಪ್ರಕಟಿಸಿದರೆ ಜನಸಾಮಾನ್ಯರನ್ನು ಮುಟ್ಟಲು ಸಾಧ್ಯವಿಲ್ಲವೆಂದರಿತ ಮಿಶನರಿಗಳು ಇತರ ಸಾಹಿತ್ಯಗಳ ಪ್ರಕಟಣೆಗಳಿಗೂ ಮುಂದಾದರು. ಅಕ್ಷರಮಾಲೆ (1844), ಭೂಗೋಳ

10
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
 
[ 11 ](1845). ನೀತಿಪಾಠಗಳು(1848) ಮೋಗ್ಲಿಂಗ್‌ರವರ-ಮಂಗಳೂರು ಸಮಾಚಾರ(1843), ಚನ್ನಬಸವ ಪುರಾಣ (1851), ಜೈಮಿನಿ ಭಾರತ (1848), ತೊರವೆ ರಾಮಾಯಣ, ಕುಮಾರವ್ಯಾಸ ಭಾರತ, ದಾಸರ ಪದಗಳು(1850), ಬಸವ ಪುರಾಣ (1850), ಕನಕದಾಸರ ಭಕ್ತಿಸಾರ(1850), ರಾವಣ ದಿಗ್ವಿಜಯ (1848), ಕನ್ನಡ ಗಾದೆಗಳು(1847), ಹೃದಯ ದರ್ಪಣ(1850), ಜಾತಿ ವಿಚಾರಣೆ (1845), ದೇಶಾಂತ್ರಿಯ ಪ್ರಯಾಣ(1849), ಮತ ವಿಚಾರಣೆ (1845) ಮೊದಲಾದ ಬೃಹತ್ ಗ್ರಂಥಗಳು, ಪಠ್ಯ ಪುಸ್ತಕಗಳು, ಶಾಲೆಗಳ ಉಪಯೋಗಕ್ಕಾಗಿ ಭೂಪಟಗಳು ಕಲ್ಲಚ್ಚಿನಿಂದ ಮುದ್ರಣಗೊಂಡವು. ಆಗ ಈ ಪ್ರೆಸ್‌ಗೆ 'ಜರ್ಮನ್ ಮಿಶನ್ ಪ್ರೆಸ್ ಎಂದು ಕರೆಯಲಾಗುತ್ತಿತ್ತು. ಮುಂಬಾಯಿ ಸರಕಾರದವರು ತಮ್ಮ ಆಡಳಿತದ ಶಾಲೆಗಳಿಗೆ ಬೇಕಾದ ಪಠ್ಯ ಪುಸ್ತಕಗಳನ್ನು ಅಚ್ಚು ಹಾಕಿಸುವುದಕ್ಕೂ ಮದ್ರಾಸ್ ಸರಕಾರದವರು ತಮ್ಮ ಪತ್ರಾಗಾರದಲ್ಲಿದ್ದ ದಾಸ ಸಾಹಿತ್ಯಗಳಂತಹ ಕನ್ನಡ ಗ್ರಂಥ ಹಸ್ತಪ್ರತಿಗಳಿಂದ ಅಚ್ಚು ಹಾಕಿಸಲು ಬಾಸೆಲ್ ಮಿಶನ್ ಮುದ್ರಣಾಲಯವನ್ನೇ ಆರಿಸಿಕೊಂಡರು. ಈ ಮುದ್ರಣಾಲಯದಲ್ಲಿ ಕನ್ನಡ ಲಿಪಿಯನ್ನು ತುಳು ಭಾಷೆಗೆ ಬಳಸಿದ್ದು ಮಾತ್ರವಲ್ಲ, ಬಡಗ, ಕೊಡವ, ಕೊಂಕಣಿ ಭಾಷೆಗಳಲ್ಲಿಯೂ ಪುಸ್ತಕಗಳನ್ನು ಮುದ್ರಿಸಿ ಪ್ರಕಟಿಸಿದರು. ಇದರಿಂದ ಏಕೀಕೃತ ಕರ್ನಾಟಕ ಪ್ರಾಂತ್ಯದಿಂದ ಈ ಅಚ್ಚ ಕನ್ನಡಿಗರು ಸಿಡಿದು ಹೋಗದಂತೆ ಮುಂಜಾಗ್ರತೆಯನ್ನು ತೆಗೆದುಕೊಂಡ ಪ್ರಶಂಸೆ ಜರ್ಮನ್ ಮಿಶನರಿಗಳಿಗೆ ಸೇರಬೇಕು.

1851 ಭಾರತಕ್ಕೆ ಬಂದ Charles George Andrew Plebst ಎಂಬವರ ನಾಯಕತ್ವದಲ್ಲಿ ಇಲ್ಲಿ ಲೆಟರ್ ಪ್ರೆಸ್‌ನ ಸ್ಥಾಪನೆಗೆ ತಯಾರಿಗಳು ನಡೆದವು. ವಿದೇಶದಿಂದ ಹೊಸ ಮುದ್ರಾಕ್ಷರ ಯಂತ್ರಗಳು ಅಚ್ಚು ಮೊಳೆಗಳು ತರಿಸಲ್ಪಟ್ಟವು. ಮಾತ್ರವಲ್ಲದೆ 1852ರಿಂದ ಅಕ್ಷರ ಮೊಳೆಗಳನ್ನು ಉಪಯೋಗಿಸಿ ಮುದ್ರಣಗೊಳ್ಳುವ ಕಾರ್ಯ (Typography) ಆರಂಭವಾಯಿತು. ಮೊತ್ತಮೊದಲು ಅಕ್ಷರಗಳನ್ನು ಕೆತ್ತಲು ಮಂಗಳೂರಿನವರೇ ಆದ ಪಾಂಡುರಂಗ ಶೆಟ್‌ರವರನ್ನು ನೇಮಿಸಿಕೊಂಡರು. ಫೆಬ್‌ರಿಂದ ಮುದ್ರಣದಲ್ಲಿ ತರಬೇತಿ ಪಡೆದ ಟೋಮಿ ಲುಕ್ಲಿನ್ (Tomy Lucklin) ಪ್ರೆಸ್‌ಗೆ ಸೇರ್ಪಡೆಯಾದನು. ಉತ್ತಮ ನೌಕರನಾಗಿದ್ದ ಈತ 1865ರ ತನಕ ಸೇವೆಯಲ್ಲಿದ್ದು ನಿಧನವಾದಾಗ ಬಾಸೆಲ್ ಮಿಶನ್ ವರದಿಯಲ್ಲಿ ಹೀಗೆ ದಾಖಲಿಸಲಾಗಿದೆ: "The Establishment suffered a severe loss by the death of Tommy Lucklin, headman of the Type -Foundry, who

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
11
 
[ 12 ]was not only very clever workman, but also a humble. Tommy's Father, a Chinese officer of rank, having fallen in an encounter with the British, the orphan, then about years old, was brought to India by an English lady. By and bye the boy showed an unmanageable temper and was given over the Boys' Institution at Mangalore. Having passed through it, he became apprentice in the Bookbindery. Mr. Piebst trained him in the casting business, which he learned thoroughly, so that for many years this branch of the Establishment could with full confidence to entrusted to him" (BM. Report 1865)

ಹೊಸ ಮುದ್ರಣ ವ್ಯವಸ್ಥೆಯಲ್ಲಿ ಮೊದಲಿಗೆ ಬಾಸೆಲ್ ಮಿಶನ್‌ನ 13ನೇ ವರ್ಷದ ವರದಿಯು ಜರ್ಮನಿಯಿಂದ ತಂದ ಇಂಗ್ಲಿಷ್ ಮೊಳೆಗಳನ್ನು ಉಪಯೋಗಿಸಿ ಇಂಗ್ಲಿಷ್‌ನಲ್ಲಿ ಮುದ್ರಣಗೊಂಡಿತು. 1853ರಿಂದ ಕನ್ನಡ ಮೊಳೆಗಳ ತಯಾರಿ ನಡೆದು ಕನ್ನಡದಲ್ಲಿ ಕನ್ನಡ ಪಂಚಾಂಗ ಮುದ್ರಣವಾಗುವುದರೊಂದಿಗೆ ಇಲ್ಲಿ ಅಚ್ಚುಮೊಳೆಗಳ ಕನ್ನಡ ಮುದ್ರಣ ಪ್ರಾರಂಭವಾಯಿತು. ಫೆಸ್ಟ್ ನಾಯಕತ್ವದಲ್ಲಿ ಪ್ರೆಸ್‌ನಲ್ಲಿ ಪ್ರತ್ಯೇಕ ಬೈಂಡಿಂಗ್ ವ್ಯವಸ್ಥೆ ಮಾಡಲಾಯಿತು. ಉಚ್ಚಿಲದಿಂದ ಬಂದ ಲೂಕಸ್ ಜೋಶ್ವ ಎಂಬಾತನನ್ನು ಬಳ್ಳಾರಿ, ಮದ್ರಾಸ್ ಮುಂತಾದೆಡೆಗೆ ಕಳುಹಿಸಿ ಬೈಂಡಿಂಗ್ ತರಬೇತುಗೊಳಿಸಿ ಇದರ ಮುಖ್ಯಸ್ಥನನ್ನಾಗಿ ನೇಮಕ ಮಾಡಿತು. ಬೈಂಡಿಂಗ್ ವಿಭಾಗವನ್ನು ಬಾಸೆಲ್ ಮಿಶನ್ ಪ್ರತ್ಯೇಕ ಕಟ್ಟಡ ನಿರ್ಮಿಸಿ ಮುಂದುವರೆಸುತ್ತಿತ್ತು. ಮುಂದಕ್ಕೆ ಆ ವಿಭಾಗವನ್ನು ಜೋಶ್ವರವರೇ ನಡೆಸುತ್ತಿದ್ದರು. ಮುಂದಕ್ಕೆ ಅವರ ನಾಯಕತ್ವದಲ್ಲಿ ಮುನ್ನಡೆದು "ಜೋಶ್ವ ಬೈಂಡಿಂಗ್ ವರ್ಕ್ಸ್" ಎಂಬ ಹೆಸರಿನಲ್ಲಿ ಮುಂದುವರಿದಿತ್ತು. ಈ ವಿಭಾಗವು ಪ್ರಸ್ತುತ ಅಥನಾ ಆಸ್ಪತ್ರೆಯಿರುವ ಸ್ಥಳದಲ್ಲಿದ್ದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಬಾಸೆಲ್ ಮಿಶನ್ ಪ್ರೆಸ್‌ನಲ್ಲಿ ಮುದ್ರಣಗೊಳ್ಳುತ್ತಿದ್ದ ಪುಸ್ತಕಗಳೆಲ್ಲವನ್ನು ಇಲ್ಲಿಯೇ ಬೈಂಡ್ ಮಾಡಲಾಗುತ್ತಿತ್ತು. ಬಾಸೆಲ್ ಮಿಶನ್ ಸಂಸ್ಥೆಯು ಭಾರತದಲ್ಲಿ ಸ್ಥಾಪಿಸಿದ ಮತ್ತು ಮುಂದಕ್ಕೆ ಸ್ಥಾಪಿಸಲಿರುವ ಕಾರ್ಖಾನೆಗಳಿಗಾಗಿ ಮರ್ಕಂಟೈಲ್ ಎಷ್ಟಾಬ್ಲಿಷಮೆಂಟ್ (Marcantile establishment) ವಿಭಾಗವನ್ನು ತೆರೆದು ಮಿಶನ್ (ಕ್ರೈಸ್ತ ಸಭೆ ಮತ್ತು ಶಾಲೆ)ನಿಂದ ಉದ್ಯೋಗ ನೀಡುವ ಮಾರಾಟ ಮಾಡುವ ವ್ಯವಸ್ಥೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿತು.

1858ರಿಂದ ಹೊಸ ಮೊಳೆಗಳನ್ನು ಮಾಡಿಸುವುದಕ್ಕೂ ಹೊಯಿಸುವುದಕ್ಕೂ


12
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
 
[ 13 ]ಪ್ರಾರಂಭ ಮಾಡಲಾಗಿ ಪ್ರೆಸ್‌ ಅಭಿವೃದ್ಧಿ ಹೊಂದಿತು. ಆಗ ಕೆಲಸಕ್ಕಿದ್ದವರು 28 ಮಂದಿ (12 ಮಂದಿ ಮೊಳೆ ಜೋಡಿಸುವವರು, 6 ಮಂದಿ ಭಾಷಿಸುವವರು, 5 ಜನ ಮೊಳೆ ಹೊಯ್ಯುವವರು, ಇಬ್ಬರು ಮೊಳೆ ಕೆತ್ತುವವರು.) 1860ರಲ್ಲಿ ಹೊರಗಿನ ಕೆಲಸ ಕಿಟ್ಟೆಲ್ ಹಾಗೂ ಮೋಗ್ಲಿಂಗ್ ಬರಹಗಳು ಇಲ್ಲಿಮುದ್ರಣಗೊಳ್ಳುತ್ತಿದ್ದುದರಿಂದ ಕೆಲಸಕ್ಕೇನು ಕೊರತೆ ಇರಲಿಲ್ಲ. ಈ ತನಕ ತುಳು ಕಂಟ್ರ, ಕೆನರಾ ಎಂದಿದ್ದ ಜಿಲ್ಲೆ ಇಬ್ಬಾಗವಾಗಿ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯಾಯಿತು. ಆಗ ಮಂಗಳೂರಿನಲ್ಲಿ ಮತ್ತು ಸಿರ್ಸಿಯಲ್ಲಿ ಸರಕಾರದ 2 ಪ್ರೆಸ್ ಆರಂಭವಾಯಿತು. ಈ ಎರಡು ಪ್ರೆಸ್‌ಗೆ ಅಚ್ಚುಮೊಳೆಗಳನ್ನೂ, ಮುದ್ರಣ ಸಾಮಾಗ್ರಿಗಳನ್ನೂ, ತರಬೇತಿ ಪಡೆದ ಕೆಲಸಗಾರರನ್ನೂ ಬಾಸೆಲ್ ಮಿಶನ್ ಪ್ರೆಸ್ ಕೊಡಬೇಕಾಯಿತು. 1861ರಿಂದ ಪುಸ್ತಕ ಮಾರಾಟ ಮಾಡಲು ಪ್ರತ್ಯೇಕ ಬುಕ್ ಶಾಪ್ ಆರಂಭವಾಯಿತು. 1859ರಲ್ಲಿ ಬಾಸೆಲ್ ಮಿಶನ್ ಟ್ರೇಡಿಂಗ್ ಸಂಸ್ಥೆ (Basel Mission Trading Company) ಪ್ರಾರಂಭಗೊಂಡು ಬಾಸೆಲ್ ಮಿಶನ್ ನಡೆಸುತ್ತಿದ್ದ ಪ್ರಿಂಟಿಂಗ್ ಪ್ರೆಸ್, ನೇಯಿಗೆ, ಹಂಚಿನ ಕಾರ್ಖಾನೆಗಳು ಇದರ ವ್ಯಾಪ್ತಿಗೊಳಗಾಯಿತು. ವಿದೇಶಿ ಹಾಗೂ ದೇಶೀ ಪಾಲುದಾರರ (share holders) ಕೈಜೋಡಿಸುವಿಕೆಯಿಂದ ಇದು ಮುಂದುವರಿಯುತ್ತಿತ್ತು. ಈ ಪ್ರತ್ಯೇಕ ವ್ಯವಸ್ಥೆಯಿಂದ ಕಾರ್ಖಾನೆಗಳ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಆಮದು ರಫ್ತುಗಳು ಹೆಚ್ಚಾದವು. 1862 ವಿಲಾಯತಿಯಿಂದ ಹೊಸ ಯಂತ್ರ ತರಿಸಲಾಯಿತು. ತಲಚೇರಿಯಲ್ಲಿದ್ದ ಮಿಶನ್ ಪ್ರೆಸ್ ಮುಚ್ಚಿ ಮಲಯಾಳಂ ಮುದ್ರಣವು ಸಹಾ ಮಂಗಳೂರಿನಲ್ಲಿಯೇ ಮುಂದುವರಿಯಿತು.

1865ರಲ್ಲಿ ಮಂಗಳೂರಿನಲ್ಲಿ ಹೊಸ ನಮೂನೆಯ ಹಂಚು ತಯಾರಿಕಾ ಕಾರ್ಖಾನೆ ಅಸ್ಥಿತ್ವಕ್ಕೆ ಬಂದು ಮಂಗಳೂರಿನ ಜಪ್ಪುವಿನಲ್ಲಿ ಮೊದಲ ಹಂಚು ಕಾರ್ಖಾನೆ ಆರಂಭವಾಗಿ ತುಳುನಾಡಿನಲ್ಲಿ 'ಮಂಗಳೂರು ಹಂಚು" ಪ್ರಚಾರಕ್ಕೆ ಬಂತು. ಇದರ ರುವಾರಿ ಬಾಸೆಲ್ ಮಿಶನ್ ಪ್ರೆಸ್‌ನಲ್ಲಿ ಮುದ್ರಣ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸಿದ ಸಿ.ಜಿ. ಎ. ಫೆಬ್‌ರವರೇ ಆಗಿದ್ದಾರೆ.

1866ರಲ್ಲಿ ಕನ್ನಡ ಮತ್ತು ಮಲಯಾಳಂ ಅಚ್ಚುಮೊಳೆಗಳು ಬಾಸೆಲ್‌ನಲ್ಲಿ ಕೆತ್ತಿಸಲ್ಪಟ್ಟು ಇಲ್ಲಿ ಹೊಯಿಸಲಾಯಿತು (ಬಾಸೆಲ್ ಟೈಪ್), 1868ರಲ್ಲಿ ಫೆಡರರ್ ನಾಯಕತ್ವದಲ್ಲಿ ಪುಸ್ತಕ ಮಾರಾಟದ ವ್ಯವಸ್ಥೆಯನ್ನು ಪ್ರತ್ಯೇಕಿಸಲಾಯಿತು. ಇದು ಬಾಸೆಲ್ ಮಿಶನ್ ಬುಕ್ ಎಂಡ್ ಟ್ರ್ಯಾಕ್ಟ್ ಡಿಪೊಸಿಟರಿ (Basel Mission Book

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.
13
 
[ 14 ]& Tract Depository) ಎಂಬ ಹೆಸರಿನೊಂದಿಗೆ ಕಾರ್ಯಾರಂಭ ಮಾಡಿತು. ಇದು ಮಂಗಳೂರಿನ ಬಂದರ್ ಪ್ರದೇಶದಲ್ಲಿತ್ತು. ಅನಂತರ ಹಂಪನಕಟ್ಟೆಗೆ ಸ್ಥಳಾಂತರಗೊಂಡು 1965 ತನಕ ಕಾರ್ಯನಿರ್ವಹಿಸುತ್ತಿತ್ತು. ಇದರಲ್ಲಿ ಪ್ರಕಟಿತ ಪುಸ್ತಕಗಳಲ್ಲದೆ ಬಾಸೆಲ್ ಮಿಶನ್‌ ಪ್ರೆಸ್‌ನಲ್ಲಿ ತಯಾರಾಗುತ್ತಿದ್ದ ಭೂಗೋಳ, ನಕಾಶೆ, ಮುಂತಾದವುಗಳೂ, ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದ, ಬರವಣಿಗೆ ಸಾಮಾಗ್ರಿಗಳು, ಶಾಲಾ ಪ್ರಯೋಗ ಶಾಲೆಗೆ ಉಪಯೋಗವಾಗುವ ಲ್ಯಾಬೊರೇಟರಿ ಸಲಕರಣೆಗಳು, ವಿಜ್ಞಾನಕ್ಕೆ ಸಂಬಂಧಪಟ್ಟ ವಸ್ತುಗಳನ್ನು ಸಹಾ ಮಾರಾಟ ಮಾಡಲಾಗುತ್ತಿತ್ತು.

1874ರಲ್ಲಿ ಎ.ಸಿ. ಬರ್ನೆಲನ Elements of South Indian Palaeography ಎಂಬ ಭಾಷೆಗಳ ಅರ್ಥಶೋಧನೆಯ ಗ್ರಂಥವೊಂದು ಇಲ್ಲಿ ಮುದ್ರಣಗೊಂಡಿತು. ಈ ಉದ್ದೇಶಕ್ಕಾಗಿಯೇ ಲೆಸ್ಬಿಯನ್ ತಜ್ಞರ ಪ್ರಕಾರ ದೇಶಭಾಷೆಗಳನ್ನೆಲ್ಲಾ ಒಂದೇ ಬರಹದಿಂದ ಛಾಪಿಸುವ ಹಾಗೆ ಪ್ರತ್ಯೇಕ ಉಚ್ಚಾರ ಸೂಚಕ ನಿಶಾನಿಗಳಿರುವ ಅಕ್ಷರಗಳು ರೂಪಿಸಲ್ಪಟ್ಟವು. ಈ ಗ್ರಂಥದ ಮುದ್ರಣದಿಂದ ಬಾಸೆಲ್ ಮಿಶನ್ ಪ್ರೆಸ್ ಅನೇಕ ವಿದೇಶಿಯರ ಮತ್ತು ದೇಶೀಯ ವಿದ್ವಾಂಸರ ಮೆಚ್ಚುಗೆಗೆ ಕಾರಣವಾಯಿತು.

ಪ್ರಕಾಶಕರಾದ ಬೆಂಗಳೂರಿನ ಬ್ರಿಟಿಷ್ ಅಂಡ್ ಫೊರಿನ್ ಬೈಬಲ್ ಸೊಸೈಟಿ, ಅಕ್ಸಿಲರಿ ಬೈಬಲ್ ಸೊಸೈಟಿ, ನಮ್ಮ ಪುಸ್ತಕ ಭಂಡಾರ, ಮದ್ರಾಸಿನ ಗವರ್ನ್ ಮೆಂಟ್ ಆಫ್ ಪೋರ್ಟ್ ಸೈಂಟ್ ಜಾರ್ಜ್, ಆಕ್ಸಫರ್ಡ್ ಯುನಿವರ್ಸಿಟಿ, ಇಂಡಿಯಾ ಸಂಡೆ ಸ್ಕೂಲ್ ಯೂನಿಯನ್, ಮದ್ರಾಸು ಸರಕಾರ, ಸ್ಕೂಲ್ ಬುಕ್ ಅಂಡ್ ವರ್ನಾಕುಲ‌ರ್ ಲಿಟರೇಚರ್ ಸೊಸೈಟಿ, ಮಂಗಳೂರಿನ ಕರ್ನಾಟಕ ಕ್ರಿಶ್ಚನ್ ಕೌನ್ಸಿಲ್, ಸುವಾಸಿನಿ ಪ್ರಕಾಶನ, ಬಾಳಿಗಾ ಅಂಡ್ ಸನ್ಸ್, ನವನಿಧಿ ಕಾರ್ಯಾಲಯ, ಸೊಸೈಟಿ ಆಫ್ ಜೀಸಸ್, ಅಲೈಡ್ ಪಬ್ಲಿಷಿಂಗ್ ಹೌಸ್, ಇಂಡಿಯನ್ ಇಂಡಸ್ಟ್ರೀಸ್ & ಎಜನ್ಸಿಸ್, ಕೆ.ಟಿ.ಎಲ್.ಸಿ. ಸದರ್ನ್ ಡಯಾಸಿಸ್, ಮೈಸೂರಿನ ಎಚ್, ಲಿಂಗಣ್ಣ & ಸನ್ಸ್, ಮೈಸೂರು ಡಯಾಸಿಸ್, ಮುಂಬಯಿಯ ಒರಿಯಂಟಲ್ ಲಾಂಗ್‌ಮನ್, ಮೇಕ್ಕಿಲನ್‌, ಗವರ್ನ್‌ಮೆಂಟ್ ಸೆಂಟ್ರಲ್ ಬುಕ್ ಡಿಪೊ, ಡಿಪಾರ್ಟ್‌ಮೆಂಟ್ ಆಫ್ ಪಬ್ಲಿಕ್ ಇನ್‌ಕ್ಷನ್, ಲಾಂಗ್‌ಮನ್ & ಗ್ರೀನ್, ಪಂಜಾಬಿನ ಸಿ.ಎಮ್.ಎಸ್.ಮಿಶನ್, ಧಾರವಾಡದ ಕನ್ನಡ ಸಾಹಿತ್ಯ ಪ್ರಕಾಶನ, ಶಂಭುರುದ್ರಪ್ಪ ಶಿವರುದ್ರಪ್ಪ ಕುಲಕರ್ಣಿ, ಕರ್ನಾಟಕ ಬುಕ್ ಡಿಪೊ ಮುಂತಾದ ಪ್ರಕಾಶಕರುಗಳಿಗೆ ಸೊಗಸಾದ ಮುದ್ರಣವನ್ನು


14
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
 
[ 15 ]ಒದಗಿಸಿಕೊಟ್ಟ ಶ್ರೇಯಸ್ಸು ಬಾಸೆಲ್ ಮಿಶನ್‌ ಪ್ರೆಸ್‌ನದು.

ಅಲ್ಲದೆ ಬಾಸೆಲ್ ಮಿಶನ್ ಪ್ರಕಾಶನ ಸಂಸ್ಥೆಗಾಗಿ- ಕ್ರೈಸ್ತ ಧರ್ಮ ಸಾಹಿತ್ಯ ಸತ್ಯವೇದ, ಸಂಗೀತ, ದಾಸ ಸಾಹಿತ್ಯ, ನಿಘಂಟು, ವ್ಯಾಕರಣ, ಕೃಷಿ, ಖಗೋಳ, ವಿಜ್ಞಾನ, ಪ್ರಾಥಮಿಕ ಪಠ್ಯ, ಪತ್ರಿಕೆಗಳು, ಸ್ಮರಣ ಸಂಚಿಕೆಗಳು, ವರದಿಗಳು, ಸರಕಾರಿ ಕಾಯಿದೆಗಳು, ಚರಿತ್ರೆ, ಭೂತಾರಾಧನೆ, ಸಂಸ್ಕೃತಿ, ಶಾಸನಗಳು ಮುಂತಾದ ವಿಭಾಗಗಳಲ್ಲಿ ಪ್ರಕಟಿಸಿದ ಕ್ರೈಸ್ತ ಸಭಾ ಚರಿತ್ರ(1870), ಯಜ್ಞಸುಧಾನಿಧಿ(1872), ಇಂಗ್ಲಾಂಡ್ ದೇಶದ ಚರಿತ್ರವು(1863), ಕಥಾಮಾಲೆ(1862), ಕಾಟಕ ಕಾವ್ಯಮಾಲೆ(1874), ಕಾವ್ಯಮಂಜರಿ(1877), ನಾಗವರನ ಕನ್ನಡ ಛಂದಸ್ಸು (1875), ಪರಮಾತ್ಮ ಜ್ಞಾನ (1863), ಯೇಸು ಕ್ರಿಸ್ತನ ಶ್ರಮೇಚರಿತ್ರ(1859), ಶಬ್ದಮಣಿದರ್ಪಣ(1872), ಶಾಲಾ ನಿಘಂಟು(1899), ಸಣ್ಣ ಕರ್ಣಾಟಕ ಕಾವ್ಯಮಾಲೆ(1865), ಕನ್ನಡ ಇಂಗ್ಲಿಷ್ ನಿಘಂಟು(1894), ಕನ್ನಡ ವ್ಯಾಕರಣ(1903), ಮನ್ನರ್‌ರವರ ಪಾಡ್ಡನೊಲು (1886), ಮೆಲೋಡಿಯನ್ (1881), ತುಳು ಇಂಗ್ಲಿಷ್ ನಿಘಂಟು (1886), ಇಂಗ್ಲಿಷ್ ತುಳು ನಿಘಂಟು(1888) ಬ್ರಿಗೆಲ್‌ ತುಳು ವ್ಯಾಕರಣ(1872), ಕ್ರಿಸ್ತಾನುಜ ವತ್ಸ ಮತ್ತು ಪಂಜೆ ಮಂಗೇಶರಾಯರ-ಲಘುಕೋಶ(1910), ಜೀಗ್ಲರನ ಶಾಲಾ ನಿಘಂಟು(1876), ಜೆ.ಗ್ಯಾರೆಟ್‌ನ ಕನ್ನಡ ನಿಘಂಟು(1845), ಕೊಂಕಣಿ ನಿಘಂಟು(1883), ಗುಂಡರ್ಟ್‌ ಮಲಯಾಳಂ ನಿಘಂಟು(1872), ಕಿಟೆಲ್‌ನ ಕನ್ನಡ ನಿಘಂಟು (1894), ಕನ್ನಡ ಬಾಲವ್ಯಾಕರಣ(1859), ಕನ್ನಡ ಮೂಲವ್ಯಾಕರಣ(1905), ನೂತನ ಬಾಲ ವ್ಯಾಕರಣ(1951), ಕನ್ನಡ ವ್ಯಾಕರಣ ಸಾರವು(1854), ಕನ್ನಡ ಶಾಲಾ ವ್ಯಾಕರಣ(1866), ಅರಶಾಸ್ತ್ರದ ಮೂಲ ತತ್ವಗಳು(1890), ಇಂಡ್ಯನ್ ಪೇನಲ್ ಕೋಡಿನ ಸಾರಾಂಶ(1869), ಇಸೋಪನ ನೀತಿಕತೆಗಳು(1862), ಕನ್ನಡ ಗಾದೆಗಳು ತತ್ಸಮಾನ ಇಂಗ್ಲೀಷ್ ಗಾದೆಗಳು(1903), ಕನ್ನಡ ಇಂಗ್ಲಿಷು ಭಾಷಾಮಂಜರಿ(1909), ಅಕಬರ ಬೀರಬಲರ ಕಥೆಗಳು(1893), ಬಾಲಶಿಕ್ಷೆಯು (1854), ಅನುಕೂಲ ದಾಂಪತ್ಯ (1902), ಕನ್ನಡ ಬಾಲವ್ಯಾಕರಣ (1859), ಕಾಯಿದೆಗಳು (1887), ಕ್ಷೇತ್ರಫಲ ಘನಫಲ(1894), ಗ್ರಹವ್ಯವಸ್ಥೆಯೂ ಆರೋಗ್ಯ ಶಾಸ್ತ್ರವೂ(1894), ಗ್ರಹಗಳೆ೦ದರೇನು(1884), ಗ್ರಹಗಳಾಗುವುದು ಹ್ಯಾಗೆ (1884), ಗ್ರಹಧರ್ಮಾನುಶಾಸನ(1894), ಗ್ರೇಟ್ ಬ್ರಿಟನ್‌ದವರು ಯುದ್ಧದಲ್ಲಿ ಯಾಕೆ ತೊಡಗಿದರು(1915), ಚುಕ್ಕಿಗಳು ಬಾಲಚುಕ್ಕಿಗಳು(1884), ಜೀವರಸಾಯಿನಿ ವೈದ್ಯಸಾರ(1903), ಮದ್ರಾಸ್ ಹೈಕೋರ್ಟಿನವರ ನಿಬಂಧನೆಗಳು(1869),

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
15
 
[ 16 ]ನಾಗವರ್ಮನ ಕರ್ನಾಟಕ ಭಾಷಾಭೂಷಣವು(1884), ಲಘು ವ್ಯಾಕರಣ (1880), ಹಳೆಗನ್ನಡದ ಸಂಕ್ಷಿಪ್ತ ವ್ಯಾಕರಣ (1866), ಗ್ರೇಟರ್‌ನ ಕನ್ನಡ ಗ್ರಾಮ‌ರ್, ಸಂಸ್ಕೃತ ಬಾಲವ್ಯಾಕರಣ (1894), ಹೀಗೆ ಮುದ್ರಣದ ಯಾವ ಅಂಶವನ್ನು ತೆಗೆದುಕೊಂಡರೂ ಬಾಸೆಲ್ ಮಿಶನ್ ಪ್ರೆಸ್‌ನ ಕಾರ್ಯವು ಮಹತ್ತರವಾಗಿದೆ. 19ನೇ ಶತಮಾನದ ಉತ್ತರಾರ್ಧದಲ್ಲಿ ಅದು ಕರ್ನಾಟಕದಲ್ಲಿ ಯಾವುದೇ ಪ್ರೆಸ್‌ಗಿಂತ ದೊಡ್ಡದಿದ್ದು ಅದರಲ್ಲಿ ಕನ್ನಡ, ಇಂಗ್ಲಿಷ್, ತುಳು ಮಾತ್ರವಲ್ಲದೆ ತಮಿಳು, ಮಲಯಾಳಂ, ಸಂಸ್ಕೃತ, ಜರ್ಮನ್, ಫ್ರೆಂಚ್, ಕೊಡವ, ಬಡಗ, ಕೊಂಕಣಿ ಮುಂತಾದ ಭಾಷೆಗಳ ಸಾವಿರಾರು ಪುಸ್ತಕ ಮುದ್ರಣಗೊಂಡಿದೆ. ಬಾಸೆಲ್ ಮಿಶನ್ ಪ್ರೆಸ್ ಮುದ್ರಣ ಮಾಡುವುದು ಮಾತ್ರವಲ್ಲದೆ ಅಚ್ಚು ಮೊಳೆಗಳನ್ನು ತಯಾರಿಸುವುದು, ಪೋಟೋ ಬ್ಲಾಕ್‌ಗಳನ್ನು ತಯಾರಿಸುವುದು, ಇತರ ಪ್ರೆಸ್‌ಗಳಿಗೆ ಬೇಕಾದ ಮುದ್ರಣ ಸಾಮಾಗ್ರಿಗಳನ್ನು ತಯಾರಿಸಿ ನೀಡುವುದು, ಮರದ ಬ್ಲಾಕ್‌ಗಳನ್ನು ತಯಾರಿಸುವುದು, ಯಂತ್ರಗಳ ಸಿಲಿಂಡರ್‌ ತಯಾರಿಸುವುದು ಮುಂತಾದ ವಿಭಾಗದಲ್ಲಿ 1929ರಲ್ಲಿ ತಿದ್ದುವವರು 6, ಮುದ್ರಿಸುವವರು 30, ಮೊಳೆ ಜೋಡಿಸುವವರು 42, ಮರದ ಕೆಲಸದವರು 6, ಎರಕ ಹೊಯ್ಯುವವರು 5, ಇಂಜಿನ್ ವಿಭಾಗದವರು 2, ಕೂಲಿಯವರು 14, ಪ್ಯಾಕ್ ಮಾಡುವವರು 2, ಉಗ್ರಾಣದವರು 2, ಗುಡಿಸುವವರು 2, ಪಹರೆಯವರು 3- ಹೀಗೆ 150ಕ್ಕೂ ಮಿಕ್ಕಿ ಕೆಲಸಗಾರಿದ್ದರು ಎನ್ನುವುದು ಈಗ ಚರಿತ್ರೆಗೆ ಸೇರಿದ ವಿಚಾರವಾಗಿದೆ.

1862ರಲ್ಲಿ ಪ್ರಕಟವಾದ ಹಿಂದೂಸ್ಥಾನದ ಮೂಲಿಕೆ ವಿವರ್ತನೆಗಳು ಎಂಬ ಪುಸ್ತಕದ ಬಗ್ಗೆ ಡಾ. ಶ್ರೀನಿವಾಸ ಹಾವನೂರರವರು ಡಾ. ಟಿ.ಎಮ್.ಎ. ಪೈ ಅವರ ಅಭಿನಂದನ ಗ್ರಂಥವಾದ ಸುದರ್ಶನದಲ್ಲಿ ಬರೆದ 'ಮಂಗಳೂರು ಬೋಟನ್ ಅಟೋಗ್ರಫಿ-ಪ್ರಕೃತಿಯ ಸ್ವಮುದ್ರಣ' ಎಂಬ ಲೇಖನದಲ್ಲಿ ಹೀಗೆ ದಾಖಲಿಸಿದ್ದಾರೆ: "ವಾಸ್ತವ ಸಸ್ಯಗಳನ್ನು ಹಾಗೂ ಎಲೆಗಳನ್ನು ಅವುಗಳ ಸಹಜ ವರ್ಣದಲ್ಲಿ ಮುದ್ರಿಸಿ ಪ್ರತಿ ತೆಗೆದು ಪುಸ್ತಕ ರೂಪದಲ್ಲಿ ಹೊರತರುವ ತಂತ್ರದಿಂದ ಪುಸ್ತಕವೊಂದನ್ನು ಪ್ರಕಟಿಸಿದುದು ಜೆ. ಹುಂಜಿಕರ್ ಎಂಬ ಮಿಶನರಿ. ಈ ಅಪೂರ್ವ ಮುದ್ರಣವನ್ನು ಮೆಚ್ಚಬೇಕಾದರೆ 19ನೇ ಶತಮಾನದ ಮಧ್ಯಕಾಲದಲ್ಲಿ ಮುದ್ರಣ ಕಲೆಯ ಪರಿಸ್ಥಿತಿಯ ಅರಿವು ಇರಬೇಕು. ಮಂಗಳೂರಿನಲ್ಲಿ ಬಾಸೆಲ್ ಮಿಶನ್‌ನವರು 1841ರಲ್ಲಿ ಮುದ್ರಣಾಲಯವನ್ನು ಸ್ಥಾಪಿಸಲು ಯೋಚಿಸುವಾಗ ಕೇವಲ ಒಂದು ಡಜನ್ ಮುದ್ರಣಾಲಯಗಳು ಇದ್ದುವಷ್ಟೇ. ಮುದ್ರಣ ಮತ್ತು ಪ್ರಕಾಶನ ಕ್ಷೇತ್ರದಲ್ಲಿ ವಿಲಿಯಂ ಕೇರಿ ಅವರ ಒಂದು ಹೆಸರು ಮಾತ್ರ ಪ್ರಮುಖವಾಗಿ ಕೇಳಿಸುತ್ತಿತ್ತು. ಅನೇಕ


16
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
 
[ 17 ]ಭಾರತೀಯ ಮತ್ತು ಯುರೋಪಿಯನ್ ಭಾಷೆಗಳಲ್ಲಿ ಬಾಸೆಲ್ ಮಿಶನ್‌ನವರು ಪುಸ್ತಕಗಳನ್ನು ಹೊರತಂದರು. ಹಾಗೂ ಅವರ ಮುದ್ರಣಾಲಯವು ದಕ್ಷಿಣ ಭಾರತದಲ್ಲಿ ಅತಿ ದೊಡ್ಡದೆಂದು ಪರಿಗಣಿಸಲ್ಪಟ್ಟಿತ್ತು. ಬಾಸೆಲ್ ಮಿಶನ್ ಪ್ರೆಸ್‌ನಲ್ಲಿನ ಮುದ್ರಣವು ಅಂದಕ್ಕೆ ಭಾರತದ ಇನ್ನಾವುದೇ ಪ್ರೆಸ್ಸಿಗೆ ಹೋಲಿಸಿದರೆ ಅಸಮಾನವಾದುದು ಎಂದು ಅಂದಿನ ಮದ್ರಾಸ್ ಸರಕಾರವು ತನ್ನ 1875ರ ಆಡಳಿತ ಕೈಪಿಡಿಯಲ್ಲಿ (Manual of Administration 1875) ದಾಖಲು ಮಾಡಿದೆ." ಮಂಗಳೂರಿನಲ್ಲಿ 1870ರ ಸುಮಾರಿಗಿದ್ದ ಹಿಂದೂ ಪವರ್ ಪ್ರೆಸ್ ಕಲ್ಲಚ್ಚು ಮುದ್ರಣ ಮಾಡುತ್ತಿದ್ದ ದಾಖಲೆಯಿದ್ದು ಇದೊಂದು ಬಿಟ್ಟರೆ ಈವರೆಗೆ ಬಾಸೆಲ್ ಮಿಶನ್ ಪ್ರೆಸ್ ಏಕೈಕ ಮುದ್ರಣಾಲಯವಾಗಿತ್ತು. ಜಿಲ್ಲೆಯಲ್ಲಿ ನಂತರ ಸ್ಥಾಪನೆಯಾದ ಮುದ್ರಣಾಲಯಗಳು ಇಲ್ಲಿ ಕೆಲಸ ಮಾಡಿ ಅನುಭವ ಪಡೆದಿದ್ದವರ ನೆರವನ್ನೇ ಹೆಚ್ಚಾಗಿ ಪಡೆದವುಗಳಾಗಿವೆ.

ಬಾಸೆಲ್ ಮಿಶನ್ ಪ್ರೆಸ್ ಬಗ್ಗೆ 1927ರಲ್ಲಿ ಮಂಗಳೂರಿನಲ್ಲಿ ನಡೆದ 13ನೇ ಕರ್ನಾಟಕ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಯ ಲೇಖನವೊಂದರಲ್ಲಿ ಹೀಗೆ ಬರೆಯಲಾಗಿದೆ: "ಕಲ್ಲು ಛಾಪಾಯಂತ್ರದೊಡನೆ ಬಲು ಅಲ್ಪ ತರಗತಿಯಲ್ಲಿ ತೊಡಗಿದ ಈ ಛಾಪಖಾನೆಯು ಈಗ ನೂರಾರು ಜನರು ಉದ್ಯೋಗ ನಡೆಸುತ್ತಲಿದ್ದು ಬಲಿಷ್ಠರಾಗಿ, ಕನ್ನಡ ಜಿಲ್ಲೆಯಲ್ಲಿ ಪ್ರಕೃತ ಶೋಭಿಸುತ್ತಿರುವ ಎಲ್ಲಾ ಛಾಪಖಾನೆಗಳಿಗೆ ಸಾದೃಶವಾಗಿ ಮಾತೃಮಂದಿರದಂತೆ ಶೋಭಾಯಮಾನವಾಗಿರುವುದು.ಈ ಛಾಪಖಾನೆಯ ಮೂಲಕ ನಮ್ಮ ಜಿಲ್ಲೆಯ ಅನೇಕರು ಅಚ್ಚುಹಾಕುವ ಪರಿಪರಿಯ ಕೆಲಸಗಳಲ್ಲಿ ತರಬೇತನ್ನು ಪಡೆದುದಲ್ಲದೆ ಧನಾನುಕೂಲವುಳ್ಳವರು ಸ್ವತಂತ್ರವಾಗಿ ಛಾಪಖಾನೆಗಳನ್ನು ಸ್ಥಾಪಿಸಿಕೊಳ್ಳುವಂತೆ ಇಂಬು ದೊರೆಯಿತು. ಅನೇಕ ಕೆಲಸಗಾರರಿಗೂ ಉಪಜೀವನವನ್ನು ಕಲ್ಪಿಸಿಕೊಡುವಂತಾಯಿತು." 1870ರಲ್ಲಿ ಬಾಸೆಲ್ ಮಿಶನ್‌ ಪ್ರೆಸ್‌ನ ಚಿಹ್ನೆಯಲ್ಲಿ ತೆಂಗಿನ ಮರದ ಚಿತ್ರವಿದ್ದು ನಾಲ್ಕು ಸುತ್ತಲೂ ಕನ್ನಡ, ತುಳು, ಮಲಯಾಳಂ, ಇಂಗ್ಲಿಷ್ ಎಂದು ನಾಲ್ಕು ಭಾಷೆಗಳನ್ನು ನಮೂದಿಸಲಾಗುತ್ತಿತ್ತು.

177 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಪತ್ರಿಕೋದ್ಯಮ ಪ್ರಾರಂಭವಾದದ್ದು ಮಂಗಳೂರಿನ ಇದೇ ಮುದ್ರಣಾಲಯದಲ್ಲಿ. 1843ರಲ್ಲಿ 'ಮಂಗಳೂರು ಸಮಾಚಾರ' ವೆಂಬ ಹೆಸರಿನಲ್ಲಿ ರೆವೆ. ಹೆರ್ಮನ್ ಮೋಗ್ಲಿಂಗ್‌ರವರ ಸಂಪಾದಕತ್ವದಲ್ಲಿ ಪ್ರಾರಂಭಗೊಂಡ ಕನ್ನಡ ವಾರಪತ್ರಿಕೆಯಿಂದ ಕನ್ನಡ ಪತ್ರಿಕೋದ್ಯಮ ಚರಿತ್ರೆ ಕರ್ನಾಟಕದಲ್ಲಿ ಆರಂಭವಾಗುತ್ತದೆ. ಈ ಪತ್ರಿಕೆಯ ಬೇಡಿಕೆ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
17
 
[ 18 ]ಹೆಚ್ಚಾದಾಗ ಹೆಚ್ಚು ಪ್ರತಿಗಳನ್ನು ಮುದ್ರಿಸುವುದಕ್ಕಾಗಿ ಬಳ್ಳಾರಿ ಮಿಶನ್ ಪ್ರೆಸ್‌ನಲ್ಲಿ ಮುದ್ರಿಸಲು ಪ್ರಾರಂಭವಾಯಿತು. ಕೇವಲ ನಾಲ್ಕು ಪುಟಗಳ ಪತ್ರಿಕೆಯಾದರೂ ಬೇಡಿಕೆ ಹೆಚ್ಚಾದ್ದರಿಂದ ಹೆಚ್ಚು ಪ್ರತಿಗಳನ್ನು ಮುದ್ರಿಸಬೇಕಾಗಿತ್ತು. ಆದರೆ ಕಲ್ಲಚ್ಚು ಮುದ್ರಣದಲ್ಲಿ ಹೆಚ್ಚು ಪ್ರತಿಗಳನ್ನು ಮುದ್ರಿಸಲು ಅಸಾದ್ಯವಾದ್ದರಿಂದ ಬಳ್ಳಾರಿ ಮಿಶನ್ ಪ್ರೆಸ್‌ನಲ್ಲಿ ಮುದ್ರಿಸಿ ತರಲಾಗುತ್ತಿತ್ತು. ಆಗ ತೆಲುಗು ಮತ್ತು ಕನ್ನಡಕ್ಕೆ ಒಂದೇ ಅಚ್ಚುಮೊಳೆಗಳನ್ನು ಬಳಸಿ ಕನ್ನಡ ಮುದ್ರಿಸುತ್ತಿದ್ದರು. ಈ ಪತ್ರಿಕೆಗೆ "ಕನ್ನಡ ಸಮಾಚಾರ" ಎಂಬ ಹೆಸರಾಯಿತು.( 1844 ಜೂನ್-1844 ನವೆಂಬರ್) 1857ರಲ್ಲಿ ಬಂದ ಕನ್ನಡ ವಾರ್ತಿಕ ಅಚ್ಚಿನ ಮೊಳೆಗಳನ್ನು ಬಳಸಿ ಮೊದಲು ಪ್ರಕಟವಾದ ಪತ್ರಿಕೆಯಾಗಿದೆ. 1862ರಲ್ಲಿ ಬಾಸೆಲ್ ಮಿಶನ್‌ನಿಂದ ಪ್ರಕಟವಾಗುತ್ತಿದ್ದ ಮತ್ತೊಂದು ಪತ್ರಿಕೆ ವಿಚಿತ್ರ ವರ್ತಮಾನ ಸಂಗ್ರಹ, 'ಯಾಕೆ ಈ ವಿಚಿತ್ರ ಹೆಸರು ಎಂದು ನೆನಸಬಹುದು. ಇದು ಸುಂದರ ಚಿತ್ರಗಳನ್ನು ಒಳಗೊಂಡು ಪ್ರಕಟವಾಗುತ್ತಿತ್ತು. ವೂರ ವರ್ತಮಾನಗಳು, ಬುದ್ಧಿಯ ಕತೆಗಳು, ವಿವಿಧ ಲೇಖನಗಳು, ಚಿತ್ರಗಳನ್ನು ಹೊತ್ತು ಬರುತ್ತಿದ್ದ ಕನ್ನಡದ ಪ್ರಪ್ರಥಮ ಪತ್ರಿಕೆ ಇದೇ' ಎಂದು ಡಾ. ಹಾವನೂರರು ಸಂಪಾದಿಸಿದ ಕರ್ನಾಟಕ ಪತ್ರಿಕಾ ಸೂಚಿಯಲ್ಲಿ ಬರೆಯುತ್ತಾರೆ. ಕನ್ನಡ ಪಂಚಾಂಗ ಎಂಬ ವಾರ್ಷಿಕ ಪತ್ರಿಕೆಯು 1853-1936 ರ ತನಕ ಬಾಸೆಲ್ ಮಿಶನ್ ಪ್ರೆಸ್‌ನಿಂದ ಪ್ರಕಟವಾಗುತ್ತಿತ್ತು. ಅಲ್ಲದೆ ವ್ಯವಸಾಹಿಕ ಪಂಚಾಂಗ ಎಂಬ ವರ್ಷ ಪತ್ರಿಕೆಯೂ ಇತ್ತು. ಇದರಲ್ಲಿ ಜಿಲ್ಲೆಗೆ ಸಂಬಂಧಪಟ್ಟ ಸರಕಾರಿ ಉದ್ಯೋಗಸ್ತರು, ತುಳು ಗಾದೆಗಳು, ಸರಕಾರಿ ವಿಚಾರಗಳು ಮುಂತಾದ ಹಲವಾರು ವಿಚಾರಗಳು ಪ್ರಕಟವಾಗುತಿತ್ತು. ಸತ್ಯದೀಪಿಕೆ(1896-1915) ಇದು ಕ್ರೈಸ್ತ ಸಭಾ ವಾರ್ತೆಗಳನ್ನು ಪ್ರಕಟಿಸುತ್ತಿದ್ದ ಪತ್ರಿಕೆಯಾಗಿದ್ದರೂ ದೇಶಿಯ ಬರಹಗಾರರ ಬರವಣಿಗೆಗಳು ಈ ಪತ್ರಿಕೆಯಲ್ಲಿ ಬರುತ್ತಿತ್ತು. ಕರ್ನಾಟಕ ಕ್ರೈಸ್ತಬಂಧು(1932-1939) ಕ್ರೈಸ್ತ ಸಭಾಪತ್ರ(1867-1895) ಕ್ರೈಸ್ತ ಹಿತವಾದಿ(1924-1932) ವೈದಿಕ ಮಿತ್ರ(1910-1914) ಬಾಲಪತ್ರ(18691871) ಬಾಲೋಪದೇಶಕ (1939-1995) ನ್ಯಾಯಸಂಗ್ರಹ (1868) ಸುಭೋಧಿನಿ (1871) ಯುವಜನ ವಾರ್ತೆ(1952) 1968ರಲ್ಲಿ ಪ್ರಾರಂಭವಾದ 'ಪ್ರಭೋಧವಾಣಿ' ಎಂಬ ತ್ರೈಮಾಸಿಕ ಪತ್ರಿಕೆ ಈಗಲೂ ಮುಂದುವರೆದು 'ಸುಭೋಧವಾಣಿ' ಎಂಬ ಹೆಸರಿನಿಂದ ಪ್ರಕಟಿಸಲ್ಪಡುತ್ತಿದೆ. UBMC Proceedings 1937-1967, Official Gazette of of BEMGMI in German (1891) Basel Mission Report (1853-1914) UBMC Synod (1936-1968) ಮುಂತಾದ ವರದಿಗಳಲ್ಲದೆ ಸರಕಾರಿ ಕಾಲೇಜು, ಸಂತ ಎಲೋಸಿಯಸ್ ಕಾಲೇಜು,


18
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
 
[ 19 ]ಮಿಲಾಗ್ರಿಸ್ ಶಾಲೆ, ಶಾಲೆ, ದೇವಾಲಯ, ವಿವಿಧ ಸಂಘ ಸಂಸ್ಥೆಗಳ ಸ್ಮರಣ ಸಂಚಿಕೆಗಳು ಇಲ್ಲಿ ಮುದ್ರಣಗೊಂಡಿದೆ.

ತುಳು ಭಾಷಾ ಸಾಹಿತ್ಯ ಮತ್ತು ಬಾಸೆಲ್ ಮಿಶನ್:- 1871ರಲ್ಲಿ ಪ್ರಕಟವಾದ Charles E. Gover ಬರೆದ Folk Songs of Southern India ಪುಸ್ತಕದಲ್ಲಿ ಕನ್ನಡ, ಬಡಗ, ಕೊಡವ, ತಮಿಳು, ಕುರಲ್, ಮಲಯಾಳಂ, ತೆಲುಗು ಹಾಡುಗಳಿದ್ದು ತುಳು ಭಾಷೆಯ ಹಾಡುಗಳಿಲ್ಲ. ಇದಕ್ಕೆ ಕಾರಣ 1886ರಲ್ಲಿ ಮೆನ್ನರ್‌ನ ತುಳು ಪಾಡ್ಡನ ಕನ್ನಡ ಲಿಪಿಯಲ್ಲಿ ಪ್ರಕಟವಾದದ್ದು. 1840ಕ್ಕಿಂತಲೂ ಹಿಂದೆ ತುಳು ಭಾಷೆಯನ್ನು ಕನ್ನಡ ಲಿಪಿ ಬಳಸಿ ಬರೆಯುವ ಕ್ರಮವಿದ್ದರೂ ಜಿಲ್ಲೆಯಲ್ಲಿ ಮುದ್ರಣದ ವ್ಯವಸ್ಥೆ ಇಲ್ಲದ ಕಾರಣ ಅದು ಬೆಳಕಿಗೆ ಬಂದಿರಲಿಲ್ಲ. ತುಳು ಲಿಪಿಯ ಬಗ್ಗೆ ಚಿಂತಿಸದೆ ಕನ್ನಡದ ಲಿಪಿಯನ್ನು ಬಳಸಿ ತುಳುವನ್ನು ಮುದ್ರಿಸುವ ಕಾರ್ಯಕ್ಕೆ ಕೈ ಹಚ್ಚಿದರು. ಮಿಶನರಿಗಳ ತುಳು ಮುದ್ರಣ ಮತ್ತು ತುಳು ಶಿಕ್ಷಣದ ಬಗ್ಗೆ 1891ರಲ್ಲಿ ಪ್ರಕಟವಾದ Christian Patriot, Oct, 1891 ಪತ್ರಿಕೆಯೊಂದರಲ್ಲಿ ಹೀಗೆ ಉಲ್ಲೇಖಿಸಿದ್ದಾರೆ. The Tulu First Book Published by the Basel Missionaries as a stepping stone to the study of the canarese alphabet - The Tulu has an alphabets of its own (a form of Malayalam Characters) which is not in use at all and is not known to any of the Tulu-speaking people except to few hariga Brahmins who learn it, if at all, more as a matter of curiosity than for any purpose which it serves. If therefore Tulu is introduced into schools it will have to be, and I thank it is proposed to be written in Canarese characters which are quite in adequate to represent a great many of the sounds peculiar to Tulu. If the Tulu alphabet is also introduced along with the language it will add considerably to the burden on the memory of children who will have to learn the Canarese and English alphabets later on.

1841ರಲ್ಲಿ ಮೊದಲಿಗೆ ಕಲ್ಲಚ್ಚು ಮುದ್ರಣದಲ್ಲಿ ತುಳು ಕೃತಿಯೊಂದು ಮುದ್ರಣವಾಗುವುದರೊಂದಿಗೆ ಆರಂಭವಾದ ತುಳು ಮುದ್ರಣವು ಇಂಗ್ಲಿಷ್ ತುಳು ನಿಘಂಟು, ತುಳು ಇಂಗ್ಲಿಷ್ ತುಳು ನಿಘಂಟು, ತುಳು ವ್ಯಾಕರಣ, ಪಾಡ್ಡನೊಳು, ತುಳುವೆರೆಡ್ ನಡಪು ಭೂತಸೇವೆ, ತುಳು ಗಾದೆಗಳು, ತುಳು ಸತ್ಯವೇದ, ತುಳು

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
19
 
[ 20 ]ಸಂಗೀತ, ತುಳು ಪಠ್ಯ ಪುಸ್ತಕ ಹೀಗೆ ನೂರಾರು ಪುಸ್ತಕಗಳು ಪ್ರಕಟವಾಗುವುದರಿಂದ ತುಳುನಾಡಿನಲ್ಲಿ ತುಳು ಮುದ್ರಣವನ್ನು ಆರಂಭಿಸಿ ತುಳು ಕೃತಿಗಳನ್ನು ಬೆಳಕಿಗೆ ತಂದ ಕೀರ್ತಿ ಬಾಸೆಲ್ ಮಿಶನ್‌ ಪ್ರೆಸ್‌ಗೆ ಸಂದಿದೆ.

ಕನ್ನಡ ಸಾಹಿತ್ಯ ಮತ್ತು ಬಾಸೆಲ್ ಮಿಶನ್:- ಕಲ್ಲಚ್ಚು ಮುದ್ರಣದಿಂದ ಪ್ರಾರಂಭವಾದ ಮುದ್ರಣಾಲಯವು ದಾಸ ಸಾಹಿತ್ಯ, ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ, ಕಿಟ್ಟೆಲ್ ನಿಘಂಟು, ವ್ಯಾಕರಣ, ಕನ್ನಡಪಠ್ಯ, ವ್ಯಾಯಮ, ಆರೋಗ್ಯ, ತೋಟಗಾರಿಕೆ, ಕನ್ನಡ ಶಾರ್ಟ್‌ ಹ್ಯಾಂಡ್, ಹೊಮಿಯೋಪತಿ ಚಿಕಿತ್ಸೆ, ಗಿಡಮೂಲಿಕೆ, ಸಂಗೀತ, ಹೀಗೆ ಎಲ್ಲಾ ವಿಭಾಗಗಳಲ್ಲಿ ಮೊದಲ ಮುದ್ರಕರಾಗಿ ಮೆರೆದ ಬಾಸೆಲ್ ಮಿಶನ್ ಪ್ರೆಸ್ ಕನ್ನಡ ಸಾಹಿತ್ಯ ಚರಿತ್ರೆಯ ಮೊದಲ ಭಾಗವೇ ಎನ್ನಬಹುದು. ಕನ್ನಡ ಲಿಪಿ ಸುಧಾರಣೆ, ಸುಧಾರಿತ ಅಚ್ಚುಮೊಳೆಗಳ ನಿರ್ಮಾಣ, ದೇಶೀಯ ಚಿತ್ರಕಾರರನ್ನು ಬಳಸಿಕೊಂಡು ಅವರಿಗೆ ಸೂಕ್ತ ತರಬೇತಿಯ ಅನುವು ಮಾಡಿಕೊಟ್ಟು ಅತ್ತಾವರ ಅನಂತಾಚಾರಿಯಂತಹ ಶಿಲ್ಪಿಗಳಿಂದ ಕನ್ನಡ ಮುದ್ರಣದ ಮೊದಲ ತೇರನ್ನು ಎಳೆದವರು ಬಾಸೆಲ್ ಮಿಶನ್‌ನವರು ಎಂದು ಹೇಳಿದರೆ ತಪ್ಪಾಗಲಾರದು. ಡಾ. ಶ್ರೀನಿವಾಸ ಹಾವನೂರರು ತಮ್ಮ ಹೊಸಗನ್ನಡದ ಅರುಣೋದಯ ಪುಸ್ತಕದಲ್ಲಿ ಪ್ರೆಸ್ ಬಗ್ಗೆ ಹೀಗೆ ಬರೆದಿದ್ದಾರೆ. "ಮುದ್ರಣದ ಯಾವ ಅಂಶವನ್ನು ತೆಗೆದುಕೊಂಡರೂ ಬಾಸೆಲ್ ಮಿಶನ್ನಿನವರ ಕಾರವು ಮಹೋನ್ನತವಾಗಿದೆ. ಇಲ್ಲಿ ಮುದ್ರಿತವಾದ ಕೃತಿಗಳ ವೈವಿಧ್ಯವೂ ವಿಸ್ಮಯಜನಕವಾಗಿದೆ. ಹಲವಾರು ಅಂಶಗಳಲ್ಲಿ ಹೊಸ ಕ್ರಮವನ್ನು ರೂಢಿಸಿದೆ. ಪಠ್ಯ ಪುಸ್ತಕ, ಕ್ರೈಸ್ತ ಧರ್ಮದ ಪುಸ್ತಕ, ಅನೇಕ ವ್ಯಾವಹಾರಿಕ ಪುಸ್ತಕಗಳು, ಕರಪತ್ರ, ಪಂಚಾಂಗ, ರೈಲ್ವೆ ವೇಳಾ ಪತ್ರಿಕೆ, ಕೋಷ್ಟಕ, ಇವುಗಳೆಲ್ಲವು ಮೊದಲಿಗೆ ಇಲ್ಲಿಂದಲೇ ಹೊರಬಂದವು. ಈ ಮಿಶನ್ನಿನವರು ಮಾಡ ಹೊರಟ ಇನ್ನೊಂದು ಮಹಾತ್ಕಾರ್ಯವೆಂದರೆ ಕನ್ನಡ ಲಿಪಿ ಸುಧಾರಣೆ", ಕಿಟೆಲ್ ಕೋಶದ ಬಗ್ಗೆ ರಾಮಚಂದ್ರ ಉಚ್ಚಿಲರವರ ಹೇಳಿಕೆಯೊಂದು ಹೀಗಿದೆ. "ಕಿಟ್ಟೆಲ್ ಹುಟ್ಟಿದ್ದೆಲ್ಲಿ? ಒಬ್ಬ ವಿದೇಶೀ ಮಿಶನರಿ ಮನುಷ್ಯ ಮತಪ್ರಚಾರಕ್ಕೆಂದು ಬಂದು ಇಲ್ಲಿನ ಭಾಷೆ ಕಲಿತು ನೂರಾರು ಮಂದಿಯನ್ನು ಕೆಲಸಕ್ಕೆ ಹಚ್ಚಿ ಕಿಟ್ಟೆಲ್ ಕೋಶವನ್ನು ಅಚ್ಚು ಮಾಡಿಸಿಯೇ ಬಿಟ್ಟ, ಎಂದರೆ ಅದಕ್ಕಿಂತ ದೊಡ್ಡ ಆಶ್ಚರ್ಯ ಏನಿದೆ? ಫರ್ಡಿನಂಡ್ ಕಿಟೆಲ್ ಮಹಾಶಯನಿಗೆ ಕನ್ನಡಿಗರು ಸದಾ ಋಣಿಗಳಾಗಿರಬೇಕು. ಆಶ್ಚರ್ಯವೆಂದರೆ ಅದಲ್ಲ, ಇನ್ನೊಂದು ಅಂತಹ ಕೋಶ ಇನ್ನೂ ಹುಟ್ಟಲಿಲ್ಲ. ಅದಕ್ಕೀಗ ನೂರು ವರ್ಷ ತುಂಬಿದೆ. 150 ವರ್ಷಗಳ ಹಿಂದೆ ಕನ್ನಡ ಸೇವೆ ಮಾಡಿದ ಮಿಶನರಿಗಳಿಗೆ ಕನ್ನಡ ಸಾಹಿತ್ಯ ಸಂಪಾದನೆಗೆ ಟ್ಯುಬಿಂಗನ್ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು


20
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
 
[ 21 ]ನೀಡಿ ಗೌರವಿಸಿದ್ದು ಮಿಶನರಿಗಳ ಕನ್ನಡತನಕ್ಕೆ ನಾವು ಹೆಮ್ಮೆಪಡಬೇಕಾಗಿದೆ."

ಬಾಸೆಲ್ ಮಿಶನ್‌ನವರು ಮಂಗಳೂರಿಗೆ 1834ರಲ್ಲಿ ಆಗಮಿಸಿದಾಗ ಮೊದಲು ವಾಸ್ತವ್ಯವಿದ್ದ ನೀರೇಶ್ವಾಲ್ಯದಲ್ಲಿ ನಡೆಯುತ್ತಿದ್ದ ಕ್ರೈಸ್ತರ ಆರಾಧನೆ, ಪ್ರಾಥಮಿಕ ಶಾಲೆ ಮುಂತಾದುವುಗಳು ನಡೆಯುತ್ತಿದ್ದ ಪರಿಸರದಲ್ಲಿಯೇ 1841ರಲ್ಲಿ ಕಲ್ಲಚ್ಚು ಮುದ್ರಣ ಸ್ಥಾಪನೆಗೊಂಡು ನಂತರ ಫ‌ಳ್ನೀರ್ ರಸ್ತೆಯಲ್ಲಿಯಲ್ಲಿರುವ ವೈ.ಯಂ.ಸಿ.ಎ. ಕಟ್ಟಡವಿರುವ ಸ್ಥಳಕ್ಕೆ 1842ಕ್ಕೆ ಸ್ಥಳಾಂತರಗೊಂಡಿತ್ತು. ಈ ಪರಿಸರದಲ್ಲಿಯೇ 1847ರಲ್ಲಿ ಬಾಸೆಲ್ ಇವ್ಯಾಂಜಲಿಕಲ್ ತಿಯೊಲಾಜಿಕಲ್ ಸೆಮಿನರಿ ಸ್ಥಾಪನೆಗೊಂಡು 1863ಕ್ಕೆ ಪ್ರಸ್ತುತವಿರುವ ಸ್ಥಳಕ್ಕೆ ಸ್ಥಳಾಂತರಗೊಂಡು ಕರ್ನಾಟಕ ತಿಯೊಲಾಜಿಕಲ್ ಕಾಲೇಜ್ ಎಂಬ ಹೆಸರಿನಿಂದ ಕಾರ್ಯವೆಸಗುತ್ತಿದೆ. 1913ತನಕ ಇದೇ ಸ್ಥಳದಲ್ಲಿ ಪ್ರೆಸ್ ಕಾರ್ಯಾಚರಿಸುತ್ತಿದ್ದು 1913ರಲ್ಲಿ ಪ್ರಸ್ತುತ ಶಾಂತಿ ದೇವಾಲಯವಿರುವ ಎದುರಿನ ಸ್ಥಳಕ್ಕೆ ನೂತನ ವಿಶಾಲ ಕಟ್ಟಡವನ್ನು ಹೊಂದಿ ಸ್ಥಳಾಂತರಗೊಂಡಿತು ಈ ಬಗ್ಗೆ ಮಿಶನ್ ವರದಿಯಲ್ಲಿ ಈ ಉಲ್ಲೇಖವಿದೆ. Mr. Albert Beierbach who is in charge of our Printing Press had the satisfaction of seeing the new building finished without any accident; and thought the superintending of the large construction and the installation of new Diesel oil engine and other work corrected the new building joy of seeing everything satisfactorily completed was all the greater. (BM Report 1914) ಇದೇ ವರ್ಷ ಪ್ರಕಟವಾದ ಕನ್ನಡ ತುಳು ಸಂಗೀತ ಪುಸ್ತಕ ಈಗಲೂ ಕರ್ನಾಟಕದಾದ್ಯಂತ ಇರುವ ಬಾಸೆಲ್ ಮಿಶನ್ ಹಿನ್ನೆಲೆಯುಳ್ಳ ಕ್ರೈಸ್ತ ಸಭೆಗಳಲ್ಲಿ ಉಪಯೋಗಿಸಲ್ಪಡುತ್ತಿದೆ. ಈ ಪುಸ್ತಕದಲ್ಲಿ 410 ಕನ್ನಡ ಹಾಗೂ 251 ತುಳು ಸಂಗೀತಗಳಿವೆ. ಪ್ರೆಸ್ ಸ್ಥಳಾಂತರವಾದಾಗ ಆ ಸ್ಥಳದಲ್ಲಿ ಬಲ್ಮಠದಲ್ಲಿ 1908ರಲ್ಲಿ ಸ್ಥಾಪನೆಯಾದ ವೈ.ಎಂ.ಸಿ.ಎ.ಕಾರ್ಯವೆಸಗುತ್ತಿದೆ. 1914 ನಡೆದ ಮಹಾಯುದ್ಧದ ಪರಿಣಾಮದಿಂದಾಗಿ ಪ್ರೆಸ್‌ನ್ನು ದೇಶಿಯ ಸಂಸ್ಥೆ ನಡೆಸುತ್ತಿದ್ದು 1927ರ ತನಕ ಅದಕ್ಕೆ ಕೇನರೀಸ್ ಇವೆಂಜಿಲಿಕ್ ಮಿಶನ್ ಪ್ರೆಸ್ ಎಂಬ ಹೆಸರಿತ್ತು. 1928 ಸುಮಾರಿಗೆ ಪ್ರೆಸ್‌ನ ಕಟ್ಟಡದ ಎದುರಿನ ಭಾಗದಲ್ಲಿ ಸ್ವಲ್ಪ ಬದಲಾವಣೆ ಮಾಡಿ ಕಛೇರಿಯಿದ್ದ ಕೊಠಡಿ ಮೇಲೆ ಮಾಳಿಗೆ ನಿರ್ಮಿಸಿ ಒಂದು ಕೊಠಡಿಯನ್ನು ನಿರ್ಮಿಸಲಾಗಿತ್ತು. ಈ ಕೊಠಡಿಯು ಬೀಸುವ ತಂಪಾದ ಗಾಳಿಯನ್ನು ಸವಿಯಲೋ ಎಂಬಂತ್ತಿದ್ದು ಈ ಕೋಣೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಮಿಶನರಿಗಳು ಕೆಲಸ ನಡೆಯುತ್ತಿದ್ದ ವೇಳೆ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
21
[ 22 ]ಪ್ರೆಸ್‌ನೊಳಗೆ ಬರಲು ಕಬ್ಬಿಣದ ಏಣಿಯ ವ್ಯವಸ್ಥೆಯಿದ್ದು ನೌಕರರ ಚಲನವಲನಗಳನ್ನು ವೀಕ್ಷಿಸಲು ಕೊಠಡಿಯೊಳಗೆ ಕಿಟಕಿಯೊಂದಿತ್ತು. ಈ ಸಂದರ್ಭದಲ್ಲಿ ಮೊದಲಿದ್ದ ಕೆಳಗಿನ ಬೋರ್ಡ್ ಬದಲಾಯಿಸಿ ಮಾಡಿನ ಮೇಲೆ ಕಬ್ಬಿಣದಿಂದ ತಯಾರಿಸಿದ ಬೋರ್ಡ್ ಹಾಕಲಾಗಿತ್ತು.

1960 ನಂತರ ಜಿಲ್ಲೆಯಲ್ಲಿ ಸ್ಥಾಪನೆಗೊಂಡ ಇತರ ಮುದ್ರಣ ಸಂಸ್ಥೆಗಳು, ಹೊಸ ಹೊಸ ನಮೂನೆಯ ಮುದ್ರಣ ವ್ಯವಸ್ಥೆ ಮುಂತಾದ ಹಲವಾರು ಕಾರಣಗಳಿಂದ ಬಾಸೆಲ್ ಮಿಶನ್ ಪ್ರೆಸ್‌ನ ಬೆಳವಣಿಗೆ ಕುಂಠಿತವಾಗತೊಡಗಿತು. ಪ್ರೆಸ್‌ನ ದಾಖಲೆ ಪುಸ್ತಕದಲ್ಲಿ 1939ರಲ್ಲಿ 114, 1942ರಲ್ಲಿ 87, 1967ರಲ್ಲಿ 16 ನೌಕರರು ಇದ್ದರು ಎಂದು ನಮೂದಿಸಿರುವುದು ಪ್ರೆಸ್ ವರ್ಷ ಕಳೆದಂತೆ ಕುಂಟುತ್ತಾ ಬಂದಿರುವುದು ಭಾಸವಾಗುತ್ತದೆ. ಬಾಸೆಲ್ ಮಿಶನ್ ಸಂಸ್ಥೆಯು 1964ರಲ್ಲಿ ಪ್ರೆಸ್‌ನ ಕಟ್ಟಡದಲ್ಲಿಯೇ ಹೆಬಿಕ್ ತಾಂತ್ರಿಕ ತರಬೇತಿ ಶಾಲೆಯನ್ನು ತೆರೆದು ಜಿಲ್ಲೆಯಲ್ಲಿ ತಾಂತ್ರಿಕ ತರಬೇತಿ ಶಾಲೆಯನ್ನು ಪ್ರಾರಂಭಿಸಿತು. 1965ರಲ್ಲಿ ಹಂಪನಕಟ್ಟೆಯಲ್ಲಿರುವ ಬುಕ್ ಶಾಪ್ ಮುಚ್ಚಲಾಯಿತು. ತದನಂತರವೂ ಮಂದಗತಿಯಲ್ಲಿ ನಡೆಯುತ್ತಿದ್ದ ಮುದ್ರಣಾಲಯವನ್ನು 1970ರಲ್ಲಿ ಮುಚ್ಚಬೇಕಾಯಿತು. ಹಲವಾರು ಯಂತ್ರಗಳನ್ನು, ಅಚ್ಚುಮೊಳೆಗಳನ್ನು, ಹಲವು ಕಾರ್ಮಿಕರನ್ನು ಹೊಂದಿದ್ದ ಮುದ್ರಣಾಲಯ ಮುಚ್ಚಿದ್ದರಿಂದ ಜಿಲ್ಲೆಗೆ ಆದ ನಷ್ಟ ಅಷ್ಟಿಷ್ಟಲ್ಲ. 1847ರಲ್ಲಿ ಬಲ್ಮಠದಲ್ಲಿ ಸ್ಥಾಪನೆಗೊಂಡ ವೇದಮಠದ ಆಡಳಿತವು 1969ರಲ್ಲಿ ಕೆ.ಟಿ.ಸಿ.ಯನ್ನು ಕೇಂದ್ರವಾಗಿರಿಸಿಕೊಂಡು ಇತರ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಅನುವು ಮಾಡಿಕೊಡುವ ಉದ್ದೇಶದಿಂದ ಕರ್ನಾಟಕ ಕ್ರೈಸ್ತ ವಿದ್ಯಾ ಸಂಸ್ಥೆ (ಕರ್ನಾಟಕ ಕ್ರಿಶ್ಚನ್ ಎಜುಕೇಶನಲ್ ಸೊಸೈಟಿ)ಯು ಸ್ವಾಯತ್ತೆ ಪಡೆದ ಸಂಸ್ಥೆಯಾಗಿ ಅಸ್ತಿತ್ವಕ್ಕೆ ಬಂತು.

1970ರಲ್ಲಿ ಕಾಮನ್‌ವೆಲ್ತ್ ಸಂಸ್ಥೆ ನಡೆಸುತ್ತಿದ್ದು ಮುಚ್ಚಲ್ಪಟ್ಟಿದ್ದ ನೇಯಿಗೆ ಕಾರ್ಖಾನೆಯನ್ನು ನಿವೇಶನ ಸಹಿತ ಕಾಸೆಸ್ ಪಡೆದುಕೊಂಡಿತು. ಈ ಸ್ಥಳದಲ್ಲಿ 1907ರಲ್ಲಿ ನಿರ್ಮಿಸಲ್ಪಟ್ಟ ಬಾಸೆಲ್ ಮಿಶನ್ ನೇಯಿಗೆ ಕಾರ್ಖಾನೆಯ ಕಟ್ಟಡವಿತ್ತು 1914ರಲ್ಲಿ ನಡೆದ ಮೊದಲ ಮಹಾಯುದ್ಧದ ಸಂದರ್ಭದಲ್ಲಿ ಬಾಸೆಲ್ ಮಿಶನ್ ಹಂಚಿನ ಕಾರ್ಖಾನೆ ಮತ್ತು ನೇಯಿಗೆ ಕಾರ್ಖಾನೆಯು ಕಾಮನ್‌ವೆಲ್ತ್ ಆಡಳಿತದಲ್ಲಿತ್ತು. ಕಾಮನ್‌ವೆಲ್ತ್ ಸಂಸ್ಥೆಯು ಈ ಕಟ್ಟಡದಲ್ಲಿ ನೇಯಿಗೆ ಕಾರ್ಖಾನೆಯನ್ನು ಮುಂದುವರಿಸಲು ಈ ಕಟ್ಟಡವನ್ನು ವಿಸ್ತರಿಸಿಯೂ ಕಟ್ಟಿದ್ದರು. ಮುಚ್ಚಿದ್ದ ಬಾಸೆಲ್ ಮಿಶನ್ ಪ್ರೆಸ್ ಮತ್ತು ಅದರ ಕೊಡುಗೆಯ ಪರಂಪರೆಯನ್ನು ಉಳಿಸಿಕೊಳ್ಳಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಕಾಸೆಸ್ ಸಂಸ್ಥೆಯ


22
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
 
[ 23 ]ಕಾರ್ಯದರ್ಶಿಯಾಗಿದ್ದ ರೆವೆ. ಡಾ. ಸಿ.ಡಿ. ಜತ್ತನ್ನರವರ ಮುಂದಾಳತ್ವದಲ್ಲಿ ಈ ಕಟ್ಟಡದ ಒಂದು ಭಾಗದಲ್ಲಿ ನೇಯಿಗೆ ಕಾರ್ಖಾನೆ (Balmatta Hosairy Industry)ಯನ್ನು ಪ್ರಾರಂಭಿಸಲಾಯಿತು. 1982 ತನಕ ಮಗ್ಗ ಮತ್ತು ಹೊಸ ಅವಿಷ್ಕಾರದ ನೇಯಿಗೆ ಕೆಲಸಗಳು ಇಲ್ಲಿ ನಡೆಸಲಾಗುತ್ತಿದ್ದು ಇದರ ಮಾರಾಟಕ್ಕಾಗಿ ಬಲ್ಮಠ ಗಾರ್‌ಮೆಂಟ್ ಶಾಪ್ (Balmatta Garment Shop) ವ್ಯವಸ್ಥೆಯೂ ಇತ್ತು.

ಎರಡನೆಯದಾಗಿ ಇವರು ಕೈಗೊಂಡ ಕಾರ್ಯ ಬಾಸೆಲ್ ಮಿಶನ್ ಪ್ರೆಸ್‌ನ್ನು ಬಲ್ಮಠ ಮಾಸ್ಟರ್ ಪ್ರೆಸ್ (Balmatta Master Press) ಆಗಿ ಮರು ಸ್ಥಾಪನೆ ಮಾಡಿದ್ದು. ಬಾಸೆಲ್ ಮಿಶನ್ ಪ್ರೆಸ್‌ನಲ್ಲಿದ್ದ ಎಲ್ಲಾ ಯಂತ್ರಗಳನ್ನು ಪಡೆದುಕೊಂಡು, ಸುಸ್ಥಿತಿಯಲ್ಲಿರುವ ಎಲ್ಲಾ ಯಂತ್ರಗಳನ್ನು ಉಪಯೋಗಿಸಿ ಅದೇ ಮಟ್ಟದಲ್ಲಿ ಪ್ರೆಸ್ ಮುಂದುವರಿಯಬೇಕೆಂಬ ದೃಷ್ಟಿಯಿಂದ ಮೈಸೂರಿನಲ್ಲಿದ್ದ ವೆಸ್ಲಿಯನ್ ಮಿಶನ್ ಪ್ರೆಸ್‌ನಲ್ಲಿ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ್ದ ಶ್ರೀ ಕೆ. ಎ. ಕುರುವಿಲ್ಲರವರನ್ನು ಕರೆತಂದು ಹಿಂದಿನ ಪ್ರೆಸ್‌ನಲ್ಲಿದ್ದ ಹಲವು ನೌಕರರ ಸಹಕಾರದೊಂದಿಗೆ 1972ರಲ್ಲಿ 'ಬಲ್ಮಠ ಮಾಸ್ಟರ್ ಪ್ರೆಸ್' ಎಂಬ ಹೆಸರಿನೊಂದಿಗೆ ಆರಂಭವಾಯಿತು. 1976ರಿಂದ ಮುದ್ರಣ ಕ್ಷೇತ್ರದಲ್ಲಿ ಅನುಭವಿ ಶ್ರೀ ಮಾಮನ್ ಪಿಲಿಪ್ಪ ಎಂಬವರು ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ್ದಾರೆ. 1980 ತನಕ ಮರುಸ್ಥಾಪನೆಗೊಂಡ ಪ್ರೆಸ್ ಉನ್ನತ ಮಟ್ಟದಲ್ಲಿ ಬೆಳೆಯಲು ಈ ಇಬ್ಬರೂ ಮ್ಯಾನೇಜರ್ ಕಾರಣರಾಗಿದ್ದಾರೆ. ಇವರ ಅವಧಿಯಲ್ಲಿ ಮನೋಟೈಪ್ ಮುಂತಾದ ಹಲವು ಯಂತ್ರಗಳನ್ನು ತರಿಸಿದ್ದು, ಬೈಂಡಿಂಗ್ ಮತ್ತು ಪ್ರಿಂಟಿಂಗ್ ತರಬೇತಿಯನ್ನು ನೀಡಲು ವ್ಯವಸ್ಥೆ ಕಲ್ಪಿಸುವ ದೃಷ್ಟಿಯಲ್ಲಿ ಪ್ರೆಸ್‌ನ ಹೆಸರನ್ನು ಬಲ್ಮಠ ಇನ್ಸಿಟ್ಯೂಟ್ ಆಫ್ ಪ್ರಿಂಟಿಂಗ್ ಟೆಕ್ನಾಲಜಿ ಎಂಬುದಾಗಿ ಬದಲಾಯಿಸಲಾಗಿತ್ತು. ಇದರಿಂದ ಉತ್ತಮ ಗುಣಮಟ್ಟದ ಮುದ್ರಣ ವ್ಯವಸ್ಥೆ ಪ್ರಾರಂಭವಾಗಿ ಬಾಸೆಲ್ ಮಿಶನ್ ಪ್ರೆಸ್‌ನ ಮುಂದುವರಿದ ಭಾಗಕ್ಕೆ ಹೆಜ್ಜೆಯಿಡುವಂತಾಯಿತು. ಪ್ರಸ್ತುತ ಇರುವ ಕಟ್ಟಡವನ್ನು 1907ರಲ್ಲಿ ಬಾಸೆಲ್ ಮಿಶನ್ ನೇಯಿಗೆ ಕಾರ್ಖಾನೆಗಾಗಿ ನಿರ್ಮಿಸಿದ್ದು, ಇದಕ್ಕೆ ಹೊಂದಿಕೊಂಡೇ 1914ರ ನಂತರ ಕಾಮನ್‌ವೆಲ್‌ನವರು ನಡೆಸುತ್ತಿದ್ದ ನೇಯಿಗೆ ಕಾರ್ಖಾನೆ ಉದ್ದೇಶಕ್ಕಾಗಿ ವಿಸ್ತರಿಸಿದ್ದ ಕಟ್ಟಡ 1970ರ ನಂತರ ಕಾಸೆಸ್ ಸಂಸ್ಥೆಯು ಅದೇ ಕಟ್ಟಡದಲ್ಲಿ ನೇಯಿಗೆ ವಿಭಾಗವನ್ನು ಮುಂದುವರಿಸುತ್ತಿತ್ತು. ಪ್ರಸ್ತುತ ಕಟ್ಟಡದಲ್ಲಿ ಬಾಸೆಲ್ ಮಿಶನ್ ಪ್ರೆಸ್‌ನ ಹಳೆ ಮುದ್ರಣ ಯಂತ್ರಗಳು, ಅಚ್ಚುಮೊಳೆಗಳ ಸಂಗ್ರಹಗಳನ್ನು ಕಾಪಿಡಲಾಗಿದೆ.

WEIGLE, PLEBST, STOLZ, REUTHER, SIKEMEIR, HIRNER,

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
23
[ 24 ]KRAPF, HUBER, STAMM,METZ, BEIERBACH, BURKHARDT, KEUDEL, ಮುಂತಾದವರಲ್ಲದೆ ಕಿಟೆಲ್, ಮೋಗ್ಲಿಂಗ್, ಮೆನ್ನರ್, ಬ್ರಿಗೆಲ್, ಅಮ್ಮನ್ಸ್, ಗುಂಡರ್ಟ್ ಮುಂತಾದ ಮಿಶನರಿಗಳು ಮುದ್ರಣಾಲಯದ ಅಭಿವೃದ್ಧಿಗೆ ಶ್ರಮ ಪಟ್ಟಿರುವುದು, ಹೊರದೇಶದಿಂದ ಮುದ್ರಣ ಯಂತ್ರ, ಪೇಪರ್ ಮುಂತಾದ ಸಾಮಗ್ರಿಗಳನ್ನು ತರಿಸುತ್ತಿದ್ದುದು, ಬೇರೆ ಬೇರೆ ಪ್ರಕಾಶಕರುಗಳು ಮುದ್ರಣಕ್ಕಾಗಿ ಬರುತ್ತಿದ್ದುದು ಮುಂತಾದ ನಿದರ್ಶನಗಳಿವೆ. ಲೇಖನಗಳಿವೆ. ಬಾಸೆಲ್ ಮಿಶನ್ ವರದಿಗಳಲ್ಲಿ, ಪ್ರೆಸ್‌ನ ವರದಿ ಪುಸ್ತಕದಲ್ಲಿ ದಾಖಲೆಯಿದೆ.

ಅಲ್ಲದೆ ನೀರೇಶ್ವಾಲ್ಯ ಮತ್ತು 1965 ಸುಮಾರಿಗೆ ಪ್ರಸ್ತುತ ಹಂಪನಕಟ್ಟೆಯಲ್ಲಿರುವ ವಿಜಯಾ ಪೆನ್ ಮಾರ್ಟ್ ಇರುವ ಕಟ್ಟಡದಲ್ಲಿ ಇದ್ದ ಬಾಸೆಲ್ ಮಿಶನ್ ಬುಕ್ ಶಾಪ್ ಮುಚ್ಚಿ ಚಂದ್ರನಾ ಬ್ರದರ್ಸ್ ನವರಿಗೆ ಮಾರಲಾಗಿದೆ. ಮುದ್ರಣಕ್ಕೆಂದು ಬರುವ ಪ್ರಕಾಶಕರು ಇಲ್ಲಿಯೇ ಉಳುಕೊಳ್ಳುತ್ತಿದ್ದುದು, 150ಕ್ಕೂ ಮಿಕ್ಕಿ ಕೆಲಸಗಾರರಿದ್ದುದು, ಜಿಲ್ಲೆಯಾದ್ಯಂತ ಇರುವ ಪ್ರೆಸ್‌ಗಳವರು ಈ ಪ್ರೆಸ್‌ನ ಉಪಯೋಗ ಪಡೆದುಕೊಳ್ಳುತ್ತಿದ್ದುದು, ಇಲ್ಲಿ ಕೆಲಸ ಹಾಗೂ ಕಲಿತವರು ಸ್ವಂತ ಪ್ರೆಸ್ ಸ್ಥಾಪಿಸಿದ್ದು ಬಾಸೆಲ್ ಮಿಶನ್ ಪ್ರೆಸ್‌ನ ಹೆಗ್ಗಳಿಕೆ.

ಬಾಸೆಲ್ ಮಿಶನರಿಗಳ ಮುದ್ರಣ ಸೇವೆಯ ಮುಖಾಂತರ ಕನ್ನಡ ಮತ್ತು ತುಳು ಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಸೇವೆಗೆ ಸಂದೇಶ ವಿಶೇಷ ಪ್ರಶಸ್ತಿ 2003, ಕಿಟೆಲ್, ಮೋಗ್ಲಿಂಗ್ ಅವರ ಕನ್ನಡ ಸೇವೆ ಹಾಗೂ ಕನ್ನಡ ಅಭಿವೃದ್ಧಿಯಲ್ಲಿ ನಿರ್ವಹಿಸಿದ ಪಾತ್ರವನ್ನು ಪರಿಗಣಿಸಿ ಕೆ.ಟಿ.ಸಿ. ಮಂಗಳೂರು ಇವರಿಗೆ ಆಳ್ವಾಸ್ ನುಡಿಸಿರಿ ವಿರಾಸತ್ 2013ರಲ್ಲಿ ಆಳ್ವಾಸ್ ವಿಶ್ವ ನುಡಿಸಿರಿ ಪ್ರಶಸ್ತಿ, ವಾದಿರಾಜ ಕನಕದಾಸ, ಪುರಂದರದಾಸ ಸಾಹಿತ್ಯ ಸಂಗೀತೋತ್ಸವ 2008-2009 ಮಹಾತ್ಮಗಾಂಧಿ ಮೆಮೊರಿಯಲ್ ಕಾಲೇಜು ಉಡುಪಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಾಸರ ಪದ(1850) ಕೃತಿಯನ್ನು ಪ್ರಕಟಿಸುವ ಮೂಲಕ ಮನ್ನಣೆ ತಂದುಕೊಟ್ಟ ಬಾಸೆಲ್ ಮಿಶನ್ ತಿಯೊಲಾಜಿಕಲ್ ಸೆಮಿನರಿಯ ಮೊದಲ ಪ್ರಾಂಶುಪಾಲರಾದ ರೆವೆ. ಹೆರ್ಮನ್ ಮೋಗ್ಲಿಂಗ್‌ರವರ ಪರವಾಗಿ ಕೆ.ಟಿ.ಸಿಗೆ ಗೌರವ ಪತ್ರ ಸಂದಿದೆ. ಕರಾವಳಿ ಪ್ರಿಂಟ‌ ಎಸೋಸಿಯೇಷನ್ (ರಿ)ರವರು ಎಪ್ರಿಲ್ 2000ರಂದು ಏರ್ಪಡಿಸಿದ ಮುದ್ರಕರ ಪ್ರಥಮ ಮಹಾಸಮ್ಮೇಳನದಲ್ಲಿ ಕರಾವಳಿ ಜಿಲ್ಲೆಗಳ ಮುದ್ರಣ ಉದ್ಯಮದ ಗೌರವಾನ್ವಿತ ಹಿರಿಯ ಸಂಸ್ಥೆಗಳಲ್ಲೊಂದಾದ ಬಾಸೆಲ್ ಮಿಶನ್‌ ಪ್ರೆಸ್‌ಗೆ ಅಭಿನಂದನ ಪತ್ರ ನೀಡಿ ಗೌರವಿಸುವ ಮೂಲಕ ಮಿಶನರಿಗಳ ಕಾರ್ಯವನ್ನು ಗುರುತಿಸಿ ಗೌರವಿಸಿದೆ.


24
'ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
 
[ 25 ]ಇಲ್ಲಿ ಮುದ್ರಣಗೊಂಡ ಹೆಚ್ಚಿನ ಕೃತಿಗಳು ಹಾಗೂ ಸ್ವಿಜರ್ಲೆಂಡಿನ ಬಾಸೆಲ್ ಪತ್ರಾಗಾರದಲ್ಲಿದ್ದ ಹಲವು ಕನ್ನಡ, ತುಳು, ಮಲಯಾಳಂ ಕೃತಿಗಳ ಮೈಕ್ರೋಫಿಲ್ಮ್ಗ್ಗಗಳು ಮಂಗಳೂರಿನ ಕರ್ನಾಟಕ ತಿಯೊಲಾಜಿಕಲ್ ಕಾಲೆಜ್ ಪತ್ರಾಗಾರದಲ್ಲಿದೆ. ಸಂಶೋಧಕರು ಈಗಲೂ ಇದರ ಉಪಯೋಗವನ್ನು ಪಡೆಯುತ್ತಿದ್ದಾರೆ. ಲಭ್ಯವಿರದ ಕೃತಿಗಳನ್ನು ಶೋಧಿಸಿ ಜೋಪಾನ ಮಾಡುವ ಕಾರ್ಯವನ್ನೂ ಕರ್ನಾಟಕ ತಿಯೊಲಾಜಿಕಲ್ ಕಾಲೇಜಿನ ಪತ್ರಾಗಾರವು ಕೈಗೊಂಡಿದೆ. ಇಲ್ಲಿ ಮುದ್ರಣವಾದ ನಿಘಂಟುಗಳು, ವ್ಯಾಕರಣಗಳು, ಭೂತಾರಾಧನೆ, ಸಂಗೀತ ಪುಸ್ತಕ ಮುಂತಾದವುಗಳು ಬೇರೆ ಬೇರೆ ಸಂಸ್ಥೆಗಳಿಂದ ಮರುಮದ್ರಣಗೊಳ್ಳುತ್ತಿವೆ. ಕ್ರೈಸ್ತ ಸಭೆಗೆ ಬೇಕಾದ ಪುಸ್ತಕಗಳಾದ, ಕನ್ನಡ ತುಳು ಸಂಗೀತ ಪುಸ್ತಕ, ಶ್ರಮಾವಾರದ ನಲ್ವತ್ತು ದಿನದ ದ್ಯಾನಗಳು, ಪ್ರಾರ್ಥನೆ ಪುಸ್ತಕ, ಕನ್ನಡ ತುಳು ಗೀತೆಗಳಿಗೆ ತಕ್ಕ ರಾಗಗಳು, ಎಲೀಮ್ ಬೋರಸ್ ಮುಂತಾದವುಗಳ ಮರುಮುದ್ರಣವನ್ನು ಈಗಲೂ ಪ್ರೆಸ್ ಕೈಗೊಳ್ಳುತ್ತಿದೆ. ಮರುಮುದ್ರಣ, ಸಂಶೋಧನೆ ಮುಂತಾದ ಎಲ್ಲಾ ಹಕ್ಕನ್ನು @ಮಿಶನ್ 21 (Mission 21) ಪರವಾಗಿ ಕರ್ನಾಟಕ ತಿಯೊಲಾಜಿಕಲ್ ಕಾಲೇಜ್, ಮಂಗಳೂರು ಹೊಂದಿದೆ.

ಕಳೆದ 43 ವರ್ಷಗಳಿಂದ ಕಾಸೆಸ್ ಸಂಸ್ಥೆಯ ಆಡಳಿತದಲ್ಲಿ ಮುಂದುವರಿಯುತ್ತಿರುವ ಮುದ್ರಣಾಲಯವು ಹಲವಾರು ಅಭಿವೃದ್ಧಿಯನ್ನು ಕಂಡಿದೆ. ಜರ್ಮನಿಯ ಹೈಡಲ್‌ಬರ್ಗ್‌ನ ಅಟೋಮ್ಯಾಟಿಕ್ ಸಿಲಿಂಡರ್, ಟ್ರೆಡಲ್ ಹ್ಯಾಂಡ್ ಫೀಡಿಂಗ್, ಮನೋಟೈಪ್ ಅಲ್ಲದೆ ಕಂಪ್ಯೂಟರ್‌ಗಳನ್ನು ತರಿಸಲಾಗಿದೆ. ಬಾಸೆಲ್ ಮಿಶನ್ ಪ್ರೆಸ್‌ನಲ್ಲಿದ್ದ ದೊಡ್ಡ ಸಿಲಿಂಡರ್ ಪ್ರಿಂಟಿಂಗ್, ಅಟೋಮ್ಯಾಟಿಕ್ ಪ್ರಿಂಟಿಂಗ್, ವಿಕ್ಟೋರಿಯಾ ಪ್ರಿಂಟಿಂಗ್ ಹ್ಯಾಂಡ್ ಫೀಡಿಂಗ್, ಅಲ್ಲದೆ 2 ಸಣ್ಣ ಪ್ರಿಂಟಿಂಗ್ ಯಂತ್ರಗಳು ಈಗಲೂ ಸುಸ್ಥಿತಿಯಲ್ಲಿದ್ದು ಅದರಲ್ಲಿಯೇ ಮುದ್ರಣ ಕಾರ್ಯಗಳು ನಡೆಯುತ್ತಿದೆ. ಬೈಂಡಿಂಗ್‌ಗಾಗಿ ಫೋಲ್ಡಿಂಗ್, ಬುಕ್ ರೌಂಡಿಂಗ್, ಬುಕ್ ಕಾರ್ನರ್, 2 ಕಟ್ಟಿಂಗ್ ಯಂತ್ರಗಳಿದ್ದು ಅವುಗಳೂ ಹಿಂದಿನವೇ. ಸ್ಕ್ರೀನ್ ಪ್ರಿಂಟಿಂಗ್, ಉತ್ತಮ ಬೈಂಡಿಂಗ್ ವ್ಯವಸ್ಥೆಯೂ ಇಲ್ಲಿದೆ. ಇಲ್ಲಿಯ ಅಚ್ಚು ಮೊಳೆಗಳ ಮುದ್ರಣ ಮತ್ತು ಉನ್ನತ ಮಟ್ಟದ ಬೈಂಡಿಂಗ್ ಈಗಲೂ ಹೆಸರುವಾಸಿಯಾಗಿದೆ. ಈಗ ಈ ಪ್ರೆಸ್ ಬಲ್ಮಠ ಇನ್ಸಿಟ್ಯೂಟ್ ಆಫ್ ಪ್ರಿಂಟಿಂಗ್ ಟೆಕ್ನಾಲಜಿ ಎಂಬ ಹೆಸರಿನಿಂದ ಕಾರ್ಯ ನಿರ್ವಹಿಸುತ್ತಿದೆ.

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
25
 
[ 26 ]ಪರಾಮರ್ಶನ ಸೂಚಿ
1. ಕ್ರೈಸ್ತ ಹಿತವಾದಿ, ಬಾಸೆಲ್ ಮಿಶನ್ ಪ್ರೆಸ್, ಮಂಗಳೂರು, 1926, 1928
2. ಕಲ್ಲಚ್ಚಿನ ಕನ್ನಡ ಹೊತ್ತಗೆಗಳ ವಿವರಣ ಸೂಚಿ, ಉಮಾಪತಿ ಶಾಸ್ತ್ರಿ (ಸಂ.), ಮಂಜುನಾಥೇಶ್ವರ ಪುಸ್ತಕ ಪ್ರಕಾಶನ ಮಾಲೆ, ಉಜಿರೆ, 2004
3. ತೆಂಕನಾಡು, 31ನೇ ಕನ್ನಡ ಸಾಹಿತ್ಯ ಸಮ್ಮೇಳನ, ಕಾಸರಗೋಡು ಸ್ಮರಣ ಸಂಚಿಕೆ, 1947
4. ಕಾಸೆಸ್ ಹಾಸ್ಟೆಲ್ ಸಂಕ್ಷಿಪ್ತ ಚರಿತ್ರೆ, ಬೆನೆಟ್ ಜಿ. ಅಮ್ಮನ್ನ, ಕಾಸೆಸ್ ಹಾಸ್ಟೆಲ್ 40ನೇ ವರ್ಷದ ಸ್ಮರಣ ಸಂಚಿಕೆ, 2012
5. ಶಾಂತಿ ದೇವಾಲಯ, ಮಂಗಳೂರು, ಶತಮಾನೋತ್ಸವ ಸ್ಮರಣ ಸಂಚಿಕೆ, 1962
6. ಮಂಗಳೂರು ಬೋಟನ್ ಆಟೋಗ್ರಫಿ ಲೇಖನ, ಶ್ರೀನಿವಾಸ ಹಾವನೂರು, ಸುದರ್ಶನ, ಟಿ.ಎಮ್.ಎ. ಪೈ ಅಭಿನಂದನ ಗ್ರಂಥ, ವಿಜಯಾಕಾಲೇಜ್ ಟ್ರಸ್ಟ್, ಮುಲ್ಕಿ, 1977
7. ಪಂಚಗಜ್ಜಾಯ, 13ನೇ ಕರ್ನಾಟಕ ಸಾಹಿತ್ಯ ಸಮ್ಮೇಳನ, ಮಂಗಳೂರು, 1927
8. ಅಕ್ಷರಶಿಲ್ಪಿ ಅತ್ತಾವರ ಅನಂತಾಚಾರ್ಯ, ಪಾಲ್ತಾಡಿ ರಾಮಕೃಷ್ಣ ಆಚಾರ್, ಸುಪ್ರಿಯ ಪ್ರಕಾಶನ, ಪುತ್ತೂರು, 2003
9. ಜಾನ್ ಜೇಮ್ಸ್ ಬ್ರಿಗೆಲ್ ಜೀವನ ಚರಿತ್ರೆ, ಬೆನೆಟ್ ಜಿ. ಅಮ್ಮನ್ನ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ, 2012
10. ವಜ್ರಕುಸುಮ, ಚ.ರಾ. ಅಭಿನಂದನ ಗ್ರಂಥ, ಅಮೃತ ಸೋಮೇಶ್ವರ(ಸಂ.) ಅಭಿನಂದನ ಸಮಿತಿ, ಉಚ್ಚಿಲ, 2005
11. ಹೊಸಗನ್ನಡದ ಅರುಣೋದಯ, ಶ್ರೀನಿವಾಸ ಹಾವನೂರ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, 2000
12. Basel Mission Report 1841-1914
13. Basel Mission Report Book (Handwritten) 1866-1907
14. YMCA, Mangalore, Diamond Jubilee Souvenir, 1968
15. History of Printing and Publishing in India, By. B.S. Kesavan, National Book Trust, New Delhi, 1985
16. Mission & Evangelism Souvenir, Ed. By. M.R.T.Pal., CSI, KSD, Mangalore 1988,
26
ಈ ತುಳುನಾಡಿನಲ್ಲಿ ಬಾಸೆಲ್ ಮಿಶನ್‌ ಮತ್ತಿತರ ಲೇಖನಗಳು...
 
[ 27 ]
17. Work of the Mission, Souvenir, Ed. By. M.R.T. Pal. CSI, KSD, Mangalore. 1991
18. Basel Mission in South Kanara, Peter Prabhakar Wilson, Unpublished Ph.D. Thesis, Mangalore University, 1988
19. Profit for the Lord, William J. Danker, W.B, Eerdmans, Michigan, 1971
20. Wholeness in Christ: Legacy of Basel Mission In India, Ed. G. Shiri, KATHRI, Mangalore 1985
21. ಡಾ. ಶ್ರೀನಿವಾಸ ಹಾವರನೂರರ ಟಿಪ್ಪಣಿಗಳು,
22. ಕರ್ನಾಟಕ ತಿಯೋಲಾಜಿಕಲ್ ಕಾಲೇಜು ಪತ್ರಾಗಾರ - ಕಡತಗಳು
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
27
 
[ 28 ]

ತುಳು ಭಾಷೆದ ಬುಳೆಚ್ಚಿಲ್ ಬೊಕ್ಕ ಬಾಸೆಲ್ ಮಿಶನ್

ಕನ್ನಡ ಲಿಪಿಟ್ಸ್ ತುಳು ಸಾಹಿತ್ಯ : 1840ಡ್ದ್ ಪಿರವುಡೇ ತುಳು ಭಾಷೆನ್ ಕನ್ನಡ ಲಿಪಿಟ್ಸ್ ಬರೆಪಿನ ರೂಢಿ ಇತ್ತಂಡಲಾ ಅವು ಬೊಲ್ವುಗು ಬತ್ತ್ ಜಿ ದಾಯೆ ಪಂಡ ಆತನೆಟ್ಟ ಈ ಜಿಲ್ಲೆಡ್ ಮುದ್ರಣದ ವ್ಯವಸ್ಥೆ ಇತ್ತ ಅತ್ತಂದೆ ಕಾಕಜಿದ ಬಳಕೆಲಾ ಇತ್ತಜಿ. ಅಪಗದ ಬರವುಲು ಮಾತಾ ಪೊಯ್ಯದ ಬರವು, ಕಲ್ಲದ ಬರವು, ತಾಳೆಗರಿ, ತಾಮ್ರಶಾಸನ ಇಂಚಿತ್ತಿನಷ್ಟೇ ಇತ್ತ್ಕಂಡ್, ಬಾಸೆಲ್ ಮಿಶನರಿನಕುಲು ತುಳುನು ಕನ್ನಡ ಲಿಪಿಟ್ ಅಚ್ಚಿ ಮಲ್ಪ್ಯ್ರೆರೆ ಸುರು ಮಲ್ತಿನೆಡ್ ತುಳು ಲಿಪಿ ಬರಿಕ್ ಸೇ‌ರ್ಂಡ್ ಪಂಡ್ ಪನ್ಸೆರ್. ಆಂಡ ಉಂದು ನಿರಾಧಾರವಾಯಿನ ಹೇಳಿಕೆ. ದಾಯೆಪಂಡ ಮಿಶನರಿನಕಲ್ನ ಕಾಲೊಡು ಸಾಮಾನ್ಯ ಜನೊಕ್ಕುಲು ಕನ್ನಡ ಲಿಪಿನೇ ಬಳಕೆ ಮತ್ತೊಂದಿತ್ತೆರ ಅತ್ತಂದೆ ಏರ್ಲಾ ತುಳು ಲಿಪಿನ್ ಬಳಕೆ ಮತ್ತೊಂದು ಇಜ್ಜಾಂಡ್, 1886ಟ್ಸ್ ಬಾಸೆಲ್ ಮಿಶನ್ ಪ್ರೆಸ್‌ಡ್ ಅಚ್ಚಿ ಆದ್ ಪ್ರಕಟ ಆಯಿ ಎ.ಸಿ. ಬರ್ನೆಲ್‌ನ ಲಿಪಿ ಶಾಸ್ತ್ರ ಬೂಕುಡು ದಕ್ಷಿಣ ಭಾರತದ ಮಾತಾ ಬಾಸೆದ ಲಿಪಿತ್ತ ಪಟತ್ತ ಒಟ್ಟಿಗೆ ತುಳು ಲಿಪಿತ್ತ ಪಟಲಾ ಪ್ರಕಟ ಆತ್‌ಂಡ್. ಆಂಡಲಾ ಉಂದು ಮುದ್ರಣ ಆದ್ ನೂದು ವರ್ಷ ಮುಟ್ಟಲಾ ತುಳುನಾಡ್‌ಡ್ ಅವ್ವತೋ ಅಚ್ಚಿದ ಇಲ್ಲುಲು ಇತ್ತಂಡಲಾ ತುಳು ಲಿಪಿ ಮುದ್ರಣ ಓಲುಲಾ ಆತ್‌ ಜಿ. 1840 ಇಸವಿಡ್ ದುಂಬೇ ತುಳು ಜಿಲ್ಲೆಲೆಡ್ ಕಾಕಜಿದ ಬಳಕೆ ಬತ್ತಿತ್ತಂಡಲಾ ಕಾಕಜಿಡ್ ತುಳು ಲಿಪಿಟ್ಸ್ ಬರೆತಿ ತುಳು ಬರವು ತಿಕ್ಕುನು ಕಮ್ಮಿ, ಅವು ತಾಳೆಗರಿಟ್ಟೆ ಒರಿಂಡ್. ಕಾಕಜಿದ ಬರವು, ಅಚ್ಚಿ ಆಪಿನವು ಮಾತಲಾ ಕನ್ನಡ ಲಿಪಿಟ್ಟೆ ದುಂಬರಿಂಡ್.

1834ಟ್ಸ್ ಸ್ವಿಜರ್ಲೆಂಡ್‌ದ ಬಾಸೆಲ್ ಪತ್ನಿ ಊರುಡ್ಡು ಕ್ರೈಸ್ತ ಮತ ಪ್ರಚಾರೊಗು ಕುಡ್ಲಗ್ ಬತ್ತಿ ಮಿಶನರಿನಕುಳು ತುಳುನಾಡ್‌ ಭಾಷೆನೇ ತುಳು. ಮೂಲು ವ್ಯವಹಾರ ಮಲ್ಲೊಡಾಂಡ ತುಳು ಭಾಷೆ ಮುಖ್ಯದವು ಪಂಡ್ಸ್ ತೆರಿವೊಂಡೆರ್.ಅ೦ಚಾದ್ ತುಳುಭಾಷೆ, ತುಳು ಸಂಸ್ಕೃತಿಳೆನ್ ಅಕುಳು


28
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
 
[ 29 ]ಕಲ್ಲೊಡಾಂಡ್.ದೇಶೀಯ ವಿದ್ವಾಂಸೆರೆ ಸಹಾಯೊಡ್ಡು ಬೇಗನೇ ತುಳು ಭಾಷೆ ಕಲ್ತೆರ್ ಅತ್ತಂದೆ ಸಾಹಿತ್ಯ ತಯಾರ್ ಮಲ್ಪುನಂಚಿತ್ತಿ ಬೇಲೆಗ್‌ಲಾ ಜತ್ತೆರ್.

ಕುಡ್ಲಡ್ ಸುರುತ್ತ ಅಚ್ಚಿ ಇಲ್ಲ್: ತುಳುನಾಡ್‌ಡ್ 1841 ಮುಟ್ಟ ಮುದ್ರಣದ ವ್ಯವಸ್ಥೆ ಇತ್ತಜಿ. ಮಿಶನರಿನಕುಳು ಧರ್ಮ ಪ್ರಚಾರೊಗು ಬೋಡಾಯಿ ಕರಪತ್ರೋಳೆನ್ ಅತ್ತಂದೆ ತನ್ಕುಲು ಸ್ಥಾಪನೆ ಮಳ್ತಿ ಶಾಲೆಳೆಗ್ ಬೋಡಾಪಿ ಬೂಕುಳೆನ್ ಬೊಂಬಾಯಿಡ್ದ್ ಕಲ್ಲಚ್‌ಡ್ ಅಚ್ಚ ಮಲ್ತ್‌ದ್ ಕನವೊಂದಿತ್ತೆರ್. 1841ಟ್ಟ್ ಭಾರತೊಗು ಮಿಶನರಿ ಆದ್ ಬತ್ತಿ ಜಿ.ಎಚ್ ವೈಗ್ಲೆ (G.H. Weigle) ಪನ್ಪಿನಾರ್ ಬೊಂಬಾಯಿಡ್ ದ್ ಕುಡ್ಲಗ್ ಬನ್ನಗ ಕಲ್ಲಚ್ಚು ( Lithography)ಮುದ್ರಣದ ಒಂಜಿ ಯಂತ್ರೋನು ಪತ್ತೊಂದು ಬತ್ತೆರ್. ಮಿಶನರಿಳೆನ ಪ್ರೋತ್ಸಾಹೊಡು ತುಳು ಸಾಹಿತ್ಯದ ಬೇಲೆ ತರ್ಜುಮೆಡ್ ಸುರು ಆಂಡ್. ಧರ್ಮಪ್ರಚಾರೊಗು ತುಳು ಸಾಹಿತ್ಯ ಮಸ್ತ್ ಅಗತ್ಯ ಇತ್ತಿನೆಡ್ದ್ ಸುರುಟ್ಟು ಕ್ರೈಸ್ತರೆ ಧರ್ಮಗ್ರಂಥ ಆಯಿ ಸತ್ಯವೇದದ ಭಾಗೊಳನ್ ತುಳು ಭಾಷೆಗ್ ತರ್ಜುಮೆ ಮಳ್ಪೆರೆ ಸುರು ಮಳ್ತೆರ್. ದೇಶಿಯೆರೊಟ್ಟುಗು ಮಿಶನರಿ ಕ್ರಿಶ್ಚನ್ ಗ್ರೇನರ್ (CHRISTIAN GREANER) ತರ್ಜುಮೆ ಮಲ್ತಿನ ಸತ್ಯವೇದದ ಪೊಸ ಒಡಂಬಡಿಕೆದ ಒಂಜಿ ಭಾಗ ಆಯಿ 'ಮತ್ತಾಯೆ ಬರೆತಿ ಸುವಾರ್ತಮಾನ' ಪನ್ಪಿ ಒಂಜಿ ಬೂಕು 1841ಟ್ಸ್ ಸುರುಟ್ಟು ಕಲ್ಲ್ ದ ಅಚ್ಚಿದ ಯಂತ್ರೊಡು ಮುದ್ರಣ ಆದ್ ತುಳು ಮುದ್ರಣ ಈ ಜಿಲ್ಲೆಡ್ ಪ್ರಾರಂಭ ಆಂಡ್. ಈ ಅಚ್ಚಿದ ಇಲ್ಲಗ್ ಸುರುಟ್ಟು ಜರ್ಮನ್ ಮಿಶನ್ ಪ್ರೆಸ್, ಬೊಕ್ಕ ಬಾಸೆಲ್ ಮಿಶನ್ ಪ್ರೆಸ್ ಪಂಡ್ ಪುದ‌ರ್ ಇತ್ತ್ಂಡ್. 1972 ಬೊಕ್ಕ ಈ ಪ್ರೆಸ್‌ಗ್ ಬಲ್ಮಠ ಮಾಸ್ಟರ್ ಪ್ರೆಸ್ ಆಂಡ್ ಇತ್ತೆಲಾ ಈ ಪ್ರೆಸ್ ಬಲ್ಮಠ ಇನ್ಸಿಟ್ಯೂಟ್ ಆಫ್ ಪ್ರಿಂಟಿಂಗ್ ಪ್ರೆಸ್ ಪನ್ಪಿ ಪುದರ್‌ಡ್ ಕುಡ್ಲದ ಬಲ್ಮಟಡ್ ನಡತೊಂದುಂಡು. 1854 ಮುಟ್ಟ ಕಲ್ಲಚ್ಚು ಮುದ್ರಡೇ ಮುಲ್ಪ ಅಚ್ಚಿ ಆವೊಂದಿತ್ತ್ಂಡ್. 1851ಟ್ಟ್ ಕುಡ್ಲಗ್ ಬತ್ತಿ ಜಾರ್ಜ್ ಪ್ಲೆಬ್ಲ್ಸ್ತ್ (George Plebst) ಪನ್ಪಿನರೆನ ಮುತಾಲಿಕೆಡ್ ಲೆಟರ್ ಪ್ರೆಸ್‌ಡ್ ಮುದ್ರಣ ಅವೆರೆ ಸುರು ಆದ್ ರಾಜ್ಯೋಡೇ ಪುಗರ್ತೆ ಪಡೆಯಿ ಅಚ್ಚಿದ ಇಲ್ಲ ಆದಿತ್ತ್ಂಡ್. ಶಾಲೆಲೆಗ್ ಬೋಡಾಪಿನ ಬೂಕುಲು, ಧರ್ಮ ಪ್ರಚಾರೊಗು ಬೋಡಾಯಿ ಬೂಕುಲು, ತುಳು, ಕನ್ನಡ, ಕೊಡವ, ಬಡಗ,ಮಲಯಾಲಂ ಭಾಷೆಲೆಡ್ ಮುದ್ರಣ ಆವೆರೆ ಸುರು ಆಂಡ್. ಮಿಶನರಿಲೆನ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
29
[ 30 ]ತುಳು ಸಾಹಿತ್ಯದ ಬೇಲೆಗ್ ಮಾಮಲ್ಲ ಸಾಹಿತಿ ಆಯಿ ಡಾ. ಶ್ರೀನಿವಾಸ ಹಾವನೂರ ಮೇರ್ "ತುಳುಭಾಷೆಗೆ ಗ್ರಂಥಸ್ಥ ರೂಪವನ್ನು ಸಾಹಿತ್ಯಕ ಮನ್ನಣೆಯನ್ನು ಒದಗಿಸಿದ ಶ್ರೇಯಸ್ಸು ಬಾಸೆಲ್ ಮಿಶನ್ನಿನವರದಾಗಿದೆ" ಪಂಡ್ ದ್ ಪನ್ತೆರ್ ("ಹೊಸಗನ್ನಡ ಅರುಣೋದಯ" 1974;ಪುಟ.125)

ಬಾಸೆಲ್ ಮಿಶನರಿಳು ಮಲ್ತಿ ತುಳು ಸಾಹಿತ್ಯೊಲು:- ಬಾಸೆಲ್ ಮಿಶನ್‌ದಕಲೆನ ತುಳುಸಾಹಿತ್ಯೊನು

ಧರ್ಮ, ಸಂಗೀತ, ಭಾಷೆ, ಶಿಕ್ಷಣ, ಸಂಸ್ಕೃತಿ ಇಂಚ ವಿಭಾಗ ಮಲ್ತೊಂದು ತೆರಿಯೊನೊಲಿ.

ಧರ್ಮ:-ಬಾಸೆಲ್ ಮಿಶನ್‌ದಕುಲು ತುಳುನಾಡ್‌ಗ್ ಬತ್ತಿನ ಮೂಲ ಉದ್ದೇಶ ಕ್ರೈಸ್ತ ಮತ ಪ್ರಚಾರ ಮಲ್ಪುನವು ಆದಿತ್ತಿನೆಡ್, ಕ್ರೈಸ್ತ ಮತಾವಲಂಬಿಲೆಗ್ ಧರ್ಮಶಾಸ್ತ್ರದ ಬೂಕುಲೆನ್ ಸುರುಟ್ಟು ತರ್ಜುಮೆ ಮಲ್ತ್‌ ಪ್ರಕಟ ಮಲ್ಪೆರೆ ಸುರು ಮಲ್ತೆರ್. 1841 ಸುರುಟ್ಟು ಆಯಿನ ಕೃತಿ ಅವು ಸತ್ಯವೇದದ ಹೊಸ ಒಡಂಬಡಿಕೆದ ಸುರುತ್ತ ಬೂಕು 'ಮತ್ತಾಯೆ ಬರೆತಿ ಸುವಾರ್ತಮಾನ'. ಈ ಬೂಕು ಯೇಸುನ ಶಿಷ್ಯರೆಡ್ ಒರಿ ಬರೆತಿನವು ಆದುಂಡು. ಮೂಲ ಗ್ರೀಕ್ ಭಾಷೆಡ್ ಇತ್ತಿ ಈ ಬೂಕು ಇಂಗ್ಲಿಷ್‌ಡ್ ದ್ ಸಿ.ಎಲ್. ಗ್ರೇನರ್ ಪನ್ಪಿನಾರ್ ತುಳುಕ್ಕು ತರ್ಜುಮೆ ಮಲ್ತೆರ್. ತರ್ಜುಮೆಲು ಬೇತೆ ಬೇತೆ ಮಿಶನರಿಳೆಡ್ ನಡತ್ತ್ ದ್ ಸತ್ಯವೇದದ ರಡ್ಡನೇ ಭಾಗ ಆಯಿ ಪೊಸ ಒಡಂಬಡಿಕೆ ಇಡೀ ಗ್ರಂಥ 1847 ಕಲ್ಲಚ್ಚು ಮುದ್ರಣಡೆ ಅಚ್ಚಿ ಆಂಡ್. ನೆಟ್ 1090 ಪುಟೊಕ್ಕುಲು ಇತ್ತ್ ದ್ ತುಳುಟ್ಟ್ ಅಚ್ಚಿ ಆಯಿ ಸುರುತ್ತ ಮಲ್ಲ ಗ್ರಂಥ ಪಂಡ್ ದ್ 150 ಮುಟ್ಟಲಾ ಪುಗರ್ತೆನ್ ಪಡೆತ್ತ್ಂಡ್. ಉಂದುವೇ ಗ್ರಂಥ 1858ಡು ಲೆಟರ್ ಪ್ರೆಸ್‌ಡ್ ಮುದ್ರಣ ಆತ್ತ್ಂಡ್. ಸತ್ಯವೇದದ ಪರ ಒಡಂಬಡಿಕೆದ ತರ್ಜುಮೆ ಬೇಲೆಲು 1863ಡ್ 1912 ಮುಟ್ಟ ನಡತ್ತ್ ದ್ ಉತ್ಪತಿ, ಯೋನ, ಹೊರಡೋಣ, ದಾನಿಯೇಲ, ನೀತಿವಚನೊಲು, ಕೀರ್ತನೆ ಇಂಚಿತ್ತಿ 6 ಬೂಕುಲು ಪ್ರಕಟ ಆತ್‌ಂಡ್. ಉಂದತ್ತಂದೆ ಸತ್ಯವೇದೊಗೇ ಸಮ್ಮಂದಪಡೆಯಿ ಕಥೆಕ್ಕುಲೆನ್ ಅಜತ್ತ್ ದ್ ಪರ ಪೊಸ ಒಡಂಬಡಿಕೆದ ಕಥೆಕ್ಕುಲು(1862) ದೇವೆರೆ ವಾಕ್ಯದ ಎಲ್ಯ ಕಥೆಕ್ಕುಲು (1879) ದೇವರೆ ರಾಜ್ಯದ ಮುತ್ತುಳು ಪನ್ಪಿ ಬೂಕುಲು, Piligrims Progress. By. John Buyan ಪನ್ಪಿ ಇಂಗ್ಲಿಷ್ ಬೂಕುದ ತುಳುತ್ತ ತರ್ಜುಮೆ 'ಸ್ವರ್ಗಯಾತ್ರೆ' ಪನ್ಪಿ ಬೂಕು ಅತ್ತಂದೆ


30
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
 
[ 31 ]ಬಳಕೆಡ್ ಕ್ರೈಸ್ತ ಧರ್ಮೊಗು ಸಂಬಂಧ ಪಡೆಯಿ ಕೆಲವು ಬೂಕುಲು ಪ್ರಕಟ ಆತ್‌ಂಡ್.

ಸಂಗೀತ: ಕ್ರೈಸ್ತರೆಗ್ ಸುರುತ್ತ ಪುಸ್ತಕ ಸತ್ಯವೇದ ಆಂಡ ರಡ್ಡನೆದವು ಸಂಗೀತ ಪುಸ್ತಕ.ಜರ್ಮನ್ ಭಾಷೆಡಿತ್ತಿ ಸಂಗೀತೊಲು ಕನ್ನಡ, ತುಳು, ಬೊಕ್ಕ ಮಲಯಾಳಂ ಭಾಷೆಲೆಗ್ ತರ್ಜುಮೆ ಆದ್ ಬಳಕೆಗ್ ಬತ್ತ್ ದ್ ಇತ್ತೆಲಾ ಬಳಕೆಡ್ ಉಂಡು.ತುಳುನಾಡ್‌ದ ಸಾಹಿತ್ಯ ಕ್ಷೇತ್ತೊಡು ಕೃಷಿ ಮಲ್ತಿ ಮಿಶನರಿಳು ಸಂಗೀತ ಕ್ಷೇತೊಡುಲಾ ಮಸ್ತ್ ಸಾಹಿತ್ಯ ರಚನೆ ಮಳ್ತ್ ದೆರ್.ಐಟ್ ಮುಖ್ಯವಾಯಿನವು ರಿಟ್ಟರ್‌ನ 'ಜೋಕುಲೆ ಗೀತೊಳು', ಸೇಂಕಿ ಗೀತೊಲು, ತುಳು ಗೀತೊಳು, 'ನಮ ರಾಗೊಲು', 'ಎಲೀಮ್ ಖೋರಸುಗಳು 'ಕನ್ನಡ ತುಳು'ಕನ್ನಡ ತುಳು ಗೀತಗಳಿಗೆ ತಕ್ಕ ರಾಗಗಳು', ಇಂಚಿತ್ತಿ ಪುಸ್ತಕೊಲು ಪ್ರಕಟ ಆತ್‌ಂಡ್. ಇತ್ತೆ ಕ್ರೈಸ್ತರೆಡ್ ಬಳಕೆಡ್ ಉಪ್ಪು ಗೀತೊಳೆ ಪುಸ್ತಕೊಡು 251 ಸಂಗೀತೊಳು ಇತ್ತದ್ ಐಟ್ 168 ಗೀತೊಳೆನ್ ಮೆನ್ನ‌ರ್ ಬರೆತೆರ್‌ಡ 67 ಸಂಗೀತೊಳೆನ್ ಅಮ್ಮನ್ಸ್, ಕೆಮರ‌ರ್, ವುರ್ಟ್, ಬ್ರಿಗೆಲ್, ಬಾಜ್ಞೆ,ಬುನ್ಸ್ ಬರೆತೆರ್‌ಡ 17 ಗೀತೊಳಲೆನ್ ಇ.ಪಿ. ಕಾರಟ್, ತಿಮೋಥಿಫುರ್ಟಾಡೊ, ಜಿ. ಪ್ರೇಮಯ್ಯ, ಜೆ. ಸೊನ್ನ, ನೆಹಸನ್ ವೀರ, ಇಂಚಿತ್ತಿ, 5 ದೇಶಿಯರ್ ಬರೆತೆರ್.ಅತ್ತಂದೆ ನಾಲ್ ಗೀತೊಳೆನ್ ಮಿಶನರಿಳು ಬೊಕ್ಕ ದೇಶಿಯೆರ್ ಸೇರ್ ದ್ ಮಲ್ತೆರ್. (ಈ ಸಂಗೀತ ಪುಸ್ತಕ ಇತ್ತೆಲಾ ತುಳು ಕ್ರೈಸ್ತರ್ ಬಳಕೆ ಮಲ್ಲೊಂದುದಿತ್ತದ್ ದೇವಾರಾಧನೆದ ವಿಭಾಗೊಡು ದೇವಾರಾಧನೆದ ಕ್ರಮ. ದಿನದಿನತ ಪ್ರಾರ್ಥನೆಲು ಮೆನ್ನರ್‌ನ ಕ್ರೈಸ್ತರ್‌ ಕಲಿಗಂಗಸರ ಮೂರುದು ಮಾರುನವು ಸಮಾದುಂಡಾ(1878) ಪ್ರಟಿಕ್ ಪನ್ಪಿ ವಿದೇಶಿಯ ಬರೆತಿ ಬೂಕುದ ತರ್ಜುಮೆ ಪ್ಲಟಿಕ್ ದೊರೆ ಬರೆದ್ ಕೊರಿ ಸಂಸಾರದ ಕ್ರಮೊಲು(1860) ಪ್ರಕಟ ಅತ್‌ಂಡ್.

ವ್ಯಾಕರಣ, ನಿಘಂಟು, ಶಿಕ್ಷಣ ವಿಭಾಗ:- ಜಾನ್ ಜೇಮ್ಸ್ ಬ್ರಿಗೆಲ್ ಬರೆತಿನ ತುಳು ವ್ಯಾಕರಣ (A Grammar of the Tulu Language.) 1872ಟ್ಟ್ ಪ್ರಕಟ ಆಂಡ್ ಈ ವ್ಯಾಕರಣ 139 ಪುಟೊಕ್ಕುಳೆನ್ ಹೊಂದುದುಂಡು. ಈ ಬೂಕುನು Phonology, Etymology, Syntax ಇಂಚ ಮೂಜಿ ವಿಭಾಗ ಮಳ್ತೊಂದು ಐಟ್ ಮಸ್ತ್ ವಿಭಾಗೊಳೆಡ್ ಪೊರ್ಲುಡು ಮುಡೆತೆರ್. ಅನುಬಂದೊಡು ಬೆರೆಣೆರೆ ತುಳುತ್ತ ಮಾದರಿ, ತುಳುತ್ತ ರಡ್ ಪದ್ಯ, ಅತ್ತಂದೆ 50 ತುಳು ಗಾದೆಳನ್‌ಲಾ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

[ 32 ]ಕೊರ್ತೆರ್.ಬ್ರಿಗೆಲ್‌ರೆನ್ ತುಳು ವ್ಯಾಕರಣದ ಬಗೆಟ್‌ ಮಸ್ತ್ ವಿದ್ವಾಂಸೆರ್‌ನಗುಲು ಆಧ್ಯಯನ ಮಲ್ತ್ ದ್ ಪುಗರ್ದೆರ್. ಡೆಲ್ಲಿದ ಎಷ್ಯನ್ ಎಜುಕೇಶನಲ್ ಸರ್ವಿಸ್ ಸಂಸ್ಥೆ ಪಿರ ಅಚ್ಚಿ ಮಲ್ತ್ ದೆರ್ 2019 ಟೈ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಡ್ ಈ ಬೂಕು ಎ.ವಿ. ನಾವಡೆರೆ ಪ್ರಸ್ತಾವನೆದೊಟ್ಟುಗು ಮರು ಮುದ್ರಣ ಆಂಡ್ ಅತ್ತಂದೆ ಪಿಡಿಎಫ್ ಮಾದರಿ, ಅಂತರ್‌ಜಾಲೊಡುಲಾ ತಿಕ್ಕುನೆಡ್ ಇತ್ತೆಲಾ ಬಳಕೆಡ್ ಉಂಡು.

ನಿಘಂಟು:- 1854 1858ಮುಟ್ಟ ಉಡುಪಿಡ್ ಮಿಶನರಿ ಆದಿತ್ತಿ ಜಿ.ಕೆಮರ‌ ಪನ್ಪಿನಾರ್ ತುಳು ನಿಘಂಟ್‌ಗಾದ್ 2000 ಶಬ್ದೊಲೆನ್ ಸಂಗ್ರಹ ಮಲ್ತದ್ ದೀದಿತ್ತೆರ್. ಅಗಸ್ಟ್ ಮೆನ್ನರ್ ಪನ್ಸಿ ಮಿಶನರಿ ಅವೆನ್ ದುಂಬರಿತ್‌ದ್ 1886ಟ್ಟ್ ತುಳು ಇಂಗ್ಲಿಷ್ ನಿಘಂಟು, 1888 ಡು ಇಂಗ್ಲಿಷ್ ತುಳು ನಿಘಂಟು ತಯಾರ್ ಮಲ್ತ್ ದ್ ಪ್ರಕಟ ಮಲ್ತೆರ್. ನೆಟ್ 20,000 ಶಬ್ಬೊಲು ಉಂಡು. ಉಂದೆನ್ ತಯಾರ್ ಮಲ್ಪೆರೆ ದೇಶೀಯೆರಾಯಿನ ಕಾಪುದ ಮಧ್ವರಾಯರ್, ಮೂಲ್ಕಿದ ಸೀತರಾಮೆ‌ರ್, ಕುಡ್ಲದ ಸರ್ವೋತ್ತಮ ಪೈ, ಇಸ್ರಾಯೇಲ್ ಆರೋನ್ಸ್, ಶಿವರಾವ್‌ ಇಂಚಿತ್ತಿನಕುಲೆನ ಸಹಾಯ ಪಡೆತೆರ್ ಪಂಡ್ಸ್ ಮುನ್ನುಡಿಡ್ ಬರೆತೆ‌ರ್. ಈ ರಡ್ಡ್ ನಿಘಂಟನ್ ಡೆಲ್ಲಿದ ಎಷ್ಯನ್ ಎಜುಕೇಶನಲ್ ಸರ್ವಿಸ್ ಸಂಸ್ಥೆ ಪಿರ ಅಚ್ಚಿ ಮಲ್ತೆರ್ ಅತ್ತಂದೆ ಪಿಡಿಎಫ್ ಮಾದರಿಡ್ ಅಂತರ್‌ಜಾಲೊಡುಲಾ ತಿಕ್ಕುಂಡು. ಅಂಚಾದ್ ಉಂದೆನ್ ಇತ್ತೆಲಾ ಬಳಕೆ ಮಲ್ತೊಂದುಲ್ಲೆರ್ . ಈ ರಡ್ಡ್ ನಿಘಂಟುಲು ತುಳುತ್ತ ಸುರುತ್ತ ನಿಘಂಟುಲು ಪನ್ಪಿ ಪುಗರ್ತೆನ್ ಪಡೆತ್ತ್ಂಡ್. 1915ಡ್ ದೇಶೀಯರಾಯಿನ ಆರ್. ಟಿ. ಮಾಬೆನ್ ಪನ್ಪಿನರೆಡ್ಡ್ ಕನ್ನಡ-ತುಳು-ಇಂಗ್ಲಿಷ್ ಭಾಷಾಮಂಜರಿ ಪನ್ಪಿ ಬೂಕು ಪ್ರಕಟ ಅತ್‌ಂಡ್. ಉಂದು ಸಂಭಾಷನೆದ ರೂಪೊಡು ಇತ್ತ ತುಳು ಬಾಷೆನ್ ಇತರ ಬಾಸೆಲೆಡ್ ಕಲ್ಪುನ ಪುಸ್ತಕ ಆದುಂಡು.

ಪ್ರಾಥಮಿಕ ಶಿಕ್ಷಣ:- ತುಳುನಾಡ್‌ದ ಅಪ್ಪೆಬಾಸೆ ಆಯಿ ತುಳುಟ್ಟೇ ಶಿಕ್ಷಣ ಕೊರೊಡು ಪನ್ಪಿ ನಿಲೆಟ್ ಬಾಸೆಲ್ ಮಿಶನ್‌ದಕುಲು ತುಳು ಪಾಟೊಲೆ ದುಂಬುದ ಪುಸ್ತಕ(1862) ತುಳು ಪಾಲ್ಗೊಲೆ ರಡ್ಡನೆ ಪುಸ್ತಕ(1862) ತುಳು ಅಕ್ಷರ ಮಾಲೆ(1890) ಈ ಮೂಜಿ ಬೂಕುಲೆನ್ ಪ್ರಕಟ ಮಲ್ತೆರ್ ಅತ್ತಂದೆ ತುಳುನಾಡ್‌ದ ಶಾಲೆಲೆಡ್ ತುಳು ಕಲ್ಪೆರೆಲಾ ಸುರು ಆಂಡ್. ಆಂಡ ತುಳುವರೇ ಎಂಕಲೆಗ್ ಆಡಳಿತ ಬಾಸೆಡ್ ಶಿಕ್ಷಣ ಬೋಡು,


32
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.
 
[ 33 ]ತುಳು ಕಲ್ತ್ಂಡ ಸರಕಾರಿ ಬೇಲೆಲು ತಿಕ್ಕುಜ ಪನ್ಪಿ ಸೊರೊ ಲಕ್ಕಿನೆಡ್ ಸಾಲೆಲೆಡ್ ತುಳು ಕಲ್ಪಾವು ಪ್ರಯತ್ನ ಉಂತುದು ಪೋಂಡು. ನೆಟ್ ರಡ್ ಬೂಕು 2009ಡು ಧರ್ಮಸ್ಥಳದ ಉಜಿರೆಡ್ ನಡತಿ ವಿಶ್ವ ತುಳು ಸಮ್ಮೇಳನದ ಸಂದರ್ಭೋಡು ಮರು ಮುದ್ರಣ ಮಲ್ತ್‌ದ್ಂಡ್. ಉಂದೆಡ್ದ್ ಪಿರಾಕ್‌ದ ಸಾಲೆದ ಬೂಕುಲು ಎಂಚ ಇತ್ತ್ಂಡ್ ಪಂಡ್ ದ್ ತೆರಿಯೊನೊಲಿ.

ಸಂಸ್ಕೃತಿ:- ಭೂತಾರಾಧನೆದ ವಿಭಾಗೊಡು ತುಳುಟ್ಟು ರಡ್ದ್ ಕನ್ನಡೊಡು ಒಂಜಿ ಬೂಕುನು ಅಗಸ್ಟ್ ಮೆನ್ನರ್ ಬರೆತೆ‌ರ್, ಮಿಶನರಿನಕುಲು ಜಿಲ್ಲೆದ ಸಂಸ್ಕೃತಿಲೆನ್ ತೆರಿಯೊನ್ರೆಗಾದ್ ಟಿಪ್ಪಣಿ ಮಲ್ತೊಂದು ಪ್ರಕಟ ಮಲ್ತಿ ಈ ಕೃತಿಕ್ಕುಲು ಪಿರಾಕ್‌ದ ಸಂಸ್ಕೃತಿನ್ ತೆರಿಯೊನ್ರೆ ಒಂಜಿ ಮಲ್ಲಕೊಪ್ಪರಿಗೆ ಆದುಂಡು. ಕನ್ನಡೊಡು 1867 ಪ್ರಕಟ ಮಲ್ಪಿ ಈ ಬೂಕು ಸಂಭಾಷಣೆದ ರೂಪೊಡು ಉಂಡು. ಭೂತಾರಾಧನೆದ ಬಗೆಟ್ ತಿಕ್ಕುನ ಸುರುತ್ತ ಕನ್ನಡ ಕೃತಿಟ್ ಭೂತ ಪಂಡ್‌ಂಡ ದಾದ, ಭೂತೊಲೆ ಉಪದ್ರ, ಭೂತೊಲೆ ಉಪದ್ರೋಗು ಪರಿಹಾರ ಇಂಚ ಮೂಜಿ ವಿಭಾಗೊಡು ಉಂಡು. 1886ಟ್ಸ್ ಪ್ರಕಟ ಆತಿ ಪಾಡ್ಡನೊಲು ಪನ್ಪಿ ಕೃತಿಟ್ಸ್ ಬೊಬ್ಬರ್ಯ, ಪಂಜುರ್ಲಿ, ಜುಮಾದಿ, ಮಗ್ರಂದಾಯೆ, ಕಲ್ಕುಡೆ ಕಲ್ಲುರ್ಟಿ, ಹೊಸ ಭೂತ, ಹೊಸ ಮಹರಾಯ, ಅತ್ತಾವರ ದೈಯೊಂಗುಳು, ಮುಡದೇರ್ ಕಾಳಬೈರವೆ, ತೊಡಕಿನಾರ್, ದೇಯಿ ಬೈದೆದಿ, ಕೋಟಿ ಚೆನ್ನಯೆ, ದೂಮಾವತಿ ಇಂಚ 20 ಭೂತೊಳೆ ಪಾಡ್ದೊನೊಲು ತುಳುಟ್ಟುಲಾ ಪಿಲಿಚಾಮುಂಡಿ ಭೂತದ ಪಾಡ್ಡನ ಇಂಗ್ಲಿಷ್‌ಡ್‌ಲಾ ಉಂಡು ಈ ಬೂಕುನು 2008 ಬೊಕ್ಕ 2019 ಟೈ ಬೆನೆಟ್ ಜಿ. ಅಮ್ಮನ್ನೆರೆ ಪ್ರಸ್ತಾವನೆದೊಟ್ಟುಗು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮರು ಮುದ್ರಣ ಮಲ್ತ್ತ್ಂಡ್. 189lಟ್ಸ್‌ ಪ್ರಕಟ ಆತಿನವು 'ತುಳುವೆರೆಡ್ ನಡಪು ಭೂತ ಸೇವೆ'.ಈ ಕೃತಿನ್ ರಚನೆ ಮಲ್ಲಿನಾ‌ರ್ ಮಿಶನರಿ ಅಗಸ್ಟ್ ಮೆನ್ನರ್, ಉಂದು 20 ಪುಟತ್ತ ಒಂಜಿ ಎಲ್ಯ ಬೂಕು ಆಂಡಲಾ ನೆಟ್ ಭೂತಾರಾಧನೆಗೆ ಸಂಬಂಧ ಪಡೆಯಿ ಮಸ್ಟ್ ವಿಚಾರೊಲು ಉಂಡು, ಪಿಶಾಚಿ, ಭೂತ, ಪ್ರೇತ, ಕುಲೆ, ಗಣ, ರಾವು ಅಂದ್‌ಂಡ್ ದಾನೆ, ಗರಡಿ, ಭೂತಸ್ಥಾನ, ಭೂತಕೊಟ್ಯ, ಬೆರ್ಮಸ್ಥಾನ ಉಂದೆನ್ ಎಂಚ ನಿರ್ಮಾಣ ಮಲ್ಪೋಡು, ಕೋಲ, ನೇಮ, ಅಗೆಲ್, ತಂಬಿಲ, ಬಂಡಿ, ಆಯನ, ಕೋಲದ ಸಮಯ, ಕೋಲ ನಡಪುನ ಜಾಗೆ, ಚಪ್ಪರ, ಕೋಲ ಕಟ್ಟುನಕುಲು ಏರ್ ಇಂಚ ಪ್ರತಿಯೊಂಜಿ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
33
 
[ 34 ]ವಿಚಾರೊಲುಲಾ ವಿವರಾದ್ ಉಂಡು. ಈ ಪುಸ್ತಕ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಎ ವಿನಾವಡ ಬೊಕ್ಕ ಡೆನ್ನಿಸ್ ಫೆರ್ನಾಂಡಿಸ್ ಮೊಕಲ್ನ ಪ್ರಸ್ತಾವನೆದೊಟ್ಟುಗು 2008ನೇ ಇಸವಿಡ್ ಪ್ರಕಟ ಮಲ್ತಿನ ದ ಡೆವಿಲ್ ವರ್ಷಿಪ್ ಆಫ್ ತುಳುವಾಸ್ ಪನ್ಪಿ ಇಂಗ್ಲಿಷ್ ಬೂಕುದ ಪಿರವುಡು ಅಚ್ಚಿ ಆತ್‌ಂಡ್. ಇಂಗ್ಲಿಷ್‌ ಭೂತಾರಾದನೆದ ಬಗೆಟ್ The Devil Worship of Tuluvas ಪನ್ಪಿ ಬೂಕು ಪ್ರಕಟ ಬಾಸೆಲ್ ಮಿಶನ್ ಪ್ರೆಸ್‌ಡ್ ಪ್ರಕಟ ಅತ್‌ಂಡ್. ಉಂದೆನ್ ಬರತಿನಾ‌ ಎ.ಸಿ. ಬರ್ನೆಲ್ ಪನ್ಪಿ ವಿದೇಶಿ ಸರಕಾರಿ ಅಧಿಕಾರಿ, ಈ ಬೂಕುಡು ಎ.ಸಿ. ಬರ್ನೆಲ್‌ನ ಸಂಗ್ರಹ ಮಲ್ಲಿನ ಮಸ್ತ್ ಭೂತೊಲೆನ ಪಾಡನ ಐತ ವಿವರೊಲು, ಇಂಗ್ಲಿಷ್‌ ಐತ ಭಾಷಾಂತರ ಅತ್ತಂದೆ ಪಾಡ್ಡನೊಲೆನ್ ಇಂಗ್ಲಿಷ್‌ಡ್ ಲಿಪ್ಯಂತರ ಮಲ್ತುದ್ ಕೊರ್ತುಂಡು. ಉಂದು 1894-1897ಡ್ Indian Antiquary ಪನ್ಪಿ ಇಂಗ್ಲಿಷ್ ಪತ್ರಿಕೆಡ್ ಪ್ರಕಟ ಆತಿ ಲೇಖನೊಲೆ ಸಂಗ್ರಹ ಆದುಂಡು. ಈ ಬೂಕುಡು ಅಗಸ್ಟ್ ಮೆನ್ನರ್ ಸಂಗ್ರಹ ಮಲ್ಲಿನ 133 ಭೂತೊಲೆ ಪುದರ್‌ದ ಪಟ್ಟಿ, ಭೂತೊಲೆ ಪುಟ್ಟು, ಕೋಟಿ ಚೆನ್ನಯ ಇಂಚಿತ್ತಿ ಬರವುಲು ಇಂಗ್ಲಿಷ್‌ಡ್ ಪ್ರಕಟ ಆತ್‌ಂಡ್. ಭೂತಾರಾದನೆ ಅತ್ತಂದೆ ತುಳು ಗಾದೆಲೆ ಕ್ಷೇತ್ತೊಡು ಸುರುಟ್ಟು ಆಯಿನ ಬೂಕುಲು ರ‍ಡ್ದ್ ಉಂದೆನ್ ಬರೆಯಿನಾರ್ ಅಗಸ್ಟ್ ಮೆನ್ನರ್. 1874 ಸಹಸ್ರಾರ್ದ ತುಳು ಗಾದೆಳು, 1896ಟ್ಸ್ ಸಾರ ತುಳು ಗಾದೆಲು ಪನ್ನಿ ಬೂಕುಲು ಪ್ರಕಟ ಅತ್‌ಂಡ್.

ಇಂಚಿಪ್ಪ ಬೊಲ್ಪುಗು ಬತ್ತಿ ಬಾಸೆಲ್ ಮಿಶನರಿನ ತುಳು ಬರವುಲು:- ತುಳುನಾಡ್‌ಡುಪ್ಪು ಕ್ರೈಸ್ತರೆ ಆರಾಧನಾ ಕೇಂದ್ರೊಳೆಡ್, ಸಂಘ ಸಂಸ್ಥೆಲೆಡ್ ಇತ್ತಿ ಮಿಶನರಿ ಕಾಲದ ಕಡತೊಲೆನ್, ಹಸ್ತಪ್ರತಿಕ್ಲಿನ್, ಮಿಶನರಿಲೆನ ಕೈಕಾಕಜಿದ ಬರವುಲೆನ್ ಅತ್ತಂದೆ ಪ್ರಕಟ ಆಯಿನ ಪರಾ ಬೂಕುಲೆನ್ ಕುಡ್ಲದ ಬಲ್ಮಟ್ಟಡುಪ್ಪು ಕರ್ನಾಟಕ ತಿಯೊಲಾಜಿಕಲ್ ಕಾಲೆಜ್‌ಡ್ ಸಂಗ್ರಹ ಮಲ್ತೊಂದೇ ಉಂಡು. ನಿಲೆಟ್ಸ್ ಸಂಗ್ರಹ ಆಯಿ ಹಸ್ತ ಪ್ರತಿಲೆಡ್ ರಡ್ದ್ ಬೂಕುಲು ದುರ್ಗಾ ಪ್ರವೀಣ್ ಬೊಕ್ಕ ಬೆನೆಟ್ ಜಿ. ಅಮ್ಮನ್ನೆರೆಡ್ ಸಂಪಾದನೆ ಆದ್ ಪ್ರಕಟ ಆತ್‌ಂಡ್. ನೆಟ್ ಒಂಜನೆದವು ತುಳು ವಿಕ್ರಮಾರ್ಕ ಕಥೆ (2014)ಬೊಕ್ಕೊಂಜಿ ಬಾಸೆಲ್ ಮಿಶನರಿಗಳ ತುಳು ಟಿಪ್ಪಣಿಗಳು(2015) ನೆಟ್ಟ ನಂಬಿಕೆ-ಆಚರಣೆ- ಆರಾಧನೆ, ಸ್ಥಳಪುರಾಣ, ಶಾಪ ಆಣೆ-ಮಾಟ-ಮಂತ್ರ, ಕತೆಕ್ಕುಲು ಇಂಚಿತ್ತಿ 45 ವಿಚಾರೊಲು ಉಂಡು . ಈ ರ‍ಡ್ದ್


34
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
 
[ 35 ]ಕೃತಿಕ್ಕುಲೆನ್ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟ ಮಲ್ತ್‌ದ್‌ಂಡ್. ಇಂಚಿತ್ತಿ ಹಸ್ತಪ್ರತಿಕ್ಕುಲೆ ದಾಖಲೀಕರಣ, ಸಂಪಾದನೆ ನಿರಂತರವಾದ್ ನಡಪುಡುನಂಚಿ ಅಕರಲೊಲು ಉಂಡು. ಜರ್ಮನಿದ ಟುಬಿಂಗನ್ ವಿಶ್ವವಿದ್ಯಾನಿಲಯದ ಪತ್ರಾಗಾರೊಡಿತ್ತಿ ಬಾಸೆಲ್ ಮಿಶನರಿಳೆ ಹಸ್ತಪ್ರತಿಲೆಡ್ ತಿಕ್ಕಿ ಕಾಂತಣ್ಣ ಅಧಿಕಾರಿ ಬೊಕ್ಕ ಮಲರಾಯ ಭೂತದ ಪಾಡ್ದನೊಲೆನ್ ಹೈಡ್ರನ್ ಬ್ರುಕ್ನರ್ ಬೊಕ್ಕ ವಿವೇಕ ರೈಕುಲು ಇಂಗ್ಲಿಷ್‌ಡ್ ಲಿಪ್ಯಂತರ ಬೊಕ್ಕ ತರ್ಜುಮೆ/ ಮಲ್ತ್ದೆರ್. ಈ ಬೂಕು 2015 ಟ್ The Tubingen Tulu Manuscript - Two South Indian Oral Epics collected in the 19th Century.ಪನ್ಪಿ ಪುದರ್ ಡ್ ಜರ್ಮನಿಡ್ ಪ್ರಕಟ ಆತ್‌ಂಡ್.

ಬಾಸೆಲ್ ಮಿಶನರಿಳು ಮಲ್ತಿ ತುಳು ಸಾಹಿತ್ಯೊಲು ಮಾತಲಾ ಕುಡ್ಲದ ಬಲ್ಮಟಡುಪ್ಪ್ಪು ಬಾಸೆಲ್ ಮಿಶನ್ ಪ್ರೆಸ್‌ಡೇ ಪ್ರಕಟ ಆತ್‌ಂಡ್. ತುಳು ಭಾಷೆಡ್ ತುಳು ಸಾಹಿತ್ಯ ಚರಿತ್ರೆಡೇ ಸುರುತ್ತವು ಪಂಡ್ ದ್ ಪುದರ್ ಮಲ್ತಿನ ತುಳುನಿಘಂಟ್, ವ್ಯಾಕರಣ, ಗಾದೆ, ಭೂತಾರಾಧನೆ, ಸತ್ಯವೇದ, ಸಂಗೀತ, ಆಪ್ತಸಮಾಲೋಚನೆ, ತುಳು ಪಠ್ಯ, ತುಳುಕ್ಕು ಭಾಷಾಂತರ ಇಂಚಿತ್ತಿ ಸಾಹಿತ್ಯಲು ಇತ್ತೆ ಚರಿತ್ರೆ ಸೇರ್ಂಡಲಾ 179 ವರ್ಷ ಪಿರವುಡು ಪ್ರಾರಂಭ ಅಯಿ ತುಳು ಮುದ್ರಣ ಸಾಹಿತ್ಯೊಲು ಆನಿದ ಕಾಲದ ಭಾಸೆ, ಸಂಸ್ಕೃತಿಲೆನ್ ತೆರಿವೊನ್ನಂಚಿ ಅಡಿಪಾಯೊಲೆನ್ ಪಾಡ್ದ್ಂಡ್. ನೆಡ್ ಮಸ್ತ್ ಸಂಶೋಧನೆಲು ನಡತ್ತ್ಂಡ್ ಅತ್ತಂದೆ ಇನಿಕ್ಕ್‌ಲಾ ನಡತೊಂದುಂಡು.

ಪರಾಮರ್ಶನ ಸೂಚಿ

1. ತುಳು ಸಾಹಿತ್ಯ ಚರಿತ್ರೆ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ, 2007 ನೆಟ್ಟ್ ಲೇಖಕೆರೆಡ್ದ್, ಉಪ್ಪು ಲೇಖನ ಮಿಶನರಿಗಳ ಕಾಲದ ತುಳು ಸಾಹಿತ್ಯ ಬೊಕ್ಕ ಡಾ. ಶ್ರೀನಿವಾಸ ಹಾವನೂರುರೆನ ತುಳುವಿನಲ್ಲಿ ಪ್ರಾಥಮಿಕ ಶಿಕ್ಷಣ, ಇಂಚಿತ್ತಿ ಲೇಖನೊಲೆನ್ ಗಮನಿಸಾಲೆ.

2. ಜಾನ್ ಜೇಮ್ಸ್ ಬ್ರಿಗೆಲ್, ಬೆನೆಟ್ ಜಿ. ಅಮ್ಮನ್ನ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ, 2011

ತುಳುನಾಡಿನಲ್ಲಿ ಬಾಸೆಲ್ ಮಿಶನ್‌ ಮತ್ತಿತರ ಲೇಖನಗಳು...
35
 
[ 36 ]3. ರೆವೆರೆಂಡ್ ಅಗಸ್ಟ್ ಮೆನ್ನರ್, ಪದ್ಮನಾಭ ಕೇಕುಣ್ಣಾಯ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, 1995

4.ತುಳುವರಿವರು, ಪಾದೆಕಲ್ಲು ವಿಷ್ಣು ಭಟ್ಟ(ಸಂ) ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ, 1997

5.ಸ್ವಾತಂತ್ರ್ಯಪೂರ್ವ ತುಳು ಸಾಹಿತ್ಯ, ಕು.ಶಿ.ಹರಿದಾಸ ಭಟ್ಟ (ಸಂ.) ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ, 1997

6.ಬಾಸೆಲ್ ಮಿಶನರಿಗಳ ತುಳು ಟಿಪ್ಪಣಿಗಳು, ಎಂ. ಎಸ್. ದುರ್ಗಾ ಪ್ರವೀಣ್ ಬೊಕ್ಕ ಬೆನೆಟ್. ಜಿ. ಅಮ್ಮನ್ನ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕುಡ್ಲ, 2015

7.ಸಿರಿ, ಶ್ರೀ ಅಮೃತ ಸೋಮೇಶ್ವರ ಅಭಿನಂದನ ಸಂಪುಟ,ಡಾ.ಪುರುಷೋತ್ತಮ ಬಿಳಿಮಲೆ ಮತ್ತಿತರರು (ಸಂ.) ಕಲಾ ಗಂಗೋತ್ರಿ, ಸೋಮೇಶ್ವರ, ಜಾನ್ ಜೇಮ್ಸ್ ಬ್ರಿಗೆಲ್‌ ವ್ಯಾಕರಣದ ಬಗೆಟ್ ಲೇಖನ, ಕುಶಾಲಪ್ಪ ಗೌಡ 1995

8. ತುಳುವಿಗೆ ಬಾಸೆಲ್ ಮಿಶನ್ ಕೊಡುಗೆ, ಎಬ್ರೇಜರ್ ಜತ್ತನ್ನ ಕರ್ನಾಟಕ ತಿಯೊಲಾಜಿಕಲ್ ಕಾಲೇಜ್, ಮಂಗಳೂರು, 2013

9. ಹೊಸಗನ್ನಡದ ಅರುಣೋದಯ; ಡಾ.ಶ್ರೀನಿವಾಸ ಹಾವನೂರ ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, 1974,

10. ಭಾರತದಲ್ಲಿ ಬಾಸೆಲ್ ಮಿಷನ್, ಪೀಟರ್ ವಿಲ್ಸನ್ ಪ್ರಭಾಕರ್, ಸುಧಾನಕಿಟೆಲ್ ಸೆಂಟರ್ ಫಾರ್ ಡೆವಲಪ್ ಮೆಂಟ್ ಸ್ಟಡೀಸ್, ಪುತ್ತೂರು, 2018

36 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
[ 37 ]

ತುಳು ಬಾಸೆಡ್ ಪ್ರಕಟವಾಯಿನ ಸುರುತ್ತ ಪಾಡ್ಡನ ಸಂಗ್ರಹ

ಭಾರತೊಗು ಪ್ರವಾಸಿಲು ಆದ್, ಧರ್ಮ ಪ್ರಚಾರೊಗಾದ್, ಬೇರ ಮಲ್ಪೆರೆ ಬೊಕ್ಕ ಅಧಿಕಾರ ನಡಪಾರೆಗಾದ್ ವಿದೇಶೆಡ್ಡು ಬತ್ತಿ ವಿದೇಶಿಯರ್ ತುಳು ಜಿಲ್ಲೆದ ಚರಿತ್ರೆಡ್ ಪುದರ್ ಮಲ್ತಿನೆನ್ ನಮ ತೆರಿದ. ಚರಿತ್ರೆದ ದಾಖಲೀಕರಣ ಕ್ಷೇತೊಡು ಎಡ್ಗರ್ ಥಸ್ಟನ್, ಬುಕಾನನ್, ಸ್ಟರಕ್, ಸ್ಟುವರ್ಟ್, ಸಾಮುವೆಲ್ ಮಿಲೆ, ಟಿ. ಡಬ್ಲ್ಯು. ವೆನ್ ಅಬ್ಬೆ ದುಬೈ, ಇಂಚಿತ್ತಿನಕುಲು ಬೇಲೆ ಮಲ್ತಿನಾಂಡ ರಾಬರ್ಟ್ ಕಾಲ್ಡ್ ವೆಲ್, ಜೆ.ಜೆ. ಬ್ರಿಗೆಲ್, ಅಗಸ್ಟ್ ಮೆನ್ನರ್, ಎ.ಸಿ. ಬರ್ನೆಲ್, ರಿಟ್ಟರ್, ಬುನ್ಜ್, ಅಮ್ಮನ್, ಗ್ರೇನರ್, ಇಂಚಿತ್ತಿನಕುಲು ತುಳು ಬಾಸೆ ಬೊಕ್ಕ ಸಂಸ್ಕೃತಿದ ಬಗೆಟ್ ದಾಖಲೀಕರಣದ ಬೇಲೆ ಮಲ್ತಿನಕುಲು.

ಭಾರತೊಗು ಧರ್ಮ ಪ್ರಚಾರೊಗು ಬತ್ತಿ ಕುಡ್ಲಡ್ ತನ್ಕುಲೆ ಸುರುತ್ತ ಕೇಂದ್ರ ಪ್ರಾರಂಭ ಮಲ್ಪುನಗ ಅಕಲೆಗ್ ತೆರಿದ್ ಬತ್ತಿನಿ ಮುಲ್ತ ವ್ಯವಹಾರ ಬಾಸೆ ತುಳು, ತುಳು ಇಜ್ಜಾಂಡ ಮೂಲು ವಾ ವ್ಯವಹಾರಲಾ ನಡಪೂಜಿ ಪಂಡ್ದ್ ಅಂಚ ಮೂಲು ಬತ್ತಿನಕುಲು ಮುಲ್ತ ಸ್ಥಳೀಕ ಬಾಸೆಲೆನ್ ಕಲ್ವೆರೆ ಸುರು ಮಲ್ತೆರ್. ಸುರುಟ್ಟು ಬತ್ತಿನ ಮೂಜಿ ಮಿಶನರಿನಕುಲು ಮೂಜಿ ಬಾಸೆಲಾಯಿ ಕನ್ನಡ ತುಳು ಕೊಂಕಣಿ ಕಲ್ತೆರ್ ಪಂಡ್ದ್ ವರದಿ ಪನ್ಪುಂಡು. ಬಾಸೆಲ್ ಮಿಶನರಿನಕಲ್ನ ಬೇಲೆ ಕುಡ್ಲಡ್ ಸುರು ಆಯಿನ ಇಡೀ ತುಳುನಾಡ್, ಅತ್ತಂದೆ ಕೇರಳ, ಕಾರವಾರ, ಉತ್ತರ ಕರ್ನಾಟಕ ಮುಟ್ಟಲಾ ನಡತ್ತಂಡ್. ವರ್ಷ ವರ್ಷ ಇಡೆಗ್ ಬರ್ಪಿ ಮಿಶನರಿನಕುಲು ತುಳು ಬಾಸೆ ಕಲ್ಪರೆಗೆಂದೇ ತುಳು ನಾಡ್‌‌‌ದ ಕುಡ್ಲ, ಕದಿಕೆ, ಮುಲ್ಕಿ, ಉಚ್ಚಿಲ, ಪಾದೂರು, ಕುತ್ಯಾರ್, ಸಾಂತೂರು, ಪಾಂಗಳಗುಡ್ಡೆ, ಉದ್ಯಾವರ, ಅಂಬಾಡಿ, ಮಲ್ಪೆ, ಕಲ್ಯಾಂಪುರ, ಕುಂದಾಪುರ, ಹೆಬ್ರಿ ಚಾರ, ಕಾರವಾರ, ಕಾರ್ಕಳ, ಬೈಲೂರು, ಮೂಡಬಿದ್ರೆ, ಮುಡಾರ್, ಇಂಚಿತ್ತಿ ಜಾಗುಲು ಅತ್ತಂದೆ ಅಕುಲು ಸ್ಥಾಪನೆ ಮಲ್ತಿ ಸಭೆ ಬೊಕ್ಕ ಸಾಲೆಲೆಡ್ ಪಾಠ ಕಲ್ಪಾವು ಮಾಸ್ಟುನಕಲೆಡ್ ತುಳು ಬಾಸೆನ್ ಕಲ್ಲೊಂದಿತ್ತೆರ್. ಅಕಲೆಗ್ ಧರ್ಮ ಪ್ರಚಾರೊಗು, ಮುಲ್ಪದ ಜನೊಕ್ಷೆ ಒಟ್ಟಿಗೆ ವ್ಯವಹಾರ ಮಲ್ಪೆರೆ, ಕ್ರೈಸ್ತ ಸಭೆಕ್ಕುಲೆಡ್ ಬೋಧನೆ ಕೊರಿಯೆರೆ, ಸಾಲೆಡ್ ಪಾಠ ಮಲ್ಪೆರೆ ತುಳು ಬಾಸೆ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.
37
 
[ 38 ]ಅಗತ್ಯದವು ಆದಿತ್ತ್ಂಡ್. ಐಕಾದ್ ತುಳು ಕಲ್ತೆರ್. ತುಳು ಕಲ್ಪುನಗ ತುಳು ಸಂಸ್ಕೃತಿಲೆನ್ ತೆರಿವೊಂಡೆರ್. ಅವೆನ್ ತನ್ಕುಲೆ ಪಾಸಡಿದಕುಲೆಡ ಬರೆಪಾದ್ ದೀವೊಂಡೆರ್ ಓದಿಯೆರ್. ಬತ್ತಿನಕಲೆಗ್ ಉಪಯೋಗ ಆವಡ್ ಪಂಡ್ ಪ್ರಕಟ ಮಲ್ಪೆರೆಲಾ ಸುರು ಮಲ್ತೆರ್.

Charles E. Gover ಬರೆತಿನ Folk Songs of Southern India ಪನ್ಪಿನ ಬೂಕೊಂಜಿ 1871 ಪ್ರಕಟ ಆತ್ಂಡ್. ಆ ಬೂಕುದ ಪುದರ್‌ನ್ ತೂದು ತುಳುತ್ತ ಜನಪದ ಪದಕ್ಕೊಲು ಇಜ್ಜಾಂಡ ಪಾಡ್ಡನ ನೆಟ್ಟುಪ್ಪು ಪಂಡ್‌ದ್ ನಾಡಿಯೆ. ಆಂಡ ಯಾನ್ ಎನ್ನಿನವು ತಪ್ಪಾದಿತ್ತ್ಂಡ್. ಕನ್ನಡ, ಬಡಗ, ಕೊಡವ, ತಮಿಳು, ಕುರಲ್, ಮಲಯಾಲಂ, ತೆಲುಗು ಈ ಮಾತ ಬಾಸೆದ ಪದೊಕ್ಕುಲು ಇತ್ತ್ಂಡ್. ಆಂಡ ತುಳು ಬಾಸೆದ ಒಂಜೇ ಒಂಜಿ ಪದ ಅಥವಾ ಒಂಜಿ ಪಾಡ್ಡನ ಆ ಬೂಕುಡು ಇತ್ತಿಜಿ.

ನೆಕ್ಕ್ ಕಾರಣಲಾ ಉಂಡು ಆ ಬೂಕುದ ಸಂಗ್ರಹೊಲು ಮುದ್ರಣ ಸಾಹಿತ್ಯ ಪ್ರಾರಂಭ ಆಯಿ ಬೊಕ್ಕದ ಪದೊಕುಲು. ತುಳು ಸಾಹಿತ್ಯ 1841ಟ್ಟ್ ಮುದ್ರಣ ಆವರೆ ಸುರು ಆದ್ 1864ಕ್ಕ್ ಜಿ. ಕೆಮರ‌ರ್ ಅಗಸ್ಟ್ ಮೆನ್ನರ್ ಬೊಕ್ಕ ಜೆ. ಅಮ್ಮನ್ನ್ ಪನ್ಪಿ ಮೂಜಿ ಬಾಸೆಲ್ ಮಿಶನರಿಳೆಡ್ದ್ ತುಳುಟ್ಟು ಕ್ರೈಸ್ತ ಪದೊಕ್ಕುಲು ಬೂಕು ಬುಡುಗಡೆ ಆತ್ಂಡ್. ಆಂಡ ಜನಪದ ಸಾಹಿತ್ಯೊಡು 1871 ಮುಟ್ಟ ಪದೊಕ್ಕುಲು ಇಜ್ಜಾಂಡ ಪಾಡ್ಡನ ರೂಪದ ಬೂಕುಲು ಮುದ್ರಣ ಅದಿತ್ತ್‌ಜಿ. ಅಂಚಾದ್ ಚಾರ್ಲ್ಸ್ ಇ. ಗೋವರ್‌ನ ಬೂಕುಡು ತುಳು ಜನಪದ ಪದ ಸೇರ್ಪಡೆ ಆತ್‌ಜಿ ಪಂಡ್ದ್ ಪನೊಲಿ.

ತುಳು ಪಾಡ್ಡನ ಇಜ್ಜಾಂಡ ಜನಪದ ಸಾಹಿತ್ಯೊಡು ತುಳುಟ್ಟು ಪ್ರಕಟ ಆಯಿನ ಸುರುತ್ತ ಬೂಕೇ ಅವು ಅಗಸ್ಟ್ ಮೆನ್ನರ್ 1886ಟ್ಸ್ ಪ್ರಕಟ ಮಲ್ತಿನ 'ಪಾಡ್ಡನೊಲು' ಪನ್ಪಿನ ಬೂಕು. ರಡ್ಡನೆದವು ಇಂಗ್ಲಿಷ್‌ಡ್ ತುಳು ಜನಪದ ಇಜ್ಜಾಂಡ ಭೂತಾರಾಧನೆ ವಿಭಾಗೊಡು ಪ್ರಕಟ ಆತಿನ ಬೂಕು ಅವು ಎ.ಸಿ. ಬರ್ನೆಲ್‌ನ. The Devil Worship of Tuluvas. ಈ ಬೂಕು 1894 ಡ್ದ್ 1897 ಮುಟ್ಟ ಇಂಡಿಯನ್ ಎಂಟಿಕ್ವೆರಿ ಪನ್ಪಿ ಒಂಜಿ ಇಂಗ್ಲಿಷ್ ಪತ್ರಿಕೆಡ್ ಪ್ರಕಟ ಅತಿನ ಲೇಖನೊಲೆ ಸಂಗ್ರಹ ಆದುಂಡು. ಈ ಬೂಕುನು 2008 ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟ ಮಲ್ತ್‌ಂಡ್.

ತುಳುನಾಡ್‌ದ್ ಭೂತಾರಾಧನೆ ವಿಭಾಗೊಡು ಸುರುಟ್ಟು ಪ್ರಕಟ ಆಯಿ 'ಪಾಡ್ಡನೊಲು' ಪನ್ಪಿ ಬೂಕುನು ಸಂಗ್ರಹ ಮಲ್ತ್‌ದ್ ಬೊಲ್ಪುಗು ಕನೈದಿನಾ‌ರ್ ಬಾಸೆಲ್ ಮಿಶನ್ ಸಂಸ್ಥೆದ ಒರಿ ವಿದೇಶಿ ಮಿಶನರಿ ಆಗಸ್ಟ್ ಮೆನ್ನರ್ (1828-1891).


38
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
———●
[ 39 ]

ಜರ್ಮನಿದ ವುಟೆಂಬರ್ಗ್‌ದ ಒಸ್‌ವೆಲ್ ಪನ್ಪಿ ಊರುಡು ಪುಟ್ಟಿನ ಮೇರ್ 1857ಟ್ಟ್ ಭಾರತೊಗು ಬತ್ತೆರ್. ಕ್ರೈಸ್ತ ಮತ ಪ್ರಚಾರೊಗು ಬೈದಿನ ಮೇರ್ ತುಳುನಾಡ್‌ಡ್ 33 ವರ್ಷ ಇತ್ತ್ ದ್ ಬಾಸೆಲ್ ಮಿಶನ್ ಸಂಸ್ಥೆದ ಧರ್ಮಬೋಧಕೆ ಆದ್ ಐತೊಟ್ಟಿಗೆ ಈ ಬೇಲೆ ಮಲ್ಲೊಡಾಂಡ ಅಗತ್ಯ ಇತ್ತಿ ತುಳು ಬಾಸೆನ್ ಕಲ್ತಿನಿ ಮಾತ್ರ ಅತ್ತಂದೆ ನನ ಬತ್ತಿ ವಿದೇಶಿಯರೆಗ್ ತೆರಿಯೊನ್ರೆ ಕಲ್ಪೆರೆಗ್ ಬೋಡಾದ್ ತುಳು ಬಾಸೆ ಬೊಕ್ಕ ಸಂಸ್ಕೃತಿದ ದಾಖಲೀಕರಣ ಮಲ್ತದ್ ಮಲ್ಲ ಸಾಧನೆ ಮಲ್ತದೆ‌ರ್. ಕುಡ್ಲಡ್ ತನ್ನ ಬೇಲೆ ಸುರು ಮಲ್ತಿನ ಮೇರ್ ಕದಿಕೆ, ಮುಲ್ಕಿ, ಉಚ್ಚಿಲ, ಪಾದೂರು, ಕುತ್ಯಾರ್, ಸಾಂತೂರು, ಉಡುಪಿ ಇಂಚ ತುಳುನಾಡ್‌ದ ಜಾಗೆಲೆಡ್ ಶಾಲೆ, ಕ್ರೈಸ್ತರ ದೇವಾಲಯ, ಮುಲ್ಕಿ ಬೊಕ್ಕ ಉಡುಪಿಡ್ ಇತ್ತಿ ಅನಾಥ ಸಾಲೆಡ್ ಬೇಲೆ ಮಲ್ತಿನಾರ್. ಮೆರೆನ ಜತೆಟ್ ಅರೆನ ಸಂಸಾರದಕುಲುಲಾ ತುಳುನಾಡ್‌ಡಿತ್ತೆರ್.

ಭಾರತೊಡು ತುಳು ಮಿಶನರಿ ಪಂಡೇ ಇತ್ತಿನಾರ್ ಅಗಸ್ಟ್ ಮೆನ್ನರ್. ಸಾಲೆಲೆಡ್ ಬೊಕ್ಕ ಕ್ರೈಸ್ತ ಸಾಹಿತ್ಯ ರಚನೆಗಾದ್ ತುಳು ಸಾಹಿತ್ಯ ಸೇವೆನ್ ಮಲ್ತಿನಾರ್. ತುಳು ಸತ್ಯವೇದದ ತರ್ಜುಮೆದಾರಾದ್, ಕ್ರೈಸ್ತ‌ ದೇವಾಲಯೊಡು ಬಳಕೆ ಮಲ್ಪು ಗೀತೊಳೆ ಪುಸ್ತಕೊಡುಪ್ಪು 168ತುಳು ಪದೊಕ್ಲಿನ್ ತುಳುಕ್ಕು ತರ್ಜುಮೆ/ ರಚನೆ ಮಲ್ತ್ದೆರ್. ತುಳು ಬೂತವಿದ್ಯೆಯು (1867) ಸಹಸ್ರಾರ್ಧ ತುಳು ಗಾದೆಳು(1874) ತುಳು ಇಂಗ್ಲಿಷ್ ನಿಘಂಟು (1886) ಇಂಗ್ಲಿಷ್ ನಿಘಂಟು (1888) ಪಾಡ್ಡನೊಲು (1886) ತುಳುವೆರೆಡ್ ನಡಪು ಭೂತ ಸೇವೆ(1891)ತೌಳವ ಗಾಥಾಮಂಜರಿ ಅಂದ್‌ಂಡ ಸಾರ ತುಳು ಗಾದೆಳು (1896) ಉಂದು ಮೇರ್ ತುಳು ಬಾಸೆ ಬೊಕ್ಕ ಸಂಸ್ಕೃತಿದ ಮುದ್ರಣ ಸಾಹಿತ್ಯಗು ಅಡಿಪಾಯ ಪಾಡಿನ ಬೇಲೆಲು.

ಭೂತಾರಾಧನೆದ ಬಗೆಟ್ ಪಾಡ್ಡನೊಲು ಪುಸ್ತಕೊಡುಪ್ಪು ಪಾಡ್ಡನೊಲು ಅತ್ತಂದೆ ಬೇತೆ ಬೇತೆ ಪಾಡ್ದೊನೊಲೆನ್ ಲಾ ಸಂಗ್ರಹ ಮಲ್ತ್ ದೆರ್. ಉಂದೆಟ್ ಕೆಲವು ಎ.ಸಿ.ಬರ್ನೆಲ್‌ನ ಡೆವಿಲ್ ವರ್ಷಿಪ್ ಆಫ್ ತುಳುವಾಸ್ ಪನ್ಪಿ ಇಂಗ್ಲಿಷ್ ಬೂಕುಡು ಉಂಡು. ನೆಟ್ಟ ಭೂತದ ಪುಟ್ಟು ಬೊಕ್ಕ ಪ್ರಸಾರದ ಬಗೆಟ್ ಬರೆತಿ ಲೇಖನೊಲುಲಾ ಉಂಡು. ಅಂಚಾದ್ ಮೆನ್ನರ್‌ನ್ ತುಳು, ಇಂಗ್ಲಿಷ್, ಜರ್ಮನ್ ಬಾಸೆಡ್ ಭೂತಾರಾಧನೆದ ಸಾಹಿತ್ಯೋಡು ಅಗ್ರಗಣ್ಯೆರ್ ಪಂಡೇ ಪನೊಲಿ. ಭೂತಾರಾಧನೆದ ಬಗೆಟ್ ಮೆನ್ನ‌ರ್ ಮಲ್ತಿನ ದಾಖಲೀಕರಣೋದ ಬಗೆಟ್ ನನಲಾತ್ ಸಂಶೋಧನೆ ಸಾದ್ಯವಾದುಂಡು.

ಮೆನ್ನರ್ 1886ಟ್ಸ್ ಪ್ರಕಟ ಮಲ್ತಿನ 'ಪಾಡ್ಡನೊಲು' ಪನ್ಪಿ ಬೂಕು ತುಳು ಜಾನಪದ ಸಾಹಿತ್ಯೋಡು ಸುರತ್ತವು ಅತ್ತಂದೆ ಭೂತಾರಾಧನೆದ ಪಾಡ್ಡನದ ಸುರುಟ್ಟು [ 40 ]ಮುದ್ರಣ ಆಯಿ ಬೂಕು ಆದುಂಡು. ನೆಟ್ಟ 21 ಭೂತೊಲೆ ಪಾಡ್ಡನ ಇಜ್ಜಾಂಡ ಕತೆಕ್ಕುಲು ಉಂಡು, ಈ ಬೂಕುಗು ಪಾಡ್ಡನ ಪಂಡ್ ಪುದರ್ ದೀತ್‌ಂಡಲಾ ನೆಟ್ಟ್ ಉಪ್ಪುನವು ಪೂರಾ ಪಾಡ್ಡನ ಅತ್ತ್. ಕೆಲವು ಪಾಡ್ಡನ ರೂಪೊಡು ತೋಜಿಂಡಲಾ ಕೆಲವು ಕತೆ ರೂಪೊಡುಲಾ, ಕೆಲವು ಭೂತೊಲು ಸೃಷ್ಟಿ ಆದ್ ತನ್ಕುಲೆ ಕಾರ್ನಿಕ ತೋಜಾವೊಂದು ಆರಾಧನೆ ಮಲ್ತೊನಂಚಿ ವಿಚಾರೊನು ತೆರಿಪಾವುಂಡು.

ಮೆನ್ನರ್‌ನ `ಪಾಡ್ಡನೊಲು' ಪುಸ್ತಕೊಡುಪ್ಪು ಸುರುತ್ತ ಬೊಬ್ಬರ್ಯ ಪಾಡ್ಡನೊಡು ಬೊಬ್ಬರ್ಯನ ಆದಿ ದೀವು(ಲಕ್ಷದೀಪ) ಪುಟ್ಟುದಿನಿ ಗೋವೆಡ್ ಬಳತಿನಿ ಕೊಚ್ಚಿಡ್ ಅಮ್ಮೆ ಪಾತ್‌ಮ ಅಮ್ಮೆ ಸುಲಿಕಲ್ಲ ಮುರವ ಬ್ಯಾರಿ ಅಕಲೆಗ್ ಕಾಯಿರಿ, ಕಲಸಪ್ಪೆ, ಗೆಂಡ ಬೊಮ್ಮಾಯೆ, ಸಿಂಕಿರಿ ಸುವುಣೆ, ಸುಮುಣೆ ಅನಂತೆ, ಸರಪೊಳಿ, ಸುಣ್ಣ ಜಾನುನಾಯಿಕೆ ಪನ್ಪಿ ಪುದರ್‌ದ ಏಳ್ ಜನ ಬಾಲ್ಲು ಪಂಡ್ ಬರೆಪುಂಡು. ಈ ಪಾಡ್ಡನ/ಕತೆಟ್ ಜೋಕುಲು ಬರವು ಕಲ್ಪುನ ವಿಚಾರೊಲು ಉಂಡು ನೆಟೆ ತಾಳೆಗರಿತ್ತ ಬರವು, ಹೊಯ್ಯದ ಬರವು, ಪಲಯದ ಬರವು ಇಂಚ ಅಪಗದ ಕಾಲದ ಬರವು ಕಲ್ಪುನ ಒಂಜಿ ವಿವರ ಉಂಡು. ಓಡ/ಕಟ್ಟುನ ವಿಚಾರೊಡು ಓಡೊಗು ಮರ ಅಜಪುನ ಐನ್ ಕಟ್ಟುನ ವಿಚಾರೊಲು ವಿವರವಾದ್ ಇತ್ತಂಡ ಬೇರೊಗಾದ್ ಅವೆನ್ ತಯಾರ್ ಮಲ್ತ್‌ದ್ ತಿಂಗೊಲುಕಟ್ಟೆ ಊರೂರು ಬೇರೊಗು ಪೋಪಿನ ವಿಚಾರ ಉಂಡು. ಬೇತೆ ಬೇತೆ ಊರುಗು ಮಂಜಿಡ್ ಪೋದು ಒಣಸ್ ತಿನಸ್‌ದ ಸಾಮಾನುಲು ಅತ್ತಂದೆ ಬೊಳ್ಳಿ ಬಂಗಾರ್‌ದಂಚಿ ಬೇತೆ ಬೇತೆ ನಮೂನೆದ ಬೇರ ಮಲ್ಪುನವು, ದುರಂತೊಡು ಆ ಮಂಜಿ ಪುಡಾದ್ ಅಕುಲು ಕಡಲ್ ಪಾಲಾಪಿನ ಕತೆ ಉಂಡು, ಬೊಬ್ಬರ್ಯ ಭೂತ ಉಂಡಾಯಿನ ಬೊಕ್ಕ ಆರಾಧನೆದ ಬಗೆಟ್ ವಿವರ ಉಂಡು, ಬೇತೆ ಬೇತೆ ಊರುಡು ಕಲೆ ತೋಜಾವೊಂದು ನಿಲೆ ಆದ್ ಆರಾಧನೆ ಪಡೆವೊನ್ನ ವಿಚಾರೊಲೆನ್ ತೆರಿಪಾಪುಂಡು. ಕಡಂಜಾ‌ರ್, ಕೊಡಿಮಲೆ, ಪಳ್ಳಿದ ಪಳ್ಳಿ, ಕುಂಬಳೆ, ಪಂಜಿಮಾ‌ರ್, ಮ‌ದ್ ಮಾಲೆಗುಂಡಿ,ತಂಬಡಗುಂಡಿ, ತಾರಡಿ ಪರಿವು(ಎಡನೀ‌ರ್) ಮಡಂಬೈಲ್ ಉದ್ಯರ್, ಪೊನ್ನೆದಂಗಡಿ ಇಂಚ ತುಳುನಾಡ್‌ದ್ ಮಸ್ತ್ ಊರುಳೆ ಪುದರ್‌ ಬರ್ಪಿನವು ಅತ್ತಂದೆ ಬ್ಯಾರಿ, ಶೆಟ್ಟಿ, ಮರಕಲೆ, ಅಚ್ಚವನ್(ಆಚಾರಿ) ಪೂಜಾರಿ, ಬೈದ್ಯೆ, ಬಾರಗೆರ್, ಬಲ್ಲಾಳೆ, ಬ್ರಾಣೆ ಇಂಚ ಮಸ್ತ್ ಜಾತಿದ ಪುದರುಲು ಬರ್ಪುಂಡು, ಬೇರ, ಬರವು, ಧರ್ಮ ಸಾಮರಸ್ಯದ, ಊರುದ ಪುದರುಲು ಅದ್ಯಯನ ಮಲ್ಪೆರೆ ಈ ಪಾಡ್ಡನ ಒಂಜಿ ಅಕರನೇ ಅಂದ್. ಉಂದುವೇ ಪಾಡ್ಡನ ಎ.ಸಿ. ಬರ್ನೆಲ್‌ನ ಬೂಕುಡು Story of Bobbarye ಪಂಡ್ ಇಂಗ್ಲಿಷ್‌ ಕತೆಲಾ ಉಂಡು ತುಳುನು ಇಂಗ್ಲಿಷ್‌ಡ್ ಲಿಂಪ್ಯಂತರವಾದಲಾ ಪ್ರಕಟ ಆತ್‌ಂಡ್.

40

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

[ 41 ]

ಪಂಜುರ್ಲಿ-1, ಪಂಜುರ್ಲಿ-2, ಪಂಜುರ್ಲಿ-3 ಇಂಚ ಈ ಮೂಜಿ ಪಾಡ್ಡನೊಲು ಮೆನ್ನರ್ ಸಂಗ್ರಹೊಡು ಉಂಡು. ಈ ರಡ್ಡ್ ಪಾಡ್ಡನೊಳು ಎ.ಸಿ. ಬರ್ನೆಲ್‌ನ ಇಂಗ್ಲಿಷ್ ಬೂಕುಡು (1)Panjurli (2) Story of Panjurli, (3) Origin of Bhuta Panjurli, (4) Amtadi Panjurlij ಈ ನಾಲ್ ಪಾಡ್ಡನೊಳು ಉಂಡು. ಸುರುತ್ತ ಮೂಜಿ ಮೆನ್ನ‌ರ್ ಸಂಗ್ರಹೊಡು ಇತ್ತಿನವು ಅಮ್ಟಾಡಿ ಪಂಜುರ್ಲಿ ಮಾತ್ರ ಮೆನ್ನ‌ರ್ ಸಂಗ್ರಹೊಡು ಇಜ್ಜಿ. ಪಂಜುರ್ಲಿ ಭೂತದ ಹುಟ್ಟು ಪ್ರಸಾರ ಬೊಕ್ಕ ಆರಾಧನೆದ ಬಗೆಟ್ ತೆರಿಪಾವುಂಡು. ಕೋರಿಪುಟ್ಟಿ ಊರು ಕೊಕ್ಕಡ, ಆನೆ ಪುಟ್ಟಿ ಊರು ಆನೆ ಗುಂಡಿ, ಎರುಪುಟ್ಟಿ ಊರು ಗಟ್ಟದ ಮಿತ್ತ್ ಇಂಚಿತ್ತಿ ಊರುದ ವರ್ಣನೆಲು ಉಲ್ಲ. ಜಾನುವಾರು ಜಾತ್ರೆ, ಪಂಬದ ಕಾಂತುನು ಭೂತ ಕಟ್ಟರೆ ಲೆಪ್ಪುನು, ಬಲ್ಲಾಲ್ ಕಲ್ಪಾವುನು, ಪಂಜಿದ ಮುಗ ಮಲ್ಲಾವುನವು, ತಿರುಪತಿ, ಧರ್ಮಸ್ಥಳ ಕಡೆಟ್ಟ್ ಪಂಜುರ್ಲಿ ನೆಲೆ ಆಪಿನ ವಿವರೊಲು ಉಂಡು.

ಜುಮಾದಿ, ಸಾರಾಳ ಜುಮಾದಿ ಪಂಡ್ ರಡ್ಡ್ ಪಾಡ್ಡನೊಳು. ಈ ರಡ್ ಪಾಡ್ಡನೊಲು ಎ.ಸಿ. ಬರ್ನೆಲ್ ಬೂಕುಡು Song of Jumadi (2) Sarala Jumadi ಪನ್ಪಿ ಪುದರ್‌ಡ್ ಇಂಗ್ಲಿಷ್‌ಡ್ ಉಂಡು. ಈ ರಡ್ ಪಾಡೊನೊಲೆಡ್‌ಲಾ ಬೇತೆ ಬೇತೆ ಕಡೆಟ್ಟ್ ನಿಲೆ ಆಪಿನ ಸಂಗತಿಲು ಮಾತ್ರ ಉಂಡು.

ಜಾರಂದಾಯೆ ಭೂತದ ಎಲ್ಯ ಪಾಡ್ಡನ ಉಂದು. ನೀರ್‌ಮಾರ್ಗೊಡು ಮಣಿಯಳ್ತ ದೈವ ಆದ್ ಮೂಡುಶೆಡ್ಡೆದ ಜಾರೊಡು ಜಾರಂದಾಯೆ ಬೊಕ್ಕ ಬೋಳುರು ಮುಟ್ಟ ಬರ್ಪಿನ ಕಥೆ ನೆಟ್ಟುಂಡು. ಈ ಪಾಡ್ಡನ ಎ.ಸಿ. ಬರ್ನೆಲ್‌ನ ಬೂಕುಡು (1) Acts of Jarantaya (2) The Story of Jarantaya ಇಂಚ ರಡ್ ಪಾಡ್ಡನ ಉಂಡು. ನೆಟ್ ಸುರುತ್ತ ಕತೆ ಜಾರಂದಾಯೆ ಕೂಳೂರು-ಮುಲ್ಕಿ ಸುದೆಟ್ಸ್ ಪೋಪಿನವು ಸಾನದ ಜಾರಂದಾಯೆ, ಕೊಟ್ಟಿಗೆ ಜಾರಂದಾಯೆ, ಜಾವಡಿ ಜಾರಂದಾಯೆ ಈ ಮೂಜಿ ಪುದರ್‌ಡ್ ಆರಾಧನೆ ದೆತೊನ್ನ ವಿವರ ಉಂಡು. ರಡ್ಡನೆದವು ಮೆನ್ನರ್‌ನವು ಅದಿತ್ತ್ ದ್ ಇಂಗ್ಲಿಷ್‌ಡ್ ಉಂಡು.

ಕಾಂತುನೆಕ್ರಿ ಪನ್ಪಿ ಭೂತದ ಪುದರ್ ಇತ್ತ್ಂಡಲಾ ಪಣಂಬೂರು ಪಡಾವುಡು ಒಂಜಿ ಮಾಯದ ಪೆಟ್ಟಿಗೆ ತಿಕ್ಕುನು, ಒರಿಯಗ್ ಭೂತ ವಸಯ ಆಪಿನವು ಸಾನ ಕಟ್ಟಿದ್ ನಂಬುನ ಎಲ್ಯ ವಿವರ ಉಂಡು. ಉಂದು ಬಜೀ ಎಲ್ಯ ಒಂಜಿ ಪಾಡ್ಡನ. Acts of Kantunekri Bhuta ಪನ್ಪಿ ಪುದರ್‌ಡ್ ಈ ಭೂತದ ಕತೆ ಎ.ಸಿ. ಬರ್ನೆಲ್ ಬೂಕುಡು ಇಂಗ್ಲಿಷ್‌ಡ್ ಉಂಡು.

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

41 [ 42 ] ಮಗ್ರಂದಾಯ ಭೂತದ ಪುಟ್ಟುದ ಬಗೆಟ್‌ಲಾ, ಬಟ್ಟೆರ್ ಉಳ್ಳಾಯ ಪನ್ಪಿನರೆಗ್ ಸೊಪ್ನೊಡು ತೋಜಿದ್ ಬರ್ಪಿನವು ಬೊಕ್ಕ ಆರಾಧನೆದ ವಿಚಾರೊಲು ಉಂಡು Acts of Magrandaya ಪನ್ಪಿ ಪುದರ್‌ಡ್ ಎ.ಸಿ. ಬರ್ನೆಲ್‌ನ ಬೂಕುಡು ಇಂಗ್ಲಿಷ್‌ಡ್ ಉಂಡು ತುಳುತ್ತ ಲಿಪ್ಯಂತರಲಾ ಉಂಡು.

ಕಲ್ಕುಡೆ, ಕಲ್ಲುರ್ಟಿ, ಹೊಸ ಭೂತ ಪನ್ಪಿ ಮೂಜಿ ಪಾಡ್ಡನ ಉಂಡು. ನೆಟ್ ಕಲ್ಲುರ್ಟಿ ಪಾಡ್ಡನ ಮಲ್ಲವು. ಬೊಕ್ಕ ರಡ್ಡ ಕಲ್ಕುಡಗ್ ಸಂಬಂಧ ಪಡೆಯಿನವು. ಮೂಜಿ ಪಾಡ್ಡನ ಕಲ್ಕುಡ ಕಲ್ಲುರ್ಟಿ ಭೂತೊಲೆಗ್ ಸೇರಿನ ಕತೆ ಆದಂಡು, ಪುಟ್ಟು, ಕಲ್ಕುಡ ಕಲ್ಲುರ್ಟಿನ ಕುಟುಂಬದ ವಿವರ ಉಂಡು. ಕಂಚಿದ ಬೇಲೆ, ಮರತ್ತ ಬೇಲೆ, ಕಲ್ಲ್ ದ ಬೇಲೆ, ಚಿತ್ರದ ಬೇಲೆ, ಕರ್ಬದ ಬೇಲೆ ಇಂಚ ಅಗಲ್ನ ಕಸುಬುದ ಬಗೆಟ್ ವಿವರ ಉಂಡು. ಕಲ್ಲ್ಲ್ ದ ಗೊಮ್ಮಟ ಕೆತ್ತನೆದ ಬೇಲೆ ಮಾತ್ರ ಅತ್ತಂದೆ ದೇವಸ್ಥಾನ, ಅಂಗಣ, ಪಾಗಾರ ನಿರ್ಮಾಣ ಮಲ್ಲುನ ಬಗೆಟ್‌ಲಾ ವಿವರೊಲು ಉಂಡು. ಪೊಸ ಭೂತ ಪಾಡ್ಡನೊಡು ಉಡುಪಿ ಬೆರಣೆರೆ ತುಳು ಬಳಕೆ ಹೆಚ್ಚಾದ್ ತೋಜಿದ್ ಬರ್ಪುಂಡು, ಹಬ‌ಡ್, ಹಂಡಿ, ಹೂವ, ಹಮ್ಮನೊ ಹೋಜಿಂಡ್, ಹುಬಾರ, ಹುದೆಕ್, ಹಿಗೆಲ್‌ಗೆ, ಹೊಟ್ಟೆಲ್ ಇಂಚಿನ ಪದೊಕುಲು ತಿಕ್ಕುವ.Song of Kalkuda, Story of Kallurti ಪನ್ಪಿ ಪುದರ್‌ಡ್ ಎ.ಸಿ. ಬರ್ನೆಲ್‌ನ ಬೂಕುಡು ಕಲ್ಕುಡ ಬೊಕ್ಕ ಕಲ್ಲುರ್ಟಿ ಪಾಡ್ಡನದ ಇಂಗ್ಲಿಷ್ ತರ್ಜುಮೆ ಬೊಕ್ಕ ತುಳು ಲಿಪ್ಯಂತರ ಉಂಡು.

ಪೊಸಮಹರಾಯೆ ಉಂದು ಒಂಜಿ ಎಲ್ಯ ಪಾಡ್ಡನ ಪುಟ್ಟುದ ಬಗೆಟ್ ಇಜ್ಜಿ. ನೇಮ ದೆತೊನುನ ಬಗೆಟ್ ವಿವರ ಉಂಡು. ನೆಟ್ ಬೆರಣೆರೆ ಬಾಸೆ ಪ್ರಯೋಗ ಉಂಡು. ಹಿರ್ತ, ಹೋಜುಜ್ಯೊ ಇಂಚಿತ್ತಿ ಪದೊಕುಲು ಬಳಕೆ ಆತ್‌ಂಡ್. Posa Maharaye ಪನ್ಪಿ ಪುದರ್‌ಡ್ ಎ.ಸಿ. ಬರ್ನೆಲ್‌ನ ಬೂಕುಡು ಇಂಗ್ಲಿಷ್‌ ತರ್ಜುಮೆ. ಉಂಡು.

ಅತ್ತಾವರ ದೈಯೊಂಗುಳು ಭೂತದ ಪಾಡ್ಡನೊಡು ಪುಟ್ಟು ಬೊಕ್ಕ ಪ್ರಸಾರದ ಬೊಕ್ಕ ಆರಾಧನೆದ ಬಗೆಟ್ ವಿವರೊಲು ಉಂಡು ಭಂಡಾರಿನ ಬೇಲೆದ ವರ್ಣನೆ, ದುತ್ತೈತ, ಬೊಕ್ಕ ಊರುಲೆ ಪುದರುಲು ಮಸ್ತ್ ದಾಖಲ್ ಅತ್‌ಂಡ್. Attavara Daiyongulu ಪನ್ಪಿ ಪುದರ್‌ಡ್ ಎ.ಸಿ. ಬರ್ನೆಲ್ ಬೂಕುಡು ನೆತ್ತ ಇಂಗ್ಲಿಷ್ ತರ್ಜುಮೆ ಉಂಡು,

ಮುಡದೇ‌ರ್ ಕಾಳಬೈರವೆ ಪನ್ಪಿ ಪಾಡ್ಡನೊಡು ಪುಟ್ಟು ಬೊಕ್ಕ ಆರಾಧನೆ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

[ 43 ]

ಬಗೆಟ್ ಉಂಡು. ಊರುದ ಪುದರುಲು ಹೆಚ್ಚ ಬಳಕೆ ಆತ್‌ಂಡ್. Mudader Kalabhairava ಪನ್ಪಿ ಪುದರ್‌ಡ್ ಎ.ಸಿ. ಬರ್ನೆಲ್ ಬೂಕುಡು ನೆತ್ತ ಇಂಗ್ಲಿಷ್ ತರ್ಜುಮೆ ಉಂಡು.

ತೊಡಕಿನಾರ್ ಭೂತದ ಪಾಡ್ಡನೊಡು ಪುಟ್ಟು ಬೊಕ್ಕ ಪ್ರಸಾರದ ವಿಚಾರೊಲು ಉಂಡು ಬಂಡಾರಿನಕಲ್ಪ ಬೇಲೆದ, ಪರಿಮಳ ದ್ರವ್ಯ, ಕುಂಟು. ಪದ್ದೆಯಿದ ವಿವರೊಲು ಹೆಚ್ಚ ಉಂಡು Acts of Todakinara ಪನ್ಪಿ ಪುದರ್‌ಡ್ ಎ.ಸಿ. ಬರ್ನೆಲ್ ಬೂಕುಡು ನೆತ್ತ ಇಂಗ್ಲಿಷ್ ತರ್ಜುಮೆ ಉಂಡು.

ದೇಯಿ ಬೈದ್ಯೆದಿ, ಕೋಟಿಚರಣಯೆ 1, ಕೋಟಿಚಂಣಯೆ 2, ಉಂದು ಮೂಜಿಲಾ ಕೋಟಿಚೆನ್ನಯೆರೆ ಪಾಡ್ಡನೊಗು ಸೇರಿನವು. ಎ.ಸಿ. ಬರ್ನೆಲ್‌ನ ಬೂಕುಡು ಈ ಮೂಜಿ ಪಾಡ್ಡನಲಾ ಇಂಗ್ಲಿಷ್‌ಡ್ ತರ್ಜುಮೆ ಬೊಕ್ಕ ತುಳು ಲಿಪ್ಯಂತರೊಡುಲಾ ಉಂಡು. (1). Song of Devbaidi (2) Song of Koti and Channayya (3) Story of Koti and Chennayya (4) Story of Koti Channayya (5) Origin of Baiderlu. ನೆಟ್ ಬಾಕಿದ ರಡ್‌ಲಾ ಮೆನ್ನರ್‌ನವು ಆಂಡಲಾ ಈ ಬೂಕುಡು ಸೇರಿಜ್ಜಿ ಮಾತ್ರ ಅತ್ತಂದೆ 5ನೇ ಪಾಡ್ಡನ ಆಯಿ ಬೈದೆರ್ಲೆ ಸಂಧಿ ಬಾರಿ ಮಲ್ಲವು ಈ ದಾಖಲೆ ಈತನೆಟ್ಟ ಓಲುಲಾ ಬಳಕೆ ಆತಿನವು ತೋಜಿದ್ ಬರ್ಪುಜಿ. ಇಂಗ್ಲಿಷ್‌ಡ್ ಬರ್ನೆಲ್‌ನ ಬೂಕುಡು ಉಂದು ಪ್ರಕಟ ಅತ್‌ಂಡಲಾ ಐತ ಮೂಲ ಪಾಡ್ಡನ ತುಳುತ್ತವು ಮಿಶನರಿಳೆ ಟಿಪ್ಪಣಿಲು ದಾಖಲೀಕರಣ ಮಲ್ಪನಗ ತಿಕ್ಕದ್‌ಂಡ್ ಸದ್ಯೋಗು ಆವು ಬೇತೆನೇ ಪ್ರಕಟ ಆಪುಂಡು. ಎ.ಸಿ.ಬರ್ನೆಲ್ ಬೊಕ್ಕ ಅಗಸ್ಟ್ ಮನ್ನರ್‌ನ ಪಾಡೊನೊಲೆಡ್ ಹೆಚ್ಚ ಪಠ್ಯ ಬೊಕ್ಕ ಹೆಚ್ಚ ಮಲ್ಲವು ಕೋಟಿ ಚೆನ್ನಯ ಪಾಡ್ಡನನೇ. ಅಂಚಾದ್ ಉಂದು ಸಂಶೋಧನೆಗ್ ಒಂಜಿ ಮಲ್ಲ ಅಕರ ಆದುಂಡು. ದೂಮಾವತಿ ಭೂತದ ಮುಟ್ಟುದ ಬಗೆಟ್ ವಿವರ ಇಜ್ಜಿ. ಬೇತೆ ಬೇತೆ ಜಾತಿದಕಲ್ನ ಮೈಟ್ ತೋಜಿದ್ ಬರ್ಪಿನವು, ಬೊಕ್ಕ ಪ್ರಸಾರ ಆರಾಧನೆ ಇಂಚ ಮಸ್ತ್ ವಿಚಾರೊಲು ಉಂಡು. ಎ.ಸಿ. ಬರ್ನೆಲ್‌ನ ಬೂಕುಡು ನೆತ್ತ ವಿವರ ಇಜ್ಜಿ.

Pilicamundi ಪಿಲಿಚಾಮುಂಡಿ ಪನ್ಸಿ ಭೂತದ ಪಾಡ್ಡನ ಇಂಗ್ಲಿಷ್‌ಡ್ ಉಂಡು ಉಂದುವೇ ಪಾಡ್ಡನ ಎ.ಸಿ. ಬರ್ನೆಲ್ ಬೂಕುಡುಲಾ Acts of Pilichamundi ಇಂಚ ಪ್ರಕಟ ಆತ್‌ಂಡ್. ಬುಲೆ ನಾಶ ಆಪಿನೆಕ್ಟ್ ಈ ಭೂತೊನು ಪ್ರತಿಷ್ಟೆ ಮಲ್ತದ್ ಆರಾಧನೆ ಮಲ್ಪು ಕ್ರಮ ನೆಟ್ ಉಂಡು.

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.

43 [ 44 ] ಡಾ. ಪದ್ಮನಾಭ ಕೇಕುಣ್ಣಾಯೆ‌ ಅರೆನ ಲೇಖನ “ತುಳುವಿನ ಮೊದಲ ನಿಘಂಟುಕಾರ ಅಗಸ್ಟ್ ಮೆನ್ನರ್' (ತುಳುವರಿವರು, ಪಾದೆಕಲ್ಲು ವಿಷ್ಣು ಭಟ್ಟ (ಸಂ.) ಮೆನ್ನರ್‌ನ ಪಾಡನದ ಬಗೆಟ್ ಇಂಚ ಪನ್ಪೆರ್. “ಮೆನ್ನರ್ ತಮ್ಮ ಹಲವಾರು ಕೆಲಸಗಳ ನಡುನಡುವೆ ಭೂತಕೋಲದ ಸಂಧರ್ಭಗಳಲ್ಲಿ ಪಾಡ್ಡನಗಳನ್ನೂ ಸಂಗ್ರಹಿಸುವ ಪ್ರಯತ್ನ ಮಾಡಿದ್ದಾರೆ ತುಳು ಪಾಡ್ಡನೊಳು ಎನ್ನುವ ಪುಸ್ತಕದಲ್ಲಿ ಅವರು ಸಂಗ್ರಹಿಸಿ ಕೊಟ್ಟ ಪಾಡ್ಡನಗಳ ಸಂಖ್ಯೆ 21. ಈ ಪುಸ್ತಕದಲ್ಲಿರುವ ಹೆಚ್ಚಿನ ಪಾಡ್ಡನಗಳು ಪಾಡ್ಡನದ ಸ್ವರೂಪದಲ್ಲೇ ಇರುವುದಾದರೂ ಕೆಲವು ಮಾತ್ರ ಸಾಮಾನ್ಯ ಕತೆ ಹೇಳುವ ಶೈಲಿಯಲ್ಲಿವೆ. ವಿಶೇಷವೆಂದರೆ ಇಂತಹ ನಿರೂಪಣ ಶೈಲಿಯಲ್ಲಿರುವ ಪಾಡ್ಡನಗಳಲ್ಲಿ ತುಳುನಾಡಿನ ಉತ್ತರದ ಬ್ರಾಹ್ಮಣ ಭಾಷೆಯ ಪ್ರಯೋಗ ನಿಚ್ಚಳವಾಗಿದೆ. ಬಹುಶ: ಮೆನ್ನರ್‌ಗೆ ಸಹಕರಿಸಿದ ಕಾಪುವಿನ ಮಧ್ವರಾಯರೋ ಆಥವಾ ಇತರರೋ ಈ ರೀತಿ ಪಾಡ್ಡನಗಳನ್ನು ಪುನಾರಚಿಸಿರಲೂಬಹುದು. ಪಾಡ್ಡನಗಳನ್ನು ಸಂಗ್ರಹಿಸುವುದರಲ್ಲಿ ಮೆನ್ನರ್‌ಗೆ ಸದಾಶಯವಿಲ್ಲದಿದ್ದುದನ್ನು ಅವರು “ತುಳು ಪಾಡ್ಡನೊಳು” ಪುಸ್ತಕಕ್ಕೆ ಬರೆದ ಮುನ್ನುಡಿಯಿಂದ ತಿಳಿದುಕೊಳ್ಳಬಹುದಾಗಿದೆ. ಬಹುಶಃ ಅನ್ಯ ಸಂಸ್ಕೃತಿಯಲ್ಲಿ ಬೆಳೆದು ಬಂದ ಅವರಿಗೆ ಇಲ್ಲಿಯ ತುಳು ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾದುದು ಅವರ ಈ ಮನೋಭಾವಕ್ಕೆ ಕಾರಣವೆನ್ನಬಹುದು. ಅದೇನೇ ಇದ್ದರೂ ಈ ಸಂಗ್ರಹದಿಂದಾಗಿ ಕೆಲವು ಪಾಡ್ಡನಗಳದ್ದಾದರೂ ಅಂದಿನ ರೂಪ ಹೇಗಿತ್ತೆಂಬುದನ್ನು ಇಂದಿನ ಪಾಡನ ಸ್ವರೂಪದೊಂದಿಗೆ ತುಲನೆ ಮಾಡಿನೋಡಲು ಅನುಕೂಲವಾಗುತ್ತದೆ. ಕಾರಣದಿಂದ ಇದೊಂದು ಮಹತ್ವದ ಸಂಗ್ರಹವೇ ಸರಿ.” ಪಂಡ್ ಪನ್ಸೆರ್

1924ಟ್ಸ್ ಶಾರದಾ ಛಾಪಖಾನೆಡ್ ಮುದ್ರಣ ಆತಿನ ಎಮ್ ಗಣಪತಿ ರಾವ್ ಐಗಳ್ ತುಳು ಪಾಡ್ಡನೊಲೆ 5 ಎಲೈಲ್ಯ ಕೃತಿಕ್ಯುಲೆನ್ ಪ್ರಕಟ ಮಲ್ತ್ದೆರ್. ಆನಿಡ್ ಇನಿ ಮುಟ್ಟಲಾ ಸಂಶೋಧಕೆರೆಡ್ 5 ಪಾಡನೊಲೆ ಸಂಗ್ರಹಲಾ ಐಗಳನ ಸಂಗ್ರಹ ಪಂಡ್ ದಾಖಲೆ ಆವೊಂದುಂಡು. ಮೆನ್ನರ್‌ನ 'ಪಾಡ್ಡನೊಲು' ಪನ್ಪಿ ಬೂಕುಡು ಪ್ರಕಟ ಆತಿ ಸುರುತ್ತ ಪಾಡ್ಡನ ಬೊಬ್ಬರ್ಯ, 9, ಬೊಕ್ಕ 10ನೇ ಪಾಡ್ಡನ ಕಲ್ಕುಡೆ, ಕಲ್ಲುರ್ಟಿ, 13ನೇ ಪಾಡ್ಡನ ಅತ್ತಾವರ ದೈಯೊಂಗುಳು ಪನ್ಪಿ ಪುದರ್‌ನ್ ಬದಲ್ ಮಲ್ತ್ದ್ ದೈಯೊಂಗುಳು ಪಂಡ್ಸ್, 14ನೇ ಪಾಡನ ಮುಡದೇರ್ ಕಾಳಭೈರವೆ ಪನ್ನಿ ಪಾಡ್ಡನೊನು ಮುಂಡತ್ತಾಯೆ ಪನ್ನಿ ಪುದರ್‌ಡ್, 15ನೇ ಪಾಡ್ಡನ ತೊಡಕಿನಾರ್ ಪನ್ಸಿ ಪಾಡ್ಡನೊನು ತೊಡಕಿನಾರ್ (ಕಣಂದೂರು ದೈಯೊಂಗುಳು) ಪನ್ಪಿ ಪುದರ್‌ಡ್‌ ಪ್ರಕಟ ಮಲ್ತೆರ್. ಈ ಐನ್ ಪಾಡೊನುಲುಲಾ ಕುಡ್ಲದ ಬಾಸೆಲ್

44

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

[ 45 ]

ಮಿಶನ್ ಪ್ರೆಸ್‌ಡ್ 1886ಟ್ಸ್ ಪ್ರಕಟ ಆಯಿ ಅಗಸ್ಟ್ ಮೆನ್ನರ್‌ನ ಪುಸ್ತಕದವೇ ಆದುಂಡು. ಆಂಡ ಗಣಪತಿ ರಾವ್ ಐಗಳ‌ ಆ ಎಲ್ಯ 5 ಕೃತಿಕ್ಯುಲೆಡ್ಲಾ ಮೆನ್ನ‌ರ್ ಸಂಗ್ರಹದ ಪಾಡ್ಡನದೊಟ್ಟಿಗೆ ಪಾಡ್ಡನೊಳನ ಸಾರಾಂಶೊನು ಬೊಕ್ಕ ಆ ಭೂತೊಲೆ ಆರಾಧನೆದ ಬಗೆಟ್ ವಿವರವಾಯಿನ ಬರವುನು ಕನ್ನಡೊಡು ಕೊರ್ತೆರ್. ಅಂಚಾದ್ ಆ ಐನ್ ಕೃತಿಕ್ಕುಲೆಡ್ ಐಗಳಿರೆನ ಬೇಲೆ ಅವೆನ್ ಕನ್ನಡೊಡು ತೆರಿಪಾಯಿನವೇ ಆದುಂಡು. ಐಗಳು ಓಲುಲಾ ಉಂದು ಅಗಸ್ಟ್ ಮೆನ್ನರ್ ಸಂಗ್ರಹೊಡು ದೆತ್ತದಿನ ಅಥವಾ ಸಂಗ್ರಹ ಮಲ್ತಿನ ಪನ್ಸಿ ವಿಚಾರೊನು ತೆರಿಪಾಡ್‌ಜೆರ್, ಅಂಚಾದ್ ಬೊಕ್ಕ ನಡತಿ ಮಾತಾ ಸಂಶೋದನೆಲು ಮೆನ್ನರ್‌ನ “ಪಾದ್ದನೊಲು” ಪುಸ್ತಕ ತೂವಂದೆ ಇತ್ತಿನೆಡ್ ಆ ಐನ್ ಪಾಡ್ಡನೊಲು ಗಣಪತಿ ರಾವ್ ಐಗಳನವು ಪಂಡ್ ದಾಖಲೆ ಆವೊಂದೇ ಉಂಡು, ಉಂದೆನ್ ಸಂಶೋಧನೆದಕುಲು ತಿದ್ದೋನ್ನವು ಎಡ್ಡೆ.

The Indian Antiquary- A Journal of Oriental Research in Archaeology, Epigraphy, Ethnology, Geography, History, Folklore, Languages, Literature, Numismatics, Philosophy, Religion, & C & C. Edited By John faithfull Fleet and Richard Carnac Temple, Published by Bombay: Education Society's Press & London: Trubner & Co. 1872-1933/ the New Indian Antiquary(1938-1947/ Indian Antiquary(1964-1971)ಇಂಡಿಯನ್ ಎಂಟಿಕ್ವೆರಿ ಉಂದು ಒಂಜಿ ಇಂಗ್ಲಿಷ್ ಪತ್ರಿಕೆ. ಈ ಪತ್ರಿಕೆಡ್ ಪಿರಕ್‌ದ ಸಂಸ್ಕೃತಿ, ಚರಿತ್ರೆ, ಧಾರ್ಮಿಕ ವಿಚಾರೊಲೆ ಸಂಶೋಧನಾ ಲೇಖನೊಲು ಪ್ರಕಟ ಅವೊಂದಿತ್ತಿಂಡ್ 1884 1897 ಮುಟ್ಟ ಈ ಪತ್ರಿಕೆಡ್ Devil Worship of Tuluvas ಪನ್ಪಿ ಲೇಖನೊನು ಎ.ಸಿ. ಬರ್ನೆಲ್ ಬರೆವೊಂದಿತ್ತೆರ್. ಈ ಲೇಖನೊಡು ಉಪ್ಪುನ ಹೆಚ್ಚದ ಭೂತೊಲೆ ಪಾಡ್ಡನೊಲು ಮನ್ನರ್‌ನವು ಅದುಂಡು. ಅತ್ತಂದೆ ನೆಟ್ಟ ಮೆನ್ನರ್ ಬರೆತಿನ ಭೂತದ ಹುಟ್ಟು ಇಜ್ಜಾಂಡ ಭೂತದ ಮೂಲದ ವಿವರೊಲು ಅತ್ತಂದೆ ಭೂತೊಲೆ ಪುದರ್‌ದ ಒಂಜಿ ಪಟ್ಟಿಲಾ ಉಂಡು. ಅಂಚಾದ್ ಮೆನ್ನ‌ರ್ ಸಂಗ್ರಹದ ಭೂತೊಲೆ ಪಾಡ್ಡನದ ವಿಚಾರೊಡು ಸಂಶೋಧನೆ ಮಲ್ಪೊಡಾಂಡ ಮೆನ್ನರ್ ಸಂಗ್ರಹದೊಟ್ಟುಗು ಎ.ಸಿ. ಬರ್ನೆಲ್‌ನ ದ ಡೆವಿಲ್ ವರ್ಷಿಪ್ ಆಫ್ ತುಳುವಾಸ್ ಪನ್ಪಿ ಇಂಗ್ಲಿಷ್ ಬೂಕುಡು ಪ್ರಕಟ ಆತಿ ಮೆನ್ನರ್‌ನ ಪಾಡನೊಲೆನ್‌ಲಾ ಒಟ್ಟುಗು ಪರಿಶೀಲನೆ ಮತ್ತೊಂದು ಅಧ್ಯಯನ ಮಲ್ಪೆರೆ ಸಾಧ್ಯ ಉಂಡು.

134 ವರ್ಷೊಡುದ್ ಪಿರವುಡು ಬಾಸೆಲ್ ಮಿಶನ್‌ದ ರೆವೆ. ಅಗಸ್ಟ್ ಮೆನ್ನ‌ರ್ ಪನ್ಪಿ ಒರಿ ವಿದೇಶಿ ಮಿಶನರಿನ ಮುತಾಲಿಕೆಡ್ ದಾಖಲೆ ಆಯಿನ ಭೂತಾರಾಧನೆದ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

45 [ 46 ] ಪಾಡ್ಡನೊಲು ಇನಿತ ಕಾಲೊಡು ಸಂಶೋಧನೆಗ್ ಒಂಜಿ ಅಕರ ಆದುಂಡು. ಕತೆ ಇಜ್ಜಾಂಡ ಪಾಡ್ಡನ ರೂಪೊಡು ಉಂದು ಇತ್ತ್ಂಡಲಾ 150 ಪಿರವುಡು ಬಳಕೆ ಆವೊಂದಿತ್ತಿ ತುಳು ಬಾಸೆ, ಅಪಗದ ಊರುದ ಪುದರುಲು, ಹತ್ಯಾರುಲು, ಪದ್ದೆಯಿ ಬಂಗಾರುಲು, ತುತ್ತೈತೊಲು, ಬೇರ, ಬರವು, ತುಳುನಾಡ್‌ ಜಾತಿಲು, ಆರಾಧನೆ, ಆಚರಣೆ, ಸಂಸ್ಕೃತಿ, ಅಟಿಲ್ ಅರಗಣೆ, ಪುಲ ಮರ್ದ್, ಸಂಸ್ಕಾರ, ಇಂಚ ಮಾತ ಮರ್ಗಿಲ್‌ದ ಸಂಶೋಧನೆಲೆನ್ ನೆಡ್ ಮಲ್ಪೆರೆ ಸಾದ್ಯ ಉಂಡು. ಮಿಶನರಿನಕಲ್ಪ ಹಸ್ತ ಪ್ರತಿಕ್ಕುಲು ನಾಡ್‌ಂಡ, ಪ್ರಯತ್ನ ಮಲ್ತ್ಂಡ ತಿಕ್ಕೊಂದೇ ಉಪ್ಪುಂಡು. ತಿಕ್ಕಿನ ಕೈಕಾಜಿದ ಬರವುಲೆನ್ ಬೊಲ್ಪುಗು ಕನತ್‌ದ್ ಸಂಪಾದನೆ ಮಲ್ಪು ಕಜ್ಜ ನಿರಂತರ ನಡತೊಂದಿತ್ತಿಂದ ಪಿರಾಕ್‌ದ ಸಂಸ್ಕೃತಿನ್ ಚರಿತ್ರೆನ್ ದಾಖಲೆ ಮಲ್ತದ್ ಜೋಪಾನ ಮಲ್ಪೊಲಿ.

46

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

[ 47 ]

{{{1}}}

ತುಳು ಬಾಸೆದ ಸುರುತ್ತ ವ್ಯಾಕರಣ

ತುಳುನಾಡ್‌ಡ್ ತುಳು ಭಾಷೆನ್ ಕನ್ನಡ ಲಿಪಿಟ್ಸ್ ಬರೆಪಿನ ರೂಢಿ ಇತ್ತಂಡಲಾ ಅವು ಬೊಲ್ಪುಗು ಬತ್ತಿಜಿ ದಾಯೆ ಪಂಡ ಆತ್‌ನೆಟ್ಟ ಈ ಜಿಲ್ಲೆಡ್ ಮುದ್ರಣದ ವ್ಯವಸ್ಥೆ ಇತ್ತೀಜಿ. 1834ಡ್ಡಿಂಚಿ ಸ್ವಿಜರ್ಲೆಂಡ್‌ ಬಾಸೆಲ್ ಪನ್ಪಿ ಊರೂಡ್ಡು ಕ್ರೈಸ್ತ ಮತ ಪ್ರಚಾರೊಗು ಭಾರತ ದೇಶೊಗು ಬತ್ತಿ ಮಿಶನರಿನಕುಳು ತುಳುನಾಡ್‌ಡ್ ವ್ಯವಹಾರ ಮಳ್ಳರೆ ತುಳು ಭಾಷೆ ಮುಖ್ಯದವು ಪಂಡ್ ದ್ ತೆರಿವೊಂಡೆರ್.ಅಂಚಾದ್ ತುಳುಭಾಷೆ, ತುಳು ಸಂಸ್ಕೃತಿಳೆನ್ ಅಕುಳು ಕಲ್ಪೋಡಾಂಡ್.ದೇಶೀಯ ವಿದ್ವಾಂಸೆರೆ ಸಹಾಯೊಡ್ಡು ಬೇಗನೇ ತುಳು ಭಾಷೆ ಕಲ್ತೆರ್ ಅತ್ತಂದೆ ಸಾಹಿತ್ಯ ತಯಾ‌ರ್ ಮಳ್ಪುನಂಚಿತ್ತಿ ಬೇಲೆಗ್‌ಲಾ ಜತ್ತೆರ್. ಜಿಲ್ಲೆಡ್ 1841 ಮುಟ್ಟ ಮುದ್ರಣದ ವ್ಯವಸ್ಥೆ ಇತ್ತೀಜಿ. ಮಿಶನರಿನಕುಳು ಧರ್ಮ ಪ್ರಚಾರೊಗು ಬೋಡಾಯಿ ಕರಪತ್ರೊಳೆನ್ ಅತ್ತಂದೆ ತನ್ಕುಲು ಸ್ಥಾಪನೆ ಮಳ್ತಿ ಶಾಲೆಲೆಗ್ ಬೋಡಾಪಿ ಬೂಕುಳೆನ್ ಬೊಂಬಾಯಿ ಕಲ್ಲಚ್ಚಡ್ ಅಚ್ ಮಲ್ತ್ದ್ ಕನವೊಂದಿತ್ತೆರ್. ಅಪ್ಪೆ ಭಾಷೆಡ್ ಪಾತೆರ್‌ಂಡನೇ ತುಳುವೆರ್ ಅರ್ಥ ಮಲ್ತೊನುವೆರ್ ದಾಯೆ ಪಂಡ ಅವು ಅಗಲ್ನ ಭಾಷೆ. ಇಂಚ ತುಳುನಾಡ್‌ಡ್ ಮಿಶನರಿನಕುಲು ತುಳುಭಾಷೆಗೆ ಮಸ್ತ್ ಪ್ರಾಶಸ್ತ್ಯ ಕೊರಿಯೆರ್. ಮಿಶನರಿಳನ ಪ್ರೋತ್ಸಾಹೊಡು ತುಳು ಸಾಹಿತ್ಯದ ಬೇಲೆ ತರ್ಜುಮೆಡ್ ಸುರು ಆಂಡ್. ತುಳು ಸಂಸ್ಕೃತಿ, ನಿಘಂಟು, ವ್ಯಾಕರಣ, ಪ್ರಾಥಮಿಕ ಪಠ್ಯ, ಧಾರ್ಮಿಕ ಸಾಹಿತ್ಯ ಇಂಚಿತ್ತಿ ಕ್ಷೇತೊಡು ತುಳು ಸಾಹಿತ್ಯ ಕೃಷಿ ಅವೆರೆ ಸುರು ಆಂಡ್. ಬಾಸೆಲ್ ಮಿಶನ್ ಪ್ರೆಸ್‌ಡ್ 1872ಟ್ಸ್ ತುಳು ಭಾಷೆದ ಸುರುತ್ತ ವ್ಯಾಕರಣ ಗ್ರಂಥ ಪ್ರಕಟ ಆಂಡ್, ಅವೆನ್ ಬರೆತಿನಾ‌ ಜಾನ್ ಜೇಮ್ಸ್ ಬ್ರಿಗೆಲ್ (1832-1887)(JOHN JAMES BRIGEL) ಮೆರೆನ ಬಗೆಟ್ ಬೊಕ್ಕ ಆರ್ ತಯಾರ್ ಮಲ್ತಿನ ಸುರುತ್ತ ವ್ಯಾಕರಣ ವಿಚಾರೊಡೇ ಈ ಲೇಖನ,

ಟೋಬಿಯಾಸ್ ಬಿಗೆಲ್(TOBIAS BRIGEL) ಬೊಕ್ಕ ಅನ್ನ ಮಾರ್ಗರೇಟ್ (ANNA MARGARET) ವಾಲ್ವರ್ ದಂಪತಿಳು ಜರ್ಮನಿದ ಟ್ಯುಬಿಂಗೆನ್ ಕೈತಲ್‌ದ ಪ್ಯೂಶಿಂಗನ್ ಪನ್ಪಿ ಊರುದಕುಲು.ಈ ಕುಟುಂಬದ ರ‍ಡ್ಡ್

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

47 [ 48 ] ಜೋಕುಲೆಡ್ ಒರಿ ಆದ್ ಜಾನ್ ಜೇಮ್ಸ್ ಬ್ರಿಗೆಲ್ 1832ನೇ ಇಸವಿ ಡಿಸೆಂಬರ್ ತಿಂಗೊಲ್ದ 4ನೇ ತಾರೀಕ್‌ದಾನಿ ವುರ್‌ಟೆಂಬರ್ಗ್‌ದ ಎರ್‌ಫಿಂಗೆನ್ (Wurtem burgh, Erfingen) ಪನ್pi ಊರುಡು ಪುಟ್ಟಿಯೆರ್. ಬಾಸೆಲ್ ಮಿಶನ್ ಕಾಲೇಜ್‌ಡ್ ದೈವಜ್ಞಾನ ಕಲ್ಪೆರೆ ಸೇರ್ದ್ 1858ಟ್ಸ್ ಗುರು ದೀಕ್ಷೆ ಪಡೆದ ಸೇವೆಗ್ ಪಿದಾಡಿಯೆರೆ ತಯಾರಾಯೆರ್. ಮಿಶನ್ ಸಂಸ್ಥೆದಕುಳು ಬಾಕಿ ಐನ್ ಮಿಶನರಿಳೆ ಒಟ್ಟುಗು ಬ್ರಿಗೆಲ್‌ರೆನ್ ಭಾರತೊಗು ಸೇವೆ ಮಳ್ಪೆರೆ ಕಡಪುಡಿಯೆರ್

1858 ಡಿಸೆಂಬರ್ ತಿಂಗೊಲುಡು ಬ್ರಿಗೆಲ್ Burkhardt, Schunk, Mack, Trab, Hartman, ಈ ಐನ್ ಮಿಶನರಿಳೆ ಒಟ್ಟುಗು ಕುಡ್ಲಗ್ ಬತ್ತೆರ್. ಮೊಕುಲು ಕುಡ್ಲಗ್ ಬರ್ಪಿ ಸಮಯೊಡು ಕುಡ್ಲಡ್ ಮಾತಾ ಕೋಡಿಡ್ ಟೈಪ್ಯಾಡ್ ಜ್ವರತ್ತ ಸಾಂಕ್ರಾಮಿಕ ಸೀಕ್ ಇಟ್ಕಂಡ್. ಪೋಡಿಗೆದ ವಾತಾವರೆಣಡೇ ಬ್ರಿಗೆಲ್ ತನ್ನ ಸೇವಾ ಕ್ಷೇತ್ರೊಗು ಗಟ್ಟಿ ಮನಸ್ಸೇ ಮಳ್ತ್ದ್ದ್ದ್ ದ್ ಉಂತಿಯೆರ್.

ತುಳುನಾಡ್‌ಗ್ ಬತ್ತಿ ಮಾತಾ ಮಿಶನರಿನಕುಳು ಕ್ರೈಸ್ತ ಮತ ಬೋಧನೆ ಅಂಚನೆ ಶಾಲೆಲೆಡ್ ಶಿಕ್ಷಣದ, ಆಶ್ರಮ ನಡಪಾವುನ, ಪ್ರೆಸ್‌, ಓಡುದ ಕಾರ್ಖನೆದ, ನೆಯಿಗೆ ಕಾರ್ಖನೆ ಇಂಚ ಮಾತ ಜವಾಬ್ದಾರಿದ ಬೇಲೆಲೆನ್‌ಲಾ ಮಡಿತ್‌ಂಡ್. ಮಿಶನರಿನಕುಳು ಈ ಬೇಲೆಲು ಅತ್ತಂದೆ ತುಳುನಾಡ್‌ ಭಾಷೆ, ಸಂಸ್ಕೃತಿನ್ ಕಲೆ‌.ನನ ತುಳುನಾಡ್‌ ಬರಿ ವಿದೇಶಿಯೆರೆಗಾದ್ ವ್ಯವಸ್ಥಿತ ರೀತಿಡ್ ಸಾಹಿತ್ಯದ ಬುಳೆಚ್ಚಿಲ್‌ಲೆನ್ ಮಳೆ‌, ಇಂಚ ತುಳುನಾಡ್‌ಗ್ ಬತ್ತಿ ವಿದೇಶಿ ಮಿಶನರಿ ಆಯಿ ಜಾನ್ ಜೇಮ್ಸ್ ಬ್ರಿಗೆಲ್ ಪನ್ನಿನಾರ್ 17 ವರ್ಷ ತುಳುನಾಡ್‌ಡ್ ಇತ್ತೆರ್. ಆರ್ ಮಲ್ತಿ ಬೇಲೆಲೆನ್ ಸಭಾಸೇವೆ-ಆಶ್ರಮ ಬೊಕ್ಕ ಸಾಹಿತ್ಯ ಸೇವೆ ಇಂಚ ರತ್ನ ವಿಭಾಗೊಡು ಸೇವೆ ಮಲ್ತಿದೆರ್.

ಕುಡ್ಲದ ಬಲ್ಮಟ್ಡಿಡಿತ್ತಿ ಬಾಸೆಲ್ ಮಿಶನ್ ಸಂಸ್ಥೆದಾಕುಳು ಆರೆನ್ ದೇಶೀಯ ಭಾಷೆ ಕಲ್ಪೆರೆ ಉಡುಪಿಗ್ ಕಡಪುಡಿಯರ್.ತುಳು ನಿಘಂಟು ರಚನೆ ಮಲ್ತಿನ ಮೆನ್ನರ್ (AUGUST MAENNER) ಉಡುಪಿಡ್ ಮಿಶನರಿ ಆದಿತ್ತೆ‌. ಬ್ರಿಗೆಲ್ ಆರೆನೊಟ್ಟುಗು ಇತ್ತ ದೇಶೀಯ ವಿದ್ವಾಂಸೆರೆ ಸಹಾಯೊಡು ತುಳುಭಾಷೆ, ತುಳು ಸಂಸ್ಕೃತಿಳೆನ್ ಕಲ್ವೆರೆ ಸುರುಮಳೆ‌.ಅತ್ತಂದೆ ದೇವಾಲಯದ ಬೇಲೆಲೆಡ್ ಮೆನ್ನರ್‌ಲ್‌ ಸಾಯ ಮತ್ತೊಂದಿತ್ತೆರ್.1859ದ ಅಂತ್ಯ ಭಾಗೊಡು ಮುಲ್ಕಿಗೆ ವರ್ಗ ಆಯೆರ್. ಮುಲ್ಕಿ ಸಭೆಡ್ ಹೆಚ್ಚ ಆರ್ ಪೊಣ್ಣು ಜೋಕುಲೆ ಆಶ್ರಮೊಡು ಬೊಕ್ಕ ಕೈತಲ್‌ದ ಊರುಲೆಡ್ ಸೇವೆ ಮಲ್ಲೊಂದಿತ್ತೆರ್.
48 •

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

[ 49 ]

1866 ಜನವರಿ ತಿಂಗೊಳುಡು ಬ್ರಿಗೆಲ್‌ರೆಗ್ ಕುಡ್ಲ‌ಗ್ ವರ್ಗಾವಣೆ ಆಂಡ್. ಮಾರ್ಚ್ ತಿಂಗೊಳುಡು ಹೌಫ್ (HAUFF) ಬೊಕ್ಕ ಕಿಟ್ಟೆಲ್ (FERDINAND KITTEL) ತನ್ಕುಲೆ ಊರುಗು ರಜೆ ಪೋಯಿನೆಡ್ ಕುಡ್ಲದ ಮಾತಾ ಅಧಿಕಾರ ಬ್ರಿಗೆಲ್‌ಗ್ ತಿಕ್ಕಂಡ್. ಬ್ರಿಗೆಲ್ ಬಲ್ಮಠ ಶಾಂತಿ ದೇವಾಲಯದ ಅಧಿಕಾರ ಅತ್ತಂದೆ ಜಿಲ್ಲೆದ ಮಾತಾ ಸಭೆಕ್ಕುಲೆ ಅಧ್ಯಕ್ಷೆರಾದ್ ನೇಮಕ ಆಯೆರ್. ಆರೆನ ಅಧಿಕಾರ ಅವಧಿಡ್ ಮಳ್ತಿ ಸುಧಾರಣೆಳೆನ್ ನೆಂಪು ದೀವೊನ್ನಂಚಿ ಬೇಲೆನ್ ಮಲ್ತ್ದೆರ್. ಐಟ್ ಮುಖ್ಯವಾಯಿನವು ಎಪ್ರಿಲ್ 23ನೇ ತಾರೀಕ್‌ದಾನಿ ಸಭಾ ವ್ಯವಸ್ಥಾಪನೆ ಮಳ್ತಿನವು. ಈತನೆಟ್ಟ ಸಭಾ ಆಡಳಿತೊಗು ತಕ್ಕಂತಿನ ವ್ಯವಸ್ಥಾಪನೆ ಇತ್ತೀಜಿ. ಬಾಸೆಲ್ ಮಿಶನ್ ಸಂಘ ಭಾರತೊಡು ಸ್ಥಾಪನೆ ಮಳ್ತಿ ಸಭೆಕ್ಕುಳು ನನ ಮಿತ್ತ್ ಅನುಸಾರ ಮಳ್ತೊಡಾಯಿ ವ್ಯವಸ್ಥಾಪನೆನ್ ರಚನೆ ಮಳ್ತ್ದ್ ಜಾರಿಗ್ ಕನತ್‌ಂಡ್. ಬಲ್ಮಠ ಸಭೆ 18 ಜನ ಸದಸ್ಯೆರ್‌ನಕುಲು ಇತ್ತಿನ ಸಭಾ ಆಡಳಿತ ಮಂಡಳಿ ನೇಮಕ ಆಂಡ್. ನೆಟ್ 10 ಮಂದಿ ವಿದೇಶಿಯೆರ್, 8 ಜನ ದೇಶಿಯರ್, ಈ ಮಂಡಳಿದ ಅಧ್ಯಕ್ಷೆರಾದ್ ಬ್ರಿಗೆಲ್ ನೇಮಕ ಆಯೆರ್.ಇಂಚ ಸುರು ಆಯಿ ಸಭಾ ಆಡಳಿತ ವ್ಯವಸ್ಥೆಳು ಮಿಶನರಿಳು ಭಾರತೊಡು ಸ್ಥಾಪನೆ ಮಳ್ತಿ ಮಾತಾ ಸಭೆಕ್ಕಳೆಡ್ ಅನುಷ್ಟಾನೊಗು ಬತ್ತ್ಂಡ್. ಇತ್ತೆಲಾ ಈ ವ್ಯವಸ್ಥೆ ಭಾರತದ ಮಾತಾ ಸಭೆಕ್ಕುಳೆಡ್ 'ಸಭಾ ಪರಿಪಾಲನಾ ಸಮಿತಿ' ಪನ್ಪಿ ಪುದರ್‌ಡ್ ಕಾರ್ಯ ಮಳ್ತೊಂದು ಸಭೆಕ್ಕುಳೆ ಜವಾಬ್ದಾರಿಳೆನ್ ತೂವೊಂದುಂಡು.

17 ವರ್ಷ ತುಳುವೆರೊಟ್ಟುಗು ತುಳುವೆ ಆದ್ ಸೇವೆ ಮಲ್ತಿ ಬ್ರಿಗೆಲ್‌ರೆನ್ ತುಳುನಾಡ್‌ ಜನೊಕ್ಲೆಗ್ ಮದಪ್ಪರೆಗೇ ಕಷ್ಟ. ನಂಬಿಗಸ್ಥೆ, ಪ್ರಭಾವಶಾಲಿ ಸೇವಕೆ ಪನ್ಪಿ ಪುದರ್‌ಗ್ ಆರ್ ಯೋಗ್ಯದಾರಾದಿತ್ತೆ‌, ದೈವಜ್ಞಾನೊಡು ಆಳವಾಯಿನ ಜ್ಞಾನ, ಪ್ರಸಂಗ ಮಲ್ಪುನ ಎಡ್ಡೆ ಕಲೆ ಆರೆಗ್ ಗೌರವ ಸ್ಥಾನ ಕೊಡ್ಡಿತ್ತಂಡ್. ಒರಿಯುನಂಚಿ ಬೇಲೆನೇ ಮಲ್ತೆರ್ ಪಂಡ್‌ಂಡ ತಪ್ಪಾವಂದ್. ಅಂಚನೇ ಒಂತೆ ಸಮಯೊಡು ಆಶ್ರಮದ ಜವಾಬ್ದಾರಿನ್ ತೂವೊಂದಿತ್ತೆ‌ಡಲಾ ಬ್ರಿಗೆಲ್ ದಂಪತಿಲು ಮುಲ್ಕಿದ ಆಶ್ರಮೊಡಿತ್ತಿ ಪೊಣ್ಣು ಜೋಕುಲೆನ್ ಪೊರ್ಲುಡು ಆರೈಕೆ ಮತ್ತೊಂದಿತ್ತೆರ್ ಪಂಡ್ ದ್ ಮಿಶನ್ ವರದಿಳೆಡ್ ತೋಜಿದ್ ಬರ್ಪುಂಡು. ತುಳು ಸಾಹಿತ್ಯ ಸೇವೆಡ್ ಬ್ರಿಗೆಲ್ ತುಳುವೆರ್ ಮದಪರಾವಂದಿ ಸೇವೆನೇ ಮಲ್ತ್ದೆರ್ ಪಂಡ್ಂಡ ತಪ್ಪಾವಂದ್. ತುಳುನಾಡ್‌ದ ಬೇಲೆ ಮತ್ತೊಂದುಪ್ಪುನಗ ತುಳು ಮಿಶನರಿ ಆದಿತ್ತಿ ಮೆನ್ನರ್ ಬೊಕ್ಕ ಅಮ್ಮನ್ನೆರ್ನ್ ಒಟ್ಟುಗೆ ಬೇಲೆ ಮತ್ತೊಂದಿನೆಡ್ ಬ್ರಿಗೆಲ್‌‌ಲಾ ತುಳು ಸಾಹಿತ್ಯಡು ಬೇಲೆ ಮಲ್ಪುಲೆಕ್ಕ ಆಂಡ್. ಬ್ರಿಗೆಲ್‌ರ್ ತುಳು ಸಾಹಿತ್ಯ ಕ್ಷೇತ್ರೋಡು ಮಸ್ತ ಬೆನ್ನಿ ಬೆನ್ತೆರ್.ಅವು ಮಾತ ತುಳು ಭಾಷೆದ ಬುಳೆಚ್ಚಿಲ್‌ಗ್ ಸಹಾಯ ಆಂಡ್, ತುಳು

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

49 [ 50 ] ಸಂಗೀತ, ತುಳು ಭಾಷೆ, ತುಳು ಸಂಸ್ಕೃತಿ ಇಂಚ ಮೂಜಿ ವಿಭಾಗೊಡು ಆರ್ ಮಳ್ತಿನ ಬೇಲೆಳೆನ್ ನಮ ತೆರಿವೊನ್ನವು ಅಗತ್ಯದವು ಆದುಂಡು.

ಸಂಗೀತ ಕ್ಷೇತ್ತೊಡು : ಕ್ರೈಸ್ತೆರೆಗ್ ಸುರುತ್ತ ಪುಸ್ತಕ ಸತ್ಯವೇದ ಆಂಡ ರಡ್ಡನೆದವು ಸಂಗೀತ ಪುಸ್ತಕ. ಪ್ರತಿ ಕ್ರೈಸ್ತರೆ ಇಲ್ಲಲೆಡ್ ಒಂಜೊಂಜಿ ಸತ್ಯವೇದ ಬೊಕ್ಕ ಸಂಗೀತ ಪುಸ್ತಕ ಉಂಡು. ಜರ್ಮನ್ ಭಾಷೆಡಿತ್ತಿ ಸಂಗೀತೊಲು ಕನ್ನಡ, ತುಳು, ಬೊಕ್ಕ ಮಲಯಾಳಂ ಭಾಷೆಲೆಗ್ ತರ್ಜುಮೆ ಆದ್ ಬಳಕೆಗ್ ಬತ್ತ್ ದ್ ಇತ್ತೆಲಾ ಬಳಕೆಡ್ ಉಂಡು.ತುಳುನಾಡ್‌ದ ಸಾಹಿತ್ಯ ಕ್ಷೇತ್ರೊಡು ಕೃಷಿ ಮಲ್ತಿ ಮಿಶನರಿಳು ಸಂಗೀತ ಕ್ಷೇತ್ರೊಡುಲಾ ಮಸ್ತ್ ಸಾಹಿತ್ಯ ರಚನೆ ಮಲ್ತ್ದೆರ್. ಇತ್ತೆಲಾ ಕ್ರೈಸ್ತರೆಡ್ ಬಳಕೆಡುಪ್ಪು ತುಳು ಗೀತೊಳೆ ಪುಸ್ತಕೊಡು 251 ತುಳು ಗೀತೆಳು ಉಂಡು. ಐಟ್ 168 ಗೀತೊಳೆನ್ ಮೆನ್ನರ್ ಬರೆತೆರ್‌ಡ 67 ಸಂಗೀತೊಳೆನ್ ಅಮ್ಮನ್, ಕೆಮರೆರ್, ವುರ್ಟ್, ಬ್ರಿಗೆಲ್, ಬಾಜ್ಞೆ, ಬುನ್ಸ್ ಬರೆತೆರ್‌ 17 ಗೀತೊಳಲೆನ್ 5 ದೇಶಿಯೆರ್ ಬರೆತೆರ್.ಅತ್ತಂದೆ ನಾಲ್ ಗೀತೊಳೆನ್ ಮಿಶನರಿಳು ಬೊಕ್ಕ ದೇಶಿಯರ್ ಸೇರ್ದ್ ಮಳ್ತ್ದೆರ್. ಇತ್ತೆ ಬಳಕೆಡುಪ್ಪು ತುಳು ಗೀತೊಳೆ ಪುಸ್ತಕೊಡು 6 ಗೀತೊಳೆನ್ ಬ್ರಿಗೆಲ್ ರಚನೆ ಮಳ್ತದೆರ್.

ತುಳುತ್ತ ಸುರುತ್ತ ವ್ಯಾಕರಣ : A Grammar of the Tulu Language.: 1872ಟ್ ಬ್ರಿಗೆಲ್ ಬರೆತಿ ತುಳು ವ್ಯಾಕರಣ 139 ಪುಟೊಕ್ಕುಳೆನ್ ಹೊಂದುದುಂಡು. ಮುನ್ನುಡಿಡ್ ಈ ಪುಸ್ತಕ ಬೊಳ್ಪುಗು ಬರಿಯೆರೆ ಉಮೇದ್ ಕೊರಿ ಎ. ಸಿ. ಬರ್ನೆಲ್ (A. C. BURNELL) ರೆನ ಪುದರ್‌ನ್ ಮಾತ್ರಾ ತೋಜಾದರ್ ಅತ್ತಂದೆ ಬೇತೆ ದಾಲಾ ವಿಷಯೊಡು ಬರೆತ್‌ಜೆ‌ರ್. ಈ ಬೂಕುನು Phonology, Etymology, Syntax ಇಂಚ ಮೂಜಿ ವಿಭಾಗ ಮತ್ತೊಂದು ಐಟ್ ಮಸ್ತ್ ವಿಭಾಗೊಳೆಡ್ ಪೊರ್ಲುಡು ಮುಡತೆ‌, ಅನುಬಂದೊಡು ಬೆರೆಣೆರೆ ತುಳುತ್ತ ಮಾದರಿ,ತುಳುತ್ತ ರಡ್ ಪದ್ಯ, ಅತ್ತಂದೆ 50 ತುಳು ಗಾದೆಳೆನ್‌ಲಾ ಕೊರ್ತೆರ್. ಬ್ರಿಗೆಲ್‌ರೆನ್ ತುಳು ವ್ಯಾಕರಣದ ಬಗೆಟ್‌ ಮಸ್ತ್ ವಿದ್ವಾಂಸೆರ್‌ನಗುಲು ಆಧ್ಯಯನ ಮಲ್ತ್ರ್ದೆರ್ ಅತ್ತಂದೆ ನನಲಾ ಐಟ್ ಅಧ್ಯಯನೊಗು ಎಗ್ಗೆಲು ಉಂಡು.ಬ್ರಿಗೆಲ್‌ನ ತುಳುವ್ಯಾಕರಣದ ವಿಷಯೊಡು ಅವೆನ್ ಅಧ್ಯಯನ ಮಲ್ತ್ದ್ ಅವು ಎಂಚ ಯೋಗ್ಯದವು ಪಂಡ್ ದ್ ತೋಜಾದ್ ಕೊರಿನ ಹಿರಿಯ ವಿದ್ವಾಂಸೆರಾಯಿ ಡಾ.ಯು.ಪಿ. ಉಪಾಧ್ಯಾಯ ಬೊಕ್ಕ ಡಾ.ಕೆ.ಕುಶಾಲಪ್ಪ ಗೌಡ ಮೊಗಳೆನ ಅಭಿಪ್ರಾಯೊನ್ ಮುಲ್ಪ ತುಳುತ್ತ ತರ್ಜುಮೆಡ್ ತೂವೊಲಿ.

50

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

[ 51 ]

ಡಾ.ಯು.ಪಿ. ಉಪಾಧ್ಯಾಯರು ಆರೆನ 'ತುಳುವಿನ ಎರಡು ವ್ಯಾಕರಣ ಗ್ರಂಥಗಳು' ಪನ್ಪಿ ಲೇಖನೊಡು, ಬ್ರಿಗೆಲೆರೆನ ಈ ವ್ಯಾಕರಣದ ವಿಶ್ಲೇಷಣೆ ಇಂಚ ಮಲ್ಪೆರ್: 'ಸುರುತ್ತ ಭಾಗೊಡು ವರ್ಣಮಾಲೆ,ಉಚ್ಚಾರಣೆ, ಸಂಧಿ ಪನ್ಪಿ ಉಪ ವಿಭಾಗೊಳುಲಾ, ರಡ್ಡನೇ ಭಾಗೊಡು ಶಬ್ದಳೆ ವರ್ಗೀಕರಣ, ನಾಮಪದ, ಸರ್ವನಾಮ, ಸಂಖ್ಯಾವಾಚಕ, ಕ್ರಿಯಾಪದ, ಅವ್ಯಯ ಪನ್ಪಿ ಉಪ ವಿಭಾಗೊಳುಲಾ ಉಂಡು. ಮೂಜನೇ ಭಾಗೊಡು ವಾಕ್ಯ ರಚನೆ, ಶಬ್ದಳೆ ಸ್ಥಾನ ನಿರ್ದೇಶಿತ ಅರ್ಥ ಬೊಕ್ಕ ಪ್ರಯೋಗ ವಿಧಾನ, ವಿಶೇಷಣಾರ್ಥಕ ಘಟಕೊಲು, ವಾಕ್ಯ ಘಟಕೊಳೆ ರಚನೆ ಬೊಕ್ಕ ಐಕುಲ್ನ ರೂಪ, ವಾಕ್ಕೊಳೆ ಜೋಡಣೆ ಇಂಚಿತ್ತಿ ಉಪ ವಿಭಾಗೊಲು ಉಂಡು.ಬ್ರಿಗೆಲೆ‌ ವ್ಯಾಕರಣ ರಚನೆ ಮಲ್ತಿನ ಉದ್ದೇಶ ಕ್ರೈಸ್ತ ಮಿಶನರಿಲೂ ಐಟ್ಟಿಲಾ ವಿದೇಶಿಯರ್ ತುಳುಭಾಷೆ ಕಲ್ಡ್ದ್ ಐತ ಮುಖಾಂತ್ರ ಧರ್ಮಪ್ರಚಾರ, ಪುಸ್ತಕ ಪ್ರಕಾಶನ ನೆಕ್ ಸಾಯ ಮುಲ್ಪುನವು ಆದಿತ್‌ಂಡ್. ಬ್ರಿಗೆರೆಲ್‌ನ ಭಾಷೆ ಯುರೋಪ್‌ದವು ಆದಿತ್ತ್ದ್ ತುಳುನು ಆರ್ ಕಲ್ತ್‌ ವ್ಯಾಕರಣ ರಚನೆ ಮಲ್ತೆರ್. ಬರೆವೆರೆಗ್ ಬಿಗೆಲ್ ಉಪಯೋಗ ಮಳ್ತಿನ ಭಾಷೆ ಇಂಗ್ಲಿಷ್ ಅತ್ತಂದೆ ಐತ ಸಂಸ್ಕಾರ ಲ್ಯಾಟಿನ್ ಬೊಕ್ಕ ಯುರೊಪುದ ಭಾಷೆಳೆ ವ್ಯಾಕರೊಣೋಲೆ ಸಂಪ್ರದಾಯ ಆದುಂಡು.

ವರ್ಣಮಾಲೆಳೆನ್ ವಿವೇಚನೆ ಮಲ್ಪುನಗ ಬ್ರಿಗೆಲೆರ್ ಅ, ಇ, ಋ, ಎ, ಒ ಪನ್ಪಿ ಆಜಿ ಹ್ರಸ್ವಸ್ವರ ಅಂಚೆನೇ ಐಕುಳೆ ದೀರ್ಘ ರೂಪೇಳೆನ್‌ಲಾ ಐ, ಔ ಪನ್ಪಿ ಸಂಯುಕ್ತ ಸ್ವರಳೊನೆಲಾ ಉ ಪನ್ಪಿ ತುಳುತ್ತ ವಿಶಿಷ್ಟ ಉಕಾರೊಳನ್‌ಲಾ ಅಂ ಅಃ ಳೆನ್ಲಾ ಗುರ್ತ ಮಳ್ತ್ದೆರ್.ವ್ಯಂಜನೊಳೆಡ್ 25 ವರ್ಗೀಯ ಅಂಚನೇ ಯ,ರ,ಲ,ವ,ಶ,ಷ,ಸ,ಹಾಳ- ಪನ್ಪಿ 9 ಅವರ್ಗೀಯ ವ್ಯಂಜನೊಳೆನ್‌ಲಾ ಗುರ್ತ ಮಲ್ತ್ದೆರ್.ಆಂಡ ಉಂದು ಕನ್ನಡ ವರ್ಣಮಾಲೆದ ಅನುಕರುಣೆಯಾದುಂಡು .ಋ,ಋ,ಅಂ,ಅಃ ಉಂದುಲಾ ಮಹಾ ಪ್ರಾಣೋಲುಲಾ ಅವರ್ಗೀಯೊಳೆಡ್ ಶ,ಷ,ಲಾ ತುಳುಕ್ಕು ಬೋಡಾ ಪನ್ಪಿ ಕಡೆಕ್ಟ್ ಆರೆನ ಗೇನ ಪೋತುಜಿ.ತುಳುತ್ತ ವಿಶಿಷ್ಟವಾಯಿನ ಅರ್ಧ ಉಕಾರೊಳೆನ್ ಗುರ್ತ ಮಣ್ಣಿದಿತ್‌ಂಡಲಾ ವಿವೃತ ಎಕಾರೊಗು ಪ್ರತ್ಯೇಕ ಸ್ಥಾನ ಕೊತ್ತುಜೆರ್.
ಬ್ರಿಗೆಲೆರ್ ಶಬ್ದಳೆನ್ ಶುದ್ಧ ತುಳು, ಶುದ್ಧ ಸಂಸ್ಕೃತ, ಸಂಸ್ಕೃತ ತದ್ಭವ, ಕನ್ನಡ, ಹಿಂದುಸ್ಥಾನಿ ಬೊಕ್ಕ ವಿದೇಶಿ ಪಂಡ್ ದ್ ವರ್ಗೀಕರಣ ಮಳ್ತ್ದೆರ್. ರಾಚನಿಕವಾದ್ ಮೂಲ ಶಬ್ದ, ಸಾಧಿತ ಶಬ್ದ, ಸಮಾಸ ಶಬ್ದ ಪಂಡ್ಸ್ ವರ್ಗೀಕರಣ ಮ ಮೂಲ ಶಬ್ಧನು ಧಾತು, ನಾಮ, ಸರ್ವನಾಮ, ಸಂಖ್ಯಾವಾಚಕ, ಅವ್ಯಯ ಪಂಡ್ ವಿಂಗಡನೆ ಮಲ್ಪೆದೆರ್.

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

51 [ 52 ] ತುಳುಟ್ಟು ವಿಶೇಷಣ, ಕ್ರಿಯಾವಿಶೇಷಣ ಪನ್ಪಿ ಪ್ರತ್ಯೇಕ ವರ್ಗ ರಾಚನಿಕ ದೃಷ್ಟಿಡ್ದ್ ಇಜ್ಜಿ. ಐಕುಳೆಗ್‌ಲಾ ನಾಮಪದಕ್ಕುಲ್ನ ಲೆಕ್ಕನೇ ವಿಭಕ್ತಿ ಪ್ರತ್ಯಯೊಲು ಪತೊನುಂಡು.ಐಕುಳುಲಾ ಸಂದರ್ಭೋಗು ಅನುಸಾರವಾದ್ ನಾಮಪದದ ಲೆಕ್ಕನೇ ಉಪಯೋಗ ಮಳ್ತೊನುಂಡು.ಉದಾ: ಪೊರ್ಲು (ಚಂದ),ಪೊರ್ಲುದ (ಚಂದದ) ಪೊರ್ಲುಗು (ಚಂದಕ್ಕೆ) ದುಂಬು (ಮೊದಲು) ದುಂಬುದ (ಮುಂಚಿನ) ದುಂಬಡ್ದ್ (ಮುಂಚಿಗಿಂತ)- ಇತ್ಯಾದಿ.ಇಂಚಾದ್ ತುಳುಟ್ಟು ವಿಶೇಷಣ ಕ್ರಿಯಾವಿಶೇಷಣ ಪನ್ಪಿ ವರ್ಗ ರಾಚನಿಕ ದೃಷ್ಟಿಟ್ದ್ ಇಜ್ಜಿ ಪನ್ಪಿನೆನ್ ಬ್ರಿಗೆಲ್‌‌ ತೋಜಾದ್ ಕೊರ್ತೆರ್.

ತುಳು ಧಾತುಳೆ ವರ್ಗೀಕರಣದ ವಿಚಾರೊಡು ಬ್ರಿಗೆಲೆರ್ ಮಸ್ತ್ ಶ್ರಮ ಪಡೆತೆರ್. ಧಾತುಳೆನ್ ಮುಖ್ಯವಾದ್ ರಡ್ಡ್ ಗುಂಪುಳಾದ್ ವರ್ಗ ಮಳ್ಪೊಲಿ ಪಂಡ್ದ್ ಪನ್ಪೆರ್.ವರ್ತಮಾನಕಾಲ ರೂಪೊಡು 'ಉವ್' ಸೇರುವ ಧಾತುಲು ಅಂಚೇನೇ 'ಪ' ಸೇರುನ ಧಾತುಲು.ತುಳು ಭಾಷೆಡ್ ನಿಜವಾದ್ ತೂಂಡ ಭವಿಷ್ಯತ್ಕಾಲ ರೂಪ ಇಜ್ಜಿ.ಭವಿಷ್ಯಾರ್ಥೊಡು ನಮ ವರ್ತಮಾನಕಾಲ ರೂಪೊನೇ ಗಳಸುವ.ಭವಿಷ್ಯತ್ ಪಂಡ್ದ್ ಪನ್ಪಿನ ಪ್ರತ್ಯೇಕ ರೂಪ ಭವಿಷ್ಯತ್ಕಾಲ ರೂಪ ಅತ್ತ್. ಸಂಭಾವನಾರ್ಥ ಭವಿಷ್ಯತ್ಕಾಲ ಅಡ ಸಾಮರ್ಥ್ಯ ದ್ಯೋತಕ ಭವಿಷ್ಯತ್ಕಾಲ ರೂಪ. 'ಆಯೆ ಬರುವೆ' ಪಂಡ 'ಅತ ಬರಬಹುದು' ಪಂಡ್ದ್ ಅರ್ಥ, ಆಯೆ ಕೊರುವ' ಪಂಡ 'ಆತ ಕೊಡಬಹುದು, ಕೊಡಲು ಸಮರ್ಥನಾಗಬುಹುದು' ಪಂಡ್ದ್ ಅರ್ಥ.ಆಂಡ ಬ್ರಿಗೆಲೆ‌ ಉಂದೆನ್ ಭವಿಷ್ಯತ್ಕಾಲ ಪಂಡ್ದ್ ಮಳ್ತ್‌ದೆರ್.ಉಂದು ಲ್ಯಾಟಿನ್ ವ್ಯಾಕರಣದ ಅಧ್ಯಯನದ ಪ್ರಭಾವ.

ಬ್ರಿಗೆಲೆ‌ರ್ ಶಬ್ದರೂಪಾವಳಿ ಅಂಚನೇ ಧಾತು ರೂಪಾವಳಿ (Declension and Conjugation)ಳೆಗ್ ಹೆಚ್ಚದ ಮಹತ್ವ ಕೊರ್ದು ಬೇತೆ ಬೇತೆ ಜಾಗದ ಪ್ರಕೃತಿಳೆ ರೂಪಾವಳಿಳೆನ್ ವಿಸ್ತಾರವಾದ್ ತೆರಿಪಾದೆರ್.ಉಂದು ಭಾಷೆ ಕಲ್ಪಾವುನಗಲೆಗ್ ಉಪಯೋಗ ಆಂಡಲಾ ಭಾಷಾ ವಿಶ್ಲೇಷಣ ದೃಷ್ಟಿಡ್ ಹೆಚ್ಚ ಮಹತ್ವದವು ಅತ್ತ್.ದಾಯೆಪಂಡ ವಾ ವಾ ಪ್ರತ್ಯಯಳೊಟ್ಟಿಗೆ ಎಂಚ ಹೊಂದೊಣುಂಡು, ಪ್ರಕೃತಿ ಪ್ರತ್ಯಯೊಳೆ ಜೋಡಣೆ ಆಯಿನದಗ ವಾ ರೀತಿಡ್ ಧ್ವನಿ ಪರಿವರ್ತನೆಯಾಪುಂಡು, ಐಕುಳೆ ಮೂಲೊಡು ದೆಂಗ್‌ದುಪ್ಪು ನಿಯಮೋಲು ಒವು ಪನ್ಪಿ ಬಗೆಟ್ಟ್ ಬ್ರಿಗೆಲೆ‌ರ್ ಹೆಚ್ಚಾದ್ ವಿವೇಚನೆ ಮಲ್ತ್‌ಜೆರ್. ಆಂಡ ಭಾಷೆ ಕಲ್ಪುನಗಲ್ನ ದೃಷ್ಟಿಡ್ ಈ ರೂಪಾವಳಿಲು ಮಹತ್ವದವು ಅದುಂಡು.ಬ್ರಿಗೆಲ್‌ರೆನ ಉದ್ದೇಶಲಾ ಮಿಶನರಿನಗಲೆಗ್ ತುಳು ಕಲ್ಲರೆ ಸಹಾಯ ಮಲ್ಪುನವು ಆದಿತ್ತಿನೆಡ್ದ್ ಆ ಉದ್ದೇಶ ಸಾಯ ಆಪುಂಡು


52

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

[ 53 ]

ತುಳುಭಾಷೆದ ವ್ಯಾಕರದೊಳೆಡ್ ವಾಕ್ಯರಚನಾ ಪ್ರಕರಣದ ಇತಿ ಮಿತಿಲು ದಾದ ಇತ್ತ್ಂಡಲಾ ಬ್ರಿಗೆಲ್‌ನ ವ್ಯಾಕರಣದ ಸೊಗಸಾಯಿ ಭಾಗ ಆರೆನ ವಾಕ್ಯರಚನಾ ಕ್ರಮ ಪಂಡ್ದ್ ಪನಿಯೆರೆ ಅಡ್ಡಿ ಇಜ್ಜಿ. 1872ಟ್ಟ್ ಆರ್ ಬರೆಯಿನದಗ ಭಾಷಾ ವಿಜ್ಞಾನ ಆತ್ ದುಂಬು ಇಜಿಂಡಲಾ ಬ್ರಿಗೆ‌ಲೆರ್ ತನ್ನ ಐರೋಪ್ಯ ವ್ಯಾಕರಣ ಪ್ರಜೆಡ್ದ್ ತುಳುತ್ತ ವಾಕ್ಯ ಅಂಚೆನೇ ವಾಕ್ಯಾಂಶೊಲೆ ನಿರೂಪಣೆನ್ ಪೊರ್ಲುಡು ಮಳ್ತ್‌ದೆರ್.ತಾನ್ ತೂದು ತೆರಿಯಂದಿ ಭಾಷೆ ಆಯಿ ತುಳುನು ಕಲ್ತ್‌‌ದ್ ದುಂಬುಗ್ ಕಲ್ಪುನಗಲೆಗ್ ಆಧಾರ ಸಾಮಾಗ್ರಿಳೆನ್ ಕೋಶ ವ್ಯಾಕರಣೋಲೆ ಮುಖಾಂತ್ರ ಸೃಷ್ಟಿ ಮಲ್ಲಿನವು ಆ ಕಾಲದ ಕ್ರೈಸ್ತ ಮಿಶನರಿನಗಲೆನ ಹೆಚ್ಚಗಾರಿಕೆನೇ ಸರಿ.

ಡಾ.ಕೆ.ಕುಶಾಲಪ್ಪ ಗೌಡರ್ ಅರೆನ 'ರೆವೆ. ಜೆ. ಬ್ರಿಗೆಲ್ ಅವರ ತುಳು ವ್ಯಾಕರಣ- ಒಂದು ಅವಲೋಕನ' ಪಣ್ಪಿನ ಲೇಖನೊಡ್ ಈ ವ್ಯಾಕರಣೋದ ಗುಣದೋಷಳೆನ್ ತೆರಿಪಾವೆರ್. 'ವಿದೇಶಿ ಮಿಶನರಿನಗುಳು ತನ್ಕುಳೆ ಮತ ಪ್ರಚಾರೊನು ಸಾಮಾನ್ಯ ಜನೊಕ್ಲಗ್ ಅರ್ಥ ಆಪಿನ ರೀತಿಡ್ ಜನ ಸಮುದಾಯದ ಭಾಷೆಡೇ ಮಲ್ಪೊಡು ಪಂಡ್ಡ್ ಯೋಜನೆ ಪಾಡೊನ್ನೆಡ್ದ್ ದೇಶದ ಭಾಷೆಳೆನ ಕ್ರಮಬದ್ಧ ಅಧ್ಯಯನೊಳೆನ್ ವಿದೇಶಿ ಪದ್ಧತಿಳೆ ಲೆಕ್ಕ ಮಳ್ಪುನು ಅಗತ್ಯ ಪಂಡ್ದ್ ತೋಜಿದ್ ಬತ್ತ್ಂಡ್. ಬ್ರಿಗೆಲ್ ತನ್ನ ತುಳು ವ್ಯಾಕರಣೊನು ವಿದೇಶಿ ತತ್ವದ ಲೆಕ್ಕ ರಚನೆ ಮಳ್ತ್‌ದೆರ್ .ಧ್ವನಿ ವಿಚಾರೊಡು (Phonology) 15 ಸ್ವರೊಕ್ಕುಲು ರಡ್ಡ್ ಮದ್ಯಾನುವರ್ತ (Medials) ಬೊಕ್ಕ 34 ವ್ಯಂಜನೊಲೆನ್ ಗುರ್ತ ಮಲ್ತ್‌‌ದ್ಂಡ್. ವ್ಯಂಜನೊಳೆಡ್ ವರ್ಗಿಯೊಲು 25 ಬೊಕ್ಕ ಅವರ್ಗಿಯೊಲು 9 ಪಂಡ್ಡ್ ವಿಭಾಗ ಮಳ್ತ್‌ದೆರ್ ಕನ್ನಡ ವರ್ಣಮಾಲೆದ ಸಂಪ್ರದಾಯದ ಲೆಕ್ಕನೇ ಉಂದೆನ್ ಕೊರ್ತುಂಡು.ಅವೆಡ್ಡಾವರ ಧ್ವನಿಮಾ ರೀತಿಡ್ದ್ ಬೊಡ್ಚಾಂದಿನ ಕೆಲವು ವ್ಯಂಜನೊಲು ಸೇ‌ರ್ದ್ಂಡ್ ಪನಂದೆ ಉಪಾಯ ಇಜ್ಜಿ, ಸಂಪೂರ್ಣ ವರ್ಣಮಾಲೆದ ಅಕ್ಷರೊಳೆನ್ ಬ್ರಿಗೆಲ್ ಪಟ್ಟಿ ಮಲ್ತ್‌ದೆರ್.
ವ್ಯಾಕರಣ ರೀತಿಡ್ ತುಳುತ್ತ ಪದೊಕ್ಕುಳೆನ್ ಐನ್ ವಾಕ್ಯಾಂಗ ಪಂಡ್ದ್ (Part of Speech)ವಿಶ್ಲೇಷಣೆ ಮಳ್ದೆರ್. ನಾಮಪದ, ಸರ್ವನಾಮ ಸಂಖ್ಯಾವಾಚಕ, ಕ್ರಿಯೆ ಬೊಕ್ಕ ಅವ್ಯಯೊಳು ಪಂಡ್ದ್ ನಾಮ ಪದೊಕ್ಕುಳೆಡ್ ಮೂಜಿ ಸಾಮಾನ್ಯ ಅಂಗೊಲು ಪ್ರಥಮ. ಅಂಜೊವುಲು ಬೊಕ್ಕ ದೇವರ್‌ನಗಲ್ನ ಪುದರುಳು ಪುಲ್ಲಿಂಗ ವರ್ಗ, ಪೊಂಜೊವುಲು ಬೊಕ್ಕ ದೇವಿನಗಲ್ನ ಪುದರುಳು ಸ್ತ್ರೀಲಿಂಗ ವರ್ಗ.ಬಾಕಿ ಒರಿದಿನ ಪ್ರಾಣಿಲು ಬೊಕ್ಕ ನಿರ್ಜೀವ ವಸ್ತುಲು ಮಾತ ನಪುಂಸಕ ವರ್ಗೊಲು


ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

53 [ 54 ] ಪನ್ಪೆರ್.ಆಣ್, ಪೊಣ್ಣು ಪನ್ಪಿನೆನ್ ಪ್ರಕೃತಿ ಪೂರ್ವೊಡು ಸೇರಾದ್ ಲಿಂಗ ಸೂಚನೆ ಮಳ್ಪು ವಿಧಾನೊನು (ಆಣ್‌ಬಾಲೆ, ಸೊಣ್ಣುಬಾಲೆ) ತೂತೆ‌ರ್ ಅತ್ತಂದೆ ಬಾಲೆ ಬೊಕ್ಕ ಜನ ಪನ್ಪಿ ಪದೊಕ್ಕುಳು ನಪುಂಸಕ ಆಪುಂಡು ಪನ್ಪಿನೆನ್ ವಾಕ್ಯದ ನಿಲೆಟ್ಸ್ ನಿರ್ಧಾರ ಮಳ್ತ್ದೆರ್. ವಚನೊಳೆ ವಿಚಾರೊಡು ಪನ್ನಗ ಬಹುವಚನೊಡು -ರ-ಳು ಅತ್ತ್ ಡ -ಕು-ಳು ಪನ್ಪಿನವು ಪ್ರತ್ಯಯೊಳು ಪಂಡ್ಸ್ ಸಂಬಂಧವಾಚಕ ಬಹುವಚನೊಡು ಆಡು ಪನ್ಪಿನೆನ್ ಮಾತ್ರ ಕೊರ್ತೆರ್, ನಪುಂಸಕ ಅತ್ತಂದಿ ವರ್ಗೊಳೆಗೆ ವಿಶಿಷ್ಟವಾಯಿನ ಬಹುವಚನ ಪ್ರತ್ಯಯ ಪಂಡ್ದ್ ಗುರ್ತ ಮಳ್ತೆರ್. ದೇವೆರ್ ಪನ್ಪಿ ಪದ ಏಪಲಾ ಬಹುವಚನ ರೂಪೊಡೇ ಪದಸ್ತರೊಳೆಡ್‌ಲಾ ತುಳುಟ್ಟು ಪ್ರಯೋಗ ಆಪುಂಡು.

ಪದಾಂತ್ಯ ರೂಪೊನು ಅನುಸಾರ ಮಲ್ತ್ದ್ ಬೇತೆ ಬೇತೆ ಪದೊಕ್ಲಗ್ ವಿಭಕ್ತಿಲು ಸೇರುನೆನ್ ಪುಟ12ಡ್ 30 ಮುಟ್ಟ ಬ್ರಿಗೆಲ್ ಪಟ್ಟಿ ಮಲ್ತೆರ್.ವಿಶೇಷಣದ ವಿಷಯೊಡು ಪಂಡೊಂದು ಪ್ರಕೃತಿ ರೂಪದ ವಿಶೇಷಣೋಲು ಬಾರಿ ಕಮ್ಮಿ ಆದುಂಡು. ಅಂಡ ಆ ಕಡಮೆನ್ ಸಹಾಯಕ ಕ್ರಿಯಾ ಪದೊ ಕೃಲ್ಲಿಂಗ ರೂಪೊಡ್ಡು ದಿಂಜಾವೊಂದುಂಡು ಪಂಡ್ ದ್ ಬ್ರಿಗೆಲ್ ಬರೆತೆ‌ರ್.'

ಬ್ರಿಗೆಲ್‌ರನ ವ್ಯಾಕರಣದ ಮಹತ್ವದ ಮಿತ್ ಬೇತೆ ಬೇತೆ ವಿದ್ವಾಂಸೆರ್‌ನಗುಳು ಪಣ್ತಿನ ಕೆಲವು ಅಭಿಪ್ರಾಯೊಲು ಇಂಚ ಉಂಡು.

ಡಾ.ಕೆ.ಕುಶಾಲಪ್ಪ ಗೌಡ ಉಂಬೆರ್ “ಅಧ್ಯಯನ ಪಟುಗಳಿಗೆ ಸೂಕ್ಷ ವಿಶ್ಲೇಷಣೆಗೆ ಬ್ರಿಗೆಲರ ತುಳು ವ್ಯಾಕರಣದಲ್ಲಿ ಇನ್ನೂ ಗ್ರಾಸವುಳಿದಿದೆ.”(ಸಂ.ಡಾ. ಪುರುಷೋತ್ತಮ ಬಿಳಿಮಲೆ ಮತ್ತು ಇತರರು;1995 ;ಪುಟ.440) ಅಂದ್‌ದ್ ಪ‌ಣ್ಪೆರ್

ಡಾ.ಯು. ಪಿ. ಉಪಾಧ್ಯಾಯ, “ಬ್ರಿಗೆಲರ ತುಳು ವ್ಯಾಕರಣ ಗ್ರಂಥವು ತುಳು ಭಾಷೆಯ ಪುನರುಜ್ಜಿವನ ಕಾಲದಲ್ಲಿ ಮೂಡಿಬಂದ ಅತ್ಯಂತ ಮಹತ್ವದ ಕೃತಿ ಎಂದು ತಿಳಿಯಬಹುದು.ತುಳು ಸಂಶೋಧನೆಯ ಚರಿತ್ರೆಯಲ್ಲಿ ಈ ಗ್ರಂಥವು ಮರೆಯಲಾಗದ ಮೈಲಿಗಲ್ಲು ಮತ್ತು ಆಧುನಿಕ ಸಂಶೋಧಕರಿಗೆ ಪ್ರೇರಕ ಗ್ರಂಥ.”(ಸಂ.ಕು.ಶಿ. ಹರಿದಾಸ ಭಟ್ಟ:1982;ಪುಟ.12) ಇಂಚ ಪ‌ಣ್ಪೆರ್.

ಪ್ರೊ.ಅಮೃತ ಸೋಮೇಶ್ವರ, ಬ್ರಿಗೆಲರ ಶ್ರೇಷ್ಟ ಕೊಡುಗೆಯೆಂದರೆ ತುಳು ಭಾಷೆಗೊಂದು ಶಾಸ್ತ್ರೀಯವಾದ ವ್ಯಾಕರಣ ಗ್ರಂಥವನ್ನು ಬರೆದುದು.”(ಸಂ. ಪಾದೆಕಲ್ಲು ವಿಷ್ಣು ಭಟ್ಟ 1997;ಪುಟ.217) ಅಂದ್‌ರ್ ಪಸ್ಪೆರ್.

ಇಂಚ ನಂಕ್ ಒರಿ ವಿದೇಶಿ ಮಿಶನರಿ ಮಲ್ತಿನ ತುಳು ವ್ಯಾಕರಣದ ಮಹತ್ವ ತೆರಿದು ಬರುಂಡು.ಈ ವ್ಯಾಕರಣ ಬೂಕುಡು ಉಪ್ಪುನ ಒಂಜಿ ಬ್ರಾಣೆರೆನ ತುಳುತ್ತ ಪದ ಬೊಕ್ಕೊಂಜಿ ಜಾನಪದ ಪದೊ ಅಂಚನೆ ತುಳು 50 ಗಾದೆಲು ಅಪಗದ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

[ 55 ]ه

ಭಾಷೆದ, ಸಾಹಿತ್ಯದ ಪರಿಚಯೊನ್ ನಂಕ್ ಮಲ್ತ್ ಕೊರ್ಪುಂಡು. ನೆಟ್ 24 ಗಾದೆಳನ್ ಸಬ್ದೊ ಬೊಕ್ಕ ಅರ್ತೊದ ದೃಷ್ಟಿಡ್ ಇಂಗ್ಲಿಶ್‌ ತರ್ಜುಮೆ ಮಳ್ತ್ ಕೊರ್ತೇರ್. ಅಂಚನೆ ಜರ್ಮನ್ ಬಾಸೆಡ್ ಸಮಾನವಾಯಿನ ಅರ್ಥ ಕೊರ್ತೆರ್ ಅತ್ತಂದೆ 26 ಗಾದೆಳೆ ಇಂಗ್ಲೀಷ್ ಅರ್ಥಳೆನ್‌ಲಾ ಕೊರ್ತೆರ್.

ಅಂಡೆದ ಬಾಯಿ ಕಟ್ಟೋಲಿ, ದೊಂಡೆದ ಬಾಯಿ ಕಟ್ಟೋಲ್ಯಾ ?
Literal Translation: Of a vessel the mouth may be tied up, of the throat, the mouth can it be tied up?

Meaning: The mouth of vessel may be tied up, but can a man's tongue be kept quite?

ಬ್ರಿಗೆಲ್ ರೆನ ಕಡೆತ್ತ ದಿನೊಕ್ಕುಲು

1875 ಮೇ ತಿಂಗೊಳುಡು ಹವೆ ಬದಲ್ ಬೊಕ್ಕ ವಿಶ್ರಾಂತಿ ಪಂಡ್ಸ್ ತನ ಊರುಗು ಪೋಯಿ ಬ್ರಿಗೆಲ್‌ರ್ ಸುಮಾರ್ ಮೂಜಿ ವರ್ಷ ಇಲ್ಲಡೇ ಇತ್ತೆರ್. ಆಂಡಲಾ ಕುಡ ಭಾರತೊಗು ಬತ್ತಂಡ ಹವೆ ಬದಲಾದ್ ಸೀಖ್‌ಡ್ ಬೂರೊಡಾವು ಅತ್ತಂದೆ ಬುಡೆದಿಗ್‌ಲಾ ಅಸೌಖ್ಯ, ಎಲ್ಲೆಲ್ಯ ಜೋಕುಲು ಇಂಚ ಆರ್ ಊರುಡೇ ಕುಲ್ಲಿಯೆರ್. ಆರೆನ ಕುಟುಂಬದ ಸ್ಥಿತಿನ್ ತೆರಿಯೊಂಡಿ ಮಿಶನ್ ಸಂಸ್ಥೆದಕುಲೆಗ್ ಮನಸ್ಸಿಜ್ಜಿಡಲಾ ಆರೆಗ್ ಸಂಸ್ಥೆಡ್ ಬುಡುಗಡೆ ಮಳ್ತ್ಂಡ್.

ಮಿಶನ್ ಸಂಸ್ಥೆಡ್ ಬುಡುಗಡೆಡ್ ಬೊಕ್ಕ ಬ್ರಿಗೆಲ್ ಮನಿಪಂದೆ ಇತ್ತೀಜೆರ್. ತಾನ್ ಸೇವೆಗ್ ಜತ್ತ ಉದ್ದೇಶನು ನೆನೆತ್‌ ತಾನ್ ಜೀವ ಉಪ್ಪುನೆಟ್ಟ ದೇವರೆ ಸೇವೆ ಮಲ್ಪೊಡು ಪನ್ಪಿ ನಿರ್ದಾರೋನು ಮಲ್ತೊಂದು ಅಲ್ಪನೇ ಸಭಾ ಸೇವೆ ಮಳ್ಪೆರೆ ಜತ್ತೆರ್. ನವೆಂಬರ್ 1878ಡ್ 1880 ಮುಟ್ಟ ವುಟೆನ್‌ಬರ್ಗ್‌ದ ಗೆಲಾರ್ಡ್ ಜಿಲ್ಲೆದ ರುಪರ್ಟ್‌ಶೋಷನ್ ಪನ್ಪಿ ಊರುದ ಒಂಜಿ ದೇವಾಲಯದ ಬೋಧಕರಾದ್ ಸೇವೆ ಮಲ್ಪ್ಯರೆ ಸೇರಿಯೆ‌ರ್.ಆಯಿಬೊಕ್ಕ ದೈವಜ್ಞಾನೊಡು ರಡ್ ವರ್ಷ ಶಿಕ್ಷಣ ಪಡೆದ ಎಂಗೈಲಾಟ್ ಪನ್ಪಿ ಊರುದ ಒಂಜಿ ಸಭೆತ್ತ ಬೋಧಕೆರಾದ್ ಸೇರ್ದ್ ಒಂತೆ ಸಮಯೊಡು ಬೊಕ್ಕ ಅಲ್ತ ಸಭೆಕ್ಕುಲೆ ಮುಖ್ಯಸ್ಥೆರಾದ್ ನೇಮಕ ಆದ್ ತನ್ನ ಸೇವೆನ್ ಮಲ್ತೊಂದಿತ್ತೆರ್.

1887 ಎಪ್ರಿಲ್ 13 ತಾರೀಕ್‌ದಾನಿ ಬಯ್ಯಗ್ ಬ್ರಿಗೆಲ್‌ರ್ ದೃಢ ಶರೀರೊನು ಈ ಲೊಕೊಡು ಬುಡ್ಡು ಪರಲೋಕ ಸೇರಿಯೆ‌ರ್. ಮರಣದ ಸಮಯೊಡು ಅರೆ ಬುಡೆದಿ ಬೊಕ್ಕ ಐನ್ ಜೋಕುಲು ಕೈತಲಿತ್ತೆರ್. 55 ವರ್ಷ ಪ್ರಾಯೊಡು ತನ್ನ ಬುಡೆದಿ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

55 [ 56 ] ಜೋಕುಲೆನ್‌ ದುಃಖೋಡು ಬುಡ್ಡು ದೇವರೆ ಸನ್ನಿಧಿಗ್ ಪೋಯಿ ಬ್ರಿಗೆಲ್ ತಾನ್ ಮಳ್ತಿ 29 ವರ್ಷದ ದೇವರೆ ಸೇವೆಡ್ ಮಲ್ಲ ಪಾಲ್‌ದ ಸೇವೆ ಸುಮಾರ್ 17 ವರ್ಷ ತುಳುನಾಡ್‌ಡೇ ಮಳ್ತೆರ್.ಮರಣದ ಸುದ್ದಿ ಕೇಂಡಿ ತುಳುನಾಡ್‌ದ ತುಳುವೆರ್ ಅತ್ತಂದೆ ಅರೆ ಸಹದ್ಯೋಗಿಲು ಕಣ್ಣನೀರ್ ಪಾಡಿಯೆರ್. ಆರ್ ನಮನ್ ಬುಡ್ಡು ಪೋದು 110 ವರ್ಷ ಕರಿಂಡಲಾ ಅರೆ ನೆಂಪು ತುಳುನಾಡ್‌ಡ್‌ ನನಲಾ ಉಂಡು. ಅಂಚಿತ್ತಿ ಬದ್‌ಕ್‌ನ್ ಮಳ್ತಿ ಬ್ರಿಗೆಲ್‌ನ ನೆಂಪುನು ನಮ್ಮ ಮಳ್ತೊನ್ನವು ಏತೋ ಅಗತ್ಯದವು ಆದುಂಡು.

ಪರಾಮರ್ಶನ ಸೂಚಿ 1. Basel Mission Report 1841-1888

2. J. Brigel, Grammar of Tulu language, Basel Mission Press, Mangalore, 1872

3. G.Shiri. (Ed) Wholeness in Christ, KATHRI Mangalore,1985

4. ಕು.ಶಿ. ಹರಿದಾಸ ಭಟ್ಟ (ಸಂ.)ಸ್ವಾತಂತ್ರ್ಯಪೂರ್ವ ತುಳು ಸಾಹಿತ್ಯ. ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ, 1997.

5. ಪಾದೆಕಲ್ಲು ವಿಷ್ಣು ಭಟ್ಟ (ಸಂ.) ತುಳುವರಿವರು, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ,ಉಡುಪಿ, 1997

6. ಪುರುಷೋತ್ತಮ ಬಿಳಿಮಲೆ(ಸಂ.) ಸಿರಿ,ಅಮೃತ ಸೋಮೇಶ್ವರ ಅಭಿನಂದನ ಸಂಪುಟ, ಕಲಾ ಗಂಗೋತ್ರಿ, ಸೋಮೇಶ್ವರ, 1995

7. ಡಾ.ಶ್ರೀನಿವಾಸ ಹಾವನೂರ, ಹೊಸಗನ್ನಡ ಅರುಣೋದಯ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, 1974

ಹೆಚ್ಚಿನ ಅಧ್ಯಯನಕ್ಕೆ ಓದಿರಿ:

1. J. Brigel; 1872, Grammar of Tulu language, repre. ತುಳು ಸಾಹಿತ್ಯ ಅಕಾಡೆಮಿ 2019 2. ಜಾನ್ ಜೇಮ್ಸ್ ಬ್ರಿಗೆಲ್, ಬೆನೆಟ್ ಜಿ. ಅಮ್ಮನ್ನ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 2012

56

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

[ 57 ] ಕನ್ನಡ ಪತ್ರಿಕೋದ್ಯಮದ ಮೊದಲ ದಿನಗಳು

ಭಾರತದಲ್ಲಿ ಪತ್ರಿಕೆಗೆ 237 ವರ್ಷಗಳ ಇತಿಹಾಸವಿದೆ. ಇಂಗ್ಲೆಂಡಿನಲ್ಲಿ ಪ್ರಥಮ ದೈನಿಕ ಆರಂಭವಾದ 80 ವರ್ಷಗಳ ನಂತರ ಅಂದರೆ 1780ರಲ್ಲಿ ಜೇಮ್ಸ್ ಹಿಕ್ಕೆ ಎಂಬಾತ 'ಬೆಂಗಾಲ್ ಗೆಜೆಟ್' ಎಂಬ ಪತ್ರಿಕೆಯೊಂದನ್ನು ಆರಂಭಿಸಿದ. ಇದನ್ನು ಭಾರತದ ಪ್ರಥಮ ಪತ್ರಿಕೆ ಎನ್ನುತ್ತಾರೆ. ಆಗಿನ ಎಲ್ಲ ಪತ್ರಿಕೆಗಳು ವಿದೇಶಿ ಆಡಳಿತಕ್ಕೆ ವಿರೋಧವನ್ನೇ ವ್ಯಕ್ತಪಡಿಸುತ್ತಿತ್ತು. ಒಂದು ರೀತಿಯಲ್ಲಿ ಸ್ವಾತಂತ್ರ್ಯ ಹೋರಾಟದ ಪ್ರಮುಖ ಶಕ್ತಿಗಳಲ್ಲಿ ಪತ್ರಿಕೆ ಒಂದಾಗಿತ್ತು. ಆದ್ದರಿಂದಲೇ ಭಾರತದ ವೃತ್ತ ಪತ್ರಿಕೆಗಳ ಇತಿಹಾಸವು ಭಾರತದ ರಾಜಕೀಯ ಇತಿಹಾಸದೊಂದಿಗೆ ಸೇರಿಕೊಂಡಿದೆ. ಪ್ರಪಂಚದ ಪರಿವರ್ತನೆಯನ್ನು ಮಾಡಿರುವುದು ಮುದ್ರಣ. ಪಾಶ್ಚಾತ್ಯ ಪ್ರಪಂಚದಲ್ಲಿ ಮುದ್ರಣದ ಪ್ರಭಾವವು ಜನಜೀವನದ ಮೇಲೆ ಮೂರು-ನಾಲ್ಕು ಶತಮಾನಗಳಿಂದ ಉಂಟಾಗಿದ್ದರೂ ಭಾರತದಲ್ಲಿ ಒಂದೂವರೆ ಶತಮಾನದಷ್ಟು ಈಚಿನದು. ನಮಗೆ ಈ ಸೌಲಭ್ಯವನ್ನು ಒದಗಿಸಿ ಕೊಟ್ಟವರು ಪಾಶ್ಚಾತ್ಯರು. ಕ್ರೈಸ್ತ ಮತ ಪ್ರಚಾರಕ್ಕಾಗಿ ಬಂದ ಮಿಶನರಿಗಳು ಅಚ್ಚುಮೊಳೆಗಳನ್ನು ಉಪಯೋಗಿಸುವುದಕ್ಕೆ ಮುಂಚಿತವಾಗಿಯೇ ದೇಶೀಯ ಪದ್ಧತಿಗಳಾದ ಕಲ್ಲಿನ ಕೆತ್ತನೆ, ತಾಮ್ರಪತ್ರ ಬರಹಗಳಂತೆ ಕಲ್ಲಚ್ಚಿನ ಮುದ್ರಣವನ್ನು ದೇಶೀಯರೊಂದಿಗೆ ಬಳಕೆಗೆ ತಂದರು. ಪ್ರಚಾರ ಸಾಧನಗಳಲ್ಲಿ ಇವತ್ತಿಗೂ ಅತ್ಯಂತ ಪರಿಣಾಮಕಾರಿಯಾದದ್ದು ಪತ್ರಿಕೆ. ದೂರದರ್ಶನ, ರೇಡಿಯೋ, ಇಂಟರ್‌ನೆಟ್ ತಕ್ಷಣದ ಪರಿಹಾರವಾದರೂ ಪತ್ರಿಕೆಯ ಪ್ರಭಾವ ಕುಗ್ಗಿಲ್ಲ. ಪತ್ರಿಕೆ ಸಮಾಚಾರವೂ ಹೌದು, ರಂಜನೆಯೂ ಹೌದು. ಪತ್ರಿಕಾ ಸಾಮಾರ್ಥ್ಯದ ಈ ಮುಖ್ಯ ಲಕ್ಷಣವನ್ನು ಮನಗಂಡಿದ್ದ ಪಾಶ್ಚಾತ್ಯರು, ಕರ್ನಾಟಕದಲ್ಲಿ ವಿಶೇಷತ: ಕ್ರೈಸ್ತ ಮತ ಪ್ರಚಾರಕರು ಪತ್ರಿಕೆಗಳನ್ನು ಹುಟ್ಟುಹಾಕಿದರು. ಆದರ ಸಾಧ್ಯತೆಗಳನ್ನು, ಸಾಮರ್ಥ್ಯವನ್ನು ಇತರರು ಬಹುತೇಕ ಗ್ರಹಿಸಿಕೊಂಡರು. ಕನ್ನಡ ನಾಡಿನಲ್ಲಿ ಪತ್ರಿಕೋದ್ಯಮವು ವೈವಿಧ್ಯಮಯವಾಗಿದೆ. ಬಹುತೇಕ ಪತ್ರಿಕೆಗಳು ಮಧ್ಯಮ ವರ್ಗದವರ ಅಭಿರುಚಿ ಅಕಾಂಕ್ಷೆಗಳ ಪ್ರತಿಬಿಂಬವಾಗಿದೆ.

ವಿವಿಧಉದ್ದೇಶಗಳೊಂದಿಗೆ ಪ್ರಾರಂಭವಾದ ಪತ್ರಿಕೆಗಳು ಪ್ರತಿ

57

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು

[ 58 ]

ವಿಭಾಗದಲ್ಲಿಯೂ ಮಾಹಿತಿಗಳನ್ನು ಕಲೆಹಾಕಿ ಪ್ರಕಟಿಸುತ್ತಿತ್ತು. ಸಂಶೋಧನೆ ನಡೆಸುವವರಿಗೆ ಶಾಸನ, ತಾಮ್ರಪತ್ರ, ತಾಳೆಗರಿ, ಹಸ್ತಪ್ರತಿ, ಬಾಯ್ದೆರೆ, ಮುದ್ರಿತ ಪುಸ್ತಕಗಳು ಹೇಗೆ ಪ್ರಾಮುಖ್ಯವೋ ಹಾಗೆಯೇ ಹಿಂದಿನ ಪತ್ರಿಕೆಗಳೂ ಸಹಕಾರಿಯಾಗಿವೆ. ಪತ್ರಿಕೆಗಳಲ್ಲಿ ಆಗಿನ ಚರಿತ್ರೆ, ಜನಜೀವನ, ಭಾಷೆ, ಸಂಸ್ಕೃತಿ, ಕೃಷಿ, ವಿಜ್ಞಾನ, ಮುಂತಾದ ಹಲಾವಾರು ವಿಭಾಗಗಳಲ್ಲಿ ಮಾಹಿತಿಗಳು ಸಿಗುತ್ತವೆ. ಗ್ರಂಥಗಳನ್ನು ಜೋಪಾನ ಮಾಡುವಂತೆ ಪತ್ರಿಕೆಗಳನ್ನು ಜೋಪಾನ ಮಾಡುವ ಕ್ರಮ ನಮಲ್ಲಿ ಬಂದಿಲ್ಲವಾದ್ದರಿಂದ ಕೆಲವಾರು ವಿಚಾರಗಳಲ್ಲಿ ದಾಖಲೆಯೇ ಸಿಗದ ಪರಿಸ್ಥಿತಿ ಉಂಟಾಗಿದ್ದು ಶೋಚನೀಯವಾಗಿದೆ. ಕೆಲವು ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳು ಒಟ್ಟು ಸೇರಿ ಗ್ರಂಥಗಳಾಗಿವೆ. ಕನ್ನಡ ನಾಡಿನಲ್ಲಿ ಪ್ರಕಟಗೊಂಡ ನೂರಾರು ಪತ್ರಿಕೆಗಳು ಈಗ ಅಲಭ್ಯವಾಗಿದ್ದು ಚರಿತ್ರೆಗೆ ಸೇರಿವೆ. ಕನ್ನಡದ ಮೊದಲ ಹಂತದ ಪತ್ರಿಕೆಗಳ ಚರಿತ್ರೆ ಬರೆಯುತ್ತಾ ಹೋದರೆ ಪುಸ್ತಕವನ್ನೇ ಬರೆಯಬೇಕಾಗುವುದು. ಈ ನಿಟ್ಟಿನಲ್ಲಿ ಮುದ್ರಣ ಮತ್ತು ಪತ್ರಿಕಾ ಕ್ಷೇತ್ರದಲ್ಲಿ ಅಡಿಗಲ್ಲನಿಟ್ಟ ವಿದೇಶಿ ಮಿಶನರಿಗಳ ನಾಯಕತ್ವದಲ್ಲಿ ಪ್ರಕಟಗೊಳ್ಳುತ್ತಿದ್ದ ಕೆಲವು ಪತ್ರಿಕೆಗಳ ಪರಿಚಯ ಮಾಡುವುದರಿಂದ ಕನ್ನಡ ಪತ್ರಿಕೋದ್ಯಮದ ಮೊದಲ ದಿನಗಳನ್ನು ಪರಿಚಯಿಸಲು ಈ ಲೇಖನದಲ್ಲಿ ಪ್ರಯತ್ನಿಸಲಾಗಿದೆ.

177 ವರ್ಷಗಳ ದೀರ್ಘ ಇತಿಹಾಸ ಹೊಂದಿರುವ ಕನ್ನಡ ಪತ್ರಿಕೋದ್ಯಮ ಪ್ರಾರಂಭವಾದದ್ದು ತುಳುನಾಡಿನ ಮಂಗಳೂರಿನಲ್ಲಿ ಎನ್ನುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಚಾರ. 1843ರಲ್ಲಿ 'ಮಂಗಳೂರ ಸಮಾಚಾರ' ವೆಂಬ ಹೆಸರಿನಲ್ಲಿ ಪ್ರಾರಂಭಗೊಂಡ ಕನ್ನಡ ಪಾಕ್ಷಿಕ (ತಿಂಗಳಿಗೆರಡಾವರ್ತಿ)ಪತ್ರಿಕೆಯಿಂದ ಕನ್ನಡ ಪತ್ರಿಕೋದ್ಯಮ ಚರಿತ್ರೆ ಕರ್ನಾಟಕದಲ್ಲಿ ಆರಂಭವಾಗುತ್ತದೆ. ಪಾಶ್ಚಾತ್ಯ ಪ್ರಪಂಚದಲ್ಲಿ ಜನಜೀವನದ ಮೇಲೆ ಮುದ್ರಣದ ಪ್ರಭಾವವು ಮೂರು ನಾಲ್ಕು ಶತಮಾನಗಳಿಂದ ಉಂಟಾಗಿದ್ದರೂ ನಮ್ಮಲ್ಲಿ ಈ ವ್ಯವಸ್ಥೆ ಒಂದೂವರೆ ಶತಮಾನದ ಈಚಿನದು. ಸೌಲಭ್ಯವನ್ನು ಒದಗಿಸಿಕೊಟ್ಟವರು ಪಾಶ್ಚಾತ್ಯರು. ಕ್ರೈಸ್ತ ಮತ ಪ್ರಚಾರಕ್ಕಾಗಿ ಬಂದ ಇವರು ಮೊದಲು ಇಲ್ಲಿ ಕಲ್ಲಚ್ಚಿನ ಮುದ್ರಣವನ್ನು ಬೆಳಕಿಗೆ ತಂದರು. ತದನಂತರ ಅಚ್ಚುಮೊಳೆಗಳ ಮುದ್ರಣವೂ ಆರಂಭವಾಯಿತು.

ಮದ್ರಾಸ್‌ ಆಧಿಪತ್ಯಕ್ಕೆ ಸೇರಿದ ತುಳು ಜಿಲ್ಲೆಯು ಆಂಗ್ಲರ ಆಳ್ವಿಕೆಯ ಕಾಲದ ಆರಂಭದಲ್ಲಿ ಶಿಕ್ಷಣ, ಕೈಗಾರಿಕೆ, ವ್ಯಾಪಾರ, ಕಲೆ, ವ್ಯವಸಾಯ, ಮೊದಲಾದ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೂ 1896ರವರೆಗೆ ಪತ್ರಿಕೋದ್ಯಮದಲ್ಲಿ ಮುಂದಡಿ ಇಟ್ಟಂತೆ ಕಂಡುಬರುತ್ತಿಲ್ಲ. ಸ್ವಿಜರ್ಲೆಂಡಿನ ಬಾಸೆಲ್‌ನಿಂದ 1834ರಲ್ಲಿ ಭಾರತಕ್ಕೆ ಬಂದ

58

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

[ 59 ]

ಮಿಶನರಿಗಳು ಇಲ್ಲಿ ಕೈಗಾರಿಕೆ, ವಿದ್ಯಾಸಂಸ್ಥೆ, ಮುದ್ರಣಾಲಯಗಳನ್ನು ಸ್ಥಾಪಿಸಿ ಹಲವಾರು ಸಾಹಸ ಮಾಡಿದ್ದಾರೆ. 1841ರಲ್ಲಿ ಜಿಲ್ಲೆಯಲ್ಲಿ ಬಾಸೆಲ್ ಮಿಶನ್‌ ಪ್ರೆಸ್‌ನ್ನು ಸ್ಥಾಪಿಸಿ ಕನ್ನಡ ಮತ್ತು ತುಳುವಿನಲ್ಲಿ ಮುದ್ರಣ ಕಾರ್ಯ ಪ್ರಾರಂಭಿಸಿದ ಇವರು 1843ರಲ್ಲಿ ವಾರ ಪತ್ರಿಕೆಯೊಂದನ್ನು ಸ್ಥಾಪಿಸಿ ಇಲ್ಲಿನ ಜನರಿಗೆ ವಾಚನಾಭಿರುಚಿ ಉಂಟು ಮಾಡಿದರೂ ಸುಮಾರು 50 ವರ್ಷಗಳವರೆಗೆ ಪತ್ರಿಕೋದ್ಯಮ ಅಭಿವೃದ್ಧಿಗೊಂಡದ್ದು ಕಂಡುಬರುವುದಿಲ್ಲ. ಇದಕ್ಕೆ ಹಲವಾರು ಕಾರಣಗಳಿವೆ. ಇವುಗಳಲ್ಲಿ ಮುಖ್ಯವಾದುದೆಂದರೆ ವಿದೇಶಿ ಸರಕಾರದವರು ದೇಶಭಾಷೆಗಳಿಗೆ ಶಿಕ್ಷಣ ವಿಚಾರದಲ್ಲಿ ಕಲ್ಪಿಸಿಕೊಡಬೇಕಾದಷ್ಟು ಪ್ರಶಸ್ಥ ಸ್ಥಾನವನ್ನು ಕಲ್ಪಿಸಿಕೊಡದಿದ್ದುದೂ, ಆಂಗ್ಲಭಾಷೆಗೆ ಅಗ್ರಸ್ಥಾನವನ್ನು ಉದ್ದೇಶಪೂರ್ವಕವಾಗಿ ಕಲ್ಪಿಸಿಕೊಟ್ಟದ್ದೂ. ಜಿಲ್ಲೆಯ ಜನತೆ ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ದೇಶ ಭಾಷಾ ಅಭಿಮಾನವನ್ನು ತೊರೆದು ಬಿಟ್ಟದ್ದು. ಓದುಬರಹ ಬಲ್ಲವರ ಸಂಖ್ಯೆ ಕಡಿಮೆ ಇದ್ದದ್ದು, ಇತರ ಭಾಷೆಗಳಲ್ಲಿರುವಷ್ಟು ಮಂದಿ ಸಮರ್ಥ ಪತ್ರಿಕಾ ಲೇಖಕರು ಮುಂದೆ ಬಾರದಿದ್ದುದು, ಇವೆಲ್ಲವುಗಳು ಕಾರಣವಾಯಿತೆಂದರೆ ತಪ್ಪಾಗಲಾರದು.

177 ಸಂವತ್ಸರಗಳನ್ನು ಪೂರೈಸಿದ ಮಂಗಳೂರ ಸಮಾಚಾರ ಎಂಬ ಕನ್ನಡದ ಪ್ರಪಥಮ ತಿಂಗಳಿಗೆರಡಾವರ್ತಿ ಪ್ರಕಟಗೊಳ್ಳುತಿದ್ದ ಪತ್ರಿಕೆಯು 1843 ಜುಲೈ 1 ರಂದು ಮಂಗಳೂರಿನ ಬಲ್ಮಠದಲ್ಲಿದ್ದ ಬಾಸೆಲ್ ಮಿಶನ್ ಪ್ರೆಸ್‌ನಲ್ಲಿ ಮುದ್ರಣಗೊಂಡು ಪ್ರಕಟಗೊಂಡಿತು. ಒಂದು ದುಡ್ಡು ಕ್ರಯಕ್ಕೆ ಮಾರಲ್ಪಡುತ್ತಿದ್ದ ಈ ಪತ್ರಿಕೆಯ ಮುಖಪುಟದಲ್ಲಿ ಈ ಕಾಗದವು ಕೊತ್ವಾಲ್ ಕಟ್ಟೆಗೆ ಯೆದುರಿರುವ ಯೋಹಾನ್ ಅಪ್ಪಂಣನ ಮನೆಯಲ್ಲಿ/ಕೋತ್ವಾಲ್ ಕಟ್ಟೆಯಲ್ಲಿ ತಾಲೂಕು ಕಛೇರಿ ಹತ್ತಿರವಿರುವ ಇಂಗ್ಲೀಷ್ ಶಾಲೆಯಲ್ಲಿಯೂ ಕ್ರಯಕ್ಕೆ ಸಿಕ್ಕುವುದು ಎಂಬುದಾಗಿ ನಮೂದಿಸಲಾಗಿದೆ. ಜುಲೈ 1843 ರಿಂದ 1844 ಫೆಬ್ರವರಿ ತನಕ ಪ್ರಕಟಗೊಂಡು 16 ಸಂಚಿಕೆಗಳು ಮಾತ್ರ ಮಂಗಳೂರ ಸಮಾಚಾರ ಎಂಬ ಹೆಸರಿನಿಂದ ಪ್ರಕಟಗೊಂಡು ನಂತರ “ಕಂನಡ ಸಮಾಚಾರ”ವೆಂಬ ಹೆಸರಿನಿಂದ ಮುನ್ನಡೆಯತೊಡಗಿತು. ಪತ್ರಿಕೆಯ ಮೊದಲ ಸಂಚಿಕೆಯಲ್ಲಿಯೇ ಪತ್ರಿಕೆಯನ್ನು ಹೊರಡಿಸುವ ಉದ್ದೇಶವಾದರೂ ಏನು? ಪತ್ರಿಕೆಯಲ್ಲಿ ಯೇನೇನಿದೆ, ಯೇನೇನಿರಬೇಕು ఎంబ ಪರಿಚಯವಿದೆ.

'ಮಂಗಳೂರಿನವರು ಮೊದಲಾದ ಈ ದೇಶಸ್ಥರು ಕಥೆಗಳನ್ನೂ ವರ್ತಮಾನಗಳನ್ನೂ ಕೇಳುವದರಲ್ಲಿಯೂ ಹೇಳುವುದರಲ್ಲಿಯೂ ಬಹಳ ಇಚ್ಚೆಯುಳ್ಳವರರಾಗಿದ್ದಾರೆ.' ಬೆಳಿಗ್ಗೆ ಬಂದ್ರದಲ್ಲಾಗಲಿ ಕಛೇರಿ ಹತ್ತರವಾಗಲಿ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

59 [ 60 ] ವೊಬ್ಬನು ಬಾಯಿಗೆ ಬಂದ ಹಾಗೆ ವೊಂದು ವರ್ತಮಾನದ ಹಾಗೆ ಮಾತಾಡಿದರೆ ಅದನ್ನು ಬೇರೊಬ್ಬನು ಆಶ್ಚರ್ಯದಿಂದ ಕೇಳಿ ಇನ್ನೊಬ್ಬನಿಗೆ ಹೇಳಿ ಸಾಯಂಕಾಲ ಪರಿಯಂತರ ಸುಳ್ಳು ಸುದ್ದಿಯಿಂದ ನಂಬಿಸುತ್ತಾರೆ. ಮರುದಿವಸ ನಿನ್ನಿನ ವರ್ತಮಾನ ಸುಳ್ಳು ಯಂತಾ ಕಾಣುವಷ್ಟರೊಳಗೆ ಎಮ್ಮೆ ಮೊಲೆಯಂತೆ ಮತ್ತೊಂದು ಹುಟ್ಟಿಯಾಯ್ತು. ಈ ಪ್ರಕಾರ ಬಹಳ ಜನರು ಕಾಲಕ್ರಮಣ ಮಾಡುತ್ತಾರೆಂದು ಕೆಲವು ವರ್ಷದಿಂದ ಇಲ್ಲಿ ವಸ್ತಿಯಾಗಿದ್ದ ಕೆಲವರು ತಿಳುಕೊಂಡು ಇದರಲ್ಲಿ ಪ್ರಯೋಜನವಿಲ್ಲವೆಂದು ಇ ಮನುಷ್ಯರ ಸಮಾಚಾರ ಅಸರಕ್ಕೆ ಯೋಗ್ಯವಾಗಿ ಪೂರೈಸಬೇಕೆಂದು ಆಲೋಚನೆ ಮಾಡಿದುದರಿಂದ ನಿಜ ಸಮಾಚಾರದ ಸಂಗ್ರಹವನ್ನು ಕೂಡಿಸಿ ಪಕ್ಷಕ್ಕೆ ವೊಂದು ಕಾಗದವನ್ನು ಛಾಪಿಸಿ ಸ್ವಲ್ಪ ಕ್ರಯಕ್ಕೆ ಜನರ ಕೈಯಲ್ಲಿ ಸೇರಿಸಬೇಕೆಂಬದಾಗಿ ನಿಶ್ಚಯಿಸಿಯದೆ.

ಮಂಗಳೂರ ಸಮಾಚಾರದ ಕಾಗದದಲ್ಲಿ ಬರಿಯುವ ವರ್ತಮಾನಗಳ ವಿವರದ ಪಟ್ಟಿ.
1. ವೂರ ವರ್ತಮಾನ:- ಸಾವಕಾರರಲ್ಲಿ ಆಗಲಿ ಸರಕಾರ ಚಾಕ್ರಿವಾನಲ್ಲಿ ಆಗಲಿ ಯಾವೊಬ್ಬನು ಬುದ್ಧಿಯಿಂದಲಾದರೂ ಸ್ವಧರ್ಮದಿಂದಲಾದರೂ ವಿಶೇಷವಾದ ಕಾರವನ್ನು ಜನರೆಲ್ಲರು ಅದನ್ನು ತಿಳುಕೊಂಡು ಅಂಥವರಿಗೆ ಸ್ವಾಭಿಮಾನ ಕೊಟ್ಟು ಅದೇ ನಡತೆಯನ್ನು ಅಂಗೀಕರಿಸ ಮುಂಕೇಳುವ ಹಾಗೆ ಪ್ರಕಟ ಮಾಡಿವದು. ಯಾರಾದರೊಬ್ಬರು ವಿಶೇಷವಾದ ಅಕ್ರಮವನ್ನು ನಡಿಸಿದರೆ ಅಂಥಾ ವಿಶಯದಲ್ಲಿ ಅಸಹ್ಯವೂ ಭಯವೂ ಜನರೊಳಗೆ ಹುಟ್ಟುವ ಹಾಗೆ ತಿಳಿಸುವುದು.

2. ಸರಕಾರದ ನಿರೂಪಗಳು:-ಮದ್ರಾಸ್ ಗೌರ್ನರ್ ದೊರೆಗಳೂ ಸದ್ರಿ ಬದಾಲತ್ ಕೊಡ್ತ ದೊರೆಗಳೂ ಯೀ ಜಿಲ್ಲಾ ಜಡ್ಜ್ ದೊರೆಗಳೂ ಕೊಡೋಣಾದ ವಿಶೇಷವಾದ ಹುಕುಂಗಳನ್ನು ತಿಳಿಯುವ ಹಾಗೆ ಈ ಕಾಗದದಲ್ಲಿ ಛಾಪಿಸುವುದು.

3. ಸರ್ವರಾಜ್ಯ ವರ್ತಮಾನಗಳು:-ಕಂಪೆನಿಯವರಯ ಬೇರೆ ಬೇರೆ ಸಂಸ್ಥಾನಕ್ಕೆ ಸೈನ್ಯವನ್ನು ಕಳುಹಿಸಿದರೆ ಯುದ್ಧದಲ್ಲಿ ಜಯಾಪಜಯವಾದರೆ ವೊಂದು ದೇಶವನ್ನು ತೆಗೆದುಕೊಂಡರೆ ಹೊಸ ಸಂಸ್ಥಾನವನ್ನು ಸ್ಥಾಪಿಸಿದರೆ ಬೇರೆ ಅರಸರ ಸಂಗಡ ವೊಡಂಬಡಿಕೆ ಮಾಡಿದರೆ ಯೀ ಮೊದಲಾದ ಸಮಾಚಾರಗಳನ್ನು ಶೇರಿದಾಗಲೇ ಯೀ ಕಾಗದದಲ್ಲಿ ಯಿದ್ದಹಾಗೆ ಬರದು ವಿಸ್ತರಿಸುವದು.

4.ನೂತನವಾದ ಆಶ್ಚರ ಸುದ್ದಿಗಳು:-ಈ ಹಿಂದೂ ದೇಶದಲ್ಲಾಗಲಿ ವಿಲಾಯತಿಯಲ್ಲಾಗಲಿ ಬೇರೆ ಯಾವ ದೇಶದಲ್ಲಾಗಲಿ ಮನುಷ್ಯರ ಬುದ್ಧಿ ಯುಕ್ತಿ ಶಕ್ತಿಗಳಿಂದಲಾದರೂ ದೇವರ ಚಿತ್ತದಿಂದಾಗಲೂ ಅಪರೂಪ ಒಂದು ಕಾರ್ಯವು ಸಂಭವಿಸಿದರೆ ಅದನ್ನು ತಿಳುಕೊಂಡಾಗಲೇ ಯೀ ಊರಿನವರಿಗೆ ಹೇಳುವದು.

60

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

[ 61 ]

5. ಅನ್ಯರ ನಡೆಗಳು:- ಯೀ ಕಾಗದದಲ್ಲಿ ಸ್ಥಳ ಸಿಕ್ಕಿದರೆ ಬೇರೆ ದೇಶಗಳಲ್ಲಿ ನಡವಡಿಕೆಯಾದ ರಾಜನೀತಿ ಗ್ರಹನೇಮ ಮೊದಲಾದವುಗಳನ್ನು ವಿವರಿಸುವುದು. ಯಾಕಂದರೆ ಬೇರೆ ಬೇರೆ ಜನರ ಮಾರ್ಗಗಳು ಅರಿತಿರುವುದರಿಂದ ಅವರ ಕಾರ್ಯಗಳನ್ನು ತಿಳುಕೊಳ್ಳಲಿಕ್ಕೆ ಬುದ್ದಿಯು ಹುಟ್ಟುವುದು.

6. ಸುಬುದ್ಧಿಗಳು:- ಬೇರೆ ಬೇರೆ ದೇಶಗಳ ಗಾದೆಗಳನ್ನು ಬೇರೆ ಬೇರೆ ಸಕಾಲಗಳಲ್ಲಿ ಬೇರೆ ಬೇರೆ ಜನರೊಳಗೆ ಪ್ರಸಿದ್ಧಿಯಾದ ಉತ್ತಮ ಬುದ್ಧಿಯ ಮಾತುಗಳನ್ನು ಯುಕ್ತ ಕಂಡ ಹಾಗೆ ಬರೆಯಲಿಕ್ಕೆ ನಿರ್ಣಯಿಸಿಯದೆ.

7. ಕಥೆಗಳು:- ಪಂಚತಂತ್ರ ಮೊದಲಾದ ಬೇರೆ ಬೇರೆ ದೇಶಸ್ಥರ ಪರಂಪರೆಯಾದ ಕಥೆಗಳಲ್ಲಿ ವೊಂದುಂದು ಬಾಲ ವೃದ್ಧ ಮೊದಲಾದವರ ಸಂತೋಷಕ್ಕಾಗಿ ರೂಢಿ ಭಾಷೆ ಹೇಳುವುದು ಆದೀತು.

8. ಯಾರಾದರೂ ವೊಂದು ವರ್ತಮಾನ ಅಥವಾ ಒಂದು ಮಾತು ಇದರಲ್ಲಿ ಸೇರಿಸಿ ಛಾಪಿಸಬೇಕೆಂತಾ ಬರದು ಕಳುಹಿಸಿದರೆ ಆ ಸಂಗತಿಯ ಸತ್ಯವಾಗಿದ್ದರೆ ಅದು ಸಹಾ ಈ ವರ್ತಮಾನ ಕಾಗದ ಸಂಗಡ ಕೂಡಿಸಿ ಛಾಪಿಸ ಬಹುದಾಗಿರುತ್ತದೆ.

ಈ ದೇಶವೆಂಬ ಮನೆಯಲ್ಲಿ ವಾಸಿಸುವ ಜನರು ಯಿಂದಿನ ಪರಿಯಂತರ ಹೊರಗಿನ ದೇಶಸ್ಥರ ಸಮಾಚಾರ ಮಾರ್ಗ ಮಾರ್ಯಾದೆಗಳನ್ನು ತಿಳಿಯದೇ ಕಿಟಕಿಯಿಲ್ಲದ ಬಿಡಾರದಲ್ಲಿ ವುಳಕೊಳ್ಳುವವರ ಹಾಗೆ ಇರುತ್ತಾ ಬಂದರು. ಆದಕಾರಣ ಹೊರಗಿನ ಕಾರ್ಯಗಳನ್ನು ಕಾಣುವ ಹಾಗೆಯೂ ವೊಳಗೆ ಸ್ವಲ್ಪ ಬೆಳಕು ಬೀಳುವ ಹಾಗೆಯೂ ನಾಲ್ಕು ದಿಕ್ಕಿಗೆ ಕಿಟಕಿಗಳನ್ನು ಮಾಡುವ ಈ ಸಮಾಚಾರ ಕಾಗದವನ್ನು ಪಕ್ಷಕ್ಕೆ ವೊಂದು ಸಾರಿ ಸಿದ್ದ ಮಾಡಿ ಅದನ್ನು ವೋದಬೇಕೆಂದಿರುವವರೆಲ್ಲರಿಗೆ ಕೊಟ್ಟರೆ ಕಿಟಕಿಗಳನ್ನು ಮಾಡಿದ ಹಾಗಾಗಿರುವದು ಈ ಕಾಗದವನ್ನು ಬರೆಯುವವರಿಗೂ ವೋದುವವರಿಗೂ ದೇವರು ಬುದ್ಧಿಯನ್ನು ಕೊಡಲಿ, ಇಂಥಾ ಸಮಾಚಾರ ಕಾಗದವನ್ನು ಬರಿಯುವವನು ವೋದುವವರೆಲ್ಲರಿಗೆ ಸಂತೋಷ ಪಡಿಸುವ ಹಾಗೆ ಬರಿಯಬೇಕೆಂದು ಮನಸು ಮಾಡುವನು. ಆದರೂ ಕೆಲವರು ಅಂಗೀಕರಿಸಿಯೂ ಕೆಲವರು ತಿರಸ್ಕರಿಸಿದರೆ ಆ ವಿಶಯಕ್ಕೆ ಆಧಾರಕ್ಕಾಗಿ ಪುರಂದರ ದಾಸರು ಮಾಡಿದ ಪದಗಳಲ್ಲಿ ವೊಂದು ಸಹಾ ಸರಿಯಾಗಿ ಹೇಳಲ್ಪಡುತ್ತದೆ.

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು

61 [ 62 ]

ಯೇನಾ ಹೇಳುವೆನೈಯ್ಯಯ್ಯ ಈ ಮಾನವ ಜನರನ್ನು ಮೆಚ್ಚಿಸಲುಂಟೆ,
ಯೇನ ಹೇಳುವೆನೈಯ್ಯಯ್ಯ
ಮಾತನಾಡದೆ ಮೂಕನಂತಾದರೆ ಮೂಕನೆಂದು ದಿಕ್ಕರಿಸುವರು.
ಚಾತುರ್ಯದಿಂದಲಿ ಮಾತುಗಳಾಡಲು ಆತನೇ ಬಾಯ್ದಡಕನೆಂಬರು,

ಹೀಗೆ ಒಳ್ಳೆ ಮಾತುಗಳಿಂದ ಜನರನ್ನು ಆಕರ್ಷಿಸಿ ಪತ್ರಿಕೆ ಹೊರ ಬರುತ್ತಿತ್ತು. ಕನ್ನಡ ಪತ್ರಿಕಾ ಕ್ಷೇತ್ರದ ಮೊದಲ ಪತ್ರಿಕೆ ಮಂಗಳೂರು ಸಮಾಚಾರವಾದರೂ ಇದು ಸ್ವದೇಶದಲ್ಲ ಎಂಬ ಕೊರಗನ್ನು ಒಬ್ಬ ಲೇಖಕರು ಕೃಷ್ಣ ಸೂಕ್ತಿ ಪತ್ರಿಕೆಯಲ್ಲಿ ತಮ್ಮ ಲೇಖನವೊಂದರಲ್ಲಿ ಉಲ್ಲೇಖಿಸಿದ್ದು ಹೀಗೆ, "ಮತ ಪ್ರಚಾರಕ್ಕಾಗಿ ಮಂಗಳೂರಿಗೆ ಬಂದ ಸಂಸ್ಥೆಯೊಂದರ ಪ್ರಚಾರ ಕಾರ್ಯಗಳಲ್ಲಿ ಇದೂ ಒಂದಾಗಿತ್ತು. ಕ್ರೈಸ್ತ ಧರ್ಮ ಪ್ರತಿಪಾದನಯೇ ಮುಖ್ಯ ಉದ್ದೇಶವಾಗಿದ್ದ ಈ ಪತ್ರಿಕೆಯಲ್ಲಿ ಜನರ ಆಶೋತ್ತರಗಳಿಗೆ ಅವಕಾಶ ತೀರಾ ಕಡಮೆ ಇತ್ತು. ಬದಲಾಗಿ ಹಿಂದೂ ಧರ್ಮ ಪರಂಪರೆಗಳ ಟೀಕೆಗೆ ಅವಕಾಶವಿರುತ್ತಿತ್ತು.

ಆದರೆ ಬಾಸೆಲ್ ಮಿಶನರಿಗಳು ಪ್ರಾರಂಭಿಸಿದ ಪತ್ರಿಕೆಯಾದ ಮೊದಲ ಪತ್ರಿಕೆಗಳಲ್ಲಿ ಲೇಖಕರು ಅನಿಸಿಕೊಂಡಂತಿಲ್ಲ. ಮಂಗಳೂರು ಸಮಾಚಾರ ಹಾಗೂ ಕನ್ನಡ ಸಮಾಚಾರ ತೀರಾ ಭಿನ್ನವಾದ ಶೈಲಿಯಲ್ಲಿ ಬರುತ್ತಿತ್ತು ಎನ್ನುವುದಕ್ಕೆ ಈ ಮೊದಲು ಪತ್ರಿಕೆಗಳಲ್ಲಿ ತಿಳಿದುಕೊಂಡದ್ದೇ ಸಾಕ್ಷಿ. ಮತಪ್ರಚಾರದ ಉದ್ದೇಶಕ್ಕಾಗಿ ಬಂದ ಇವರು ತಮ್ಮ ಚರ್ಚ್ ವಠಾರದಲ್ಲಿ ಅಥವಾ ಕ್ರೈಸ್ತರಾದವರ ಮಧ್ಯೆ ಪ್ರಸಾರಕ್ಕಾಗಿ ತುಲನಾತ್ಮಕ ಅಧ್ಯಯನದಂತ ಕ್ರೈಸ್ತ ಪತ್ರಿಕೆಗಳನ್ನು ಪ್ರಕಟಿಸಿದ್ದಾರೆಯೇ ವಿನಾ ಮೊದಲಿನ ಎರಡು ಕನ್ನಡ ಪತ್ರಿಕೆಯಲಿ ಧರ್ಮ ನಿಂದನೆ ಅಥವಾ ತುಲನಾತ್ಮಕ ಅದ್ಯಯನ ವಿಚಾರಗಳನ್ನು ಎಲ್ಲಿಯೂ ಬಳಸಲಿಲ್ಲ. ಇತರ ಧರ್ಮದ ಬಗ್ಗೆ ಪತ್ರಿಕೆಯಲ್ಲಿ ಉಲ್ಲೇಖಿಸುತ್ತಿದ್ದುದು ಹೀಗೆ.

ಮರವು ತನ್ನನ್ನು ಕಡಿಯಬಂದವನ ಮೇಲೆ ನೆರಳನ್ನು ಕೊಡುವುದನ್ನು ಹೇಗೆ ನಿಲ್ಲಿಸುವುದಿಲ್ಲವೋ ಹಾಗೆಯೇ ಸಜ್ಜನರು ಶತ್ರುವೇ ಆಗಿರಲಿ ಮನೆಗೆ ಬಂದರೆ ಅತಿಥ್ಯವನ್ನು ಕೊಡದೇ ಇರುವುದಿಲ್ಲ. ಚಂಡಾಲನ ಮನೆಯಾದರೇನಂತೆ ಚಂದಿರನು ಅಲ್ಲಿಯೂ ಬೆಳಕನ್ನು ನೀಡುತ್ತಾನಷ್ಟೇ. ಹಾಗೆಯೇ ಸಾದು ಜನರು ಗುಣರಹಿತರಲ್ಲಿಯೂ ದಯೆ ತೋರಿಸುತ್ತಾರೆ. ಈ ಭಾವದ ಒಂದು ಪದ್ಯವು ಹಿತೋಪದೇಶದಲ್ಲಿ ಕಂಡುಬರುತ್ತದೆ. ಆ ಶ್ಲೋಕವನ್ನು ಕೊಟ್ಟು ಅದಕ್ಕೆ ಸಮಾನಾಗಿರುವ ಬೈಬಲ್‌ನಲ್ಲಿರುವ ಏಸುವಿನ ಈ ವಾಕ್ಯವನ್ನು ಉದ್ಧರಿಸಲಾಗಿದೆ. "ನಾನು ನಿಮಗೆ ಹೇಳುವುದೇನೆಂದರೆ ಶತ್ರುಗಳಿಗೆ ಪ್ರೀತಿ ಮಾಡಿರಿ ನಿಮಗೆ

62

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.

[ 63 ]

ಶಪಿಸುವವರನ್ನು ಆಶೀರ್ವದಿಸಿರಿ, ನಿಮಗೆ ಹಗೆ ಮಾಡುವವರಿಗೆ ಉಪಕಾರ ಮಾಡಿರಿ. ನಿಮಗೆ ಹಿಂಸೆಯೂ ನಿಂದೆಯೂ ಮಾಡುವವರಿಗೋಸ್ಕರ ಪ್ರಾರ್ಥಿಸಿರಿ.

ಈ ವಿಚಾರವಾಗಿ ಡಾ ಹಾವನೂರರು ಹೀಗೆ ಬರೆಯುತ್ತಾರೆ. ಮಿಶನರಿಗಳು ಈ ಪತ್ರಿಕೆಯನ್ನು ಸ್ವಮತ ಪ್ರಸಾರಕ್ಕಾಗಿ ಬೇಕಾದ ಬಳಸಿಕೊಳ್ಳಬಹುದಾಗಿತ್ತು. ಹಾಗೆ ಮಾಡದ್ದರಿಂದ ಕನ್ನಡದ ಈ ಮೊದಲ ಪತ್ರಿಕೆಯು ಜಾತ್ಯಾತೀತವಾದ ಸಮಸ್ತ ಕನ್ನಡಿಗರನ್ನುದ್ದೇಶಿಸಿದ ಪತ್ರಿಕೆಯಾಗಿ ನಿಂತಿತು. ಕ್ರಿಶ್ಚಿಯನ್ ಮತ ವಿಚಾರಗಳು ವ್ಯಕ್ತವಾದ ಸಂದರ್ಭಗಳೆಂದರೆ ದಾಸರ ಪದ ಹಾಗೂ ಸಂಸ್ಕೃತ ಶ್ಲೋಕಗಳನ್ನು ಕೊಡುತ್ತಾ ಅದಕ್ಕೆ ಸಮಾನಾದ ಬೈಬಲ್ ಉಕ್ತಿಗಳನ್ನು ವಿವರಿಸಿದುದು. ಆ ನಿಮಿತ್ತದಿಂದ ಪುರಂದರ ದಾಸರ ಕೆಲವು ಹಾಡುಗಳು ಕನ್ನಡದ ಮೊದಲ ಪತ್ರಿಕೆಯ ಮೂಲಕ ಮೊತ್ತ ಮೊದಲ ಬಾರಿಗೆ ಮುದ್ರಣದ ಮೂಲಕ ಬೆಳಕಿಗೆ ಬಂದಿರುವುದು ಗಮನಾರ್ಹವಾಗಿದೆ. ಕರ್ನಾಟಕ ಕೈಸ್ತರ ಇತಿಹಾಸ ಎಂಬ ಕೃತಿಯಲ್ಲಿ ಬಿ.ಎಸ್‌. ತಲ್ವಾಡಿಯವರು ಈಬಗ್ಗೆ ಉಲ್ಲೇಖಿಸಿದ್ದು ಹೀಗೆ. “ಮೋಗ್ಲಿಂಗ್ ಈ ಪತ್ರಿಕೆಯನ್ನು ಸ್ವಮತ ಪ್ರಚಾರಕ್ಕೆ ಬಳಸದೆ ಎಲ್ಲ ವರ್ಗದವರನ್ನು ಉದ್ದೇಶಿಸಿದ ಪತ್ರಿಕೆಯನ್ನು ಮಾಡಿದ್ದು ಈತನನ್ನು ಕನ್ನಡ ಪತ್ರಿಕೋದ್ಯಮದ ಆದ್ಯನನ್ನಾಗಿ ಮಾಡಿತು”.

ಈ ಪತ್ರಿಕೆಯಲ್ಲಿ ಮಂಗಳೂರು, ಜಿಲ್ಲೆ, ರಾಜ್ಯ ಹಾಗೂ ಇತರ ಸುದ್ದಿಗಳು ಪ್ರಕಟಗೊಳ್ಳುತ್ತಿದ್ದವು. ಸುಳ್ಳು ಸುದ್ದಿಗಳಿಗೆ ಅವಕಾಶ ನೀಡುತ್ತಿರಲಿಲ್ಲ. ಅಪರಾಧಕ್ಕೆ ಶಿಕ್ಷೆ ಮುಂತಾದ ವಿಷಯಗಳನ್ನು ಜನರ ತಿಳುವಳಿಕೆಗಾಗಿ ಹೆಚ್ಚಾಗಿ ಪ್ರಕಟಿಸುತ್ತಿದ್ದರು.

ಈ ಪತ್ರಿಕೆಯ ಬೇಡಿಕೆ ಹೆಚ್ಚಾದಾಗ ಹೆಚ್ಚು ಪ್ರತಿಗಳನ್ನು ಮುದ್ರಿಸುವುದಕ್ಕಾಗಿ ಬಳ್ಳಾರಿ ಮಿಶನ್ ಪ್ರೆಸ್‌ನಲ್ಲಿ ಮುದ್ರಿಸಲು ಪ್ರಾರಂಭವಾಯಿತು. ಕೇವಲ ನಾಲ್ಕು ಪುಟಗಳ ಪತ್ರಿಕೆಯಾದರೂ ಬೇಡಿಕೆ ಹೆಚ್ಚಾದ್ದರಿಂದ ಹೆಚ್ಚು ಪ್ರತಿಗಳನ್ನು ಮುದ್ರಿಸಬೇಕಾಗಿತ್ತು. ಆದರೆ ಕಲ್ಲಚ್ಚು ಮುದ್ರಣದಲ್ಲಿ ಹೆಚ್ಚು ಪ್ರತಿಗಳನ್ನು ಮುದ್ರಿಸಲು ಅಸಾಧ್ಯವಾದ್ದರಿಂದ ಬಳ್ಳಾರಿ ಮಿಶನ್‌ ಪ್ರೆಸ್‌ನಲ್ಲಿ ಮುದ್ರಿಸಿ ತರಲಾಗುತ್ತಿತ್ತು. ಕನ್ನಡದ ಮೊದಲ ಮುದ್ರಣ ಸಾಹಿತ್ಯದಲ್ಲಿ ನಮಗೆ ಕಾಣಸಿಗುವುದು. 1817ರ ವಿಲಿಯಂ ಕೇರಿಯವರ ಕನ್ನಡ ವ್ಯಾಕರಣ. ಇದು ಮುದ್ರಣವಾದದ್ದು ಸೆರಂಪೂರಿನಲ್ಲಿ. ಅನಂತರ ಪ್ರಾರಂಭವಾದ ಬಳ್ಳಾರಿಯಲ್ಲಿ ಲಂಡನ್ ಮಿಶನ್ ಪ್ರೆಸ್ ಆರಂಭಗೊಂಡು ಕನ್ನಡ ಮುದ್ರಣ ಆರಂಭಿಸಿತು. ಈ ಎರಡು ಪ್ರೆಸ್‌ಗಳಲ್ಲಿ ಕನ್ನಡ ಮುದ್ರಣವಾದದ್ದು ಕಲ್ಲಚ್ಚು ಮುದ್ರಣದಲ್ಲಿ ಅಲ್ಲ. ಆಗ ಕನ್ನಡ ಮತ್ತು ತೆಲುಗು ಭಾಷೆಗೆ ಒಂದೇ ಅಚ್ಚುಮೊಳೆಗಳನ್ನು ಬಳಕೆ ಮಾಡಲಾಗುತ್ತಿತ್ತು. ಇಲ್ಲಿ ಮುದ್ರಣಗೊಂಡ ಪತ್ರಿಕೆಗೆ “ಕನ್ನಡ ಸಮಾಚಾರ” ಎಂಬ ಹೆಸರಾಯಿತು.( 1844 ಮಾರ್ಚ್-1844 ನವೆಂಬರ್)

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

63 [ 64 ] ಬಳ್ಳಾರಿಯಲ್ಲಿ “ಕನ್ನಡ ಸಮಾಚಾರ"ಪತ್ರಿಕೆ ಮುದ್ರಣಗೊಳ್ಳಲು ಪ್ರಾರಂಭವಾಗುವುದಕ್ಕೆ ಕಾರಣವನ್ನು “ಮಂಗಳೂರು ಸಮಾಚಾರ” ಪತ್ರಿಕೆಯ ಕೊನೆಯ ಸಂಚಿಕೆಯಲ್ಲಿ ಹೀಗೆ ಬರೆದಿದ್ದಾರೆ.

ಹೋದ ವರ್ಷದ ಜುಲೈ 1ನೇ ತಾರೀಕಿನಲ್ಲಿ ಯೇ ಸಮಾಚಾರದ ಕಾಗದ ಮೊದಲು ಸ್ಥಾಪಿಸಲ್ಪಟ್ಟು ಕನ್ನಡ ಶೀಮೆಯಲ್ಲಿ ಪ್ರಕಟವಾಗಲಿಕ್ಕೆ ಆರಂಭವಾಯಿತು. ಮಂಗಳೂರು, ಮೈಸೂರು, ತುಮ್ಮೂರು, ಬಳ್ಳಾರಿ, ಶಿವಮೊಗ್ಗ, ಹುಬ್ಬಳ್ಳಿ, ಶಿರಸಿ, ಹೊನ್ನಾವರ ಮೊದಲಾದ ಕೆಲವು ನೂರು ಮಂದಿ ಈ ಕಾಗದವನ್ನು ಈ ವರೆಗೆ ತೆಗೆದುಕೊಳ್ಳುತ್ತಾ ಬಂದರು. ಮೊದಲಿನ ನಂಬ್ರದ ಕಾಗದಗಳನ್ನು ಛಾಪಿಸಿ ಪ್ರಕಟ ಮಾಡುವಾಗ್ಗೆ ನಾವು ಮಾಡಿದ ಆಲೋಚನೆ ಈ ಕಾಲದಲ್ಲಿಯೂ ದೇಶಸ್ಥರೊಳಗೆ ನಡಿಯುವದೋ ಯೇನೋ ಎಂದು ಸ್ವಲ್ಪ ಸಂದೇಹ ಪಡುತ್ತಿದ್ದೆವು. ಈಗಲೂ ಈ ದೇಶಸ್ಥರಲ್ಲಿ ಅನೇಕರಿಗೆ ಕನ್ನಡ ಭಾಷೆಯಲ್ಲಿ ಬರೆದ ವೊಂದು ಸಮಾಚಾರ ಕಾಗದವನ್ನು ಓದುವುದರಲ್ಲಿ ರುಚಿಯಾಗುವುದೆಂದು ನೋಡಿ ಸಂತೋಷದಿಂದ ಅದನ್ನು ವೃದ್ಧಿ ಮಾಡುವ ಪ್ರಯತ್ನದಿಂದ ಇನ್ನು ಮುಂದೆ ಅದನ್ನು ಕಲ್ಲಿನಲ್ಲಿ ಛಾಪಿಸದೇ ಬಳ್ಳಾರಿಯಲ್ಲಿರುವ ಅಕ್ಷರ ಛಾಪಖಾನೆಯಲ್ಲಿ ಅಚ್ಚುಪಡಿ ಮಾಡಿಲಿಕ್ಕೆ ನಿಶ್ಚಿಸಿದ್ದೇವೆ. ಆ ಮೇಲೆ ಕನ್ನಡ ಸೀಮೆಯ ನಾಲ್ಕು ದಿಕ್ಕುಗಳಲ್ಲಿ ಇರುವವರು ಶುದ್ಧವಾದ ಮೊಳೆ ಅಚ್ಚುಗಳಿಂದ ಆಗುವ ಬರಹವನ್ನು ಸುಲಭವಾಗಿ ವೋದಬಹುದು. ಇದಲ್ಲದೆ ಬಳ್ಳಾರಿಯಲ್ಲಿ ಆಗುವ ವರ್ತಮಾನದ ಒಂದು ಕಾಗದದಲ್ಲಿ ಸ್ವಲ್ಪ ಕಡಿಮೆ ಮೊದಲಿನ ಎರಡು ಕಾಗದದಷ್ಟು ಬರಹ ಹಿಡಿಯುವುದರಿಂದ ಹೆಚ್ಚು ವರ್ತಮಾನವನ್ನೂ, ಚರಿತ್ರೆಗಳನ್ನೂ, ವಿಧ್ಯಾಪಾಠಗಳನ್ನೂ ಬುದ್ಧಿ ಮಾತುಗಳನ್ನೂ ಬರಿಯುವುದಕ್ಕೆ ಸ್ಥಳ ಸಿಕ್ಕುವುದು. ಮುಂಚಿನ ಕಾಗದ ಕ್ರಯವು ಒಂದು ದುಡ್ಡಾಗಿತ್ತು. ಇದು ಹೊರ್ತು ಕಾಗದಗಳನ್ನು ತೆಗೆದುಕೊಳ್ಳುವವರು ಟಪ್ಪಾಲು ದಸ್ತುರಿ ಕೊಡಬೇಕಾಗಿತ್ತು. ಇನ್ನು ಮುಂದೆ ಒಂದೊಂದು ಕಾಗದಕ್ಕೆ ಎರಡು ದುಡ್ಡು ಕ್ರಯಮಾಡಿ ನಾವೇ ಟಪ್ಪಾಲು ದಸ್ತುರಿ ಸಲ್ಲಿಸಿ ತೆಗೆದುಕೊಳ್ಳುವವರಿಗೆ ಟಪ್ಪಾಲು ದಸ್ತುರಿ ವಿನಹ ಕಳುಹಿಸುವೆವು. ಕನಾಡ ಜಿಲ್ಲೆಯಲ್ಲಿರುವವರು ಈವರೆಗೆ ಮಾಡಿದ ಪ್ರಕಾರ ವರ್ತಮಾನ ಕಾಗದದ ಕ್ರಯವನ್ನು ಮಂಗಳೂರಿನಲ್ಲಿ ನಮಗೂ ಮೈಸೂರ ರಾಜ್ಯ ಬಳ್ಳಾರಿ ಜಿಲ್ಲೆ ಮೊದಲಾದ ಸ್ಥಳಗಳಲ್ಲಿರುವವರು ಸಲ್ಲಿಸಬೇಕಾದ ಹಣವನ್ನು ಬಳ್ಳಾರಿಯಲ್ಲಿರುವ ನಮ್ಮ ಸ್ನೇಹಿತನಾದ ವಿಲಿಯಂ ತೋಯ್ಸನ್ ದೊರೆಯವರಿಗೆ ಕಳುಹಿಸಿ ಕೊಟ್ಟರೆ ಆದೀತು. ಹದಿನಾರನೇ ನಂಬ್ರದ ಕಾಗದವು ಮಂಗಳೂರಿನಲ್ಲಿ ಛಾಪಿಸಿದ ತರುವಾಯ

64

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

[ 65 ]

ಹದಿನೇಳನೇ ನಂಬ್ರದ ಕಾಗದವು ಮಾರ್ಚಿ ತಾರೀಕು 1ರಲ್ಲಿ ದೇವರ ಚಿತ್ರವಾದರೆ ಬಳ್ಳಾರಿಯಲ್ಲಿ ಛಾಪಿಸಲ್ಪಡುವುದು. ಅಂದಿನಿಂದ “ಮಂಗಳೂರ ಸಮಾಚಾರ”ವೆಂಬ ಹೆಸರನ್ನು ಬಿಟ್ಟು ಈ ಕಾಗದವು ಕನ್ನಡ ಭಾಷೆಯನ್ನಾಡುವ ಸಕಲ ಜನರಲ್ಲಿ ಪ್ರಸಿದ್ಧಿಯಾಗಬೇಕೆಂಬ ಯಿಚ್ಚೆಯಿಂದ “ಕನ್ನಡ ಸಮಾಚಾರ”ವೆಂಬದನ್ನು ಮೇಲೆ ಬರೆಯಲಾದೀತು.

1857 ಕನ್ನಡ ವಾರ್ತಿಕ, ಅಚ್ಚಿನ ಮೊಳೆಗಳನ್ನು ಬಳಸಿ ಮೊದಲು ಪ್ರಕಟವಾದ ಪತ್ರಿಕೆಯಾಗಿದೆ.

1862-1863 ಬಾಸೆಲ್ ಮಿಶನ್‌ನಿಂದ ಪ್ರಕಟವಾಗುತ್ತಿದ್ದ ಮತ್ತೊಂದು ಪತ್ರಿಕೆ ವಿಚಿತ್ರ ವರ್ತಮಾನ ಸಂಗ್ರಹ. ಯಾಕೆ ಈ ವಿಚಿತ್ರ ಹೆಸರು ಎಂದು ನೆನಸಬಹುದು. ಇದು ಸುಂದರ ಚಿತ್ರಗಳನ್ನು ಒಳಗೊಂಡು ಪ್ರಕಟವಾಗುತ್ತಿತ್ತು. ವೂರ ವರ್ತಮಾನಗಳು, ಬುದ್ದಿಯ ಕತೆಗಳು, ವಿವಿದ ಲೇಖನಗಳು, ಚಿತ್ರಗಳನ್ನು ಹೊತ್ತು ಬರುತ್ತಿದ್ದ ಕನ್ನಡದ ಪ್ರಪ್ರಥಮ ಪತ್ರಿಕೆ ಇದೇ ಎಂದು ಡಾ. ಹಾವನೂರರು ಸಂಪಾದಿಸಿದ ಕರ್ನಾಟಕ ಪತ್ರಿಕಾ ಸೂಚಿಯಲ್ಲಿ ಬರೆಯುತ್ತಾರೆ.

ಸತ್ಯದೀಪಿಕೆ(I886-1917) ಇದು ಕ್ರೈಸ್ತ ಸಭಾ ವಾರ್ತೆಗಳನ್ನು ಪ್ರಕಟಿಸುತ್ತಿದ್ದ ಪತ್ರಿಕೆಯಾಗಿದ್ದರೂ ದೇಶಿಯ ಬರಹಗಾರರ ಬರವಣಿಕೆಗಳು ಈ ಪತ್ರಿಕೆಯಲ್ಲಿ ಬರುತ್ತಿತ್ತು. 1905ರ ಸುಮಾರಿಗೆ ಪಂಜೆ ಮಂಗೇಶರಾಯರು ಹರಟೆಮಲ್ಲ ಶೀರ್ಷಿಕೆಯಡಿ ಬರೆಯತ್ತಿದ್ದ ಲೇಖನದ ಒಂದು ಮಾದರಿ ಹೀಗಿದೆ. “ಹಂಪನಕಟ್ಟೆಯಿಂದ ಮಡಿಕೇರಿಗುಡ್ಡದವರೆಗೆ ರಸ್ತೆ ಎಲ್ಲಾ ಹುಣ್ಣು ಹುಣ್ಣಾಗಿ ಕೀವು ನಿಂತಿದೆ. ಸರದಾರರ ಗಾಡಿ ಹೋಗುವ ಈ ರಸ್ತೆಗೆ ಈ ಅವಸ್ತೆ; ಮಿಕ್ಕ ಹಾದಿಗಳ ಗತಿ ಕೇಳುವುದೇನು. ಮಳೆಗಾಲ ಮುಗಿಯುತ್ತಾ ಬಂತು ಕೊಳೆಕಾಲ ಮಾತ್ರ ತಪ್ಪಲಿಲ್ಲ. ಈ ಬಿರುಮಳೆಗೆ ಉಳ್ಳಾಲ ಸೇತುವೆಗೆ ರೈಲ್ವೆಯವರು ಕಟ್ಟಿದ ಅಣೆಕಟ್ಟು ನಿಂತದ್ದು ಆಶ್ಚರ್ಯ. ಮಂಗಳೂರಿಂದ ಉಡುಪಿಗೆ ರೈಲು ಮಾರ್ಗವಾಗಲು ಸರ್ವೆ ಮಾಡುತ್ತಾರಂತೆ. ಇದು ನಿಜವೇ ಸ್ವಾಮಿ, ಮಾಜಿ ಧರ್ಮಸ್ಥಳದ ಪೆರ್ಗಡೆಯವರಾದ ನಮ್ಮ ಮಂಜಪ್ಪ ಹೆಗ್ಗಡೆಯವರು ನಮ್ಮ ಮಂಗಳೂರು ಮುನಿಸಿಪಾಲಿಟಿಯಲ್ಲಿರುವ ಗೋವುಗಳಿಗೆ ಅಲ್ಲಲ್ಲಿ ನೀರು ಸಿಕ್ಕುವ ಹಾಗೆ, ಸ್ವಲ್ಪ ಹಣವನ್ನು ಶೇಖರಿಸಿ ಅವರ ವಶಕ್ಕೆ ಕೊಟ್ಟರಂತೆ. ಹಾಗೆಯೇ ಮಂಜೇಶ್ವರ ರಾಮಕೃಷ್ಣರಾಯರು ಬಾಲಕಿಯರ ಪಾಠ ಶಾಲೆಯ ಬಗ್ಗೆ ಸ್ವಲ್ಪ ಧನವನ್ನು ಮುನಿಸಿಪಾಲಿಟಿಯವರಿಗೆ ಕೃಷ್ಣಾರ್ಪಣೆ ಮಾಡಿದ್ದಾರಂತೆ, ಇವುಗಳ ಇತ್ಯರ್ಥವು ಇನ್ನೂ ಆಗಲಿಲ್ಲ. ಅದರಂತೆ ಹುಲಿಗಳ ಬಿನ್ನಹವನ್ನು ನೀವು ಮೂಲೆಗೆ ತಳ್ಳಬಾರರು. ಡೊಂಗರಕೇರಿಯಲ್ಲಿ ಗೋಕಲ್ಲು

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

65 [ 66 ] ಇಡುವುದಕ್ಕೆ ಸಾಕಷ್ಟು ಹಣವನ್ನು ಕೌನ್ಸಿಲಿಗೆ ಕೊಟ್ಟ ಯಾರೋ ಪುಣ್ಯಾತ್ಮರು ಇನ್ನೂ ಕೃತಾರ್ಥರಾಗಲಿಲ್ಲ. ಇಂಥವರಿಗೆ ಏನು ಸಮಾಧಾನ ಹೇಳಬೇಕು ? ಕೆಳಗಿನ ಶ್ಲೋಕವನ್ನು ಜಪಿಸಿ ಶೋಕವನ್ನು ಮರೆಯಲಿ.” ಎಂದು ಬರೆಯುತ್ತಾರೆ.

ಮೂಕ ಮುನ್ಸಿಪಾಲಿಟಿಗೆ ನೂರ್ಕಾಸು ಕೊಟ್ಟರು
ಗೋಕಲ್ಲ ಕಟ್ಟೆಂದು ಬೇಡಿದರು, ಅದು ತಾನು
ನೀರ್ಕೊಂಬುದೇ ಸರ್ವಜ್ಞ

ಕ್ರೈಸ್ತ ಸಭಾಪತ್ರ (1867-1895) ಬಾಲಪತ್ರ (1869-1871) ಮುಂತಾದ ಪತ್ರಿಕೆಗಳನ್ನು ಪ್ರಕಟಿಸುತ್ತಿದ್ದು ಇವುಗಳು ಧಾರ್ಮಿಕ ಪತ್ರಿಕೆಗಳಾದರೂ ಸ್ಥಳೀಕ ವಾರ್ತೆಗಳಿಗೆ ಸ್ಥಳವಕಾಶವನ್ನು ಒದಗಿಸಿತ್ತು. ನ್ಯಾಯಸಂಗ್ರಹ (1868) ಈ ಪತ್ರಿಕೆ ಬಾಸೆಲ್ ಮಿಶನ್ ಪ್ರೆಸ್ಸಿನ ಮುದ್ರಣವಾದರೂ ಇದರ ಪ್ರಕಾಶಕರು ಮಂಗಳೂರಿನ ಯು. ಗೋಪಾಲ ಕೃಷ್ಣಯ್ಯ, ಮತ್ತು ಸುಭೋಧಿನಿ (1871) ಈ ಪತ್ರಿಕೆಯ ಪ್ರಕಾಶಕರು ಮಂಗಳೂರಿನ ಎಲ್‌. ರಾಮರಾವ್. ಈ ಎರಡು ಪತ್ರಿಕೆಗಳು ಕೋರ್ಟು, ನ್ಯಾಯ, ವ್ಯಾಜ್ಯ ಮುಂತಾದ ವಿಷಯಗಳಿಗೆ ಸಂಬಂಧಪಟ್ಟಿದ್ದು ತಿಂಗಳಿಗೆರಡಾವರ್ತಿ ಪ್ರಕಟಗೊಳ್ಳುತ್ತಿತ್ತು.

ಚರಿತ್ರೆ ಹೇಳುವ ಕನ್ನಡ ಪಂಚಾಂಗ. (1853-1936) ಬಾಸೆಲ್ ಮಿಶನ್ ಪ್ರೆಸ್‌ನಲ್ಲಿ ಪ್ರಕಟವಾದ ಕನ್ನಡ ಪಂಚಾಂಗ ವಾರ್ಷಿಕ ಪತ್ರಿಕೆ 1853 ರಿಂದ ಕಾಸರಗೋಡಿನ ಶ್ರೀ ಪುತ್ಥಳಿ ದಾಸಪ್ಪಯ್ಯನವರ ಪುತ್ರ ಶ್ರೀ ಪುತ್ಥಳಿ ಬಾಳಪ್ಪಯ್ಯನವರು ಆರ್ಯಭಟೀಯ ವ್ಯಾಕರಣ ರೀತ್ಯಾ ಪಂಚಾಂಗವನ್ನು ರಚಿಸುತ್ತಿದ್ದರು. ಬಾಳಪ್ಪಯ್ಯನವರು ಆಂಗ್ಲ ಜ್ಯೋತಿಷ್ಯವನ್ನೂ ಅಭ್ಯಾಸ ಮಾಡಿದವರಾಗಿದ್ದು ಆಗ ಪ್ರಚಲಿತವಾಗಿದ್ದ 'ನಾವಿಕ ಪಂಚಾಂಗ'ದ ಆಧಾರಗಳನ್ನು ಪಡೆದಿದ್ದರು. 1877ರಿಂದ ಈ ಪಂಚಾಂಗವು ದೃಗಣಿತ ರೀತ್ಯಾ ಗಣಿಸಲ್ಪಟ್ಟು 'ಕನ್ನಡ ಪಂಚಾಂಗ'ವೆಂಬ ಹೆಸರಿನಿಂದ ಪ್ರಕಟವಾಗುತ್ತಿತ್ತು. ಅವರ ಕಾಲಾನಂತರದಲ್ಲಿ 1914ರಿಂದ ಈ ಪಂಚಾಂಗವು ವಾಕ್ಯರಣರೀತ್ಯಾ ಗಣಿಸಲ್ಪಡುತ್ತಿತ್ತು. 1936ರಿಂದ ಈ ಪಂಚಾಂಗದ ಪ್ರಕಟಣೆಯು ನಿಂತು ಹೋಗಿರುತ್ತದೆ. 1847 ರಿಂದ ಹಸ್ತಪ್ರತಿ ರೂಪದಲ್ಲಿ ಪಂಚಾಂಗ ಪ್ರಕಟನೆಯು ಜಿಲ್ಲೆಯಲ್ಲಿ ಆರಂಭವಾಗಿದ್ದರೂ 1853 ರಿಂದ ಮುದ್ರಣಗೊಂಡು ಪ್ರಕಟಗೊಳ್ಳಲು ಪ್ರಾರಂಭವಾಯಿತು.

1853ರಲ್ಲಿ ಮಂಗಳೂರಿನ ಬಾಸೆಲ್ ಮಿಶನ್ ಪ್ರೆಸ್‌ನಲ್ಲಿ 73 ಪುಟಗಳ ಮೊದಲ ಕನ್ನಡ ಪಂಚಾಂಗವು 1000 ಪ್ರತಿಗಳಾಗಿ ಮುದ್ರಣಗೊಂಡಿದೆ ಎಂಬುದಾಗಿ 1855ರ ಮಿಶನರಿ ವರದಿಯಲ್ಲಿ ಕಂಡುಬರುತ್ತದೆ. ವರದಿಯಲ್ಲಿ ಇದರ ಹೆಸರನ್ನು

66

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

[ 67 ]Mangalore Alr anac ಎಂದು ನಮೂದಿಸಿದೆ. 1841ರಲ್ಲಿ ಬಾಸೆಲ್ ಮಿಶನ್

ಪ್ರೆಸ್ ಆರಂಭವಾದಾಗ ಅಲ್ಲಿದ್ದುದು ಕಲ್ಲಚ್ಚು ಮುದ್ರಣ. 1852ರಿಂದ ಲೆಟರ್ ಪ್ರೆಸ್ ಮುದ್ರಣ ಅರಂಭಗೊಂಡು ಕನ್ನಡ ಪಂಚಾಂಗವೂ ಅದರಲ್ಲಿಯೇ ಮುದ್ರಣಗೊಂಡಿತು. 25 ವರ್ಷಗಳಲ್ಲಿ 6000 ಪ್ರತಿಗಳಷ್ಟು ಮುದ್ರಿತವಾಗುತ್ತಿದ್ದು 80- ಪುಟಗಳನ್ನೊಳಗೊಂಡಿತ್ತು. 1873ರಲ್ಲಿ 2ನೇ ಮುದ್ರಣಕಂಡ ಪತ್ರಿಕೆ 1894ರಲ್ಲಿ 7000 ಪ್ರತಿಯಷ್ಟು ಮುದ್ರಣಗೊಂಡಿತ್ತು. ಪಂಚಾಂಗದ ಸಂಪಾದಕರಾಗಿ ದೇಶಿಯರಾದ ಬಾಲಪ್ಪಯ್ಯ, ಕ್ರಿಸ್ತಾನುಜ ವಾತ್ಸ, ಶಿವರಾವ್, ಮತ್ತು ಮಿಶನರಿಗಳಾದ M Hock, A. Manner, Stolz, ಮುಂತಾದವರು ಕೆಲಸ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಉದ್ಯೋಗಸ್ತರು ಎಂಬ ಮಾಹಿತಿ ಇದ್ದಂತೆ, ಕೊಡಗು ಸೀಮೆಯ ಸರಕಾರದ ಉದ್ಯೋಗಸ್ತರು ಎಂಬ ಮಾಹಿತಿಯೂ ಇತ್ತು. ಆದ್ದರಿಂದ Coorg Edition ಎಂದು ಬೇರೆಯೇ ಆವೃತ್ತಿ ಪ್ರಕಟಗೊಳ್ಳುತ್ತಿತ್ತು.

ಕೆಲವು ವರ್ಷಗಳ ಪಂಚಾಂಗದ ಹಲವು ಪುಟಗಳ ಮಾದರಿ ಹೀಗಿವೆ.
1857-ಪಂಚಾಂಗದ ಕೊನೆಯಲ್ಲಿ ಸಮಾಪ್ತಿ ಎನ್ನುವ ಶೀರ್ಷಿಕೆಯ ಒಂದು ಪುಟವಿದೆ. ಇದು ಪ್ರಕಾಶಕರ ನಿವೇದನೆಯಾಗಿದ್ದು ಪತ್ರಿಕಾರಂಗಕ್ಕೆ ಸಂಬಂಧಪಟ್ಟದ್ದು. ಕೆಲವೊಂದು ತಿಂಗಳುಗಳಲ್ಲಿ ವೊಂದು ವರ್ತಮಾನ ಪತ್ರಿಕೆಯನ್ನು ಪ್ರಕಟ ಮಾಡುವುದಕ್ಕೆ ಆಲೋಚಿಸಿ ಇರುವುದರಿಂದ ಇಲ್ಲಿ ಬಿಟ್ಟದ್ದನ್ನು ಬೇರೆ ಪ್ರಯೋಜನಕರವಾದ ಸಂಗತಿಗಳನ್ನೂ ಅಲ್ಲಿ ಛಾಪಿಸಿ ಅದರ ಮುಖ್ಯ ತಾತ್ಪರ್ಯ ಯಾವದಾಗಿದ್ದಿತೆಂದರೆ ರಾಜಕಾರ್ಯಗಳಲ್ಲಿ ಮುಖ್ಯ ಸಂಗತಿಗಳ ಸಂಕ್ಷೇಪ ವಿಚಾರ, ವಿದ್ಯಾವಿಷಯಗಳು, ಇದರ ಸಂಗಡ ಆಗುವಷ್ಟು ಸರ್ಕಾರದವರ ಮುಖ್ಯ ಕಟ್ಟುಕಟ್ಟಳೆಗಳು ವಿಶೇಷವಾದ ಹಿಸ್ಸಹಾರು ಮುಂತಾದವುಗಳು. ವರ್ತಮಾನ ಪತ್ರಿಕೆಗೆ ಪಂಚಾಂಗಕ್ಕಿಂತ ಸ್ವಲ್ಪ ಸಣ್ಣದಾಗಿರುವ ಹದಿನಾರು ಪುಟಗಳನ್ನು ಮಾಡ ನಿಶ್ಚಯಿಸಿದ್ದೇವೆ. ಈಗ ಪತ್ರಿಕೆ ತಕ್ಕೊಳ್ಳುವುದಕ್ಕೆ ಸಹಾ ಅನೇಕರು ವಂತಿಕೆ ಹಾಕುವುದಾದರೆ ಈ ಕಾರ್ಯ ನಡೆಸುವವರಿಗೆ ಬಹಳ ಧೈರ್ಯವಾದೀತು. ಕನ್ನಡ ಜಿಲ್ಲೆಯಲ್ಲಿ(ಅಂದರೆ ಈಗಿನ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳೂ ಸೇರಿ) ಪಂಚಾಂಗ ತಕ್ಕೊಳ್ಳುವವರು ಸುಮಾರು ಎಂಟುನೂರು ಮಂದಿ. ಅಷ್ಟೇ ಜನರು ವರ್ತಮಾನ ಪತ್ರಿಕೆಯನ್ನು ಸಹಾ ತಕ್ಕೊಳ್ಳುವುದಾದರೆ ಮಹಾ ಸಂತೋಷವಾದೀತು. ಅದಾಗ್ಯೂ ಓದುವವರು ನಮಗೆ ಅದರಿಂದ ಯೇನಾದರೂ ಹಣದ ಲಾಭ ಬರುತ್ತದೆ ಯೆಂಬದಾಗಿ ನೆನಸಬಾರದು. ನಿಶ್ಚಯವಾಗಿ ನಮಗೆ ಮುಟ್ಟುವ ಖರ್ಚು ಮಾತ್ರವೇ ನಮಗೆ ಶಿಕ್ಕುವುದೇ ಕಷ್ಟವಾಗಿರುತ್ತದೆ.

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

67 [ 68 ]1873 ಒಟ್ಟು ಪುಟಗಳು 72. ಒಂದು ತಿಂಗಳಿಗೆ ಒಂದು ಪುಟದಂತೆ 12 ಪುಟಗಳಲ್ಲಿ ಪಂಚಾಂಗ, ಇದರಲ್ಲಿ ಆಂಗ್ಲ, ಚಾಂದ್ರಮಾನ, ನಕ್ಷತ್ರ ಸೌರಮಾನ ಮಹಮ್ಮದಿ ಹೀಗೆ ಐದು ಕಾಲಂಗಳಿವೆ. ಉಳಿದ ಪುಟಗಳಲ್ಲಿ 1892ನೇ ಇಸವಿಯಲ್ಲಿ ನಡೆದ ಮುಖ್ಯ ಸಂಗತಿಗಳು, ಕನ್ನಡ ಮಲಯಾಳ ಜಿಲ್ಲೆಗಳಲ್ಲಿಯೂ ಕೊಡಗದಲ್ಲಿಯೂ ಸಿಕ್ಕುವಂಥ ವೃಕ್ಷಾದಿಗಳ ವರ್ಣನೆ ಧಾರಾವಾಹಿಯಾಗಿ ಗೆರ್ಮಾನ ಪಂಡಿತರ ಸ್ತೋತ್ರ, ಅದೃಷ್ಟವಾದಿಗಳ ಗತಿಯು, ಜನರಲ್ ಸ್ಟಾಂಪು ಅಕ್ಟ್, ಟಪ್ಪಾಲಿನ ವಿಷಯವಾದ ಮುಖ್ಯ ಕಟ್ಟಳೆಗಳು, ಸಾಕ್ಷ್ಯ ನ್ಯಾಯವನ್ನು ಕುರಿತ ಕಾನೂನು, ಸೂರ್ಯ ಚಂದ್ರ ಗ್ರಹಣಗಳು, ಪಕ್ಷಿಗಳ ಕೂಗು (ಕತೆ) ಕೋಷ್ಟಕ, 1873ನೇ ವರುಷದಲ್ಲಿ ಬರುವ ಹಬ್ಬಗಳು ಎಂಬ ಉಪಯುಕ್ತ ಮಾಹಿತಿ ಲೇಖನಗಳಿರುತ್ತಿತ್ತು.

1890 ಒಟ್ಟು ಪುಟಗಳು 65. ಒಂದು ತಿಂಗಳಿಗೆ ಎರಡು ಪುಟಗಳಂತೆ 24 ಪುಟಗಳಲ್ಲಿ ಪಂಚಾಂಗ, ಮೊದಲ ಪುಟದಲ್ಲಿ ಮೇಲೆ ತಿಳಿಸಿದಂತೆ 5 ಕಾಲಂಗಳು ಇನ್ನೊಂದು ಪುಟದಲ್ಲಿ ಸೂರ್ಯ, ಚಂದ್ರ, ಕುಜಾದಿ ಪಂಚಗ್ರಹ ಉದಯೋಚ್ಚಾಸ್ತಮಯಗಳನ್ನು ತೋರಿಸುವಪಟ್ಟಿ ಹೀಗೆ 3 ಕಾಲಂಗಳಿವೆ. ಮುಂದಿನ ಪುಟಗಳಲ್ಲಿ 1890ನೇ ಇಸವಿಯಲ್ಲಿ ಸಂಭವಿಸುವ ಗ್ರಹಣಗಳು, ವರ್ತಮಾನಸಂಗ್ರಹ, ನ್ಯಾಯಾದೀಶನ ಪರೀಕ್ಷೆ, ಅನ್ಯಾಯದ ಹಣವು, ದಕ್ಷಿಣ ಹಿಂದುಸ್ಥಾನದಲ್ಲಿ ರೂಢಿಯಾಗಿ ಎಣಿಸುವ ಶಕಗಳ ಮೊಕಾಬಿಲೆ ಪಟ್ಟಿ, ನಾಸ್ತಿಕರು ಯಾರು. ಅತಿಶಯ ಪ್ರೀತಿಯು, ಠಸೇ ತೀರ್ವ-ದಸ್ತಾವೇಜಿನ ವಿವರಣೆ, ಟಪ್ಪಾಲಿನ ವಿಷಯ ಮುಖ್ಯ ಕ್ರಮಗಳು, ದಕ್ಷಿಣ ಕನ್ನಡ ಜಿಲ್ಲೆಯ ಸರಕಾರ ಉದ್ಯೋಗಸ್ಥರು. 1890ನೆ ವರ್ಷದ ಹಬ್ಬಗಳು(ಕೈಸ್ತರ ಹಬ್ಬಗಳು, ಮಹಮ್ಮದಿಯರ ಹಬ್ಬಗಳು, ಹಿಂದು ಜನರ ಹಬ್ಬಗಳು, ಇತರ ರಜಾದಿನಗಳು)28-31 ದಿವಸಗಳಿರುವ ಪ್ರತಿ ತಿಂಗಳಿಗೆ 1 ರೂ ಆಣೆಯಿಂದ 500 ರೂಪಾಯಿವರೆಗೆ ಸಂಬಳ ಇರುವವರಿಗೆ ಪ್ರತಿ ಒಂದು ದಿವಸಕ್ಕೆ ಏನು ಬೀಳುತ್ತದೆಂಬದನ್ನು ತೋರಿಸುವ ಪಟ್ಟಿ ಹೀಗೆ ಉಪಯುಕ್ತ ಮಾಹಿತಿಗಳಿವೆ. 1892– ದಸ್ತಾವೇಜಿನ ವಿವರಣೆಗಳು, ರಿಜಿಸ್ತ್ರಿ ಮಾಡುವ ಬಗ್ಗೆ ರಿಜಿಸ್ಟ್ರಾರರಿಗೆ ತೆರತಕ್ಕ ಪೀಸಿನ ದರ, ಠಸೆ, ತೀರ್ವ (1869ನೇ ಇಸವಿ Iನೇ ಆಕ್ಷಿನಲ್ಲಿರುವ ಪಟ್ಟಿಯಿಂದ ಎತ್ತಿತೆಗೆದು ಸಂಕ್ಷೇಪಿಸಿದ್ದು) 1900- ಹಿಂದೂಸ್ಥಾನದ ಪ್ರತಿನಿಧಿಯಾಗಿರುವ ಬಹುಮಾನಿತ ಶ್ರೀಮತ್ ಲಾರ್ಡ್ ಕರ್ಜನ್ ದೊರೆಯವರ ಫೋಟೋ ಎರಡನೇ ಪುಟದಲ್ಲಿ ಅಲ್ಲದೆ ಅವರ 68,

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

[ 69 ]ಪರಿಚಯ, ಇಂಡಿಯನ್ ಆಕ್ಷಿನ ಸಾರಾಂಶ (1899ನೇ ಇಸವಿ 2ನೇ ಅಕ್ಷಿನಿಂದ

ಎತ್ತಿತೆಗೆದು ಸಂಕ್ಷೇಪಿಸಿದ್ದು,

1915- ಲೋಕವಾರ್ತೆಯಲ್ಲಿ ಧೂಮಪಾನದ ಬಗ್ಗೆ ಈಚೀಚೆ ಬೀಡಿ ಸೇದುವ ಚಟಾ ಬಹಳ ಹೆಚ್ಚಿ ಹೋಗಿದೆ. ಎಳೆಯ ಹುಡುಗರೂ ಬಾಯಿಯಲ್ಲಿ ಬೀಡಿ ಇಟ್ಟುಕೊಂಡು ವಯೋವೃದ್ಧರನ್ನೂ ಸರಕು ಮಾಡದೇ ಹೊಗೆ ಬಿಡುವುದು ಕಾಣಬಹುದು. ಊರಲ್ಲಿಯೇ ಸುತ್ತಿದ ಬೀಡಿಗಳಲ್ಲದೆ ಪರದೇಶಗಳಿಂದ ಬರುವ ಬೀಡಿಗಳನ್ನು ರುಚಿಯಿಂದ ಸೇದುವುದು ವಾಡಿಕೆ. ಈ ಕೆಟ್ಟ ಚಟಕ್ಕೆ ಕೊನೆಗಾಣಿಸಬೇಕೆಂದು ಮದ್ರಾಸ್ ಗವರ್ನಮೆಂಟಿನವರು ಡೈರೆಕ್ಟರ್ ಆಫ್ ಪಬ್ಲಿಕ್ ಇನ್ಸ್‌ಟ್ರಕ್ಷನ್ ದೊರೆಗೆ ಮನವಿ ಬರೆದಿದ್ದಾರೇನೆಂದರೆ- ಎಳೆಯ ಹುಡುಗರು ಪಾಠಶಾಲೆಯ ವಠಾರದಲ್ಲಿಯಾಗಲೀ, ಆಡುವ ಹೊಲದಲ್ಲಿಯಾಗಲೀ ಬೀಡಿ ಸೇದಲೇಬಾರದೆಂದು ಕಟ್ಟಾಜ್ಞೆ ಮಾಡಿಸಬೇಕು ಇಂಥಾ ಆಜ್ಞೆ ಪ್ರಕಟವಾದರೆ ವ್ಯರ್ಥವಾದ ವೆಚ್ಚವೂ ಉಳಿಯುವುದಲ್ಲದೆ ಎಳೆಯರ ದೇಹಾರೊಗ್ಯವೂ ದೃಢವಾಗುವದು.

1929- ಕಳೆದ ವರ್ಷ ಮದ್ರಾಸಿನ ಗವರ್ನರಾಗಿದ್ದ ಗೋಷನ್ ಪ್ರಭುಗಳು ನಮ್ಮ ಜಿಲ್ಲೆಯನ್ನು ಸಂದರ್ಶಿಸುವವರಾದರು. ಇವರ ಸ್ವಾಗತ ಬಗ್ಗೆ ತಳಿರುತೋರಣ ಕಮಾನುಗಳಿಂದ ಶೃಂಗರಿಸಲ್ಪಟ್ಟ ದಾರಿಯ ಇಕ್ಕೆಡೆಗಳಲ್ಲಿಯೂ ಜನಸ್ತೋಮವು ಕಿಕ್ಕಿರಿದು ನೆರೆದಿದ್ದು ಪ್ರಭುಗಳ ಸಂದರ್ಶನವನ್ನು ತುಂಬಾ ನೋಡಿ ಸಂತೋಷಭರಿತರಾದರು. ಮುನಿಸಿಪಾಲಿಟಿಯವರೂ, ಡಿಸ್ಟಿಕ್ಸ್ ಬೋರ್ಡಿನವರೂ ಸಮರ್ಪಿಸಿದ ಬಿನ್ನವತ್ತಳೆಗಳನ್ನು ಆದರದಿಂದ ಆಲಯಿಸಿ, ಆಸ್ಪತ್ರೆ, ಹೊಸ ಮುನಿಪಾಲ್ ಕಟ್ಟೋಣ, ಗವರ್ನ್‌ಮೆಂಟ್ ಕಾಲೇಜಿನ ಬಡಾವಣೆ, ಇತ್ಯಾದಿ ಮನವಿಗಳ ಸಂಬಂಧವಾಗಿ ಮಾಡಿಕೊಂಡ ಅರಿಕೆಗಳಿಗೆ ಸಮರ್ಪಕವಾದ ಉತ್ತರಗಳನ್ನು ದಯಪಾಲಿಸಿದರು. ಸಾರ್ವಜನಿಕ ಸ್ವಾಗತ ಕಾರ್ಯಗಳು ತೀರಿದ ನಂತರ ಫಾದರ್ ಮುಲ್ಲರರ ಆಸ್ಪತ್ರೆ, ಕಾಫಿ, ಹಂಚು, ಕಾರ್ಖಾನೆಗಳು, ಸಂತ ಜೋಸೆಫ್ ಕೈಗಾರಿಕೆ ನಿಲಯ, ಸರಕಾರಿ ಆಸ್ಪತ್ರೆ ಇತ್ಯಾದಿಗಳನ್ನು ಸಂದರ್ಶಿಸಿದರು. ಹೆಂಗಸರ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡದ ಶಂಕುಸ್ಥಾಪನೆ ಸಮಾರಂಭವೂ ನಡಯಿತು. ಪುರಾತನ ಪ್ರಸಿದ್ದ ಶಿಲ್ಪ ಚಮತ್ಕಾರದ ಕಟ್ಟೋಣಗಳಿರುವ ಮೂಡಬಿದ್ರೆ ಇತ್ಯಾದಿ ಜಾಗಗಳನ್ನು ಸಂದರ್ಶನ ಮಾಡಲಾಯಿತು.ದಯೆ, ನಿಗರ್ವ. ವಿನಯಭಾವಭರಿತರಾದ ಗವರ್ನರ್ ಪ್ರಭುಗಳಿಗೂ ಅವರ ಸಾನಿಯವರಿಗೂ ಸ್ವಾಮಿಯು ಆಯುರ್ಭಾಗ್ಯವನ್ನು ದಯಾಪಾಲಿಸುವಾತನಾಗಲಿ.

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.

69 [ 70 ] 1912- ಎರಡನೇ ಹಾಳೆಯಲ್ಲಿ 'ಜಾತ್ಯಾಭಿಮಾನದ ಭ್ರಾಂತಿ' ಪದ್ಯದ ಸಾಲುಗಳು ಹೀಗಿವೆ.

ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ ?
ಜಾತಿ ವಿಜಾತಿ ಎನಬೇಡ, ದೇವನೊಲಿದಾತನೇ ಜಾತ
ನಡೆವುದೊಂದೇ ಭೂಮಿ, ಕುಡಿವುದೊಂದೇ ನೀರು
ಸುಡುವಗ್ನಿಯೊಂದೆ ಇರುತಿರೆ, ಕುಲಗೋತ್ರ ನಡುವೆ ಎತ್ತಣದು ?.

ಪಂಚಾಂಗ ಪತ್ರಿಕೆಯಲ್ಲಿದ್ದ ಲೇಖನಗಳಿಂದ ನಿರ್ಮಿತವಾದ 2 ಅಪೂರ್ವ ಕನ್ನಡ ಕೃತಿಗಳು

1. ರೋಗ ಚಿಕಿತ್ಸೆಯು. 1876ರಿಂದ 1888 ತನಕದ ಪಂಚಾಂಗಳಲ್ಲಿ ಪ್ರಕಟವಾದ ಆರೋಗ್ಯದ ಮಾಹಿತಿಗಳನ್ನು ಒಟ್ಟುಗೂಡಿಸಿ "ರೋಗ ಚಿಕಿತ್ಸೆ' ಎಂಬ ಹೆಸರಿನ 234 ಪುಟಗಳ ಪುಸ್ತಕವನ್ನು (1000 ಪ್ರತಿಗಳು) 1902ರಲ್ಲಿ ಬಾಸೆಲ್ ಮಿಶನ್‌ ಪ್ರೆಸ್‌ನಲ್ಲಿ ಪ್ರಕಟಿಸಲಾಗಿತ್ತು. ಪುಸ್ತಕದ ಲೇಖಕರು ಪಂಚಾಂಗದ ಸಂಪಾದಕರಲ್ಲೋರ್ವರಾದ ಬಾ. ಶಿವರಾವ್. ಆ ಪುಸ್ತಕದ ಮುನ್ನುಡಿಯಲ್ಲಿ ಹೀಗೆ ಬರೆಯಲಾಗಿದೆ. 1876-88ನೇ ಇಸವಿಗಳ ನಮ್ಮ ಕಂನಡ ಪಂಚಾಂಗದಲ್ಲಿ ಹದಿಮೂರು ವರ್ಷಗಳ ವರೆಗೆ ಪ್ರಕಟಿಸೋಣವಾದ ಶರೀರ ಚಿಕಿತ್ಸೆ ಎಂಬ ವೈದ್ಯ ಸಂಗ್ರಹವು ವಾಚಕರಿಗೆ ಬಹಳ ಪ್ರಯೋಜನಕರವಾಗಿ ತೋರಿದ್ದರಿಂದ ಆ ಕಾಲದ ಪಂಚಾಂಗವು ಹೆಚ್ಚಾಗಿ ಮಾರಾಟವಾದದ್ದಲ್ಲದೆ ಉಳಿದ ಪ್ರತಿಗಳಿಂದ ಈ ಸಂಗ್ರಹಗಳನ್ನು ಮಾತ್ರ ಪ್ರತ್ಯೇಕಿಸಿ ಕಟ್ಟಿಸೋಣವಾದ ಪ್ರತಿಗಳೂ ಸಹಾ ವಿಕ್ರಯವಾಗಿ ಕರ್ಚಾದವು. ಇನ್ನೂ ಗಿರಾಕಿಗಳು ಬಹಳ ಬರುವುದರಿಂದ ಪಂಚಾಂಗದಲ್ಲಿ ಬರೆದ ಅ ಸಂಗ್ರಹವನ್ನೂ ಪುನಃ ಪರಿಶೋಧಿಸಿ ತಿದ್ದಿ ಅನೇಕ ಹೊಸ ಸಂಗತಿಗಳನ್ನು ಸೇರಿಸಿ ಅಡಕವಾದ ಪುಸ್ತಕರೂಪವಾಗಿ ಈಗ ಪ್ರಕಟಿಸಿದ್ದೇವೆ.

2. ಸಹಸ್ರಾರ್ಧ ವೃಕ್ಷಾದಿಗಳ ವರ್ಣನೆ (Five hundred Indian Plants their use in Medicine and the arts in Canarese.) 1881 ರಲ್ಲಿ ಮೊದಲು 230 ಪುಟಗಳಲ್ಲಿ ಪ್ರಕಟ, ಎರಡನೇ ಮುದ್ರಣ 1908ರಲ್ಲಿ ಪುಟ-273, (523) ಮೊದಲ ಆವೃತ್ತಿಯ ಸಂಪಾದಕರು C.STOLZ ಮತ್ತು G. PLEBST ಎರಡನೇ ಅವೃತ್ತಿಯ ಸಂಪಾದಕರು I. PFLEIDERER, ಮುನ್ನುಡಿಯಲ್ಲಿ The first edition of this volume was published in 1881 by C.Stolz and G.Plebst, two lay-agents of the Basel Missionary Society in Mangalore. it had grown from an alphabetical list of plants,

70

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

[ 71 ]

published in the Canarese Almanac(Mangalore) from 1868 to 1874, ನಮೂದಿಸಲಾಗಿದೆ ಈ ಕೃತಿಯಲ್ಲಿ ವೃಕ್ಷಾದಿಗಳ ಕನ್ನಡ, ತುಳು, ಕೊಂಕಣಿ ಹಾಗೂ ಕನ್ನಡ, ತುಳು, ಕೊಂಕಣಿ, ಮಲಯಾಳಂ, ಸಂಸ್ಕೃತ, ತಮಿಳು, ತೆಲುಗು, ಹಿಂದುಸ್ಥಾನಿ, ಭಾಷೆಗಳ ಹೆಸರುಗಳನ್ನು ಇಂಗ್ಲಿಷ್‌ನಲ್ಲಿ ಲಿಪ್ಯಂತರ ಮಾಡಿ ಕೊಡಲಾಗಿದೆ (transliterated) ಬೇರೆ ಬೇರೆ ಭಾಷೆಗಳ ಹೆಸರುಗಳನ್ನು ಬಳಸಲು ಹಲವರ ಸಹಾಯವನ್ನು ಪಡೆದಿದ್ದು ಜಿಲ್ಲೆಯ ಭಾಷೆಗಾಗಿ ಮಂಗಳೂರಿನ ತಿಯೋಲಾಜಿಕಲ್ ಸೆಮಿನರಿಯ ಪ್ರಾಧ್ಯಾಪಕರಾದ ಶ್ರೀ ಕ್ರಿಸ್ತಾನುಜ ವಾತ್ಸ ಮತ್ತು ಗವರ್ನಮೆಂಟ್ ಕಾಲೇಜಿನ ಸಂಸ್ಕೃತ ಪಂಡಿತರಾದ ಶ್ರೀ ಪಿ. ಬಾಲಪ್ಪ ಎಂಬುವರ ಸಹಾಯವನ್ನು ಪಡೆದಿದೆ ಎಂದು ನಮೂದಿಸಲಾಗಿದೆ. ಮೊದಲ ಮುದ್ರಣದಲ್ಲಿ 500 ವೃಕ್ಷಾದಿಗಳ ವರ್ಣನೆ ಇದ್ದರೆ ಇನ್ನೆರಡು ಅವೃತ್ತಿಗಳಲ್ಲಿ 523 ವೃಕ್ಶಾದಿಗಳ ವರ್ಣನೆ ಇದೆ. ಇದೇ ಪುಸ್ತಕ 1918ರಲ್ಲಿ ಶ್ರೀ ಬಿ. ಜೆ. ಪೊನ್ನನ್ ಎಂಬವರಿಂದ ಮಲಯಾಳಂ ಭಾಷೆಗೆ ತರ್ಜುಮೆಗೊಂಡು ಪ್ರಕಟಗೊಂಡಿದೆ. 156 ವರ್ಷಗಳ ಹಿಂದೆ ಪ್ರಾರಂಭವಾಗಿ 83 ವರ್ಷಗಳ ನಿರಂತರವಾಗಿ ಪ್ರಕಟಗೊಳ್ಳುತ್ತಿದ್ದ ಪಂಚಾಂಗವುತಿಥಿ ವಾರಗಳನ್ನು ಮಾತ್ರವೇ ಜನಸಾಮಾನ್ಯರಿಗೆ ತಿಳಿಸಿಲ್ಲ. ವರ್ತಮಾನ, ಚರಿತ್ರೆ,ಚಿಂತನೆ, ಮಾರ್ಗದರ್ಶನ, ನಿಯಮಗಳು, ಆಜ್ಞೆಗಳು, ಮುಂತಾದ ಎಲ್ಲವನ್ನು ಎಲ್ಲರಿಗಾಗಿ ತಿಳಿಸಿದೆ. 150 ವರ್ಷಗಳ ಹಿಂದಿನ ಬದುಕಿನ ಸ್ಕೂಲ ಚಿತ್ರಣಗಳನ್ನು ದಾಖಲೀಕರಿಸಿದ ಪಂಚಾಂಗ ಸಂಶೋಧನಾಸಕ್ತರಿಗೆ ಯೋಗ್ಯ ವಿಚಾರ ಎನ್ನುವುದಕ್ಕೆ ಸಂಶಯವೇ ಇಲ್ಲ.

ವ್ಯಾವಸಾಯಿಕ ಪಂಚಾಂಗ 1910

ಬಾಸೆಲ್ ಮಿಶನ್ ಪ್ರೆಸ್‌ನಲ್ಲಿ ವ್ಯಾವಸಾಯಿಕ ಪಂಚಾಂಗ ಎಂದು ಕರೆಯಲ್ಪಡುವ ಒಂದು ಪಂಚಾಂಗ ಮುದ್ರಣಗೊಳ್ಳುತ್ತಿತ್ತು. ಇದನ್ನು ದಕ್ಷಿಣ ಕನ್ನಡ ಜಿಲ್ಲೆಯ ವ್ಯವಸಾಯ ಸಂಘದವರು ಪ್ರಕಟಿಸುತ್ತಿದ್ದರು 1910ರಲ್ಲಿ ಪ್ರಕಟವಾದ ಪಂಚಾಂಗದಲ್ಲಿ ವರ್ಷದ 12 ತಿಂಗಳುಗಳ ಪಂಚಾಂಗವಲ್ಲದೆ ಕೃಷಿಗೆ ಸಂಬಂಧಪಟ್ಟ ಹಲವಾರು ಮಾಹಿತಿಗಳಿವೆ.

ಮದ್ರಾಸ್ ಸಂಸ್ಥಾನದ ಸೆಂಟ್ರಲ್ ಎಗ್ರಿಕಲ್ಬರಲ್ ಕಮಿಟಿ ಎಂಬ ಕೃಷಿಯ ಮುಖ್ಯ ಸಂಘದ ವಿವರಗಳು, ಜಿಲ್ಲಾ ವ್ಯವಸಾಯ ಸಂಘದ ವಿವರಗಳು, ಮ.ರಾ.ರಾ.ಸ.ಲ. ಮತ್ತಾಯಸರು ತನ್ನ ವಾಸಸ್ಥಾನವಾದ ಕಾರ್ಕಳದಲ್ಲಿ 1908ನೇ ಇಸವಿಯಲ್ಲಿ ಬಂಕುಭತ್ತದ ಸಾಗುವಳಿಯನ್ನು ಪರೀಕ್ಷಾರ್ಥವಾಗಿ ನಡಿಸಿದುದರ ಫಲದ ಪಟ್ಟಿ, ಕೃಷಿಯ ಫಲವನ್ನು ವೃದ್ಧಿಸುವ ಏರ್ಪಾಡುಗಳು ಮತ್ತು ಕೃಷಿಗಾರರಿಗೆ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

71 [ 72 ] ಸರಕಾರದವರು ಮಾಡುವ ರಿಯಾಯತಿಗಳು, ಹಟ್ಟಿಕೊಟ್ಟಿಗೆಯ ಗೊಬ್ಬರವನ್ನು ಸುಕ್ಷಿತ ಪಡಿಸುವ ಕುರಿತು ಬಂಗಾಳ ಸಂಸ್ಥಾನದ ಕೃಷಿಖಾತೆಯ 1907ನೇ ಇಸವಿಯ 7ನೇ ಚಿಕ್ಕ ಪತ್ರಕ. ನೇಜಿ ನೆಡುವ ಕ್ರಮ, ಬೈಲುಗದ್ದೆಗಳಿಗೆ ಹಸಿ ಸೊಪ್ಪುಗೊಬ್ಬರ ಹಾಕೋಣ, ತಿರುನೆಲ್ವೇಲಿ ಜಿಲ್ಲಾ ಶಿವಗಿರಿ ಜಮೀನದಾರಿಯ ಹೋಮ್ ಫಾರ್ಮ್ ಯಾನೆ ಖುದ್ದು ಸಾಗುವಳಿ ಕೃಷಿತೋಟದಲ್ಲಿ ಜಾರಿ ಇರುವ ಕಾಡುನೀಲಿ ಅಥವಾ ಕೊಳಿಂಗಿ ಎಂಬ ಗಿಡಗಳನ್ನು ಬೆಳಿಸಿ ಅವುಗಳನ್ನು ಹಸಿ ಗೊಬ್ಬರವಾಗಿ ಉಪಯೋಗಿಸುವ ಕ್ರಮ, ಬೈಲುಗದ್ದೆಗಳಲ್ಲಿ ಹಸಿ ಸೊಪ್ಪು ಗೊಬ್ಬರದ ಮತ್ತು ಮೇವಿನ ಬಗ್ಗೆ, ಪೈರುಗಳನ್ನು ಬೆಳೆಸಲಿಕ್ಕೆ ಉತ್ಸಾಹಗೊಳ್ಳುವ ಹಾಗೆ ಸರಕಾರದವರು ಮಾಡಿದ ರಿಯಾಯಿತಿಗಳು, ಬೀಜ ಆರಿಸುವ ಕ್ರಮ, ಜಾನುವಾರುಗಳನ್ನು ಹುಟ್ಟಿಸಿ ಬೆಳೆಸುವ ವಿಷಯ, ಜಾನುವಾರುಗಳ ಪರಾಮರಿಕೆ ಮತ್ತು ಆರೈಕೆ ಕುರಿತು, ಇಂತಹ ಉಪಯುಕ್ತ ಲೇಖನಗಳಲ್ಲದೆ ಕೃಷಿಗೆ ಸಂಬಂಧಿಸಿದ ಬೀಜ ಬಿತ್ತಿ ಪಾಪ ಕಳೆ, ನವದಾನ್ಯ ಬಿತ್ತಿದವನ ಅಭಿದಾನ ದೊಡ್ಡದು, ಹದೋಟು ಬಿತ್ತಿನಾಯೆ ಬುಳೆಟ ಕೊಯ್ದೆ, ಬೇಶಡ್ ಬಿತ್ತ್ ಬೂರುಂಡ ಈಟ್ ಇಜ್ಯಂದ ಬಳೆವು, ಮೃಗಶಿರೆ ಮಳೆ ಬಂದರೆ ಮೃಗಗಳಿಗೆ ಸಹ ಮುರಿಯಲಿಕ್ಕೆ ಕೂಡದು, ಅರ್ದ್ರೆ ಮಳೆ ಸಮ ಬಂದರೆ ಆರು ನಕ್ಷತ್ರದ ಮಳೆ ಸಮ ಬಂದೀತು, ಅರ್ದ್ರೆ ಮಳೆ ಬಂದರೆ ಆದ್ದಷ್ಟು ನೋಡೇನು, ಅರ್ದ್ರೆಯಲ್ಲಿ ಆದರೆ ಅಯಿತು ಹೊದರೆ ಹೋಯಿತು, ಅರ್ದೊಡ್ ಬಿಂಡ ಅಡರ್ದ ಲೆಕ್ಕ ಅವು ಪುನರ್ವಸುಡು ಬಿತ್ತಂಡ ಪುಚ್ಚೆದ ರೋಮದ ಲೆಕ್ಕ ಆವು, ಅರ್ದ್ರೆಸ್ ಅಡರ್ದೇ ಒಯಿಪೊಡು. ಇಂತಹ ಕನ್ನಡ ಹಾಗೂ ತುಳುವಿನ ಗಾದೆಮಾತುಗಳು ಪ್ರತಿಯೊಂದು ಪುಟದಲ್ಲಿದ್ದು ಓದುಗರನ್ನು ವ್ಯಾವಹಾರಿಕ ಜ್ಞಾನದೆಡೆಗೆ ಸೆಳೆಯುತ್ತಿತ್ತು.

ಪಂಚಾಂಗದಲ್ಲಿ ಕಂಡುಬಂದ ನೇಯಿಗೆ ಕಾರ್ಖಾನೆಯ ಜಾಹಿರಾತಿನ ಒಂದು ಮಾದರಿ. BASEL MISSION WEAVING ESGTABLISHMENT, MANGALORE, SOUTH CANARA. ದಕ್ಷಿಣ ಕನ್ನಡ ಜಿಲ್ಲಾ ಮಂಗಳೂರು ಬಾಸೆಲ್ ಮಿಶನ್ (ಬಲ್ಮಠ) ನೆಯ್ಯುವ ಕಾರಖಾನೆಯಲ್ಲಿ ಬೇರೆ ಬೇರೆ ತರದ (ಮಿಶನ್) ಟ್ವಿಡ್ ನಮೂನೆಯ ಕೋಟು ಇಜರುಗಳ ಚೆಕ್ ಬಟ್ಟೆಗಳೂ, ಹಂಟಿಂಗ್ ಯಾ ಶಿಕಾರಿ ಬಟ್ಟೆಗಳೂ, ಶರ್ಟಿಂಗ್ ಯಾನೆ ಕಮೀಸಿನ ಬಟ್ಟೆಗಳೂ, ಶೀರೆ ದುಪ್ಪಟ, ದೋತ್ರ, ಟೇಬ್‌ ಯಾನ ಮೇಜುವಸ್ತ್ರ

72

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

[ 73 ]

ಇತ್ಯಾದಿಗಳೂ ನಾಜೂಕು ಮಾದ್ರಿಯಲ್ಲಿ ತಯಾರಿಸಲ್ಪಟ್ಟು, ಯಾವಾಗಲೂ ಮಾರಾಟಕ್ಕೆ (ಮೊದಲಿಗಿಂತ ಕಮ್ಮಿ ದರದಲ್ಲಿ) ತಯಾರಿರುತ್ತವೆ.ರೂಪಾಯಿ 100ರ ಮೇಲೆ ಬಟ್ಟೆಗಳನ್ನು ತೆಗೆದುಕೊಳ್ಳುವ ಗಿರಾಕಿಗಳಿಗೆ ಯಾ ಸಾಹುಕಾರರಿಗೆ ಒಳ್ಳೇ ಕಮ್ಮಿಶನ್ (ವಟ್ಟಾ) ಕೊಡಲಾದೀತು. ಈ ಬಗ್ಗೆ ಖುದ್ದಾಗಿ ಯಾ ಕಾಗದ ಮೂಲಕವಾಗಿ ವಿಚಾರಿಸಿಕೊಂಡಲ್ಲಿ ಎಲ್ಲಾ ವಿವರ ತಿಳಿಸಲಾದೀತು. ಪರ ಊರಿನಲ್ಲಿ ಬಟ್ಟೆಗಳನ್ನು ತರಿಸಿಕೊಳ್ಳ ಮನಸ್ಸುಳ್ಳವರು ಮೇಲಿನ ವಿಳಾಸ ಬರಕೊಂಡಲ್ಲಿ, ಟಪಾಲ ಹಾಸಲು ಮಾಫಿಯಾಗಿ ನಮೂನೆಗಳು ಕಳುಹಿಸಲ್ಪಡುವವು.

ವ್ಯವಸಾಯಿಕ ಪಂಚಾಂಗದಲ್ಲಿ ಕೃಷಿ ಬದುಕಿಗೆ ಸಂಬಂಧಪಟ್ಟ ಕನ್ನಡ ತುಳು ಗಾದೆಗಳು: ಪಗ್ಗುಡು ಪದಿನೆ ಪೋನಗ ಬೀಜ ಬಿತ್ತೊಡು ನವದಾನ್ಯ ಬಿತ್ತಿದವನ ಅಭಿದಾನ ದೊಡ್ಡದು ಹದೋಟು ಬಿತ್ತಿನಾಯೆ ಬುಳಟ ಕೊಯ್ದ ಬೇಶಡ್ ಬಿಲ್ಡ್ ಬೂರುಂಡ ಈಟ್ ಇಜ್ಯಂದೆ ಬುಳೆವು ಪತ್ತನಾಜೆಗ್ ಪತ್ನಿ ಪಣಿಲಾ ಬರೆರೆ ಅವಂದ್ ಮೃಗಶಿರೆ ಮಳೆ ಬಂದರೆ ಮೃಗಗಳಿಗೆ ಸಹ ಮುರಿಯಲಿಕ್ಕೆ ಕೂಡದು ಆದ್ರೆ ಮಳೆ ಸಮ ಬಂದರೆ ಅರು ನಕ್ಷತ್ರದ ಮಳೆ ಸಮ ಬಂದೀತು ಅರ್ದ್ರೆ ಮಳೆ ಬಂದರೆ ಆದ್ದಷ್ಟು ನೋಡೇನು ಅರ್ದ್ರೆಯಲ್ಲಿ ಆದರೆ ಅಯಿತು ಹೋದರೆ ಹೋಯಿತು ಅರ್ದ್ರೆ ನಕ್ಷತೊಡು ಬಿತ್ತಂಡ ಅಡರ್ದಲೆಕ್ಕ ಆವು, ಪುನರ್ವಸುಡು ಬಿತ್ತಂಡ ಪುಚ್ಚೆದ ರೋಮದ ಲೆಕ್ಕ ಆವು. ಬೇಶಡ್ ಬಿತ್ತ ಬೂರುಂಡ ಈಡ್ ಇಜ್ಯಂದೆ ಬುಳೆವು. ಪುನರ್ವಸು ಮಳೆ ಹೆಣಕ್ಕೆ ಸಮ ಪುಷ್ಯ ಹೊಯಿದರೆ ಪುಷ್ಕಳ ಬೆಳೆದೀತು ಪುಷ್ಯಡ್ ಬಿತ್ತಂಡ ಪುರಿ ಪತ್ತುಂಡು ಪುಸ್ಕೊಡು ಬಿತ್ತಂಡ ಪುಚ್ಚೆಗ್‌ಲಾ ನುಪ್ಪು ತಿಕ್ಕಂದ್ ಆಟಿಡ್ ತೆಡ್ಲ್ ಬತ್ತಂಡ ಅಟ್ಟಪೊಲಿಪೋವು ಸೋಣೊಡು ತೆಡ್ಲ್ ಬತ್ತ್ಂಡ ಸೊಂಟ ಪೊಲಿಪೋವು

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

73 [ 74 ] ಆಟಿಡ್ ಕಣೆ ಬತ್ತಂಡ ಅಟ್ಟಪೊಲಿಪೋವು ಸೋಡೊಡು ಕಣೆ ಬತ್ತ್ಂಡ ಸೊಂಟ ಪೊಲಿಪೋವು

ಆಟಿಡ್ ಕಣೆ ಬತ್ತಂಡ ಅಟ್ಟ ಮುದ್ಯುಂಡು ಸೋಲೊಡು ಕಣೆ ಬಂಡ ಸೊಂಟ ಮುದ್ಯುಂಡು

ತಾನು ಮಾಡುವುದು ಉತ್ತಮ ಮಗ ಮಾಡುವುದು ಮಧ್ಯಮ ಆಳು ಮಾಡುವುದು ಹಾಳು

ಹೂಡಲಿಕ್ಕೆ ತಿಳಿಯದಿದ್ದರೆ ನೋಡಲಿಕ್ಕೆ ತಿಳಿಯದೇ

ಸಾಧನೆ ಮಾಡಿದರೆ ಸಬಳ ನುಂಗಬಹುದು

ಮೃಗಶಿರೆಡ್ ಮುಳ್ಳುಡು ಗೀರ್‌ಂಡ ಈಯಾವು

ಮೃಗಶಿರೆಯಲ್ಲಿ ನಟ್ಟರೆ ಮೃಗ ತಿಂದರೂ ಅಳಿಯದು ಅರ್ದ್ರೆ ಒಗೆ ನಟ್ಟರೆ ಆದ್ದಷ್ಟು ಆಗುತ್ತದೆ, ಪುನರ್ವಸುವಿನೊಳಗೆ ನಟ್ಟರೆ ಪುಣ್ಯ ಇದ್ದಷ್ಟು ಆಗುತ್ತದೆ.

ಪೊಡಿಕ್ಟ್ ಬಿತ್ತಿನಾಯಗ್ ಬೈ ಹೆಚ್ಚ ಕೆಸ‌ಗ್ ಬಿತ್ತಿನಾಯಗ್ ಕೆಯಿ ಹೆಚ್ಚ

ಬಿತ್ತಂಡ ಪೆಜ್ಜಿದ್ ಕೊಂಡೋಡು ನಡ್ಕೊಂಡ ಗೋರುದು ಕೊಂಡೋಡು.

ಹೊಲಕ್ಕೆ ಹಾಕಿದ ಗೊಬ್ಬರ ಎಮ್ಮೆಗೆ ಹಾಕಿದ ಹಿಂಡಿಯ ಹಾಗೆ

ಹನಿ ಕೂಡಿ ಹಳ್ಳ ತೆನೆ ಕೂಡಿ ತುಪ್ಪೆ

ಸೊರ್ಕಿನಾಯಗ್‌ ಕಂರ್ಬು ಸಿರ್ಕಿನಾಯಗ್ ರಾಗಿ

ಈಟಿಗೆ ಕೋಟೆ ಬೆಲೆ ಅಲ್ಲ

ಕರಿಯ ಬಂಗಾರ್ ಕೆಂಡೊಡು ಪಾಡ್‌ಂಡ ಬೊಳ್ಯ ಬಂಗಾರ್ ಅವು

ಕಂಡ ಬಟ್ಟಲ್ಲ ಲೆಕ್ಕ ಹದ ಮಳ್ಕೊಡು

ಆಶ್ಲೇಷಾ ಮಳೆಗಿಂತ ಬಿಸಿಲೇ ಲೇಸು

ಮಘಾ ಮಳೆ ಬೆಳೆಗೆ ಲೇಸು

ಮಫೆಯ ನೀರು ಮೊಗೆಯಲ್ಲಿ ಇಡು ಎಂದ ಹಾಗೆ

ಮಘ ಮಳೆನೀರು ಮಗನಿಗೂ ಕೊಡಬಾರದು

ಮಫೆಯಲ್ಲಿ ಮೊಗ್ಗೆ ಹುಬ್ಬೆಯಲ್ಲಿ ಹಾಲು ಉತ್ತರೆಯಲ್ಲಿ ಒತ್ತರೆ

ಕಾಡು ನೀಲಿ ಬಿತ್ತಿದ ಮೇಲೆ ಕಾಡಿಗೆ ಹೋಗಬೇಕೇ

ಕಾಡು ನೀಲಿಯಿಂದ ಕರಿ ಈಟು ಅಗುವುದು

ಚಿತ್ರೆ ಹೊಯಿದರೆ ವಿಚಿತ್ರವಾದೀತು

ಕೆಟ್ಟ ಬೀಜ ಬಿತ್ತಿದರೆ ಹೊಟ್ಟೆ ಕಟ್ಟಿ ಕೂರಬೇಕು ಮತಿ ತತ್ತ್ದ್ ಬೆನಡ ಮಿತಿ ತತ್ತ್ದ್ ಉಣಡ

74

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

[ 75 ]ಕಜೆಬಾರ್ ಬಿತ್ತೋದ್ ಬೊಳ್ಳರಿ ಕೊಯ್ಯಲ್ಯೂ

ಕೆಟ್ಟ ನೆಲ್ಲು ಬುಟ್ಟಿ ತುಂಬ ಇದ್ದರೇನು ಎಡ್ಡೆ ಬಿತ್ತ್ ಎಡ್ಡೆ ಬೈಟೇ ಕಟ್ಟೊಡು ಅನುರಾಧೆ ಬರ್ಸ ಪಂತಿ ಬಾಪೆಲೆ. ಹೊಲ ಸಹಾಯವಿಲ್ಲದೆ ನೆಲವಿದ್ದರೇನು ಮೇವು ಇಲ್ಲದ ಹಸು ಮೊಲೆಹಾಲು ಇಲ್ಲದ ಕೂಸು ಹೊಟ್ಟೆಗಿಲ್ಲದ ಎತ್ತು ಹಟ್ಟಿಯಲ್ಲಿದ್ದರೂ ಫಲವಿಲ್ಲ ಎತ್ತು ಸಾಕಿದರೆ ಭತ್ತಕ್ಕೆ ಕಡಿಮೆಯಾಗದು ಮುತ್ತಿಗಿಂತಲೂ ಎತ್ತು ಉತ್ತಮ ಧೋತ್ರ ತುತ್ತುನಾಯಗ್ ಕೈಕಂಜಿ ದಾಯೆಗ್ ನೋಡಿದರೆ ಜಾನುವಾರು ಬಿಟ್ಟರೆ ಮನೆ ಮಾರು ಪಣೆಟ್ ಬರ್ಸ ಬಂಡ ಪಣಿ ಕಡಪಂದ್ ಮಣಿಟ್ ಬರ್ಸ ಬಂಡ ಪುಚ್ಚೆಗ್‌ಲಾ ನುಪ್ಪು ತಿಕ್ಕಂದ್‌.

{gap}}ವೃತ್ತಾಂತ ಪತ್ರಿಕೆ 1887-1941- ಈ ಪತ್ರಿಕೆಯು ಮೈಸೂರಿನ ವೆಸ್ಲಿ ಪ್ರೆಸ್‌ನಲ್ಲಿ ಮುದ್ರಣಗೊಂಡು ವೆಸ್ಲಿಯನ್ ಮಿಶನ್‌ನಿಂದ ಪ್ರಕಟಗೊಳ್ಳುತ್ತಿತ್ತು. 54 ವರ್ಷಗಳ ಕಾಲ ನಿರಂತರ ಮುದ್ರಣಗೊಳ್ಳುತ್ತಿದ್ದ ಈ ಪತ್ರಿಕೆಯು ಪತ್ರಿಕೋದ್ಯಮ ಚರಿತ್ರೆಯಲ್ಲಿ ದಾಖಲಿಸುವ ಸ್ಥಾನವನ್ನು ಪಡೆದಿದೆ. ಹಿಂದೂಸ್ಥಾನದ ವಿಚಾರಗಳು, ಮಹಿಳೆಯರ ಪ್ರಪಂಚ, ಒಳದೇಶದ ವೃತ್ತಾಂತ, ಹಿಂದೂಸ್ಥಾನದ ರಾಜಕೀಯ ವಿಚಾರಗಳು, ಮೈಸೂರು ಗಜೆಟ್ ಸಂಗ್ರಹ, ವಿವಿಧ ಯುದ್ಧ ವೃತ್ತಾಂತಗಳು, ಯುರೋಪಿನ ಯುದ್ಧ ಸಮಾಚಾರ, ವಿದೇಶ ವರ್ತಮಾನಗಳು, ಮೈಸೂರು ದಿವಾನರ ಉಪನ್ಯಾಸ, ಮಹಾರಾಜರ ವಿವಾಹ ಮಂಟಪವು ಹೀಗೆ ವಿಭಿನ್ನ ರೀತಿಯಲ್ಲಿ ಓ ಪತ್ರಿಕೆಯು ಹೊರಬರುತ್ತಿತ್ತು. ಈ ಪತ್ರಿಕೆಗಳ ಸಂಗ್ರಹಗಳನ್ನು ಕೂಲಂಕುಶವಾಗಿ ಪರಿಶೀಲಿಸಿದರೆ ಈ ಪತ್ರಿಕೆಯೊಂದರಲ್ಲೇ ನೂರಾರು ವಿಷಯಗಳ ಸಂಶೋಧನೆಗಳನ್ನು ಕೈಗೆತ್ತಿಕೊಳ್ಳಬಹುದು. 54 ವರ್ಷಗಳ ಕಾಲ ಕರ್ನಾಟಕದಾದ್ಯಂತ ಪ್ರಸಾರದಲ್ಲಿದ್ದ ವೃತ್ತಾಂತ ಪತ್ರಿಕೆ ಕೊನೆಗೊಳ್ಳುವ ಕಾರಣವನ್ನು ಕೊನೆ ಸಂಚಿಕೆಯಲ್ಲಿ ಹೀಗೆ ವಿವರಿಸಿದ್ದಾರೆ:

“ನಮ್ಮ ಜೀವಮಾನದಲ್ಲಿ ನಾವು ಹಿಂದೆಂದೂ ಮಾಡದಿದ್ದ ಬಹುಶಃ ಅತ್ಯಂತ ಕಷ್ಟಕರವೆನಿಸಿದ ಕಾರ್ಯವನ್ನು ಅಂದರೆ ನಮ್ಮಿ “ವೃತ್ತಾಂತ ಪತ್ರಿಕೆ” ಯ ಈ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

75 [ 76 ] ದಿನದ ಸಂಚಿಕೆಯೇ ಈ ಪತ್ರಿಕೆಯ ಕೊನೇ ಸಂಚಿಕೆಯೆಂಬುದನ್ನು ನಾವು ವಾಚಕರಿಗೆ ಶ್ರುತಪಡಿಸುವ ಕಾರ್ಯವನ್ನು ಇಂದು ಮಾಡಬೇಕಾಗಿದೆ. ನಾಲ್ಕುವರೆ ವರ್ಷಗಳ ಹಿಂದೆ ನಾವು ಈ ಪತ್ರಿಕೆಯ 50ನೇ ವಾರ್ಷಿಕೋತ್ಸವವನ್ನು ನಡೆಸಿದಾಗ ಪ್ರಕಟಿಸಿದ ಈ ಪತ್ರಿಕೆಯ ವಿಶೇಷ ಸಂಚಿಕೆಯಲ್ಲಿ ಹಿಂದೆ ಈ ಪತ್ರಿಕೆಯಲ್ಲಿ ಸಂಪಾದಕರಾಗಿದ್ದವರೊಬ್ಬರು ವೃತ್ತಾಂತ ಪತ್ರಿಕೆಯ ಸ್ಥಾಪಕರಾದ ಹೆನ್ರಿ ಹೇಗ್‌ರವರು ಈ 50ನೇ ವರ್ಷೋತ್ಸವದ ಸಂಚಿಕೆಯನ್ನು ನೋಡಿದ್ದರೆ ಅವರು ಆಶ್ಚರ್ಯಚಕಿತರಾಗುತ್ತಿದ್ದರಲ್ಲದೆ ಅತ್ಯಂತ ಸಂತೋಷಭರಿತರೂ ಆಗುತ್ತಿದ್ದರೆಂದು ಬರೆದರು. ಆ ಮಹೋತ್ಸವದ ದಿನ ನಾವೆಲ್ಲರೂ ಈ ಪತ್ರಿಕೆಯು ಇನ್ನೂ ಐವತ್ತು ವರ್ಷಗಳ ಕಾಲ ಬಾಳಿ ಬೆಳೆದು ಮೈಸೂರು ಸಂಸ್ಥಾನದ ಪ್ರಜೆಗಳ ಸೇವೆಯನ್ನು ಮಾಡುವುದೆಂದೇ ನಿರೀಕ್ಷಿಸಿಕೊಂಡಿದ್ದೆವು. ಈ ಪತ್ರಿಕೆಯು ನಿಲ್ಲಬೇಕಾಗಿ ಬಂದುದಕ್ಕೆ ಇಂದಿನ ಯುದ್ಧವೇ ಕಾರಣವಾಗಿರುತ್ತದೆ.[{/br}}

ಈ ಪತ್ರಿಕೆಯ ಎರಡನೇ ಐವತ್ತು ವರ್ಷದ ಜೀವನವು ಪ್ರಾರಂಭವಾದಾಗ ಇದನ್ನು ನಾನಾ ಊರುಗಳಲ್ಲಿ ಹಂಚುವವರ ಮತ್ತು ವಾಚಕರ ಸಹಾಯದಿಂದ ಇದರ ಚಂದಾದಾರರ ಸಂಖ್ಯೆ ಎರಡು ವರ್ಷಗಳ ಅವಧಿಯಲ್ಲಿ ಶೇಕಡ ಮೂವತ್ತರಷ್ಟು ಹೆಚ್ಚಿತು. ಅಷ್ಟರಲ್ಲೇ ಯುದ್ಧದ ಭೀತಿ ಪ್ರಪಂಚದಾದ್ಯಂತದಲ್ಲೂ ಹಬ್ಬಿದ್ದುದರಿಂದ ಕಾಗದದ ಬೆಲೆ వీరి ಹೋಯಿತು. ಅದರ ಪರಿಣಾಮವೇನಾಯಿತೆಂದರೆ ನಾವು ಪ್ರಕಟಿಸುತ್ತಿದ್ದ ಹೆಚ್ಚು ಪುಟಗಳಿಂದ ಕೂಡಿದ ಪ್ರತಿಯೊಂದು ಪತ್ರಿಕೆಯ ವಿಕ್ರಯದಿಂದಲೂ ನಮಗೆ ನಷ್ಟವೇ ಆಗಲು ಉಪಕ್ರಮವಾಯಿತು. ಇತ್ತೀಚಿನ ವರ್ಷಗಳಲ್ಲಿ ನಮ್ಮ ಪತ್ರಿಕೆಯಲ್ಲಿ ಪ್ರಕಟವಾಗುವ ಜಾಹಿರಾತುಗಳ ಸಂಖ್ಯೆ ಹೆಚ್ಚಿದಾಗ್ಯೂ ಕಳೆದ ನಾಲ್ಕು ವರ್ಷಗಳಿಂದಲೂ ನಮಗೆ ವರ್ಷವರ್ಷವೂ ಆಗುತ್ತಿರುವ ನಷ್ಟ ಬಹಳ ದುಬಾರಿಯಾಗಿರುತ್ತದೆ. ಮೇಲಾಗಿ ಯುದ್ಧಕ್ಕಾಗಿ ಅಪಾರವಾದ ಹಣ ಖರ್ಚಾಗುತ್ತಿರುವ ಇಂದಿನ ದಿನಗಳಲ್ಲಿ ಮೊದಲಿನಂತೆ ಇಂಗ್ಲಾಂಡಿನಲ್ಲಿರುವ ನಮ್ಮ ಮಿತ್ರರಿಂದ ನಾವು ದ್ರವ್ಯ ಸಹಾಯ ನೀರೀಕ್ಷಿಸುವುದು ನ್ಯಾಯವಾದುದಲ್ಲ. ಅವರ ಸಹಾಯವನ್ನು ಬಿಟ್ಟರೆ ನಮ್ಮ ಪತ್ರಿಕೆಯನ್ನು ಮು೦ದುವರಿಸಲು ಪಾಶ್ಚಿಮಾತ್ಯ ದೇಶದಲ್ಲಾಗಲಿ ಹಿಂದೂಸ್ಥಾನದಲ್ಲಾಗಲಿ ನಮಗೆ ಸಹಾಯ ನೀಡುವವರಾರೂ ಇರುವುದಿಲ್ಲ. ನಮ್ಮ ಖರ್ಚುವೆಚ್ಚಗಳನ್ನು ಕಡಿಮೆಮಾಡಿ ನಮ್ಮ ಆದಾಯವನ್ನು ಹೆಚ್ಚಿಸುವುದಕ್ಕಾಗಿ ನಮ್ಮ ಕೈಲಾದ ಪ್ರಯತ್ನಗಳನ್ನೆಲ್ಲವನ್ನೂ ಮಾಡಿದೆವು. ಈ ವಿಷಯದಲ್ಲಿ ನಮ್ಮಿಂದ ಮುಂದೇನನ್ನೂ ಮಾಡುವುದು ಸಾಧ್ಯವೇ ಇಲ್ಲ. ನಮ್ಮಿ ಪತ್ರಿಕೆಯನ್ನು ನಡೆಸಲು ಈ

76

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

[ 77 ]

ರೀತಿಯ ದ್ರವ್ಯದ ಅಭಾವವುಂಟಾದುದರಿಂದ ಮಿಶನ್ ಸಂಘದವರು ಈ ಪತ್ರಿಕೆಯ ಪ್ರಕಟಣೆಯನ್ನು ಈ ವರ್ಷದ ಕೊನೆಯಲ್ಲಿ ಅಂದರೆ ಈ ವಾರ ನಿಲ್ಲಿಸಿಬಿಡಲು ಅತ್ಯಂತ ವ್ಯಸನದಿಂದ ನಿರ್ಧರಿಸಲೇಬೇಕಾಯಿತು. “ವೃತ್ತಾಂತ ಪತ್ರಿಕೆ” ಯು ಯುದ್ಧದಿಂದ ಮರಣಕ್ಕೀಡಾಯಿತೆಂಬುದರಲ್ಲಿ ಸಂದೇಹವಿಲ್ಲ.

ನಮ್ಮ ಪತ್ರಿಕೆಯ ಪ್ರಕಟಣೆಯನ್ನು ನಿಲ್ಲಿಸುವುದು ನಮಗೂ ನಮ್ಮ ವಾಚಕರಿಗೂ ಅತ್ಯಂತ ದುಃಖಕರವಾದ ವಿಷಯವಾದಾಗ್ಯೂ ಇಷ್ಟು ವರ್ಷಕಾಲ ಈ ಸಂಸ್ಥಾನದ ಪ್ರಜೆಗಳಿಗೆ ಇದರ ಮೂಲಕ ಸೇವೆಯನ್ನು ಸಲ್ಲಿಸಲು ನಮಗೆ ಅವಕಾಶ ದೊರೆತುದಕ್ಕಾಗಿ ನಾವು ಅತ್ಯಂತ ಕೃತಜ್ಞರಾಗಿದ್ದೇವೆ. ಈ ಪತ್ರಿಕೆಯ ಸಂಪಾದಕ ರಾಗಿದ್ದವರ ಪೈಕಿ ಅತ್ಯಂತ ದಕ್ಷರಾದ ಥಾನ್ಸನ್‌ರವರು ಸುಮಾರು 40 ವರ್ಷಗಳ ಹಿಂದೆ ನಮ್ಮಿ ಪತ್ರಿಕೆಯ ವಿಷಯದಲ್ಲಿ ಈ ರೀತಿ ಬರೆದಿದ್ದರು. “ಕ್ರೈಸ್ತ ವರ್ತಮಾನ ಪತ್ರಿಕೆಯು ತನ್ನದೇ ಆದ ಉದಾತ್ತ ಧೈಯಗಳನ್ನು ಪರಿಪಾಲಿಸಬೇಕು. ಇದು ಜನತೆಯ ನ್ಯಾಯಬದ್ಧವಾದ ಕುಂದುಕೊರತೆಗಳ ಪರವಾಗಿ ನಿರ್ಭೀತಿಯಿಂದ ವಾದಿಸುವುದಕ್ಕೆ ಹೆದರುವುದಿಲ್ಲ. ಅಲ್ಲದೆ ಸರ್ಕಾರವು ನಿಷ್ಕಾರಣವಾಗಿ ದೂಷಣೆಗೆ ಗುರಿಯಾಗಿದ್ದಾಗ ಅದನ್ನು ಪ್ರತಿಭಟಿಸದೆ ಆಲಸ್ಯದಿಂದಿರುವುದೂ ಇಲ್ಲ. ಕೀರ್ತಿ ಅಪಕೀರ್ತಿಗಳಲ್ಲಿಯೂ ಕ್ರೈಸ್ತರ ವರ್ತಮಾನ ಪತ್ರಿಕೆಯು ತಾನು ಜನರ ನೈಜ್ಯವಾದ ಹಿತಮಿತನೆಂಬುದನ್ನು ಸ್ಥಾಪಿಸಿಕೊಳ್ಳಬೇಕು. “ವೃತ್ತಾಂತ ಪತ್ರಿಕೆ”ಯು ಮೈಸೂರು ಸರ್ಕಾರದ ಮಿತ್ರ ಪಕ್ಷಕ್ಕೆ ಸೇರಿದುದೆಂದು ಜನರು ಒಂದು ಸಾರಿ ಉಪೇಕ್ಷಿಸಿದ್ದಾರೆ. ಮತ್ತೊಂದು ಬಾರಿ ಇದು ಬ್ರಿಟಿಷರಿಗೆ ಸಂಬಂಧಪಟ್ಟದ್ದೆಲ್ಲವನ್ನೂ ಸುಮ್ಮನೆ ಸ್ತುತಿಸುವ ಹೊಗಳುಭಟನೆಂದು ಹೇಳಿದ್ದಾರೆ. ಅದಾಗ್ಯೂ ಈ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯು ಸತ್ಯವಾದುದೇ ಆಗಿರಬೇಕೆಂಬ ನಂಬಿಕೆ ಜನರಲ್ಲಿ ಹರಡಿರುತ್ತದೆ”.

ಥಾಮನ್ಸ್ರವರು ಯಾವ ಉದಾತ್ತ ಧೈಯಗಳನ್ನಿಟ್ಟುಕೊಂಡು ಈ ಪತ್ರಿಕೆಯನ್ನು ನಡೆಸುತ್ತಿದ್ದರೋ ಅದೇ ಧೈಯಗಳನ್ನು ಈ ಪತ್ರಿಕೆಯ ಐವತ್ತು ವರ್ಷಗಳ ಜೀವಾವಧಿಯಲ್ಲಿ ಅದರ ಇತರ ಸಂಪಾದಕರೂ ಸಹ ಅನುಸರಿಸಿಕೊಂಡು ನಾವು ದೃಢವಾಗಿ ಹೇಳುತ್ತೇವೆ. ಮುಖ್ಯವಾಗಿ ದೇಶದಲ್ಲೆಲ್ಲಾ ಸುಳ್ಳು ಸುದ್ದಿಗಳೂ ಉಲ್ಲೇಕ್ಷಿತ ಸಮಾಚಾರಗಳೂ ವಾಯುವೇಗದಿಂದ ಹಬ್ಬುತ್ತಿರುವ ಯುದ್ಧಕಾಲದಲ್ಲಿ ನಾವು ವಾಸ್ತವಾಂಶಗಳನ್ನೇ ಹೊರತು ಮತ್ತೇನನ್ನೂ ಪ್ರಕಟಿಸದಂತೆ ಪ್ರಯತ್ನ ಪಟ್ಟಿರುತ್ತೇವೆ. ದೇವರು ನಮ್ಮ ಪಕ್ಷದಲ್ಲಿದ್ದರೆ ನಮಗೆ ಸೋಲಾಗುವುದು ಕೇವಲ ಅಸಾಧ್ಯವೆಂದು ಭರವಸೆ ಕೊಡುವುದರ ಮೂಲಕ ಜನಗಳ ಮನಸ್ಸನ್ನು ಸ್ತಿಮಿತಕ್ಕೆ ತರಲು ಪ್ರಯತ್ನಪಟ್ಟಿರುತ್ತೇವೆ. ಇತ್ತೀಚಿನ ವರ್ಷಗಳಲ್ಲಿ ನಾವು “ವೃತ್ತಾಂತ ಪತ್ರಿಕೆ”

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

77 [ 78 ] ಯನ್ನು ಒಂದು ಕಡೆ ಪ್ರಗತಿ ಮನೋಭಾವವುಳ್ಳ ರಾಜಕೀಯ ಪಕ್ಷದವರಿಗೂ ಸಂಸ್ಥಾನದ ಸರಕಾರಕ್ಕೂ, ಮತ್ತೊಂದು ಕಡೆ ರಾಷ್ಟ್ರನಾಯಕರಿಗೂ ಬ್ರಿಟಿಷ್ ಸರ್ಕಾರಕ್ಕೂ ಸ್ನೇಹ ಸೌಹಾರ್ಧವನ್ನು ಬೆಳೆಸುವ ಸಾಧನವನ್ನಾಗಿ ಮಾಡಲು ಪ್ರಯತ್ನ ಪಟ್ಟಿದ್ದೇವೆ. ಪ್ರಚಲಿತ ವಿಷಯಗಳನ್ನು ಕುರಿತು ಮಹಾಜನರೇ ನ್ಯಾಯಬದ್ಧವಾದ ತೀರ್ಮಾನಕ್ಕೆ ಬರಲು ಆಯಾ ವಾರದ ಸುದ್ದಿಗಳನ್ನು ಖರಾರಾಗಿಯೂ ಎಲ್ಲರಿಗೂ ಸುಲಭವಾಗಿ ತಿಳಿಯುವಂತೆಯೂ ಪ್ರಕಟಿಸುವುದೇ ನಮ್ಮ ಧ್ಯೇಯವಾಗಿದ್ದಿತು. ನಮ್ಮ ವಾಚಕರು ಇದುವರೆಗೆ ನಮಗೆ ಕೊಟ್ಟಿರುವ ಪ್ರೋತ್ಸಾಹಕ್ಕಾಗಿಯೂ ತೋರಿರುವ ಸಹತಾಪಕ್ಕಾಗಿಯೂ ನಾವು ಅವರೆಲ್ಲರಿಗೂ ಹೃತ್ತೂರ್ವಕವಾದ ವಂದನೆಗಳನ್ನರ್ಪಿಸುತ್ತೇವೆ.”

ಕನ್ನಡ ಪತ್ರಿಕೋದ್ಯಮ ಚರಿತ್ರೆಯನ್ನು ಆರಂಭ, ಮಧ್ಯಕಾಲೀನ, ಆಧುನಿಕ ಹೀಗೆ ಮೂರು ವಿಭಾಗಗಳಾಗಿ ವಿಂಗಡಿಸಿ ಅಧ್ಯಯನ ಮಾಡಬಹುದು. ಆಧುನಿಕ ವಿಭಾಗದ ಪತ್ರಿಕೆಗಳು ತಂತ್ರಜ್ಞಾನವನ್ನು ಬಳಸಿಕೊಂಡು ಮುದ್ರಣಗೊಂಡು ತಂತ್ರಜ್ಞಾನದ ಮೂಲಕವೇ ದಾಖಲೀಕರಣಗೊಂಡಿದೆ. ಆದರೆ ಮೊದಲ ಎರಡು ವಿಭಾಗಗಳ ಪತ್ರಿಕೆಗಳ ಸ್ವರೂಪ, ಚರಿತ್ರೆಗಳನ್ನು ಅಭ್ಯಸಿಸಲು ಬೆರಳೆಣಿಕೆಯ ಪತ್ರಿಕೆಗಳು ಮಾತ್ರ ಸಿಗುತ್ತವೆ. ಯಾಕಂದರೆ ನಮ್ಮಲ್ಲಿ ದಾಖಲೀಕರಣ ಮಾಡುವ ಹವ್ಯಾಸವೇ ಇಲ್ಲವೋ ಎಂಬಂತಿದೆ. ಹಲವು ಪತ್ರಿಕೆಗಳ ಸಮಗ್ರ ಸಂಶೋಧನೆ ನಡೆದು ಅನೇಕ ಕೃತಿಗಳಾಗಿವೆ. ಕನ್ನಡ ಪತ್ರಿಕಾ ಸೂಚಿಯೊಂದು ಡಾ ಹಾವನೂರರಿಂದ ಸಂಗ್ರಹಗೊಂಡು ಪ್ರಕಟಗೊಂಡು ಇಷ್ಟು ಪತ್ರಿಕೆಗಳು ನಮ್ಮ ಕನ್ನಡದ್ದಾ ಎಂದೆನಿಸುತ್ತದೆ. ಇಂತಹ ಕಾರ್ಯಗಳನ್ನು ಮಾಡಬೇಕಾದರೆ ನಮ್ಮಲ್ಲಿ ದಾಖಲೀಕರಣದ ಮನಸ್ಸು ಮೂಡಿ ಬರಬೇಕು. ಇದಕ್ಕಾಗಿ ಪತ್ರಿಕಾ ಅಕಾಡೆಮಿ, ವಿಶ್ವವಿದ್ಯಾಲಯಗಳು ಮುಂದೆ ಬರಬೇಕಾಗಿದೆ. ಮೊದಲಿನದ್ದೆಲ್ಲ ಬೇಡ ಈಗ ಮಾಡುವುದೇ ಸರಿ, ಈಗ ಹೊಸ ಯುಗ ಅನ್ನುವವರೂ ಇದ್ದಾರೆ. ಹೊಸ ಯುಗ ಸರಿ ಆದರೆ ಸಂಶೋಧನೆ ಮಾಡಬೇಕಾದರೆ ಹಳೆಯದು ಬೇಕೇಬೇಕು. ಆಗ ಮಾತ್ರ ಹಳೆಯದಿದ್ದರೆ ಹೊಸತು ಸಾಧ್ಯ ಎನ್ನುವ ಅರಿವು ನಮಗಾಗುತ್ತದೆ. ಅದ್ದರಿಂದ ಹಳೆಯ ಪತ್ರಿಕಾ ಸಾಹಿತ್ಯದ ಚರಿತ್ರೆಯ ದಾಖಲೀಕರಣಕ್ಕೆ ನಾವೆಲ್ಲ ಕೈ ಜೋಡಿಸೋಣ.

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

[ 79 ]

{{{1}}}

ಪರಾಮರ್ಶನ ಸೂಚಿ

1. ಎನ್. ಎಸ್. ಸೀತಾರಾಮಶಾಸ್ತ್ರೀ, ಕನ್ನಡ ಪತ್ರಿಕೋದ್ಯಮ, ಕರ್ನಾಟಕ ರಾಜ್ಯ ಪತ್ರಿಕಾ ಅಕಾಡೆಮಿ, ಬೆಂಗಳೂರು, 1987

2, ಜೈನುಲ್ಲಾ ಬಳ್ಳಾರಿ, ಕನ್ನಡ ಪತ್ರಿಕೋದ್ಯಮಕ್ಕೆ ರೆ, ಹೆರ್ಮನ್ ಮೋಗ್ಲಿಂಗ್

ಕೊಡುಗೆ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 2010

3. ಶ್ರೀನಿವಾಸ ಹಾವನೂರ, ಹೊಸಸಗನ್ನಡದ ಅರುಣೋದಯ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು. ವಿ.ವಿ. 1974

4. ಬಾ. ಶಿವರಾವ್, ರೋಗ ಚಿಕಿತ್ಸೆಯು, 1902, ಬಾಸೆಲ್ ಮಿಶನ್ ಪ್ರೆಸ್

5, ಮಂಗಳೂರು ಸಮಾಚಾರ, ಜರ್ಮನ್ ಮಿಶನ್ ಪ್ರೆಸ್, ಮಂಗಳೂರು, 1843

6. ಕನ್ನಡ ಸಮಾಚಾರ, ಲಂಡನ್ ಮಿಶನ್ ಪ್ರೆಸ್, ಬಳ್ಳಾರಿ, 1844

7. ವೃತ್ತಾಂತ ಪತ್ರಿಕೆ, ವೆಸ್ಲಿಯನ್ ಮಿಶನ್ ಪ್ರೆಸ್, ಮೈಸೂರು, 1899, 1941

8. ಸಹಸ್ರಾರ್ಧ ವೃಕ್ಷಾದಿಗಳ ವರ್ಣನೆ, 1881, ಬಾಸೆಲ್ ಮಿಶನ್ ಪ್ರೆಸ್.

9. ಕನ್ನಡ ಪಂಚಾಂಗ, ಬಾಸೆಲ್ ಮಿಶನ್ ಪ್ರೆಸ್, ಮಂಗಳೂರು 1857, 1873

10. ಸತ್ಯದೀಪಿಕೆ, ಬಾಸೆಲ್ ಮಿಶನ್ ಪ್ರೆಸ್, ಮಂಗಳೂರು, 1912

11. ವಿಚಿತ್ರ ವರ್ತಮಾನ ಸಂಗ್ರಹ ಪತ್ರಿಕೆಗಳು, ಬಾಸೆಲ್ ಮಿಶನ್ ಪ್ರೆಸ್, ಮಂಗಳೂರು.

12. ವ್ಯಾವಸಾಯಿಕ ಪಂಚಾಂಗ, ಬಾಸೆಲ್ ಮಿಶನ್ ಪ್ರೆಸ್, ಮಂಗಳೂರು, 1910

13. Basel Mission Reports

14, ದ.ಕ.ದಲ್ಲಿ ಪಂಚಾಂಗ ರಚನೆ-ಶ್ರೀ ಯರ್ಮುಂಜ ಜೋಹಿಸ, (ಡಾ.ಟಿ.ಎಂ.ಎ.ಪೈ ಅಭಿನಂದನ ಗ್ರಂಥ) ಲೇಖನ, 1977

15. ಇತಿಹಾಸ ಹೇಳುವ ಕನ್ನಡ ಪಂಚಾಂಗ, ಲೇ.ಟಿ.ಎಂ. ಸುಬ್ಬರಾಯ,ಶಿರಸಿ, ತರಂಗ 10 ಜುಲೈ 1994

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

79 [ 80 ] ತುಳು ಜಿಲ್ಲೆಯಲ್ಲಿ ಪತ್ರಿಕೋದ್ಯಮ ಮತ್ತು ಕೆಲವು ಕ್ರೈಸ್ತ ಪತ್ರಿಕೆಗಳಲ್ಲಿ ತುಳುನಾಡು

ಮಂಗಳೂರಿನ ಬಾಸೆಲ್ ಮಿಶನ್‌ ಪ್ರೆಸ್‌ನಲ್ಲಿ ಪ್ರಕಟವಾದ ಮೊದಲ ಕನ್ನಡ ಪತ್ರಿಕೆ 'ಮಂಗಳೂರು ಸಮಾಚಾರ'. ಇದು ವಾರಪತ್ರಿಕೆಯಾಗಿದ್ದು ಜುಲೈ 1843ರಿಂದ 1844 ಫೆಬ್ರವರಿ ತನಕ ಮಾತ್ರವೇ ಪ್ರಕಟಗೊಂಡಿದೆ. ಮೊದಲ ಪ್ರತಿಯ ಕಿರು ಪರಿಚಯ ಹೀಗಿದೆ. 1943 ಜುಲೈ 1. ಕ್ರಯ ಒಂದು ದುಡ್ಡು. ಮೊದಲಿಗೆ ಇದನ್ನು ಪತ್ರಿಕೆ ಎನ್ನದೆ ಕಾಗದ ಎನ್ನುತ್ತಿದ್ದರು. ತಿಂಗಳಿಗೆ ಎರಡಾವರ್ತಿ ಪ್ರಕಟವಾಗುತ್ತಿತ್ತು.

ಕನ್ನಡ ಪತ್ರಿಕಾ ಕ್ಷೇತ್ರದ ಮೊದಲ ಪತ್ರಿಕೆ ಮಂಗಳೂರು ಸಮಾಚಾರವಾದರೂ ಇದು ಸ್ವದೇಶದ್ದಲ್ಲ ಎಂಬ ಕೊರಗನ್ನು ಒಬ್ಬ ಲೇಖಕರು ತಮ್ಮ ಲೇಖನವೊಂದರಲ್ಲಿ ಹೀಗೆ ಹೇಳಿಕೊಂಡಿದ್ದಾರೆ. "ಮತ ಪ್ರಚಾರಕ್ಕಾಗಿ ಮಂಗಳೂರಿಗೆ ಬಂದ ಸಂಸ್ಥೆಯೊಂದರ ಪ್ರಚಾರ ಕಾರ್ಯಗಳಲ್ಲಿ ಇದೂ ಒಂದಾಗಿತ್ತು. ಕ್ರೈಸ್ತ ಧರ್ಮ ಪ್ರತಿಪಾದನೆಯೇ ಮುಖ್ಯ ಉದ್ದೇಶವಾಗಿದ್ದ ಈ ಪತ್ರಿಕೆಯಲ್ಲಿ ಜನರ ಆಶೋತ್ತರಗಳಿಗೆ ಅವಕಾಶ ತೀರಾ ಕಡಮೆ ಇತ್ತು. ಬದಲಾಗಿ ಹಿಂದೂ ಧರ್ಮ ಪರಂಪರೆಗಳ ಟೀಕೆಗೆ ಅವಕಾಶ ವಿರುತ್ತಿತ್ತು. " ಆದರೆ ಬಾಸೆಲ್ ಮಿಶನರಿಗಳು ಪ್ರಾರಂಭಿಸಿದ ಪತ್ರಿಕೆಯಾದ ಮೊದಲ ಪತ್ರಿಕೆಗಳಲ್ಲಿ ಲೇಖಕರು ಅನಿಸಿಕೊಂಡಂತಿಲ್ಲ. ಮಂಗಳೂರು ಸಮಾಚಾರ ಹಾಗೂ ಕನ್ನಡ ಸಮಾಚಾರ ತೀರಾ ಭಿನ್ನವಾದ ಶೈಲಿಯಲ್ಲಿ ಬರುತ್ತಿತ್ತು. ಈ ವಿಚಾರವಾಗಿ ಡಾ ಹಾವನೂರರು ಹೀಗೆ ಬರೆಯುತ್ತಾರೆ. “ಮಿಶನರಿಗಳು ಈ ಪತ್ರಿಕೆಯನ್ನು ಸ್ವಮತ ಪ್ರಸಾರಕ್ಕಾಗಿ ಬೇಕಾದ ಹಾಗೆ ಬಳಸಿಕೊಳ್ಳಬಹುದಾಗಿತ್ತು. ಹಾಗೆ ಮಾಡದ್ದರಿಂದ ಕನ್ನಡದ ಈ ಮೊದಲ ಪತ್ರಿಕೆಯು ಜಾತ್ಯಾತೀತವಾದ ಸಮಸ್ತ ಕನ್ನಡಿಗರನ್ನುದ್ದೇಶಿಸಿದ ಪತ್ರಿಕೆಯಾಗಿ ನಿಂತಿತು. ಕ್ರಿಶ್ಚಿಯನ್ ಮತ ವಿಚಾರಗಳು ವ್ಯಕ್ತವಾದ ಸಂದರ್ಭಗಳೆಂದರೆ ದಾಸರ ಪದ ಹಾಗೂ ಸಂಸ್ಕೃತ ಶ್ಲೋಕಗಳನ್ನು ಕೊಡುತ್ತಾ ಅದಕ್ಕೆ ಸಮಾನಾದ ಬೈಬಲ್ ಉಕ್ತಿಗಳನ್ನು ವಿವರಿಸಿದುದು.” ಆ ನಿಮಿತ್ತದಿಂದ ಪುರಂದರ ದಾಸರ ಕೆಲವು ಹಾಡುಗಳು ಪ್ರಥಮತ ಮುದ್ರಣ ರೂಪದಲ್ಲಿ ಹೊರಬಂದುದು ಇಲ್ಲಿ. ಮೊದಲ ಪತ್ರಿಕೆಯಲ್ಲಿಯೇ ಸರಕಾರದ

80

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

[ 81 ]

ನಿರೂಪಗಳು, ಸರ್ವರಾಜ್ಯ ವರ್ತಮಾನಗಳು, ನೂತನವಾದ ಆಶ್ಚರ್ಯ ಸುದ್ದಿಗಳು, ಅನ್ಯರ ನಡೆಗಳು, ಸುಬುದ್ಧಿಗಳು, ಕಥೆಗಳು ಹೀಗೆ ವಿಭಾಗಗಳಿದ್ದು ಪ್ರಕಟವಾಗುತ್ತಿತ್ತು. ಕೋರ್ಟ್, ಪೋಲಿಸ್, ವ್ಯವಹಾರಗಳು, ವಿದೇಶದ ವಾರ್ತೆಗಳು, ಆಮದು ರಫ್ತು ವಿಚಾರಗಳು ಮುಂತಾದ ಹಲವಾರು ವಿವಿಧ ರೀತಿಯ ಸಮಾಚಾರದ ದಾಖಲೆಯಾಗಿದ್ದು 200 ವರ್ಷಗಳ ಹಿಂದಿನ ಚಿತ್ರಣವನ್ನು ಕಣ್ಮುಂದೆ ಇಡುತ್ತದೆ.

2ನೇ ಪತ್ರಿಕೆಯಾದ ಕನ್ನಡ ಸಮಾಚಾರ (1844 ಜೂನ್-1844 ನವೆಂಬರ್) ಪ್ರಾರಂಭವಾದಾಗ ಪತ್ರಿಕೆಯಲ್ಲಿ ಈ ರೀತಿ ಬರೆದಿದ್ದಾರೆ. ಈ ದೇಶಸ್ಥರಲ್ಲಿ ಅನೇಕರಿಗೆ ಕನ್ನಡ ಭಾಷೆಯಲ್ಲಿ ಬರೆದ ಸಮಾಚಾರವನ್ನು ಓದುವುದರಲ್ಲಿ ಮತಿ ಆಗುವುದೆಂದು ನೋಡಿ ಸಂತೋಷದಿಂದ ಅದನ್ನು ವೃದ್ಧಿಮಾಡುವ ಪ್ರಯತ್ನದಿಂದ ಇನ್ನು ಮುಂದೆ ಕಲ್ಲಿನಲ್ಲಿ ಛಾಪಿಸದೆ ಬಳ್ಳಾರಿಯಲ್ಲಿರುವ ಅಕ್ಷರ ಛಾಪಖಾನೆಯಲ್ಲಿ ಅಚ್ಚುಪಡಿ ಮಾಡಲಿಕ್ಕೆ ನಿಶ್ಚಯಿಸಿದ್ದೇವೆ. ಆದ್ದರಿಂದ ಮೊದಲಿನ ಎರಡು ಪಟ್ಟು ಬರಹ ಪಡಿಯುವುದರಿಂದ ಹೆಚ್ಚು ವರ್ತಮಾನವನ್ನು ಚರಿತ್ರೆಗಳನ್ನು ವಿದ್ಯಾಪಾಠಗಳನ್ನೂ ಬುದ್ಧಿ ಮಾತುಗಳನ್ನು ಬರಿಯುವುದಕ್ಕೆ ಸ್ಥಳ ಶಿಕ್ಕುವುದು.

ಕನ್ನಡ ಪಂಚಾಂಗ ಎಂಬ ವಾರ್ಷಿಕ ಪತ್ರಿಕೆಯು 1853-1936ರ ತನಕ ಬಾಸೆಲ್ ಮಿಶನ್ ಪ್ರೆಸ್‌ನಿಂದ ಪ್ರಕಟವಾಗುತ್ತಿತ್ತು. ಅಲ್ಲದೆ ವ್ಯವಸಾಹಿಕ ಪಂಚಾಂಗ ಎಂಬ ವರ್ಷ ಪತ್ರಿಕೆಯೂ ಇತ್ತು ಇದರಲ್ಲಿ ಜಿಲ್ಲೆಗೆ ಸಂಬಂಧಪಟ್ಟ ಸರಕಾರಿ ಉದ್ಯೋಗಸ್ತರು, ತುಳು ಗಾದೆಗಳು, ಸರಕಾರಿ ವಿಚಾರಗಳು ಮುಂತಾದ ಹಲವಾರು ವಿಚಾರಗಳು ಅಡಗಿದ್ದು ಕನ್ನಡ ಪಂಚಾಂಗದಲ್ಲಿ ಪ್ರಕಟವಾದ ಲೇಖನವನ್ನಾಧರಿಸಿ ರೋಗ ಚಿಕಿತ್ಸೆಯು ಮತ್ತು ಸಹಸ್ರಾರ್ಧ ವೃಕ್ಷಾದಿಗಳ ವರ್ಣನೆ ಎಂಬ 2 ಪುಸ್ತಕಗಳನ್ನು ತಯಾರಿಸಲಾಗಿದೆ.

1857 ಕನ್ನಡ ವಾರ್ತಿಕ. ಅಚ್ಚಿನ ಮೊಳೆಗಳನ್ನು ಬಳಸಿ ಮೊದಲು ಪ್ರಕಟವಾದ ಪತ್ರಿಕೆ.

1862ರಲ್ಲಿ ಬಾಸೆಲ್ ಮಿಶನ್‌ನಿಂದ ಪ್ರಕಟವಾಗುತ್ತಿದ್ದ ಮತ್ತೊಂದು ಪತ್ರಿಕೆ ವಿಚಿತ್ರ ವರ್ತಮಾನ ಸಂಗ್ರಹ. ಯಾಕೆ ಈ ವಿಚಿತ್ರ ಹೆಸರು ಎಂದು ನೆನಸಬಹುದು. ಇದು ಸುಂದರ ಚಿತ್ರಗಳನ್ನು ಒಳಗೊಂಡು ಪ್ರಕಟವಾಗುತ್ತಿತ್ತು. ಚಿತ್ರಗಳನ್ನು ಹೊತ್ತು ಬರುತ್ತಿದ್ದ ಕನ್ನಡದ ಪ್ರಪ್ರಥಮ ಪತ್ರಿಕೆ ಇದೇ ಎಂದು ಡಾ. ಹಾವನೂರರು ಸಂಪಾದಿಸಿದ ಕರ್ನಾಟಕ ಪತ್ರಿಕಾ ಸೂಚಿಯಲ್ಲಿ ಬರೆಯುತ್ತಾರೆ.

ನ್ಯಾಯ ಸಂಗ್ರಹ 1868- ಕೋರ್ಟು ವ್ಯವಹಾರಗಳನ್ನು ಪ್ರಕಟಿಸುತ್ತಿದ್ದ ಪತ್ರಿಕೆ. ಈ ಪತ್ರಿಕೆಯ ಮುದ್ರಕರು ಮತ್ತು ಪ್ರಕಾಶಕರು ಬಾಸೆಲ್ ಮಿಶನ್ ಆದರೂ ಇದನ್ನು

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.

81 [ 82 ] ತಯಾರುಮಾಡುತ್ತಿದ್ದವರು ಕೋರ್ಟ್‌ನಲ್ಲಿ ವಕೀಲಿ ವೃತ್ತಿ ಮಾಡುತ್ತಿದ್ದವರು. 1868 ರಲ್ಲಿ ಕ್ರೈಸ್ತ ಸಭಾ ಪತ್ರವೆಂಬ ಪತ್ರಿಕೆ ಪ್ರಕಟವಾಗುತ್ತಿತ್ತು.

ಕ್ರಿ.ಶ. 1843ರಿಂದು ಸುಮಾರು 40 ವರ್ಷಗಳವರೆಗೆ ಹೊರಟ ಕನ್ನಡ ಪತ್ರಿಕೆಗಳು ಕೇವಲ 25, ಅವುಗಳ ಪ್ರಸಾರವೂ ಕೂಡಾ ನೂರರಿಂದ ಐನೂರು ಮಾತ್ರ. ಸಂಪಾದಕ, ಅಥವಾ ಸಂಪಾದಕೀಯ ಬರೆಯುವ ಕ್ರಮವಿರುತ್ತಿರಲಿಲ್ಲ. ಅಗ್ಗದ ಜನಪ್ರಿಯತೆಯನ್ನು ಹೊಂದುವ ಉದ್ದೇಶ ಅವರಿಗಿರಲಿಲ್ಲ. ಬದಲಿಗೆ ಅವರದು ಲೋಕಶಿಕ್ಷಣದ ಗುರಿ, ಲೌಕಿಕ ವಿಷಯಗಳ ಮತ್ತು ಪ್ರಪಂಚದ ಅಗುಹೋಗುಗಳ ಪರಿಚಯ ಮಾಡಿಕೊಟ್ಟು ಅವರ ತಿಳುವಳಿಕೆಯನ್ನು ಹೆಚ್ಚಿಸಬೇಕು ಎಂಬುದೇ ಅವರ ಉದ್ದೇಶವಾಗಿತ್ತು. ಕತೆಗಳು ಪ್ರಕಟವಾಗುತ್ತಿದ್ದರೂ ಅವುಗಳ ಉದ್ದೇಶ ನೀತಿ ಬೋಧೆಯೇ ಅಗಿತ್ತು.

1886ರಲ್ಲಿ ಉಡುಪಿಯಿಂದ ಮಾಸ ಪತ್ರಿಕೆ ಸುದರ್ಶನ. 15 ವರ್ಷಗಳ ಕಾಲ ಮುನ್ನಡೆದಿದೆ. 1895 ರ ಒಂದು ಪತ್ರಿಕೆಯಲ್ಲಿ ಕ್ರೈಸ್ತ ಧರ್ಮ ಪ್ರಚಾರವು ಹಿಂದೂ ದೇಶದಲ್ಲಿ ಪ್ರಬಲವಾದಾಗ ಈ ಪ್ರಚಾರಗಳಿಗೆ ಉತ್ತರವೆನ್ನುವಂತೆ "ಪುನರುತ್ಥಾನವಾಗುವ ಹಿಂಧೂ ಧರ್ಮವೂ, ಮಿಶನರಿಗಳ ಸಾಹಸವೂ ಎಂಬ ಲೇಖನವೊಂದು ಪ್ರಕಟವಾಗಿತ್ತು.

1905 ಕೃಷ್ಣ ಸೂಕ್ತಿ ಮಾಸ ಪತ್ರಿಕೆ ಉಡುಪಿಯಿಂದ, ಪ್ರಕಟವಾಗುತ್ತಿತ್ತು. ಇದು ಬೇರೆ ಬೇರೆ ವಿಷಯಗಳ ಲೇಖನಗಳನ್ನು ಪ್ರಕಟಿಸುತ್ತಿದ್ದರೂ ಇದು ಧಾರ್ಮಿಕ ಪತ್ರಿಕೆಯಾಗಿತ್ತು.

ಕನ್ನಡದಲ್ಲಿ ಮೊತ್ತ ಮೊದಲ ದಿನ ಪತ್ರಿಕೆ ಸೂರ್ಯೋದಯ ಪ್ರಕಾಶಿಕಾ ಆರಂಭವಾದದ್ದು 1888ರಲ್ಲಿ. ಅದು ಮಂಗಳೂರಿನಿಂದ ಪ್ರಕಟವಾಗುತ್ತಿತ್ತು. ಸಂಪಾದಕರು ಬಿ. ನರಸಿಂಹ ರಾವ್, ಸ್ವಲ್ಪ ಕಾಲದ ಮೇಲೆ ಇದು ವಾರ ಪತ್ರಿಕೆಯಾಯಿತು. ಆ ಮೇಲೆ ಬೆಂಗಳೂರಿಗೆ ವರ್ಗವಾಯಿತು.

ಸತ್ಯದೀಪಿಕೆ 1896ರಿಂದ ಪ್ರಕಟವಾಗುತ್ತಿತ್ತು. ಇದು ಕ್ರೈಸ್ತ ಸಭಾ ವಾರ್ತೆಗಳನ್ನು ಪ್ರಕಟಿಸುತ್ತಿದ್ದ ಪತ್ರಿಕೆಯಾಗಿದ್ದರೂ ದೇಶಿಯ ಬರಹಗಾರರ ಬರವಣಿಗೆಗಳು ಈ ಪತ್ರಿಕೆಯಲ್ಲಿ ಈ ಪತ್ರಿಕೆಯಲ್ಲಿ ಬರುತ್ತಿತ್ತು. 1905ರ ಸುಮಾರಿಗೆ ಪಂಜೆ ಮಂಗೇಶರಾಯರು ಹರಟೆಮಲ್ಲ ಶೀರ್ಶಿಕೆಯಡಿ ಜಿಲ್ಲೆಯ ಹಲವಾರು ವಿಷಯಗಳ ಲೇಖನಗಳನ್ನು ಬರೆಯುತ್ತಿದ್ದರು.

ಇಲ್ಲಿನ ಪತ್ರಿಕೋದ್ಯಮಿಗಳು ತಮ್ಮ ಜಿಲ್ಲೆಯನ್ನು ಬಿಟ್ಟು ಬೇರೆ ಕಡೆ ಹೋಗಿಯೂ ಹೆಸರು ಮಾಡಿರುವರು. ಬೆನಗಲ್ ಶಿವರಾಯ, ಆರ್. ಕೆ. ಪ್ರಭು, ಡಿ.

82

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು…

[ 83 ]

ಆ‌. ಮಂಕೀಕರ್, ಯು.ಜಿ.ರಾವ್, ಬಿ.ಎಸ್. ತುಂಗ, ಪಾ.ವೆಂ.ಆಚಾರ್ಯ, ನಿರಂಜನ, ಎಂ.ವಿ. ಕಾಮತ್, ವ್ಯಾಸರಾಯ ಬಲ್ಲಾಳ, ಕುಲವರ್ಮ, ಕೆ.ವಿ. ಭಟ್ಟ, ಡಿ.ಕೆ. ಮೆಂಡನ್ ಮುಂತಾದವರು.

ನವಯುಗ, ಕಂಠೀರವ, ಪ್ರಭಾತ, ರಾಷ್ಟ್ರಬಂಧು, ಅಂತರಂಗ, ಸುದರ್ಶನ, ಯುಗಪುರುಷ, ಭಾರತೀ, ಮುಂತಾದ ಪತ್ರಿಕೆಗಳು ದ.ಕ. ಜಿಲ್ಲೆಯವರು ಹೆಮ್ಮೆಯಿಂದ ಹೇಳಬೇಕಾದ ಪತ್ರಿಕೆಗಳು. 'ಮಂಜೇಶ್ವರದಿಂದ 1885ರಲ್ಲಿ 'ಕನ್ನಡ ಕೇಸರಿ, ಉಡುಪಿಯಿಂದ 1887 ರಲ್ಲಿ 'ಸುದರ್ಶನ, 1905ರಲ್ಲಿ 'ಕೃಷ್ಣಸೂಕ್ತಿ', ಮಂಗಳೂರಿಂದ ಉದಯಚಂದ್ರ 1907, ಜೈನಬಂಧು 191, ಬೋಧಿನಿ 1915, ಸಂಗ್ರಾಮ 1915, ಕನ್ನಡ ಕೋಗಿಲೆ 1916, ಭಕ್ತಿ ಸಂದೇಶ 1918, ಕಂಠೀರವ 1919, ಸಹಕಾರಿ, 1919, ತಿಲಕಸಂದೇಶ, ಸ್ವದೇಶಾಭಿಮಾನಿ, ಕರ್ನಾಟಕ ಕೇಸರಿ, ನವಭಾರತ, ಸತ್ಯಾಗ್ರಹಿ, ಸ್ವತಂತ್ರ ಭಾರತ ಇಂತಹ ಪತ್ರಿಕೆಗಳನ್ನು ಅವಲೋಕಿಸುವುದಾದರೆ ಇಲ್ಲಿನ ಜನರ ಸ್ವಾತಂತ್ರ್ಯದ ಹಂಬಲ ಅನೇಕ ಪತ್ರಿಕೆಗಳ ಹೆಸರಿನಿಂದಲೇ ತಿಳಿದುಬರುತ್ತದೆ.

ತುಳು ಪತ್ರಿಕೆಗಳು- 1936ರಲ್ಲಿ ಉಡುಪಿಯ ನವಯುಗ ಪತ್ರಿಕೆಯ ತುಳು ಸಂಚಿಕೆಯನ್ನು ಪುರವಣಿಯಾಗಿ ತರುತ್ತಿದ್ದರು. 1935ರ ಪ್ರಭಾತ ಪತ್ರಿಕೆಯಲ್ಲಿ ತುಳುಗಾದೆ ಪ್ರಕಟವಾಗುತ್ತಿತ್ತು. ಬಂಟರವಾಣಿ, ಸಂಗಾತಿ, ಪೂಜಾರಿ ಬಂಧು, ಮೀನಾವಳಿ, ಗ್ರಹಪತ್ರಿಕೆಗಳಲ್ಲಿ ತುಳು ವಿಭಾಗಗಳು ಇದ್ದರೂ ಸ್ವತಂತ್ರ ಪತ್ರಿಕೆ ಆದದ್ದು 1970ರಲ್ಲಿ ತುಳು ಸಿರಿಯಿಂದ. ಅನಂತರ ತುಳುಕೂಟ, ತುಳುವಾಣಿ, ತುಳುವೆರೆ ಬಂದು, ತುಳುನಾಡ್, ತುಳುರಾಜ್ಯ, ತುಳುವೆರ್, ತಿಂಗೊಲ್ಗೊಂಜಿ ತೂಟೆ, 1980ರಿಂದ ಗೋವಿಂದ ಪೈ ಸಂಶೋಧನ ಕೇಂದ್ರದಿಂದ ತುಳುವ ತ್ರೈಮಾಸಿಕ ಬರುತ್ತಾ ಇದೆ. ತುಳು ಅಕಾಡೆಮಿ ಪ್ರಕಟಿಸುತ್ತಿರುವ ಮದಿಪು ಪ್ರಕಟಗೊಳ್ಳುತ್ತಿದೆ.

ಕೊಂಕಣಿಯಲ್ಲಿ ಪ್ರಥಮ- 1912-ದಿರವೆನ್, ಹಾಗೂ ರಾಕ್ಲ-1938ರಿಂದ ಇದೆ. ಪತ್ರಿಕೆಗಳು ಹೆಚ್ಚಾಗಿ ಈ ಜಿಲ್ಲೆಯಲ್ಲಿ ಹುಟ್ಟಿವೆ. ಮುಸ್ಲಿಂ ಪತ್ರಿಕೆಗಳನ್ನೂ ನಾವು ಇಲ್ಲಿ ನೋಡುತ್ತೇವೆ. ಹೈದರ್ ಅವರ ಜ್ಯೋತಿ, ಮಹಜದರ ಹಮ್‌ದರ್ದ್, ಬಿ.ಎಂ. ಇದಿನಬ್ಬರ ಉದಯಚಂದ್ರ, ಜಿಲ್ಲೆಯ ಕೆಲವು ಪ್ರಸಿದ್ಧ ಪತ್ರಕರ್ತರು ಈಗ ಕಾಸರಗೋಡು ತಾಲೂಕಿನವರು. ಕಾರಹಳ್ಳ ರಾಮಕೃಷ್ಣ ಶೆಟ್ಟರು, ಕಳ್ಳಿಗೆ ಮಹಾಬಲ ಭಂಡಾರಿ, ಕಯ್ಯಾರ ಕಿಞ್ಞಣ್ಣ ರೈ, ಉತ್ಸವ ಇಲ್ಲವೇ ಸಂಸ್ಕರಣ ಸಂಚಿಕೆಗಳನ್ನು ಹೊರತರುವುದು ಈ ಜಿಲ್ಲೆಯ ವೈಶಿಷ್ಟ್ಯ. ಉದ್ಯಮ ವಾಣಿಜ್ಯಗಳಿಗೆ ಸಂಬಂಧಿಸಿದ ವಿಶಿಷ್ಟ ಪತ್ರಿಕೆಗಳು, ಮಧು ಪ್ರಪಂಚ, ಮೀನುಗಾರ, ಜೀವನಕೃಷ್ಣ, ವರ್ತಕ ಧುರೀಣ, ಅಂಚೆಗೆಳೆಯ, ಅಡಿಕೆ ಪತ್ರಿಕೆ, ದ.ಕ.ಜಿಲ್ಲೆಯಲ್ಲಿ ನವಭಾರತ, ಮುಂಗಾರು,

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

83 [ 84 ] ಜನವಾಹಿನಿ ಮುಂತಾದ ಹಲವಾರು ಪತ್ರಿಕೆಗಳು ಹುಟ್ಟಿ ಪತ್ರಿಕಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವುದನ್ನು ನಾವು ಎಂದೂ ಮರೆಯುವಂತಿಲ್ಲ.

ವ್ಯಾವಸಾಯಿಕ ಪಂಚಾಂಗ :- ಬಾಸೆಲ್ ಮಿಶನ್ ಪ್ರೆಸ್‌ನಲ್ಲಿ ವ್ಯಾವಸಾಯಿಕ ಪಂಚಾಂಗ ಎಂದು ಕರೆಯಲ್ಪಡುವ ಒಂದು ಪಂಚಾಂಗ ಮುದ್ರಣಗೊಳ್ಳುತ್ತಿತ್ತು. ಇದನ್ನು ದಕ್ಷಿಣ ಕನ್ನಡ ಜಿಲ್ಲೆಯ ವ್ಯವಸಾಯ ಸಂಘದವರು ಪ್ರಕಟಿಸುತ್ತಿದ್ದರು. 1910ರಲ್ಲಿ ಪ್ರಕಟವಾದ ಪಂಚಾಂಗದಲ್ಲಿ ವರ್ಷದ 12 ತಿಂಗಳುಗಳ ಪಂಚಾಂಗವಲ್ಲದೆ ಕೃಷಿಗೆ ಸಂಬಂಧಪಟ್ಟ ಹಲವಾರು ಮಾಹಿತಿಗಳಿವೆ.

MANGALORE MAGAZINE, (1897) ಸಂತ ಅಲೋಶಿಯಸ್ ಕಾಲೇಜು, ಮಂಗಳೂರು ಇವರು 1897ರಂದು ಪ್ರಾರಂಭಿಸಿದ ಈ ತ್ರೈಮಾಸಿಕ ಪತ್ರಿಕೆಯು 1914ರಲ್ಲಿ ವಾರ್ಷಿಕ ಸಂಚಿಕೆಯಾಗಿ 1933ರಲ್ಲಿ ತನ್ನ ಪ್ರಕಟಣೆಯನ್ನು ನಿಲ್ಲಿಸಿ 1934ರ ನಂದರ ಕಾಲೇಜು ವಾರ್ಷಿಕ ಸಂಚಿಕೆ ಆರಂಭವಾಗಿ ಈಗಲೂ ಬೇರೆ ಬೇರೆ ಹೆಸರಿನಿಂದ ಈ ಸಂಚಿಕೆ ನಿರಂತರವಾಗಿ ಬರುತ್ತಿದೆ.

ಈ ಪತ್ರಿಕೆಯು ಕಾಲೇಜಿಗೆ ಹಾಗೂ ಮಂಗಳೂರಿಗೆ ಸಂಬಂಧಿಸಿದ ಹಾಗೂ ಇತರ ವಿಷಯಗಳು ಸಿಗುವ ಅಪೂರ್ವ ಮಾಹಿತಿಗಳನ್ನು ಒದಗಿಸುತ್ತದೆ. ಇದರಲ್ಲಿನ ಬಹಳಷ್ಟು ಲೇಖನಗಳು ಶೈಕ್ಷಣಿಕ, ಧಾರ್ಮಿಕ ಹಾಗೂ ಐತಿಹಾಸಿಕ ನೆಲೆಯಲ್ಲಿವೆ. ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿದಂತೆ, ಕಾಲೇಜು ಮತ್ತು ಸೆಕೆಂಡರಿ ಶಿಕ್ಷಣ ವ್ಯವಸ್ಥೆ ಹಾಗೂ ಶಾಲಾ ಕಾಲೇಕು ಪರೀಕ್ಷೆಗಳ ಕುರಿತಾದ ಮಾಹಿತಿಗಳಿದ್ದರೆ, ಧಾರ್ಮಿಕವಾಗಿ ಜೆಸ್ಕೂಟರ ಜೀವನ, ಸಾಧನೆ, ಸಾಬ್ಲೆಟ್‌ನ ಹುತಾತ್ಮರ ಹಾಗೂ ಪೂಜ್ಯ ಜೋಸೆಫ್ ವಾಸ್‌ ಬಗ್ಗೆ ಲೇಖನಗಳಿವೆ. ಐತಿಹಾಸವಾಗಿ ಫಾ. ಮಾಫಾಯಿಯವರ ದಕ್ಷಿಣ ಕನ್ನಡದ ಐತಿಹಾಸಿಕ ಸ್ಥಳಗಳ ಬಗ್ಗೆ ಮಾಹಿತಿ, ಜೆ. ಎ. ಸಲ್ದಾನರವರಿಂದ ಕೆನರಾದ ಇತಿಹಾಸ ಹಾಗೂ ಇತರ ಲೇಖನಗಳಿವೆ.

ಗುರುಪುರ ನದಿಗಿರುವ ಇನ್ನೊಂದು ಅಳಿವೆಗೆ ತಡೆಯೊಡ್ಡುವ ಯೋಜನೆಯನ್ನು ಸರಕಾರ ರೂ 10,000 ಖರ್ಚು ಮಾಡಿ ಕೈಗೆತ್ತಿಕೊಂಡಿತು. ಹಾಗೂ ಇದರಿಂದಾಗಿ ನದಿಗೆ ಒಂದು ಪ್ರಬಲ ಅಳಿವೆ ಉಳಿದಂತಾಗುತ್ತದೆ. ಕ್ರಿ.ಶ 1869ರಲ್ಲಿ ಗುರುಪುರ ನದಿಗೆ ನಿರ್ಮಿಸಲಾದ ಅಳಿವೆ ಟಿಪ್ಪು ಸುಲ್ತಾನ್ ಕಾಲದಲ್ಲಿ ರಚಿಸಲಾಗಿದ್ದ ಸುಲ್ತಾನ್ ಭತ್ತೇರಿಯ ಸ್ವಲ್ಪ ದಕ್ಷಿಣಕ್ಕೆ ಇತ್ತು. ಇದೊಂದು ಪ್ರಮುಖ ಆಮದು ರಫ್ತು ಕೇಂದ್ರವೆಂದು ಚಿತ್ರಿಸಲಾಗಿದೆ. ಈ ಬಂದರು ದಕ್ಷಿಣ ಭಾರತ ಮತ್ತು ಇಂಗ್ಲೆಂಡಿನ ಮಧ್ಯೆ ರಾಜಮಾರ್ಗಕ್ಕೆ ಕೊಂಡಿ ಎಂದು ಬಣ್ಣಿಸಲಾಗಿದೆ.

ಇದು ಒಂದು ಮಾಹಿತಿಯ ಮಾದರಿಯಾದರೆ, ಕಲ್ಯಾಣಪುರ, ಕಾರ್ಕಳ,

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

[ 85 ]

ಉಡುಪಿ, ಪರಂಗಿಪೇಟೆ, ಉಳ್ಳಾಲ, ಮಂಜೇಶ್ವರ, ಬಾರಕೂರು, ಕೃಷಿ, ಶಾಸನಗಳು, ಮಳೆ, ರೈಲ್ವೆ ಇಲಾಖೆ, ವ್ಯಾಪಾರ, ಬಂದರು, ಸ್ಥಳನಾಮಗಳ ವಿಶೇಷತೆಗಳು, ಪರಶುರಾಮ ಸೃಷ್ಟಿ, ತುಳುನಾಡನ್ನು ಆಳಿದ ಅರಸರುಗಳೂ, ವಿದೇಶಿಯರು, ಹಿಂದು, ಕ್ರೈಸ್ತ, ಮುಸಲ್ಮಾನ, ಧರ್ಮಗಳ ವಿಚಾರಗಳು ಪ್ರಾಚೀನ ಕಾಲದ ನಾವಿಕರ ಬಗ್ಗೆ ಕಥೆಗಳು, ಟಿಪ್ಪುವಿನ ಬಗ್ಗೆ ಇರುವ ಕಟ್ಟು ಕಥೆಗಳು, ಇಂತಹ ನೂರಾರು ಮಾಹಿತಿಗಳಲ್ಲದೆ ತುಳು ಜಿಲ್ಲೆಯ ಚರಿತ್ರೆ ಸಿಗುವ ಹಲವಾರು ವಿದೇಶಿ ಬರವಣಿಗೆಗಳ ವಿಚಾರಗಳನ್ನೂ ಕಲೆಹಾಕಿದ ಪತ್ರಿಕೆಯಿದಾಗಿದೆ.

ಮ್ಯಾಂಗಲೋರ್ ಮ್ಯಾಗಜಿನ್‌ನಲ್ಲಿರುವ ಲೇಖನಗಳು ಅಧ್ಯಯನಾತ್ಮಕವಾಗಿ ಬರೆದ ಲೇಖನಗಳಿಗಿಂತ ಅವು ಓದುವಿಕೆ, ಅನುಭವ ಮತ್ತು ಅವಲೋಕನಗಳಿಂದ ಕೂಡಿವೆ. ಆಧುನಿಕ ಕಾಲದ ವೈಜ್ಞಾನಿಕ ಮಾದರಿಯಲ್ಲಿ ಈ ಲೇಖನಗಳು ಸಿದ್ಧವಾಗಿರದಿದ್ದರೂ ಅವು ತಮ್ಮ ಉತ್ಕೃಷ್ಟತೆಗೆ ಹೆಸರುವಾಸಿಯಾಗಿವೆ.

BASEL MISSION REPORT 1841-1914:ಇಂಗ್ಲೀಷ್ನಲ್ಲಿ ಬರೆದಿರುವ ಈ 73 ವರ್ಷಗಳ ವರದಿಗಳಲ್ಲಿ ಬಾಸೆಲ್ ಮಿಶನ್ ಸಂಸ್ಥೆಯು 1841ರಿಂದ 1914 ತನಕ ತುಳುನಾಡಿನಲ್ಲಿ ಮಾಡಿದ ಸಮಗ್ರ ಪರಿಚಯ ಸಿಗುತ್ತದೆ. ತುಳು ಜಿಲ್ಲೆಯಲ್ಲಿ ಸ್ಥಾಪನೆಗೊಂಡ ಶಾಲೆಗಳು, ತುಳು ಜಿಲ್ಲೆಯಲ್ಲಿ 1841ರಿಂದ ಮುದ್ರಣಗೊಂಡ ಪುಸ್ತಕಗಳ ಪಟ್ಟಿ, ತುಳು ಜಿಲ್ಲೆಯಲ್ಲಿ ಸ್ಥಾಪನೆಗೊಂಡ ಕೈಗಾರಿಕೆಗೆ, ಹಂಚಿನ ಕಾರ್ಖಾನೆ, ನೇಯಿಗೆ ಕಾರ್ಖಾನೆ, ಮಹಿಳೆಯರಿಗೆ ಶಿಕ್ಷಣ ದೊರಕಿದ್ದು, ಉದ್ಯೋಗ ಸೇರಲು ಪ್ರಾರಂಭ ಮಾಡಿದ್ದು, ಜಿಲ್ಲೆಯ ಶಿಕ್ಷಣ ವ್ಯವಸ್ಥೆ, ಭೂತಾರಾಧನೆ, ಜಿಲ್ಲೆಯ ಜನರು ಕ್ರೈಸ್ತ ಮತ ಸೇರಲು ಕಾರಣಗಳು ಹೀಗೆ ಹಲವಾರು ವಿಚಾರಗಳು ಸಿಗುತ್ತವೆ. ಭಾರತದ ಪ್ರದೇಶಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಕಾರವಾರ, ಕೊಡಗು, ಹುಬ್ಬಳ್ಳಿ ಧಾರವಾಡ, ನೀಲಗಿರಿ, ಕೇರಳ ಮುಂತಾದ ಪ್ರದೇಶಗಳಲ್ಲಿ ಬಾಸೆಲ್ ಮಿಶನ್ ಕಾರ್ಯಕ್ಷೇತ್ರದ ಸಮಗ್ರ ವಿವರವಿರುವ ವರದಿ ಇದಾಗಿದೆ.

ಪರಾಮರ್ಶನ ಸೂಚಿ

ಅಶೋಕ ರಾಖೇಶ್‌ ಡಿ'ಸೋಜ, ಮ್ಯಾಂಗಲೋರ್ ಮ್ಯಾಗಜೀನ್‌ನಲ್ಲಿ ಬಿಂಬಿತ ದಕ್ಷಿಣಕನ್ನಡ, ಎಂ.ಫಿಲ್, ಸಂಪ್ರಬಂಧ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 2008, ಕನ್ನಡ ಪತ್ರಿಕಾ ಸೂಚಿ, ಸಂ. ಶ್ರೀನಿವಾಸ ಹಾವನೂರ, ಸಗರಿ, ಬೆಳ್ಳಿ ಹಬ್ಬದ ಸಂಚಿಕೆ. 1974, MGM Udupi ಪನಿಯಾರ, ಸಂ. ಕೆ. ಚಿನ್ನಪ್ಪ ಗೌಡ, ತುಳುಕೂಟ, ಕುಡ್ಲ, 1989

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

85 [ 86 ] ಕನ್ನಡ ಪತ್ರಿಕೆಗಳು ಮತ್ತು ಸಾಹಿತ್ಯ, ಕೆ. ವಿಜಯಶ್ರೀ.ಕನ್ನಡ ವಿಶ್ವವಿದ್ಯಾಲಯ, ಹಂಪಿ 2000 ಅವಲೋಕನ, ಸಂ. ಎಚ್ಚೆಸ್ಕೆ, 1985 ತುಳುಕೂಟ, ಪತ್ರಿಕೆ ಕುಡ್ಲ ಪಂಜೆಯವರ ನೆನಪಿಗಾಗಿ, ಎಂ ಗೋವಿಂದಪೈ ಮತ್ತಿತರರು (ಸಂ) ಪಂಜೆ ಸ್ಮಾರಕ ಗ್ರಂಥ ಸಮಿತಿ, ಪುತ್ತೂರು, 1952 ತೆಂಕನಾಡು, ಸ್ಮರಣ ಸಂಚಿಕೆ, ಸೇಡಿಯಾಪು ಕೃಷ್ಣ ಭಟ್ಟ ಮತ್ತಿತರರು (ಸಂ), 31ನೇ ಕನ್ನಡ ಸಾಹಿತ್ಯ ಸಮ್ಮೇಳನ, ಕಾಸರಗೋಡು, 1947 ಪಂಚಗಜ್ಜಾಯ, ಸ್ಮರಣ ಸಂಚಿಕೆ, 13ನೇ ಕರ್ನಾಟಕ ಸಾಹಿತ್ಯ ಸಮ್ಮೇಳನ, ಮಂಗಳೂರು, 1927

86

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

[ 87 ]ತುಳುನಾಡಿನಲ್ಲಿ ಮೊದಲ ಪ್ರಾಥಮಿಕ ಶಾಲೆ (1836)

ಮಂಗಳೂರಿಗೆ 1834ರಲ್ಲಿ ಆಗಮಿಸಿದ ಬಾಸೆಲ್ ಮಿಶನರಿಗಳ ಮೂಲ ಉದ್ದೇಶ ಕ್ರೈಸ್ತ ಧರ್ಮದ ಮತಪ್ರಚಾರ ಮಾಡುವುದು. ಈ ಉದ್ದೇಶದಿಂದ ಇಲ್ಲಿಗಾಗಮಿಸಿದರೂ ಮೂಲ ಉದ್ದೇಶವನ್ನು ಸಾಧಿಸಲು ಸಾಧ್ಯವಾಗದೇ ಹೋದರೂ ಶಿಕ್ಷಣ, ಕೈಗಾರಿಕೆ, ಮುದ್ರಣ, ವೈದ್ಯಕೀಯ, ಕೃಷಿ, ಸಾಹಿತ್ಯ, ಸಂಸ್ಕೃತಿ ಮುಂತಾದ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆ ಮಾಡಿರುವುದು ತುಳು ನಾಡಿನ ಚರಿತ್ರೆಯಲ್ಲಿ ಅಚ್ಚಳಿಯದೆ ಉಳಿದಿದೆ. ಜಿಲ್ಲೆಯ ಜನರಿಗೆ ಶಿಕ್ಷಣ ನೀಡುವುದು ಕ್ರೈಸ್ತ ಧರ್ಮದ ಮೂಲತತ್ವ ಎಂಬುದು ಜನರಿಗೆ ತಾವು ಮಾಡುವ ಸೇವೆಯ ಒಂದು ಭಾಗವೆಂಬಂತೆ ಕರಾವಳಿ ಕರ್ನಾಟಕ ಮತ್ತು ಭಾರತದಲ್ಲಿ ಅದರ ಕಾರ್ಯಕ್ಷೇತ್ರವಿದ್ದಲ್ಲೆಲ್ಲಾ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಶಿಕ್ಷಣ, ಸ್ಥಳೀಕ ಭಾಷೆ ಮತ್ತು ಸಾಹಿತ್ಯ ಕ್ಷೇತ್ರದ ಬೆಳವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಬಾಸೆಲ್ ಮಿಶನ್ ಸಂಸ್ಥೆ ಮಾಡಿದ್ದ ಒಂದು ನಿಯಮದ ಪ್ರಕಾರ ಸ್ಥಳೀಯ ಕ್ರೈಸ್ತ ಮಕ್ಕಳ ಎಲ್ಲಾ ಹೆತ್ತವರು ತಮ್ಮ ಮಕ್ಕಳನ್ನು 14 ವರ್ಷ ವಯಸ್ಸಿನ ತನಕ ಶಾಲೆಗಳಿಗೆ ಕಳುಹಿಸುವುದು ಕಡ್ಡಾಯವಾಗಿತ್ತು. ಪ್ರಸ್ತುತ ಸರಕಾರವು ಜಾರಿಗೆ ತಂದಿರುವ ಕಡ್ಡಾಯ ಪ್ರಾಥಮಿಕ ಶಿಕ್ಷಣ ನೀತಿಯನ್ನು ಬಾಸೆಲ್ ಮಿಷನ್ 170 ವರ್ಷಗಳ ಹಿಂದೆಯೇ ತನ್ನ ಕಾರವ್ಯಾಪ್ತಿಯಲ್ಲಿ ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಜಾರಿಗೆ ತಂದಿರುವುದು ಅದರ ಹೆಗ್ಗಳಿಕೆಯಾಗಿದೆ.

1834ರಲ್ಲಿ ಭಾರತಕ್ಕೆ ಬಾಸೆಲ್ ಮಿಶನರಿಗಳು ಮಂಗಳೂರಿನಲ್ಲಿ 1836ರಲ್ಲಿ ಒಂದು ಪ್ರಾಥಮಿಕ ಶಾಲೆಯನ್ನು ತೆರೆದರು. ಈ ಶಾಲೆಯು ಇಡೀ ಕೆನರಾ ಜಿಲ್ಲೆಯಲ್ಲಿ ಆಧುನಿಕ ಶಿಕ್ಷಣ ವ್ಯವಸ್ಥೆಯ ನಿಯಮದಡಿಯಲ್ಲಿ ಆರಂಭಗೊಂಡ ಮೊದಲ ಕನ್ನಡ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರ ನಾಯಕತ್ವ ವಹಿಸಿದವರು ಭಾರತಕ್ಕೆ ಮೊದಲು ಬಂದ ಮೂವರು ಮಿಶನರಿಗಳಲ್ಲಿ ಒಬ್ಬರಾದ ರೆವೆ. ಸಾಮುವೆಲ್ ಹೆಬಿಕ್, ಇದು ಈಗಿನ ಮಿಶನ್ ಸ್ಟ್ರೀಟ್‌ನಲ್ಲಿ ಕಾರ್ಯವೆಸಗುತ್ತಿತ್ತು. ಶಾಲೆ ಮುಂದುವರೆಯುತ್ತಿದ್ದಂತೆ ಆಂಗ್ಲ ಮಾಧ್ಯಮ ಅಗತ್ಯತೆ, ಬೇಡಿಕೆ ಹೆಚ್ಚಿದ್ದರಿಂದ ಆಂಗ್ಲ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

87 [ 88 ]

ಮಾಧ್ಯಮದ ವಿಭಾಗವನ್ನು ಪ್ರಾರಂಭಿಸಬೇಕಾಯಿತು.

1838ರಲ್ಲಿ ಮೊದಲ ಕನ್ನಡ ಶಾಲೆಯ ಆವರಣದಲ್ಲಿಯೇ ಆಂಗ್ಲ ಮಾಧ್ಯಮ ವಿಭಾಗವನ್ನು ತೆರೆಯಲಾಯಿತು. ಕನ್ನಡದ ಮೊದಲ ಪತ್ರಿಕೆ ಸಂಪಾದಕರಾಗಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಸರುವಾಸಿಯಾದ ಹೆರ್ಮನ್ ಮೋಗ್ಲಿಂಗ್ ಇದರ ನಾಯಕತ್ವ ವಹಿಸಿದ್ದರು. ಪ್ರಾರಂಭವಾದ ಆಂಗ್ಲ ಮಾಧ್ಯಮದ ವಿಭಾಗ ಮುಂದುವರಿ ಯುತ್ತಿದ್ದಂತೆ ಶಾಲೆಯನ್ನು ಈಗಿನ ಕಾರ್‌ಸ್ಪೀಟ್‌ನಲ್ಲಿರುವ ಬಿ.ಇ.ಎಮ್ ಹೈಸ್ಕೂಲ್ ಇರುವಲ್ಲಿಗೆ ಸ್ಥಳಾಂತರಿಸಿ ಅದೇ ಸ್ಥಳದಲ್ಲಿ ಮಂಗಳೂರಿನ ಮೊದಲ ಇಂಗ್ಲಿಷ್ ಶಾಲೆ ಎಂಬ ಹೆಸರಿನಿಂದ ಮುಂದುವರಿಯುತ್ತಿದೆ.

ಚರಿತ್ರೆ ಪುಟಗಳಲ್ಲಿ ಸೇರಿರುವ ಜರ್ಮನ್ ಮಿಶನ್ ಶಾಲೆ, ಅಂಗ್ಲೋ ವರ್ಣಾಕುಲ‌ರ್ ಶಾಲೆ ಇಂಗ್ಲಿಷ್ ಶಾಲೆ, ಮಿಶನ್ ಶಾಲೆ, ಬಿ.ಇ.ಎಂ. ಶಾಲೆಯೆಂದು ಕರೆಯಲ್ಪಡುತ್ತಿದ್ದ ಶಾಲೆಯ ಚರಿತ್ರೆಯ ಲೇಖನಗಳನ್ನು ಅವಲೋಕಿಸುವ ಮೂಲಕ ಶಾಲೆ ಸ್ಥಾಪನೆ, ಸೇವೆ, ಕಾರ್ಯಾಚರಣೆಗಳನ್ನು ಈ ಮೂಲಕ ಬೆಳಕಿಗೆ ತರಲು ಇಲ್ಲಿ ಪ್ರಯತ್ನಿಸಲಾಗಿದೆ.

1938ರಲ್ಲಿ ಆರಂಭವಾದ ಶಾಲೆಯ ಬಗ್ಗೆ 1962ರಲ್ಲಿ ಮಂಗಳೂರಿನ ಬಲ್ಮಠ ಶಾಂತಿ ದೇವಾಲಯವು ಶತಮಾನದ ವರ್ಷಾಚರಣೆಯ ಸಂದರ್ಭದಲ್ಲಿ ಪ್ರಕಟಿಸಿದ ಸ್ಮರಣ ಸಂಚಿಕೆಯಲ್ಲಿ ಪ್ರಕಟವಾದ ಲೇಖನದ ಸಾರಾಂಶ ಹೀಗಿದೆ. 1836ರಲ್ಲಿ ಭಾರತಕ್ಕೆ ಬಂದ ಹೆರ್ಮನ್ ಮೋಗ್ಲಿಂಗ್ ನೆಲ್ಲಿಕಾಯಿ ರಸ್ತೆಯಲ್ಲಿರುವ ನೀರೇಶ್ವಾಲ್ಯದಲ್ಲಿ ನಡೆಯುತ್ತಿದ್ದ ಶಾಲೆಯ ಮುಖ್ಯಸ್ಥರಾದರು. 1838ರಲ್ಲಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣವನ್ನು ಪ್ರಾರಂಭಿಸಿದ ಇವರು ಸ್ಥಳಾವಕಾಶದ ಕೊರತೆಯಿಂದ ಪ್ರಸ್ತುತ ಇರುವ ಬಿ.ಇ.ಎಮ್. ಹೈಸ್ಕೂಲ್ ವಠಾರಕ್ಕೆ ಸ್ಥಳಾಂತರಗೊಳಿಸಿದರು. ಹೊಸ ನಿವೇಶನ ಖರೀದಿಯ ನಂತರ ಕಟ್ಟಡದ ನಿರ್ಮಾಣವು ಆಯಿತು. ವಿದ್ಯಾರ್ಜನೆಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಯಿತು. ಆಗ ಈ ಶಾಲೆಗೆ ಆಂಗ್ಲೋ ವರ್ನಾಕುಲ‌ರ್ ಸ್ಕೂಲ್ ಎಂಬ ಹೆಸರಿತ್ತು. 1889ರಲ್ಲಿ ಶಾಲೆಯು ಹೈಸ್ಕೂಲು ದರ್ಜೆಯನ್ನು ಹೊಂದಿ 1890ರಲ್ಲಿ ಮೊದಲ ಮೆಟ್ರಿಕ್ಯುಲೇಶನ್ ತಂಡ ಸಿದ್ಧವಾಯಿತು. 1938ರಲ್ಲಿ ಶತಮಾನೋತ್ಸವವನ್ನು ಆಚರಿಸಿದ ಶಾಲೆ 1958ರಲ್ಲಿ ಜಿಲ್ಲಾ ಸಭಾ ಆಡಳಿತದಿಂದ ಹಳೆ ವಿದ್ಯಾರ್ಥಿ ಸಂಘದ ಆಡಳಿತಕ್ಕೊಳಪಟ್ಟಿತು.

1841ರಲ್ಲಿ ಶಾಲೆಯಲ್ಲಿ 80 ವಿದ್ಯಾರ್ಥಿಗಳಿದ್ದು ಇದರಲ್ಲಿ 30ಕ್ಕಿಂತಲೂ ಹೆಚ್ಚಿನ ಮಕ್ಕಳು ವಿದೇಶಿಯರು. ಮಂಗಳೂರಿನಲ್ಲಿ ನೆಲೆಯೂರಿದ್ದ ಸೈನಿಕ ಪಡೆ 46ನೆ ರೆಜಿಮೆಂಟ್ ಮಂಗಳೂರಿನಿಂದ ತೆರವಾದಾಗ 20 ಸೈನಿಕರ ಮಕ್ಕಳು ಶಾಲೆಯನ್ನು

88

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

[ 89 ]

ಬಿಟ್ಟದ್ದರಿಂದ ಶಾಲೆಯ ಹಾಜರಾತಿ ಕಡಮೆಯಾಯಿತು. ಆದರೂ ಜಿಲ್ಲೆಯಲ್ಲಿ ವಾಸಿಸುತಿದ್ದ ವಿದೇಶಿಯರು ಈ ಶಾಲೆಯ ಪ್ರಯೋಜನ ಪಡೆಯುತ್ತಿದ್ದುದರಿಂದ ವಿದೇಶಿ ಅಧಿಕಾರಿಗಳು ಶಾಲೆ ಮುನ್ನಡೆಯಲು ಸಹಾಯ ಮಾಡುತ್ತಿದ್ದರು.

1849ರ ವರದಿ ಪ್ರಕಾರ ಶಾಲೆಯಲ್ಲಿ ಕನ್ನಡ ಮಾಧ್ಯಮ ವಿಭಾಗವೂ ಇತ್ತು. ಆಂಗ್ಲ ಮಾಧ್ಯಮ ಶಾಲೆಯಲ್ಲಿ 157 ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ 33 ವಿದ್ಯಾರ್ಥಿಗಳೂ ಇದ್ದರು. ಇದರಲ್ಲಿ ಪ್ರೊಟೆಸ್ಟಂಟರು 13, ಕೆಥೋಲಿಕರು 16, ಮುಸಲ್ಮಾನರು 18, ಬ್ರಾಹ್ಮಣರು 113, ಮತ್ತು ಇತರರು 30.

1852ರಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿತ. ಶಾಲೆಯಲ್ಲಿ ಪಠ್ಯವಾಗಿ, ಭಾಷೆ, ಚರಿತ್ರೆ, ಭಾಷಾಂತರ, ಗಣಿತ, ವಿಜ್ಞಾನ, ಭೂಗೋಳ ಮುಂತಾದವುಗಳೊಂದಿಗೆ ಬೈಬಲ್ ಪಾಠವೂ ಇತ್ತು. ಕ್ರೈಸ್ತ ಧಾರ್ಮಿಕ ಪಾಠಗಳನ್ನು ಬೋಧಿಸುವುದು, ಕೆಳವರ್ಗದ ವಿದ್ಯಾರ್ಥಿಗಳಿರುವ ಬೆಂಚಿನಲ್ಲಿ ಮೇಲ್ವರ್ಗದವರು ಕುಳಿತುಕೊಳ್ಳುವುದು ಅಸಾಧ್ಯ. ಹೆಣ್ಮಕ್ಕಳು ಈ ಶಾಲೆಗೆ ಬರಲಾರರು ಹೀಗೆ ಬೇರೆ ಬೇರೆ ಕಾರಣಗಳಿಂದ ಶಾಲೆ ಬಿಟ್ಟವರು ಹಲವಾರು ಮಂದಿ. ಈ ಪರಿಸ್ಥಿತಿಯಲ್ಲಿ ಶಾಲೆಯು ಮುಚ್ಚುವ ಪರಿಸ್ಥಿತಿಯೂ ಬಂದೊದಗಿತ್ತು. ಆದರೆ ಕೆಲವೇ ವರ್ಷಗಳಲ್ಲಿ ಶಾಲೆ ತನ್ನ ಘನತೆಯನ್ನು ಹೆಚ್ಚಿಸಿಕೊಂಡಿತು. ಇದಕ್ಕಾಗಿ ಮಿಶನ್ ಹಲವು ವಿಧವಾದ ಕ್ರಮ ಕೈಗೊಂಡರು. ಮಿಶನರಿಗಳು ಮತ್ತು, ದೇಶೀಯರು ಮುಂಬಯಿಗೆ ತೆರಳಿ ಮುಂಬಯಿ ಪ್ರೆಸಿಡೆನ್ಸಿಯ ವಿದ್ಯಾ ಇಲಾಖೆಯಲ್ಲಿ ನಡೆಯುವ ವಿದ್ಯಾಭ್ಯಾಸ ಕ್ರಮವನ್ನು ಅಭ್ಯಸಿಸಿದರು. ಶಾಲೆಯಲ್ಲಿ ಫೀಸು ತೆಗೆದುಕೊಳ್ಳುವ ಕ್ರಮವನ್ನು ಜಾರಿಗೆ ತರಲಾಯಿತು. 8-9 ವರ್ಷ ಪ್ರಾಯದಲ್ಲಿಯೇ ಹೆಣ್ಮಕ್ಕಳ ಮದುವೆ ನಡೆಯುತ್ತಿದ್ದುದರಿಂದ ಇಂತಹ ಮಕ್ಕಳು ಶಾಲೆಗೆ ಬರುವ ವ್ಯವಸ್ಥೆಗಾಗಿ 1856ರಲ್ಲಿ ಹಂಪನಕಟ್ಟೆಯಲ್ಲಿ ಬ್ರಾಹ್ಮಣ ಹೆಣ್ಮಕ್ಕಳಿಗಾಗಿ ಶಾಲೆಯೊಂದನ್ನು ತೆರೆಯಲಾಯಿತು. ಇಲ್ಲಿ ಕಲಿತ ಹೆಣ್ಣುಮಕ್ಕಳೇ ಮುಂದಕ್ಕೆ ಮಿಶನ್ ಶಾಲೆಗಳಲ್ಲಿ ಮತ್ತು ಜಿಲ್ಲೆಯಲ್ಲಿ ಶಿಕ್ಷಕಿಯರಾಗಿ ನೇಮಕವಾದರು. ಹೆಣ್ಮಕ್ಕಳ ಶಾಲೆಗಳಲ್ಲಿ ಮಹಿಳಾ ಮಿಶನರಿಗಳು ಶಿಕ್ಷಕಿಯಾಗಿ ಉಸ್ತುವಾರಿಯಾಗಿ ಕೆಲಸ ಮಾಡುತ್ತಿದ್ದರು. ಶಾಲೆಯಲ್ಲಿ ವಿದ್ಯಾಭ್ಯಾಸವಲ್ಲದೆ ಹೊಲಿಗೆ, ಬೈಂಡಿಂಗ್, ಕರಕುಶಲ ವಸ್ತು ತಯಾರಿಕೆ ಮುಂತಾದ ಹಲವಾರು ತರಬೇತಿಗಳನ್ನು ನೀಡುತ್ತಿದ್ದರು.

1914ರಲ್ಲಿ ನಡೆದ ಮಹಾಯುದ್ಧದಲ್ಲಿ ಶಾಲೆಯನ್ನು ಮುಚ್ಚುವ ಪರಿಸ್ಥಿತಿ ಬಂದೊದಗಿದ ವರದಿಯೊಂದು 1925 ಅಕ್ಟೋಬರ್ ತಿಂಗಳಲ್ಲಿ ಪ್ರಕಟವಾದ ಸತ್ಯವೃತ ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿದೆ. “ಮಂಗಳೂರಿನಲ್ಲಿರುವ ಮಿಶನ್

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

89 [ 90 ]ಹೈಸ್ಕೂಲ್‌ನ್ನು ಬಾಸೆಲ್ ಮಿಶನರಿಗಳು 1838ರಲ್ಲಿ ಸ್ಥಾಪಿಸಿದರು. ಇದಕ್ಕೆ ಮಿಶನ್ ಸ್ಕೂಲ್ ಎಂಬ ಹೆಸರಿತ್ತು. ಈ ಜಿಲ್ಲೆಯಲ್ಲಿ ಇಂಗ್ಲಿಷನ್ನು ಕಲಿಸುವುದಕ್ಕೆ ತೊಡಗಿದ ಶಾಲೆಗಳಲ್ಲಿ ಇದೇ ಮೊದಲನೆಯದು. ಈ ಶಾಲೆಯ ಸ್ಥಾಪನೆಯಾಗಲು ಕಾರಣ ಜಿಲ್ಲೆಯಲ್ಲಿದ್ದ ವಿದೇಶಿ ಮಕ್ಕಳು ಮತ್ತು ಆಸಕ್ತ ದೇಶಿಯರ ಮಕ್ಕಳು. 1914ರಲ್ಲಿ ನಡೆದ ಮೊದಲ ಮಹಾಯುದ್ಧ ಸಂದರ್ಭದಲ್ಲಿ ಈ ಶಾಲೆಯನ್ನು ಮುಚ್ಚುವ ಪರಿಸ್ಥಿತಿ ಬಂದೊದಗಿತು. ಈ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ತೀರಿಸಿ ಹೋದವರಲ್ಲನೇಕರು ಈಗ ವಿದ್ಯಾ ಇಲಾಖೆಯಲ್ಲಿಯೂ, ಮತ ಸಂಬಂಧ ಕೆಲಸದಲ್ಲಿಯೂ, ವಕೀಲ ವೃತ್ತಿಯಲ್ಲಿಯೂ, ಇನ್ನು ಕೆಲವರು ಸರಕಾರಿ ಅಧಿಕಾರಿಗಳಾಗಿ ಮೆರೆಯುವರು. ಅನೇಕಾನೇಕ ಬಡಬಗ್ಗರಿಗೂ ಹಿಂದುಳಿದ ಜಾತಿಯವರಿಗೂ ಈ ವಿದ್ಯಾಲಯವು ಧರ್ಮಾರ್ಥವಾಗಿಯಾಗಲಿ ಅರ್ಧ ಯಾ ಕಾಲು ಸಂಬಳವನ್ನು ಅಂಗೀಕರಿಸಿ ಯಾಗಲಿ ವಿದ್ಯಾದಾನ ಮಾಡಿಯದೆ. ಇದಲ್ಲದೆ ಇಲ್ಲಿ ದೊರೆಯುವ ನೈತಿಕ ಯಾ ಸನಾತನ ಬೋಧನೆಯು ಅನೇಕರ ಅಂತರಾತ್ಮನನ್ನು ಹೆಚ್ಚು ಜಾಗೃತಿಗೊಳಿಸಲು ಸಹಾಯಕಾರಿಯಾಗಿದೆ. ವಿಶೇಷತಃ ಶಾಲೆಯ ವಾರ್ಷಿಕ ಪರೀಕ್ಷೆಗಳ ಫಲಿತಾಂಶವು ಜಿಲ್ಲೆಯ ಬೇರೆ ಶಾಲೆಗಳ ಫಲಿತಾಂಶಕ್ಕಿಂತ ಎಷ್ಟು ಮಾತ್ರವು ಕಡಿಮೆ ತರದ್ದಲ್ಲ. “ಇಲ್ಲಿ ಕಲಿತು ಬೇರೆ ಬೇರೆ ಹುದ್ದೆಗಳಲ್ಲಿ ನೆಲೆಯೂರಿರುವ ಹಳೇ ವಿದ್ಯಾರ್ಥಿಗಳು, ಮತ್ತು ವಿದೇಶಿ ಅಧಿಕಾರಿಗಳ ನೆರವಿನಿಂದ ಶಾಲೆ ಮುನ್ನಡೆಯುವಂತಾಯಿತು” ಆಗ ಹೈಸ್ಕೂಲಿಗೆ ಕೆ.ಇ.ಎಮ್. ಹೈಸ್ಕೂಲ್ ಎಂಬ ಹೆಸರಿತ್ತು.

“ಕ್ರೈಸ್ತ ಹಿತವಾದಿ” ಎಪ್ರಿಲ್ 1925ರಲ್ಲಿ ಪ್ರಕಟವಾದ “ದ್ರವ್ಯ ಸಹಾಯ ಹೊಂದುವ ಪಾಠಶಾಲೆಗಳು” ಎಂಬ ಲೇಖನದಲ್ಲಿ ಶಾಲೆಯ ಬಗ್ಗೆ ಹೀಗೆ ದಾಖಲಿಸಲಾಗಿದೆ. ಈ ಈ ದೇಶದಲ್ಲಿ ಸರಕಾರಿ ಶಾಲೆಗಳಲ್ಲದೆ ಸರಕಾರದಿಂದ ಹಣ ಸಹಾಯ ಪಡೆಯುವ ಶಾಲೆಗಳೂ ಖಾಸಗಿ ಶಾಲೆಗಳೂ ಅವೆ. ಖಾಸಗಿ ಶಾಲೆಗಳನ್ನು ಅಯಾ ಸಮಾಜಗಳವರಾಗಲಿ ಇತರ ಮಹನೀಯರಾಗಲಿ ಪ್ರತ್ಯೇಕವಾದ ಒಂದು ಉದ್ದೇಶದಿಂದ ಇಟ್ಟು ಸ್ವಂತ ಖರ್ಚಿನಿಂದ ನಡೆಸುವಾಗ ಸರಕಾರದವರು ಅಂಥವುಗಳ ಆಡಳಿತೆ ನಡಿಸುವಿಕೆಗಳನ್ನು ಕುರಿತು ಕೈಹಾಕುವುದಿಲ್ಲ. ಆದರೆ ಸರಕಾರದಿಂದ ಮಂಜೂರಾತಿ ಹೊಂದಿ ಸಹಾಯ ಪಡೆಯುವ ಶಾಲೆಗಳು ಸರಕಾರಿ ನಿಯಮಗಳಿಗೆ ಒಳಗಾಗಬೇಕು. ಪಾಶ್ಚಿಮಾತ್ಯ ವಿದ್ಯೆಯನ್ನು ಕೊಟ್ಟು ಇಂಥಾ ದ್ರವ್ಯ ಸಹಾ ಹೊಂದುವ ಶಾಲೆಗಳಲ್ಲಿ ಮಿಶನ್ ಶಾಲೆಗಳೇ ಮೊದಲನೆಯವುಗಳು, ಇಂಥಾ ಶಾಲೆಗಳನ್ನು ಬಾಸೆಲ್ ಮಿಶ್ಯನಿನವರು ಈ ಜಿಲ್ಲೆಯಲ್ಲಿಯೂ ಇನ್ನು ಇತರ ಜಿಲ್ಲೆಗಳಲ್ಲಿಯೂ 80-90 ವರ್ಷಗಳ ಹಿಂದಿನ ಕಾಲದಲ್ಲಿಯೇ ಅಲ್ಲಲ್ಲಿ ಸ್ಥಾಪಿಸ

90

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು..

[ 91 ]

ತೊಡಗಿದರು. ಆ ಕಾಲದಲ್ಲಿ ಸರಕಾರಿ ಸಹಾಯ ಸಿಕ್ಕುವ ಪದ್ಧತಿ ಇರಲಿಲ್ಲ. ಮತ್ತು ಅಂಥಾ ಸಹಾಯ ಸಿಕ್ಕುವ ಆಶೆ ನಿರೀಕ್ಷೆಯಿಂದ ಮಿಶ್ಯನಿನವರು ಶಾಲೆಗಳನ್ನು ತೆರೆಯಲೂ ಇಲ್ಲ. ಹೀಗೆ ಮಂಗಳೂರಿನಲ್ಲಿ “ಇಂಗ್ಲಿಷ್ ಶಾಲೆ” ಎಂದು ಕರೆಯಲ್ಪಡುತ್ತಿದ್ದ ಮಿಶನ್ ಹೈಸ್ಕೂಲನ್ನು ಬಾಸೆಲ್ ಮಿಶ್ಯನಿನವರು ಸುಮಾರ 87 ವರ್ಷಗಳ ಹಿಂದೆ ತೆರೆದರು. ಸರಕಾರದವರು ಆ ಕಾಲದಲ್ಲಿ ದ್ರವ್ಯ ಸಹಾಯ ಮಡುತ್ತಿರಲಿಲ್ಲ. ಆದೆ ಮಿಶ್ಯನಿನ ಯುರೋಪೀಯ ಸ್ನೇಹಿತರು ವಿವಿಧ ರೀತಿಯಿಂದ ಮಿಶನರಿಗಳಿಗೆ ಸಹಾಯ ಮಾಡಿದರು. ಈ ಶಾಲೆಯಲ್ಲಿ ಕಲಿತು ಮೇಲ್‌ಸ್ಥಿತಿಗೆ ಬಂದು, ಕಡೇ ತನಕ ಅದರ ಮೇಲೆ ಪ್ರೀತಿಯನ್ನಿಟ್ಟಿದ್ದ ಅನೇಕ ಮಹನೀಯರು ಅದಲ್ಲದೆ ಮಿಶನಿನ ಉಪಕಾರಗಳನ್ನು ನೆನಸಿ ಮಿಶನ್ ಹೈಸ್ಕೂಲಿನ ಮೇಲೆ ಸಹಾನುಭೂತಿಯುಳ್ಳವರು ಇದ್ದಾರೆ.

1938ರಲ್ಲಿ ಹೈಸ್ಕೂಲಿನ ಶತಮಾನೋತ್ಸವನ್ನು ಆಚರಿಸಲಾಗಿದ್ದು ಈ ಸಂಭ್ರಮಾಚರಣೆಯ ನೆನಪಿಗಾಗಿ ನಿರ್ಮಿಸಲಾದ ಶತಮಾನೋತ್ಸವ ಕಟ್ಟಡ ಈಗಲೂ ಸುಸ್ಥಿತಿಯಲ್ಲಿದೆ.

1949ರಲ್ಲಿ ಆಂಗ್ಲ ಮಾಧ್ಯಮ ಶಾಲೆಯೊಂದಿಗೆ ಕಾರ್ಯವೆಸಗುತ್ತಿದ್ದ ಬಿ.ಇ.ಎಮ್ ಹೈಸ್ಕೂಲಿನ ಕನ್ನಡ ವಿಭಾಗವು ಪ್ರತ್ಯೇಕಿಸಲ್ಪಟ್ಟು ಆಡಳಿತ ಮಂಡಳಿಯ ಆದೇಶದಂತೆ ಬಿ.ಇ.ಎಂ. ಹಿರಿಯ ಪ್ರಾಥಮಿಕ ಶಾಲೆ ಹೆಸರಿನಿಂದ ಈಗಲೂ ಮುಂದುವರಿಯುತ್ತಿದೆ.

180 ಸಂವತ್ಸರಗಳನ್ನು ದಾಟಿದ ಮಿಶನ್ ಹೈಸ್ಕೂಲ್ 150ನೇ ವಾರ್ಷಿಕೋತ್ಸವವನ್ನು 1988ರಲ್ಲಿ ಆಚರಿಸಿದೆ. 1991ರಿಂದ ಆಂಗ್ಲ ಮಾಧ್ಯಮ ನರ್ಸರಿ ಪ್ರೈಮರಿ ಶಾಲೆ . 1992ರಿಂದ ಬಿ.ಇ.ಎಂ. ಕಂಪೋಸಿಟ್ ಪ್ರಿ ಯುನಿವರ್ಸಿಟಿ ಕಾಲೇಜು ಪ್ರಾರಂಭವಾಗಿದೆ.

180 ವರ್ಷದ ಇತಿಹಾಸವಿರುವ ಶಾಲೆಯಲ್ಲಿ ವಿದ್ಯಾದಾನ ಮಾಡುವುದರ ಮೂಲಕ ಚರಿತ್ರೆ ನಿರ್ಮಿಸಿದ ಕನ್ನಡದ ಮೊದಲ ಪತ್ರಿಕೆಯ ಸಂಪಾದಕರೂ, ದಾಸ ಸಾಹಿತ್ಯವನ್ನು ಸಂಪಾದಿಸಿ ಬೆಳಕಿಗೆ ತಂದ ರೆವೆ. ಹೆರ್ಮನ್ ಮೋಗ್ಲಿಂಗ್, ಜಿಲ್ಲೆಗೆ ಮೊದಲ ಮುದ್ರಣ ವ್ಯವಸ್ಥೆ ತಂದ ಜಿ. ಎಚ್. ವೈಗ್ಲೆ, ಕನ್ನಡ ನಿಘಂಟಿನ ಪ್ರಖ್ಯಾತಿ ಪಡೆದ ಫರ್ಡಿನಾಂಡ್ ಕಿಟೆಲ್, ಕನ್ನಡ ವ್ಯಾಕರಣ ಬರೆದ ಜೀಗ್ಲರ್ ಮುಂತಾದ ಹಲವಾರು ವಿದೇಶಿ ಮಿಶನರಿಗಳನ್ನು ಇಲ್ಲಿ ಸ್ಮರಿಸುವುದು ಯುಕ್ತವಾಗಿದೆ. ಕಳೆದ ವರ್ಷಗಳಲ್ಲಿ ಈ ವಿದ್ಯಾದೇಗುಲದಲ್ಲಿ ವಿದ್ಯಾರ್ಜನೆ ಮಾಡಿದ ಕಯ್ಯಾರ ಕಿಞ್ಞಣ್ಣ ರೈ, ಮಂಜಯ್ಯ ಹೆಗ್ಗಡೆ ಮುಂತಾದ ಮಹನೀಯರು ಈ ಹೈಸ್ಕೂಲಿನವರು ಎಂದು

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

91 [ 92 ] ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ. ಶಾಲೆಯ ಚರಿತ್ರೆಯನ್ನು ಅವಲೋಕಿಸುವಾಗ ವಿವಿಧ ಹಂತದಲ್ಲಿ ಶಾಲೆಯು ಅಭಿವೃದ್ಧಿ ಹೊಂದಿತ್ತಾದರೂ ವಿವಿಧ ತೊಂದರೆಗಳನ್ನು ಅನುಭವಿಸಿ ಮುನ್ನಡೆದಿದೆ. ಚರಿತ್ರೆ ಪುಸ್ತಕಗಳು, ಬಾಸೆಲ್ ಮಿಶನ್ ವರದಿಗಳು, ಶಾಲೆಯ ಗ್ರಂಥಾಲಯದಲ್ಲಿರುವ ಶತಮಾನಪೂರ್ವ ಪುಸ್ತಕಗಳು, ಕಟ್ಟಡಗಳು ಶಾಲೆಯ ಕಥೆಯನ್ನು ಹೇಳುತ್ತವೆ.

{{{1}}}

ಪರಾಮರ್ಶನ ಸೂಚಿ

1. ಬಾಸೆಲ್ ಮಿಶನ್ ವರದಿಗಳು 1841-1870 2.ಕ್ರೈಸ್ತ ಹಿತವಾದಿ, ಎಪ್ರಿಲ್ 1925 3.ಶಾಂತಿ ದೇವಾಲಯ, ಮಂಗಳೂರು, ಸ್ಮರಣ ಸಂಚಿಕೆ 1962 4.ಭಾರತದಲ್ಲಿ ಬಾಸೆಲ್ ಮಿಶನ್, ಡಾ. ಪೀಟರ್ ವಿಲ್ಸನ್ ಪ್ರಭಾಕರ್, 2018 5.ಬಿ.ಎ.ಎಮ್. ಹೈಸ್ಕೂಲ್ ಪ್ರಕಟಿತ ಸ್ಮರಣ ಸಂಚಿಕೆಗಳು

92

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

[ 93 ]

{{{1}}}

ಬಾಸೆಲ್ ಮಿಶನ್ ನಂತರದ ದೇಶೀಯ ಸಹಾಯಕ ಸಂಘ ಸಂಸ್ಥೆಗಳು

1834ರಲ್ಲಿ ಭಾರತಕ್ಕೆ ಬಂದ ಬಾಸೆಲ್ ಮಿಶನರಿಗಳು ಮಂಗಳೂರಿನಲ್ಲಿ 1844ರಲ್ಲಿ ಸ್ಥಾಪಿಸಿದ ಹೊಸೈರಿ/ ನೇಯಿಗೆ ವಿಭಾಗವು 1914ರಲ್ಲಿ ನಡೆದ ಪ್ರಥಮ ಮಹಾ ಯುದ್ಧ ಸಂದರ್ಭದಲ್ಲಿ ಕಾಮನ್‌ವೆಲ್ತ್ ಪಾಲಾಯಿತು. 1844ರಲ್ಲಿ ಬಾಸೆಲ್ ಮಿಶ್ಯನ್ ಸಂಘವು ನೇಯಿಗೆ ಕಾರ್ಖಾನೆಯೊಂದನ್ನು ಆರಂಭಿಸಿತು. 1851ರಲ್ಲಿ ಕೈಮಗ್ಗ ಕಾರ್ಖಾನೆಯ ಕಾರ್ಯವೂ ಆರಂಭವಾಯಿತು. ಇದೇ ಕಾರ್ಖಾನೆಯಿಂದ ಖಾಕಿ ಬಣ್ಣ ಕಂಡು ಹಿಡಿಯಲ್ಪಟ್ಟು ಇಂದು ದೇಶದಾದ್ಯಂತ ಖಾಕಿ ಬಣ್ಣದ ಬಟ್ಟೆಯ ಜನಕ ಬಾಸೆಲ್ ಮಿಶನ್ ಎಂದಾಯಿತು. ನೇಯಿಗೆ ಎರಡು ಶಾಖೆಗಳು ಮಡಿಕೇರಿಗುಡ್ಡೆ ಮತ್ತು ಮುಲ್ಕಿಯಲ್ಲಿತ್ತು. ಮುಲ್ಕಿ ಮಿಶನ್ ಶಾಲೆಯಲ್ಲಿ ಮಗ್ಗದ ತರಬೇತಿಯನ್ನು ಕೊಡುವ ವಿಭಾಗವೂ ಇತ್ತು. ಇವಲ್ಲದೆ ಬಲ್ಮಠ, ಬೊಕ್ಕಪಟ್ನ, ಮುಲ್ಕಿ, ಉಚ್ಚಿಲ, ಪಾಂಗಾಳ ಗುಡ್ಡೆ, ಕೊರಂಗ್ರಪಾಡಿ, ಮಲ್ಪೆ, ಉಡುಪಿ ಮುಂತಾದ ಕ್ರೈಸ್ತ ಸಭೆಗಳ ಸದಸ್ಯರು ಮನೆಯಲ್ಲಿಯೇ ಮಗ್ಗಗಳನ್ನು ಹೊಂದಿ ಉದ್ಯೋಗವನ್ನು ಮಾಡುವ ಕಾರ್ಯಕ್ಕಾಗಿ ಪ್ರೋತ್ಸಾಹ ಮಾಡಲಾಗುತ್ತಿತ್ತು. 1914ರ ನಂತರ ಕಾಮನ್‌ವೆಲ್ತ್ ಪಾಲಾದ ಈ ಸಂಸ್ಥೆ ಹೊಸೈರಿ ಫ್ಯಾಕ್ಟರಿ, ಜಾಡುಕೋಣೆ ಎಂಬ ಹೆಸರಿನಲ್ಲಿ ಬಲ್ಮಠದಲ್ಲಿ ಪ್ರಚಲಿತದಲ್ಲಿದ್ದು 1968ರ ತನಕ ಕಾರ್ಯವೆಸಗುತ್ತಿತ್ತು. ಇಲ್ಲಿ ತಯಾರಿಸಲ್ಪಡುತ್ತಿದ್ದ ಬನಿಯನುಗಳು, ಹೊದಿಕೆ, ಸೀರೆ, ಒಳ ಉಡುಪುಗಳು, ಕಾರ್‌ ಪೆಟ್ ಮುಂತಾದ ಉತ್ಪನ್ನಗಳು ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿತ್ತು.

ಸ್ವಾವಲಂಬನೆ ಮತ್ತು ದೇಶೀಯ ಕ್ರೈಸ್ತರು : 1928ರ ಸತ್ಯವ್ರತ ಪತ್ರಿಕೆಯಲ್ಲಿ ಬರೆದ ಲೇಖನವೊಂದರಲ್ಲಿ ಸ್ವಾವಲಂಬನೆ/ ವಿದ್ಯಾನಿಧಿ ವಿಚಾರದಲ್ಲಿ ಬರೆದ ಮಾತುಗಳು ಹೀಗಿವೆ: “ಸಮಾಜಿಕರು ಪ್ರಥಮತಾ ನಮ್ಮ ಸಮಾಜ ನಮ್ಮ ಸಭೆ ನಮ್ಮ ಜನರು ಎಂಬುದನ್ನು ತಿಳಕೊಳ್ಳಬೇಕು. ನಮ್ಮ ಸಭೆ ಎಂದು ತಿಳಕೊಳ್ಳುವಂಥಾ ಒಂದು ಕ್ರೈಸ್ತ ಸಮಾಜವಾದರೂ ಕಾಣುವುದಿಲ್ಲ. ವಿದೇಶಿಯರ ಗಂಜಿಗೆ ಕೈ ನೀಡಿ ನಮ್ಮ ಸಭೆ ಎಂದು ಹಿಗ್ಗಿಕೊಳ್ಳಬಹುದಲ್ಲದೆ ಒಂದೇ ಸ್ವತಂತ್ರ ಸಭೆಯಾದರೂ ನಮ್ಮಲ್ಲಿ ಇಲ್ಲ. ಇಂಥಾ ಸ್ಥಿತಿಯು ಎಷ್ಟರ ತನಕ ಕ್ರೈಸ್ತ ಸಮಾಜದಲ್ಲಿ ಇದೆಯೋ ಅಷ್ಟರ ತನಕ ನಮ್ಮ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

93 [ 94 ] ಸಮಾಜದ ಶಿಕ್ಷಿತ ವರ್ಗಕ್ಕೆ ಉಳಿಗಾಲವಿಲ್ಲ. ಇಂಥಾ ಸ್ಥಿತಿಯನ್ನು ಹೋಗಲಾಡಿಸಬೇಕಾದರೆ ನಮ್ಮಲ್ಲಿ ಉದ್ಯೋಗ ಕಲಾನಿಪುಣರು- ವೈದ್ಯರು ಮೊದಲಾದವರು ಹುಟ್ಟಿ ಬರಬೇಕು. ಇಂಥಾ ಸುಶಿಕ್ಷಿತರಾದ ಯುವಕರನ್ನು ಸಮಾಜದ ಮುಂದಿನ ಏಳಿಗೆಗೆ ಸರಿಯಾಗಿ ತರಬೇತು ಮಾಡಲಿಕ್ಕೆ ಬೇಕಾದ ವಿದ್ಯಾಫಂಡುಗಳನ್ನು ತೆರೆಯಬೇಕು. ದೇಶ ಪ್ರೀತಿ, ಬಂಧುಪ್ರೇಮ, ಕಾರ್ಯ ದುರಂಧರತೆಯೇ ಮೊದಲಾದ ಸದ್ಗುಣಗಳು ಟೊಳ್ಳಾಗಿ ಹೋಗಿರುವ ನಮ್ಮ ಸಮಾಜವು ಎಷ್ಟರ ತನಕ ವಿದೇಶಿ ಮಿಶ್ರನುಗಳ ಮೇಲೆ ಕೈ ನೀಡಿ ನಿಂತುಕೊಳ್ಳುವುದೋ ಅಷ್ಟರ ತನಕ ಸಮಾಜವು ಲೌಕಿಕ ರೀತಿಯಾಗಿಯೂ ಪಾರಾಮಾರ್ಥಿಕವಾಗಿಯೂ ಏಳಿಗೆಯನ್ನು ಹೊಂದಲಾರದು.

1934ರಲ್ಲಿ ಮಂಗಳೂರಿನ ಜಪ್ಪು ಸಭೆಯ ಸಭಾಪಾಲಕರಾಗಿದ್ದ ರೆವೆ. ಪೌಲ್ ಸೋನ್ಸ್‌ರವರು ಬಾಸೆಲ್ ಹೋಮ್ ಬೋರ್ಡಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದ ಬಾಸೆಲ್ ಮಿಶನ್ ಅಧ್ಯಕ್ಷರು ಮತ್ತು ಖಜಾಂಜಿ ಮೂಲಕ ಪತ್ರವೊಂದನ್ನು ಹೀಗೆ ಬರೆಯುತ್ತಾರೆ. ಬಾಸೆಲ್ ಮಿಶನರಿಗಳಿಂದ ಮಂಗಳೂರಿನಲ್ಲಿ ಸಭೆಗಳು ಸ್ಥಾಪನೆ ಇಲ್ಲಿ ಹಲವರು ನಿರ್ಗತಿಕರು, ನಿರಾಶ್ರಿತರು, ಅನಾಥರು ಇದ್ದರು. “ಇವರಿಗೆ ನೀವೇ ಊಟಕ್ಕೆ ಕೊಡಿರಿ” ಎಂಬ ಸತ್ಯವೇದದ ಮಾತಿನಂತೆ ಕೈಕಸಬು ಹಂಚಿನ ಕಾರ್ಖಾನೆ, ನೇಯಿಗೆ ಉದ್ಯಮ ಮುಂತಾದ ಘಟಕಗಳನ್ನು ನಿರ್ಮಿಸಿ ಉದ್ಯೋಗಗಳನ್ನು ಸೃಷ್ಟಿಸಿ ಬದುಕಲು ಅನುವು ಮಾಡಿಕೊಟ್ಟರು. ಮಹಾಯುದ್ಧದ ನಂತರ ಮಿಶನ್ ಸಹಾಯದಿಂದ ಮುನ್ನಡೆಯುತ್ತಿದ್ದ ಶಾಲೆ, ಅನಾಥ ಶಾಲೆಗಳಿಗೆ ಬರುವ ದೇಣಿಗೆಗಳು ನಿಂತು ಹೋದವು. ಕಾರ್ಖಾನೆಗಳು ಕಾಮನ್‌ವೆಲ್ತ್ ಪಾಲಾಯಿತು, ಕಾರ್ಖಾನೆಗಳಲ್ಲಿದ್ದ ಹಲವು ವಿಭಾಗಗಳು ಮುಚ್ಚಲ್ಪಟ್ಟಿತು. ಇದರಿಂದ ಹಲವಾರು ಮಂದಿ ಕೆಲಸ ಕಳೆದುಕೊಂಡರು. 1914ರಲ್ಲಿ ಜೆಪ್ಪು ಟೈಲ್ ಫ್ಯಾಕ್ಸಿಯಲ್ಲಿ 300ರಷ್ಟಿದ್ದ ಸಂಖ್ಯೆ 1934ರಲ್ಲಿ 125 ಆಯಿತು. ಸಿಕ್ಕಫಂಡ್, ರೈಸ್‌ಫಂಡ್, ಪೆನ್‌ಫಂಡ್‌ಗಳು ನಿಂತು ಹೋಯಿತು. ಇದರಿಂದ ಹಲವಾರು ಮಂದಿ ಕೆಲಸವಿಲ್ಲದೆ ದಿನ ಕಳೆಯಬೇಕಾಯಿತು. ಹೇಗೆ ನಾವು ಇವರಿಗೆ ಊಟಕ್ಕೆ ಕೊಡಲಿ. ಇವರಲ್ಲಿ ನುರಿತ ಕೆಲಸದವರಿದ್ದಾರೆ. ಈ ಹಿಂದೆ ಬಾಸೆಲ್ ಮಿಶನ್ ಮಾಡುತ್ತಿದ್ದ ಕಾಮನ್‌ವೆಲ್ತ್ ನಡೆಸದೇ ಇರುವ ಮಡಿಕೆ ಮಾಡುವ ಕೆಲಸವನ್ನು ನಮ್ಮವರಿಂದ ಆರಂಭಿಸಬೇಕೆಂದಿದ್ದೇವೆ. ಇದಕ್ಕಾಗಿ ತಮ್ಮ ಸಹಾಯವನ್ನು ನಿರೀಕ್ಷಿಸುತ್ತಿದ್ದೇವೆ”.

1943ರಲ್ಲಿ ಪ್ರೊಟೆಸ್ಟಂಟ್ ಕ್ರಿಶ್ಚನ್ ಕೋ ಅಪರೇಟಿವ್ ಸೊಸೈಟಿಯು ತನ್ನ 25ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಹೊರತಂದ ಸ್ಮರಣ ಸಂಚಿಕೆಯಲ್ಲಿ ಸಂಘದ

94

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

[ 95 ]ಸ್ಥಾಪನೆಯ ಬಗ್ಗೆ ಈ ರೀತಿ ವರದಿ ಮಾಡಿದ್ದಾರೆ. “ನಮ್ಮ ಮನೋದೃಷ್ಟಿಯು

ಈ 1914-1918ರಲ್ಲಿ ನಡೆದಿದ್ದ ಮಹಾಯುದ್ಧ ಕಡೆಗೆ ಸೆಳೆಯಲ್ಪಡುತ್ತದೆ. ಆ ಯುದ್ಧದ ದೆಸೆಯಿಂದ ಬಾಸೆಲ್ ಮಿಶನ್ ಜರ್ಮನ್ ಮಿಶನರಿಗಳು ತಮ್ಮ ಅಧೀನದಲ್ಲಿದ್ದ ಇಲ್ಲಿಯ ಕಾರ್ಯಕ್ಷೇತ್ರಗಳನ್ನು ಬಿಟ್ಟು ಸ್ವದೇಶಕ್ಕೆ ತೆರಳುವ ನಿರ್ಭಂಧಕ್ಕೊಳಗಾದ್ದರಿಂದ, ಅವರಿಂದ ಸ್ಥಾಪಿತವಾದ ಸಭೆಗಳು ಆ ಕಾಲದಲ್ಲಿ ಅವರಿಂದ ಹೊಂದುತಿದ್ದ ಸಹಾಯವನ್ನೂ ನಾಯಕತ್ವವನ್ನೂ ಕಳಕೊಂಡವು. ಆದ್ಯ ಮಿಶನರಿಗಳು ನಮಗೆ ಸ್ವಾಮಿ ಕ್ರಿಸ್ತನ ಸುವಾರ್ತೆಯನ್ನು ತಂದುಕೊಟ್ಟದ್ದು ಮಾತ್ರವಲ್ಲದೆ, ಸಾಮಾಜಿಕ ಮತ್ತು ಆರ್ಥಿಕ ವಿಷಯಗಳಲ್ಲಿ ಸಹ ನಮ್ಮ ಹಿತಚಿಂತಕರಾಗಿದ್ದು ನಮಗೆ ಬೆನ್ನಾಸರೆಯಾಗಿರುತ್ತಿದ್ದರು. ಇದರ ಫಲಿತಾಂಶ ಎಂಬಂತೆ ನಮ್ಮ ಜನರು ಆಪತ್ತು ವಿಪತ್ತಿನ ಕಾಲಗಳಲ್ಲಿ ಹಾಗೂ ಇನ್ನಿತರ ಯಾವದೊಂದು ಸಹಾಯವು ಬೇಕಿದ್ದರೂ ಕೂಡಾ ಮಿಶನರಿಗಳ ಕೈ ಕಾಯುವ ಚಟಕ್ಕೊಳಬೀಳುವವರಾದರು. ಆದರೆ ಯುದ್ಧದಿಂದ ಪರಿಣಮಿಸಿದ ನವೀನ ಪರಿಸ್ಥಿತಿಯಲ್ಲಿ ಇವೆಲ್ಲವೂ ಮಾರ್ಪಾಟವಾಗಿ, ನಮ್ಮ ಜನರು ಸಹಾಯದ ಹೊಸ ದಾರಿಗಳನ್ನು ಕಂಡುಹಿಡಿಯುವುದೂ ಸ್ವಾವಲಂಬನೆಯನ್ನು ಕಲಿಯುವುದೂ ಅವಶ್ಯವೆನಿಸಿತು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮಲ್ಲಿದ್ದ ಸಮಾಜ ಹಿತಚಿಂತಕರಾದ ವಿಚಾರಶೀಲರಲ್ಲನೇಕರು, ಆ ಕಾಲದಲ್ಲಿ ನಮ್ಮ ಸಂಸ್ಥಾನದಲ್ಲಿ ಸರಕಾರದವರಿಂದ ಸ್ಥಾಪಿಸಲ್ಪಟ್ಟಿದ್ದ ಸಹಕಾರ ಚಳವಳವು ಕೆಲಮಟ್ಟಿಗಾದರೂ ನಮ್ಮ ಜನರಿಗೆ ಸಹಾಯ ಮಾಡಲಿಕ್ಕೆ ತಕ್ಕುದಾದ ಒಂದು ಸಾಧನವಾಗುವದೆಂದು ಮನಗಂಡರು. ಈ ಸಂದರ್ಭದಲ್ಲಿ ನಮ್ಮ ಪ್ರೊಟೆಸ್ಟಂಟ್ ಕ್ರೈಸ್ತರ ಪರಿಸ್ಥಿತಿಯನ್ನು ಕುರಿತು ಒಂದೆರಡು ಮಾತುಗಳನ್ನು ಹೇಳಬೇಕಾಗಿದೆ. ಮಂಗಳೂರಿನಲ್ಲಿರುವ ನಮ್ಮ ಸಭೆಯವರಲ್ಲಿ ಅನೇಕರು ಹಂಚಿನ, ಕಬ್ಬಿಣ, ನೇಯುವ ಮತ್ತು ಇನ್ನಿತರ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ದಿನಕೂಲಿಯವರು. ಇನ್ನು ಅನೇಕರು ಉಪದೇಶಕ, ಉಪಾಧ್ಯಾಯ ಮತ್ತು ಕಾರಕೂನ ಮೊದಲಾದ ವೃತ್ತಿನಲ್ಲಿ ಇರುವವರು. ಸಾಹುಕಾರರೂ ಜಮೀನುದಾರರೂ ಶ್ರೀಮಂತರೂ ನಮ್ಮಲ್ಲಿ ಕಡಿಮೆ. ನಿಜವಸ್ತು ಸ್ಥಿತಿಯು ಹೀಗಿರುವುದರಿಂದ ನಮ್ಮಲ್ಲಿದ್ದ ಸಾಹಸಿಗಳು ಯಾವದೊಂದು ಸ್ವತಂತ್ರ ವೃತ್ತಿಯನ್ನು ಹೊಸದಾಗಿ ಪ್ರಾರಂಭಿಸಬೇಕೆಂದಿದ್ದರೆ, ಇಲ್ಲವೆ ಉದ್ದಿಮೆ ಸ್ಥಾಪಿಸುವುದು, ಮನೆಕಟ್ಟಲು ಬಯಸುವುದಾದರೆ ಅವರಿಗೆ ದ್ರವ್ಯಾನುಕೂಲತೆಗಳು ಒದಗಿಸಿ ಕೊಡಲಿಕ್ಕೆ ನೆರೆವಾಗಲು ಮುಂದೆ ಬರುವಂತವರು ಸಿಗುವುದು ಕೇವಲ ದುಸ್ತರವು. ಆದರೆ ಧನೈಶ್ಚರ್ಯಗಳು ಇಲ್ಲದಿದ್ದಾಗ್ಯೂ ನಮ್ಮ ಸಭಿಕರನೇಕರಲ್ಲಿ ಕಾರ್ಯದಕ್ಷತೆ,

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

95 [ 96 ] ಪ್ರಾಮಾಣಿಕತನ ಎಂಬ ಸೊತ್ತು ಇರುತ್ತದೆ. ಈ ಲಕ್ಷಣಗಳು ಸಹಕಾರದ ದೃಷ್ಟಿಯಿಂದ ಅತ್ಯಮೂಲವಾದವುಗಳಾಗಿದ್ದು, ಸಹಕಾರ ಸಂಘಗಳ ಉನ್ನತಿ, ಅವನತಿಗಳು ಬಹುಮಟ್ಟಿಗೆ ಅವುಗಳ ಭಾವಾಭಾವಗಳನ್ನು ಹೊಂದಿಕೊಂಡಿರುವುದರಿಂದ ಮಂಗಳೂರಿನ ನಮ್ಮ ಕ್ರೈಸ್ತ ಸಮಾಜಿಕರಿಗೆ ಒಂದು ಸಹಕಾರ ಸಂಘವನ್ನು ಸ್ಥಾಪಿಸಬೇಕೆಂಬ ಯೋಚನೆಯು ಬಹುಮಂದಿಯಲ್ಲಿ ಬೇರೂರುವದಾಯಿತು.

ಹೆಣ್ಣು ಮಕ್ಕಳಿಗೆ ಹೊಲಿಗೆ ತರಬೇತಿಯೊಂದಿಗೆ ಶಿಕ್ಷಣ ಮತ್ತು ಬಾಸೆಲ್ ಮಿಶನ್: 1836ರಲ್ಲಿ ಬಾಸೆಲ್ ಮಿಶನ್ ಮಂಗಳೂರಿನಲ್ಲಿ ಕನ್ನಡ ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಿದರೂ ಹೆಣ್ಣು ಮಕ್ಕಳು ಶಾಲೆಗೆ ಬರುತ್ತಿರಲಿಲ್ಲ. ಹೆಣ್ಣು ಮಕ್ಕಳನ್ನು ಶಿಕ್ಷಣ ವ್ಯವಸ್ಥೆಯೆಡೆಗೆ ಸೇರಿಸಲು ಮೊದಲು ಹೊಲಿಗೆ ಕೇಂದ್ರಗಳನ್ನು ತೆರೆದು ಕೈಕಸಬನ್ನು ಕಲಿಸುವ ವ್ಯವಸ್ಥೆ ಕಲ್ಪಿಸಿ ಇದಕ್ಕಾಗಿ ಅಕ್ಷರ ಜ್ಞಾನದ ಅವಶ್ಯಕತೆ ತೋರಿಬಂದು ಹೆಣ್ಣು ಮಕ್ಕಳು ಮುಂದೆ ಬಂದುದರಿಂದ 1842ರಲ್ಲಿ ಹೊಲಿಗೆ ತರಬೇತಿ ಮತ್ತು ಪ್ರಾಥಮಿಕ ಶಿಕ್ಷಣ ಒಂದೇ ಸೂರಿನಡಿ ಪ್ರಾರಂಭವಾಗಿ ಹೆಣ್ಣು ಮಕ್ಕಳು ವಿದ್ಯೆ ಕಲಿಯು ವಂತಾಯಿತು. ಅನಾಥ ಹೆಣ್ಣು ಮಕ್ಕಳಿಗಾಗಿ 1856ರಲ್ಲಿ ಬೋರ್ಡಿಂಗ್ ಹೋಮ್ ಸ್ಥಾಪಿಸಲ್ಪಟ್ಟು 1863ರಲ್ಲಿ ಮುಲ್ಕಿಗೆ ಸ್ಥಳಾಂತರಗೊಂಡಿತು. ಈಗಲೂ ಬೋರ್ಡಿಂಗ್ ಹೋಮ್ ನಡೆಯುತ್ತಿದೆ. ಇಲ್ಲಿ ಹೊಲಿಗೆ, ಬೇಸಾಯ, ಕೈಕಸಬುಗಳನ್ನು ಕಲಿಸಲಾಗುತ್ತಿತ್ತು.

ಉಡುಪಿ, ಮಂಗಳೂರು, ಕಾರ್ಕಳ ಹಾಗೂ ಉತ್ತರ ಕರ್ನಾಟಕದಲ್ಲಿ ಬ್ರಾಹ್ಮಣ ಹೆಣ್ಣು ಮಕ್ಕಳಿಗಾಗಿ ಶಾಲೆಗಳನ್ನು ಸ್ಥಾಪಿಸಲಾಗಿತ್ತು. ಹೆಣ್ಣು ಮಕ್ಕಳ ಶಿಕ್ಷಣ ಮುಂದುವರಿಕೆಯಿಂದ 1900ರಲ್ಲಿ ಪ್ರಾಥಮಿಕ ಶಾಲೆಯಲ್ಲಿ ಸ್ತ್ರೀ ಶಿಕ್ಷಕರು ಸೇರ್ಪಡೆಯಾದರು. 1868ರಲ್ಲಿ ಸ್ಥಾಪನೆಯಾದ ಸರಕಾರಿ ಕಾಲೇಜಿನಲ್ಲಿ 1901ರಿಂದ ಹೆಣ್ಣು ಮಕ್ಕಳು ಪದವಿ ಶಿಕ್ಷಣಕ್ಕೆ ಸೇರುವಂತಾಯಿತು. 1918ರಲ್ಲಿ ಹೆಣ್ಣು ಮಕ್ಕಳ ಕನ್ನಡ ಮೊದಲನೇ ಪುಸ್ತಕವೊಂದು ಪಠ್ಯವಾಗಿತ್ತು. ಇದರಲ್ಲಿ, ಸಂಸಾರ, ಕೈಕಸಬು, ಆರೋಗ್ಯ, ಮುಂತಾದ ವಿಭಾಗಗಳಿದ್ದವು. ಮಂಗಳೂರಿನ ಶಾಂತಿ ದೇವಾಲಯಲ್ಲಿ ನಡುವೆ 'ಮದ‌ರ್ಸ್ ಯೂನಿಯನ್' ಎಂಬ ಸಂಸ್ಥೆಯೊಂದು ಪ್ರಾರಂಭಗೊಂಡು ಮಹಿಳೆಯರ ಸೇವೆ ನಡೆಸುತ್ತಿತ್ತು. ಈ ಕೂಟವು ಇಂಗ್ಲಿಷ್ ಮತ್ತು ಕನ್ನಡ ಶಾಖೆಗಳೆಂಬದಾಗಿ ವಿಭಾಗಿಸಲ್ಪಟ್ಟು ಇಂಗ್ಲಿಷ್ ಶಾಖೆಯು 1923ರಿಂದ ವೈ.ಡಬ್ಲ್ಯೂ.ಸಿ.ಎ. (ಯಂಗ್ ವುಮೆನ್ಸ್ ಕ್ರಿಶ್ಚನ್ ಎಸೋಸಿಯೇಷನ್) ಹೆಸರಿನೊಂದಿಗೆ ಇಂದಿಗೂ ಮುನ್ನಡೆಯುತ್ತಿದೆ. ಮಹಿಳೆಯರ ನಡುವೆ ನಡೆಯುವ ಇವರ ಸೇವೆಯು ತಿಂಗಳ ಒಂದು ವಾರ ಹೊಲಿಗೆ ತರಬೇತಿ ನೀಡುತ್ತಿತ್ತು.

96 {{Right|ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 97 ] ಮತ್ತೊಂದು ವಾರ ಕಾರ್ಖಾನೆಯಲ್ಲಿ ದುಡಿಯುವ ಹೆಣ್ಣು ಮಕ್ಕಳಿಗಾಗಿ ತರಗತಿಗಳನ್ನು ನಡೆಸಲಾಗುತಿತ್ತು. ಇವುಗಳ ಸ್ಥಾಪನೆಗಾಗಿ ಮಹಿಳಾ ಮಿಶನರಿಗಳೊಂದಿಗೆ ದೇಶೀಯ ಮಹಿಳೆಯರೂ ನಾಯಕತ್ವ ವಹಿಸಿಕೊಂಡಿರುತ್ತಾರೆ. ಶ್ರೀಮತಿ ಎ. ಶೋಸ್ಟರ್ ನಾಯಕತ್ವದಿಂದ ಬಾಸೆಲ್ ಮಿಶನ್ ಹೋಮ್ ಇಂಡಸ್ಟ್ರಿ & ಕ್ರಾಸ್ ಸ್ವಿಚ್ ಇಂಡಸ್ಟ್ರಿ ತೆರೆಯಲಾಗಿದ್ದು ಮಹಿಳಾ ಮಿಶನರಿಗಳೇ ಇದನ್ನು ನಡೆಸುತ್ತಿದ್ದರು.

ಬಾಸೆಲ್ ಮಿಶನ್ ಪ್ರಾರಂಭಿಸಿದ ಸೇವೆಯನ್ನು ಮುಂದುವರಿಸಲೋ ಎಂಬಂತೆ ಕಾಸೆಸ್ ಸಂಸ್ಥೆ ಉಗಮವಾಯಿತು. 1972 ರಲ್ಲಿ ಡಾ. ಸಿ.ಡಿ. ಜತ್ತನ್ನರವರ ನಾಯಕತ್ವದಲ್ಲಿ ಕಾಸೆಸ್ ಸಂಸ್ಥೆಯ ಅಡಿದಾವರೆಯಲ್ಲಿ ಬಲ್ಮಠ ಸರ್ವೀಸ್ ಲೀಗ್ ಎಂಬ ಸಂಸ್ಥೆಯೊಂದು ಪ್ರಾರಂಭಗೊಂಡು ಇದರ ಒಂದು ವಿಭಾಗವಾಗಿ 1974ರಲ್ಲಿ ಬಲ್ಮಠ ಸ್ವಿಚ್‌ ಕ್ರಾಪ್ಟ್ ಸಂಸ್ಥೆಯು ಪ್ರಾರಂಭವಾಗಿ ಹೊಲಿಗೆ, ಎಂಬ್ರಾಯಿಡರಿ ತರಬೇತಿ ನೀಡುವ ಸಂಸ್ಥೆಯಾಗಿ ಮುಂದುವರಿದು ಪ್ರಸ್ತುತ ಕಾಸೆಸ್ ಐ.ಟಿ.ಐ. ಹೊಲಿಗೆ ತರಬೇತಿ ಕೇಂದ್ರವಾಗಿ ಮುಂದುವರಿಯುತ್ತಿದೆ. ಕಳೆದ 44 ವರ್ಷಗಳಿಂದ ಮುನ್ನಡೆಯುತ್ತಿದ್ದು ಸಾವಿರಾರು ಹೆಣ್ಣುಮಕ್ಕಳು, ಹೊಲಿಗೆ ಶಿಕ್ಷಕಿಯರಾಗಿ, ಸ್ವಂತ ದುಡಿಮೆಯನ್ನು ಪ್ರಾರಂಭಿಸುವಲ್ಲಿ ಸಹಕಾರಿಯಾಗಿದೆ. ಅಲ್ಲದೆ ಸಾರಿಫಾಲ್, ಸಾರಿಗೊಂಡಿ,ಬ್ಲೌಸ್ ಮೇಕಿಂಗ್, ಎಂಬ್ರಾಯ್ಡರಿ, ಕ್ಲರ್ಜಿ ಸ್ಟೋಲ್ ತಯಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದೆ.

ಜಿಲ್ಲೆಯಲ್ಲಿ ದೇಶೀಯ ಕ್ರೈಸ್ತರ ನಾಯಕತ್ವದಲ್ಲಿ ಸಹಾಯಕ ಸಂಘಗಳು : 1900ರಿಂದಲೇ ಮಿಶನರಿಗಳು ಸ್ಥಾಪಿಸಿದ ಸಂಘ ಸಂಸ್ಥೆಗಳು ಮುನ್ನಡೆಯಲು ಪಣತೊಟ್ಟ ಹಲವು ದೇಶೀಯ ನಾಯಕರುಗಳಲ್ಲಿ ನಾವು ಸ್ಥಳೀಕವಾಗಿಯೇ ವಿದೇಶಿ ನೆರವಿಲ್ಲದೆ ಬದುಕಲು ಕಲಿಯಬೇಕು ನಮ್ಮಿಂದಲೇ ಆರ್ಥಿಕವಾಗಿ ಹಿಂದುಳಿದವರಿಗೆ ನೆರವು ಸಿಗಬೇಕು ಎನ್ನುವ ಛಲ ಇತ್ತು. 1886ರಲ್ಲಿ ಕೆನರಾ ಕ್ರಿಶ್ಚನ್ ಪ್ರೊವಿಡೆಂಟ್ ಫಂಡ್ ಎಂಬ ಸಂಸ್ಥೆಯೊಂದು ಸ್ಥಾಪನೆಯಾಗಿ ಸುಮಾರು 50 ವರ್ಷಗಳವರೆಗೆ ಮುನ್ನಡೆಯುತ್ತಿತ್ತು. ಮರಣ ಸಂದರ್ಭದಲ್ಲಿ, ಅಸೌಖ್ಯದಲ್ಲಿದ್ದಾಗ ನೆರವು ನೀಡುವುದಕ್ಕಾಗಿ ಈ ಸಂಸ್ಥೆಯಲ್ಲಿ ವ್ಯವಸ್ಥೆಯಿತ್ತು. ತುಳುನಾಡಿನ (ದ.ಕ. ಮತ್ತು ಉಡುಪಿ) ಸುಮಾರು 500 ಮಂದಿ ಸದಸ್ಯರಿದ್ದರು. ಕೆಲಸ ಮಾಡುವವರು ರೂಪಾಯಿ ಒಂದರಂತೆ ಶುಲ್ಕ ತೆರಬೇಕಿತ್ತು. ಮಂಗಳೂರಿನಲ್ಲಿ 'ಕೆನರಾ ಕ್ರೈಸ್ತ ಉಪಾಧ್ಯಾಯರ ಕುಟುಂಬ ಸಹಾಯಕ ಸಂಘ' (1915) ಕೆನರಾ ಕ್ರೈಸ್ತ ವಿದ್ಯಾನಿಧಿ (1928) ಬಲ್ಮಠ ಕ್ರೈಸ್ತ ಬಡವರ ಸಂಘ(1951) ಮುಂತಾದವುಗಳು ಸ್ಥಾಪನೆಗೊಂಡು

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

97 [ 98 ] ಕ್ರೈಸ್ತರಿಗೆ ಸಹಾಯಕವಾಗಿದ್ದವು. ಈಗ ಮುನ್ನಡೆಯುತ್ತಿರುವ ಕ್ರೈಸ್ತ ಉತ್ತರಕ್ರಿಯೆ ಸಹಾಯಕ ಸಂಘ, ಜೆಪ್ಪು (1901) ಮಂಗಳೂರು ಪ್ರೊಟೆಸ್ಟಂಟ್ ಕ್ರಿಶ್ಚನ್ ಫ್ರೆಂಡ್ ಇನ್ ನೀಡ್ ಸೊಸೈಟಿ(1911) ಪ್ರೊಟೆಸ್ಟಂಟ್ ಕ್ರಿಶ್ಚನ್ ಕೋ ಅಪರೇಟಿವ್ ಸೊಸೈಟಿ (1918) ಜಪ್ಪು ಕ್ರಿಶ್ಚನ್ ಬರಿಯೆಲ್ ಎಯಿಡ್ ಸೊಸೈಟಿ(1951) ಬಲ್ಮಠ ಕ್ರೈಸ್ತ ಬಡವರ ಸಂಘ(1951) ಮುಂತಾದವುಗಳು ಈಗಲೂ ಸಭಾ ಆಡಳಿತದಿಂದ ಹೊರಗಿದ್ದುಕೊಂಡು ಮುನ್ನಡೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. 1914ರ ಮಹಾಯುದ್ಧದ ಸಂದರ್ಭದಲ್ಲಿ ಉಂಟಾದ ಸಂಕಷ್ಟಕ್ಕಿಂತ ಮೊದಲೇ ಸಭಾ ಆಡಳಿತಕ್ಕಿಂತ ಹೊರಗೆ ಇದ್ದು ಸಮಾಜದ ಏಳಿಗೆಗಾಗಿ ಹಲವಾರು ದೇಶೀಯ ನಾಯಕರು ಪಣತೊಟ್ಟಿರುವ ನಿದರ್ಶನಗಳ ಉಲ್ಲೇಖಗಳು ಮಿಶನ್ ವರದಿಗಳಲ್ಲಿ ಸಿಗುತ್ತವೆ. ಅಲ್ಲದೆ ದೇಶೀಯ ಕ್ರೈಸ್ತರ ಮಾಲಕತ್ವದಲ್ಲಿ ಪ್ರಾರಂಭವಾಗಿ ಮುನ್ನಡೆಯುತ್ತಿದ್ದ ಹೊಸೈರಿ ಕ್ಷೇತ್ರಗಳೂ ಚರಿತ್ರೆ ಸೇರಿವೆ.

ಕ್ರಿಶ್ಚನ್ ನಿಟ್ಟಿಂಗ್ ವರ್ಕ್ಸ್: ಮಡಿಕೇರಿ ಗುಡ್ಡೆಯಲ್ಲಿದ್ದ ಶ್ರೀ ಮಿಕಾಯೇಲ್ ಮಾಬೆನ್‌ರವರು 17ಕ್ಕೂ ಮಿಕ್ಕಿ ಮಗ್ಗಗಳನ್ನು ಸ್ಥಾಪಿಸಿ ನೇಯಿಗೆ ಕೆಲಸ ಮಾಡಿಸುತ್ತಿದ್ದರು. 1920 ರಲ್ಲಿ ಅದೇ ಪರಿಸರದಲ್ಲಿ “ಕ್ರಿಶ್ಚನ್ ನಿಟ್ಟಿಂಗ್ ವರ್ಕ್ಸ್ ಎಂಬ ಸಿದ್ಧ ಉಡುಪುಗಳ ತಯಾರಿಕಾ ಘಟಕವನ್ನು ಪ್ರಾರಂಭಿಸಿ 1942 ತನಕ ನಡೆಸುತ್ತಿದ್ದರು. 20ಕ್ಕೂ ಹೆಚ್ಚು ಮಂದಿ ನೌಕರರಿದ್ದರು. 4 ಮಂದಿ ಮಾರಾಟ ಪ್ರತಿನಿಧಿಗಳು ಉತ್ಪನ್ನಗಳನ್ನು ದಕ್ಷಿಣ ಕನ್ನಡ, ಕಾಸರಗೋಡು, ಕಣ್ಣೂರು, ಕೋಯಿಕೊಡ್ ಮುಂತಾದ ಕಡೆಗಳಿಗೆ ಮಾರಾಟ ಮಾಡುತ್ತಿದ್ದು ಜಿಲ್ಲೆಯಲ್ಲಿಯೇ 2ನೆಯ ಬನಿಯನ್ ಉತ್ಪಾದನಾ ಘಟಕವೆಂಬ ಹೆಸರು ಪಡೆದಿತ್ತು.

ಪ್ರೊಟೆಸ್ಟಾಂಟ್ ಕ್ರಿಶ್ಚನ್ ಕೋ ಅಪರೇಟಿವ್ ಸೊಸೈಟಿ ಸ್ಥಾಪಿಸಿದ ಕೈಗಾರಿಕಾ ಶಾಖೆ : 1918ರಲ್ಲಿ ಮಂಗಳೂರಿನ ಬಲ್ಮಠ ಮಿಶನ್ ಕಂಪೌಂಡ್‌ನಲ್ಲಿ ಪ್ರಾರಂಭಗೊಂಡ ಪ್ರೊಟೆಸ್ಟಾಂಟ್ ಕ್ರಿಶ್ಚನ್ ಕೋ ಅಪರೇಟಿವ್ ಸೊಸೈಟಿ ಬ್ಯಾಕಿಂಗ್ ವ್ಯವಹಾರವನ್ನು ಮಾತ್ರ ನಡೆಸುತ್ತಿತ್ತು. 1939 ಸಂಘದ ಸದಸ್ಯರಿಗೆ ಮತ್ತು ಸಮಾಜ ಬಾಂಧವರಿಗೆ ಕೆಲಸವನ್ನು ಕಲ್ಪಿಸಿಕೊಟ್ಟು ನಿರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಕೈಗಾರಿಕಾ ಶಾಖೆಯನ್ನು ಬಾಡಿಗೆ ಕಟ್ಟಡದಲ್ಲಿ ಪ್ರಾರಂಭಿಸಿತು. ಸಂಘವು ಬರೇ ಸಾಲವನ್ನು ಕೊಡುವ ಸಂಸ್ಥೆಯಾಗಿ ಮುಂದುವರಿದರೆ ಸಾಲದು ಅದರ ಕಾರ್ಯಕ್ಷೇತ್ರವನ್ನು ವಿಸ್ತರಿಸಬೇಕೆಂಬ ಉದ್ದೇಶದಿಂದ ಪ್ರಾರಂಭವಾದ ಈ ಸಂಸ್ಥೆಯಿಂದ ಬನಿಯನುಗಳನ್ನು ತಯಾರಿಸುವ ಕಾರ್ಯಾಚರಣೆ ಆರಂಭವಾಯಿತು. ಇದಕ್ಕೆ ಪ್ರತ್ಯೇಕ ಪಾಲುದಾರರ ವ್ಯವಸ್ಥೆ ಮಾಡಲಾಗಿದ್ದು

98

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...'

[ 99 ]

ಕೈಗಾರಿಕಾ ವಿಭಾಗವು ಆರ್ಥಿಕ ಸ್ಥಿತಿ ಬಲಗೊಳ್ಳುವವರೆಗೆ ಸುಮಾರು 25ರಿಂದ 30 ಕೆಲಸಗಾರರಿಗೆ ವೇತನ ನೀಡುವ ವ್ಯವಸ್ಥೆಯನ್ನು ಸಂಘವೇ ಬರಿಸಿತು.,

ಬಾಸೆಲ್ ಮಿಶನ್‌ನವರಿಂದ ಮಂಗಳೂರಿನಲ್ಲಿ ಪ್ರಾರಂಭಿಸಲ್ಪಟ್ಟ ನೇಯಿಗೆ ಕಾರ್ಖಾನೆಯನ್ನು 1914ರ ಮಹಾಯುದ್ಧದ ನಂತರ ಕಾಮನ್‌ವೆಲ್ತ್ ಸಂಸ್ಥೆಯು ನಡೆಸುತ್ತಿತ್ತು. ಕಾಮನ್‌ವೆಲ್ತ್ ಈ ಕ್ಷೇತ್ರವನ್ನು ಕೈಗೆತ್ತಿಕೊಂಡಾಗ ಹಲವಾರು ಕೆಲಸಗಾರರು ಇಲ್ಲಿ ಕೆಲಸ ಕಳಕೊಂಡಿದ್ದರು ಇಲ್ಲವೇ ವೈಯಕ್ತಿಕ ಕಾರಣಗಳಿಂದ ಸೇವೆಯನ್ನು ಬಿಟ್ಟಿದ್ದರು. ಇವರಲ್ಲಿ ಹಲವರು ಬನಿಯನು ತಯಾರಿಸುವಲ್ಲಿ ಹಾಗೂ ಹೊಲಿಗೆಯಲ್ಲಿ ಪರಿಣಿತರಾಗಿದ್ದ ಸ್ತ್ರೀ ಪುರುಷರು ಇದ್ದುದರಿಂದ ಅವರನ್ನೇ ಇಲ್ಲಿ ಕೆಲಸಕ್ಕೆ ಬಳಸಿಕೊಂಡದ್ದರಿಂದ ನೌಕರರ ಸಮಸ್ಯೆ ಬರದೆ ಅನುಕೂಲವೂ ಆಯಿತು. ಆದರೆ ಉತ್ಸಾಹದಿಂದ ಆರಂಭವಾದ ಕೈಗಾರಿಕಾ ಶಾಖೆಯು ಆರಂಭದ ಮೂರು ವರ್ಷಗಳಲ್ಲಿ ಅತ್ಯಂತ ಚಿಂತೆಗೆ ಗುರಿ ಮಾಡಿತು. ಭಾರತದಲ್ಲಿ ನಡೆಯುತ್ತಿದ್ದ ಯುದ್ಧದ ಪರಿಣಾಮದಿಂದ ನೂಲಿನ ಕ್ರಯವು ಮಿತಿ ಮೀರಿದ್ದು ಮಾತ್ರವಲ್ಲದೆ ಖರೀದಿದಾರರು ಸೂಕ್ತ ಸಮಯಕ್ಕೆ ದೊರೆಯದೆ ಹೋದದ್ದು ಹಾಗೂ ಯಂತ್ರಗಳಿಗೆ ಅವಶ್ಯವಾದ ಸೂಜಿ ಮೊದಲಾದ ಉಪಕರಣಗಳು ಸಿಗದೆ ಇದ್ದು ಹಲವು ಸಂಕಷ್ಟಗಳಿಗೆ ಒಳಗಾಗಬೇಕಾಯಿತು. ಆರಂಭದ ಮೂರು ವರ್ಷಗಳಲ್ಲಿ ನಷ್ಟವೂ ಉಂಟಾಯಿತು. ಆದರೆ ಕೈಗಾರಿಕಾ ಕ್ಷೇತ್ರದಲ್ಲಿ ನುರಿತ ಅನುಭವವನ್ನು ಪಡೆದಿರುವುದರಿಂದ ಸ್ವಲ್ಪ ಮಟ್ಟಿನ ಪರಿಹಾರ ಕಂಡುಕೊಂಡು ಉತ್ಪಾದನೆಯನ್ನು ಮುಂದುವರಿಸುತ್ತಿತ್ತು. ಸಮಯದಲ್ಲಿ ಈ ಶಾಖೆಯಲ್ಲಿ 23 ಮಂದಿ ಸ್ತ್ರೀ ಪುರುಷ ನೌಕರರಿದ್ದರು. ಬಟ್ಟೆಗಳಿಗೆ ಬಣ್ಣಹಾಕಲು ಬೇಕಾದ ಸಿಮೆಂಟಿನಿಂದ ನಿರ್ಮಿಸಿದ ಟ್ಯಾಂಕ್‌ಗಳು ಇದ್ದವು. 1942ರಿಂದ ಸಂಘವು ಸ್ವಂತ ಸ್ಥಳಕ್ಕೆ ಸ್ಥಳಾಂತರವಾದಾಗ ಕೈಗಾರಿಕಾ ಶಾಖೆಯೂ ಇಲ್ಲಿಯೇ ಕಾರ್ಯವೆಸಗತೊಡಗಿತು. ಸಂಸ್ಥೆಯನ್ನು ಮದ್ರಾಸಿನ ಹ್ಯಾಂಡ್‌ಲೂಮ್ ವೀವರ್ ಪ್ರೊವಿನ್ಶಿಯಲ್ ಕೋ- ಒಪರೇಟಿವ್ ಸೊಸೈಟಿಗೆ ಸಂಯೋಜಿಸಿದ್ದು ಮದ್ರಾಸ್‌ನಿಂದ ನೂಲು, ಬಟ್ಟೆ ಇತರ ಸಾಮಾಗ್ರಿಗಳನ್ನು ರಿಯಾಯತಿ ದರದಲ್ಲಿ ಪಡೆದುಕೊಳ್ಳುತ್ತಿತ್ತು. 1947ರಲ್ಲಿ ಸಂಘದ ಚಟುವಟಿಕೆ ಹಾಗೂ ಕೈಗಾರಿಕಾ ಘಟಕದ ಕಾರ್ಯಚಟುವಟಿಕೆಗಳ ನಿಮಿತ್ತವಾಗಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲು ಬಲ್ಮಠದಲ್ಲಿದ್ದ ಮಿಶನ್ ಶಾಲೆಯ ಪಕ್ಕದಲ್ಲಿದ್ದ ಕೋಣೆಯೊಂದನ್ನು ಬಾಡಿಗೆಗೆ ಪಡೆದುಕೊಂಡು ಮುಂದುವರಿಸುತ್ತಿದ್ದರೂ ಈ ಸಂಸ್ಥೆ 1954ರಲ್ಲಿ ಸ್ಥಗಿತಗೊಂಡಿತು.
ಸ್ಮಾನಿ ಹೊಸೈರಿ: ಕಂಕನಾಡಿಯಲ್ಲಿ ವಾಸವಾಗಿದ್ದ ಶ್ರೀಯುತ ಸ್ವಾನಿ ಜಾಕೋಬ್

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 100 ]ಬಂಗೇರರವರು ತಮ್ಮ ಮನೆಯಲ್ಲಿ “ಸ್ಟ್ಯಾನ್ಲಿ ಹೊಸೈರಿ” ಎಂಬ ಹೆಸರಿನಲ್ಲಿ 1965ರಲ್ಲಿ ಒಳ ಉಡುಪುಗಳ ಉತ್ಪಾದನಾ ಘಟಕವನ್ನು ಪ್ರಾರಂಭಿಸಿದರು. ತಿರುಪುರದಿಂದ ಬಟ್ಟೆಗಳನ್ನು ಖರೀದಿಸಿ ಬನಿಯನ್, ಶಾರ್ಟ್ಸ್, ಸ್ಪೋಟ್ಸ್ ಬ್ರಾಗಳನ್ನು ತಯಾರಿಸುತ್ತಿದ್ದರು. 15 ವರ್ಷಗಳ ಕಾಲ ಉತ್ಪಾದನೆ ಮಾಡುತ್ತಿದ್ದ ಈ ಸಂಸ್ಥೆ ನೌಕರರ/ಕಚ್ಚಾಮಾಲುಗಳ ಕೊರತೆಗಳ ಸಮಸ್ಯೆಯಿಂದ ಉತ್ಪಾದನೆ ಮಾಡುವುದನ್ನು ನಿಲ್ಲಿಸಿ ತಿರುಪುರದಲ್ಲಿ ತಯಾರಿಸಿದ ಒಳ ಉಡುಪುಗಳನ್ನು ತರಿಸಿ ಸ್ಟ್ಯಾನ್ಲಿ ಹೊಸೈರಿ ಹೆಸರಿನಲ್ಲಿ ಮಾರಾಟ ಮಾಡಲು ಪ್ರಾರಂಭವಾಯಿತು. 1985ರಲ್ಲಿ ಸ್ಥಾಪಕರು ನಿಧನರಾದರೂ ಅವರ ಪತ್ನಿ ಉಳ್ಳಾಲ ಬಿ.ಇ.ಎಂ.ಶಾಲೆಯಲ್ಲಿ ಶಿಕ್ಷಕಿ/ ಮುಖ್ಯೋಪಾಧ್ಯಾಯಿನಿ ಆಗಿದ್ದ ರಾಷ್ಟ್ರ ಪ್ರಶಸ್ಥಿ ವಿಜೇತೆ ಶ್ರೀಮತಿ ಲೆಟಿಶಿಯಾ ಇವಾಂಜಲಿನ್‌ರವರು ಒಂದೆರಡು ನೌಕರರ ಮೂಲಕ ಆಮದು ಮಾಡಿಕೊಂಡ ಉತ್ಪನ್ನಗಳನ್ನು 2000ನೇ ಇಸವಿ ತನಕವೂ ಮಾರಾಟ ಮಾಡುವ ವ್ಯವಸ್ಥೆ ಮಾಡುತ್ತಿದ್ದರು.

ಬಲ್ಮಠ ಹೊಸೈರಿ: 1970ರಲ್ಲಿ ಕೋಮನ್‌ವೆಲ್ತ್‌ನವರು ನಡೆಸುತ್ತಿದ್ದ ಹೊಸೈರಿ ಸಂಸ್ಥೆ ಮುಚ್ಚಲ್ಪಟ್ಟು ಪ್ರಸ್ತುತ ಕುಮುದಾವತಿ ಕಟ್ಟಡವಿರುವ ಸ್ಥಳದಲ್ಲಿದ್ದ ಜಾಡುಕೋಣೆ ಎಂಬ ಹೆಸರಿನ ಕಟ್ಟಡವನ್ನೂ ಮತ್ತು ಈ ಪ್ರೆಸ್ ಇರುವ 1907ರಲ್ಲಿ ನಿರ್ಮಿಸಲ್ಪಟ್ಟ ನೆಯಿಗೆ ಕಾರ್ಖಾನೆಯ ಕಟ್ಟಡ ಸೇರಿ 3.50 ಎಕ್ರೆ ಸ್ಥಳವನ್ನು ರೆವೆ. ಸಿ.ಡಿ. ಜತ್ತನ್ನರವರ ನಾಯಕತ್ವದಲ್ಲಿ ಕಾಸೆಸ್ ಸಂಸ್ಥೆ ಪಡೆದುಕೊಂಡು ಅದೇ ಕಟ್ಟಡದಲ್ಲಿ 1978ರಿಂದ 'ಬಲ್ಮಠ ಹೊಸೈರಿ' ಎಂಬ ಸಂಸ್ಥೆಯೊಂದನ್ನು ಪ್ರಾರಂಭಿಸಿ ಒಳ ಉಡುಪುಗಳನ್ನೂ ಮಗ್ಗದ ಸೀರೆ, ಧೋತಿಗಳನ್ನು ತಯಾರು ಮಾಡುತ್ತಿತ್ತು. ಬನಿಯನ್ ತಯಾರಿಸುವ ಮಿಶನ್‌ಗಳು, ಎರಡು ಮಗ್ಗಗಳು ಇದ್ದವು. ಇಲ್ಲಿ ತಯಾರಾಗುವ ಉತ್ಪನ್ನಗಳನ್ನು ಮಾರಾಟ ಮಾಡಲು ಬಲ್ಮಠ ಗಾರ್ಮೆಂಟ್ ಶಾಪ್ ಎಂಬ ಹೆಸರಿನ ಮರಾಟ ಮಳಿಗೆಯೂ ಕಾರ್ಯಾಚರಿಸುತ್ತಿತ್ತು.

ಬಲ್ಮಠದಲ್ಲಿದ್ದ ಶ್ರೀಯುತ ಫ್ರೆಡ್ರಿಕ್ ಬಂಗೇರರವರು ಸುಮಾರು 15 ವರ್ಷಗಳ ಕಾಲ ತಿರುಪುರದಿಂದ ಬಟ್ಟೆಗಳನ್ನು ತರಿಸಿ ಬನಿಯನುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದುದು ಮಾತ್ರವಲ್ಲದೆ ಸಿದ್ಧಪಡಿಸಿದ ಒಳ ಉಡುಪು, ಬನಿಯನ್‌ಗಳನ್ನು ತರಿಸಿ ಮಾರಾಟ ಮಾಡಿಸುತ್ತಿದ್ದರು.

ಬಲ್ಮಠ ಕೈಗಾರಿಕಾ ಕೆಲಸಗಾರರ ಸಹಕಾರ ಸಂಘದ ಸ್ಥಾಪನೆ ಪ್ರೊಟೆಸ್ಟಂಟ್ ಕ್ರಿಶ್ಚನ್ ಸಹಕಾರ ಸಂಘವು 1939ರಲ್ಲಿ ಪ್ರಾರಂಭ ಮಾಡಿದ ಕೈಗಾರಿಕಾ ವಿಭಾಗವು 1954ರಿಂದ ಸ್ಥಗಿತಗೊಂಡಿತು. ಮಿಶನರಿಗಳ ಸೇವೆಯ ಮುಂದುವರಿ 100 0 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು. [ 101 ]ಕೆಯಾದ ಸಂಸ್ಥೆಯು ಮುಚ್ಚಿದ್ದರಿಂದ ಬಲ್ಮಠದಲ್ಲಿರುವ ಹಲವು ಸಹೃದಯರು ಸೇರಿ ಹಲವು ಬಾರಿ ಚರ್ಚಿಸಿ ಯಾಕೆ ಮಂಗಳೂರಿನಲ್ಲಿ ಬಾಸೆಲ್ ಮಿಶನ್ ಕಾರ್ಖಾನೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ನಾವೆಲ್ಲರೂ ಸೇರಿ ಒಂದು ಸಹಕಾರ ಸಂಘವನ್ನು ಸ್ಥಾಪಿಸಬಾರದೆಂಬ ನಿರ್ಧಾರಕ್ಕೆ ಬಂದರು. ಹಲವರ ಪ್ರಯತ್ನದಿಂದ ಈ ಸಂಘ ಸ್ಥಾಪನೆಯ ರೂಪುರೇಖೆಗಳನ್ನು ನಿರ್ಮಿಸಿ ಈ ಸಂಘಕ್ಕೆ “ಮಂಗಳೂರು ಕೈಗಾರಿಕ ಕೆಲಸಗಾರರ ಸಹಕಾರ ಸಂಘ' ಎಂಬ ಹೆಸರಿನಿಂದ 6-12-1957ರಲ್ಲಿ ಸರಕಾರದಿಂದ ನೊಂದಣಿ ಮಾಡಲಾಯಿತು.

ಸರಕಾರದ ಸಣ್ಣ ಕೈಗಾರಿಕಾ ಘಟಕದ ಜೊತೆ ನಿರ್ದೇಶಕರು ಬಲ್ಮಕೋ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿ ಅಧಿಕೃತವಾಗಿದೆ ಎಂದು ಘೋಷಿಸಿದ್ದರಿಂದ ಸಿದ್ದ ಉಡುಪು ತಯಾರಿಕೆಯ ಘಟಕಕ್ಕೆ ಹುರುಪನ್ನು ತಂದು ಕೊಟ್ಟಿತು. ಕಾಮನ್‌ವೆಲ್ತ್ ಹೊಸೈರಿಯಲ್ಲಿ ಸೇವೆ ಸಲ್ಲಿಸಿ ರಾಜಿನಾಮೆ ಕೊಟ್ಟಿರುವ ಕೆಲವರ ಸಹಾಯದಿಂದ ಘಟಕಕ್ಕೆ ಬೇಕಾದ ತಯಾರಿಗಳು ನಡೆದು ಕೆಲಂಡರಿಂಗ್‌, ಓವರ್‌ಲಾಕ್, ಟೈಟಿಂಗ್ ಮೆಷಿನ್‌ಗಳು ಬಂದು ಪ್ರಾಯೋಗಿಕ ಉತ್ಪನ್ನಗಳ ತಯಾರು ಆರಂಭವಾಯಿತು. 1961ರಿಂದ ಕ್ರಮಪ್ರಕಾರವಾಗಿ ಬಲ್ಮಕೋ ಉತ್ಪನ್ನಗಳು ಮಾರುಕಟ್ಟೆಗೆ ಬಿಡುಗಡೆಯಾಯಿತು. 1965ರಲ್ಲಿ ಕಾಮನ್‌ವೆಲ್ತ್ ಕಾರ್ಖಾನೆ ಮತ್ತು ತಿರುಪುರ, ಲೂಧಿಯಾನದಿಂದ ಬಟ್ಟೆಗಳನ್ನು ಪಡೆದುಕೊಳ್ಳುತ್ತಿತ್ತು. ಕಾಮನ್‌ವೆಲ್ತ್ ಘಟಕ ಮುಚ್ಚುವ ತನಕ ಫೀಚ್ ಆಗುತ್ತಿದ್ದ ಬಟ್ಟೆಗಳೇ ಇಲ್ಲಿ ಸಿಗುತ್ತಿದ್ದವು. ಅನಂತರ ಬೇರೆ ಕಡೆಗಳಿಂದ ಬಟ್ಟೆಗಳನ್ನು ತರಿಸಲಾಗುತ್ತಿದ್ದು ಸಂಘದಲ್ಲಿ ಭೀಚಿಂಗ್ ವ್ಯವಸ್ಥೆ ಇಲ್ಲದ್ದರಿಂದ ತಿರುಪುರಕ್ಕೆ ಕಳುಹಿಸಿ ಬೀಚ್ ಮಾಡಿಸಿ ತರಲಾಗುತ್ತಿತ್ತು.

1967 ರಿಂದ ಹಲವು ವರ್ಷಗಳ ಕಾಲ ನೆಹರೂ ಮೈದಾನದಲ್ಲಿ ಡಿಸೆಂಬರ್- ಜನವರಿಯಲ್ಲಿ 20 ದಿವಸಗಳ ಕಾಲ ನಡೆಯುತ್ತಿದ್ದ ಅಖಿಲ ಭಾರತ ಕೈಗಾರಿಕೆ ಮತ್ತು ಕೃಷಿ ಪ್ರದರ್ಶನದಲ್ಲಿ ಸ್ಟಾಲ್ ಹಾಕಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿತ್ತು. 1969 ರಲ್ಲಿ ಕಾಮನ್‌ವೆಲ್ತ್ ಸಂಸ್ಥೆ ಮುಚ್ಚಿದ್ದು ಅದರಲ್ಲಿದ್ದ ಫೆಬ್ರಿಕ್ಸ್‌ಗಳನ್ನೂ, ನಿಟ್ಟಿಂಗ್ ಮೆಷಿನ್‌ಗಳನ್ನೂ ಕ್ರಯಕ್ಕೆ ಪಡೆದುಕೊಳ್ಳಲಾಗಿತ್ತು ಮಾತ್ರವಲ್ಲದೆ ಅಲ್ಲಿ ಸೇವೆಯಲ್ಲಿದ್ದ ಇಬ್ಬರು ನೌಕರರು ಇಲ್ಲಿ ಸೇವೆಗೆ ಸೇರಿದರು. 1957ರಲ್ಲಿ 27 ಪಾಲು ಬಂಡವಾಳದಾರರನ್ನು ಹೊಂದಿ ಸ್ಥಾಪನೆಯಾದ ಈ ಸಂಸ್ಥೆಗೆ 60 ಸಂವತ್ಸರಗಳು ತುಂಬಿವೆ. ಪ್ರಸ್ತುತ 300 ಪಾಲು ಬಂಡವಾಳದಾರರು ಇದ್ದಾರೆ. ಏಳು ಬೀಳುಗಳ ಮಧ್ಯೆ 60 ವರ್ಷಗಳಲ್ಲಿ ಹಲವಾರು ಮಹಿಳೆಯರು,

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 101 [ 102 ] ಪಾಲುದಾರರು, ನಿರ್ದೇಶಕರುಗಳು, ಉಪಾಧ್ಯಕ್ಷರುಗಳು, ಅಧ್ಯಕ್ಷರುಗಳು, ಕಾರ್ಯದರ್ಶಿಗಳು, ನೌಕರರು, ಖರೀದಿದಾರರು, ಮಾರಾಟ ಪ್ರತಿನಿಧಿಗಳು ಸಂಸ್ಥೆಯ ಏಳಿಗೆಗಾಗಿ ಸೇವೆ ಸಲ್ಲಿಸಿದ್ದಾರೆ. 5 ಮಂದಿ ಉದ್ಯೋಗಿಗಳಿರುವ ಈ ಸಂಸ್ಥೆ ಉತ್ಪನ್ನಗಳಾದ ಬನಿಯನು, ಸ್ಲಿಪ್, ಸ್ಕರ್ಟ್, ಟೈಟ್, ನುಸಿ ಪರದೆ, ಮಾಗಳನ್ನು ಉತ್ಪಾದಿಸುತ್ತಿದೆ.

ಪರಾಮರ್ಶನ ಸೂಚಿ 1. ಬಲಕೋ ವರದಿಗಳು 1957-2018 2. Silver Jubilee Souvenir, 1918-1943 Protestant Christian co-operative society.Mangalore, 3. Centenary Souvenir 1862-1962, Shanthi Church, Balmatta 4. PCC Society, Balmatta Mangalore Centenary Sovenir 2018 5. ಸತ್ಯವ್ರತ ಪತ್ರಿಕೆ, 1928

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 103 ]

{{{1}}}

ಮಂಗಳೂರಿನಲ್ಲಿ ಬ್ರಿಟೀಷರು ನಿರ್ಮಿಸಿದ ಸಂತಪೌಲನ ದೇವಾಲಯ

ಭಾರತಕ್ಕೆ 1834ರಲ್ಲಿ ಬಂದ ಬಾಸೆಲ್ ಮಿಶನರಿಗಳು ಮಂಗಳೂರಿನಲ್ಲಿ ಕ್ರೈಸ್ತ ದೇವಾಲಯಗಳನ್ನು ಸ್ಥಾಪಿಸುವುದಕ್ಕಿಂತ ಮುಂಚೆ ಬ್ರಿಟೀಷ್ ಸರಕಾರವು ತಮ್ಮ ಅಧಿಕಾರಿಗಳು ಮತ್ತು ಸೈನಿಕರ ಆರಾಧನೆಗಾಗಿ ಮಂಗಳೂರಿನಲ್ಲಿ ಆರಂಭಿಸಿದ ಆರಾಧನಾ ಕೇಂದ್ರಕ್ಕೆ ನೂತನವಾಗಿ ನಿರ್ಮಿಸಲ್ಪಟ್ಟ ಮಂಗಳೂರಿನಲ್ಲಿನ ಸ್ಟೇಟ್‌ ಬ್ಯಾಂಕ್ ವೃತ್ತದ ಪರಿಸರದಲ್ಲಿರುವ ಸಂತ ಪೌಲನ ದೇವಾಲಯ 1843ರಲ್ಲಿ ಪ್ರತಿಷ್ಠೆಗೊಂಡಿದೆ.

ಬ್ರಿಟಿಷರ ಆಡಳಿತ ಅವಧಿಯಾದ 1799-1862ಕ್ಕಿಂತಲೂ ಹಿಂದೆ ಟಿಪ್ಪು ಸುಲ್ತಾನರ ಆಡಳಿತ ಅವಧಿಯಲ್ಲಿ ಇಂಗ್ಲಿಷರ ಸೈನ್ಯದ ತುಕಡಿಗಳಿದ್ದು ಮಂಗಳೂರಿನಲ್ಲಿ ಬ್ರಿಟಿಷ್ ಸಂಪರ್ಕವಿದ್ದು ಆಗಲೇ ಬ್ರಿಟೀಷರ ಆರಾಧನಾ ಸ್ಥಳವಿದ್ದಿರಬೇಕು. ಯಾಕಂದರೆ ಈ ದೇವಾಲಯದ ಅಧೀನದಲಿರುವ ಸ್ಮಶಾನ ಭೂಮಿ ಆವರಣದಲ್ಲಿರುವ ನಿಧನ ಹೊಂದಿದ ಬ್ರಿಟಿಷರ ಸ್ಮಾರಕಗಳು ಇಲ್ಲಿವೆ. 1800 ನವೆಂಬರ್ 26ರಲ್ಲಿ ಮಂಗಳೂರಿನಲ್ಲಿ ನಿಧನರಾದ ಬ್ರಿಗೆಡಿಯರ್ ಜನರಲ್ ಜಾನ್ ಕಾರ್ನಿಕ್ ಮತ್ತು ಹಲವು ಬ್ರಿಟಿಷ್ ಅಧಿಕಾರಿಗಳ ಸ್ಮಾರಕಗಳು ಅಲ್ಲಿವೆ.

1837ರಲ್ಲಿ ನಡೆದ ಕೊಡಗು ದಂಗೆಯ ಬಳಿಕ ಜಿಲ್ಲೆಯಲ್ಲಿ ಈಸ್ಟ್ ಇಂಡಿಯ ಕಂಪೆನಿ ತನ್ನ ಸೈನ್ಯ ಬಲವನ್ನು ಹೆಚ್ಚಿಸಿದಾಗ ಬ್ರಿಟಿಷ್ ಸೈನಿಕರ ಆಧ್ಯಾತ್ಮಿಕ ನೈತಿಕ ಅಗತ್ಯತೆಗಳಿಗೆ ವಿಶಾಲವಾದ ಚರ್ಚ್‌ನ ಅಗತ್ಯತೆ ಕಂಡುಬಂದು 1840ರಲ್ಲಿ ಇಲ್ಲಿಯೇ ವಾಸಿಸುವ ಧರ್ಮಗುರುವನ್ನು ನೇಮಿಸಲಾಗಿತ್ತು. ಆಗ ಇಲ್ಲಿ ಧರ್ಮಗುರುವಾಗಿದ್ದ ರೆವೆ. ಆರ್. ಡಬ್ಲ್ಯೂ, ವೈಟ್‌ಫೋರ್ಡ್ ನಾಯಕತ್ವದಲ್ಲಿ ಪ್ರಯತ್ನಗಳು ನಡೆದು 1841ರಿಂದ ಇಲ್ಲಿ ಚರ್ಚ್ ಕಟ್ಟುವ ಪ್ರಕ್ರಿಯೆ ಪ್ರಾರಂಭವಾಗಿ 1843ರಲ್ಲಿ ಪ್ರತಿಷ್ಟೆಗೊಂಡಿತು. ಮಿಲಿಟರಿ ಬೋರ್ಡ್‌ನ ನಾಯಕತ್ವದಲ್ಲಿ 120 ಮಂದಿ ಕುಳಿತುಕೊಳ್ಳುವ ಸಣ್ಣ ಪ್ರಾರ್ಥನಾಲಯವಾಗಿದ್ದು ಮದ್ರಾಸ್‌ನಿಂದ ಬಂದ ಚರ್ಚ್ ಆಫ್ ಇಂಗ್ಲೆಂಡ್‌ನ ಬಿಷಪ್ ಸ್ಪೆನ್ಸರ್‌ರಿಂದ ಉದ್ಘಾಟನೆಗೊಂಡಿತು. ಅದೇ ದಿನ ನವೀಕೃತಗೊಂಡ ಸ್ಮಶಾನ ಭೂಮಿಯನ್ನು ಉದ್ಘಾಟನೆ ಮಾಡಲಾಗಿತ್ತು. 1852ರಲ್ಲಿ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 103 [ 104 ] ದೇವಾಲಯದ ಗೋಪುರದಲ್ಲಿ ಬಾಸೆಲ್ ಮಿಶನ್ ನಿರ್ಮಿತ ರೆವೆ. ಎಸ್. ಮಿಲ್ಲರ್ ನಾಯಕತ್ವದಲ್ಲಿ ತಯಾರಾದ ಬೃಹತ್ ಗಡಿಯಾರವನ್ನು ಅಳವಡಿಸಲಾಗಿದ್ದು ಈಗಲೂ ಸುಸ್ಥಿತಿಯಲ್ಲಿದ್ದು ಮಂಗಳೂರಿನಲ್ಲಿ ಈಗ ಪ್ರತಿಷ್ಟಾಪಿಸಲಿರುವ ಕ್ಲಾಕ್ ಟವರ್ ಸ್ಥಳದಲ್ಲಿ 1968ರಲ್ಲಿ ವಾಮನ್ ನಾಯಕ್ ಸಂಸ್ಥೆ ಪ್ರತಿಷ್ಠಾಪಿಸಿದ್ದ ಘಂಟೆ ಸ್ಥಾಪನೆ ಆಗುವ ತನಕ ಮಂಗಳೂರಿಗೆ ಸಮಯ ತಿಳಿಸುವ ಏಕೈಕ ಗಡಿಯಾರ ಇದಾಗಿತ್ತು. ದೇವಾಲಯದ ಪರಿಸರದಲ್ಲಿ ಸ್ಥಾಪನೆಗೊಂಡ ಗಡಿಯಾರವನ್ನೇ ಕಂಡು 12 ಘಂಟೆಗೆ ಗುಂಡು ಹಾರಿಸುವ ಕ್ರಮವಿತ್ತು. ಸಂತ ಪೌಲನ ದೇವಾಲಯದ ಗಡಿಯಾರವನ್ನು ವಾಮನ್ ನಾಯಕ್ ಸಂಸ್ಥೆಯವರೇ ಹಲವಾರು ವರ್ಷಗಳವರೆಗೆ ದುರಸ್ಥಿ ಮಾಡುತ್ತಿದ್ದರು.

1834ರಲ್ಲಿ ಮಂಗಳೂರಿನ ನೀರೇಶ್ವಾಲ್ಯ ಪರಿಸರದಲ್ಲಿ ಬಾಸೆಲ್ ಮಿಶನ್ ಸ್ಥಾಪಿಸಿದ ಸಣ್ಣ ಪ್ರಾರ್ಥನಾ ಮಂದಿರವಿದ್ದರೂ ಇಂಗ್ಲಿಷ್ ಆರಾಧನೆಗಾಗಿ ಬಾಸೆಲ್ ಮಿಶನರಿಗಳು 1862 ತನಕ ಸಂತ ಪೌಲನ ದೇವಾಲಯಕ್ಕೆ ಆರಾಧನೆಗೆ ಹೋಗುತ್ತಿದ್ದುದು ಮಾತ್ರವಲ್ಲದೆ ಆರಾಧನೆಯ ವಿಧಿವಿಧಾನಗಳನ್ನೂ ನಡೆಸುತ್ತಿದ್ದರು. ಇಲ್ಲಿ ನೇಮಕಗೊಂಡ ಚಾಪ್ಲಿನ್ ಮಡಿಕೇರಿಯಲ್ಲಿದ್ದ ಸಂತ ಮಾರ್ಕನ ದೇವಾಲ ಯದ ಚಾಪ್ಲಿನ್ ಆಗಿಯೂ ಸೇವೆ ಸಲ್ಲಿಸುತ್ತಿದ್ದರು. ಮದ್ರಾಸ್ ಪ್ರೆಸಿಡೆನ್ಸಿ ಆಡಳಿತದಲ್ಲಿದ್ದ ಸಂತ ಪೌಲನ ದೇವಾಲಯವು 1947 ನಂತರ ಕೇರಳ ಡಯಾಸಿಸ್‌ನ ಆಡಳಿತದಲ್ಲಿದ್ದರೂ ಬಾಸೆಲ್ ಮಿಶನ್ ಸಂಸ್ಥೆಯಲ್ಲಿದ್ದ ವಿದೇಶಿ ಧರ್ಮಗುರುಗಳಾದ ರವೆ, ರೋಸೆಲ್, ರೆವೆ. ಶಾಯರ್‌ಮಯ‌ ಹಾಗೂ ದೇಶಿಯ ಧರ್ಮಗುರುಗಳು ಸಹಾ ಅಲ್ಲಿ ಆರಾಧನೆ ನಡೆಸಲು ಹೋಗುತ್ತಿದ್ದರು.

1972ರಿಂದ ಈ ಈ ದೇವಾಲಯದ ಆಡಳಿತವು ಕರ್ನಾಟಕ ದಕ್ಷಿಣ ಸಭಾಪ್ರಾಂತದ ಆಡಳಿತಕ್ಕೆ ಒಳಪಟ್ಟು ಕಾರ್ಯ ನಿರ್ವಹಿಸುತ್ತಿದ್ದು, 1999ರ ತನಕ ಪ್ರಾರ್ಥನಾ ವಿಧಿವಿಧಾನಗಳನ್ನು ನಡೆಸಲು ಕರ್ನಾಟಕ ತಿಯೊಲಾಜಿಕಲ್ ಕಾಲೇಜ್‌ನಲ್ಲಿರುವ ಧರ್ಮಗುರುಗಳು ನಡೆಸುತ್ತಿದ್ದು ಪ್ರಸ್ತುತ ಡಯಾಸಿಸ್ ನೇಮಕವಾದ ಧರ್ಮಗುರುಗಳಿಂದ ಮುನ್ನಡೆಯುತ್ತಿದೆ. ಇಲ್ಲಿ ಇಂಗ್ಲಿಷ್‌ನಲ್ಲಿ ಆರಾಧನೆಗಳು ನಡೆಯುತ್ತಿದೆ. ಹಿಂದೆ ಹಲವಾರು ವರ್ಷಗಳವರೆಗೆ ಮಾರ್ಥೋಮಾ ಸಭೆಯ ಹಿನ್ನೆಲೆಯುಳ್ಳ ಕ್ರೈಸ್ತರು ಇಲ್ಲಿನ ಆರಾಧನೆಯಲ್ಲಿ ಭಾಗವಹಿಸುತ್ತಿದ್ದದರಿಂದ ಮಲಯಾಳಂ ಭಾಷೆಯಲ್ಲಿಯೂ ಆರಾಧನೆ ನಡೆಯುತ್ತಿದ್ದು ಕಳೆದ 25 ವರ್ಷಗಳಿಂದ ಬಲ್ಮಠದಲ್ಲಿ ನಿರ್ಮಾಣಗೊಂಡ ಮಾರ್ಥೋಮಾ ಸಭೆಯಲ್ಲಿ

104 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 105 ] ಅವರೆಲ್ಲರೂ ಸದಸ್ಯರಾಗಿದ್ದಾರೆ. ಪ್ರಸ್ತುತ ಸಂತ ಪೌಲನ ದೇವಾಲಯದ ವ್ಯಾಪ್ತಿಯಲ್ಲಿ ಸುಮಾರು 45 ಕುಟುಂಬಗಳವರು ಈ ದೇವಾಲಯದ ಸದಸ್ಯರಾಗಿರುವುದು ಮಾತ್ರವಲ್ಲದೆ ಬೇರೆ ಬೇರೆ ರಾಜ್ಯಗಳಿಂದ ಬರುವ ಕನ್ನಡ ತಿಳಿಯದ ಕ್ರೈಸ್ತ ವಿದ್ಯಾರ್ಥಿಗಳು ಇಲ್ಲಿನ ತಾತ್ಕಾಲಿಕ ಸದಸ್ಯರಾಗಿ ಆರಾಧನೆಗಳಲ್ಲಿ ಪಾಲ್ಗೊಳ್ಳುತ್ತಾರೆ.

ಬ್ರಿಟಿಷ್ ಸರಕಾರದ ಅಡಳಿತದಲ್ಲಿ ನಿರ್ಮಾಣವಾದ ಈ ದೇವಾಲಯವು ಬ್ರಿಟಿಷರ ಸ್ಮಾರಕಗಳನ್ನು ಉಳಿಸಿಕೊಂಡು ಮುಂದುವರಿದಿದೆ. ಮಂಗಳೂರಿನಲ್ಲಿ ಹೆಸರುವಾಸಿಯಾದ ಕಾಪಿ ಉದ್ಯಮ ಮೋರ್ಗನ್ ಸಂಸ್ಥೆ. ಇದರ ಕುಟುಂಬದ ಸದಸ್ಯರೋರ್ವರಾದ ಚಾರ್ಲ್ಸ್ ಹಂಗ್‌ಫೋರ್ಡ್ ಮೋರ್ಗನ್ 12 ವರ್ಷಗಳ ಕಾಲ ಈ ದೇವಾಲಯದ ಆಡಳಿತ ಮಂಡಳಿ ಸದಸ್ಯರಾಗಿದ್ದರು. 1928ರಲ್ಲಿ ನಿಧನರಾದ ಇವರ ಸ್ಮಾರಕವು ದೇವಾಲಯದ ಸ್ಮಶಾನ ಭೂಮಿಯಲ್ಲಿರುವುದು ಮಾತ್ರವಲ್ಲದೆ ಅವರ ಹೆಸರಿನ ಹಿತ್ತಾಳೆಯ ಫಲಕವೊಂದನ್ನು ದೇವಾಲಯದೊಳಗೆ ಅಳವಡಿಸಲಾಗಿದೆ. ಎಲ್ಯ ದೊರೆ ಎಂದೆ ಹೆಸರುವಾಸಿಯಾಗಿರುವ ಇವರು ತಮ್ಮ ಜೀವಿತಾವಧಿಯಲ್ಲಿ ತನ್ನ ಮಡದಿ ಹೆಸರಿನಲ್ಲಿ ಮಂಗಳೂರಿನಲ್ಲಿದ್ದ ಲೇಡಿಗೋಷನ್ ಆಸ್ಪತ್ರೆಯ ಮಹಿಳಾ ಮಕ್ಕಳ ವಿಭಾಗದ ಅಭಿವೃದ್ಧಿ ಕಾರ್ಯಕ್ಕೆ ರೂ.7,500/ ನೀಡಿದ್ದರು ಎಂದು ಚರಿತ್ರೆ ಹೇಳುತ್ತದೆ.

ಮಂಗಳೂರಿನ ಅಭಿವೃದ್ಧಿಗೆ ಬಾಸೆಲ್ ಮಿಶನ್ ನೀಡಿದ ಕೊಡುಗೆಯ ಹಿಂದೆ ಈ ದೇವಾಲಯದ ಪಾತ್ರ ಬಹಳಷ್ಟಿದೆ. 1840ರಲ್ಲಿ ಬಲ್ಮಠದ ಆಸ್ತಿಯನ್ನು ಬಾಸೆಲ್ ಮಿಶನ್‌ಗೆ ದಾನವಾಗಿ ನೀಡಿದವರು ಆಗಿನ ಜಿಲ್ಲಾ ಕಲೆಕ್ಟರ್ ಆಗಿದ್ದ ಎಚ್. ಎಮ್. ಭೇರ್. ಇವರು ಈ ದೇವಾಲಯದ ಸದಸ್ಯರಾಗಿದ್ದರು. ಮಂಗಳೂರಿಗೆ ಬರುವ ಕ್ರೈಸ್ತ ಆಧಿಕಾರಿಗಳು ಈ ದೇವಾಲಯಕ್ಕೆ ಆರಾಧನೆಗೆ ಹೋಗಬೇಕಾಗಿತ್ತು. 175 ಸಂವತ್ಸರಗಳನ್ನು ದಾಟಿದ ಈ ದೇವಾಲಯವು 2 ಶತಮಾನದ ಇತಿಹಾಸವನ್ನು ಹೊಂದಿದೆ. ಮಂಗಳೂರಿನಲ್ಲಿ ಬ್ರಿಟಿಷರು, ಬಾಸೆಲ್‌ ಮಿಶನ್, ವಿದೇಶಿ ಸಂಸ್ಥೆಗಳು, ಬಾಸೆಲ್ ಮಿಶನ್ ಇಂಗ್ಲಿಷ್ ಶಾಲೆ ಮುಂತಾದ ವಿಭಾಗಗಳಲ್ಲಿ ಮಹತ್ವದ ಅಕರಗಳನ್ನು ಹೊಂದಿರುವ ಈ ದೇವಾಲಯ ಮತ್ತು ಅದರ ಆಡಳಿತದಲ್ಲಿರುವ ಸ್ಮಾರಕಗಳನ್ನು ಸಂರಕ್ಷಿಸಿ, ಚರಿತ್ರೆಯನ್ನು ದಾಖಲೀಕರಣ ಮಾಡಬೇಕಾಗಿದೆ.

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 105 a [ 106 ] ಪರಾಮರ್ಶನ ಸೂಚಿ Church in Madras-Being the History of the Ecceslastical and Missionary Action of the East India Company in the Presidency of Madras from 1835-1861, By. Penny, Frank, London, Joun Murray, 1922 Madras District Manuel-South Canara, Vol. II. Compiled By Stuart, Harold. A., Madras, Government Press, 1895.

106 � ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 107 ] ಮಿಶನರಿ ಸಾಹಿತ್ಯ ಮಾಹಿತಿ ಕೋಶ {{gap}]ಡಾ. ಶ್ರೀನಿವಾಸ ಹಾವನೂರು-ಒಂದು ನೆನಪು

2002 ಅಗಸ್ಟ್‌ನಲ್ಲಿ ಭಾರತದಲ್ಲಿ ಅಲಭ್ಯವಾಗಿದ್ದ ಬಾಸೆಲ್ ಮಿಶನರಿಗಳ ಕೆಲವು ಕೃತಿಗಳು ಸ್ವಿಜರ್ಲೆಂಡಿನಿಂದ ಮೈಕ್ರೋ ಫಿಲ್ಟ್ ರೂಪವಾಗಿ ಮಂಗಳೂರಿನ ಕರ್ನಾಟಕ ತಿಯೊಲಾಜಿಕಲ್ ಕಾಲೇಜ್ ಗ್ರಂಥಾಲಯದ ಪತ್ರಾಗಾರ ವಿಭಾಗಕ್ಕೆ ಬಂದಾಗ ಬೆಂಗಳೂರಿಂದ ಆಗಮಿಸಿದ ಡಾ. ಹಾವನೂರರು 1963ರಿಂದ ನಡೆಸತೊಡಗಿದ್ದ ವಿದೇಶಿಯರ ಕೊಡುಗೆ ಸಂಶೋಧನೆಯ ಮುಂದುವರಿಕೆಯನ್ನು ಮತ್ತೊಮ್ಮೆ ಇಲ್ಲಿ ಪ್ರಾರಂಭಿಸಿದರು. ಮಿಶನರಿಗಳ ಕೃತಿಗಳ ಸಂಶೋಧನೆಗೆಂದೇ ಆಗಮಿಸಿದ ಹಾವನೂರರು ಸುಮಾರು 4 ವರ್ಷ ಇಲ್ಲಿಯೇ ನೆಲಸಿ ಕರ್ನಾಟಕ ತಿಯೋಲಾಜಿಕಲ್ ಕಾಲೆಜ್ ಗ್ರಂಥಾಲಯದ ಪತ್ರಾಗಾರ ವಿಭಾಗದ ಮಹತ್ವವನ್ನು ಮತ್ತೊಮ್ಮೆ ನಾಡಿಗೆಲ್ಲ ಪಸರಿಸಿದರು ಎನ್ನುವುದಕ್ಕೆ ಸಂಶಯವೇ ಇಲ್ಲ.

ಬಂದ ಕೃತಿಗಳ ಮೌಲ್ಯಮಾಪನ ಮಾಡಬೇಕು ಅವನ್ನು ಕಂಪ್ಯೂಟರ್‌ಗೆ ಅಳವಡಿಸಬೇಕು ಇವುಗಳನ್ನೆಲ್ಲಾ ಬೆಳಕಿಗೆ ತಂದು ಇವುಗಳಲ್ಲಿ ಸಂಶೋಧನೆ ನಡೆಯಬೇಕು ಎನ್ನುವುದೇ ಅವರ ಏಕೈಕ ಗುರಿ. ಮೈಕ್ರೋಫಿಲ್ಮೇನೋ ಬಂದಿದೆ ಅದನ್ನು ಓದಲು ರೀಡರ್ ಬೇಕಲ್ಲ, ಮುಂಬಯಿಗೆ ಹೋಗಿ ಸ್ನೇಹಿತರ ನೆರವಿನಿಂದ ಮೈಕ್ರೋಫಿಲ್ಡ್ ರೀಡರೊಂದನ್ನು ಹಿಡಿದುಕೊಂಡೇ ಬಂದರು. ಉಡುಪಿಯಿಂದ ಎಸ್. ಎ. ಕೃಷ್ಣಯ್ಯರನ್ನು ಕರೆಸಿ ತನಗೆ ವಿಷಯ ತುಂಬಲು ಒಂದು ಡಾಟ ತಯಾರಿಸಿ ಕೊಡಪ್ಪಾ ಎಂದು ಅದರಲ್ಲಿ ಏನೇನಿರಬೇಕು ಎಂದು ತನ್ನ ಕಂಪ್ಯೂಟರ್ ತಲೆಯಲ್ಲಿದ್ದ ಐಡಿಯಾಗಳನ್ನು ನೀಡಿ ಡಾಟ ಸಿದ್ಧ ಮಾಡಿಸಿಯೇ ಬಿಟ್ಟು ತಾನು ಮಾಡಲು ಹೊರಟ ಕಾರ್ಯವನ್ನು ಆರಂಭಿಸಿದರು.

ಗ್ರಂಥಾಲಯದಲ್ಲಿ ದೀರ್ಘ ಸೇವೆ ಸಲ್ಲಿಸಿದ ಇವರಿಗೆ ವರ್ಗೀಕರಣದ ಸಮಸ್ಯೆ ಇಲ್ಲ. ಪ್ರತಿ ಪುಸ್ತಕದ ಪರಿಚಯವಿದ್ದ ಇವರಿಗೆ ಅದು ಸಮಸ್ಯೆಯೂ ಅಲ್ಲ. ಗ್ರಂಥಾಲಯಕ್ಕೆ ಬಂದ ಸಂಶೋಧಕರಿರಲಿ, ನಮ್ಮ ಕಾಲೇಜಿನ ವಿದ್ಯಾರ್ಥಿಗಳೇ ಇರಲಿ ವಿಷಯ ಅರಸಿಕೊಂಡು ಬಂದಾಗ ಯಾವುದೇ ನಿರಾಕರಣೆಯಿಲ್ಲದೆ ಸಹಾಯ ಮಾಡುವ ಪ್ರವೃತ್ತಿ ಇವರದು. ಓದು, ಬರವಣಿಗೆ, ವರ್ಗೀಕರಣ, ಯಾವುದೇ ಇರಲಿ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 107 [ 108 ] ಆಗಬೇಕೆಂದರೆ ಆಗಲೇ ಬೇಕು ಎನ್ನುವ ಛಲ ಇವರಲ್ಲಿ ಯಾವಾಗಲೂ ಎದ್ದು ಕಾಣುವ ಗುಣ. 15 ತಾಸುಗಳಿಗಿಂತ ಹೆಚ್ಚು ಓದು, ಬರವಣಿಗೆಯಲ್ಲಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡ ಹಾವನೂರರಿಗೆ ಟಿ.ವಿ. ವೀಕ್ಷಣೆ, ರೇಡಿಯೋ ಆಲಿಸುವಿಕೆ, ಅಡಿಗೆ, ಅತಿಥಿ ಸತ್ಕಾರ, ಇಂತಹ ಹವ್ಯಾಸಗಳೂ ಇದ್ದವು. ಇಲ್ಲಿದ್ದ ಕೇವಲ ನಾಲ್ಕು ವರ್ಷದಲ್ಲಿ ಪತ್ರಾಗಾರ, ಮಿಶನರಿ, ಹೀಗೆ ಹಲವಾರು ಲೇಖನಗಳನ್ನು ಬರೆಸಿ ಪ್ರಕಟಿಸಿ ನಮ್ಮ ಪತ್ರಾಗಾರದ ಮಹತ್ವವನ್ನು ಇನ್ನೂ ಹೆಚ್ಚಿಸಿದ ಕೀರ್ತಿ ಇವರಿಗೆ ಸಲ್ಲಬೇಕಾದದ್ದೆ. 2 ಬಾರಿ ಸ್ವಿಜರ್ಲೆಂಡಿನ ಬಾಸೆಲ್ ಪತ್ರಾಗಾರಕ್ಕೆ ಹೋದಾಗ (2003, 2008) ಬರಿಗೈಯಲ್ಲಿ ಬರದೆ ಜಿಲ್ಲೆಗೆ, ಮಿಶನರಿಗಳಿಗೆ ಸಂಬಂದಪಟ್ಟ ಮಾಹಿತಿಗಳ ಪ್ರತಿಗಳನ್ನು ಹಿಡುಕೊಂಡೇ ಬರುತ್ತಿದ್ದರು. ಅಲ್ಲದೆ ತಾನು 1963ರಿಂದ ಸಂಗ್ರಹಿಸಿಕೊಂಡು ಬಂದಿದ್ದ ಮಿಶನರಿಗಳ ದಾಖಲೆಗಳನ್ನು ಪತ್ರಾಗಾರಕ್ಕೆ ನೀಡಿರುತ್ತಾರೆ.

ಸಾಹಿತ್ಯ, ಇತಿಹಾಸಗಳ ಅಪೂರ್ವ ಸಾಮಗ್ರಿ ಡಾ. ಶ್ರೀನಿವಾಸ ಹಾವನೂರರ ಸಂಗ್ರಹ: ತಾನು ಜೀವಮಾನವಿಡೀ ಪ್ರೀತಿಯಿಂದ ಸಂಗ್ರಹಿಸಿದ್ದ ಸುಮಾರು 1700 ಪುಸ್ತಕಗಳನ್ನು ಮಂಗಳೂರಿನ ಕರ್ನಾಟಕ ತಿಯೋಲಾಜಿಕಲ್ ಕಾಲೇಜ್ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಡಾ. ಶ್ರೀನಿವಾಸ ಹಾವನೂರರು ಕನ್ನಡದ ಶ್ರೇಷ್ಠ ಸಾಹಿತಿಗಳು ಮತ್ತು ಹಿರಿಯ ಸಂಶೋಧಕರು, ಅಂಥವರ ಗ್ರಂಥ ಸಂಗ್ರಹ ಅಮೂಲ್ಯವೆಂಬುದರಲ್ಲಿ ಎರಡು ಮಾತಿಲ್ಲ. ಈ ಗ್ರಂಥಸಂಪದದಲ್ಲಿ ಹಾವನೂರರ ಮುಖ್ಯ ವ್ಯಾಸಂಗ ವಿಷಯಗಳಾದ ಕನ್ನಡ ಸಾಹಿತ್ಯ ಮತ್ತು ಕರ್ನಾಟಕ ಇತಿಹಾಸಕ್ಕೆ ಪ್ರಾಧಾನ್ಯವಿದೆ. ಸಾಹಿತ್ಯ ಪ್ರಕಾರದಲ್ಲಿಯ ಹಳಗನ್ನಡ ಕಾವ್ಯಗಳು ಮತ್ತು ಹೊಸಗನ್ನಡ ಸಾಹಿತ್ಯದ ವಿಮರ್ಶನ ಗ್ರಂಥಗಳು ಸಾಹಿತ್ಯಾಭ್ಯಾಸಿಗಳಿಗೆ ವಿಶೇಷ ಪ್ರಯೋಜನಕಾರಿಯಾಗಿವೆ. ಇವುಗಳಿಗಿಂತ ಹೆಚ್ಚು ದುಷ್ಕರವಾಗಿರುವ, ಸಾಹಿತ್ಯ ಸಮ್ಮೇಳನ ಮತ್ತು ಇತರ ಉತ್ಸವ ಕಾಲದ "ಸ್ಮರಣ ಸಂಚಿಕೆ'ಗಳನ್ನು ಪರಿಶ್ರಮಪಟ್ಟು ಸಂಗ್ರಹಿಸಲಾಗಿದೆ.

ಹಿರಿಯ ಲೇಖಕರ ಸಮಗ್ರ ಸಂಪುಟಗಳಿರುವುದು ಇನ್ನೊಂದು ವಿಶೇಷದ ಸಂಗತಿಯಾಗಿದೆ. ಕೈಲಾಸಂ, ಡಿ.ವಿ.ಜಿ., ಮುಳಿಯ ತಿಮ್ಮಪ್ಪಯ್ಯ, ಎಂ.ಎನ್. ಕಾಮತ್, ಗೋವಿಂದ ಪೈ, ಗೌರೀಶ ಕ್ಯಾಕಿಣಿ ಮತ್ತು ಪಾವೆಂ ಆಚಾರ, ಇವರುಗಳ ಹೆಚ್ಚಿನ ಬರಹಗಳಲ್ಲದೆ ವಿಮರ್ಶಾ ಗ್ರಂಥಗಳೂ ಇವೆ. ಎದ್ದು ಕಾಣುವ ದೊಡ್ಡ ಸಂಗ್ರಹ ಶಿವರಾಮ ಕಾರಂತರ ಕೃತಿಗಳದ್ದು. ಈಚಿನವರಾದ ಎಂ.ಎಂ. ಕಲಬುರ್ಗಿಯವರ ಬರಹಗಳಿಗೂ ಇಲ್ಲಿ ಇಂಬು ದೊರೆತಿದೆ.

108 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 109 ] ಇನ್ನೊಂದು ಸಮೃದ್ಧ ಸಂಗ್ರಹ ಇತಿಹಾಸ ವಿಷಯದ್ದು. ಅದರಲ್ಲಿಯೂ ಕರ್ನಾಟಕ ಇತಿಹಾಸದ ವಿವಿಧ ಅಂಶಗಳ ಅಭ್ಯಾಸಿಗಳಿಗೆ ಇಲ್ಲಿ ವಿಪುಲ ಸಾಮಗ್ರಿ ಲಭ್ಯವಿದೆ. ವಿಲ್ಸ್‌ನ ಮೈಸೂರು ಇತಿಹಾಸ, ಪ್ಲೇಟರ ಸುಪ್ರಸಿದ್ದ Dynasties ಪುಸ್ತಕ, ಆದಿಲಶಾಹಿಗಳ ಬಿಜಾಪುರ, ಈಸ್ಟ್ ಇಂಡಿಯಾ ಕಂಪೆನಿಯವರ ಕಾರವಾರ 'ಫ್ಯಾಕ್ಟರಿ', ಈ ಕುರಿತ ಗ್ರಂಥಗಳು ಅಪೂರ್ವದ ಸದರಿನಲ್ಲಿ ಬರುವಂತಹವು. ಜೈನಧರ್ಮ ವಿಚಾರದಲ್ಲಿ ಮೂಲಭೂತ ಸಾಮಗ್ರಿ ಇದೆ. ವಿಶೇಷತ: ಜೈನರಿಗೆ ವೇದಸಮಾನವಾದ ಜಿನಸೇನಕೃತ 'ಮಹಾಪುರಾಣ' (ಕನ್ನಡದಲ್ಲಿಯ ಅತಿ ದೊಡ್ಡ ಗಾತ್ರದ ಪುಸ್ತಕ), ಪೂಜಾರರ ಜೈನಧರ್ಮ ಪರಿಭಾಷೆ, ಮಿರ್ಜಿ ಅಣ್ಣಾರಾಯರ ಜೈನೀಯ ಸಮಗ್ರ ವಿವೇಚನೆ ಹಾಗೇನೇ ಗೊಮ್ಮಟೇಶ್ವರನ ಸಾದ್ಯಂತ ಮೊದಲಾದುವುಗಳೂ ಇವೆ.

ಮಾಹಿತಿ ಫೈಲುಗಳು: ಈ ಬೃಹತ್ ಗ್ರಂಥ ಸಂಗ್ರಹಕ್ಕೆ ಸರಿದೂಗುವ ಸಾಮಗ್ರಿ ಎಂದರೆ ಅಪೂರ್ವ ಮಾಹಿತಿ ಫೈಲುಗಳದ್ದು; ಇವುಗಳು ಹಳೆಯ ಕಾಗದ ಪತ್ರಗಳು, ಪ್ರೆಸ್ ಕಟಿಂಗ್ಸ್ ಇವನ್ನು ಒಳಗೊಂಡವುಗಳು. ಕರ್ನಾಟಕದ ಬೇರೆ ಬೇರೆ ಪ್ರದೇಶಗಳ ಬಗ್ಗೆ ಐತಿಹಾಸಿಕ ಮಾಹಿತಿ, ನಾಡಿನ ಶಿಲ್ಪಕಲೆ, ಶಾಸನ ಸಮೀಕ್ಷೆ, ಕನ್ನಡ ಪತ್ರಿಕಾ ಪ್ರಪಂಚ, ಸಂಶೋಧನ ಮಾರ್ಗ, ಕನ್ನಡ-ಮರಾಠಿ ರಂಗಭೂಮಿ, ಸ್ತ್ರೀವಾದಿತ್ವ ಕಂಪ್ಯೂಟರ್ ವಿಧಾನ ಇಂಥ ಹತ್ತೈವತ್ತು ವಿಷಯಗಳು ಫೈಲುಗಳಲ್ಲಿವೆ. ಜ್ಞಾನಪೀಠ ಪ್ರಶಸ್ತಿಗರನ್ನೊಳಗೊಂಡು ಕನ್ನಡದ ಹಿರಿಯ ಲೇಖಕರನೇಕರ ಪರಿಚಯದ ಫೈಲುಗಳು. ಇಲ್ಲಿಯ ಮಾಹಿತಿ ಸಂಚಯನದ ದೊಡ್ಡ ಆಕರ್ಷಣೆ ಎನ್ನಬಹುದು. ಈ ರೀತಿಯ ಮಾಹಿತಿ ಶೇಖರಣೆ ಹಾವನೂರರ ವ್ಯಾಸಂಗದ ವೈಶಿಷ್ಟ್ಯವೇ ಆಗಿದೆ.
- ಕನ್ನಡಕ್ಕೆ ಮಿಶನರಿಗಳ ಕೊಡುಗೆ, ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ, ಮೊದಲ ಸಚಿತ್ರ ಪತ್ರಿಕೆ ವಿಚಿತ್ರ ವರ್ತಮಾನ ಸಂಗ್ರಹ, ಹೊಸಗನ್ನಡದ ಹರಿಕಾರ ಫರ್ಡಿನಂಡ್ ಕಿಟ್ಟೆಲ್, ದಾಸ ಸಾಹಿತ್ಯವನ್ನು ಮೊದಲು ಬೆಳಕಿಗೆ ತಂದ ಮೋಗ್ಲಿಂಗ್, ಹೊಸಗನ್ನಡದ ಕಾವ್ಯ ಆರಂಭ 1890 ಅಲ್ಲ 1862, ತುಳುವಿನ ಮೊದಲ ಪಠ್ಯ ಇವೆಲ್ಲವೂ ಅವರು ಬೆಳಕಿಗೆ ತಂದ ಸಂಶೋಧನೆಗಳು, ಬಾಸೆಲ್ ಮಿಶನ್, ಲಂಡನ್ ಮಿಶನ್, ವೆಸ್ಲಿಯನ್ ಮಿಶನ್, ಇಂತಹ ಯಾವುದೇ ಮಿಶನ್‌ಗಳ ಮಿಶನರಿಗಳ ಸಾಹಿತ್ಯ ಮಾಹಿತಿ ಬೇಕೆಂದು ಡಾ. ಹಾವನೂರರಲ್ಲಿ ವಿಚಾರಿಸಿದರೆ (ಅದು ಮುಖತ ಭೇಟಿಯಾಗಲಿ, ಫೋನಿನಲ್ಲಿಯಾಗಲಿ) ಅವರಲ್ಲಿ ತಕ್ಷಣ ಉತ್ತರ ಸಿಗುತ್ತಿತ್ತು. ಇದರಿಂದ ಇವರು ಮಿಶನರಿ ಸಾಹಿತ್ಯ ಮಾಹಿತಿ ಕೋಶವೇ ಆಗಿದ್ದರು.

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು. 109 [ 110 ] ನಾಲ್ಕು ವರ್ಷವೂ ಅವರ ಮನೆಯ ಪಕ್ಕದಲ್ಲಿ ವಾಸಿಸುತ್ತಿದ್ದ ನನಗೆ ಆದ ಅನುಭವಗಳನ್ನೇ ಒಂದೊಂದು ಲೇಖನ ಬರೆಯಬಹುದು. ಈ ಲೇಖನ ಬರೆಯಲು ಅವರೇ ಸ್ಫೂರ್ತಿ ಎಂದರೂ ತಪ್ಪಾಗಲಿಕ್ಕಿಲ್ಲ. ಯಾವಾಗಲಾದರೊಮ್ಮೆ ಮಧ್ಯರಾತ್ರಿ ಸಂದರ್ಭದಲ್ಲಿ ಹಾವನೂರರ ಮನೆಯ ಲೈಟೇನು ಉರಿಯುತ್ತಿದೆ ಎಂದು ಕಿಟಕಿಯಲ್ಲಿ ಇಣಕಿದರೆ ಕುಳಿತು ಬರೆಯುತ್ತಿರುತಿದ್ದರು. ಏನ್ ಸಾರ್ ನಿದ್ದೆ ನಿದ್ರೆ ಬರಲ್ವದು ತಮ್ಮಾ ಕೈಯಲ್ಲಿ ಹಿಡಿದ ಕೆಲಸ ಮುಗಿಸದೆ ಇದ್ದರೆ ನಾನು ಹೀಗೆಯೇ ಅಂದು ಬಾ ಚಾ ಕುಡಿಯುವ ಅಂತ ಕರೆಯುತ್ತಿದ್ದರು.

ಕೆಲವು ಹಬ್ಬ ಹರಿದಿನಗಳಿಗೆ ಬೆಂಗಳೂರಿಗೆ ಹೋಗುತ್ತಿದ್ದ ಇವರು ಕೆಲವು ಹಬ್ಬಗಳ ಸಂದರ್ಭದಲ್ಲಿ ಮನೆಯಲ್ಲಿಯೇ ಇರುತ್ತಿದ್ದರು. ಏನ್ ಸಾರ್ ಹಬ್ಬ ಇಲ್ಲವಾ ಅಂದರೆ ಸಾಹಿತಿಗಳಿಗೆ ದಿನವೆಲ್ಲಾ ಹಬ್ಬ ಎನ್ನುತ್ತಿದ್ದರು. ಕೆಲವೊಂದು ಹಬ್ಬಗಳ ಸಂದರ್ಭದಲ್ಲಿ ಪಾಯಸವೋ, ಸಿಹಿತಿಂಡಿಯೋ ಬಂದವರಿಗೆ ಹಂಚುವುದುಂಟು, ತುಳಸಿ ಪೂಜೆಯ ದಿನದ ಬೆಳಗ್ಗೆ ಏನ್ ಸಾರ್ ನಿಮ್ಮ ಮನೆ ಮುಂದೆ ತುಳಸಿ ಗಿಡ ನೆಟ್ಟದ್ದೇನೆ ಏನು ನಿಮಗೆ ತುಳಸಿ ಪೂಜೆಯೂ ಇಲ್ಲವಾ ಅಂದೆ. ಅಂದು ಸಂಜೆ ನನ್ನ ಕುಟುಂಬದವರಿಗೆ ಬುಲಾವ್! ಯಾಕೆ ಗೊತ್ತೆ! ತುಳಸಿ ಪೂಜೆಗೆ! ತುಳಸಿ ಗಿಡದ ಹತ್ತಿರ ನೆಲದಲ್ಲಿ ಕುಳಿತು ಪೂಜೆ ಸಲ್ಲಿಸಿ ನಮಗೆಲ್ಲ ಮೂಸಂಬಿ, ಕಲ್ಲು ಸಕ್ಕರೆ, ಅವಲಕ್ಕಿ ಹಂಚಿದ್ದು ಈಗಲೂ ನೆನಪಾಗುತ್ತದೆ. ಮನೆಯಲ್ಲಿ ರಾಘವೇಂದ್ರ ಸ್ವಾಮಿ ಮುಂತಾದ ಹಲವಾರು ಫೋಟೋಗಳಿತ್ತು, ನಿತ್ಯ ಮೊಣಕಾಲೂರಿ ವಂದನೆ ಸಲ್ಲಿಸುತ್ತಿದ್ದುದನ್ನು ಕಿಟಿಕಿಯಿಂದಲೇ ನೋಡಿದ್ದೆ.ಪ್ರಯಾಣ ಹೊರಡುವಾಗಂತೂ ಇದು ತಪ್ಪದೇ ಇರುತ್ತಿತ್ತು.

ಹಾವನೂರರು ಬೆಂಗಳೂರಿಗೆ ಹೋಗುವಾಗ ನಾನು ಸ್ಕೂಟರ್‌ನಲ್ಲಿ ಬಸ್‌ಸ್ಟಾಂಡ್ ತನಕ ಬಿಡುವ ಕ್ರಮವಿತ್ತು. ಹೆಗಲ ಮೇಲೆ ಚೀಲ ಹಾಕಿಕೊಂಡು ಎರಡು ಕಾಲು ಒಂದೇ ಬದಿಗೆ ಹಾಕಿ ಕುಳಿತುಕೊಳ್ಳುವ ಸಾರ್ ತಾನು ಎಳೆದು ಕೊಂಡು ಬಂದಿದ್ದ ಸೂಟ್‌ಕೇಸನ್ನು ತನ್ನ ತೊಡೆ ಮೇಲಿರಿಸುವದನ್ನು ನೋಡಿದರೆ ನನಗೇ ಆಶ್ಚರ್ಯವಾಗುತ್ತಿತ್ತು. ಬಸ್‌ಸ್ಟಾಂಡ್ ತಲುಪಿದ ಕೂಡಲೇ ನೀನು ಹೋಗು ತಮ್ಮಾ ಹುಡುಗರು ಕಾಯ್ತಾರೆ ಇನ್ನೇನು ಬಸ್‌ ಬರುತ್ತದೆ ಎಂದಾಗ ಇರಲಿ ಸಾ‌ ಬಸ್ ಬಂದ ಮೇಲೆ ನಿಮ್ಮ ಸೂಟ್‌ಕೇಸ್ ಬಸ್ ಮೇಲೆ ಕೊಟ್ಟು ಹೋಗುತ್ತೇನೆ ಅಂದರೆ, ಬೇಡ ತಮ್ಮಾ ಅದು ಏನೂ ವಜ್ಜ ಇಲ್ಲ ನೋಡು ಎಂದು ಎತ್ತಿ ತೋರಿಸಿ ನನ್ನನ್ನು ಹಿಂದೆ ಕಳುಹಿಸುತ್ತಿದ್ದರು. ಆಗ ನಾನು ಎಣಿಸಿದ್ದು ಟಿ.ವಿ.ಯನ್ನು ಪಂಚೆಯಲ್ಲಿ ಸುತ್ತಿ ತೊಡೆ ಮೇಲಿರಿಸಿಕೊಂಡು ಬೆಂಗಳೂರಿಂದ ಮಂಗಳೂರಿಗೆ

110 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 111 ] ಬಸ್‌ನಲ್ಲಿ ಬಂದ ಸಾರ್‌ಗೆ ಇದೇನು ಮಹಾ ಎಂದು.

ಕೈಯಲ್ಲಿ ಹಿಡಿದ ಕೆಲಸವನ್ನು ಪೂರ್ತಿಗೊಳಿಸದಿದ್ದರೆ ಹಾವನೂರರಿಗೆ ನಿದ್ದೆ ಖಂಡಿತ ಇಲ್ಲ. ಬರವಣಿಗೆ ಹೇಗೋ ಓದಿನಲ್ಲಿಯೂ ಅಷ್ಟೇ ಕಾಳಜಿ ಇತ್ತು. ಹಾವನೂರರು ಪೂಫ್ ರೀಡ್ ಮಾಡಿದರೆಂದರೆ ಅದರಲ್ಲಿ ತಪ್ಪಿಲ್ಲ ಎಂದರ್ಥ. ಬರವಣಿಗೆಗೆ ತೊಡಗುವವರಿಗೆ ಕಿವಿಮಾತು, ಸಲಹೆ, ಮಾರ್ಗದರ್ಶನ, ಸಹಾಯ ಮಾಡುವುದೆಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ, ಯಾಕ್ ಸಾರ್ ಇಷ್ಟು ಪ್ರಾಯವಾದರೂ ನಿಮ್ಮ ಶಕ್ತಿಗೆ ಮೀರಿ ಸಹಾಯ ಮಾಡುವಿರಿ ಅಂದರೆ ನಾನು ಸಾಹಿತಿ ಎಂದು ನನ್ನನ್ನು ಸಮಾಜ ಗುರುತಿಸಿದೆ ಅದಕ್ಕೂ ಮಿಗಿಲಾಗಿ ನಾನು ಗ್ರಂಥಪಾಲಕನಾಗಿದ್ದವ. ಪ್ರತಿ ಗ್ರಂಥಕ್ಕೂ ಒಬ್ಬ ಓದುಗ ಇದೇ ಇದ್ದಾನೆ ಅದನ್ನು ಓದಿಸುವುದು ನನ್ನ ಕರ್ತವ್ಯ ಇಲ್ಲವಾದರೆ ನನ್ನ ಹುದ್ದೆಗೆ ಬೆಲೆಯಲ್ಲಿದೆ ಎನುತ್ತಿದ್ದರು.
ನನ್ನ ಎರಡು ಕೃತಿಗಳಾದ ಬಿಲ್ಲವರು ಮತ್ತು ಬಾಸೆಲ್ ಮಿಶನ್, ಗಾನ ಗೊಂಚಲು ಇವುಗಳಿಗೆ ಈ ಹೆಸರನ್ನು ಸೂಚಿಸಿದವರೇ ಡಾ. ಹಾವನೂರರು. ಅವರು ನಮ್ಮನ್ನಗಲುವ 15 ದಿನಗಳ ಹಿಂದೆ ನನಗೆ ಫೋನ್‌ನಲ್ಲಿ ಸಂಭಾಶಿಸಿ ಏನ್ ತಮ್ಮಾ ಬರೆಯುವುದು ನಿಲ್ಲಿಸಬೇಡ ನಿನಗೆ ಸಾಧ್ಯ ಉಂಟು, ಇಂತಿಂತದ್ದು ಬರಿ, ಬರೆದು ನನಗೆ ಕಳುಹಿಸು ನಾನು ತಿದ್ದಿ ತೀಡಿ ಸಹಾಯ ಮಾಡುತ್ತೇನೆ ಅಂದಿದ್ದರು. ಆದರೆ ತಿದ್ದಲು ಹಾವನೂರ್ ಸಾರ್ ಇನ್ನೆಲ್ಲಿ? ಅವರ ನಿಯತ್ತು, ದಾಖಲೀಕರಣ ಕ್ರಮ, ಪುಸ್ತಕ ಪ್ರೀತಿ ಅವುಗಳನ್ನು ಮನನ ಮಾಡಿಕೊಂಡೇ ನಾನು ಬರೆಯಬೇಕು. ನೀವೂ ಬರೆಯಬೇಕು.

ಡಾ. ಹಾವನೂರರು ನಮ್ಮನ್ನಗಲಿ 10 ವರ್ಷಗಳು ಕಳೆದವು. ಆದರೆ ಅವರ ಗ್ರಂಥ ಸೇವೆ, ಕನ್ನಡ ಸಾಹಿತ್ಯ ಸೇವೆ ಮರೆಯಲಾಗದ ನೆನಪು. ಕನ್ನಡದ ನಿಜ ಸಂಶೋಧಕ ಹಾವನೂರರು ಎಂದರೆ ತಪ್ಪಾಗದು. 1928ರಲ್ಲಿ ಜನಿಸಿದ ಇವರು ಗ್ರಂಥಪಾಲಕ, ಉಪನ್ಯಾಸಕ, ಸಂಶೋಧಕ, ಮಾರ್ಗದರ್ಶಕರಾಗಿ, ಮುಂಬಯಿ, ಮಂಗಳೂರು, ಪುಣೆ, ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದ್ದರು. ಇವರು ಕನ್ನಡ ಭಾಷೆಗಾಗಿ ಮಾಡಿದ ಸೇವೆ ಅಪಾರ, ಸಂಶೋಧನೆ ಮಾಡಬೇಕಾದ ವಿದೇಶಿ ಬರವಣಿಗೆಗಳು, ದಾಸ ಸಾಹಿತ್ಯದ ಆರಂಭಕಾಲ, ಆರಂಭದ ಪತ್ರಿಕೆಗಳು, ಆರಂಭದ ಚರಿತ್ರಾ ಸಾಹಿತ್ಯಗಳು ಇಂತಹ ಸಂಶೋಧನೆಗಳಲ್ಲಿ ಕಾರ್ಯನಿರತರಾಗಿದ್ದ ಇವರು ಪುಸ್ತಕ ಪ್ರೇಮಿಯಾಗಿದ್ದರು. ರಾಜ್ಯೋತ್ಸವ, ಆಳ್ವಾಸ್ ನುಡಿಸಿರಿ, ಮುಳಿಯ ತಿಮ್ಮಪ್ಪಯ್ಯ, ಸಂದೇಶ ಪ್ರತಿಷ್ಟಾನ ಮುಂತಾದ ಪ್ರಶಸ್ತಿಗಳನ್ನು ಗಳಿಸಿರುವ ಇವರು 65ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು ಮಾತ್ರವಲ್ಲದೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 111 [ 112 ] ಹೆಸರು ಗಳಿಸಿರುವ ಇವರು ಒಬ್ಬ ನಿಜ ಪುಸ್ತಕ ಪ್ರೇಮಿ.

ಇವರು ಪುಸ್ತಕ ಪ್ರೇಮಿಯಾಗಲು ಕಾರಣ ಇವರು ಗ್ರಂಥಪಾಲಕರಾಗಿ ಸೇವೆ ಮಾಡಿದುದೇ ಎಂಬುದು ನನ್ನ ಅನಿಸಿಕೆ. ದಾಖಲೀಕರಣ, ಸಂಶೋಧನೆ, ಪ್ರಕಟಣೆ, ಜೋಪಾನ, ಮಾರ್ಗದರ್ಶನ, ಇವು ಗ್ರಂಥಪಾಲಕನಲ್ಲಿರಬೇಕಾಗಿರುವ ಗುಣಗಳು ಎನ್ನುತಿದ್ದ ಇವರು “ನೋಡು ತಮ್ಮಾ ಗ್ರಂಥಪಾಲಕನೆಂದರೆ ಗ್ರಂಥ ಕಾಯುವವನಲ್ಲ ಓದುಗನೊಬ್ಬ ವಿಷಯವನ್ನರಸಿ ಬಂದಾಗ ಯಾವುದೇ ರೀತಿಯಲ್ಲಾದರೂ ಅವನಿಗೆ ಮಾಹಿತಿ ಒದಗಿಸುವ ಕಾರ್ಯವನ್ನು ಹೇಗಾದರೂ ಮಾಡಬೇಕು. ಪುಸ್ತಕಗಳು ನಮ್ಮನ್ನು ಮಾತನಾಡಿಸುತ್ತದೆ. ಮುದ್ರಣಗೊಂಡ ಪ್ರತಿ ಪುಸ್ತಕಕ್ಕೂ ಓದುಗರು ಇದ್ದೇ ಇದ್ದಾರೆ. ಸಾವಿರಾರು- ಲೇಖನ ನಿಯತಕಾಲಿಕೆಗೆ ಬರಿ ಅದು ದಾಖಲೆಯಾವುದಿಲ್ಲ, ಅದು ಗ್ರಂಥಾಲಯದಲ್ಲಿ ಸಿಗುವುದೂ ಇಲ್ಲ. ಆದರೆ ಪುಸ್ತಕ ಬರಿ ಅದು ಎಷ್ಟು ವರ್ಷ ಹೋದರೂ ಎಲ್ಲಿಯಾದರೂ ಒಂದು ಕಡೆ ಸಿಕ್ಕೆ ಸಿಗುತ್ತದೆ. ಅದಕ್ಕಾಗಿ ಯಾವುದೇ ಪುಸ್ತಕವು ನಿಷ್ಟ್ರಯೋಜಕವೆನಿಸುವುದಿಲ್ಲ. ಅಯಾಯ ಗ್ರಂಥಾಲಯದಲ್ಲಿ ತಮ್ಮ ಇತಿಮಿತಿಯಲ್ಲಾದರೂ ಹಳೆಯ, ಸಿಗದೇ ಇರುವ ಯಾವುದೇ ಪುಸ್ತಕವನ್ನು ಜೋಪಾನ ಮಾಡಬೇಕು. ದಾಖಲೀಕರಣ, ಜೋಪಾನ ಇವುಗಳಿಂದ ನಮಗೇನು ಲಾಭವೆಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಒಂದು ವಿಷಯವನ್ನು ಓದುಗನಿಗೆ ಒದಗಿಸುವ ಸೇವಯನ್ನಾದರೂ ಮಾಡಿದರೆ ಪ್ರತಿ ಸಂಘ, ಸಂಸ್ಥೆ, ಶಾಲೆಗಳು ತಮ್ಮಲ್ಲಿರುವ ಗ್ರಂಥಾಲಯಗಳನ್ನು ಸಾರ್ಥಕ ಪಡಿಸಿ ಕೊಳ್ಳಬಹುದು” ಎನ್ನುತ್ತಿದ್ದರು.

ಗ್ರಂಥ ಮಾರ್ಗದರ್ಶನದಲ್ಲಿ ಅವರದ್ದು ಎತ್ತಿದ ಕೈ. ಯಾರೇ ಒಂದು ವಿಷಯದ ಮೇಲೆ ಗ್ರಂಥಗಳನ್ನು ಅರಸಿಕೊಂಡು ಬರಲಿ ಅದನ್ನು ಹೇಗಾದರೂ ಮಾಡಿ ಓದುಗನಿಗೆ ಸಮಾಧಾನವಾಗುವ ರೀತಿಯಲ್ಲಿ ಮಾಹಿತಿ ಒದಗಿಸುವ ಕಾರ್ಯ ಮಾಡುತ್ತಿದ್ದರು. ಹಲವಾರು ಗ್ರಂಥಾಲಯದ ಸಂಬಂಧವನ್ನು ಇಟ್ಟುಕೊಂಡ ಇವರು ಅಲ್ಲಿ ನೋಡುವ ಅಲ್ಲಿ ಸಿಗಬಹುದು ಎನ್ನುತ್ತಿದ್ದ ಇವರು ಮಂಗಳೂರು ಎ.ವಿ.ಯ. ಡಾ. ಬಂಡಿ, ಅಲೋಸಿಯಸ್‌ನ ಡಾ. ರಾಡ್ರಿಗಸ್, ಆರ್. ಆರ್. ಸಿ.ಯ ಶ್ರೀ ವೆಂಕಟೇಶ್, ಸ್ವಿಜರ್ಲೆಂಡಿನ ಬಾಸೆಲ್ ಪತ್ರಾಗಾರದ ಪ್ರೊ. ಪೌಲ್ ಜೆನ್‌ಕಿನ್ಸ್, ಕೆ.ಟಿ.ಸಿ.ಯ ಬೆನೆಟ್ ಅಮ್ಮನ್ನ ಮುಂತಾದವರ ನೇರ ಸಂಪರ್ಕವಿಟ್ಟುಕೊಂಡಿದ್ದವರು. ಇವರು ಬ್ರಿಟಿಶ್ ಮ್ಯೂಸಿಯಂ, ಧರ್ಮಸ್ಥಳದ ಖಾವಂದರ ಪತ್ರಾಗಾರ, ಮಿಥಿಕ್ ಸೊಸೈಟಿ, ಹೀಗೆ ಹಲವಾರು ಗ್ರಂಥಾಲಯ ಪತ್ರಾಗಾರಗಳನ್ನು ತಮ್ಮ ಸಂಶೋಧನೆಯಲ್ಲಿ ಬಳಸಿಕೊಂಡಿರುವುದು ಮಾತ್ರವಲ್ಲದೆ ಓದುಗನಿಗೆ ಈ ಮೂಲಕ ಪೂರ್ಣ ಸಹಕಾರ ನೀಡಿದ್ದಾರೆ.

112 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 113 ] ದಾಖಲೀಕರಣಕ್ಕೆ ಹೆಚ್ಚಿಗೆ ಒತ್ತು ನೀಡುತ್ತಿದ್ದ ಹಾವನೂರರವರು ತಾವು ಜೀವಮಾನವಿಡೀ ಸಂಗ್ರಹಿಸಿದ್ದ ಅಮೂಲ್ಯ ಗ್ರಂಥಗಳನ್ನು ಮಂಗಳೂರಿನ ಕರ್ನಾಟಕ ತಿಯೊಲಾಜಿಕಲ್ ಕಾಲೇಜ್, ಸಂತ ಅಲೋಸಿಯಸ್‌ ಕಾಲೇಜು, ಮಂಗಳೂರು ವಿಶ್ವವಿದ್ಯಾನಿಲಯ, ಬೆಂಗಳೂರಿನ ಮಿಥಿಕ್ ಸೊಸೈಟಿ ಬೆಂಗಳೂರು, ಉಡುಪಿಯ ರಾಷ್ಟ್ರ ಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಮುಂತಾದ ಕಡೆಗೆ ದಾನವಾಗಿ ನೀಡಿದ್ದು ಮಾತ್ರವಲ್ಲದೆ ಈ ಶಿಕ್ಷಣ ಕೇಂದ್ರಗಳಿಗೆ ದಾಖಲೀಕರಣಕ್ಕೆ ನೇರ ಸಹಕಾರ ನೀಡಿರುವರು.

ಗ್ರಂಥ ಸಂರಕ್ಷಣೆ, ದಾಖಲೀಕರಣ, ಗ್ರಂಥ ಮಾರ್ಗದರ್ಶನ, ಗ್ರಂಥಕ್ಕಾಗಿ ದುಡಿಯುವುದು ಇವೇ ಗ್ರಂಥಪಾಲಕನ ಗುಣಗಳೆನ್ನುತ್ತಿದ್ದ ಡಾ. ಹಾವನೂರರ ಈ ಮಾತುಗಳು ಈಗ ನೆನಪಿನಲ್ಲಿ ಮಾತ್ರ.

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.. 113 [ 114 ]ತುಳು ಭಾಷೆ ಮತ್ತು ಕ್ರೈಸ್ತರು

ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮುಂಬಯಿ, ಪ್ರದೇಶಗಳಲ್ಲಿರುವ ಹೆಚ್ಚಿನ ಪ್ರೊಟೆಸ್ಟಂಟ್ ಕ್ರೈಸ್ತರ ತಾಯಿ ಭಾಷೆ ತುಳು. 1834ರಲ್ಲಿ ಬಂದ ಬಾಸೆಲ್ ಮಿಶನರಿಗಳು 1841ರಲ್ಲಿ ತುಳು ಜಿಲ್ಲೆಯಲ್ಲಿ ಮೊದಲ ಪ್ರೆಸ್ ಸ್ಥಾಪನೆ ಮಾಡಿ ಮೊದಲಿಗೆ ಕ್ರೈಸ್ತರ ಧಾರ್ಮಿಕ ಗ್ರಂಥ ಸತ್ಯವೇದದ ಒಂದು ಭಾಗವಾದ “ಮತ್ತಾಯೆ ಬರೆತಿ ಸುವಾರ್ತಮಾನ” ಎಂಬ ಕೃತಿಯೊಂದನ್ನು ಮುದ್ರಣ ಮಾಡಿದರು. ತುಳು ಜಿಲ್ಲೆಯಲ್ಲಿ ತುಳುವೇ ಏಕೆ ಮೊದಲು ಎಂದು ನಮ್ಮಲ್ಲಿ ಪ್ರಶ್ನೆ ಮೂಡುವುದು ಸಹಜ.ಆಗ ಜಿಲ್ಲೆಯಲ್ಲಿ ಪ್ರಚಲಿತದಲ್ಲಿದ್ದದು ತುಳು ಭಾಷೆ ಮಾತ್ರ ಕ್ರೈಸ್ತರ ಆರಾಧನೆಯ ವಿಧಿ ವಿಧಾನಗಳು, ಬೋಧನೆ, ಮುಂತಾದವುಗಳೂ ತುಳುವಿನಲ್ಲಿಯೇ ನಡೆಯುತ್ತಿತ್ತು.ಇಲ್ಲಿದ್ದ ವಿದೇಶಿ ಮಿಶನರಿಗಳು ತುಳು ಭಾಷೆಯನ್ನು ಕಲಿತು ದೇಶಿಯರೊಂದಿಗೆ ತುಳುಕ್ರೈಸ್ತರ ಭಕ್ತಿ ಅಭಿವೃದ್ಧಿಗೆ ಉಪಯೋಗವಾಗುವ ಸತ್ಯವೇದ, ಸಂಗೀತ ಪುಸ್ತಕ. ಸತ್ಯವೇದ ಆಧಾರಿತ ತುಳು ಕಥೆಗಳು, ಕ್ರೈಸ್ತ ಬೋಧನೆಗಳು, ಮುಂತಾದವುಗಳನ್ನು ಮಾಡಿದುದಲ್ಲದೆ ಇನ್ನು ಮುಂದಕ್ಕೆ ಬರುವ ಮಿಶನರಿಗಳ ಉಪಯೋಗಾರ್ಥವಾಗಿ ನಿಘಂಟು, ವ್ಯಾಕರಣ, ಮುಂತಾದವುಗಳನ್ನು ರಚಿಸಿದರು. ಇಲ್ಲಿನ ಮುಖ್ಯ ಸಂಸ್ಕೃತಿಯಾದ ಭೂತಾರಾಧನೆ, ಗಾದೆಗಳು ಮುಂತಾದವುಗಳನ್ನು ದಾಖಲೀಕರಣ ಮಾಡಿ ಪ್ರಕಟಿಸಿರುವುದು ನಮ್ಮೆಲ್ಲರಿಗೆ ತಿಳಿದ ವಿಷಯವೇ ಆಗಿರುತ್ತದೆ.

1841ರಲ್ಲಿ ಆರಂಭವಾದ ಸತ್ಯವೇದದ ತುಳು ಭಾಷಾಂತರ ಮುಂದುವರಿದು ಹಳೆ ಒಡಂಬಡಿಕೆಯಲ್ಲಿ 37 ಪುಸ್ತಕಗಳಿದ್ದು ಇದರಲ್ಲಿ ಕೇವಲ 5 ಪುಸ್ತಕಗಳು ತುಳು ಭಾಷೆಗೆ ಭಾಷಾಂತರವಾಗಿದೆ. ಹೊಸ ಒಡಂಬಡಿಕೆಯಲ್ಲಿರುವ ಎಲ್ಲಾ 27 ಪುಸ್ತಕಗಳು ತುಳು ಭಾಷೆಗೆ ತರ್ಜುಮೆಗೊಂಡು 1847ರಲ್ಲಿ ಕಲ್ಲಚ್ಚು ಮುದ್ರಣದಲ್ಲಿ ಪ್ರಕಟವಾಗುವುದರೊಂದಿಗೆ ತುಳು ಮುದ್ರಣದ ಮೊದಲ ಮಹಾಗ್ರಂಥವೆನಿಸಿಕೊಂಡಿದೆ. ಈ ಗ್ರಂಥ ಬೆಂಗಳೂರಿನಲ್ಲಿರುವ ಬೈಬಲ್ ಸಂಸ್ಥೆಯು ಹಲವಾರು ಬಾರಿ ಮರು ಪ್ರಕಟನೆ ಮಾಡಿದ್ದು ಈಗಲೂ ಕ್ರೈಸ್ತ ಸಭೆಗಳಲ್ಲಿ, ಮನೆಗಳಲ್ಲಿ ಬಳಕೆಯಲ್ಲಿರುವುದು ಹೆಮ್ಮೆಯ ವಿಚಾರವಾಗಿದೆ. ಕಳೆದ ಮೂರು ವರ್ಷಗಳಿಂದ

114 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 115 ] ತುಳು ಸತ್ಯವೇದದ ಹೊಸ ಒಡಂಬಡಿಕೆ ಭಾಗವು ಈಗ ಬಳಕೆಯಲ್ಲಿರುವ ತುಳುವಿಗೆ ಭಾಷಾಂತರ ಕಾರ್ಯ ಪ್ರಾರಂಭವಾಗಿದ್ದು ಸಧ್ಯದಲ್ಲಿಯೇ ಬಿಡುಗಡೆಗೊಳ್ಳಲಿದೆ.

ತುಳುನಾಡಿನ ತುಳು ಕ್ರೈಸ್ತರ ಸಭೆಗಳ ಆರಾಧನೆಯು 180 ವರ್ಷಗಳ ಹಿಂದೆ ತುಳುವಿನಲ್ಲಿತ್ತು. ಸಂಗೀತ, ಪ್ರಾರ್ಥನೆ, ಸತ್ಯವೇದ ಪಠಣ, ಬೋಧನೆ ಎಲ್ಲವೂ ತುಳುವಿನಲ್ಲಿತ್ತು. ಆದರೆ ಈಗ ಕ್ರೈಸ್ತರ ಆರಾಧನೆಯ ಪ್ರಧಾನ ಭಾಷೆ ಕನ್ನಡ. ಯಾಕಂದರೆ ತುಳುನಾಡಿನಾದ್ಯಂತ ಕನ್ನಡದವರು ಉದ್ಯೋಗ ನಿಮಿತ್ತ ಬಂದವರು ಇಲ್ಲಿ ವಾಸವಾಗಿರುವುದರಿಂದ ಕನ್ನಡದ ಆರಾಧನೆಗೆ ಬದಲಾಗಿದೆ. ಆದರೂ ದೇವಾಲಯಗಳಲ್ಲಿ ಈಗಲೂ ಕೆಲವು ಕಡೆ ತುಳು ಬೈಬಲ್ ಪಠಣದ ವ್ಯವಸ್ಥೆ ಇದೆ. ಕೆಲವು ಬೋಧಕರು ತುಳುವಿನಲ್ಲಿಯೇ ಬೋಧನೆಗಳನ್ನು ಕೊಡುವುದಿದೆ. ಕ್ರೈಸ್ತರ ಮನೆಗಳಲ್ಲಿ ಸತ್ಯವೇದ ಹೇಗೆ ಮೊದಲ ಸ್ಥಾನ ಪಡೆದಿದೆಯೋ ಹಾಗೆಯೇ ಸಂಗೀತ ಪುಸ್ತಕಗಳು ಎರಡನೇ ಸ್ಥಾನವನ್ನು ಪಡೆದಿದೆ. ಪ್ರಸ್ತುತ ಕ್ರೈಸ್ತರಲ್ಲಿ ಬಳಕೆಯಲ್ಲಿರುವ ತುಳು ಸಂಗೀತ ಪುಸ್ತಕವು ಮೊದಲು ಮುದ್ರಣವಾದದ್ದು 1864ರಲ್ಲಿ, ಅದರಲ್ಲಿ 120 ಸಂಗೀತಗಳಿತ್ತು. ಇದೇ ಕೃತಿ ಪರಿಷ್ಕೃತಗೊಂಡು ಪ್ರಸ್ತುತ 251 ಸಂಗೀತಗಳಿವೆ, ಈ ಪುಸ್ತಕ ಈಗಲೂ Balmatta Institute of Printing Technology ನಲ್ಲಿ ಮರುಮುದ್ರಣಗೊಂಡು ಈಗಲೂ ದೇವಾಲಯಗಳಲ್ಲಿಯೂ, ಮನೆಗಳಲ್ಲಿಯೂ ಹಾಡಲ್ಪಡುತ್ತಿದೆ. ಎಲ್ಲಾ ತುಳು ಕ್ರೈಸ್ತರ ಸಭೆಗಳಲ್ಲಿ ಪ್ರತಿ ಭಾನುವಾರ ಆರಾಧನೆಯಲ್ಲಿ ಒಟ್ಟು 5 ಸಂಗೀತ ಹಾಡಲಾಗುತ್ತದೆ. ಇದರಲ್ಲಿ 2 ತುಳು. ಒಮ್ಮೊಮ್ಮೆ ಎಲ್ಲಾ ತುಳು ಸಂಗೀತಗಳನ್ನೇ ಹಾಡುವುದೂ ಇದೆ. ಇಡೀ ಆರಾಧನೆಗಳನ್ನು ತಿಂಗಳಿಗೊಮ್ಮೆ ತುಳುವಿನಲ್ಲಿ ನಡೆಸುವ ಕ್ರಮವೂ ಇದೆ.

ಮುಂಬಯಿಯಲ್ಲಿರುವ ಕ್ರೈಸ್ತ ಸಭೆಗಳಲ್ಲಿ ಕನ್ನಡ ಓದಲು ಬರದವರಿಗಾಗಿ ತುಳುವನ್ನು ಇಂಗ್ಲಿಷ್‌ನಲ್ಲಿ ಓದಲು ಸಹಾಯಕವಾಗುವಂತೆ ತುಳು ಸಂಗೀತ ಪುಸ್ತಕವನ್ನು TRANSLITERATION EDITION ನಲ್ಲಿ ತಯಾರಿಸಲಾಗಿದೆ. ಹೀಗಾಗಿ ಮುಂಬಯಿಯಲ್ಲಿಯೂ ಅಲ್ಲಿನ ರಾಜ್ಯ ಭಾಷೆ ಮರಾಠಿ ಆದರೂ ಅಲ್ಲಿರುವ ಕ್ರೈಸ್ತರು ತುಳು ಸಂಗೀತಗಳನ್ನು ಹೀಗೆ ಓದುತ್ತಾರೆ. ಕೊಲ್ಲಿ ರಾಷ್ಟ್ರಗಳಲ್ಲಿ ವಾಸಿಸುತ್ತಿರುವ ತುಳು ಕ್ರೈಸ್ತರು ಸಹಾ ಇಲ್ಲಿನ ಹಾಗೆಯೇ ತುಳು ಪ್ರಾರ್ಥನೆ, ತುಳು ಸಂಗೀತಗಳನ್ನು ತಮ್ಮ ಮನೆ ಪ್ರಾರ್ಥನೆಗಳಲ್ಲಿ, ಆರಾಧನೆಗಳಲ್ಲಿ ಬಳಸುತ್ತಾರೆ. ಕನ್ನಡ ಮತ್ತು ತುಳು ಸಂಗೀತವು ಈಗ 'Mangalore hymns'ಎಂಬ App ನಲ್ಲಿಯೂ ಲಭ್ಯವಿದೆ. ಇದರಲ್ಲಿ ಕನ್ನಡ ಓದಲು ಬಾರದವರಿಗೆ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 115 [ 116 ]TRANSLITERATION EDITION ಸಹಾ ಇದ್ದು ಸ್ವರಗಳೊಂದಿಗೆ ಇರುವುದರಿಂದ ಓದಿಕೊಂಡು ಸ್ವರವನ್ನು ಆಲಿಸಿಕೊಂಡು ಹಾಡುವ ವ್ಯವಸ್ಥೆ ಇದೆ. ಇವು ದೇವಾಲಯಗಳಲ್ಲಿ, ಮನೆಗಳಲ್ಲಿ ಬಳಕೆಯಾಗುತ್ತಿದೆ.

ಈ ತುಳು ರಾಗಗಳಿಗೆ ಸಂಗೀತ ಉಪಕರಣ ನುಡಿಸಲು ದಾಟಿಯ ಪುಸ್ತಕವನ್ನೂ (Mangalore Tune Book) ಮಿಶನರಿಗಳು ರಚಿಸಿದ್ದು ಈಗಲೂ ಈ ಪುಸ್ತಕ ದೇವಾಲಯಗಳಲ್ಲಿ ಹಾಗೂ ಸಂಗೀತ ನುಡಿಸುವವರ ಪ್ರತಿಯೊರ್ವರ ಕೈಯಲ್ಲೂ ಇವೆ.

ತುಳು ಸಂಗೀತ ಪುಸ್ತಕದಲ್ಲಿ ಬೇರೆ ಬೇರೆ ಸಂದರ್ಭದಲ್ಲಿ ಹಾಡತಕ್ಕ ಸಂಗೀಗಳಿರುವುದರಿಂದ ತುಳು ಸಂಗೀತಗಳು ಈಗಲೂ ಬಳಕೆ ಮಾಡುವುದು ಅನಿವಾರ್ಯವಾಗಿದೆ.

ಸುಗ್ಗಿ ಹಬ್ಬಕ್ಕಾಗಿ-

“ಕಂಡದ ಕೆಯ್ನ್, ತೋಟದ ಫಲ ಪೈರ್‌ನ್
ಕಾತ್‌ದ್ ಕೊರಿನಾಯನ್, ಕೀರ್ತಿಮುಗ- ಹಲ್ಲೆಲೂಯಾ
ಕ್ರಿಸ್ಮಸ್ಗಾಗಿ- ಬೈಪಣೆಡಿತ್ತಿನಾಯೆನೇ, ದೇವಮತ್ತೆ ಎಷ್ಟೊಣ್ಣೆ
                  ಸದ್ಗುರು ಆದ್ ಕರ್ತವೆ, ನರಾವತಾರ ದೆತ್ತೊಂಡೆ ಹಲ್ಲೆಲೂಯಾ

ವರ್ಷದ ಕಡೇ ದಿನಕ್ಕಾಗಿ-

ಈ ವರ್ಷಲಾ ಕಡತ್ ಪೋಂಡೆ, ಸುಮಾರ್ ಎನ್ನ ಸಾರ ಘಂಟೆ, ಆಂಡ್ಯನ ಪುಣ್ಯ ಯೆನ ಕರ್ಮ, ಅತ್ತತ್ ಒಂಜಿ ದಿನ ಧರ್ಮ,

ಮರಣ ಸಂದರ್ಭದಲ್ಲಿ-

ಕಡತ್ ಪಿರ ಬರಂದ್ ಕ್ಷಣತ್ತ ಉಲಯಿ ಪಾರ್‌ಂಡ್ ಅವೇ ಪ್ರಕಾರ ಪೋಪುಂಡಾ ವಿಚಾರ ಆವು ನಿಶ್ಚಯ

ಮರಣ ಸಂದರ್ಭದಲ್ಲಿ- ಸಹೋದರಾ, ಈ ನಿನ್ನ ಕರ್ತವ, ಸಂತೋಷ ಸೇರ್‌ಲ, ಈ ಲೋಕೊಡು ನಿಕ್ಕಾಯಿ ಕಷ್ಟದ, ಸಂಚಾರ ಮುಗಿತ ಔಳುಂಡು ನಿಕ್ಕಿ ಆತ್ಮಸ್ಥಾನ, ಪಡೆಲ ಔಳೆ ಸಮಾಧಾನ, ಸಹೋದರಾ

ರಾತ್ರಿ ಮಲಗುವ ಸಂದರ್ಭದಲ್ಲಿ ಅಮ್ಮಾ ಪೋಪೆ ಜೆಪ್ಪೆರೆ, ಬತ್ತೆ ಇತ್ತೆ ನನ್ನೆರೆ

116 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 117 ]

ನಿನ ಆಶೀರ್ವಾದೊನು, ದಯ ಮಳ್ ಕೊರೊಡು
      ಯೆಂಕ್‌ ಸಂಪು ನಿದ್ರೆನ್, ಕೊರ್ಲ ಇಡೀ ರಾತ್ರೆಡ್
      ನಿನ ದೂತ ಸೈನ್ಯೂನು, ದೀಲ ಯೆನ ಸೂತೊಗು.

ತುಳು ಕ್ರೈಸ್ತರು ವಿದೇಶಿ ಶೈಲಿಯ ತುಳು ಸಂಗೀತಗಳನ್ನು ಮನೆ, ದೇವಾಲಯಗಳಲ್ಲಿ ಹಾಡುವುದಲ್ಲದೆ ತುಳುವಿನಲ್ಲಿ ಹಲವಾರು ಮಕ್ಕಳ ಸಂಗೀತಗಳು,ದೇಶೀಯ ಶೈಲಿಯ ಹಾಡುಗಳು ಬಳಕೆಯಲ್ಲಿದೆ. ಮದ್ರಾಸ್‌ನ ಫೀಬಾ ರೇಡಿಯೊ ಸಂಸ್ಥೆಯಲ್ಲಿ ಡಾ. ಹನಿ ಕಬ್ರಾಲ್ ನಾಯಕತ್ವದಲ್ಲಿ ಜೀವದ ಸಾದಿ, ಜೀವದ ಬೊಳ್ಳು ಎಂಬ 15 ನಿಮಿಷಗಳ ತುಳು ಕಾರ್ಯಕ್ರಮಗಳು 8 ವರ್ಷಗಳ ಕಾಲ ಪ್ರಸಾರವಾಗಿದ್ದು ಇದರಿಂದ ಕೊಂಡಾಡುಲೆ ಹಾಗೂ ಮೇಪುನಾಯನ ಸ್ವರ ಎಂಬ 24 ದೇಶೀಯ ಶೈಲಿಯ ಹಾಡುಗಳನ್ನೊಳಗೊಂಡ ಎರಡು ಕ್ಯಾಸೆಟ್‌ಗಳು ಬಿಡುಗಡೆಯಾಗಿತ್ತು. ಈ ಹಾಡುಗಳನ್ನು ಡಾ. ಹನಿ ಕಾಲ್, ರೆವೆ. ಮೋಸೆಸ್ ಪ್ರಭಾಕರ್, ಶ್ರೀ ರೋಶನ್ ಜತ್ತನ್ನೇ ರಚಿಸಿದ್ದಾರೆ. ವಿಶ್ವವಾಣಿ ಎಂಬ ಸಂಸ್ಥೆಯಿಂದ 'ಜೀವದ ಒಸರ್ ಎಂಬ ತುಳು ಕಾರ್ಯಕ್ರಮ ಒಂದು ವರ್ಷಗಳ ಕಾಲ ಪ್ರಸಾರವಾಗಿತ್ತು. ಪ್ರಸ್ತುತ ಟ್ರಾನ್ಸ್ ವರ್ಲ್ಡ್ ರೇಡಿಯೋ ಸಂಸ್ಥೆ ವತಿಯಿಂದ 'ಬೊಳ್ಳುದ ಜೀವನ' ಹಾಗೂ 'ದೇವರೆ' ಪಾತೆರ ಎಂಬ ನೀತಿ ಬೋಧೆಗಳನ್ನು ತಿಳಿಸುವ ಎರಡು ತುಳು ಕಾರ್ಯಕ್ರಮಗಳು ಶ್ರೀಲಂಕಾ ರೇಡಿಯೋ ಕೇಂದ್ರದಿಂದ ವಾರಕ್ಕೆರಡು ಬಾರಿ ಪ್ರಸಾರವಾಗುತ್ತಿದೆ. ಇದರ ನಾಯಕತ್ವವನ್ನು ಶ್ರೀಯುತ ಆಂಡ್ರಸ್ ಸುಧಾಕರ್ ವಹಿಸಿದ್ದು ಇದೇ ಸಂಸ್ಥೆಯಿಂದ 'ಬೊಳ್ಳುದ ಜೀವನ' ಎಂಬ 9 ತುಳು ದೇಶೀ ಶೈಲಿಗಳನ್ನೊಳಗೊಂಡ ಹಾಡುಗಳಿದ್ದು ಇದನ್ನು ಶ್ರೀ ಆಂಡ್ರಸ್‌ ಸುಧಾಕರ್ ಹಾಗೂ ರೆವೆ. ಮೋಸೆಸ್ ಪ್ರಭಾಕರ್ ತರ್ಜುಮೆಗೊಳಿಸಿ ರಚಿಸಿದ್ದು ಈ ಹಾಡುಗಳು ಬಳಕೆಯಲ್ಲಿವೆ. ಪ್ರಸ್ತುತ ದೂರದರ್ಶನದ ಬಿಗ್ ಜೆ, ಛಾನೆಲ್‌ನಲ್ಲಿ ಬೊಳ್ಳುದ ಜೀವನ ಎಂಬ ತುಳು ಕಾರ್ಯಕ್ರಮ ವಾರಕ್ಕೊಮ್ಮೆ ಪ್ರಸಾರವಾಗುತ್ತಿದೆ. ಕ್ರೈಸ್ತರಲ್ಲಿ ಸಂಗೀತ, ನಾಟಕ, ಮಾದ್ಯಮ, ಸಿನೆಮಾಗಲ್ಲಿ ತಮ್ಮನ್ನು ತೊಡಗಿಸಿಕೊಂಡವರಿದ್ದಾರೆ. ಈಗಲೂ ಕ್ರೈಸ್ತ ಸಮಾಜದಲ್ಲಿ ತುಳುವಿನಲ್ಲಿ ಹೊಸ ಹೊಸ ಹಾಡುಗಳು ರಚನೆಯಾಗಿ ಬಳಕೆಯಾಗುತ್ತಾ ಇದೆ. ಉಚ್ಚಿಲದ ಬಿ.ಎಸ್. ರಾವ್ ಎಂಬವರು ತುಳುವಿನ ಸಣ್ಣ ಸಣ್ಣ ಕೋರಸ್‌ಗಳ(ಹಾಡುಗಳ) ಕ್ಯಾಸೆಟ್ ತಯಾರಿಸಿದ್ದರು. ಇವುಗಳಲ್ಲಿ ಇಂತಹ ಹಾಡುಗಳಿದ್ದವು.

ಅಮ್ಮೆರೆನ ಇಲ್ಲಡೆ ಪೋದು ಬಲ್ಲ, ಅಷ್ಟೊಡು ಉಂಡ ತೂಲ ವಾಲೆ ಬೆಲ್ಲ ಬಂಜಾರ ನೀರ್ ಪರ್ ಕಾತ್ ಕುಲ್ಲ, ಪಾರೊಂದು ಬರೆ ನಿನ್ನ ಅಮ್ಮೆ ತೂಲ

ತುಳುನಾಡಿನಲ್ಲಿ ಬಾಸೆಲ್ ಮಿಷನ್ ಮತ್ತಿತರ ಲೇಖನಗಳು... 117 [ 118 ] ದಾನೆಯೆ ದಾನೆಯೆ ಓಡೆಗ್ ಪೋಪರ್, ಎನನ್ ತೂದು ಪೋಡಿದ್ ಈರ್ ದಾಯೆಗ್ ಬಲ್ಲುವ‌ ಬಲ್ಪಂದೆ ಬಲ್ಪಂದೆ ಯಾನಾ ಬದುಕೊಡುಯಾ, ನಾಲ್ ದಿನತ ಬಾಳುವೆ ಎನ್ನ ಪೊರ್ಲುಡು ಪೋವೊಡುಯಾ

ಆರಾಧನೆಯಲ್ಲದೆ ಕ್ರೈಸ್ತರಲ್ಲಿ ತುಳು ಬಳಕೆ: ಉಡುಪಿ ಪ್ರದೇಶದ, ಅಂಬಾಡಿ, ಮಣಿಪುರ, ಶಿರ್ವ, ಪಾಂಗಾಳಗುಡ್ಡೆ, ಪಾದೂರು, ಮಲ್ಪೆ, ಬೈಲೂರು, ಕುತ್ಯಾರ್, ಸಾಂತೂರು, ಉದ್ಯಾವರ, ಮಲ್ಪೆ ಹಾಗೂ ಮಂಗಳೂರು ಪ್ರದೇಶದ ಕೆಲವುಕಡೆ ಈಗಲೂ ದೇವಾಲಯಗಳಲ್ಲಿ ನಡೆಯುವ ಸಭಾ ಮೀಟಿಂಗ್‌ಗಳು ತುಳುವಿನಲ್ಲಿಯೇ ನಡೆಯುತ್ತಿವೆ. ಹಿಂದೆ ಮೀಟಿಂಗ್ ವರದಿಗಳನ್ನು ತುಳುವಿನಲ್ಲಿಯೇ ಬರೆದಿಡಲಾಗುತ್ತಿದ್ದು ಪ್ರಸ್ತುತ ಕೆಲವು ಕಡೆ ಅದರ ಸ್ಥಾನವನ್ನು ಕನ್ನಡ ಆಕ್ರಮಿಸಿಕೊಂಡಿದೆ. ಮದುವೆ ಸಂದರ್ಭದಲ್ಲಿ ಹೆಣ್ಣು ಒಪ್ಪಿಸಿ ಕೊಡುವಾಗ, ಔತಣಕೂಟದಲ್ಲಿ ಕಾರ್ಯಕ್ರಮ ನಿರೂಪಣೆ ಮಾಡುವಾಗ ಹಳ್ಳಿ ಸಭೆಗಳಲ್ಲಿ ಈಗಲೂ ತುಳು ಬಳಕೆಯಲ್ಲಿವೆ. ಅಲ್ಲದೆ ಮನೆ ಪ್ರಾರ್ಥನೆಗಳನ್ನು ತುಳುವಿನಲ್ಲಿಯೇ.

ಕೆಥೋಲಿಕ ಕ್ರೈಸ್ತರಲ್ಲಿ ತುಳು ಭಾಷೆ: ತುಳು ಜಿಲ್ಲೆಗಳಲ್ಲಿರುವ ಎಲ್ಲಾ ಕೆಥೋಲಿಕ ಕ್ರೈಸ್ತರ ಮಾತೃ ಭಾಷೆ ಕೊಂಕಣಿ ಆದರೂ ಅವರೆಲ್ಲರೂ ತುಳು ಭಾಷೆಯನ್ನು ಬಲ್ಲವರಾಗಿದ್ದು, ಅವರೆಲ್ಲರಿಗೆ ತುಳು ಮತ್ತು ಕೊಂಕಣಿ ಎಂಬ ಎರಡು ಮಾತೃ ಭಾಷೆ ಎಂದು ಹೇಳಿದರೆ ತಪ್ಪಾಗಲಾರದು. ಅವರ ದೇವಾಲಯಗಳಲ್ಲಿ ಆರಾಧನೆಯ ಭಾಷೆ ಕೊಂಕಣಿ. ಆದರೆ ಜೆಸೂಯಿತ ಸಂಸ್ಥೆಯಿಂದ ಕ್ರೈಸ್ತ ಮತ ಸ್ವೀಕರಿಸಿದ ಪಾವೂರು ಮುಂತಾದ ಹಳ್ಳಿಗಳಲ್ಲಿ ವಾಸಿಸುತ್ತಿರುವ ಕೆಲವು ಕೆಥೋಲಿಕ ಕ್ರೈಸ್ತರ ಆಡು ಭಾಷೆ ಹಾಗೂ ಆರಾಧನಾ ಭಾಷೆ ತುಳುವಾಗಿತ್ತು. ಈ ಹಿಂದೆ ತುಳುವಿನಲ್ಲಿ ಕ್ರಿಸ್ತಾನ್ ಶಾಸ್ತ್ರದ ಪುಸ್ತಕವನ್ನೂ ರಚಿಸಲಾಗಿದ್ದು, ಪ್ರಾರ್ಥನೆ, ಹಾಡುಗಳು, ವಿಧಿ ವಿಧಾನಗಳು ತುಳುವಿನಲ್ಲಿಯೇ ನಡೆಯುತ್ತಿದ್ದರೂ ಈಗೀಗ ಕೊಂಕಣಿಗೆ ಬದಲಾಗಿದೆ. ಪಾವೂರು ದೇವಾಲಯದಲ್ಲಿ ಕಳೆದ ನೂರಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ತುಳುವಿನಲ್ಲಿ ಆರಾಧನೆ ಈಗಲೂ ನಡೆಯುತ್ತಿದೆ. ಅತ್ತೂರು ಮುಂತಾದ ಪುಣ್ಯ ಕ್ಷೇತ್ರಗಳಲ್ಲಿ ತುಳುವಿನಲ್ಲಿ ಪ್ರಾರ್ಥನೆ, ಬೋಧನೆಗಳನ್ನು ತುಳು ಭಾಷೆಯಲ್ಲಿ ಕೊಡುವ ಕ್ರಮವನ್ನು ಈಗಲೂ ಒಮ್ಮೊಮ್ಮೆ ನಡೆಸಿಕೊಂಡು ಬರಲಾಗುತ್ತಿದೆ.

ತುಳು ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಕೆಥೋಲಿಕ ಕ್ರೈಸ್ತರು ಮತ್ತು ಪ್ರೊಟೆಸ್ಟಂಟ್

ಕ್ರೈಸ್ತರು ವ್ಯವಸಾಯ, ಕೃಷಿ, ಕಂಬಳ, ಕೋಳಿ ಅಂಕ,ವ್ಯಾಪಾರ ಮುಂತಾದವುಗಳಲ್ಲಿ ಮುಂಚೂಣಿಯಲ್ಲಿದ್ದು ಎಲ್ಲಾ ಜನರೊಂದಿಗೆ ಹೊಂದಿಕೊಂಡು ಸಹಬಾಳ್ವೆ ನಡೆಸುವುದರಿಂದ ತುಳುವೇ ಅವರ ಮಾತೃಭಾಷೆಯೋ ಎಂಬಂತೆ ಹಳ್ಳಿಗಳಲ್ಲಿ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 119 ] ವಾಸಿಸುತ್ತಿರುವವರಲ್ಲಿ ನಾವು ನೋಡಬಹುದು. ಪೇಟೆಯಲ್ಲಿ ಸ್ವಲ್ಪ ಕನ್ನಡ ಹೆಚ್ಚು ಬಳಕೆಯಾದರೂ ಹಳ್ಳಿಗಳಲ್ಲಿ ಅವರು ತುಳುವರೇ ಅನಿಸುತ್ತಿದೆ. ತುಳು ಜಿಲ್ಲೆಯಲ್ಲಿ ಎಲ್ಲಿ ಕಂಬಳವಾದರೂ ಅಲ್ಲಿ ಒಂದೆರಡು ಜೊತೆ ಕೆಥೋಲಿಕ ಕ್ರೈಸ್ತರ ಎತ್ತುಗಳು ಸ್ಪರ್ಧೆಗಾಗಿ ನೀರಿಗಿಳಿಯುದನ್ನು ನಾವು ನೋಡಬಹುದು.

ತುಳು ಸಂಗೀತ ಕ್ಷೇತ್ರದಲ್ಲಿ ಕೆಥೋಲಿಕ ಕ್ರೈಸ್ತರಾದ ಎಲ್ಪಿ ರೆಮಿಂಬಸ್, ಮೆಲ್ವಿನ್ ಪೆರಿಸ್, ಎರಿಕ್ ಒಸಾರಿಯೋ ಮುಂತಾದ ಮಹನೀಯರು ಸಂಗೀತ ಕ್ಷೇತ್ರದಲ್ಲಿದ್ದು ತುಳು ಪದ್ಯಗಳನ್ನು ರಚಿಸಿ ಹಲವಾರು ಕ್ಯಾಸೆಟ್‌ಗಳನ್ನು ಹೊರತಂದಿದ್ದಾರೆ.

ಮಾಮಿನ ಇಲ್ಲಡೆ ಪೋದು ಬರ್ಕ, ಕೈಪೆ ಕಾಪಿ ಕೊಂರ್ಡ ಬೊಡ್ಡಿ ಪನ್ನ ಪೇರ್ ಕೂಟು ಕೊಂರ್ಡ ಒಯಿತ್ ಪರ, ನಮ ಮಾಮಿನ ತಮ್ಮಣ.

ಇಂತಹ ತುಳುವಿನೊಂದಿಗೆ ಗೋವಾ ಪೊಲ್ಕ ಶೈಲಿಯಲ್ಲಿ ಹಲವಾರು ಹಾಡುಗಳು ತುಳು ಜಿಲ್ಲೆಯಾದ್ಯಂತ ಪ್ರತಿಯೋರ್ವರ ನೆನಪಿನಲ್ಲಿ ಇದೆ. ಹೀಗೆ ತುಳು ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಹಾಗೂ ಪರದೇಶಗಳಲ್ಲಿ ವಾಸಿಸುತ್ತಿರುವ ತುಳು ಕ್ರೈಸ್ತರಾದ ಪ್ರೊಟೆಸ್ಟಂಟ್ ಕ್ರೈಸ್ತರು ಹಾಗೂ ಕೆಥೋಲಿಕ ಕ್ರೈಸ್ತರು ತುಳು ಬಿಡುವವರಲ್ಲ, ಬಿಟ್ಟದ್ದೂ ಇಲ್ಲ. ತುಳು ಮಣ್ಣಿನ ಮಕ್ಕಳಾಗಿ, ತುಳುವಿನ ಸಂಸ್ಕೃತಿ, ಕಂಬಳ, ಕೋಳಿ ಅಂಕ, ಎಲ್ಲದರಲ್ಲಿಯೂ ಭಾಗವಹಿಸುತ್ತಿದ್ದು ನಾವೆಲ್ಲರೂ ತುಳು ತಾಯಿಯ ಮಕ್ಕಳೇ ಎಂಬಂತೆ ಜೀವನ ಸಾಗಿಸುತ್ತಿರುವುದು ತುಳು ಅಪ್ಪೆಗೆ ಹೆಮ್ಮೆಯ ವಿಚಾರ.

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 119 [ 120 ]ಸ್ವಾತಂತ್ರ್ಯಪೂರ್ವೊದ ತುಳುನಾಡ ಸಾಹಿತಿಳು ಬೊಕ್ಕ ಸ್ವಾತಂತ್ರ್ಯ ಚಳವಳಿಡ್ ತುಳುನಾಡ್.

180 ವರ್ಷ ಪಿರವುಡೇ ತುಳುನಾಡ್‌ ತುಳುಸಾಹಿತ್ಯ ಅತ್ತಂದೆ ಬೇತೆ ಸಾಹಿತ್ಯೋಳುಲಾ ಸುರು ಆತ್‌ಂಡ್, ಕನ್ನಡ ಲಿಪಿನ್ ಉಪಯೋಗ ಮಲ್ತ್‌ದ್ ತುಳು ಸಾಹಿತ್ಯ ಮಲ್ಪರೆ ಪ್ರೋತ್ಸಾಹ ಕೊರಿನಗುಲು ಜರ್ಮಿನಿದ ಬಾಸೆಲ್ ಮಿಶನ್ ಪನ್ಪಿ ಸಂಘದ ಮಿಶನರಿನಗುಲು. ಮಿಶನರಿಳೆ ಕಾಲೊಡು ಪ್ರಕಟ ಆತಿನ ಹೆಚ್ಚಿನ ಪುಸ್ತಕೊಲು ಮಿಶನರಿಳೆಡ್ ತಯಾರ್ ಆತ್ಂಡಲಾ ಅವೆನ್ ತಯಾರ್ ಮಲ್ಪರೆ ತುಳುನಾಡ್‌ದ ಸಾಹಿತಿನಗುಲು ಬೆಂದಿನೆನ್ ನೆಂಪು ಮಲ್ಪುನವು ಮಸ್ತ್ ಅಗತ್ಯದವು ಆದುಂಡು.

ಮೆನ್ನರ್ ಬರೆಯಿ ಸುರುತ್ತ ತುಳು ನಿಘಂಟ್ ತಯಾರ್ ಮಲ್ಪುನಗ ಮಿಶನರಿ ಒಟ್ಟುಗು ಕಾಪುದ ಮದ್ವರಾಯೆರ್, ಮೂಲ್ಕಿದ ಸೀತರಾಮೆರ್, ಕುಡ್ಲದ ಸರ್ವೋತ್ತಮ ಪೈ, ಇಸ್ರಾಯೇಲ್ ಆರೋನ್ಸ್ ಬೊಕ್ಕ ಶಿವರಾವ್ ಮೊಗುಲು ಬೇಲೆ ಮಲ್ತ್ದೆರ್. ನೆಟ್ ಶಿವರಾವ್ ಪನ್ಪಿನಾರ್ ಬಾಸೆಲ್ ಮಿಶನ್ ಸಂಸ್ಥೆಡ್ ಉದ್ಯೋಗಿ ಆದಿತ್ತದ್ ಮಿಶನರಿಳೆಗೆ ಕನ್ನಡ ಸಲಹೆಗಾರೆರಾದ್ ಇತ್ತೆರ್. ಮೇರೆನ ಸಂಗ್ರಹ ರೋಗ ಚಿಕಿತ್ಸೆಯು ಪನ್ಪಿ ಬೂಕು 1930 ಡ್ ಪ್ರಕಟ ಆತ್‌ಂಡ್. ಉಂದು 1876 ಡ್ 1888 ಮುಟ್ಟ ಕನ್ನಡ ಪಂಚಾಂಗೊಡು ಬೈದಿ ಅರೆನವೆ ಲೇಖನೊಳೆ ಸಂಗ್ರಹ ಆದುಂಡು. ನೆಟ್ಟ ಊರ್ದ ಮರ್ದ್, ಗಿಡ ಮೂಲಿಕೆದ ವಿವರೊಳು ಉಂಡು. ಕ್ರೈಸ್ತೆರ್ ಬಳಸೊಂದುಪ್ಪು ತುಳು ಗೀತೊಳೆ ಪುಸ್ತಕೊಡು 251 ಗೀತೊಳು ಉಂಡು. ಐಟ್ ಹೆಚ್ಚ ಪಾಲ್‌ನ್‌ ಮಿಶನರಿನಗುಲು ಬರೆತರ್‌ಡ ಸುಮಾರ್ 18 ತುಳು ಗೀತೊಳೆನ್ ದೇಶೀಯೆರಾಯಿನ ತಿಮೋಥಿ ಫುರ್ಟಾಡೋ, ಇ. ಪಿ. ಕಾರಟ್, ಜಿ. ಪ್ರೇಮಯ್ಯ, ಜೆ.ಸೊನ್ನ, ನೆಹಸನ್ ವೀರ, ಪನಗುಲು ಬರೆತೆರ್, ಕನ್ನಡಡೊಡು ಸುಮಾ‌ರ್ ಸಾಹಿತ್ಯೋಳೆನ್ ದೇಶಿಯೆರ್ ಮಳ್ತಿನೆನ್ ನಮ ತೂವೊಲಿ.</ br>

ಕನ್ನಡ ಇಂಗ್ಲಿಷ್ ಭಾಷಾಮಂಜರಿ, ಪಿ.ಪಿ ಮಾಬೆನ್ (1909), ಇಂಗ್ಲಿಷ್ ತುಳು ಭಾಷಾಮಂಜರಿ, ಆರ್. ಟಿ. ಮಾಬೆನ್ (1905), ಪದಾರ್ಥ ವಿಜ್ಞಾನ, ಟಿ.ಮಂಗೇಶರಾವ್ (1929), ಹಿಂದೂದೇಶದ ಸಸ್ಯ ಶಾಸ್ತ್ರವು PFIDERER ನ

120 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 121 ] ಬೂಕುನು ತರ್ಜುಮೆ ಮಲ್ತಿನಗುಲು ಜಿ.ಎಸ್ ಮಾಬೆನ್ ಬೊಕ್ಕ ಗೋಪಾಲರಾವ್‌ (1919. ಪ್ರಾಣಿಗಳೂ ಪ್ರದೇಶಗಳೂ, ಪಂಜೆ ಮಂಗೇಶರಾವ್ ಬೊಕ್ಕ ಭವಾನಿ ಶಂಕರ್‌ರಾವ್ (1933) ರೋಗ ಚಿಕಿತ್ಸೆಯು, ಶಿವರಾವ್ (1930), A Handbook of Canarese Proverbs ನೆಟ್ ಇಂಗ್ಲಿಷ್ ಬೊಕ್ಕ ಕನ್ನಡ ಗಾದೆಲು ಒಟ್ಟುಗುಂಡು. ನರಸಿಂಹರಾವ್‌ (1912), ಹಿತೋಪದೇಶ, ವಿದ್ವಾನ್ ಪಿ. ಸುಂದರಶಾಸ್ತ್ರಿ (1932), ಪ್ರೇಮನಿರೂಪಣ, ಕ್ರಿಶ್ಚನ್ ಅರ್ನೆಸ್ಟ್ (1927), ಇಸೋಪನ ನೀತಿ ಕತೆಗಳು, ಕ್ರಿಶ್ಚನ್ ಮಾಬೆನ್ (1907) ಅತ್ತಂದೆ 1854ಡ್ಸ್ 1936 ಮುಟ್ಟ ಬಾಸೆಲ್ ಮಿಶನ್ ಪ್ರೆಸ್‌ಕುಲು ಪ್ರಕಟ ಮತ್ತೊಂದಿತ್ತಿ ಕನ್ನಡ ಪಂಚಾಂಗ ಪನ್ಪಿ ವಾರ್ಷಿಕ ಪತ್ರಿಕೆನ್ ತಯಾರ್ ಮಲ್ತ್ ದ್ ಕೊರೊಂದಿತ್ತಿನಾ‌ ಕಾಸರಗೋಡುದ ಪುತ್ತಳಿ ಬಾಳಪ್ಪಯ್ಯ, ಸತ್ಯ ದೀಪಿಕೆ ಪನ್ಪಿ ಪತ್ರಿಕೆಡ್ ಪಂಜೆ ಮಂಗೇಶರಾಯರ್ ಕವನ, ಅತ್ತಂದೆ ಲೇಖನೊಲೆನ್ ಬರೆವೊಂದಿತ್ತೆರ್. ನೆಟ್ಟ್ ನಮ್ಮ ತೆರಿಯೊನ್ನವು ದಾನೆಂದ್‌ಂಡಾ ತುಳುನಾಡ್‌ಡ್ ಮುದ್ರಣ ವ್ಯವಸ್ತೆ ಮಿಶನರಿಟೆಡ್ ಆಯಿನೆಡ್ ಏತ್ ಸಾಹಿತಿಳು ತಯಾರಾತೆರ್. ಅಗಲೆಗ್ ಮಿಶನರಿಟೆಡ್ ಇತ್ತಿ ಪ್ರೋತ್ಸಾಹೊಳೆನ್‌ಲಾ ನಮ ತೆರಿಯೊನೊಡು.

ಜಿಲ್ಲೆದ ತುಳು ಸಾಹಿತ್ಯದ ರಡ್ಡನೇ ಹಂತ ಅವು ಸ್ವದೇಶಿಯೆರೆಡ್, ತುಳು ಜಿಲ್ಲೆದಕಲೆಗ್ ಸ್ವರಾಜ್ಯದ ಕಲ್ಪನೆ ಬತ್ತಿನಿ 1915ಡ್ ಬೊಕ್ಕ. ಗಾಂದಿಯೆರೆನ ಗುರ್ಕಾರ್ಮೆದ ದೇಶ ಸ್ವಾತಂತ್ರ್ಯ ಚಳವಳಿಡ್ಜ್ ತುಳುವೆರ್ - ತುಳುನಾಡ್ - ತುಳು ಭಾಷೆ ಪನ್ಪಿ ಪ್ರಜ್ಞೆದ ಉದಿಪು ಆದ್ ಆ ಮೋಕೆ ಚಳವಳಿ ರೂಪು ತಾಳ್‌ಂಡ್. ರಾಜಕೀಯ ಬೊಕ್ಕ ಸಮಾಜಿಕ ಜಾಗೃತಿ ಜನೊಕ್ಲಗ್ ಮುಟ್ಟರೆ ಸಾಹಿತ್ಯನೇ ಮುಖ್ಯವಾಯಿನ ಮಾಧ್ಯಮದ ಸಂಕಲ್ಪ ಮಲ್ತಿನಕುಲು ಕೂಟ ಕಟ್ಟಿಯೆರ್. ನೆಡ್ ಬೊಕ್ಕ ಪ್ರಕಟ ಆಯಿ ಬೂಕುಲೆಡ್ ಮುಖ್ಯವಾಯಿನವು ದಕ್ಷಿಣ ಕನ್ನಡ ಜಿಲ್ಲೆ ಮತ್ತು ಬೂತಾಳ ಪಾಂಡ್ಯನ ಅಳಿಯ ಕಟ್ಟು, ಶೀನಪ್ಪ ಹೆಗ್ಗಡೆ (1919) ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ, ಗಣಪತಿರಾವ್ ಐಗಳ್ (1913) ಸ್ಥಳ ಪುರಾಣಗಳು ಗಣಪತಿರಾವ್ ಐಗಳ್ (1924) 1929 ಡ್ 1936 ಮುಟ್ಟ ಉಡುಪಿಡ್ ತುಳು ಸಾಹಿತ್ಯ ಚಳವಳಿಂದೇ ಪನೊಲಿ. ಪಣಿಯಾಡಿದರೆನ ನಾಯಕತೊಡು ಸುಮಾರ್ 11 ಕೃತಿಕ್ಕುಲು ತುಳುಟ್ಟು ಬೈದ್‌ಂಡ್. ಐಟ್ ಒಂಜಿ ಸತ್ಯಮಿತ್ರ ಬಂಗೇರೆನ ಅಳಿಯಸಂತಾನ ಕಟ್ಟ್ ದ ಗುಟ್ಟು, ಬಾಕಿದ ಬೂಕುಲಾಯಿ-ಕಿಟ್ನರಾಜಿ ಪ್ರಸಂಗೊ, ತುಳುವಾಲ ಬಲಿಯೇಂದ್ರೆ, ಕಾನಿಕೆ, ತುಳು ವ್ಯಾಕರಣ, ಮದ್‌ಮಾಳತ್ತ್ ಮದಿಮಾಯೆ, ಜನಮರ್ಲ್, ಬಂಗರಂಗಿದ ಕತೆ, ತುಳು ಪದ್ಯ ಮಾಲಿಕೆ,

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 121 [ 122 ] ಮಿತ್ಯನಾರಾಯಣ ಕತೆ, ಸತಿ ಕಮಲೆ ಈ ಬಗ್ಗೆ ಬೂಕುಲು ಇತ್ತೆದ ನಂಕೆ ಸವಾಲಾದುಂಡು. ಐಡ್ದ್ ಬೊಕ್ಕಲಾ ತುಳು ಬದ್‌ಕ್‌ದ ಕೆಲವು ಬೂಕುಲು ಪ್ರಕಟ ಆತ್ಂಡ್ ಐಟ್ ಮುಖ್ಯವಾಯಿನವು History of Tuluva, ಬಿ.ಎ.ಸಾಲೆತ್ತೂರು(1936, ಸ್ಥಾನಿಕ ಬ್ರಾಹ್ಮಣರು, ಐ.ಕೆ ಶ್ರೀನಿವಾಸ ರಾಯರ್ (1937) ಮೂಡಬಿದ್ರೆಯ ಚರಿತ್ರೆ, ವಿ. ಲೋಕನಾಥ ಶಾಸ್ತ್ರಿ(1937), ಅತ್ತಂದೆ ಗೋವಿಂದ ಪೈ ಕುಳೆನ ಕೆಲವು ಕೃತಿಕ್ಕುಲು ಬೊಕ್ಕ ಲೇಖನೊಳು ಉಂದು ಮಾತಾ ಸ್ವಾತಂತ್ರ್ಯ ಪೂರ್ವೊಡಲೇ ಪ್ರಕಟ ಆತ್‌ಂಡ್.,

1934 ಬಾಸೆಲ್ ಮಿಶನ್‌ ಪ್ರೆಸ್‌ಡ್ ಶಿವರಾಮ ಕಾರಂತೆರೆನ ಚಿತ್ರಮಯ ದಕ್ಷಿಣ ಕನ್ನಡ (ಬಾಲಕರ ಭೂಗೋಲ) ಪನ್ಪಿ ಬೂಕು ಮುದ್ರಣ ಆದ್ ಪ್ರಕಟ ಆತ್ಂಡ್ ಐಟ್ ತುಳು ಜಿಲ್ಲೆದ ಚರಿತ್ರೆ ಪನ್ಪಿನ 96 ಪಟೊಕ್ಕುಲು ಇತ್ತ್ ದ್ ಉಂದೆನ್ ಜರ್ಮನಿಡ್ ಮುದ್ರಣ ಮಳ್ತ್ದ್ ಕನತೆರ್. ಉಂದೆನ್ ತೂಂಡನೇ ಅಪಗದ ಸಾಹಿತಿಳೆನ ಜ್ಞಾನ ವಾ ಮಟ್ರೊಡು ಇತ್ತ್ಂಡ್ ಪಂಡ್ ನಂಕ್ ಅಶ್ಚರ್ಯ ಆಪುಂಡು.

ಮಿಶನರಿಲೆ ಪ್ರೋತ್ಸಾಹೊಡು ತುಳು ಸಾಹಿತ್ಯ ಮಿತ್ತ್ ಬರಿಯೆರೆ ಕಾರಣ ಪಂಡ್ ಪನ್ಪ. ಆಂಡ ಐತೊಟ್ಟುಗು ಬೆಂದಿನ ದೇಶಿಯೆರೆನ್ ನಮ ಮದತ್ ಬುಡ್ಪ. 1850ಡ್ ದುಂಬೇ ದೇಶಿಯೆರ್ ತುಳು ಸಾಹಿತ್ಯೋಡು ಬೆನೊಂದಿತ್ತೆರ್ ತೆರಿದ್ ಬರ್ಪುಂಡು. ಬರೆವೊಂದಿತ್ತೆರ್ ಆಂಡ ಪ್ರಕಟ ಆವೊಂದಿತ್ತ್ ಜಿ ಪಂಡ್‌ ಪನೊಲಿ. ಮಿಶನರಿಳೆ ನಾಯಕತೊಡು ದೇಶಿಯರ ಸಹಾಯೊಡು ತುಳು ಸಾಹಿತ್ಯೋಳು ಪ್ರಕಟ ಆತ್‌ಂಡ ದೇಶಿಯರ ಬರವುಲು ಪ್ರಕಟ ಆವಂದೆ ಅಂಚನೆ ಒರಿದ್‌ಂಡ್. ತಾಳೆಗರಿತ್ತ ತುಳು ಸಾಹಿತ್ಯೋಳು ನಂಕ್ ಎಂಚ ತಿಕ್ಕುಂಡಾ ಅಂಚನೇ ಪ್ರಕಟ ಆವಂದಿ ಕಾಕಜಿದ ಹಸ್ತಪ್ರತಿಕ್ಕುಲು ನಂಕ್ ತಿಕ್ಕುಂಡು. ನೆತ್ತ ಬಗ್ಗೆ ಸಂಶೋದನೆ ನಡಪೊಡಾತೆ.</ br>

ಸತ್ಯಮಿತ್ರ ಬಂಗೇರೆನ ಅಳಿಯ ಸಂತಾನ ಕಟ್ಟಿದ ಗುಟ್ಟುದ ಬಗೆಟ್ ಪನ್ಪಿನಾಂಡ, ಅರೆನ ಈ ಕೃತಿ ಒಡಿಪುಡು ಮುದ್ರಣ ಆತ್‌ಂಡ್. ಉಂದೆಕ್ ಅರೆನ ದೇಶಾಭಿಮಾನನೇ ಕಾರಣ ಆದಿಪೊಡು. ಕೃತಿತ್ತ ಮುನ್ನುಡಿಡ್ ಇಂಚ ಬರೆತೆರ್. ತುಳುವ ಮಹಾಸಭೆ ಮಳ್ಪು ಪ್ರಯತ್ನ ಅವೊಂಜಿ ಸಿಪಾರಸ್‌ಗ್‌ ಬೋಡಾದ್ ಮಳ್ಪು ಬೇಲೆ ಅತ್ತ್.ಅತ್ತಡ ತನುಕುಳೆ ಹೆಚ್ಚಲೆಗ್ ಬೋಡಾದ್ ಲಾ ಅತ್ತ್. ನಮ ನಾಗರೀಕತೆನ್ ಒರಿತೊಡೊಡಾಂಡ ಆ ಪ್ರಯತ್ನ ಅಗತ್ಯದವು ಇನ್ನ್ಪಿನೆನ್ ತುಳು ಜನೊಕ್ಕುಲು ಪಿಂದ್‌ ದ್ ತನುಕುಳೆ ತನುಮನ ದನೊಡ್ಡು ಐಕ್ ಸಹಾಯ ಮಲ್ಪೋಡು ಇನ್ಪಿನೆಕಾದ್ಲ ತುಳುನಾಡ್ ಒಂಜಿ ಸ್ವತಂತ್ರ ರಾಜ್ಯಾಂಗ ಆದುಪೊಡಾಯಿ ಅಗತ್ಯ ಉಂಡು ಅಂದ್‌ರ್ ಲೋಕೊಗು ಗೊಂತಾವೊಡು ಇನೆಕ್ಕಾಡ್‌ಲಾ ಈ ರಡ್ಡ್

122 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 123 ]ಉದ್ದೇಶೋಡು ತುಳುವ ಮಹಾ ಸಭೆತ್ತ ಸೇವೆಗಾದ್ ಈ ಪುಸ್ತಕೊನು ಬರೆತೆ, ಅರೆನ ಕೃತಿ ಸಂಶೋಧನೆ ಮಳ್ಪುನಗಲೆಗ್ ಒಂಜಿ ಸವಾಲಾದುಂಡು ಪಂಡ್ಂಡ ತಪ್ಪಾವಂದ್. ಚರಿತ್ರೆದ ನಿರೆಲ್, ಪುರಾಣೋಳೆ ಸಾಕ್ಷಿ, ಬೈಬಲ್‌ದ ಸಾಕ್ಷಿ. ಇಂಚ ಸಂಶೋಧನೆ ಮಳ್ತ್‌ದ್ ಬರೆತೆರ್, 38ನೆ ಪುಟೊಟ್ಟು ಆ ಕಥೆ ಉಂಡಾವರ ಕಾರಣ ಪನ್ಪಿ ತರೆಬರಹದ ಅಡಿಟ್ಟ್ ಕ್ರೈಸ್ತ ಮತ ಪ್ರಚಾರಕೆರ್ ಪ್ರೊಪಗಾಂಡ ಕಥೆಲು ಅಂದ್‌‌ದ್ ಬೇತೆ ಬೇತೆ ಕತೆಳೆನ್ ರಚನೆ ಮಳ್ತ್‌ದ್ ಬರೆವೊಂದು ಉಳ್ಳೆ‌ರ್ ಪಂಡ್ದ್ ಬರೆತೆರ್. ಯಾನ್ ಎನ್ನಿನ ಪ್ರಕಾರ ಉಂದು 1858 ಡ್ ಬಾಸೆಲ್ ಮಿಶನ್ ಪ್ರೆಸ್‌ಡ್ ಬೂತಾಳ ಪಾಂಡ್ಯನ ಅಳಿಯ ಕಟ್ಟ್ ಪನ್ಪಿ ಬೂಕು ಪ್ರಕಟ ಆತ್ಂಡ್. ಈ ಕೃತಿತ ಬಗ್ಗೆನೇ ಆರ್ ಆಂಚ ಬರೆದುಪ್ಪೊಡು.
ಅಂಚಾದ್‌ ಈತ್‌ ನೆಟ್ಟ ಪ್ರಕಟ ಆತಿ 1858 ದ ಬಾಸೆಲ್ ಮಿಶನ್‌ ಪ್ರೆಸ್‌ಡ್‌ ಪ್ರಕಟ ಆತಿ ಬೂತಾಳ ಪಾಂಡ್ಯ ಅಳಿಯ ಕಟ್ಟ್, ಬೊಕ್ಕ 1898 ಪ್ರಕಟ ಆತಿನ ಗಂಗೊಳ್ಳಿ ಕೃಷ್ಣ ರಾವ್ ರೆನ A Treatise on Aliya Santana Law and Usage, 1919 ಡ್ ಪ್ರಕಟ ಆಯಿ ಶಿನಪ್ಪ ಹೆಗ್ಡೆರೆನ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಭೂತಾಳ ಪಾಂಡ್ಯನ ಅಳಿಯ ಕಟ್ಟು, 1930 ಡ್ ಪ್ರಕಟ ಆಯಿ ಸತ್ಯಮಿತ್ರ ಬಂಗೇರೆನ ಅಳಿಯ ಸಂತಾನದ ಗುಟ್ಟು ಈ ನಾಲ್ ಕೃತಿಕ್ಕುಲು ಸಂಶೋಧನೆಗ್ ಒಂಜಿ ವಿಷಯನೇ ಆದುಂಡು.
ಸತ್ಯಮಿತ್ರ ಬಂಗೇರ್ರು ಸಾಹಿತಿ ಮಾತ್ರ ಅತ್ತ್. ಆರ್ ಸ್ವಾತಂತ್ರ್ಯ ಚಳವಳಿಡ್‌‌ಲಾ ಇತ್ತೆರ್, ದಕ್ಷಿಣ ಕನ್ನಡ ಜಿಲ್ಲೆಡ್ ತೋಜಿದ್ ಬರ್ಪಿನಾತ್ ಮತ ಧರ್ಮೊಳೆ ವೈವಿದ್ಯ ಮಸ್ತ್ ಊರುಳೆಡ್ ತೋಜಿದ್ ಬರಂದ್, ಮತ ಧರ್ಮೊಳೆ ವೈವಿದ್ಯತೆಡ್ ಏಕತೆನ್ ತೂವೊಡಾಂಡ ದಕ್ಷಿಣ ಕನ್ನಡ ಜಿಲ್ಲೆ ಒಂಜಿ ಮಾದರಿ ಆದುಂಡು. ಮೂಳು ವಾ ಒಂಜಿ ಜಾತಿದಾಯೆ ಕುಡೊಂಜಿ ಜಾತಿದಾಯನೊಟ್ಟುಗು ತನ್ಕುಳೆ ಗೌರವೊನು ಕಾತೊಂದು ಬಾಕಿ ಜಾತಿದಕಲೆನ್ ಗೌರವ ಮಳಪುನವು ಮೂಳು ನಡತೊಂದೆ ಬೈದ್ಂಡ್, ದೇವಾಲಯ, ದೇವಸ್ಥಾನೊಳೆಡ್ ತನ್ಕುಳೆಗ್ ತಿಕ್ಕೊಡಾಯಿ ಸ್ಥಾನೊಗಾದ್ ಕೋರ್ಟುದ ಮುಟ್ಟುಲ ಮಿತ್ತರಿನಕುಲು ಉಪ್ಪು, ಆಂಡ ನಿಗಲ್ನ ದೇವೆರ್ ಅತ್ತ್ ಜಾತಿಲಾ ಅತ್ತ್ ಪಂಡ್ದ್ ಎರ್ಲಾ ಏರೆಗ್ಲಾ ಹಲ್ಕಿ ಮಳ್ವುಜೆರ್, ನೆಟೆ ನಮ ಜಾತಿಗ್ ಜಾತಿ ಪಗೆ ನಾಯಿಗ್ ನಾಯಿಗ್ ನಾಯಿ ಪಗೆ ಪನ್ಪಿ ಗಾದೆನ್ ನೆಂಪು ಮಳ್ತೊನೊಲಿ.ದಕ್ಷಿಣ ಕನ್ನಡ ಜಿಲ್ಲೆದ ಸ್ವಾಂತಂತ್ರ್ಯ ಚಳವಳಿಡ್ ಹಿಂದೂ, ಮುಸಲ್ಮಾನ, ಕ್ರೈಸ್ತ ಪನ್ಪಿ ಬೇದದಾಂತೆ ಮಾತ ಜಾತಿದಕುಲು ಭಾಗವಹಿಸದೆ‌ರ್ ಪಂಡ್ದ್ ನಮ ಚರಿತ್ರೆಡ್ ತೂಪ.
1915ಮುಟ್ಟ ಜಿಲ್ಲೆದ ಜನೊಕ್ಲಗ್ ಸ್ವರಾಜ್ಯದ ಕಲ್ಪನೆ ಇತ್ತ್‌ಜಿ. 1916 ಬೊಕ್ಕ


ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 123 [ 124 ] 1917ಡ್ ಕುಡ್ಲ‌ ಬತ್ತಿ ಸತ್ಯಮೂರ್ತಿ ಬೊಕ್ಕ ಅನ್ನಿ ಬೆಸೆಂಟ್ ಮೊಗುಲು ಹೋಂ ರೂಲ್ ಚಳವಳಿದ ಬಗ್ಗೆ ಜನೊಕ್ಲಗ್‌ ತೆರಿಪಾಯೆರ್. ಮೊಗಲ್ನ ಬಾಷಣೊಲೆ ಪ್ರಭಾವ ಮಳ್ತಗಲೆಡ್ ಆಯಿಜಿಡಲಾ ಅವ್ವೇ ಸಮಯಯೊಡು ಸದಾಶಿವರಾಯರ್, ಕುದ್ಮುಲ್ ರಂಗರಾಯೆರ್ ಇಂಚಿತ್ತಿನಗಲ್ನ ನಾಯಕತ್ವೊಡು ಹೋಂ ರೂಲ್ ಚಳವಳಿ ಜಿಲ್ಲೆಡ್ ಸುರು ಅಂಡ್. 1920 ಅಗಸ್ಟ್ ತಿಂಗೊಲ್‌ಡ್ ಕುಡ್ಲಗ್ ಬತ್ತಿ ಗಾಂದೀಜಿ ಬಹಿರಂಗ ಸಭೆಟ್ ಅಸಹಕಾರ ಚಳವಳಿದ ಬಗ್ಗೆ ಪಾತೆರಿಯೆರ್. ಆನಿ ಭಾಷಣ ಕೇನಿಯರೆ ಬತ್ತಿತ್ತಿ ಮೊಂಜೋವುಲು ತನ್ಕುಲೆಡ ಇತ್ತಿ ಪದ್ದೆಯಿ ಬಂಗಾರ್‌ಳನ್ ದೆತ್ತ್ದ್ ಗಾಂದಿಜಿಡ ಕೊರುದು ರಾಷ್ಟ್ರೀಯ ನಿದಿತ್ತ ಕರ್ಚಿಗ್ ಅವೆನ್ ಉಪಯೋಗ ಮಲ್ತೊನ್ರೆ ಪಂಡರ್‌ಗೆ.

1921 ಡ್ ಉಡುಪಿಡ್ ಕಾಂಗ್ರೆಸ್ ಸಮಿತಿ ಒಂಜಿ ಅಂಡ್.ಉಂದುವೇ ಸಮಯೊಡು ಕಾರ್ನಾಡ್ ಸದಾಶಿವರಾಯೆರ್, ಕೋಟ ರಾಮಕೃಷ್ಣ ಕಾರಂತೆರ್, ಕಾಸರಗೋಡುದ ಶೆಡ್ಡೆ ಲಕ್ಷ್ಮಣ ರಾವ್, ಕಾರ್ಲದ ಪದ್ಮನಾಭ ಕಾಮತ್, ಉಡುಪಿದ ಕುಬೇರ ಪಾಂಡುರಂಗ ರಾವ್, ಕುಂದಾಪುರದ ಮಹಾಬಲ ಹೊಳ್ಳ ಇಂಚಿತ್ತಿನಕುಲು ತನ್ಕುಳೆ ವಕೀಲಿ ವೃತ್ತಿನ್ ಬುಡ್ಡು ಚಳವಳಿಗ್ ಜತ್ತೆರ್. ಸತ್ಯ ಮಿತ್ರ ಬಂಗೆರುಲಾ ಉಂದುವೆ ಸಮಯೊಡು ಮಾಸ್ತ್ರು ಬೇಲೆಗ್ ರಾಜಿ ಕೊರ್ದು ಚಳವಳಿಗೆ ಜತ್ತೆರ್. ಅಪಗ ಆರ್ ಮಿಶನ್ ಸಂಸ್ಥೆ ನಡಪಾವೊಂದಿತ್ತಿ ಶಾಲೆಡ್ ಮಾಸ್ಟು ಅದಿತ್ತೆರ್. ಕೆನರಾ ಹೈಸ್ಕೂಲ್‌ ಮಾಸ್ಟು ಅರೆಬೈಲು ಬೋಜರಾಯೆ‌ ರಾಜಿನಾಮೆ ಕೊರಿನದಗ ಅರೆನೊಟ್ಟುಗು 15 ಜನ ಶಾಲೆ ಕಲ್ಲು ಜೋಕುಲುಲಾ ಅರೆ ಬೆರಿಯೆ ಬತ್ತೆರ್‌ಗೆ ಉಡುಪಿದ ವಿ.ವಿ. ಬಾಳೀಗ, ಹಿರಿಯಡ್ಕ ರಾಮರಾಯ ಮಲ್ತೆರ್, ಶಾಲೆ ಬುಡಿಯೆರ್. 1930 ಎಪ್ರಿಲ್‌ಡ್ ಕುಡ್ಲಡ್ ಉಪ್ಪುದ ಸತ್ಯಾಗ್ರಹ ನಡತ್‌ಂಡ್. ಅಪಗ ಉಮೇಶರಾವ್, ಅರ್. ಕೆ. ಪ್ರಭು, ಶೇಕ್ ಉಸ್ತುಪ್, ಮೊಕಲ್ಪ ಬಂಧನ ಆಂಡ್. ಅವೇ ಸಮಯೊಡು ಮಲ್ಪೆ, ಪಡುಬಿದ್ರಿ, ಕುಂದಾಪುರ, ಕಾಪು, ಕುಂಬಳೆ, ಕಾಸರಗೊಡು, ಮಂಜೇಶ್ವರ, ಸುರತ್ಕಲ್, ಕಟಪಾಡಿ ಇಂಚಿತ್ತಿ ಕಡೆಟ್ಸ್ ಉಪ್ಪುದ ಸತ್ಯಾಗ್ರಹ ನಡತ್‌ಂಡ್. ಮುಲ್ಪ ಕೃಷ್ಣ ರಾವ್ ಕೊಡ್ಡಿ, ಅಣ್ಣಪ್ಪ ಕಾರಂತ, ಯಸ್‌. ಯು. ಪಣಿಯಾಡಿ, ರಾಮರಾಯ ಮಲ್ಯ, ಕಾರ್ನಾಡ್ ಸದಾಶಿವರಾಯೆರ್‌ ಇಂಚಿತ್ತಿನಕುಲು ಬಂದನ ಆಯೆರ್. ಅಪಗ ಜಿಲ್ಲೆದ ಸುಮಾರ್ 159 ಜನ ಬಂದನ ಆದಿತ್ತೆರ್, ಜಿಲ್ಲೆದ ಸ್ವಾತಂತ್ರ್ಯ ಚಳವಳಿಡ್ ಪೊಳಲಿ ಶೀನಪ್ಪ ಹೆಗ್ಗಡೆ, ಷರ್ಡಪ್ಪ ಕಾಮತ್, ಕೆ. ಆರ್. ಕಾರಂತ, ವೆಂಕಟರಾಯ ಬಾಳಿಗ, ಯು. ಎಸ್. ಮಲ್ಯ, ಎಸ್. ಎನ್. ಹೊಳ್ಳ, ಎನ್. ಎಸ್. ಕಿಲ್ಲೆ, ಎ. ಬಿ. ಶೆಟ್ಟಿ, ಕೆ. ಕೆ. ಶೆಟ್ಟಿ, ಕಯ್ಯಾರ ಕಿಞಣ್ಣ ರೈ, ಅಮ್ಮೆಂಬಳ ಬಾಳಪ್ಪ, ಯಡ್ತರೆ ಸುಬ್ಬಣ್ಣ ಶೆಟ್ಟಿ

124 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 125 ] ಇಂಚಿತ್ತಿ ಮಸ್ತ್ ಗಣ್ಯೆರ್ ಭಾಗವಹಿಸದಿತ್ತೆರ್.

ಹರಿಜನೊದ್ದಾರ, ಖಾದಿ ಗ್ರಾಮೋದ್ಯೋಗ, ಹಿಂದೀ ಪ್ರಚಾರ, ಪತ್ರಿಕಾ ಬರವಣಿಕೆ ಇಂಚ ಬಗೆ ಬಗೆಟ್ ಜನಜಾಗೃತಿ ಮಲ್ತೊಂದಿತ್ತೆರ್. ಗಂಗಸರ ವಿರುದ್ಧ ನಡತಿ ಚಳವಳಿದಪಗ ಪರಡೆ ಕಲಿ ಗಂಗಸರೊ ಪನ್ಪಿ ತುಳು ಪದ ಓಣಿ ಒರ್ಕುಲೆಡ್ ಕೇನೊಂದಿತ್ತ್ಂಡ್‌ಗೆ. ಉಂದು ತುಳುನಾಡ್‌ಡ್ ನಡತಿ ಸ್ವಾತಂತ್ರ್ಯ ಚಳವಳಿದ ಚಿತ್ರಣ. ಸತ್ಯಮಿತ್ರ ಬಂಗೇರು, ಕ್ರೈಸ್ತರಾದ್, ಕ್ರೈಸ್ತ ಸಂಸ್ಥೆಡ್ ಬೇಲೆ ಮಲ್ತೊಂದು ಉಪ್ಪುನಗ ತಾನ್ ತನ್ನ ನಾಡ್‌ಗಾದ್ ಸೇವೆ ಮಲ್ಪೋಡು ಪಂಡ್‌ದ್ ಈ ಕ್ಷೇತೊಗು ಜತ್ತ್‌ದ್ ತಾನ್ ಸೈಪಿನೆಟ್ಟ ಇತ್ತ್‌ದ್ ಮದಪೆರಾವಂದಿ ತುಳುವೆರಾಯೆರ್.ಆರ್ ತನ್ನ ಕೃತಿ ಅಳಿಯ ಸಂತಾನ ಕಟ್ಟ್‌ದ ಗುಟ್ಟುನು ಮಿಶನ್ ಪ್ರೆಸ್‌ಡ್ ಅಚ್ಚಿ ಮಳ್ಳಾವಂದೆ ಉಡುಪಿಡ್ ಅಚ್ಚಿ ಮಲ್ತ್‌ದುಪ್ಯೆರೆ ತನ್ನ ದೇಶಾಭಿಮಾನನೇ ಕಾರಣ ಆದಿಪ್ಪೋಡು. ಆರ್ ಮಿಶನರಿಳೆನ್ ದೂರಂದೆ ಅಗಲ್ನ ಸೇವೆನ್ ಪುಗರ್ಪೆರೆ ಪನ್ಪಿನೆಕ್ ಅರ್ ಬರೆತಿ 'ಮಿಶನರಿಳುಲಾ ತುಳು ಬಾಸೆಲಾ' ಪನ್ಪಿ ಲೇಖನ ಸಾಕ್ಷಿ ಆದುಂಡು. ಬಂಗೇರ್ರೆನ ಜತೆತ್ತಾರ್ ಆದಿತ್ತಿ ಪಡಿಯಾಡಿಯೆ‌ರ್‌ಲಾ ಪರಂಗಿದಕುಲು ಮೂಲು ಬತ್ತದ್ ತುಳುಟ್ಟು ಬೆನ್ನಿ ಬೆಂದರ್‌ಗೆ ನಂಕ್ ದಾಯೆ ಆಪುಜಿ ಪನ್ಪಿ ಆರ್ ಅಗುಲೇ ಎಂಕ್ ಗುರು ಪಂಡ್ದ್ ಪಂಡ ತಪ್ಪಾವಂದ್ ಪಂಡ್ದ್ ಪನ್ಪೆರ್. ಕ್ರೈಸ್ತೆರೆಡ್ ದಕ್ಷಿಣ ಕನ್ನಡ ಜಿಲ್ಲೆಡ್ ಸ್ವಾತಂತ್ರ್ಯ ಚಳವಳಿಡ್ ಭಾಗವಹಿಸ್‌ದಿನ ಬಂಗೇರ್ರು ಅತ್ತಂದೆ ಬೇತೆ ಬೇತೆ ಚಳವಳಿಡ್ ಭಾಗವಹಿಸಿದಿನ ಉಚ್ಚಿಲದ ಟಿ. ಎಮ್, ಸೋನ್ಸ್, ಬೆದ್ರದ ಆರ್ಲ್ಬಡ್ ಸೋನ್ಸ್, ಬೊಲ್ಯದ ಅಬ್ರಹಾಮ್ ಅಮ್ಮನ್ನ, ಕುಡ್ಲದ ಎಬ್ರೇಜರ್ ಸೋನ್ಸ್, ಶದ್ರಾಕ್ ಸೋನ್ಸ್ ಸಿಂಸನ್ ಸೋನ್ಸ್ ಇಂಚಿತ್ತಿನಗಲ್ನ ಪುದರುಳುಲಾ ಕೇಂಡ್ದ್ ಬರ್ಪುಂಡು. ಡಾ. ಪೀಟರ್ ಪ್ರಭಾಕರ್ ಬರೆತಿ ಸತ್ಯಮಿತ್ರ ಬಂಗೇರ್ರೆನ ಬದ್‌ಕ್ ಬರವು ಪನ್ಪಿ ಕೃತಿಟ್ಟ್ ನೆತ್ತ ಬಗ್ಗೆ ಒಂತೆ ವಿಟಾರೊಲು ತೋಜಿದ್ ಬತ್ತ್ಂಡ್ ನೆತ್ತ ಬಗ್ಗೆ ವಾ ಸಂಶೋಧನೆಲ್ಲಾ ಈತ್‌ನೆಟ್ಟ ನಡತ್‌ಜಿ.

ಸ್ವಾತಂತ್ರ್ಯ ಸಂಗ್ರಾಮೊಡು ಮೂಡ್ಡು ಬತ್ತಿನ ಐಕ್ಯ, ಜಾಗೃತಿ, ದೇಶಾಭಿಮಾನ ಅಂಚೆನೇ ಸಾಮಾಜಿಕ ಬೇಲೆ ಬುಳೆಯಿ ರೀತಿಳೆನ್ ಪ್ರತ್ಯೇಕವಾದ ಅಧ್ಯಯನ ನಡಪೊಡು. ಇಂಚಿತ್ತಿ ಗೇನ ನಂಕ್ ಮಾತೆರೆಗ್ ಉಪ್ಪೊಡು ಅಂಚಾಂಡ ಮಾತ್ರ ತುಳು ಸಾಹಿತ್ಯೋಡು, ಸ್ವಾತಂತ್ರ್ಯ ಸಂಗ್ರಾಮೊಡು ನಮ್ಮ ಜಿಲ್ಲೆದ ಜನೊಕ್ಲು ಬೆಂದಿನೆನ್ ನೆಂಪು ಮಳ್ತೊಂಡಿಲೆಕ್ಕ ಆವು ಪನ್ಪಿನವೇ ಎನ್ನ ಆಶಯ.

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

125 [ 126 ]

ಬಿಲ್ಲವರು ಕ್ರೈಸ್ತರಾಗಲು ಕಾರಣಗಳು

ಮತ್ತು ನಂತರದ ಸಮಸ್ಯೆಗಳು

19ನೇ ಶತಮಾನದ ನಂತರ ಭಾರತ ದೇಶವು ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ಪ್ರಗತಿ ಕಂಡಿತು. ಈ ಕಾಲದಲ್ಲಿ ತಲೆ ಎತ್ತಿದ ಅನೇಕ ಸಾಮಾಜಿಕ - ಧಾರ್ಮಿಕ ಚಳವಳಿಗಳು ಭಾರತವನ್ನು ಮಧ್ಯ ಯುಗದಿಂದ ಆಧುನಿಕತೆಯತ್ತ ಒಯ್ದವು. ವೈಚಾರಿಕ ವಲಯದಲ್ಲಿ ಹೊಸತನ, ಆತ್ಮಶೋಧನೆ, ವೈಜ್ಞಾನಿಕ ದೃಷ್ಟಿಕೋನ, ತನ್ನದೆಂಬುದರಲ್ಲಿ ಅಭಿಮಾನ, ಮೊದಲಾದವು ಈ ಚಳವಳಿಯ ವಿಶೇಷ ಲಕ್ಷಣಗಳಾಗಿದ್ದವು. ಈ ಚಳುವಳಿಯಿಂದಾಗಿ ಪಾಶ್ಚಾತ್ಯ ಪ್ರಭಾವದಲ್ಲಿ ಮುಳುಗಿ ಹೋಗಲಿದ್ದ ಪ್ರಾಚೀನ ಭಾರತೀಯ ಸಂಸ್ಕೃತಿ ಮತ್ತು ನಾಗರೀಕತೆ ಪುನಶ್ವೇತನಗೊಂಡಿತು. 18ನೇ ಶತಮಾನದ ಉತ್ತರಾರ್ಧ ಹಾಗೂ 19ನೇ ಶತಮಾನದ ಆದಿಭಾಗದಲ್ಲಿ ಭಾರತೀಯರಲ್ಲಿ ಪಾಶ್ಚಾತ್ರೀಕರಣ ಭರದಿಂದ ಸಾಗಿತು. ಪಾಶ್ಚಾತ್ಯ ಶಿಕ್ಷಣದಿಂದ ಎಚ್ಚೆತ್ತ ಭಾರತೀಯ ಬುದ್ಧಿಜೀವಿಗಳು ತಮ್ಮ ಕ್ಲಿಷ್ಟವಾಗಿದ್ದ ಧಾರ್ಮಿಕ ಮತ್ತು ಸಾಮಾಜಿಕ ಕಟ್ಟುಪಾಡುಗಳನ್ನು ಸಡಿಲಿಸಿ ಆಧುನಿಕವೆನಿಸಿದ ವಿದೇಶಿ ತತ್ವಗಳಿಗೆ ತಮ್ಮ ನಂಬಿಕೆ, ಕಟ್ಟುಪಾಡುಗಳನ್ನು ಮಾರ್ಪಾಟುಗೊಳಿಸಿ ಆಧುನಿಕವೆನಿಸಿದ ಅನ್ಯ ತತ್ವಗಳಿಗೆ ಅನ್ಯ ತತ್ವಗಳಿಗೆ ತಮ್ಮ ನಂಬಿಕೆಗಳನ್ನು ಕೊಳ್ಳತೊಡಗಿದರು. ಪರಿಣಾಮವಾಗಿ ಭಾರತೀಯರ ದೃಷ್ಟಿಕೋನ ಮತ್ತು ವೈಚಾರಿಕತೆಯಲ್ಲಿ ನವಚೈತನ್ಯ ಮೂಡಿತು. ಭಾರತೀಯ ಸಂಸ್ಕೃತಿ ಮುನಶ್ವೇತನ ಗೊಂಡು ರಾಷ್ಟ್ರೀಯ ಜಾಗೃತಿ ಮೂಡಲು ಅನುವಾಯಿತು.

ಭಕ್ತಿ ಚಳುವಳಿಗಳು ಸಾರ್ವಜನಿಕ ನೆಮ್ಮದಿಗೆ ಭಂಗ ತರುತ್ತವೆ. ಅವು ಅಸ್ವಸ್ಥ ಸಮಾಜದ ಲಕ್ಷಣಗಳು ಎನ್ನುವವರಿದ್ದಾರೆ. ಆದರೆ ವಸ್ತುಸ್ಥಿತಿ ಹಾಗಿಲ್ಲ. ಭಕ್ತಿ ಚಳುವಳಿಗಳಿಂದ ಪರೋಕ್ಷವಾಗಿ ಸಮಾಜ ಸುಧಾರಣೆಯಾಯಿತು ಎನ್ನುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಇಹಲೋಕದ ಜೀವನದಲ್ಲಿ ಸಾರ್ಥಕತೆ, ಪರಲೋಕದಲ್ಲಿ ಮೋಕ್ಷವನ್ನು ಪಡೆಯಬೇಕೆನ್ನುವ ಒಂದು ಪ್ರೇರಣೆಯೇ ಭಕ್ತಿಯ ಉಗಮಕ್ಕೆ ಕಾರಣವಾಗಿರಬಹುದು. ಕಾಲಕಾಲಕ್ಕೆ ಭಕ್ತರ ಸಮೂಹ ಅಥವಾ ಸಮುದಾಯಗಳ ಧಾರ್ಮಿಕ ಮೂಢನಂಬಿಕೆ, ಕಂದಾಚಾರಗಳನ್ನು ತೊಡೆದು ಹಾಕಿ ಸಮಾಜದಲ್ಲಿ

126 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.. [ 127 ] ಪರಿವರ್ತನೆಯನ್ನು ತರಲು ಪ್ರಯತ್ನ ಮಾಡಿದೆ. ವಿದೇಶಿಯರ ಆಳ್ವಿಕೆಯು- ರಾಜಕೀಯ, ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ವಲಯಗಳಲ್ಲಿ ಭಾರತೀಯರನ್ನು ಬಡಿದೆಬ್ಬಿಸಿದೆ. ಇದರಿಂದ ಬಹುಮಂದಿ ಮತಪರಿವರ್ತನೆ ಹೊಂದಿದರೆಂದರ್ಥವಲ್ಲ. ಆದರೆ ಅನೇಕ ಮಂದಿ ಬುದ್ಧಿಜೀವಿಗಳು ಮತ್ತು ಸುಧಾರಕರು ಹಾಗೂ ಸಂತರು ಸಂಪ್ರದಾಯಸ್ಥ ಹಿಂದೂ ಧರ್ಮಕ್ಕೆ ಹೊಸ ಚೈತನ್ಯ ನೀಡಲು ಹೊಸ ದಿಕ್ಕಿನಲ್ಲಿ ಯೋಚಿಸಿ ಕಾರ್ಯ ತತ್ಪರರಾದರು.

ಭಾರತಕ್ಕೆ ಅಗಮಿಸಿದ ಮಿಶನರಿ ಸಂಸ್ಥೆಗಳ ಮೂಲ ಉದ್ದೇಶ ಧರ್ಮ ಪ್ರಚಾರವಾದರೂ ಅದಕ್ಕೆ ಪೂರಕವಾಗಿ ಶಿಕ್ಷಣ, ಉದ್ಯೋಗ, ಕೈಗಾರಿಕೆ ಹಾಗೂ ವೈದ್ಯಕೀಯ ನೆರವು ಮೊದಲಾದ ಜನಹಿತ ಕಾರ್ಯಕ್ರಮಗಳನ್ನು ಕೈಗೊಂಡರು. ಇಂತ ಮಾನವೀಯ ಮೌಲ್ಯಗಳನ್ನೊಳಗೊಂಡ ಕಾರ್ಯಕ್ರಮಗಳು ಭಾರತೀಯ ಬುದ್ಧಿಜೀವಿಗಳ ಮೇಲೆ ಪ್ರಭಾವ ಬೀರತೊಡಗಿದವು. ಪರಿಣಾಮವಾಗಿ ಹಿಂದೂ ಸಮಾಜ ಹಾಗೂ ಧರ್ಮದಲ್ಲಿ ಅರಿವು ಮೂಡತೊಡಗಿತು. ಕ್ರೈಸ್ತರ ಪರೋಪಕಾರಿ ಸೇವೆಯನ್ನು ಮೆಚ್ಚಿ, ಇದರಿಂದ ಎಚ್ಚೆತ್ತ ಬುದ್ಧಿಜೀವಿಗಳು ಹಾಗೂ ಸುಧಾರಕರು ತಮ್ಮ ಧಾರ್ಮಿಕ ಸಾಮಾಜಿಕ ನಂಬಿಕೆಗಳನ್ನು ಸುಧಾರಿಸಿ ಪಾಶ್ಚಾತ್ಯರ ಉದಾರತೆ ಮತ್ತು ಸ್ವತಂತ್ರ ಭಾವನೆಗಳನ್ನು ರೂಢಿಸಿಕೊಳ್ಳಲು ಕರೆಯಿತ್ತರು.

{{gap}]ಜೈನ ಆಳ್ವಿಕೆಯ ಪತನದೊಂದಿಗೆ ಬಿಲ್ಲವರ ಅವನತಿಯೂ ಪ್ರಾರಂಭವಾಯಿತು ಎನ್ನಬಹುದು. 15ನೇ ಶತಮಾನದಲ್ಲಿ ವೀರಶೈವ ಅರಸರ ಆಳ್ವಿಕೆಯ ಕಾಲದಲ್ಲಿ ತುಳುನಾಡಿನಲ್ಲಿ ಪುರೋಹಿತಶಾಹಿಗಳ ಪ್ರಾಬಲ್ಯ ಮೆರೆಯಿತು. ಶೈಕ್ಷಣಿಕವಾಗಿ, ಆರ್ಥಿಕವಾಗಿ ಪ್ರಬಲರಾಗಿದ್ದ ಅವರು ಅಳರಸರುಗಳ ಕೈಕೆಳಗೆ ದಿವಾನರಾಗಿ, ಶ್ಯಾನುಭೋಗರಾಗಿ ಪ್ರಮುಖ ಹುದ್ದೆಗಳನ್ನು ಆಲಂಕರಿಸಿಕೊಂಡರು. ವ್ಯಾಪಾರ ವ್ಯವಹಾರಗಳನ್ನು ಪ್ರಾರಂಭಿಸಿದರು. ಪರಿಣಾಮವಾಗಿ ಇಲ್ಲಿಯ ಮೂಲ ನಿವಾಸಿಗಳು ತಮ್ಮ ಪ್ರಾಮುಖ್ಯತೆಯನ್ನು ಕಳಕೊಂಡರು. ಆಗ ಜಾತಿಯ ಅಸ್ಪೃಶ್ಯತೆ ಹುಟ್ಟಿಕೊಂಡಿತು. ಬ್ರಿಟಿಷ್ ಆಳ್ವಿಕೆಯ 18ನೇ ಶತಮಾನದ ಕಾಲದಲ್ಲಿ ಪ್ರಥಮವಾಗಿ ಭೂಮಿಯ ದಾಖಲೆಯನ್ನು ಸಿದ್ಧಪಡಿಸುವಾಗ ಶತಮಾನಗಳಿಂದ ಭೂಮಿ ಹುಟ್ಟುವಳಿಗಳನ್ನು ಅನುಭವಿಸಿಕೊಂಡು ಬಂದಿದ್ದ ಬಿಲ್ಲವರನ್ನು ಹಾಗೂ ಇತರ ಹಿಂದುಳಿದ ವರ್ಗದವರನ್ನು ಗೇಣಿದಾರರೆಂದು ದಾಖಲಿಸಲಾಯಿತು. ಮೇಲು ವರ್ಗದವರು ನಿರಾಯಾಸವಾಗಿ ಭೂಮಿಯ ಒಡೆಯರೆನಿಸಿಕೊಂಡು ಗೇಣಿ ವಸೂಲಿ ಮಾಡಲು ತೊಡಗಿದರು.

ಕೆಲವೆಡೆ ಬಿಲ್ಲವರ ಅಪಾರ ಸ್ವಯಾರ್ಜಿತ ಭೂಮಿಗಳನ್ನು ದೈವದ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 127 [ 128 ] ಉಂಬಳಿಯೆಂದೋ ಭೋಗದ ಜಮೀನೆಂದೋ ಉಲ್ಲೇಖಿಸಿ ಕಿತ್ತುಕೊಳ್ಳಲಾಯಿತು. ವೈದಿಕ ಸಂಸ್ಕೃತಿಯು ಆಳವಾಗಿ ಬೇರು ಬಿಡತೊಡಗಿದಂತೆ ಬಿಲ್ಲವರು ಕಡೆಗಣಿಸಲ್ಪಟ್ಟು ಅಸ್ಪಶ್ಯರೆನಿಸಿಕೊಂಡರು. ಇದರ ಪರಿಣಾಮವಾಗಿ 19ನೇ ಶತಮಾನದ ಅವಧಿಯಲ್ಲಿ ಸಾಕಷ್ಟು ಬಿಲ್ಲವರು ಕ್ರೈಸ್ತ ಮತಕ್ಕೆ ಮತ್ತು ಬ್ರಹ್ಮ ಸಮಾಜಕ್ಕೆ ಸೇರಿದರು.

ಕ್ರೈಸ್ತ ಧರ್ಮದ ಬೋಧನೆಯನ್ನು ಆಲಿಸಿದ ಬಿಲ್ಲವರು ತಮ್ಮ ಧರ್ಮವೂ ಸಾಮಾಜಿಕ ಸ್ಥಿತಿಗತಿಗಳೂ ನಿಷ್ಟ್ರಯೋಜಕ. ಅಲ್ಲದೆ ದೇಶಿಯ ಕ್ರೈಸ್ತರ ಜೀವನ ಶೈಲಿಯು ತಮ್ಮದಕ್ಕಿಂತ ಎಷ್ಟೋ ಉತ್ತಮ ಎಂಬುದನ್ನು ಕೆಲವರು ಅರಿತರು. ತಮ್ಮ ಭೂತಗಳು ಭಯ ಹುಟ್ಟಿಸುವಂಥವುಗಳು. ಭೂತಗಳು ಹಾಗೂ ಪೂಜಾರಿಗಳಿಂದ ತೊಂದರೆ ಕಿರುಕುಳದ ಭಾವನೆ, ಕ್ರೈಸ್ತರು ಭೂತಗಳಿಂದ ಬಲಿಷ್ಠರು ಮಾತ್ರವಲ್ಲದೆ ಭೂತಗಳ ಹಿಂಸೆಯಿಂದ ರಕ್ಷಣೆಯನ್ನೊದಗಿಸಲು ಸಮರ್ಥರಿದ್ದಾರೆ ಎಂದು ನಂಬಿದರು. ದೇಶೀಯರು ಕ್ರೈಸ್ತ ನಂಬಿಕೆಯಲ್ಲಿ ಸ್ಥಿರವಾಗಿ ನಿಲ್ಲುವಂತೆ ಕ್ರೈಸ್ತರು ಸಹಾಯ ಮಾಡಿದರು. ಕ್ರೈಸ್ತ ರಕ್ಷಣಾ ಛತ್ರದಡಿಯಲ್ಲಿ ಭೂತಗಳ ಭಯದಿಂದ ಸುರಕ್ಷಿತತೆಯನ್ನು, ಸದೃಢ ಮನಸ್ಸನ್ನು ಮತ ಪರಿವರ್ತನೆ ಹೊಂದಿದವರು ಅನುಭವಿಸಿದರು.

ಸ್ವಂತ ಬೇಸಾಯ, ಗುತ್ತು ಮನೆಗಳು, ಆರಾಧನೆ, ಸಂಸ್ಕೃತಿ, ವೈದ್ಯಕೀಯ ವೃತ್ತಿ ಮುಂತಾದವುಗಳನ್ನು ಹೊಂದಿ ತುಳುನಾಡಿನ ಮೂಲನಿವಾಸಿಗಳಾಗಿ ಸ್ವಂತಿಕೆಯಿಂದ ಬಾಳುತ್ತಿದ್ದ ಬಿಲ್ಲವರು ಬಯಸಿದ್ದು ಸಮಾನತೆ ಅಥವಾ ಸಮಾಜದಲ್ಲಿ ಸ್ಥಾನಮಾನ. ಇವುಗಳನ್ನೆಲ್ಲ ಕಳೆದುಕೊಂಡು ಅಸ್ಪಶ್ಯರೆನಿಸಿಕೊಂಡು ಬಾಳುವುದಕ್ಕಿಂತ ಸಮಾನತೆ ಇರುವ ಧರ್ಮಕ್ಕೆ ಸೇರಲು ಒಲವು ತೋರಿದ ಬಿಲ್ಲವರು 1834ರಿಂದ ಶ್ರೀ ನಾರಾಯಣ ಗುರುಗಳ ಚಳವಳಿ ಬರುವ ತನಕವೂ ಕ್ರೈಸ್ತ ಮತಕ್ಕೆ ಸೇರುತ್ತಿದ್ದ ವಿಚಾರಗಳ ದಾಖಲೆಗಳು ವರದಿಗಳಲ್ಲಿ ಸ್ಪಷ್ಟವಾಗಿ ಕಂಡು ಬರುತ್ತದೆ.

ಕ್ರೈಸ್ತಧರ್ಮವನ್ನು ಸ್ವೀಕರಿಸಿದ ಬಿಲ್ಲವರು ಸಮಾನತೆ, ಶಿಕ್ಷಣ ಮುಂತಾದವುಗಳನ್ನು ಹೊಂದಿದರೂ ತಮ್ಮ ಜೀವಿತದಲ್ಲಿ ಹಲವಾರು ತೊಂದರೆ ಗಳನ್ನೂ ಅನುಭವಿಸಬೇಕಾಯಿತು. ಗೇಣಿಗೆ ಬೇಸಾಯ ಮಾಡುತ್ತಿದ್ದ ಕ್ರೈಸ್ತರಾದ ಬಿಲ್ಲವರ ಭೂಮಿಗಳನ್ನು ಹಿಂತಿರುಗಿ ಪಡೆಯಲಾಯಿತು. ಒಕ್ಕಲುಗಳನ್ನು ಎಬ್ಬಿಸಿದರು. ಕೆಲಸಗಳನ್ನು ಕಳಕೊಂಡರು. ಇಂತಹ ಸಂದರ್ಭದಲ್ಲಿ ಮಿಶನರಿಗಳು ವಾಸಿಸಲು ಸ್ಥಳ, ಬೇಸಾಯಕ್ಕೆ ಭೂಮಿ, ದುಡಿಯಲು ಉದ್ಯೋಗ ಮುಂತಾದ ಸಹಕಾರವನ್ನು ನೀಡಿ ಸಮಾಜದಲ್ಲಿ ಸಮಾನತೆಯಿಂದ ಜೀವನ ಮಾಡಲು ಅನುಕೂಲ ಕಲ್ಪಿಸಿದರು. ತುಳುನಾಡಿನ ಪಾದೂರು, ಗುಡ್ಡೆ, ಕದಿಕೆ, ಮುಲ್ಕಿ, ಕುತ್ಯಾರ್, ಸಾಂತೂರು, ಉಚ್ಚಿಲ

128 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 129 ] ಮುಂತಾದ ಪ್ರದೇಶಗಳಲ್ಲಿ ಭೂತಾರಾಧನೆ ಮಾಡುತ್ತಿದ್ದ ಗುಂಪುಗಳ ಬಿಲ್ಲವರೇ ಕ್ರೈಸ್ತ ಮತಕ್ಕೆ ಸೇರಿದ ಹಲವಾರು ನಿದರ್ಶನಗಳು ಬಾಸೆಲ್ ಮಿಶನ್ ವರದಿಗಳಲ್ಲಿ ಕಂಡು ಬರುತ್ತದೆ. ತುಳುನಾಡಿನಾದ್ಯಂತ ಸ್ಥಾಪನೆಗೊಂಡ ಪ್ರತಿಯೊಂದು ಕ್ರೈಸ್ತ ಸಭೆಗಳ ಕ್ರೈಸ್ತರ ಸಂಖ್ಯೆಯಲ್ಲಿ 10ರಲ್ಲಿ 9 ಮಂದಿ ಬಿಲ್ಲವರಿದ್ದಾರೆ. ಇವನ್ನು ಕ್ರೈಸ್ತರಾದವರು ಈಗಲೂ ಇಟ್ಟುಕೊಂಡಿರುವ ಬಳಿಗಳಾದ (surname) ಅಮ್ಮನ್ನ, ಐಮನ್, ಸಾಲಿನ್ಸ್, ಕರ್ಕಡ, ಮಾಬೆನ್, ಸೋನ್ಸ್, ಕುಂದ‌, ಕೋಟ್ಯಾನ್, ಬಂಗೇರ ಇವುಗಳಿಂದ ಕಂಡುಕೊಳ್ಳಬಹುದು. ಕ್ರೈಸ್ತರಾದ ಬಿಲ್ಲವರ ಕುಟುಂಬಕ್ಕೆ ಸಂಬಂಧ ಪಟ್ಟವರು ಮೂಲ ಧರ್ಮದಲ್ಲಿದ್ದರೂ ಇವರೊಳಗೆ ಈಗಲೂ ಸಂಬಂಧವಿದೆ, ಇವರು ನಮ್ಮವರು ಎಂಬ ಭಾವನೆ ಇದ್ದು ಸಹಬಾಳ್ವೆ ನಡೆಸುತ್ತಿದ್ದಾರೆ.

ಪರಾಮರ್ಶನ ಸೂಚಿ: 1. ಬಿಲ್ಲವರು ಮತ್ತು ಕ್ರೈಸ್ತರು, ಬೆನೆಟ್ ಜಿ. ಅಮ್ಮನ್ನ, ಕ್ರಿಸ್ತವಂದನ, ಪಾಂಗಾಳ, ಗುಡ್ಡೆ, 2005 2.ತುಳುನಾಡಿನ ಬಿಲ್ಲವರು, ರಮಾನಾಥ್ ಕೋಟೆಕಾರ್, ಸಾಯಿ ಸುಂದರಿ ಟ್ರಸ್ಟ್, ಮಂಗಳೂರು, 2012

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 129 [ 130 ] ಸ್ವಾತಂತ್ರ್ಯಪೂರ್ವ ಪಠ್ಯಗಳಲ್ಲಿ ಭಾಷೆ

“ಭಾಷೆ ಎಶ್ವದ ಪರಮಾಶ್ಚರ್ಯಗಳಲ್ಲೊಂದಾಗಿದೆ. ಅದು ಬಡವ ಬಲ್ಲಿದರೆಂಬ ಭೇದವಿಲ್ಲದೆ ಸರ್ವರ ಮನೋರಥವನ್ನೀಡೇರಿಸುವ ಕಾಮಧೇನು ವಾಗಿದೆ. ಮಾನವನ ಐಹಿಕಾಮುಷ್ಠಿಕ ಕ್ಷೇಮಾಭ್ಯುದಯ ಸಾಧನೆಗೆ ಭಾಷೆಯೇ ಮೂಲ ಕಾರಣ. ಅವನ ಬೌದ್ಧಿಕ ಮಾನಸಿಕ ಸಾಂಸ್ಕೃತಿಕವೇ ಮೊದಲಾದ ಸರ್ವಾಂಗೀಣ ಪ್ರಗತಿಗನುಗುಣವಾಗಿ ಭಾಷೆಯೂ ವಿಶ್ವವಿಸ್ತಾರವಾಗಿ ಬೆಳೆದಿದೆ. ಸಂಸ್ಕೃತಿ ವಿಕಾಸ ಹೊಂದಿದಂತೆಲ್ಲ ಭಾಷೆಯೂ, ಭಾಷೆ ಬೆಳೆದಂತೆಲ್ಲ ಸಂಸ್ಕೃತಿಯು ಪರಸ್ಪರಾವಲಂಬಿಗಳಾಗಿ ಸತತವಾಗಿ ಪ್ರಗತಿ ಹೊಂದುತ್ತಿದೆ. 1786ರಲ್ಲಿ ವಿಲಿಯಂ ಜೋನ್ಸ್ ಕೆಲವು ಯುರೋಪೀಯ ಭಾಷೆಗಳಿಗೂ ಸಂಸ್ಕೃತಕ್ಕೂ ಇದ್ದ ಸಂಬಂಧವನ್ನು ವಿವರಿಸಿದಾಗ ಭಾಷಾಶಾಸ್ತ್ರ ವ್ಯಾಸಂಗಕ್ಕೆ ಅಮೂಲ್ಯವಾದ ಕೀಲಿಕೈ ದೊರೆಯುವಂತಾಯಿತು. ಭಾರತ ದೇಶದಲ್ಲಿ ಕಳೆದ ನೂರಾರು ವರ್ಷಗಳಿಂದ ಭಾಷಾ ಸಂಶೋಧನ ಕಾರ್ಯಗಳು ಸಾಗುತ್ತಿದೆ.”(ನಾಗರಾಜಯ್ಯ, ಹಂಪ ದ್ರಾವಿಡ ವಿಜ್ಞಾನ. 1972)

“ನಾವು ದಿನನಿತ್ಯವೂ ಲೀಲಾಜಾಲವಾಗಿ ಬಳಸುತ್ತಿರುವ ಈ ಭಾಷೆ ನಮ್ಮೆಲ್ಲರಿಗೂ ಅತಿ ಪರಿಚಿತವಾದುದು. ಹಾಗಾಗಿ, ಅದರ ವಿಷಯವಾಗಿ ನಮ್ಮಲ್ಲಿ ಎಲ್ಲ ತಿಳಿದವರಂತೆ ಮಾತನಾಡುತ್ತಾರೆ. ನಿಜಕ್ಕೂ ನಮ್ಮ ನಾಲಿಗೆಯ ತುದಿಯಲ್ಲಿ ಕುಣಿಯುವ ಈ ಭಾಷೆಯ ಕುರಿತು ನಾವು ತಿಳಿಯದಿರುವ ಮತ್ತು ತಪ್ಪಾಗಿ ತಿಳಿದುಕೊಂಡಿರುವ ವಿಷಯಗಳೇ ಜಾಸ್ತಿ.” (ಭಟ್, ಡಿ. ಎನ್. ಶಂಕರ್. ಭಾಷೆಯ ಬಗೆಗೆ ನೀವೇನು ಬಲ್ಲಿರಿ 2002)

ಹೀಗೆ ಭಾಷೆ ಬೆಳೆದುಕೊಂಡ ಬಗೆ, ಭಾಷೆಯ ಚರಿತ್ರೆ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಈಗ ಬೇಕಾದಷ್ಟು ಗ್ರಂಥಗಳಿವೆ. ಬೇಕಾದಷ್ಟು ಸಂಶೋಧನೆಗಳು ನಡೆದಿವೆ, ನಡೆಯುತ್ತಲೂ ಇದೆ.

ವಿದೇಶಗಳಿಂದ ಬಂದ ಮಿಶನರಿಗಳೂ ಬ್ರಿಟಿಷ್ ಉನ್ನತಾಧಿಕಾರಿಗಳೂ ಈ ಬಗೆಗೆ ಬಹಳ ಮುತುವರ್ಜಿ ವಹಿಸಿರುವುದನ್ನು ನಾವು ಭಾಷಾ ಚರಿತ್ರೆಯಲ್ಲಿ

130 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 131 ] ಕಾಣಬಹುದು. ರಾಬರ್ಟ್ ಕಾಲ್ಸ್‌ವೆಲ್, ವಿಲಿಯಂ ಕೇರಿ, ಎ. ಸಿ. ಬರ್ನೆಲ್, ಸಿ.ಜೆ. ಬೆಸ್‌ಜಿ, ಜಾನ್ ಮೆಕೆರಲ್, ಎಫ್ ಸ್ತ್ಟ್ರಿಂಗ್, ಬಿ. ಗ್ರೇಟರ್, ಥಾಮ್ಸನ್ ಹಡ್ಸ್ನ್, ಜೆ. ಗ್ಯಾರೆಟ್, ಎಫ್ ಜೀಗ್ಲರ್, ಹೆರಾಲ್ಡ್ ಸ್ಪೆನ್ಸರ್, ವಿಲಿಯಂ ರೀವ್, ಜೆ. ಬುಚರ್, ಇ.ಪಿ. ರೈಸ್, ಪಿ ಪರ್ಸಿವಲ್, ಹೆರ್ಮನ್ ಗುಂಡರ್ಟ್, ಜಾನ್ ಜೇಮ್ಸ್ ಬ್ರಿಗೆಲ್, ಫರ್ಡಿನಾಂಡ್ ಕಿಟೆಲ್, ಅಗಸ್ಟ್ ಮೆನ್ನರ್ ಮುಂತಾದವರುಗಳು ವಿದೇಶಿಯರಾದರೂ ನಮ್ಮ ದೇಶಕ್ಕೆ ಬಂದು ಇಲ್ಲಿನ ಭಾಷೆ ಕಲಿತು ಇಲ್ಲಿನ ಭಾಷೆಗಳಾದ ಕನ್ನಡ, ಮಲಯಾಲಂ, ತುಳು, ತಮಿಳು ಮೊದಲಾದ ಭಾಷೆಗಳಿಗೆ ನಿಘಂಟು ವ್ಯಾಕರಣಗಳನ್ನು ಮಾಡಿರುವುದು ಸಾಧನೆಯೇ ಆಗಿವೆ.

ಪ್ರಸ್ತುತ ವಿಶ್ವವಿದ್ಯಾಲಯ ಮಟ್ಟದಲ್ಲಿ ಭಾಷಾ ಚರಿತ್ರೆಯ ಬಗ್ಗೆ ಸಂಶೋಧನೆಗಳು ನಡೆಯುತ್ತಾ ಬಂದಿವೆ. ಸ್ವಾತಂತ್ರ್ಯ ಪೂರ್ವ ಪಠ್ಯಗಳನ್ನು ನಾವು ಅವಲೋಕಿಸುವುದಾದರೆ ಭಾಷೆಯ ಬಗ್ಗೆ ಬೇಕಾದಷ್ಟು ಮಾಹಿತಿಗಳು ದೊರೆಯುತ್ತವೆ. ಈ ಲೇಖನದಲ್ಲಿ ಸ್ವಾತಂತ್ರ್ಯಪೂರ್ವ ಪಠ್ಯಗಳಲ್ಲಿ ಭಾಷೆಯ ಬಗ್ಗೆ ವಿದ್ಯಾರ್ಥಿಗಳಿಗೆ ಯಾವ ರೀತಿಯ ಪಾಠ ಇತ್ತು, ಹೇಗೆ ಭಾಷೆಯ ಬಗ್ಗೆ ತಿಳುವಳಿಕೆ ನೀಡುತ್ತಿದ್ದರು ಎನ್ನುವುದಕ್ಕೆ ಪಠ್ಯದಿಂದ ಆಯ್ದ ಕೆಲವು ಉದಾಹರಣೆಗಳ ಮಾದರಿಯನ್ನು ಇಲ್ಲಿ ನೀಡಲಾಗಿದೆ. ಸುಮಾರು 80 ವರ್ಷ ಬಳಕೆಯಲ್ಲಿದ್ದ ಕನ್ನಡ ಪಠ್ಯವಾದ್ದರಿಂದ ಓದುವಾಗ ತಪ್ಪಿದೆ ಎಂದು ಭಾವಿಸದೆ, ಓದುವಾಗ ತೊಂದರೆಯಾದರೂ ಅದರ ಮೂಲದಲ್ಲಿದ್ದಂತೆ ಇಲ್ಲಿ ಕೊಡಲಾಗಿದೆ. ಉದಾ: ಹಿಂದುಸ್ಥಾನ, ತೆಲಗು, ದ್ರವಿಡ ಇತ್ಯಾದಿ.

ಹಿಂದೂಸ್ತಾನದ ಭಾಷೆಗಳು:- ನಮ್ಮ ದೇಶದಲ್ಲಿ ಅನೇಕ ಕುಲದ ಜನರು ವಾಸಿಸುತ್ತಿದ್ದು, ಅವರು ಬೇರೆ ಬೇರೆ ಭಾಷೆಗಳನ್ನು ಆಡುತ್ತಾರೆ. ಖಾನೇಶುಮಾರಿಯಿಂದ ದೇಶೀಯ ಭಾಷೆಗಳು 147 ಇರುತ್ತವೆಂದು ಗೊತ್ತಾಗಿದೆ.ಭಾಷಾಶಾಸ್ತ್ರಜ್ಞರು ಇವುಗಳೊಳಗಿನ ತಿದ್ದುಪಡಿ ಹೊಂದಿದ ಭಾಷೆಗಳನ್ನು ಪರೀಕ್ಷಿಸಿ ಅವುಗಳಲ್ಲಿ ನಾಲ್ಕು ವರ್ಗ ಮಾಡಿದ್ದಾರೆ ಹ್ಯಾಗಂದರೆ 1. ಸಂಸ್ಕೃತಕ್ಕೆ ಸಂಬಂಧಿಸಿದ ಭಾಷೆಗಳು 2. ಪಾರಸಿ- ಅರಬೀ ಭಾಷೆಗಳಿಗೆ ಸಂಬಂಧಿಸಿದ ಭಾಷೆಗಳು, 3. ದ್ರಾವಿಡ ಭಾಷೆಗಳು. 4. ಚೀನಿ, ತಿಬೇಟಿ ಭಾಷೆಗಳಿಗೆ ಸಂಬಂಧಿಸಿದ ಭಾಷೆಗಳು. ಜನಸಂಖ್ಯೆ, ವಿಸ್ತಾರ, ಗ್ರಂಥಸಮೂಹ, ಇವುಗಳಿಂದ ನೋಡಲಾಗಿ ನಾಲ್ಕು ವರ್ಗಗಳಲ್ಲಿ ಮೊದಲನೇ ವರ್ಗದ ಭಾಷೆಯು ಬಹು

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು 131 [ 132 ] ಮಹತ್ವದ್ದಾಗಿರುತ್ತದೆ. ಈ ವರ್ಗದಲ್ಲಿ ಬರುವ ಭಾಷೆಗಳಲ್ಲಿ 25 ಮುಖ್ಯವಾಗಿರುವವು. ಇವುಗಳನ್ನು ಆಡುವವರು ಬಹುತರ ಪ್ರಾಚೀನ ಕುಲದ ಆರ್ಯವಂಶದವರು ಆದರೆ ಕೆಲವರು ಅನಾರ್ಯಕುಲದವರೂ ಈ ಭಾಷೆಗಳನ್ನು ಬಳಸುವದುಂಟು.

ಆರ್ಯರು ಈ ದೇಶದ ಮೂಲನಿವಾಸಿಗಳಲ್ಲ: ಇವರ ಬೇರೆ ಬೇರೆ ತಂಡಗಳು ಬೇರೆ ಬೇರೆ ಕಾಲಗಳಲ್ಲಿ ಈ ದೇಶಕ್ಕೆ ಬಂದು ಒಕ್ಕಲಾಗಿ ನಿಂತವು. ಇವರೆಲ್ಲರು ಆಡುವ ಭಾಷೆಗಳು ಒಂದೇ ಜಾತಿಯದಾದರೂ ಅವುಗಳಲ್ಲಿ ಸ್ಥಳ- ಕಾಲ-ಪರಿಸ್ಥಿತಿಗಳ ಭೇದದಿಂದ ಎಷ್ಟೋ ಹೆಚ್ಚುಕಡಿಮೆಗಳಾಗಿದ್ದವು; ಆದ್ದರಿಂದ ಮೊದಲು ಬಂದ ತಂಡದವರು ಭಾಷೆಯು ಹಿಂದುಗಡೆ ಬಂದ ತಂಡದವರಿಗೆ ತಿಳಿಯುವುದು ದುಸ್ತರವಾಗುತ್ತಿತ್ತು. ವೇದ ಮಂತ್ರಗಳು ಇಂಥ ತಂಡದವರ ಭಾಷೆಗಳಲ್ಲಿಯೇ ರಚಿಸಲ್ಪಟ್ಟವು. ಅವು ಬಹುಕಾಲದ ವರೆಗೆ ಬಾಯಿಂದಲೇ ಹೇಳಲ್ಪಡುತ್ತಿದ್ದವಲ್ಲದೆ, ಗ್ರಂಥರೂಪವಾಗಿ ಬರೆಯಲ್ಪಟ್ಟಿದ್ದಿಲ್ಲ. ಪಂಡಿತರು ಈ ಭಾಷೆಗಳನ್ನು ಕೆಲವು ಗುಂಪುಗಳಾಗಿ ವಿಭಾಗಿಸುತ್ತಾರೆ; ಅವುಗಳೊಳಗಿನ ಒಂದು ಗುಂಪಿನಿಂದ ಸಿಂಧೀ, ಮರಾಠಿ, ಬಂಗಾಲಿ ಭಾಷೆಗಳಾಗಿರುತ್ತವೆಂತಲೂ ಮತ್ತೊಂದು ಗುಂಪಿನಿಂದ ಪಂಜಾಬೀ, ಗುಜರಾಥಿ, ಹಿಂದಿ ಭಾಷೆಗಳಾಗಿ ರುತ್ತವೆಂತಲೂ ಅವರು ಪ್ರತಿಪಾದಿಸುವರು; ಆದರೆ ಈ ಅರ್ವಾಚೀನಭಾಷೆಗಳು ಬಳಕೆಯಲ್ಲಿ ಬರುವುದಕ್ಕಿಂತ ಮುಂಚೆ ಬಹಳ ವರ್ಷಗಳ ಹಿಂದೆ ಅಕ್ಷರಲಿಪಿಯೂ ಲೇಖನಕಲೆಯೂ ಹುಟ್ಟಿದ್ದರಿಂದ, ಪಂಡಿತರು ಆಗ ಪ್ರಚಲಿತವಾಗಿದ್ದ ಬೇರೆ ಬೇರೆ ತಂಡದವರ ಆರ್ಯಭಾಷೆಗಳನ್ನು ಸಂಶೋಧಿಸಿ ಅವುಗಳಿಗೆ ಸಂಸ್ಕಾರ ಕೊಟ್ಟು ಒಂದು ಹೊಸದಾದ ಗ್ರಂಥಸ್ಥ ಭಾಷೆಯನ್ನು ನಿರ್ಮಾಣ ಮಾಡಿದರು. ಇದೇ ಸಂಸ್ಕೃತವು. ಆರ್ಯರು ತಾವು ಅಲ್ಲಿಯ ವರೆಗೆ ಬಾಯಿಂದಲೇ ಪಠಿಸುತ್ತ ಬಂದಿದ್ದ ವೇದಮಂತ್ರಗಳನ್ನೂ, ಬರಬರುತ್ತ ಆದ ಶಾಸ್ತ್ರ-ಪುರಾಣ-ಕಾವೈತಿಹಾಸಾದಿ ಗ್ರಂಥಗಳನ್ನೂ, ಧರ್ಮಗ್ರಂಥಗಳನ್ನೂ ಈ ಸಂಸ್ಕೃತಭಾಷೆಯಲ್ಲಿ ಬರೆದರು.ಈ ಮೇರೆಗೆ ಹಿಂದೂ ಜನರ ಧರ್ಮಗ್ರಂಥಗಳೂ, ಶಾಸ್ತ್ರ-ಸಾಹಿತ್ಯಾದಿ ಲೌಕಿಕಗ್ರಂಥಗಳೂ, ಕಾವ್ಯ-ಪ್ರಬಂಧಾದಿಗಳೂ ಸಂಸ್ಕೃತ ಭಾಷೆಯಲ್ಲಿ ಬರೆಯಲ್ಪಟ್ಟ ದ್ದರಿಂದ ಅದಕ್ಕೆ ಹಿಂದುಸ್ತಾನದ ಭಾಷೆಗಳಲ್ಲಿ ಅಗ್ರಸ್ಥಾನವು ದೊರೆತಿರುತ್ತದೆ.

ಸಾಮಾನ್ಯ ಜನರು ತಮ್ಮ ವ್ಯವಹಾರದಲ್ಲಿ ಈ ಗ್ರಂಥಸ್ಥ ಸಂಸ್ಕೃತಭಾಷೆಯನ್ನು


132 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 133 ] ಆಡುತ್ತಿದ್ದಿಲ್ಲ; ಮೂಲತ೦ಡಗಳವರು ಆರ್ಯಭಾಷೆಗಳಲ್ಲಿಯೇ ತಮ್ಮ ವ್ಯವಹಾರಗಳನ್ನು ಸಾಗಿಸುತಿದ್ದರು. ಈ ವ್ಯವಹಾರದ ಭಾಷೆಗಳಿಗೆ ಪ್ರಾಕೃತ ಭಾಷೆಗಳೆಂಬ ಹೆಸರು. ಈ ಪ್ರಾಕೃತಭಾಷೆಗಳಿಂದಲೇ ಅರ್ವಾಚೀನವಾದ ದೇಶಿಯ ಆರ್ಯಭಾಷೆಗಳು ಹುಟ್ಟಿ ಈಗಿನ ಸ್ವರೂಪವನ್ನು ಹೊಂದಿರುವುವವು. ಪ್ರಾಕೃತಭಾಷೆಯಲ್ಲಿ ಬರೆದ ಗ್ರಂಥಗಳೂ ಹಲವುಂಟು. ಬೌದ್ಧಮತದ ಧರ್ಮಗ್ರಂಥಗಳು ಪಾಲೀ ಎಂಬ ಒಂದು ಪ್ರಾಕೃತಭಾಷೆಯಲ್ಲಿ ಬರೆಯಲ್ಪಟ್ಟಿರುವವು. ಹಾಗೂ ಸಾಮಾನ್ಯ ಜನರಿಗೋಸ್ಕರ ಹಲವು ಸಂಸ್ಕೃತಗ್ರಂಥಗಳು ಪ್ರಾಕೃತಕ್ಕೆ ಪರಿವರ್ತಿಸಲ್ಪಟ್ಟಿರುತ್ತವೆ. ಅರ್ವಾಚೀನಭಾಷೆಗಳಲ್ಲಿ ಈ ಗ್ರಂಥಸ್ಥ ಸಂಸ್ಕೃತದಿಂದ ಅನೇಕ ಅಂಶಗಳು ತೆಗೆದುಕೊಳ್ಳಲ್ಪಟ್ಟಿರುತ್ತವೆ.

ಇತ್ತಲಾಗಿ ಈ ದೇಶಕ್ಕೆ ಬಂದ ಮಹಮ್ಮದೀಯರು ಪಾರ್ಸೀ, ಅರಬೀ ಭಾಷೆಗಳನ್ನು ತಂದರು. ಅದ್ದರಿಂದ ಈ ಭಾಷೆಗಳಿಂದಲೂ ಅನೇಕ ಶಬ್ದಗಳು ದೇಶೀಯ ಭಾಷೆಗಳಲ್ಲಿ ಸೇರಿಕೊಂಡಿರುತ್ತವೆ. ಸದ್ಯದ ಸಿಂದಿ ಭಾಷೆಯು ಅರ್ಧ ಪ್ರಾಕೃತಭಾಷೆಯೂ ಅರ್ಧ ಪಾರ್ಸೀ-ಅರಬೀ ಭಾಷೆಗಳೂ ಕೂಡಿ ಆಗಿರುತ್ತದೆ. ಗುಜರಾಥೀ-ಮರಾಠಿ ಭಾಷೆಗಳಲ್ಲಿ ಪಾರ್ಸೀ-ಅರಬೀ ಶಬ್ದಗಳು ತಕ್ಕ ಮಟ್ಟಿಗೆ ಸೇರಿರುತ್ತವೆ; ಆದರೆ ಪುಸ್ತು-ಬಲೂಚಿ-ಹಿಂದುಸ್ತಾನೀ ಭಾಷೆಗಳು ಅರಬೀ-ಪಾರ್ಸೀ ಭಾಷೆಗಳಿಂದಲೇ ಹುಟ್ಟಿರುತ್ತವೆಂದು ಹೇಳಬಹುದು. ಹಿಂದುಸ್ತಾನಿ ಭಾಷೆಯು ಉತ್ತರ ಹಿಂದುಸ್ತಾನದಲ್ಲಿ ಸಾರ್ವತ್ರಿಕವಾಗಿದೆ.

ದಕ್ಷಿಣ ಹಿಂದುಸ್ತಾನದಲ್ಲಿಯೂ, ಛೋಟಾನಾಗಪುರ-ಮಧ್ಯಪ್ರಾಂತಗಳ ಅಲ್ಪಸ್ವಲ್ಪ ಪ್ರದೇಶಗಳಲ್ಲಿಯೂ ವಾಸಿಸುವ ಜನರು ಮುಖ್ಯವಾಗಿ ದ್ರವಿಡವರ್ಗದ ಭಾಷೆಗಳನ್ನು ಆಡುವರು. ದ್ರವಿಡವರ್ಗದಲ್ಲಿ ತಮಿಳು, ತೆಲಗು, ಕನ್ನಡ (*ನೀಲಗಿರಿಯ ಬಡಗ, ಕುರಂಬ ಎಂಬ ಕಾಡಭಾಷೆಗಳೂ ಕೊಡಗಿನ ಕೊಡಗು ಭಾಷೆಯೂ ಕನ್ನಡಕ್ಕೆ ಸೇರಿರುತ್ತವೆ; ಇವು ತಿದ್ದುಪಡಿಯನ್ನು ಹೊಂದಿಲ್ಲ ತುಳು, ಮಲೆಯಾಳ ಎಂಬ ಐದು ತಿದ್ದುಪಡಿ ಹೊಂದಿದ ಭಾಷೆಗಳೂ, ತೋಡ, ಕೋಟ, ಮಂದಾವರ, ಗೊಂಡ ಮೊದಲಾಗ ಗುಡ್ಡಗಾಡ ಜನರು ಆಡುವ ಭಾಷೆಗಳೂ, ಬ್ರಹ್ಮಯಿ ಎಂಬ ಬಲೂಚಿಸ್ತಾನದ ಒಂದು ಪ್ರದೇಶದ ಜನರು ಆಡುವ ಭಾಷೆಯೂ ಬರುತ್ತದೆ. ದ್ರವಿಡ ಭಾಷೆಗಳ ಮೂಲ ಉತ್ಪತಿಯ ಬಗ್ಗೆ ಇನ್ನೂ ನಿಶ್ಚಯಾತ್ಮಕವಾಗಿ ಯಾವದೂ ತಿಳಿದಿಲ್ಲ. ದ್ರವಿಡ ವರ್ಗದ ಭಾಷೆಗಳು ಆರ್ಯಭಾಷೆಗೆ ಸಂಬಂಧವಿಲ್ಲದ ಸ್ವತಂತ್ರ ಭಾಷೆಗಳೆಂದು ಹೇಳಬಹುದು.

{{gap}]ಹಿಂದುಸ್ತಾನದ ಉತ್ತರ ಸೀಮೆಯಲ್ಲಿಯೂ, ಬ್ರಹ್ಮದೇಶದಲ್ಲಿಯೂ ಇರುವ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 133

ಜನರು ಚೀನಿ-ತಿಬೇಟಿ ಭಾಷೆಗಳಿಗೆ ಸಂಬಂಧಿಸಿದ ಭಾಷೆಗಳನ್ನಾಡುವರು. ಈ ಭಾಷೆಗಳಿಗೂ ಮೇಲೆ ವಿವರಿಸಿದ ಮೂರು ವರ್ಗದ ಭಾಷೆಗಳಿಗೂ ಬಹುತರ ಸಂಬಂಧವಿಲ್ಲ; ಆದರೆ ದ್ರವಿಡ ಭಾಷೆಗಳಿಗೂ ಇವಕ್ಕೂ ಒಂದು ಸಂಗತಿಯಲ್ಲಿ ಸಾಮ್ಯವಿದ್ದದ್ದು ಕಂಡುಬರುತ್ತದೆ; ಅಂದರೆ ದ್ರವಿಡ ಭಾಷೆಯಂತೆ ಈ ಭಾಷೆಯಲ್ಲಿ ಒಂದು ಶಬ್ದಕ್ಕೆ ಮತ್ತೊಂದು ಶಬ್ದವನ್ನು ಸೇರಿಸಿ ಹೊಸ ಅರ್ಥವನ್ನು ಕೊಡುವ ಹೊಸ ಶಬ್ದಗಳನ್ನು ಹುಟ್ಟಿಸುವ ವಾಡಿಕೆಯುಂಟು.

ದಕ್ಷಿಣ ಭಾಗದ ಮುಖ್ಯ ಭಾಷೆ: ನಾವಿರುವ ಸೀಮೆಯ ಮುಂಬಯಿ ಇಲಾಖೆಯ ದಕ್ಷಿಣ ಭಾಗವೂ ಕರ್ನಾಟಕದ ಉತ್ತರ ಭಾಗವೂ ಆಗಿರುತ್ತದೆ. ಕರ್ನಾಟಕ ಸೀಮೆಯಲ್ಲಿ ಮುಂಬಯಿ ಇಲಾಖೆಗೆ ಸೇರಿದ ಧಾರವಾಡ, ಬೆಳಗಾವ, ವಿಜಾಪುರ, ಉತ್ತರ ಕಾನಡಾ ಎಂಬ ನಾಲ್ಕು ಜಿಲ್ಲೆಗಳಲ್ಲದೆ, ಮೈಸೂರ ಸಂಸ್ಥಾನವೂ, ಮದ್ರಾಸ ಇಲಾಖೆಗೆ ಸೇರಿದ ದಕ್ಷಿಣ ಕನ್ನಡ ಜಿಲ್ಲೆಯೂ, ಕೊಯಿಮುತ್ತೂರ ಬಳ್ಳಾರಿ ಜಿಲ್ಲೆಗಳ ಕೆಲವು ಭಾಗಗಳೂ, ನಿಜಾಮನ ರಾಜ್ಯದ ಪಶ್ಚಿಮ ಭಾಗವೂ ಬರುತ್ತವೆ. ಮುಂಬಯಿ ಇಲಾಖೆಗೆ ಸೇರಿದ ನಾಲ್ಕು ಕನ್ನಡ ಜಿಲ್ಲೆಗಳ ಒಟ್ಟು ಜನಸಂಖ್ಯೆ ಸುಮಾರು 33 ಲಕ್ಷವುಂಟು. ಇವರಲ್ಲಿ ಕನ್ನಡ ಮಾತನ್ನಾಡುವವರು ನೂರಕ್ಕೆ 73.7 ಇದ್ದಾರೆ. ಉಳಿದವರು ಮರಾಠಿ, ಹಿಂದುಸ್ತಾನಿ, ಕೊಂಕಣಿ ಮುಂತಾದ ಭಾಷೆಗಳನ್ನಾಡುವರು.

ಕನ್ನಡವೆಂಬ ಹೆಸರು ಕರು (ಎತ್ತರ)ನಾಡು ಎಂಬ ದೇಶವಾಚಕ ಶಬ್ದದಿಂದ ಹುಟ್ಟಿದ್ದು, ಅದು ಈ ನಾಡಿನಲ್ಲಿ ನಡೆಯುವ ನುಡಿಗೆ ಬಂದಿರುವದೆಂತಲೂ, ಕರುನಾಡು ಎಂಬ ಶಬ್ದದಿಂದಲೇ ಸಂಸ್ಕೃತ ಪಂಡಿತರು ಕರ್ನಾಟ, ಕರ್ನಾಟಕಗಳೆಂಬ ಪದಗಳನ್ನು ಮಾಡಿಕೊಂಡಿರುವರೆಂತಲೂ ಭಾಷಾಭಿಜ್ಞರು ಊಹಿಸುತ್ತಾರೆ.

ಕನ್ನಡವು ದ್ರವಿಡ ಭಾಷಾವರ್ಗಕ್ಕೆ ಸೇರಿದ್ದು, ಈ ವರ್ಗದಲ್ಲಿ ಕನ್ನಡವಲ್ಲದೆ ತಮಿಳ, ತೆಲಗು, ಮಲೆಯಾಳ, ತುಳು ಎಂಬ ನಾಲ್ಕು ತಿದ್ದುಪಡಿಯಾದ ಭಾಷೆಗಳೂ, ತೋಡ, ಕೋಟ, ಗೊಂಡ, ಖಂಡ ಇವೇ ಮೊದಲಾದ ಹಲವು ಕಾಡು ಜನರಾಡುವ ಕುಲ್ಲಕ ಭಾಷೆಗಳೂ ಬರುತ್ತವೆಂದು ಹಿಂದೆ ಹೇಳಿದೆ. ಇವುಗಳಲ್ಲಿ ಕನ್ನಡಕ್ಕೂ ತಮಿಳಕ್ಕೂ ಹೋಲಿಕೆ ವಿಶೇಷ; ತೆಲಗು ಕನ್ನಡ ನಾಡುಗಳು ಒಂದಕ್ಕೊಂದು ಸಮೀಪವಾದ್ದರಿಂದಲೂ ಇವೆರಡೂ ಬಹು ಕಾಲದ ವರೆಗೆ ಒಂದೇ ರಾಜ್ಯದಾಡಳಿತಕ್ಕೆ ಸೇರಿದ್ದರಿಂದಲೂ ತೆಲಗು ಕನ್ನಡ ಭಾಷೆಗಳಿಗೆ ಒಂದೇ

134 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 135 ] ಲಿಪಿಯುಂಟಾಯಿತೆಂದು ತೋರುತ್ತದೆ. ಈ ವರ್ಣಮಾಲೆಯು ಅಶೋಕನಿಂದ ಪ್ರಚಲಿತವಾದ ಬ್ರಹ್ಮ ವರ್ಣಮಾಲೆಯಿಂದ ಹುಟ್ಟಿರುವದು.

ಕನ್ನಡದಲ್ಲಿ ಹಳಗನ್ನಡವೆಂತಲೂ ಹೊಸಗನ್ನಡವೆಂತಲೂ ಎರಡು ಬೇಧಗಳುಂಟು. ಹಳಗನ್ನಡವು ಸುಮಾರು 1800 ವರ್ಷಗಳಿಂದ ತಿದ್ದುಪಡಿ ಹೊಂದಿರುತ್ತದೆ. ಹಳಗನ್ನಡದಲ್ಲಿ ಕಾಲಕ್ರಮದಿಂದಲೂ ಸ್ತಲಭೇದದಿಂದಲೂ ಅನ್ಯಭಾಷಾ ಸಂಪರ್ಕದಿಂದಲೂ ಬಹಳ ರೂಪಾಂತರವಾಗಿ ಈಗಿನ ಹೊಸಗನ್ನಡ ವಾಗಿರುತ್ತದೆ. ಹೊಸಗನ್ನಡದಲ್ಲಿ ಎಷ್ಟೋ ಹಳಗನ್ನಡ ಶಬ್ದಗಳ ಮೂಲ ವರ್ಣಗಳು ಬದಲಾಗಿರುವವಲ್ಲದೆ ವ್ಯಾಕರಣದಲ್ಲಿ ಸಹ, ವಿಶೇಷವಾಗಿ ಸಾಧಿತ ಪ್ರತ್ಯಯಗಳಲ್ಲಿಯೂ ವಿಭಕ್ತಿ ಪ್ರತ್ಯಯಗಳಲ್ಲಿಯೂ ಬಹಳ ಹೆಚ್ಚು ಕಡಿಮೆಗಳಾಗಿರುತ್ತವೆ. ಅದ್ದರಿಂದ ಬರೇ ಹೊಸಗನ್ನಡವನ್ನು ಬಲ್ಲವರಿಗೆ ಹಳಗನ್ನಡವು ದೊರ್ಬೋಧವಾಗಿರುವದು. ಕನ್ನಡವು ಸಂಸ್ಕೃತದಿಂದ ಹುಟ್ಟಿದಂತ ಸ್ವತಂತ್ರ ಭಾಷೆಯಾದರೂ, ಅದು ತಿದ್ದುಪಡಿ ಹೊಂದಿ ಗ್ರಂಥಸ್ಥ ಭಾಷೆಯಾದದ್ದು ಸಂಸ್ಕೃತದ ಸಹಾಯದಿಂದಲೇ, ಕನ್ನಡದ ಬಹುತರ ಯಾವತ್ತು ಗ್ರಂಥಗಳಿಗೆ ಸಂಸ್ಕೃತ ಗ್ರಂಥಗಳೇ ಆಧಾರವಾಗಿರುವವು. ಆದ್ದರಿಂದ ಕನ್ನಡದಲ್ಲಿ ಸಂಸಂಸ್ಕೃತ ಶಬ್ದಗಳೂ ತದ್ಭವಶಬ್ದಗಳೂ ಸಾವಿರಗಟ್ಲೆ ಸೇರಿರುತ್ತವೆ. ಸಂಸ್ಕೃತಕ್ಕೆ ಸಂಬಂಧಪಟ್ಟಂಥ ಶಬ್ದಗಳನ್ನು ಉಪಯೋಗಿಸದೆ ಬರೆದಂಥ ಗ್ರಂಥವು ಇದುವರೆಗೆ ಹುಟ್ಟಿಲ್ಲ.

ಕನ್ನಡವನ್ನು ತಿದ್ದಿ ಮೊದಲ ಅಭಿವೃದ್ಧಿಗೆ ತಂದವರು ಜೈನರು. ಕ್ರಿಸ್ತಶಕದ ಅದಿಭಾಗದಿಂದ ಈ ನಾಡಿನಲ್ಲಿ ಪ್ರಬಲರಾಗಿದ್ದ ಜೈನ ಅರಸರು ಕನ್ನಡಕ್ಕೆ ಮಹದಾಶ್ರಯವನ್ನು ಕೊಟ್ಟದ್ದರಿಂದ ಆ ಕಾಲದಲ್ಲಿ ಧರ್ಮಗ್ರಂಥಗಳೂ ಲೌಕಿಕ ಗ್ರಂಥಗಳೂ ಕನ್ನಡದಲ್ಲಿಯೇ ರಚಿಸಲ್ಪಟ್ಟು ಕನ್ನಡವು ಬಹಳ ಬೆಳೆಯಿತು. ಅಲ್ಲಿಂದ ಹದಿಮೂರನೇ ಶತಮಾನದ ವರೆಗೆ ಆದ ಉದ್ಗ್ರಂಥಗಳೆಲ್ಲ ಜೈನ ಕವಿಗಳಿಂದಲೇ ಆಗಿರುತ್ತವೆ. ಕ್ರಿಸ್ತಶಕದ ಮೊದಲಿನ ಐದು ಶತಮಾನಗಳಲ್ಲಿ ಸಮಂತಭದ್ರ, ಸಿಂಹನಂದಿ, ಮಾಧವ, ಪೂಜ್ಯಪಾದ ಇವರೆ ಮೊದಲಾದ ಲೋಕೋತ್ತರ ಕನ್ನಡ ಕವಿಗಳು ಆದರೆಂದು ಶಾಸನಗಳಿಂದಲೂ, ಅವರ ತರುವಾಯ ಆದ ಕವಿಗಳೂ ಮಾಡಿದ ಉಲ್ಲೇಖದಿಂದಲೂ ತಿಳಿಯುತ್ತದೆ. ಆದರೆ ಅವರು ಬರೆದ ಗ್ರಂಥಗಳು ಉಪಲಬ್ಧವಿಲ್ಲ. ಆರನೇ ಏಳನೆ ಶತಮಾನಗಳಲ್ಲಿ ಶ್ರೀವರ್ಧನದೇವ, ರವಿಕೀರ್ತಿಗಳೆಂಬ ಮಹಾಕವಿಗಳೂ, ಎಂಟನೇ ಒಂಬತ್ತನೇ ಶತಮಾನಗಳಲ್ಲಿ ವೀರಸೇನ, ನೃಪತುಂಗ, ಗುಣವರ್ಮರೆಂಬ ಪ್ರಖ್ಯಾತ ಕವಿಗಳೂ ಆಗಿಹೋದರು.

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 135 [ 136 ] ಹತ್ತನೇ ಶತಮಾನದ ಉತ್ತರಾರ್ಧದಲ್ಲಾದಂಥ ಮೂರು ಕವಿರತ್ನಗಳೆಂದು ಹೆಸರು ಪಡೆದಂಥ ಪಂಪ, ಹೊನ್ನ, ರನ್ನರೆಂಬ ಕವೀಶ್ವರರ ಗ್ರಂಥಗಳು ಕನ್ನಡದ ಅತ್ಯುಜ್ವಲ ಸ್ವರೂಪವನ್ನು ತೋರಿಸುತ್ತವೆ. ಹನ್ನೆರಡನೇ ಹದಿಮೂರನೇ ಶತಮಾನಗಳಲ್ಲಿ ನಯಸೇನಮ, ಜನ್ನ, ಕೇಶಿರಾಜ, ಆಂಡಯ್ಯ ಇವರೇ ಮೊದಲಾದ ಕವಿಶ್ರೇಷ್ಠರು ಬರೆದ ಗ್ರಂಥಗಳು. ಜೈನರು ಬರೆದ ಅಂತಿಮವಾದ ಉದ್ದಂಥಗಳಾಗಿರುತ್ತವೆ.

ಹನ್ನೆರಡನೇ ಶತಮಾನದ ಆದಿಭಾಗದಲ್ಲಿ ವೈಷ್ಣವಮತವೂ, ಅಂತ್ಯಭಾಗದಲ್ಲಿ ವೀರಶೈವ ಮತವೂ ಉದಯಕ್ಕೆ ಬಂದದ್ದರಿಂದ ಜೈನರ ಪ್ರಾಬಲ್ಯವು ಕುಗ್ಗಿತು. ಆದ್ದರಿಂದ ಹದಿಮೂರನೇ ಶತಮಾನದಿಂದ ಮುಂದೆ ಎರಡು ಶತಮಾನಗಳಲ್ಲಿ ವೀರಶೈವ ಕವಿಗಳು ಬರೆದ ಗ್ರಂಥಗಳೇ ಹೆಚ್ಚು: ಬ್ರಾಹ್ಮಣಕವಿಗಳು ಬರೆದ ಗ್ರಂಥಗಳು ಕೆಲವು ಇರುತ್ತವೆ; ಆದರೆ ಜೈನರು ಬರೆದ ಗ್ರಂಥಗಳು ಅಲ್ಲೊಂದಿಲ್ಲೊಂದು ಮಾತ್ರ ಕಂಡು ಬರುತ್ತದೆ. ರಗಳೆ ಷಟ್ಟದಿಗಳನ್ನು ಪ್ರಚಾರದಲ್ಲಿ ತಂದವರು ಲಿಂಗಾಯತ ಕವಿಗಳೇ. ಇವರಲ್ಲಿ ಹರೀಶ್ವರ,ರಾಘವಾಂಕ, ಸೋಮನಾಥ, ಗುರುಲಿಂಗ, ತೋಂಟದಾರ್ಯ ಇವರ ಹೆಸರುಗಳನ್ನು ಹೇಳಬಹುದು. ಮುಂದೆ ಹದಿನಾಲ್ಕನೇ ಶತಮಾನದಿಂದ ಪ್ರಬಲರಾದ ವಿಜಯನಗರದ ಅರಸರ ಆಳಿಕೆಯಲ್ಲಿ, ಮುಖ್ಯವಾಗಿ ವಿದ್ಯಾ ಪಕ್ಷಪಾತಿಗಳಾದ ಕೃಷ್ಣರಾಯರ ಕಾಲದಲ್ಲಿ, ಬ್ರಾಹ್ಮಣ ಕವಿಗಳು ಉದಾರಾಶ್ರಯವನ್ನು ಹೊಂದಿದರು. ಇವರಲ್ಲಿ ಕುಮಾರವ್ಯಾಸ, ಕುಮಾರವಾಲ್ಮೀಕಿ, ರುದ್ರಭಟ್ಟ, ಲಕ್ಷ್ಮೀಶ ಮೊದಲಾದವರ ಗ್ರಂಥಗಳು ಹೆಸರಾಗಿವೆ. ಇದೇ ಕಾಲದಲ್ಲಿ ಆದ ಸಾಲ್ವ, ಭಟ್ಟಾಕಲಂಕರೇ ಮೊದಲಾದ ಹಲವು ಜೈನರ ಗ್ರಂಥಗಳೂ, ವಿರೂಪಾಕ್ಷಪಂಡಿತ, ಷಡಕ್ಷರದೇವರೇ ಮೊದಲಾದ ಲಿಂಗವಂತಕವಿಗಳ ಗ್ರಂಥಗಳೂ ಹೆಸರಾಗಿವೆ.

ಕನ್ನಡದಲ್ಲಿ ಇದುವರೆಗೆ ಆದ ಉದ್ಧಂಥಗಳು ಬಹುತರವಾಗಿ ಹಳಗನ್ನಡ ಕವಿತಾರೂಪದಿಂದಲೇ ಇರುತ್ತವೆ. ಆದರೆ ಇತ್ತಲಾಗಿ ಒಂದೆರಡು ಶತಮಾನಗಳಲ್ಲಿ ಹಳಗನ್ನಡದ ಪ್ರಚಾರವು ಕಡಿಮೆಯಾದ್ದರಿಂದಲೂ, ಹೊಸಗನ್ನಡವು ಕವಿತಾರಚನೆಗೆ ಅಷ್ಟು ಅನುಕೂಲವಾದ ಭಾಷೆಯಲ್ಲವಾದ್ದರಿಂದಲೂ, ಇತ್ತಲಾಗಿ ಹೇಳತಕ್ಕಂಥ ಕವಿತಾಗ್ರಂಥಗಳು ಆಗಿಲ್ಲ. ಇದಲ್ಲದೆ ದೇಶಕಾಲಾನುಸಾರವಾಗಿ ಪಂಡಿತರಿಗೆ ಮಾತ್ರ ಅವಗಾಹನೆಯಾಗುವ ಕ್ಲಿಷ್ಟ ಕಾವ್ಯಗಳ ಕಾಲವು ಕಳೆದುಹೋಗಿ, ಪಾಮರರಿಗೂ ಜ್ಞಾನಾಮೃತವನ್ನುಣಿಸುವಂಥ ಗದ್ಯಗ್ರಂಥಗಳು ಹುಟ್ಟುವ ಕಾಲವು ಒದಗಿರುತ್ತದೆ. ಆದರೆ ಮಾದರಿ ತೆಗೆದುಕೊಳ್ಳತಕ್ಕಂಥ ಗದ್ಯಗ್ರಂಥಗಳು ಇನ್ನೂ ಹುಟ್ಟಿರುವುದಿಲ್ಲ.

136 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 137 ](ಮುಂಬಯಿ ಇಲಾಖೆಯೊಳಗಿನ ಸರಕಾರದ ವಿದ್ಯಾಖಾತೆ, ಕನ್ನಡ ಆರನೇ ಪುಸ್ತಕ, ವರ್ನಾಕ್ಯುಲರ್ ಟೆಸ್ಟ್ ಬುಕ್ಸ್ ಕಮಿಟಿಯಿಂದ ರಚಿತವಾದ್ದು, ಪ್ರಕಾಶಕರು: R.N.Datar & Sons, Publishers, Poona City, 1927, Printed at the Kanarese Mission Press and Book Depot, Mangalore.)

ದ್ರಾವಿಡರೂ ಅರ್ಯರೂ: ಈ ಮೂಲ ನಿವಾಸಿಗಳನ್ನು ಗುಡ್ಡಬೆಟ್ಟಗಳಿಗೆ ಓಡಿಸಿ ಮೊದಲು ಹಿಂದುಸ್ಥಾನಕ್ಕೆ ಬಂದವರು ಈ ಮೂಲನಿವಾಸಿಗಳಿಗಿಂತಲೂ ಸುಧಾರಣೆಯುಳ್ಳವರು. ಅವರಿಗೆ ದ್ರಾವಿಡರೆನ್ನುತ್ತಾರೆ. ಅವರು ಉತ್ತರದಿಂದಲೂ ವಾಯವ್ಯದಿಂದಲೂ ಹಿಂದುಸ್ಥಾನದ ಗಡಿಯಲ್ಲಿರುವ ಕಡಿದಾದ ಬೆಟ್ಟಗಳ ಕಣಿವೆಗಳನ್ನು ದಾಟಿ ಹಿಂದೂದೇಶಕ್ಕೆ ಬಂದರು. ಮೊತ್ತಮೊದಲು ಇವರು ಸಿಂಧೂ- ಗಂಗಾತೀರಗಳಲ್ಲಿ ವಾಸಮಾಡುತ್ತಿದ್ದು ಅನಂತರ ವಿಂಧ್ಯಾಪರ್ವತದ ಉತ್ತರ ಭಾಗದವರೆಗೂ ಹರಡಿಕೊಂಡಿದ್ದರು.

ಇವರು ಹಿಂದೆ ಹೇಳಿದ ಮೂಲನಿವಾಸಿಗಳಿಗಿಂತ ಒಳ್ಳೆಯ ಸ್ಥಿತಿಯಲ್ಲಿ ಜೀವನ ಮಾಡುತ್ತಿದ್ದರು. ನದಿಗಳ ದಡಗಳಲ್ಲಿ ಇರುವ ಕಾಡುಗಳನ್ನು ಕಡಿದು ಬಗೆಬಗೆಯ ಧಾನ್ಯಗಳನ್ನು ಬಿತ್ತಿ ಪೈರು ಮಾಡುತ್ತಿದ್ದರು. ಕೃಷಿ ವ್ಯಾಪಾರ ಇವುಗಳೇ ಇವರ ಮುಖ್ಯ ವೃತ್ತಿ. ಆದರೆ ಶತ್ರುಗಳಿಂದ ತಮ್ಮನ್ನು ಕಾಪಾಡಿಕೊಳ್ಳುವ ಶಸ್ತ್ರಾಸ್ತ್ರ ವಿದ್ಯೆಯು ಇವರಿಗೆ ಬರುತಿತ್ತು. ಇವರ ದ್ರಾವಿಡ ಭಾಷೆಯು ಮುಂದೆ ಹಲವು ವರ್ಷಗಳ ನಂತರ ತಮಿಳು ಎಂದು ಕರೆಯಲ್ಪಟ್ಟಿತು. ತಮಿಳು ಭಾಷೆಗೆ 'ಅರವ ಎಂಬ ಹೆಸರೂ ಉಂಟು.

ಸಾವಿರಾರು ವರ್ಷಗಳ ನಂತರ ಇದೇ ಕಣಿವೆಗಳ ಮಾರ್ಗವಾಗಿ ಮಧ್ಯ ಆಸ್ಯದಿಂದ ಇನ್ನೊಂದು ಜನಾಂಗವು ಹಿಂದುಸ್ಥಾನದೊಳಕ್ಕೆ ಕಾಲಿಟ್ಟಿತು. ಇವರು ಆರ್ಯರೆಂದು ಕರೆದುಕೊಳ್ಳುತಿದ್ದರು. ಆರ್ಯರೆಂದರೆ, ಸುಧಾರಣೆಯುಳ್ಳ ಶಿಷ್ಯ ಜನರು ಎಂಬರ್ಥ. ಇವರು ಆಡುವ ಭಾಷೆ ಸಂಸ್ಕೃತ. ಸಂಸ್ಕೃತವೆಂದರೆ, ಚೆನ್ನಾಗಿ ರಚಿತವಾದ ಭಾಷೆ.

ಆರ್ಯರು ತಂಡ ತಂಡವಾಗಿ ಹಿಂದೂದೇಶಕ್ಕೆ ಬರುತ್ತಿದ್ದ ಹಾಗೆ ದ್ರಾವಿಡರಿಗೆ ಅಲ್ಲಿ ನಿಲ್ಲಲು ನಿಲುಗಾಲವಿಲ್ಲದಾಯಿತು. ಅವರು ಹಿಂದೂ ದೇಶದಲ್ಲಿ ಮಧ್ಯದಲ್ಲಿ ಅಡ್ಡ ಹಾದುಹೋಗುತ್ತಿದ್ದ 'ಮಹಾಕಾಂತಾರ' ಎಂಬ ಕಾಡನ್ನೂ ವಿಂಧ್ಯಾಚಲವನ್ನೂ ನೇರಾಗಿ ದಾಟಲಾರದೆ ಪಶ್ಚಿಮ ಕರಾವಳಿಯ ಸಿಂಧು ಗುಜರಾತು

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 137 [ 138 ] ಪ್ರಾಂತಗಳಿಗೆ ಕೆಲವು ಶಾಖೆಗಳೂ ಬಂಗಾಳದಿಂದ ಪೂರ್ವ ಕರಾವಳಿಯ ಒರಿಸ್ಸಾ ಪ್ರಾಂತವನ್ನು ದಾಟಿ ಇನ್ನೂ ಕೆಲವು ಶಾಖೆಗಳೂ ದಕ್ಷಿಣಕ್ಕೆ ಬಂದು ನೆಲಸತೊಡಗಿದರು. ಈ ವಿಂದ್ಯ ಪರ್ವತದ ದಕ್ಷಿಣ ಭಾಗಕ್ಕೆ ದಕ್ಷಿಣಾಪಥ ಅಥವಾ ದಖ್ಣ್ಣಣವೆಂಬ ಹೆಸರಾಯಿತು. ಕಾಲಕ್ರಮದಲ್ಲಿ ಪಶ್ಚಿಮ ಶಾಖೆಯು ಕೊಂಕಣ, ಹೈಗ,ತೌಳವ ಕೇರಳ ಈ ಪ್ರಾಂತಗಳನ್ನು ಸೇರಿಕೊಂಡಿತು. ಪೂರ್ವಶಾಖೆಯವರು ಆಂದ್ರ ತಮಿಳ, ಪ್ರದೇಶಗಳಲ್ಲಿ ವಾಸ ಮಾಡತೊಡಗಿದರು. ಹೀಗಾಗಿ ಅತೀ ಪುರಾತನವಾಗಿದ್ದ ತಮಿಳು ಭಾಷೆಯಿಂದ ಮುಂದೆ ತೆಲುಗು (ಆಂಧ್ರ), ಕನ್ನಡ, ಮಲೆಯಾಳ, ತುಳು ಇತ್ಯಾದಿ ಭಾಷೆಗಳು ಉತ್ಪನ್ನವಾದವು. (ಏಳನೆ ದರ್ಜೆಯ ಸಚಿತ್ರ ಚರಿತ್ರೆ ಮತ್ತು ಕಥೆಗಳು. ಎಂ. ಬಾಬು, ಪ್ರಕಾಶಕರು ಮತ್ತು ಮುದ್ರಕರು ಬಾಸೆಲ್ ಮಿಶನ್ ಪ್ರೆಸ್, ಮಂಗಳೂರು, 1929)

ತಮಿಳು ತೆಲಗು ಈ ದ್ರವಿಡ ಭಾಷೆಗಳಂತೆ ಕನ್ನಡವು ಶುದ್ಧವೂ ಪ್ರೌಢವೂ ಆದ ಭಾಷೆಯಾಗಿದೆ. ಪ್ರಾಚೀನ ಭಾಷೆಯಾದ್ದರಿಂದ ಕನ್ನಡದಲ್ಲಿ ಹಳೆಗನ್ನಡ, ಹೊಗನ್ನಡ ಎಂಬ ಎರಡು ಭೇದಗಳುಂಟು. ಹಳೆಗನ್ನಡವು ಪ್ರಾಚೀನ ಗ್ರಂಥ- ಪ್ರಬಂಧಾದಿಗಳಲ್ಲಿ ಮಾತ್ರ ಕಂಡು ಬರುತ್ತದೆ. ಹೊಸಗನ್ನಡವೆಂದರೆ, ಈಗ ಜನರು ಆಡುವ ಭಾಷೆ, ಕನ್ನಡದಲ್ಲಿ ಪ್ರಾಚೀನ ಗ್ರಂಥಸಂಗ್ರಹವು ತಕ್ಕ ಮಟ್ಟಿಗೆ ಇರುತ್ತದೆ. ವೇದಾಂತ, ಧರ್ಮ ಪುರಾಣ, ವ್ಯಾಕರಣ, ಜ್ಯೋತಿಷ್ಯ, ವೈದ್ಯಕ ಮುಂತಾದ ವಿಷಯಗಳ ಗ್ರಂಥಗಳೂ, ಮನೋರಂಜಕವಾದ ಕಾವ್ಯಗಳೂ ಹಲವುಂಟು. ಕನ್ನಡ ಭಾಷೆಯು ಇಷ್ಟು ಸುಧಾರಿಸಿ ಪ್ರೌಢಸ್ಥಿತಿಗೆ ಬಂದದ್ದು ಜೈನರಿಂದ ಜೈನರು ಕರ್ನಾಟಕದಲ್ಲಿ ಪ್ರಬಲರಾಗಿದ್ದಾಗ ಕನ್ನಡ ಭಾಷೆಯಲ್ಲಿ ಹಲವು ಗ್ರಂಥಗಳಾದವು. ಜೈನರ ತರುವಾಯ ಬ್ರಾಹ್ಮಣರೂ ಲಿಂಗವಂತರೂ ಕೆಲಕೆಲವು ಗ್ರಂಥಗಳನ್ನು ಬರೆದರು. ಅವುಗಳಲ್ಲಿ ರಾಜಶೇಖರವಿಲಾಸ, ಜೈಮಿನಿ ಮುಂತಾದ ಸರಸ ಪ್ರಬಂಧಗಳು ಕರ್ನಾಟಕದಲ್ಲೆಲ್ಲ ಮಾನ್ಯವಾಗಿರುವವು. (ಮುಂಬಯಿ ಇಲಾಖೆಯೊಳಗಿನ ಸರಕಾರಿ ವಿದ್ಯಾಖಾತೆ, ಕರ್ನಾಟಕದ ವರ್ಣನೆಯೂ ಇತಿಹಾಸವೂ, ಬರೆದವರು ವೆಂಕಟೇಶ ನರಸಿಂಗರಾವ ಮಗದಾಳ, 15ನೇ ಅವೃತ್ತಿ 1930 (ಈ ಪುಸ್ತಕದ ಬಾದ್ಯತೆಯು ಹಿಂದುಸ್ತಾನ ಸರಕಾರದವರ ಸನ್ 1867ನೇ ಇಸವಿಯ 25ನೇ ಆಕ್ಕಿನಂತೆ ರಿಜಿಷ್ಟರ ಮಾಡಲ್ಪಟ್ಟಿದೆ) ಮುದ್ರಕರು ಹಾಗೂ ಪ್ರಕಾಶಕರು ಬಾಸೆಲ್ ಮಿಶನ್ ಪ್ರೆಸ್, ಮಂಗಳೂರು.

ಇಲ್ಲಿ ಕೇವಲ 3 ಪಠ್ಯಪುಸ್ತಕದಲ್ಲಿದ್ದ ಮಾದರಿಯನ್ನು ಮಾತ್ರ ಕೊಡಲಾಗಿದೆ.

138 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 139 ] ಅಂದಿನ ಪಠ್ಯಗಳಲ್ಲಿ ಭಾಷೆ, ಸಂಸ್ಕೃತಿಯ ಬಗ್ಗೆ ಸವಿವರವಾದ ಪಾಠಗಳಿರುತ್ತಿತ್ತು. ಆದುದರಿಂದ ಈ ಪಠ್ಯಗಳ ಸಂಶೋಧನೆ ನಡೆದು ಇದರಿಂದ ಯಾವುದು ಇಂದಿಗೆ ಪ್ರತ, ಏನಿದರಲ್ಲಿ ತಪ್ಪು ಮಾಹಿತಿ ಏನಿದೆ ಎನ್ನುವುದನ್ನು ಕೂಲಂಕುಶವಾಗಿ ಪರಿಶೀಲಿಸಬೇಕಾಗಿದೆ. ಇದರಿಂದ ಮಾತ್ರ ನಾವು ಭಾಷಾ ಸಾಹಿತ್ಯದ ಸಮಗ್ರ ಇತಿಹಾಸವನ್ನು ದಾಖಲಿಕರಣ ಮಾಡಬಹುದು ಅಲ್ಲದೆ ಮುಂದಿನ ಪೀಳಿಗೆಗೆ ಇದನ್ನು ತಿಳಿಹೇಳಬಹುದು.

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 139 [ 140 ]

{{{1}}}

ಬಾಸೆಲ್ ಮಿಶನ್ ಮತ್ತು ಬುಡಕಟ್ಟು ಜನಾಂಗ

ಭಾರತದಲ್ಲೆಡೆ ಇದ್ದಂತೆ ನಮ್ಮ ಜಿಲ್ಲೆಯಲ್ಲಿಯೂ ಜಾತಿ ವ್ಯವಸ್ಥೆ ಹಾಗೂ ಅಸ್ಪೃಶ್ಯತೆ ಪ್ರಚಲಿತದಲ್ಲಿತ್ತು. ಊಳಿಗಮಾನ್ಯ ವ್ಯವಸ್ಥೆ ಹಾಗು ಜಾತಿ ಪದ್ಧತಿಯೊಳಗಿನ ಅಸ್ಪೃಶ್ಯತೆಯಿಂದ ಎಲ್ಲರಿಗಿಂತ ಕೊನೆಯಲ್ಲಿ ಬರುವ ಪಂಚಮರು, ಹೊಲೆಯರು ಮತ್ತು ಇತರರರು ಮೇಲ್ಪಾತಿಯವರಿಂದ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಶೋಷಿತರಾಗಿದ್ದರು. ಸಮಾನತೆ ತರಬಲ್ಲ ಸಾಧನವಾದ ಶಿಕ್ಷಣದಿಂದ ಅಸ್ಪೃಶ್ಯರು ವಂಚಿತರಾಗಿದ್ದರು. ಭಾರತದ ಕೆಲವೆಡೆ ಬ್ರಿಟಿಷರು ಶಾಲೆಗಳನ್ನು ತೆರೆದಿದ್ದರೂ ಈ ಜಿಲ್ಲೆಯಲ್ಲಿ ಶಾಲೆಗಳನ್ನು ಆರಂಭಿಸಿರಲಿಲ್ಲ. ಇಲ್ಲಿನ ಜನರು ವರ್ಣ ವ್ಯವಸ್ಥೆಯಲ್ಲಿರುವ ತಮ್ಮ ಕುಲ ಕಸಬುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅಕ್ಷರ ಜ್ಞಾನ ತರುವಂತಹ ಶಿಕ್ಷಣ ಕೇವಲ ಬ್ರಾಹ್ಮಣರ ಸೊತ್ತಾಗಿತ್ತು. ಇನ್ನುಳಿದ ಜಾತಿಗಳ ಕುಲಕಸಬುಗಳಿಗೆ ಅಕ್ಷರಜ್ಞಾನದ ಅವಶ್ಯಕತೆ ಇರಲಿಲ್ಲ. ಜಿಲ್ಲೆಯ ಮೂಲ ನಿವಾಸಿಗಳೆಂದು ಪರಿಗಣಿಸಲ್ಪಡುವ ಪಂಗಡಗಳಾದ ಕೊರಗ, ಜೇನು ಕುರುಬ, ಮಲೆಕುಡಿಯ, ಹೊಲೆಯ ಮುಂತಾದವರು ಕೃಷಿ ಪೂರ್ವ ಹಾಗೂ ತಾಂತ್ರಿಕತೆಯ ಪ್ರೌಡಿಮೆಯಿಲ್ಲದ ಸಾಮಾಜಿಕ ವ್ಯವಸ್ಥೆಯಲ್ಲಿ ಬದುಕುತಿದ್ದರು. ಸ್ವಂತ ಭೂಮಿಯಿಲ್ಲದೆ ತಮ್ಮ ದೈನಂದಿನ ವೆಚ್ಚಗಳಿಗಾಗಿ ಮೇಲ್ದಾತಿಯವರನ್ನೇ ಅವಲಂಭಿಸಬೇಕಾಗಿತ್ತು. ಆದ್ದರಿಂದ ಈ ವರ್ಗದ ಜನರು ಶತಮಾನಗಳಿಂದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರಾಗಿದ್ದರು. ಈ ಪಂಗಡಗಳಿಗೆ ಸೇರಿದವರು ಉತ್ತಮ ಬದುಕಿಗೆ ಬೇಕಾಗಿರುವ ಸಾಧನಗಳಿಂದ ಇಂದಿಗೂ ವಂಚಿತರಾಗಿದ್ದಾರೆ.

ಶ್ರೀ ನಾರಾಯಣ ಗುರುಗಳ “ಒಂದೇ ಜಾತಿ ಒಂದೇ ದೇವರು” ಎಂಬ ತತ್ವ ಜಿಲ್ಲೆಯ ಬ್ರಾಹ್ಮಣೇತರ ಜಾತಿ, ಅದರಲ್ಲೂ ಹೆಚ್ಚಾಗಿ ಬಿಲ್ಲವರನ್ನು ಪ್ರೇರೇಪಿಸಿದರೂ ಅವರಿಗಿಂತ ಹೀನಾಯವಾಗಿ ಬದುಕುತ್ತಿದ್ದ ಪಂಗಡಗಳನ್ನು ಯಾವುದೇ ರೀತಿಯಲ್ಲಿ ತಟ್ಟಲಿಲ್ಲವೆನ್ನುವುದು ವಿಪರ್ಯಾಸ ಸಂಗತಿ.

1834ರಿಂದ ಬಂದ ಬಾಸೆಲ್ ಮಿಶನರಿಗಳು ಇಲ್ಲಿ ಕ್ರೈಸ್ತ ಮತ ಪ್ರಚಾರದಲ್ಲಿ ತೊಡಗಿದರು. ಅವರು ಇಲ್ಲಿ ಕಂಡ ಮೊದಲ ತೊಡಕೆಂದರೆ ಜಿಲ್ಲೆಯಲ್ಲಿ ಶೈಕ್ಷಣಿಕ

140 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 141 ] ನ್ಯೂನತೆ, ಕ್ರೈಸ್ತ ಮತ ಪ್ರಚಾರದ ಮೂಲ ಉದ್ದೇಶವಿಟ್ಟುಕೊಂಡೇ ಶಾಲೆ ಪ್ರಾರಂಭಿಸಿರುವುದು ಸ್ಪಷ್ಟ. ಆದರೆ ಇದೇ ಉದ್ದೇಶಕ್ಕಾಗಿ ಶಾಲೆ ಸೀಮಿತವಾಗಿರುತ್ತಿದ್ದರೆ ಬ್ರಾಹ್ಮಣರ ವೇದಶಾಲೆ, ಮುಸಲ್ಮಾನರ ಮದ್ರಸಾಗಳಂತೆ ಈ ಶಾಲೆಗಳೂ ಕ್ರೈಸ್ತರಿಗೆಂದೇ ಇರುತ್ತಿದ್ದವು. ಆದರೆ ಸಾಮಾಜಿಕ ನ್ಯಾಯದ ಕಾಳಜಿ ಹೊಂದಿದ ಅವರ ಮನೋಭಾವ ಇಂದು ಜಿಲ್ಲೆ ಶೈಕ್ಷಣಿಕವಾಗಿ ಇಷ್ಟೊಂದು ಮುಂದುವರಿಯಲು ಸಾಧ್ಯವಾಯಿತು.
1836ರಲ್ಲಿ ಸ್ಥಾಪನೆಯಾದ ಪ್ರಥಮ ಪ್ರಾಥಮಿಕ ಶಾಲೆಯಲ್ಲಿ ಎಲ್ಲಾ ವರ್ಗದವರಿಗೂ ಮುಕ್ತ ಅವಕಾಶವಿತ್ತು. ಆದರೆ ಕೆಳವರ್ಗದವರು ಈ ಶಾಲೆಗಳಿಗೆ ಸೇರಲು ಮುಂದೆ ಬರುತ್ತಿರಲಿಲ್ಲ. ಮೊದಲ ಶಾಲೆಗೆ ತಿಮ್ಮಪ್ಪನೆಂಬ ಉಪಾಧ್ಯಾಯನನ್ನೇ ನೇಮಿಸಿ ಸಮಾನತೆ ತೋರಿಸಿದರು. ಆದರೂ ಒಟ್ಟಾಗಿ ಕಲಿಯಲು ಮುಂದೆ ಬರುವುದು ಕುಂಠಿತವಾದ್ದರಿಂದ 1855ರಲ್ಲಿ ಬ್ರಾಹ್ಮಿನ್ ಗರ್ಲ್ಸ್ ಶಾಲೆ, ಉಡುಪಿಯಲ್ಲಿ 1873ರಲ್ಲಿ ಬ್ರಾಹ್ಮಿನ್ ಗರ್ಲ್ಸ್ ಶಾಲೆ, 1856ರಲ್ಲಿ ಮುಲ್ಕಿಯಲ್ಲಿ ಬೋರ್ಡಿಂಗ್ ಶಾಲೆ, (ಬೇಸಾಯ, ಅಡಿಗೆ, ಕಸೂತಿ, ಹುರಿಹಗ್ಗ, ಹೈನುಗಾರಿಕೆ, ನೇಯಿಗೆ, ಗುಡಿಕೈಗಾರಿಕೆ) ಕಾರ್ಕಳದಲ್ಲಿ 1990ರಲ್ಲಿ ಹುಡುಗಿಯರ ಶಾಲೆ, ಕಾರ್ಕಳ ಪಂಚಮರ ಶಾಲೆ, ಮೂಡಬಿದ್ರೆ ಪಂಚಮರ ಶಾಲೆ, ಉಜಿರೆ ಬೈರರ ಶಾಲೆ, ಪಂಚಮರ ಶಾಲೆ ಪುತ್ತೂರು ಮುಂತಾದ ಶಾಲೆಗಳನ್ನು ತೆರೆಯಬೇಕಾಯಿತು.
ಮಿಶನರಿಗಳು ಸ್ಥಾಪಿಸಿದ ನೇಯಿಗೆ, ಹಂಚು, ಕಾರ್ಖಾನೆಗಳಲ್ಲಿ ಜಾತಿ ಮತ ಬೇಧವಿಲ್ಲದೆ ಕೆಲಸ ನೀಡುತ್ತಿದ್ದರು. ಬಿಲ್ಲವರಲ್ಲದೆ ಇತರ ಜಾತಿಯವರೂ ಮತಾಂತರಗೊಂಡಿದ್ದಾರೆ. ಬಾಸೆಲ್ ಮಿಶನ್ ಹಿನ್ನೆಲೆಯುಳ್ಳ ಪ್ರೊಟೆಸ್ಟಂಟರಲ್ಲಿ ಜಾತಿ ಮತ ಬೇಧವಿಲ್ಲ. ಒಂದೇ ಬೆಂಚಿನಲ್ಲಿ ಕುಳಿತುಕೊಳ್ಳುವ ಅವಕಾಶವಿತ್ತು. ಅಸ್ಪೃಶ್ಯತೆಗೆ ಅವಕಾಶವಿರಲಿಲ್ಲ.
ಬ್ರಿಟಿಷರು ಭಾರತದಲ್ಲಿ ತಾವು ಆಳಬೇಕಾದ ಪ್ರದೇಶಗಳು ಅಥವಾ ಪ್ರಾಂತ್ಯಗಳು ಅಲ್ಲಿಯ ಜನರು ಅವರ ಸಂಸ್ಕೃತಿ, ಧರ್ಮ, ಇತಿಹಾಸ, ಮುಂತಾದ ಆಂಶಗಳ ಕುರಿತು ಮಾಹಿತಿಗಳನ್ನು ಕಲೆಹಾಕಿದರು. ಇದರ ಮುಖ್ಯ ಉದ್ದೇಶವಿಷ್ಟೇ ತಮ್ಮ ಅಧೀನ ಪ್ರಜೆಗಳ ಕುರಿತು ಹೆಚ್ಚು ತಿಳಿದುಕೊಂಡಷ್ಟೂ ಅವರನ್ನು ಹೆಚ್ಚು ಪರಿಣಾಮಕಾರಿಯಾಗಿ ಆಳಲು ಸಾಧ್ಯವಾಗುತ್ತದೆ ಎಂಬ ನಂಬಿಕೆ. ಬರ್ನೆಲನ ಲಿಪಿಶಾಸ್ತ್ರ ಮತ್ತು ಡೆವಿಲ್ ವರ್ಶಿಪ್ ಆಫ್ ತುಳುವಾಸ್, ಕಾಲ್ಡ್ ವೆಲ್ ಡ್ರವಿಡಿಯನ್ ಲ್ಯಾಂಗ್ರೇಜ್, ಥಸ್ಟನ್‌ನ ಕಾಸ್ಟ್ ಎಂಡ್ ಟ್ರೈಬ್ ಆಫ್ ಸದರ್ನ್ ಇಂಡಿಯಾ ಮೊಗ್ಲಿಂಗನ ಮೆಮೊಯರ್ ಆಫ್ ಕೂರ್ಗ್, ರಿಕ್ಟರ್‌ನ ಕೊಡಗು ಪ್ರಾಂತ್ಯದಲ್ಲಿ ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
141 [ 142 ]ಜಾತಿಗಳು ಮತ್ತು ಬುಡಕಟ್ಟು ಜನಾಂಗಗಳು (ಇಂಗ್ಲಿಷ್)
ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಬುಡಕಟ್ಟು ಜನಾಂಗದ ಬಗ್ಗೆ ಇನ್ನೂ ಬೇಕಾದಷ್ಟು ಸಂಶೋಧನೆಗಳನ್ನು ನಡೆಸಬಹುದು, ಇವುಗಳಿಂದ ಅವರ ಬದುಕಿನ ಒಳಾರ್ಥವನ್ನು ತಿಳಿದುಕೊಳ್ಳುವುದು ಮಾತ್ರವಲ್ಲ ಪ್ರತಿ ಮಾನವನ ಬದುಕಿಗೆ ಅರ್ಥ ಕಲ್ಪಿಸುವ ವ್ಯವಸ್ಥೆಯನ್ನು ಕಂಡುಕೊಳ್ಳಬಹುದು 142 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 143 ]ಬಾಸೆಲ್ ಮಿಶನ್ ಮತ್ತು ಮಹಿಳೆಯರ ವಿದ್ಯಾಭ್ಯಾಸ ಭಾರತದಲ್ಲೆಡೆ ಇದ್ದಂತೆ ನಮ್ಮ ಜಿಲ್ಲೆಯಲ್ಲಿಯೂ ಜಾತಿ ವ್ಯವಸ್ಥೆ ಹಾಗೂ ಅನಕ್ಷರತೆ ಪ್ರಚಲಿತದಲ್ಲಿತ್ತು. ಜನಸಾಮಾನ್ಯರು ಮತ್ತು ಮಹಿಳೆಯರು ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಶೋಷಿತರಾಗಿದ್ದರು. ಸಮಾನತೆ ತರಬಲ್ಲ ಸಾಧನವಾದ ಶಿಕ್ಷಣದಿಂದ ಮಹಿಳೆಯರೂ ವಂಚಿತರಾಗಿದ್ದರು. ಬ್ರಿಟಿಷರು ಈ ಜಿಲ್ಲೆಯಲ್ಲಿ ಶಾಲೆಗಳನ್ನು ಆರಂಭಿಸಿರಲಿಲ್ಲ. ಇಲ್ಲಿನ ಜನರು ವರ್ಣ ವ್ಯವಸ್ಥೆಯಲ್ಲಿರುವ ತಮ್ಮ ಕುಲ ಕಸುಬುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅಕ್ಷರ ಜ್ಞಾನ ತರುವಂತಹ ಶಿಕ್ಷಣ ಕೇವಲ ಬ್ರಾಹ್ಮಣರ ಸೊತ್ತಾಗಿತ್ತು. ಇನ್ನುಳಿದ ಜಾತಿಗಳ ಕುಲಕಸಬುಗಳಿಗೆ ಅಕ್ಷರ ಜ್ಞಾನದ ಅವಶ್ಯಕತೆ ಇರಲಿಲ್ಲ. ಸ್ವಂತ ಭೂಮಿಯಿಲ್ಲದೆ ತಮ್ಮ ದೈನಂದಿನ ವೆಚ್ಚಗಳಿಗಾಗಿ ಮೇಲ್ವಾತಿಯವರನ್ನೇ ಅವಲಂಭಿಸಬೇಕಾಗಿತ್ತು. ಆದ್ದರಿಂದ ಈ ವರ್ಗದ ಜನರು ಶತಮಾನಗಳಿಂದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರಾಗಿದ್ದರು.ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು/br ಶ್ರೀ ನಾರಾಯಣ ಗುರುಗಳ “ಒಂದೇ ಜಾತಿ ಒಂದೇ ದೇವರು” ಎಂಬ ತತ್ವ ಜಿಲ್ಲೆಯ ಬ್ರಾಹ್ಮಣೇತರ ಜಾತಿ, ಅದರಲ್ಲೂ ಹೆಚ್ಚಾಗಿ ಬಿಲ್ಲವರರನ್ನು ಪ್ರೇರೇಪಿಸಿದರೂ ಅವರಿಗಿಂತ ಹೀನಾಯವಾಗಿ ಬದುಕುತ್ತಿದ್ದ ಪಂಗಡಗಳನ್ನು ಯಾವುದೇ ರೀತಿಯಲ್ಲಿ ತಟ್ಟಲಿಲ್ಲವೆನ್ನುವುದು ವಿಪರ್ಯಾಸ ಸಂಗತಿ.ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು/br 1834ರಿಂದ ಬಂದ ಬಾಸೆಲ್ ಮಿಶನರಿಗಳು ಇಲ್ಲಿ ಕ್ರೈಸ್ತ ಮತ ಪ್ರಚಾರದಲ್ಲಿ ತೊಡಗಿದರು. ಅವರು ಇಲ್ಲಿನ ಶೈಕ್ಷಣಿಕ ನ್ಯೂನತೆಯನ್ನು ಗಮನಿಸಿದರು. ಕ್ರೈಸ್ತ ಮತ ಪ್ರಚಾರದ ಮೂಲ ಉದ್ದೇಶವಿಟ್ಟುಕೊಂಡೇ ಶಾಲೆ ಪ್ರಾರಂಭಿಸಿರುವುದು ಸ್ಪಷ್ಟ. ಆದರೆ ಸಾಮಾಜಿಕ ನ್ಯಾಯದ ಕಾಳಜಿ ಹೊಂದಿದ ಅವರ ಮನೋಭಾವವೇ ಇಂದು ಜಿಲ್ಲೆ ಶೈಕ್ಷಣಿಕವಾಗಿ ಇಷ್ಟೊಂದು ಮುಂದುವರಿಯಲು ಕಾರಣವಾಯಿತು.ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು/br 1836ರಲ್ಲಿ ಸ್ಥಾಪನೆಯಾದ ಪ್ರಥಮ ಪ್ರಾಥಮಿಕ ಶಾಲೆಯಲ್ಲಿ ಎಲ್ಲಾ ವರ್ಗದವರಿಗೂ ಮುಕ್ತ ಅವಕಾಶವಿತ್ತು. ಆದರೆ ಕೆಳವರ್ಗದವರು, ಹುಡುಗಿಯರು ಈ ಶಾಲೆಗಳಿಗೆ ಸೇರಲು ಮುಂದೆ ಬರುತ್ತಿರಲಿಲ್ಲ. 1842ರಿಂದ ಹೆಣ್ಮಕ್ಕಳಿಗೆ ಶಾಲೆತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು/br ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 143 [ 144 ]ಆರಂಭವಾಯಿತು. ಮಹಿಳಾ ಮಿಶನರಿಗಳು ಕಸೂತಿ ಹೊಲಿಗೆ ಕಲಿಸುವುದರ ಮೂಲಕ ಹುಡುಗಿಯರನ್ನು ಶಿಕ್ಷಣದೆಡೆಗೆ ಆಕರ್ಷಿಸಿದರು. ಬಾಲ್ಯವಿವಾಹ ಪ್ರಚಲಿತದಲ್ಲಿದ್ದರಿಂದ, ಮೇಲ್ವರ್ಗದ ಮದುವೆ ಆದ ಹೆಣ್ಮಕ್ಕಳು ಹುಡುಗರ ಶಾಲೆಯಲ್ಲಿ ಕಲಿಯಲು ಮುಂದೆ ಬಾರದ್ದರಿಂದ 1855ರಲ್ಲಿ ಬ್ರಾಹ್ಮಿನ್‌ಗರ್ಲ್ಸ್ ಶಾಲೆ, ಉಡುಪಿಯಲ್ಲಿ 1873ರಲ್ಲಿ ಬ್ರಾಹ್ಮಿನ್‌ಗರ್ಲ್ಸ್ ಶಾಲೆ, ಕಾರ್ಕಳದಲ್ಲಿ 1890ರಲ್ಲಿ ಹುಡುಗಿಯರ ಶಾಲೆ ತೆರೆಯಲಾಯಿತು. ಅನಾಥ ನಿರ್ಗತಿಕ ಮಕ್ಕಳನ್ನು ಗುರುತಿಸಿ ಅವರಿಗೂ ಶಿಕ್ಷಣದ ವ್ಯವಸ್ಥೆ ಕಲ್ಪಿಸುವಂತೆ 1856ರಲ್ಲಿ ಮುಲ್ಕಿಯಲ್ಲಿ ಬೋರ್ಡಿಂಗ್ ಶಾಲೆ ತೆರೆಯಲಾಗಿ ಅಲ್ಲಿ ಮಕ್ಕಳಿಗೆ ಬೇಸಾಯ, ಅಡಿಗೆ, ಕಸೂತಿ, ಹುರಿಹಗ್ಗ, ಹೈನುಗಾರಿಕೆ, ನೇಯಿಗೆ, ಗುಡಿ ಕೈಗಾರಿಕೆಗಳನ್ನು ಕಲಿಸಲಾಗುತ್ತಿತ್ತು. ಮೂಡಬಿದ್ರೆಯಲ್ಲಿ ಪಂಚಮರ ಶಾಲೆ, ಉಜಿರೆಯಲ್ಲಿ ಬೈರರ ಶಾಲೆ, ಪುತ್ತೂರಿನಲ್ಲಿ ಪಂಚಮರ ಶಾಲೆಗಳನ್ನು ತೆರೆಯಲಾಯಿತು.
ಮಿಶನರಿಗಳು ಸ್ಥಾಪಿಸಿದ ನೇಯಿಗೆ, ಹಂಚು, ಕಾರ್ಖಾನೆಗಳಲ್ಲಿ ಜಾತಿ ಮತ ಬೇಧವಿಲ್ಲದೆ ಕೆಲಸ ನೀಡುತ್ತಿದ್ದರು. 1844ರಲ್ಲಿ ನೇಯಿಗೆ, 1851ರಲ್ಲಿ ಕೈಮಗ್ಗಗಳ ಸ್ಥಾಪನೆಗಳಾದವು. ಜಪ್ಪು 1875, ಕುದ್ರೋಳಿ 1882ರಲ್ಲಿ ಹಂಚಿನ ಕಾರ್ಖಾನೆ ಸ್ಥಾಪನೆಯಾಯಿತು. ಮಹಿಳೆಯರು ಕೆಲಸಕ್ಕೆ ಸೇರುವ ಅವಕಾಶ ಕಲ್ಪಿಸಲಾಯಿತು. ಕೆಲಸಕ್ಕೆ ಸೇರಿದ ಮಹಿಳೆಯರ ಮಕ್ಕಳನ್ನು ನೋಡಿಕೊಳ್ಳಲು ಕಾರ್ಖಾನೆಗಳಲ್ಲಿಯೇ ಶಿಶುವಿಹಾರ ಪ್ರಾರಂಭವಾಯಿತು. ಇದು ಮುಂದಕ್ಕೆ ಕಿಂಡರ್‌ ಗಾರ್ಡನ್ ಶಾಲೆಗಳಾದವು. ಮನೆ ಮನೆಗಳಲ್ಲಿ ಕೈಮಗ್ಗದ ಸ್ಥಾಪನೆಗಳಿಂದ ಮನೆಯ ಯಜಮಾನ ಮಗ್ಗದಲ್ಲಿ ನೇಯಿಗೆ ಮಾಡಿದರೆ ಹೆಂಡತಿ ನೂಲು ಸುತ್ತುವ ಕೆಲಸ ಮಾಡಲು ಅನುಕೂಲವಾಯಿತು. ಹೊಲಿಗೆ ತರಬೇತಿಯಿಂದ ಹಲವಾರು ಮಹಿಳೆಯರು ಮನೆಯಲ್ಲಿಯೇ ಕುಳಿತು ಕಸೂತಿ ಕೆಲಸ ಮಾಡಿ ಸ್ವಾವಲಂಬನೆಗೆ ತೊಡಗುವಂತಾಯಿತು.
ಶಾಲೆಗಳಲ್ಲಿ ಲಿಂಗಬೇಧವಿಲ್ಲದೆ ಶಿಕ್ಷಣದ ವ್ಯವಸ್ಥೆ ಇತ್ತು. ಒಂದೇ ಬೆಂಚಿನಲ್ಲಿ ಕುಳಿತುಕೊಳ್ಳುವ ಅವಕಾಶವಿತ್ತು. ಅಸ್ಪೃಶ್ಯತೆಗೆ ಅವಕಾಶವಿರಲಿಲ್ಲ. ಆದರೂ ಕೆಳವರ್ಗದ ಮಕ್ಕಳು ಶಾಲೆಗೆ ಬರಲು ಹಿಂಜರಿಯುತ್ತಿದ್ದರು. ಅದಕ್ಕಾಗಿಯೇ ಕಾರ್ಕಳ, ಪುತ್ತೂರು ಕಡೆಗಳಲ್ಲಿ ಪಂಚಮರ ಶಾಲೆ, ಉಜಿರೆಯಲ್ಲಿ ಬೈರರ ಶಾಲೆಗಳನ್ನು ತೆರೆಯಬೇಕಾಯಿತು.
1918ರಲ್ಲಿ ಬಾಸೆಲ್ ಮಿಶನ್‌ ಪ್ರೆಸ್‌ನಲ್ಲಿ ಪ್ರಕಟಗೊಂಡ 'ಹೆಣ್ಣು ಮಕ್ಕಳ ಕನ್ನಡ ಮೊದಲನೇ ಪುಸ್ತಕ' ದಲ್ಲಿರುವ ವಿಷಯಗಳು ಹೀಗಿವೆ. ಜೋಕಾಲಿ, ವಸ್ತ್ರದ 144 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 145 ] ಆಶೆ, ಶ್ರೀರಾಮನೂ ಶಬರಿಯೂ, ಚಿಕ್ಕ ನಾದಿನಿ, ಸ್ವಾಮಿ ಭಕ್ತಳಾದ ಪನ್ನಾದಾಸಿ, ಅಹಲ್ಯಾಬಾಯಿ, ಶಾರದೆಯ ಉಡಿಗೆ, ಉರುವಲು, ಹಾಲು ಕರೆಯುವುದು, ಮೊಸರು ಕಡೆಯುವುದು, ಚಿಕ್ಕ ಹೆಣ್ಣು ಮಕ್ಕಳಿಗೆ ಉಪದೇಶವು, ಧೈರ್ಯವುಳ್ಳ ಹೆಂಗಸು, ಅಡುಗೆಯ ಪ್ರಕಾರಗಳು, ತೊಡುವ ಬಟ್ಟೆಗಳು, ಬಾಲಿಕೆಯರೇ ಹೊಸ ರುಪಾಯಿಗಳನ್ನು ನೀವು ನೋಡಿರುವಿರಷ್ಟೇ. ಅವುಗಳ ಮೇಲಿರುವ ಮೋರೆಯು ಯಾರದು? ಅದು 5ನೇ ಜಾರ್ಜ್ ಚಕ್ರವರ್ತಿಗಳವರದು.

ಬಾಸೆಲ್ ಮಿಶನ್ ಸಂಸ್ಥೆಯು ಪ್ರಾರಂಭಿಸಿದ ಶಿಕ್ಷಣ, ಔದ್ಯೋಗಿಕ ಕ್ಷೇತ್ರಗಳಲ್ಲಿ ಮಹಿಳೆಯರೂ ತಮ್ಮನ್ನು ತೊಡಗಿಸಿಕೊಳ್ಳುಲು ಪ್ರಾರಂಭವಾದ ಮೇಲೆ ಯಂಗ್ ಮೆನ್ಸ್ ಕ್ರಿಶ್ಚನ್ ಎಸೋಸಿಯೇಶನ್, ಸ್ಪೂಡೆಂಸ್ಟ್ ಕ್ರಿಶ್ಚನ್ ಮೂವ್‌ಮೆಂಟ್, ಮದ‌ರ್ಸ್ ಯೂನಿಯನ್, ಸ್ವಿಚ್ ಕ್ರಾಫ್ಟ್, ಸೆಕ್ರೆಟರಿಯಲ್ ಪ್ರಾಕ್ಟಿಸ್, ಕಿಂಡರ್‌ಗಾರ್ಟನ್, ಬಲಕೋ ಸಂಸ್ಥೆ ಇಂತಹುಗಳ ಚಟುವಟಿಕೆಗಳು ಜಿಲ್ಲೆಯಲ್ಲಿ ಪ್ರಾರಂಭಗೊಂಡು ಮಹಿಳೆಯರ ಚಟುವಟಿಕೆಗಳಿಗೆ ಉತ್ತೇಜನ ಕೊಡುವಂತಾಯಿತು. ಶಿಕ್ಷಣವೆಂದರೆ ಹಿಂದೆ ಜಾರುತಿದ್ದ ಮಹಿಳೆಯರು ಬಾಸೆಲ್ ಮಿಶನ್ ಕ್ರಾಂತಿಯಿಂದ ವಿದ್ಯಾರ್ಜನೆ ಮಾಡಿ ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡದ್ದು ಮಿಶನರಿ ವರದಿಗಳಲ್ಲಿ ಕಂಡು ಬರುತ್ತದೆ.

1900ರಲ್ಲಿ ಜಿಲ್ಲೆಯಲ್ಲಿ ಬಾಸೆಲ್ ಮಿಶನ್ ನಡೆಸುತ್ತಿದ್ದ ಶಾಲೆಗಳಲ್ಲಿ 46 ಶಿಕ್ಷಕರು 14 ಶಿಕ್ಷಕಿಯರು ಕರ್ನಾಟಕ ಸದರ್ನ್ ಡಯಾಸಿಸ್ ನಡೆಸುತ್ತಿರುವ 28 ಪ್ರಾಥಮಿಕ, 6 ಹೈಸ್ಕೂಲ್ ಕನ್ನಡ ಮಾಧ್ಯಮ, ಇಂಗ್ಲಿಷ್ ಮಾದ್ಯಮ ಪ್ರಾಥಮಿಕ 6, ಹೈಸ್ಕೂಲ್, ಪದವಿಪೂರ್ವಕಾಲೇಜು 3, ಪದವಿ ಕಾಲೇಜ್ 1 ವಿಭಿನ್ನ ಸಾಮರ್ಥ್ಯ 1 ಶಾಲೆಗಳಲ್ಲಿ ಇರುವ ಶಿಕ್ಷಕರು 366 ಇದರಲ್ಲಿ ಪುರುಷರು 35 ಮಾತ್ರ ಉಳಿದವರು ಶಿಕ್ಷಕಿಯರು. ಇದಲ್ಲದೆ ಉಡುಪಿ, ಪುತ್ತೂರಿನಲ್ಲಿ ಬಾಲಕರ ಬೋರ್ಡಿಂಗ್ ಶಾಲೆ, ಮುಲ್ಕಿ ಮಡಿಕೇರಿಯಲ್ಲಿ ಹೆಣ್ಮಕ್ಕಳ ಬೋರ್ಡಿಂಗ್ ಶಾಲೆಗಳು ನಡೆಯುತ್ತಿದೆ. ಮಂಗಳೂರಿನಲ್ಲಿರುವ 13 ಕೈಸ್ತ ಧಾರ್ಮಿಕ ಭಾನುವಾರ ಶಾಲೆಯಲ್ಲಿರುವ ಒಟ್ಟು ಶಿಕ್ಷಕರು 65 ಇದರಲ್ಲಿ ಪುರುಷರು ಕೇವಲ 5. ಸಂಗೀತ ಉಪಕರಣ ನುಡಿಸುವವರು ವಾಯೊಲಿನ್ 50-50 ಆದರೆ ಸಂಗೀತ ನಾಯಕತ್ವ ವಹಿಸುವವರಲ್ಲಿ ಹೆಚ್ಚಿನವರು ಪುರುಷರು. ಜಿಲ್ಲೆಯಲ್ಲಿ ಸಂಗೀತ ಉಪಕರಣ ಕಲಿಸುವವರು 4 ಮಹಿಳೆಯರು ಮತ್ತೆಲ್ಲ ಪುರುಷರು. ಬಾಸೆಲ್ ಮಿಶನ್ ಸಂಸ್ಥೆಯು ಮಹಿಳೆಯರ ಮಧ್ಯೆ ಮಾಡಿದ ಈ ಕ್ರಾಂತಿಯಿಂದಾಗಿ ಮಹಿಳೆಯರು ಹೆಚ್ಚೆಚ್ಚಾಗಿ ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 145 [ 146 ] ತುಳುನಾಡಿನ ಮಹಿಳಾ ವಿದ್ಯಾಭ್ಯಾಸದ ಚರಿತ್ರೆಯನ್ನು 1836 ಮೊದಲ ಶಾಲೆ, 1838 ಮೊದಲ ಹೈಸ್ಕೂಲ್, 1842 ಹೆಣ್ಮಕ್ಕಳಿಗೆ ಶಾಲೆ ಮೊದಲು ಕಸೂತಿ ಮತ್ತೆ ಶಾಲೆ, 1856 ಮುಲ್ಕಿಯಲ್ಲಿ ಹೆಣ್ಮಕ್ಕಳ ಅನಾಥ ಶಾಲೆ, 1856 ಬಿ.ಇ.ಎಮ್. ಬ್ರಾಹ್ಮಿನ್ ಗರ್ಲ್ ಹೈಸ್ಕೂಲ್, 1868 ಸರಕಾರಿ ಕಾಲೇಜು, 1870 ಆನ್ಸ್ ಗರ್ಲ್ಸ್ ಹೈಸ್ಕೂಲ್ 1887 ಬಲ್ಮಠ ಹೆಣ್ಮಕ್ಕಳ ಸರಕಾರಿ ಶಾಲೆ, 1890 ಅನ್ ಟ್ರೈನಿಂಗ್ ಸ್ಕೂಲ್, 1901ರಲ್ಲಿ ಸರಕಾರಿ ಕಾಲೇಜಲ್ಲಿ ವಿದ್ಯಾರ್ಥಿನಿಯರಿಗೆ ಪ್ರವೇಶ, 1915 ಬೆಸೆಂಟ್, 1921 ಅಗ್ರೇಸ್ ಕಾಲೆಜ್, 1932 ಸಂತ ಮೇರಿ ಶಾಲೆ, 1946ರಲ್ಲಿ ಮಹಿಳಾ ಪ್ರಿನ್ಸಿಪಾಲ್ ಸರಕಾರಿ ಕಾಲೇಜಿನಲ್ಲಿ, 1960 ರೋಶನಿ, 1972 ಬಲ್ಮಠದ ಕರ್ನಾಟಕ ಇನ್ಸಿಟ್ಯೂಟ್ ಆಫ್ ಕಾಮರ್ಸ್‌ನಲ್ಲಿ ಟೈಪ್‌ರೈಟಿಂಗ್, ಶಾರ್ಟ್‌ ಹ್ಯಾಂಡ್‌ನೊಂದಿಗೆ ಸೆಕ್ರೆಟರಿಯಲ್ ಪ್ರಾಕ್ಟಿಸ್, ಮತ್ತು ಜಿಲ್ಲೆಯಲ್ಲಿ ಪ್ರಾರಂಭವಾದ ವಾಣಿಜ್ಯ ಶಾಲೆಗಳ ಚರಿತ್ರೆಗಳಲ್ಲಿ ಅವಲೋಕಿಸಬಹುದು.

146 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 147 ]ಬಾಸೆಲ್ ಮಿಶನ್‌ನ ಸೇವೆಯಲ್ಲಿ ಕೃಷಿ, ವಸತಿ, ಸ್ವಾವಲಂಬನೆ

ಭಾರತದಲ್ಲಿ ಬಾಸೆಲ್ ಮಿಶನ್ ಸಂಸ್ಥೆಯು ಸ್ಥಾಪನೆ ಮಾಡಿದ ಎಲ್ಲಾ ಠಾಣ್ಯಗಳಲ್ಲಿ ದೇವಾಲಯ, ಶಾಲೆ, ಬೋಧಕರುಗಳಿಗೆ, ಶಾಲಾ ಶಿಕ್ಷಕರುಗಳಿಗೆ, ಸೆಕ್ಷನ್‌ಗಳಿಗೆ ಕ್ವಾಟರ್ಸ್‌ಗಳನ್ನು ನಿರ್ಮಿಸಲು, ಸ್ಮಶಾನ, ಅಲ್ಲದೆ ಸಭೆ ಮತ್ತು ಶಾಲೆಗಳ ಚಟುವಟಿಕೆಗಳಿಗೆ ಬೇಕಾದ ವಿಶಾಲ ನಿವೇಶನಗಳನ್ನು ಪಡೆದುಕೊಳ್ಳುತ್ತಿದ್ದುದು ಮಾತ್ರವಲ್ಲದೆ ಅವಶ್ಯವಿದ್ದಲ್ಲಿ ಕ್ರೈಸ್ತರಿಗೆ, ಮಿಶನ್ ಕೆಲಸಗಾರರಿಗೆ ವಸತಿ ಸೌಕರ್ಯ, ಹಾಗೂ ಮಿಶನ್ ನಡೆಸಲು ಆದಾಯಕ್ಕಾಗಿ ಬೇಸಾಯದ ಸ್ಥಳಗಳನ್ನು ಖರೀದಿಸಿದ್ದರು. ಇದರಲ್ಲಿ ಸ್ಥಳೀಕರ ಕೊಡುಗೆಗಳು, ಸರಕಾರಿ ದರಕಾಸ್ತುಗಳೂ ಸೇರಿವೆ. ಬರಡು ಭೂಮಿಯನ್ನು ಕೃಷಿಗೆ ಯೋಗ್ಯವನ್ನಾಗಿ ಪರಿವರ್ತಿಸಿದರು. ಮಡಿಕೇರಿಯಲ್ಲಿ ಕಾಫಿ ತೋಟ, ಕರಾವಳಿ ಪ್ರದೇಶದಲ್ಲಿ ಬತ್ತ, ತೆಂಗು ಕೃಷಿ ಹಾಗೂ ಉಪ ಬೆಳೆಗಳನ್ನು ಬೆಳೆಯಿಸಿ ಇದರಿಂದ ಬರುವ ಆದಾಯವನ್ನೂ ಭೂಮಿಯನ್ನು ಕೃಷಿ ಮಾಡುವವರಿಗೆ ಗೇಣಿಗೆ, ವಸತಿಯಿಲ್ಲದವರಿಗೆ ಬಾಡಿಗೆಗೆ ಭೂಮಿ/ ಪ್ರತಿ ಸಭೆ ಮತ್ತು ಶಾಲೆಗಳ ಪರಿಸರದಿಂದ ಬಂದ ಗಾರ್ಡನ್ ಇನ್‌ಕಮ್ ಮೂಲಕ ಮಿಶನ್ ಕಾರ್ಯಕ್ಕೆ ಆದಾಯವನ್ನು ಭರಿಸಲಾಗುತ್ತಿತ್ತು. ಕಾರ್ಖಾನೆಗಳಲ್ಲಿ / ಮಿಶನ್ ಸಂಸ್ಥೆ/ ಮಿಶನ್ ಶಾಲೆಗಳ ಉಪಾಧ್ಯಾಯರುಗಳು, ಸಭಾಪಾಲಕರು ತಿಂಗಳ ಸಂಬಳ ಪಡೆಯುವಾಗ ಹಣದ ಬದಲು ಮಿಶನ್ ಆಸ್ತಿಯಿಂದ ಬಂದ ಅಕ್ಕಿ, ತೆಂಗಿನಕಾಯಿ, ಕಾಯಿಪಲ್ಯ, ಕೋಳಿ, ಕಟ್ಟಿಗೆ, ಹುಲ್ಲು, ಮರಮಟ್ಟು ಮುಂತಾದವುಗಳನ್ನು ಹಣದ ಬದಲಿಗೆ ಕೊಡುವ ಪದ್ಧತಿಯಿತ್ತು. ಮಿಶನರಿಗಳ ದಾಖಲೆಗಳಲ್ಲಿ ಸಭಾ ಆಸ್ತಿಯಿಂದ ಹೇಗೆ ಉತ್ಪತ್ತಿ ಮಾಡುತ್ತಿದ್ದರೆಂಬುದಕ್ಕೆ ಬೇಕಾದಷ್ಟು ಸಿಗುತ್ತವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ದಾಖಲಿಸಲಾಗಿದೆ.

ನೀರೇಶ್ವಾಲ್ಯ (ಈಗಿನ ಸ್ಟೇಟ್‌ ಬ್ಯಾಂಕ್ ಹತ್ತಿರ) ಬಂದ ಬಾಸೆಲ್ ಮಿಶನರಿಗಳು ಈಗಿನ ಸ್ಟೇಟ್‌ ಬ್ಯಾಂಕ್ ನೀರೇಶ್ವಾಲ್ಯ వంబ ಸ್ಥಳದಲ್ಲಿ (ಈಗಿನ 1834ರಲ್ಲಿ ಮಂಗಳೂರಿಗೆ ಇರುವ ಪರಿಸರದಲ್ಲಿರುವ ಬಂದರ್/ದಕ್ಕೆ) ಬಾಡಿಗೆ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 147 [ 148 ] ಮನೆಯಲ್ಲಿದ್ದುಕೊಂಡು ಬಾಸೆಲ್ ಮಿಶನ್‌ನ ಮುಖ್ಯ ರಾಜ್ಯವನ್ನು ಸ್ಥಾಪಿಸಿ ತದನಂತರ ಅಲ್ಲಿನ ಪರಿಸರದಲ್ಲಿ ಹಲವಾರು ನಿವೇಶನಗಳನ್ನು ಖರೀದಿಸಿ ಅಲ್ಲಿ ಸಭೆ, ಶಾಲೆ, ಬುಕ್ ಶಾಪ್, ಪ್ರೆಸ್, ವಸತಿಯನ್ನು ನಿರ್ಮಿಸಿದ್ದು ಮಾತ್ರವಲ್ಲದೆ ಹೆಚ್ಚಿನ ಸ್ಥಳವನ್ನು ವಾಣಿಜ್ಯ ಗೃಹ ಉಪಯೋಗಕ್ಕಾಗಿ ಬಾಡಿಗೆಗೆ ಗೇಣಿಗೆ ನೀಡಿದ್ದರು. ಈ ಪರಿಸರದಲ್ಲಿ ಬಾಸೆಲ್ ಮಿಶನ್ ಮರ್ಕಂಟೈಲ್ ಆಫೀಸಿನ ದೊಡ್ಡ ಕಟ್ಟಡವೊಂದರ ಪಳಿಯುಳಿಕೆಗಳು ಇತ್ತೀಚಿನವರೆಗೂ ಕಾಣುತ್ತಿತ್ತು. ಪ್ರಸ್ತುತ ಆ ಪ್ರದೇಶಕ್ಕೆ ಮಿಶನ್ ಸ್ಪೀಟ್' ಎಂಬ ಹೆಸರಿದ್ದು ಆ ಪರಿಸರದಲ್ಲಿ ಕೆಲವು ಬಾಡಿಗೆದಾರರು, ಗೇಣಿದಾರರು ಮಾತ್ರ ಇದ್ದಾರೆ.

ಬಲ್ಮಠವು ಮಂಗಳೂರು ಪೇಟೆಗೆ ಸುಮಾರು 1 ಮೈಲು ದೂರದಲ್ಲಿರುವ ಗುಡ್ಡ ಪ್ರದೇಶ. ದೂರದಿಂದ ಘಂಟೆಯಾಕಾರದಂತೆ ಹೋಲುವ ಈ ಗುಡ್ಡಕ್ಕೆ ಬೆಲ್ ಮೌಂಟ್ ಎಂದಿತ್ತು. ಮುಂದೆ ಅದು ಬಲ್ಮಟ ಆಯಿತೆಂದು ಹೇಳುತ್ತಾರೆ. ಮತ್ತೊಂದು ಹೇಳಿಕೆಯಂತೆ ಬೋಳಾಗಿರುವ ಕಟ್ಟಡಗಳ ಪ್ರದೇಶಕ್ಕೆ ಬೋಳು ಮಠ, ಮತ್ತೆ ಅದು ಬಲ್ಮಠ ಆಯಿತೆನ್ನುತ್ತಾರೆ. ಈ ಗುಡ್ಡದ ಮೇಲೆ ಮುಂಚೆ ಸರಕಾರದ ಕೆಲವು ಕಟ್ಟೋಣಗಳಿದ್ದವು. 1837 ಇಸವಿಯಲ್ಲಿ ನಡೆದ ಕಲ್ಯಾಣಪ್ಪನ ಕಾಟಕಾಯಿ ಸಂದರ್ಭದಲ್ಲಿ ಇಲ್ಲಿದ್ದ ಸರಕಾರಿ ಕಟ್ಟಡಗಳಿಗೆಲ್ಲವೂ ಬೆಂಕಿಗೆ ಆಹುತಿಯಾಗಿತ್ತು. 1840ನೆ ಇಸವಿ ಸೆಪ್ಟೆಂಬರ ತಿಂಗಳಲ್ಲಿ ಆ ಹಾಳುಬಿದ್ದ ಕಟ್ಟಡಗಳ ಉಳುಹುಗಳನ್ನೂ ವಿಸ್ತಾರವಾದ ತೋಟವನ್ನೂ ಬಹಿರಂಗವಾಗಿ ಏಲಂ ಮಾಡಬೇಕೆಂದು ಸರಕಾರದವರು ಆಜ್ಞೆ ಮಾಡಿದರು. ಆಗ ಕನ್ನಡ ಜಿಲ್ಲೆಯ ಮುಖ್ಯ ಕಲೆಕ್ಟರರಾಗಿದ್ದ ಶ್ರೀಯುತ ಎಚ್. ಎಮ್. ಬೇರ್‌ರವರು ಈ ಸ್ಥಳವನ್ನು ಕ್ರಯಕ್ಕೆ ಪಡಕೊಂಡು ಮಿಶನಿಗೆ ಉಚಿತವಾಗಿ ಕೊಟ್ಟರು. ಸ್ಥಳವನ್ನು ದಾನವಾಗಿ ಕೊಟ್ಟದ್ದು ಮಾತ್ರವಲ್ಲದೆ ಇಲ್ಲಿ ಕಾಫಿ ಬೆಳೆಸುವ ಪ್ರಯುಕ್ತ ಸಾವಿರಾರು ಗಿಡಗಳನ್ನು ನೀಡಿದರು. ಮಿಶನ್ ಈ ಪದೇಶದಲ್ಲಿ ಕಾಮಿ ಕೋಟಿ ಮತ್ತು ತುಳುನಾಡಿನಲ್ಲಿ ಶೇಂದಿಯಿಂದ ಸಕ್ಕರೆ ತಯಾರಿಸುವ ಪ್ರಯತ್ನವನ್ನೂ ಮಾಡಿದ್ದರೂ ಅದು ಸಫಲವಾಗಲಿಲ್ಲ.

ನೀರೇಶ್ವಾಲ್ಯ ಪರಿಸರದಿಂದ 1840ರ ನಂತರ ಬಲ್ಕತದ ಈ ವಿಶಾಲ ಸ್ಥಳಕ್ಕೆ ಬಾಸೆಲ್ ಮಿಶನ್‌ ಸ್ಥಾಪಿಸಿದ ಹಲವಾರು ವಿಭಾಗಗಳು ಸ್ಥಳಾಂತರಗೊಂಡವು ಈಗಿನ ವೈ.ಎಂ.ಸಿ ಯೆ ದಿಂದ ಸ್ಥಳದಲ್ಲಿ ಬಾಸೆಲ್ ಮಿಶನ್ ಪ್ರೆಸ್ (1841), ಸೆಮಿನರಿ(1847), ಪಾಥಮಿಕ ಶಾಲೆ ಬೋರ್ಡಿಂಗ್ ಹೋಮ್, ವೈ.ಎಂ.ಸಿ.ಯ ಎದುರಿಗಿರುವ ಅಥನಾ ಆಸ್ಪತ್ರೆಯಿರುವ ಸ್ಥಳದಲ್ಲಿ ಬಾಸೆಲ್ ಮಿಶನ್ ಪ್ರೆಸ್ ನ ವಿಶಾಲ ಬೈಂಡಿಗ್ ವಿಭಾಗ, ಶಾಂತಿ ದೇವಾಲಯ (1862) ಪ್ರಸ್ತುತ ಕೆ.ಟಿ.ಸಿ ಇರುವ ಸ್ಥಳಕ್ಕೆ

148 ತುಳುನಾಡಿನಲ್ಲಿ ಬಾಸೆಲ್ ಮರನ್ ಮತ್ತಿತರ ಲೇಖನಗಳು... [ 149 ] ಸೆಮಿನೆರಿ ಸ್ಥಳಾಂತರ(1863) ಪ್ರಸ್ತುತ ಹೆಬಿಕ್ ತಾಂತ್ರಿಕ ತರಬೇತಿ ಸಂಸ್ಥೆಯಿರುವ ಸ್ಥಳದಲ್ಲಿ 1913ರಲ್ಲಿ ಬಾಸೆಲ್ ಮಿಶನ್ ಪ್ರೆಸ್‌ಗೆ ಪ್ರತ್ಯೇಕ ಕಟ್ಟಡ ನಿರ್ಮಾಣಗೊಂಡವು.

ಬಲ್ಮಠ ದೇವಾಲಯದ ವ್ಯಾಪ್ತಿಯಲ್ಲಿರುವ ಪನ್ನೀರ್, ಬಲ್ಮಠ ನ್ಯೂರೋಡ್, ಕಾಸೆಸ್ ಕಾಂಪೌಂಡ್, ಪೆರ್ಲ್ ಕೌಂಪೌಂಡ್, ಮುತ್ತು ಕೌಂಪೌಂಡ್, ಕುಟ್ಟಿ ಕಂಪೌಂಡ್, ವಾಸ್‌ಲೇನ್, ಮುಂಡೆಲೆ ಕೂಟ, ಸಿಕ್ ಹೌಸ್, ತಾರೆತೋಟ ಮತ್ತು ಜೈಲ್ ರೋಡ್ ಮತ್ತು ಸ್ಟೇಟ್‌ ಬ್ಯಾಂಕ್ ಕಡೆಗಳಲ್ಲಿ ಸುಮಾರು 200ಕ್ಕೂ ಹೆಚ್ಚು ಕ್ರೈಸ್ತ ಕುಟುಂಬಗಳು ಮಿಶನ್ ಆಸ್ತಿಯಲ್ಲಿ ವಾಸಿಸುತ್ತಿದ್ದು ಕೆಲವು ಪರಬಾರೆಯಾಗಿದ್ದು ಕೆಲವು ಗೇಣಿ/ ಬಾಡಿಗೆ /ಲೀಸ್/ ಮೂಲಕ ಸಿ.ಎಸ್.ಐ ಟ್ರಸ್ಟ್‌ನಲ್ಲಿ ಉಳಿದಿದೆ. ಪರಬಾರೆಯಾದ ಮಿಶನ್ ಸ್ಥಳದಲ್ಲಿ ಕ್ರೈಸ್ತೇತರರ ನಿವಾಸಗಳು, ಬಿಲ್ಲರ್‌್ರಗಳ ಹಲವಾರು ವಸತಿ ಸಮುಚ್ಚಯಗಳು ನಿರ್ಮಾಣಗೊಂಡಿವೆ ಪ್ರಸ್ತುತ ಮಿಶನ್ ಆಸ್ತಿಯೆಂದು ಉಳಿದಿರುವ ಸ್ಥಳಗಳಲ್ಲಿ ಕಾಸೆಸ್, ಕೆ.ಟಿ.ಸಿ. ಶಾಂತಿ ದೇವಾಲಯ, ಸಭಾಪಾಲಕರ ನಿವಾಸ, ಮೈದಾನ ವೈಯಂ.ಸಿ.ಎ. ಎಸ್‌.ಸಿ.ಎಮ್. ಯು.ಬಿ.ಎಂ.ಸಿ.ಶಾಲೆ, ಪ್ರೊಟೆಸ್ಟಾಂಟ್ ಕ್ರಿಶ್ಚನ್ ಕೋಪರೇಟಿವ್ ಸೊಸೈಟಿ, ಶಾಂತಿನಿಲಯ, ಡಯಾಸಿಸ್ ಆಫೀಸ್ (ಹಿಂದಿನ ವನಿತ ನಿಲಯ) ವುಮೆನ್ಸ್ ಸೆಂಟರ್ (ಹಿಂದಿನ ಕಿಂಡನ್ ಗಾರ್ಟನ್) ಬಲ್ಮಕೊ ಮುಂತಾದವುಗಳಿವೆ.

ಬೊಲ್ಯ ಮತ್ತು ಅಮ್ಮೆಂಬಳದಲ್ಲಿ ಶಾಲೆಗಳಿದ್ದವು. ಬೊಲದಲ್ಲಿ ಶಾಲೆ ಮತ್ತು ದೇವಾಲಯ ಇದೆ. ಬೊಲ್ಮ 1840 ರಿಂದಲೇ ಇದ್ದ ಕೇಂದ್ರ. ಈ ಸ್ಥಳವು ಬಲ್ಮಟ್ಟ ಆಸ್ತಿ ದಾನ ಕೊಟ್ಟವರೇ ಈ ವಿಸ್ತಾರ ಆಸ್ತಿಯನ್ನು ದಾನ ನೀಡಿದ್ದಾರೆ. ಈ ಆಸ್ತಿಯ ಉದ್ದೇಶವೇನೆಂದರೆ ಇಲ್ಲಿ ಕೃಷಿ ಮಾಡಿಸಿ ಇದರ ಉತ್ಪನ್ನಗಳನ್ನು ಬಲ್ಮಠದಲ್ಲಿದ್ದ ಮಿಶನ್ ಕೇಂದ್ರದಲ್ಲಿ ಮಿಶನ್ ಭಂಡಾರಕ್ಕೆ ಸೇರಿಸಿಕೊಂಡು ಮಿಶನ್ ನೌಕರರಿಗೆ ವೇತನಕ್ಕಾಗಿ ಉಪಯೋಗಿಸಲಾಗುತ್ತಿತ್ತು. ಬೊಲದಲ್ಲಿರುವ ಹೆಚ್ಚಿನ ಕ್ರೈಸ್ತರು ಮಿಶನ್ ಆಸ್ತಿಯಲ್ಲಿದ್ದು ಕೃಷಿಯನ್ನೂ ಮಾಡುತ್ತಿದ್ದಾರೆ. ಅಲ್ಲದೆ ಸುಮಾರು 40 ಕ್ರೈಸ್ತರಲ್ಲದ ಕುಟುಂಬದವರು ಮಿಶನ್ ಆಸ್ತಿಯಲ್ಲಿದ್ದಾರೆ. 1847ರಿಂದ 1864 ತನಕ ಬೊಲ್ಕ ಪರಿಸರದ ತಾರಿಪಾಡಿ, ಕಟ್ಟಪುಣಿ, ಪಲ್ಲ, ನಡುಮನೆ, ಚೇರಿಂದ ಗುತ್ತು, ಬೊಲ ಗುತ್ತು ಮುಂತಾದೆಡೆ ಬೇಸಾಯಕ್ಕೆ ಬೇಕಾದ ಸ್ಥಳಗಳನ್ನು ಪಡೆದುಕೊಂಡರು. ಈ ಸ್ಥಳಗಳಲ್ಲಿ ಅಲ್ಲಿದ್ದ ಕ್ರೈಸ್ತರಿಗೆ ಮತ್ತು ಮಂಗಳೂರಿನ ಕರೆದುಕೊಂಡು ಬಂದ ಕ್ರೈಸ್ತರಿಗೆ ಮತ್ತಿತರಿಗೆ ವಸತಿ ಬೇಸಾಯವನ್ನು ಬಾಡಿಗೆ ಗಣಿ ಮೂಲಕ ನೀಡಿ ಅಲ್ಲಿ ಬರುವ ಉತ್ಪತ್ತಿಗಳನ್ನು ಮಿಶನ್ ಪಡೆದುಕೊಂಡು ಸಭಾ ಭಂಡಾರಕ್ಕೆ ಉಪಯೋಗಿಸಿ ಕೊಳ್ಳುತ್ತಿತ್ತು. ಪ್ರಸ್ತುತ ಅಲ್ಲಿರುವ ಕುಟುಂಬಗಳು ಮಿಶನ್ ಆಸ್ತಿಯಲ್ಲಿ ವಾಸಿಸುತ್ತಿದ್ದು

ತುಳುನಾಡಿನಲ್ಲಿ ಪಾಸೆಲ್ ಮಿಶನ್ ಮತ್ತಿತರ ಲೇಖನಗಳು... 149 [ 150 ] ಕೃಷಿಯನ್ನೂ ನಡೆಸುತ್ತಿದ್ದಾರೆ. ಸರಕಾರದ ಉಳುವವನೆ ಹೊಲದೊಡೆಯ/ ಡಿಕ್ಲರೇಶನ್ ಕ್ರಮದಿಂದ ಹೆಚ್ಚಿನ ಆಸ್ತಿಗಳು ಅವರವರ ಪಾಲಾಗಿದೆ. ಬೊಲ್ಮದ ಬೇಸಾಯವು ದೊಡ್ಡ ಮಟ್ಟದಲ್ಲಿ ಸ್ವಾವಲಂಬನೆಗಾಗಿ ನಡೆಯುತ್ತಿತ್ತು. ಮಿಶನ್ ಆಸ್ತಿಯಲ್ಲಿರುವ ಕ್ರೈಸ್ತ ಕುಟುಂಬಗಳು ಸೇರಿ ಮಂಗಳೂರಿನ ಎಲ್ಲ ಕ್ರೈಸ್ತ ಸಭೆಗಳಿಗೆ ಬೆಳೆಹಬ್ಬದ ಸಂದರ್ಭದಲ್ಲಿ ಹಂಚಲಿಕ್ಕಾಗಿ ತೆನೆಯನ್ನು ಉಚಿತವಾಗಿ ಕೊಡುತ್ತಾರೆ. ಅಲ್ಲದೆ ಕ್ರೈಸ್ತರಲ್ಲದವರು ಬೆಳಹಬ್ಬದ ಆಚರಣೆಯಂದು ತಾವು ಬೆಳೆದ ಫಲ ವಸ್ತುಗಳನ್ನು ಕಾಣಿಕೆಯಾಗಿ ತಂದೊಪ್ಪಿಸುವ ಕ್ರಮವನ್ನು ಈಗಲೂ ಆಚರಿಸಿಕೊಂಡು ಬರುತ್ತಿದ್ದಾರೆ.

ಕುದ್ರೋಳಿ(ಬೊಕ್ಕಪಟ್ನ)ದಲ್ಲಿ ಶಾಲೆ, ದೇವಾಲಯ, ಹಂಚಿನ ಕಾರ್ಖಾನೆ ಇದ್ದುದರಿಂದ ನೂರಾರು ಮನೆಗಳು ಕ್ರೈಸ್ತರದ್ದಿದೆ. ಕಂಡತ್ತಪಳ್ಳಿ, ಬೊಕ್ಕಪಟ್ನ, ರಿವರ್‌ಸ್ಯೆಡ್, ಮೈಲಾರ್, ಬೋಳೂರು, ಮಠದಕಣಿ, ಅಶೋಕನಗರ ಕಡೆಗಳಲ್ಲಿ ಹಂಚಿನ ಕಾರ್ಖಾನೆಯ ನೌಕರರಿಗೆ ನೀಡಿದ ವಸತಿಗಳಾಗಿವೆ. ಹೆಚ್ಚಿನ ಕ್ರೈಸ್ತರು ಮಿಶನ್‌ ಆಸ್ತಿಯಲ್ಲಿದ್ದಾರೆ. ಮಂಗಳೂರಿನಲ್ಲಿರುವ ಸಭೆಗಳಲ್ಲಿ ಹೆಚ್ಚು ವಸತಿ ಇರುವ ಪ್ರದೇಶವೆಂದರೆ ಬೊಕ್ಕಪಟ್ಟವೇ ಆಗಿದೆ. ಅಶೋಕನಗರದಲ್ಲಿರುವ ಮಿಶನ್ ಆಸ್ತಿಯು ಕೋಮನ್‌ವಲ್ಸ್‌ವರ ಅಧೀನದಲ್ಲಿದ್ದು ತದನಂತರ ಅವರೇ ಅದನ್ನು ಅಲ್ಲಿನ ನಿವಾಸಿಗಳಿಗೆ ಮಾರಾಟ ಮಾಡಿದ್ದಾರೆ. ಈ ದೇವಾಲಯದ ವ್ಯಾಪ್ತಿಯ ವಸತಿ ಪರಿಸರದಲ್ಲಿ ಬಾಸೆಲ್ ಮಿಶನ್ ಹಂಚಿನ ಕಾರ್ಖಾನೆಯ ಇಟ್ಟಿಗೆಯಿಂದ ನಿರ್ಮಾಣವಾದ ಸುಮಾರು 5-6 ಬಾವಿಗಳು ಹಂಚಿನ ಕಾರ್ಖಾನೆಯ ಕಥೆಯನ್ನು ಹೇಳುತ್ತವೆ..

ಕಾರ್ಕಳ- ಕಾರ್ಕಳ ವ್ಯಾಪ್ತಿಯ ಮಾರ್ಪಾಡಿ, ಮೂಡಬಿದ್ರೆ, ನಿಟ್ಟೆ, ಸಾಣೂರು, ಕೆದಿಂಜೆ, ಮುಡಾರ್, ಮೂರೂರು, ಹೆರ್ಗಾನ, ನೀರೆಬೈಲೂರು, ಬನ್ನಡ್ಕ, ಸಾಲ್‌ಮರ, ಎರ್ಲಪಾಡಿ, ಮರ್ಣೆ, ಕೆರ್‌ವಾಶೆ, ಬೈಲೂರು, ಪರ್ಪಲೆ ಮುಂತಾದ ಕಡೆಗಳಲ್ಲಿ ಸುಮಾರು 600 ಎಕ್ರೆಗಳಿಗಿಂತಲೂ ಮಿಕ್ಕಿ ಅಸ್ತಿಗಳನ್ನು ಖರೀದಿಸಿದ್ದು ಮಾತ್ರವಲ್ಲದೆ ಸರಕಾರದ ದರಖಾಸ್ತುಗಳನ್ನೂ, ಊರವರ ಕೊಡುಗೆ ಮೂಲಕವೂ ಆಸ್ತಿ ಮಾಡಿದ್ದಾರೆ. ಮಿಶನ್ ಸೇವೆಗೆ ಜನ ಬೇಕಾದುದರಿಂದ ಕೆಲವರನ್ನು ಮುಲ್ಕಿಯಿಂದಲೂ ಇನ್ನು ಕೆಲವರನ್ನು ಪಾದೂರು, ಕುತ್ಯಾರ್‌ನಿಂದಲೂ ಕರೆದುಕೊಂಡು ಬ೦ದರು. ಪರ್ಪಲೆ ದೇವಾಲಯದ ಪೂರ್ವ ದಿಕ್ಕಿನಲ್ಲಿ ದರ್ಖಾಸುಗಳನ್ನು ಖರೀದಿಸಿ ಕ್ರೈಸ್ತ ಕುಟುಂಬಗಳಿಗೆ ನಿವಾಸಗಳನ್ನು ನಿರ್ಮಿಸಿ ಅವರಿಗೆ ಕೃಷಿ, ತೋಟಗಾರಿಕೆಯಲ್ಲಿ ಉದ್ಯೋಗಗಳನ್ನು ಸೃಷ್ಟಿಸಿದರು. ಕಾಡುಗಳನ್ನು

150 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 151 ]ಕಡಿಸಿ ಗದ್ದೆಗಳನ್ನಾಗಿ ಪರಿವರ್ತಿಸಿ ಬಾವಿಗಳನ್ನು ತೋಡಿಸಿ ಕೃಷಿ, ತೋಟಗಳನ್ನು ಮಾಡಿಸಿ ಆ ಏದೆನ್ ತೋಟದಲ್ಲಿ ಆದಿ ಕ್ರೈಸ್ತ ಪರಿವಾರಗಳನ್ನು ನೆಲೆಯೂರಿಸಿದರು. ಮುಡಾರು, ಸಾಣೂರು, ನಂದಳಿಕೆ, ಪರ್ಪಲೆ, ಅತ್ತೂರು, ಕಾರ್ಕಳ ಪೇಟೆ, ಕೆದಿಂಜೆ, ಮೂಡಬಿದ್ರೆಯಲ್ಲಿ, ಅಜೆಕಾರು, ಕ್ರಿಸ್ತಪಲ್ಕೆ ಮುಂತಾದ ಕಡೆಗಳಲ್ಲಿ ನಿವೇಶನಗಳನ್ನು ಖರೀದಿಸಿ ಸುವಾರ್ತಿಕರಿಗೆ, ಕ್ರೈಸ್ತರಿಗೆ ವಸತಿಗಳನ್ನು ನಿರ್ಮಿಸಲಾಯಿತು. ಕ್ರೈಸ್ತಾವಲಂಬಿಗಳಾದ ಹಲವರು ತಾವಿದ್ದ ಮನೆಮಾರು, ಚಾಲಗೇಣಿ ಭೂಮಿಗಳನ್ನು ಸಂಪೂರ್ಣ ತ್ಯಜಿಸಿ ಇದ್ದ ಕೆಲವು ಆಸ್ತಿಗಳನ್ನು ಮೈ ಸಾಲಕ್ಕೆ ವಜಾ ಮಾಡಿ ಬರಿದಾಗಿ ಬಂದ ಕ್ರೈಸ್ತ ವಿಶ್ವಾಸಿಗಳಿಗೆ, ಸಂಕಷ್ಟದ ನಿವಾರಣೆಗೆ ವ್ಯವಸಾಯವೇ ತಾರಕ ಮಂತ್ರವೆಂದು ಮನಗಂಡ ಮಿಶನರಿಗಳು ಬೇಸಾಯ ಕಸುಬಿಗೆ ಆದ್ಯತೆ ನೀಡಿ ಕುಟುಂಬಗಳ ಜೀವನಕ್ಕೆ ಪ್ರೋತ್ಸಾಹ ಕೊಟ್ಟರು..

ಮಡಿಕೇರಿಗುಡ್ಡೆ ಪರಿಸರದಲ್ಲಿ 1890ರಿಂದಲೇ ಕ್ರೈಸ್ತ ಸಭೆ ಮತ್ತು ಶಿಕ್ಷಣದ ವ್ಯವಸ್ಥೆಗಾಗಿ ನಿವೇಶನಗಳನ್ನು ಖರೀದಿಸಲಾಗಿತ್ತು. ಇಲ್ಲಿ ಮೊದಲು ಶಾಲೆ ಪ್ರಾರಂಭವಾದದ್ದು 1892ರಲ್ಲಿ ಈ ಸ್ಥಳವು ಮುಖ್ಯ ರಸ್ತೆಯಿಂದ ದೇವಾಲಯಕ್ಕೆ ಹೋಗುವ ದಾರಿ ಪ್ರಾರಂಭವಾಗುವಲ್ಲಿಯೇ ಇತ್ತು ಇಲ್ಲಿ ಈಗ ಖಾಸಾಗಿ ವಸತಿ ಸಮುಚ್ಚಯವಿದೆ. ದೇವಾಲಯಕ್ಕೆ ಹೋಗುವ ದಾರಿಯ ಇಬ್ಬಾಗದಲ್ಲಿ, ಬೆಂದೂರು, ನಂತೂರು, ಮರೋಳಿ, ತಾರೆತೋಟ ಪ್ರದೇಶದಲ್ಲಿ ಮಿಶನ್ ಆಸ್ತಿಗಳಿದ್ದವು. ಪ್ರಸ್ತುತ ಸಂತ ಅಗ್ರೇಸ್ ಕಾಲೇಜಿನ ಸ್ನಾತಕೋತ್ತರ ವಿಭಾಗವಿರುವ ನಿವೇಶನ ಸೇರಿ ವಿಸ್ತಾರವಾದ ನಿವೇಶನಗಳಿತ್ತು. ಅದರಲ್ಲಿ ಮನೆಗಳನ್ನು ನಿರ್ಮಿಸಿ ಕ್ರೈಸ್ತರಿಗೆ ಬಾಡಿಗೆ ಗೇಣಿ ಮೂಲಕ ವಸತಿ ಸೌಕರ್ಯ ಕಲ್ಪಿಸಲಾಗಿತ್ತು. ಕಾಲಕ್ರಮೇಣ ಬಾಡಿಗೆ ಗೇಣಿಗಿದ್ದ ಕ್ರೈಸ್ತರು ಮಿಶನ್ ನಿವೇಶನಗಳನ್ನು ತಮ್ಮ ಹೆಸರಿಗೆ ಖಾತಾ ಬದಲಾವಣೆ ಮಾಡಿಕೊಂಡು ಇತರರಿಗೆ ಮಾರಿ ತಾವು ಬೇರೆ ಕಡೆ ವಾಸಿಸುತ್ತಿದ್ದಾರೆ. ಮಡಿಕೇರಿಗುಡ್ಡೆ, ತಾರೆತೋಟ ಪರಿಸರದಲ್ಲಿ ಬಾಸೆಲ್ ಮಿಶನ್ ಸಂಸ್ಥೆಗಳಲ್ಲಿ ದುಡಿಯುತ್ತಿದ್ದ ನೌಕರರಿಗೆ ಬಾಡಿಗೆ ಮನೆಗಳನ್ನು ನೀಡಲಾಗುತ್ತಿತ್ತು. ದೇಶೀಯ ಕ್ರೈಸ್ತರ ಸುಮಾರು 20ಕ್ಕೂ ಮಿಕ್ಕಿ ಮಗ್ಗಗಳಿತ್ತು. ಹಳೆ ದೇವಾಲಯದಲ್ಲಿ ಹಿಂದೆ ನೇಯಿಗೆ ಸಂಸ್ಥೆಯ ಉಪಕೇಂದ್ರವಿತ್ತು. ಈ ಪರಿಸರದಲ್ಲಿ 15 ಕುಟುಂಬಗಳವರು ಮಿಶನ್ ಆಸ್ತಿಯಲ್ಲಿದ್ದಾರೆ, ಮರೋಳಿ ಮಿಶನ್ ಕೌಂಪೌಂಡ್‌ನಲ್ಲಿ ಮಿಶನರಿಗಳು ಕುಷ್ಠರೋಗಿಗಳ ವಾಸ್ತವ್ಯ ಮತ್ತು ಚಿಕಿತ್ಸೆಗಾಗಿ ಕ್ಲಿನಿಕ್ ನಿರ್ಮಿಸಿದ್ದರು. ಹಲವಾರು ವರ್ಷಗಳ ಬಳಿಕ ರೋಗಿಗಳು ಚೊವ್ವಾಯೂರಿಗೆ ಸ್ಥಳಾಂತರ ಮಾಡಿದುದರಿಂದ ಈ ಸ್ಥಳವನ್ನು ಕ್ರೈಸ್ತ ವಸತಿಯನ್ನಾಗಿ ಮಾಡಿದುದರಿಂದ ಅಲ್ಲಿ ಈಗಲೂ ಸುಮಾರು 32

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 151 [ 152 ] ಕ್ರೈಸ್ತ ಕುಟುಂಬಗಳು ಅದನ್ನು ಪರಾಧೀನ ಮಾಡದೇ ಉಳಿಸಿಕೊಂಡಿದ್ದಾರೆ. ಅಲ್ಲಿ ಒಂದು ಪ್ರಾರ್ಥನಾ ಮಂದಿರವೂ ಇದೆ. ಆ ಸಭೆಯ ವ್ಯಾಪ್ತಿಯಾದ ಬೆಂದೂರು, ಮರೋಳಿ, ಮಡಿಕೇರಿಗುಡ್ಡೆ, ನಂತೂರುಗಳಲ್ಲಿ ಹಲವಾರು ಕ್ರೈಸ್ತ ಮನೆಗಳಿವೆ. ಮರೋಳಿಯ ಆಸ್ತಿ ಪರಭಾರೆಯಾಗಿರುತ್ತದೆ..

ಜಪ್ಪು:- 1865ರಲ್ಲಿ ಹಂಚಿನ ಕಾರ್ಖಾನೆ, ಸಭೆ, ಶಾಲೆ ಪ್ರಾರಂಭವಾದರೂ ಹಂಚಿನ ಕಾರ್ಖಾನೆ ಕೋಮನ್‌ ವೆಲ್ತ್ ಪಾಲಾಗಿದೆ. ದೇವಾಲಯದ ಪಕ್ಕದಲ್ಲಿದ್ದ ಎಲ್ಲ ಮಿಶನ್ ವಸತಿಗಳು ಮತ್ತು ಬೋಳಾರ, ಮುಳಿಹಿತ್ತು. ಹೊಸಹಿತ್ತು. ಅತ್ತಾವರ ಮುಂತಾದೆಡೆ ಇರುವ ಕ್ರೈಸ್ತರ ಹೆಚ್ಚಿನ ಮನೆಗಳು ಮಿಶನ್ ಆಸ್ತಿಯಾಗಿದ್ದು ಕೆಲವನ್ನು ಸ್ವಂತ ಮಾಡಿಕೊಂಡಿದ್ದಾರೆ, ಕೆಲವು ನಿವೇಶನಗಳು ಪರಾಬಾರೆಯಾಗಿದೆ..

ಬೈಲೂರು- ಬೈಲೂರು ಮಿಶನ್ ಕೌಂಪೌಂಡ್ ಪರಿಸರದಲ್ಲಿ, ಹಳೆಬೇರು, ಹುಲಿಕಲ್ಲು, ಸುಯಪನೀರು, ಮಾಧವ ಭಟ್ಟ ದರಖಾಸ್ತು, ಪುರ್ಸನ್‌ಜಡ್ಡು ಎಂಬಲ್ಲಿ ಖಾಲಿ ಸ್ಥಳಗಳನ್ನು ಖರೀದಿಸಿ ಗದ್ದೆಗಳನ್ನಾಗಿ ಪರಿವರ್ತಿಸಿ ಘಟ್ಟದ ತೋಟಗಳಿಗೆ ಹೋಗಿ ಮಲೇರಿಯ ಮುಂತಾದ ಸಾಂಕ್ರಾಮಿಕ ರೋಗಗಳಿಗೆ ಬಲಿಯಾಗದಂತೆ 8- 9 ಕ್ರೈಸ್ತ ಸಂಸಾರಗಳನ್ನು ಇಲ್ಲಿರಿಸಿ ಕೃಷಿ ಕಾರ್ಯಕ್ಕಾಗಿ ಅವರೆಲ್ಲರಿಗೆ ವಸತಿ ಕಲ್ಪಿಸಲಾಗಿತ್ತು. ಗುಡ್ಡೆಗಳನ್ನು ಕಡಿದು ಕೃಷಿಗೆ ಯೋಗ್ಯ ಭೂಮಿಯನ್ನಾಗಿಸಿದರು. ನೀರಾವರಿ ಬೆಳೆ ಬೆಳೆಯುವ ಸ್ಥಳಗಳನ್ನು ಗುರುತಿಸಿ ಬೇಸಾಯ ಮಾಡುವ ಕ್ರಮಗಳನ್ನು ಜಾರಿಗೆ ತಂದರು. ಇದರಿಂದ ಕ್ರೈಸ್ಯತರಿಗೆ ಹಾಗೂ ಪರಿಸರದ ಜನರಿಗೆ ಉದ್ಯೋಗವೂ ದೊರಕಿದಂತಾಯಿತು. 1912ರಲ್ಲಿ ನಡೆದ ಘಟನೆಯೊಂದು ಕೃಷಿಕ್ಷೇತ್ರದಲ್ಲಿ ಮಿಶನರಿಗಳಿಗಿದ್ದ ಆಸಕ್ತಿಯನ್ನು ತಿಳಿಸುತ್ತದೆ. ಬೈಲೂರು ಹಳೆನೀರೆಂಬ ಒಕ್ಕಲಲ್ಲಿ ಸರಿಯಾದ ಒಕ್ಕಲು ಸಿಗದರಿಂದ ಆ ವರ್ಷ ಮಿಶನರಿಯೇ ಮುಂದೆ ನಿಂತು ಸಾಗುವಳಿ ಮಾಡುವ ಪರಿಸ್ಥಿತಿ ಬಂದೊದಗಿತು. ಬಿತ್ತಲಿಕ್ಕೆ ಬೀಜ ಇತ್ತು. ಆದರೆ ಮಳೆ ಬಾರದೇ ಹಾಗೇ ಇತ್ತು.( ರಾತ್ರಿ ಧಾರಾಕಾರವಾಗಿ ಮಳೆ ಸುರಿಯಲಾರಂಭಿಸಿತು. ಪರ್ತಾಜೆ ಬಂಗಲೆಯಲ್ಲಿ ಮಲಗಿದ್ದ ರೆವೆ. ಫಿಶರ್‌ರವರು ಮಧ್ಯ ರಾತ್ರಿಯಲ್ಲಿಯೇ ಕುದುರೆ ಗಾಡಿಯೇರಿ 11 ಮೈಲು ಪಯಣಿಸಿ ಉಳುವವರನ್ನ ಎಬ್ಬಿಸಿ ಕರಕೊಂಡು ಹೋಗಿ ಉಜ್ಜಿ ಉತ್ತಿ ಬಿತ್ತಿ ಬೆಳಗಾಗುವುದರೊಳಗೆ ಬಂಗಲೆಗೆ ವಾಪಾಸು ಬಂದು ಮಲಗಿದರಂತೆ.ಬೆಳಿಗ್ಗೆ ಎದ್ದು ಹೇಳಿದಾಗಲೇ ಪರ್ಪಲೆಯವರಿಗೆ ಸುದ್ದಿ ತಿಳಿದು ಮಾರು ಅಲ್ಲ ಕ್ರುತಿ ಮಾಡಿದ ಮಿಶನರಿಯವರ ಕಾರ್ಯವನ್ನು ನೋಡಿ ಆಶ್ಛರ್ಯಪಟ್ಟರ್ಂತೆ.

152 ತುಳುನಾಡಿನ ಶಾಸಣೆ ಎರನ್ ಮತ್ತಿತರ ನಗ [ 153 ] ಮೂಡಬಿದ್ರೆ- 1926- ಮೂಡಬಿದ್ರೆಯಲ್ಲಿ ಕೆನರೀಸ್ ಮಿಶನ್‌ ನಿಂದ ಬಾಸೆಲ್ ಮಿಶನ್ ಫಾರ್ಮ್ ಸ್ಥಾಪನೆ. ಉಡುಪಿಯಲ್ಲಿದ್ದ ಕ್ರಿಶ್ಚನ್ ಹೈಸ್ಕೂಲ್ ನ ಪ್ರಥಮ ಉಪಾಧ್ಯಾಯರಾಗಿದ್ದ ಶ್ರೀ ವೆಂಕಟೇಶ ಪ್ರಭುಗಳ ಕುಟುಂಬದವರಿಂದ ರೂ. 275ಕ್ಕೆ ಈ ಸ್ಥಳವನ್ನು ಖರೀದಿಸಲಾಗಿತ್ತು. ರೆವೆ. ಫಿಶರ್‌ರವರ ನಾಯಕತ್ವದಲ್ಲಿ ನೂರಾರು ಎಕ್ರೆ ಸ್ಥಳವನ್ನು ಪಡುಮಾರ್ನಾಡಿನ ಬನ್ನಡ್ಯದಲ್ಲಿ ಖರೀದಿಸಿ ಅಲ್ಲಿ ಬಾಸೆಲ್ ಮಿಶನ್ ಫಾರ್ಮ್ ನಿರ್ಮಿಸಲಾಯಿತು. 1927ರಲ್ಲಿ ಶ್ರೀ ವಿಲಿಯಂ ಸೋನ್ಸ್ (ಎಗ್ರಿಕಲ್ಟರ್ ಡೆಮೊನ್‌ ಸ್ಟೇಟರ್)ರವರ ಸಹಕಾರದೊಂದಿಗೆ ಬರಡಾಗಿದ್ದ ಬನ್ನಡ ಸ್ಥಳವನ್ನು ಕೃಷಿ ಪ್ರಧಾನ ಕ್ಷೇತ್ರವನ್ನಾಗಿ ಮಾಡಲಾಯಿತು. ಸಾವಿರ ತೆಂಗಿನ ಮರಗಳನ್ನು ನೆಡಲಾಯಿತು. ನೀರಾವರಿ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ಶ್ರೀ ಹೆಚ್ಚೇಲ್ ಬಂಗೇರರವರನ್ನು, ಉಸ್ತುವಾರಿಗೆ ನೇಮಿಸಲಾಯಿತು. 1928ರ ನಂತರ ಶ್ರೀ ಎ.ಜ. ಸೋರು ನೇಮಕಗೊಂಡರು. ಇವರು ಪಾಂಗಾಳ ಗುಡ್ಡೆ ಮೂಲದ ಉಚ್ಚಿಲದಲ್ಲಿ ವಾಸಿಸುತ್ತಿದ್ದ ಕೃಷಿ/ ನರ್ಸರಿ ಹಿನ್ನೆಲೆ ಕುಟುಂಬದ ಸ್ವರು. ಇವರನ್ನು ತರಬೇತಿಗಾಗಿ ಮದ್ರಾಸ್‌ಗೆ ಕಳುಹಿಸಲಾಗಿತ್ತು. ಅವರು ವಿದ್ಯಾಭ್ಯಾಸ ಪಡೆದು ವಾಪಾಸಾದ ನಂತರ ಬಾಸೆಲ್ ಮಿಶನ್ ಫಾರ್ಮ್‌ನ್ನು ಉನ್ನತ ಮಟ್ಟಕೇರಿಸಲು ಪ್ರಯತ್ನಿಸಲಾಯಿತು. ಫಾರ್ಮಿನೊಳಗೆ ಕ್ರೈಸ್ತರ ಮನೆಗಳೆದ್ದು ಕೈ ಸ ಗಾಯನ ಹಾಡಿ ಪ್ರಾರ್ಥನೆ ಮಾಡುವಾಗ ಭೂತ, ಪಿಶಾಚಿ ಮುಂತಾದವುಗಳು ಮಾಯವಾಯಿತು, ಹಗಲಿನಲ್ಲಿಯೂ ಈ ಪರಿಸರದಲ್ಲಿ ಯಾರೂ ಸುಳಿಯುತ್ತಿರಲಿಲ್ಲ ಎಂಬ ವರದಿಗಳು ಸಿಗುತ್ತವೆ. 1928ರಲ್ಲಿ ರೆವೆ. ಫಿಶರ್‌ರವರಿದ್ದಾಗ ಮೂಡುಬಿದ್ರೆ ಚೌಟ ಅರಸರ ಸ್ಥಳದಲ್ಲಿದ್ದ ಬೋವಿ ಜನಾಂಗದವರ ಮಾರಿಗುಡಿ ಸ್ಥಳಾಂತರವಾದಾಗ ಅದನ್ನು ಬಿಚ್ಚುವಾಗ ಅದರಲ್ಲಿದ್ದ ಬೋದಿಗೆ ಕಂಬ ಮತ್ತು ಮರ ಮಟ್ಟುಗಳನ್ನು ಬಾಸೆಲ್ ಮಿಶನ್ ಫಾರ್ಮಿಗೆ ತಂದು ಫಾರ್ಮ್ ಕಟ್ಟಡ ನಿರ್ಮಾಣಕ್ಕೆ ಬಳಸಿಕೊಳ್ಳಲಾಯಿತಂತೆ. 1950ರ ನಂತರ ಈ ಫಾರ್ಮನ್ನು ಶ್ರೀಯುತ ಸೋನ್ಸರೇ ನೋಡಿಕೊಳ್ಳುತ್ತಿದ್ದು ಪ್ರಸ್ತುತ ಇದು ಸೋನ್ಸ್ ಫಾರ್ಮ್ ಹೆಸರಿನೊಂದಿಗೆ ಅವರ ಕುಟುಂಬದವರಿಂದ ನಡೆಸಲ್ಪಡುತ್ತಿದೆ.

1934ರಲ್ಲಿ ಕ್ರೈಸ್ತ ಪತ್ರಿಕೆಯೊಂದರಲ್ಲಿ ಬಾಸೆಲ್ ಮಿಶನ್ ಫಾರ್ಮ್ ಬಗ್ಗೆ ವರದಿಯಾದದ್ದು ಹೀಗೆ. ಮೂಡಬಿದೆ ಕೃಷಿಕ್ಷೇತ್ರವನ್ನು 1926ಲ್ಲಿ ತರೆದರೂ ಆದರ ಸುಮಾರು 200 ತೆಂಗಿನ ಸಸಿಗಳನ್ನು ನೆಡಲಾಯಿತು, ಖಾಲ್ ಮಿನ್ 323ನೆಯ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 153 [ 154 ] ಇಸವಿಯಿಂದ ವ್ಯವಸಾಯ ತರಬೇತು ಹೊಂದಿದ ಮೇಲ್ವಿಚಾರಕರೊಬ್ಬರನ್ನು ನೇಮಿಸಿದರು. ಅಂದಿನಿಂದ ಈ ಕೃಷಿ ಕ್ಷೇತ್ರವು ಹಣದ ಲಾಭವನ್ನು ಮಾಡಬೇಕೆಂಬ ಒಂದೇ ದೃಷ್ಟಿಯನ್ನು ಇಟ್ಟು ಕ್ರೈಸ್ತರಿಗೂ ಇತರರಿಗೂ ವ್ಯವಸಾಯದ ಶಿಕ್ಷಣವನ್ನು ಕೊಡಬೇಕೆಂಬ ನಿರ್ಣಯವನ್ನು ಮಾಡಿಕೊಂಡಿತು. ವಿವಿಧ ಪೈರುಗಳನ್ನು ಬೆಳೆಸುವುದೂ ವ್ಯವಸಾಯದ ಶಿಕ್ಷಣವನ್ನು ಕೊಡುವುದೂ, ಬಡಕ್ರೈಸ್ತರಿಗೆ ಕೆಲಸ ಕೊಟ್ಟು ಅವರಿಗೊಂದು ಆಶ್ರಯವಾಗುವುದು ಅದರ ಗುರಿ. ಕ್ರೈಸ್ತನಿಗೆ ಬಾಯಿಂದಲ್ಲ ಕಾರ್ಯರೂಪಕವಾಗಿ ಸಾಕ್ಷಿಕೊಡುವುದು. 1929ನೇ ಇಸವಿ ಅಂತ್ಯದ ತನಕ ಈ ಕ್ಷೇತ್ರದ ಆಡಳಿತವನ್ನು ಮಂಗಳೂರು ಬಾಸೆಲ್ ಮಿಶನ್ ಬುಕ್ ಡಿಪೋವಿನವರು ನೋಡಿಕೊಂಡಿದ್ದು 1930ನೇ ಇಸವಿಯ ಆರಂಭದಲ್ಲಿ ಮಿಶ್ವನಿಗೆ ಅದನ್ನು ಕೈವರ್ತಿಸಿದರು. ಆ ವರುಷದ ಆರಂಭದಲ್ಲೇ ಒಂದು ಕೃಷಿ ಶಾಲೆಯನ್ನು ತೆರೆಯಲಾಯಿತು. ಪ್ರತಿ ಎರಡುವರೆ ವರುಷಗಳಿಗೊಮ್ಮೆ ನಾಲ್ಕು ಕ್ರೈಸ್ತ ಮಕ್ಕಳನ್ನು ಈ ಶಾಲೆಗೆ ಸೇರಿಸಿ ಅವರನ್ನು ಕೃಷಿಯಲ್ಲೂ ಸ್ವಲ್ಪಮಟ್ಟಿಗೆ ದೇವರ ವಾಕ್ಯದಲ್ಲಿಯೂ ತರಬೇತು ಮಾಡಲಾಗುವುದು. (ಕರ್ನಾಟಕ ಕ್ರೈಸ್ತ ಬಂಧು ಅಕ್ಟೋಬರ್ 1934)

ಪರ್ಪಲೆ - 1939ರಲ್ಲಿ ನಡೆದ 2ನೇ ಮಹಾಯುದ್ಧದ ಬಳಿಕ ಮಿಶನರಿಗಳು ಜರ್ಮನಿಗೆ ಹಿಂತಿರುಗಿದಾಗ ಪರ್ಪಲೆ ಬಂಗ್ಲೆ ಜನ ವಸತಿಯಿಲ್ಲದ ಬೀಡಾಯಿತು. 1950ರಲ್ಲಿ ಮುಲ್ಕಿಯಲ್ಲಿದ್ದ ಸಿಸ್ಟರ್ ಹನ್ನ ಎಶಿಮನ್‌ರವರು ಇಲ್ಲಿಗಾಗಮಿಸಿದ ಬಳಿಕ ಇಲ್ಲಿ ವೃದ್ಧರಿಗೆ ಆಶ್ರಮ ನಡೆಸುವುದೆಂದು ತೀರ್ಮಾನಿಸಲಾಯಿತು. ದಟ್ಟ ಕಾಡನ್ನು ಕಡಿದು ಹೊಲವನ್ನಾಗಿ ಪರಿವರ್ತಿಸಲಾಯಿತು. ಬಾವಿ, ಮದಗಗಳನ್ನು ತೋಡಿಸಿ ನೀರಾವರಿ ವ್ಯವಸ್ಥೆ ಕಲ್ಪಿಸಲಾಯಿತು. ಗುಡ್ಡ ಪ್ರದೇಶದಿಂದ ಹರಿಯುವ ನೀರಿನಲ್ಲಿ ಬರುವ ಸಾರಾಂಶಗಳನ್ನು ಕಣಿವೆಗಳನ್ನು ನಿರ್ಮಿಸಿ ಕಾಪಿಡುವುದು, ಬಾವಿಗೆ ನೀರಿನ ಒಸರು ಬರುವಂತೆ ವ್ಯವಸ್ಥೆ ಮಾಡಿರುವುದನ್ನು ಗಮನಿಸಿದರೆ ಇಂದಿಗೂ ಆಶ್ಚರ್ಯವಾಗುತ್ತದೆ. ನೀರಾವರಿ ಪ್ರದೇಶಗಳನ್ನು ಗುರುತಿಸಿ ಪಡಕೊಳ್ಳುವುದು, ಕುರುಚಲು ಕಾಡಾದರೆ ಅದನ್ನು ಕೃಷಿಗೆ ಯೋಗ್ಯ ಗದ್ದೆಗಳನ್ನಾಗಿ ಪರಿವರ್ತಿಸುವುದು ಅಂದಿನ ಕಾರ್ಯವೈಕರಿಯಾಗಿತ್ತು. ಕಾರ್ತಿ ಮತ್ತು ಸುಗ್ಗಿ ಬೆಳೆಗಳನ್ನು, ದಾನ್ಯ, ತರಕಾರಿ, ಫಲವಸ್ತುಗಳನ್ನು ಬೆಳೆದು ಸ್ವಾವಲಂಬನೆಯತ್ತ ಹೆಜ್ಜೆಯನ್ನಿಡಲಾರಂಭಿಸಿತು. ಮಿಶನರಿಗಳ ಕೃಷಿ ಕ್ಷೇತ್ರದ ಸಾಧನೆಯ ಕುರುಹುಗಳು ಕಾರ್ಕಳ ವ್ಯಾಪ್ತಿಯಿಡೀ, ಬೈಲೂರು ಮಿಶನ್ ಅಸ್ತಿ, ಮೂಡಬಿದ್ರೆ ಫಾರ್ಮ್, ಪಡುಮಾರ್ನಾಡ್ ಆಸ್ತಿ ಹಾಗೂ ಕಾರ್ಕಳ ಬೆಧಾನ್ಯ ದೇವಾಲಯವಿರುವ ಪರ್ಪಲೆ ಗುಡ್ಡೆಯಲ್ಲಿರುವ ಕ್ರಿಸ್ತ ಸೇವಕಿ ಆಶ್ರಮದ ಗದ್ದೆ ಹಾಗೂ ತೋಟಗಳಿಗೆ ನೀರುಣಿಸಲು ಮಾಡಿದ ಸುಮಾರು 10

154 ತುಳುನಾಡಿನಲ್ಲಿ ಬಾಸೆಲ್ ರನ್ ಮತ್ತಿತರ ಲೇಖನಗಳು... [ 155 ] ಬಾವಿಗಳು ಸಾಕ್ಷಿಯಾಗಿವೆ.

ಮುಲ್ಕಿ- ಮುಲ್ಕಿ ಪರಿಸರದಲ್ಲಿ ಮಿಶನ್ ಸಂಸ್ಥೆಯು ನಡುಂಗೋಡು- 7, ಮುಂಡೂರು-34, ಬಪ್ಪನಾಡು, 25, ಅತಿಕಾರಿಬೆಟ್ಟು-9, ಕಾರ್ನಾಡು-35, ಚಿತ್ರಾಪು- 0.27 ಎಕ್ರೆಗಳಷ್ಟು ಭೂಮಿಯ ಮಾಲಕತ್ವ ಹೊಂದಿತ್ತು. ಭೂಮಿಯಲ್ಲಿ ಬರುವ ಉತ್ಪತ್ತಿಗಳನ್ನು ಸಭೆಯ ಏಳಿಗೆಗಾಗಿ ಉಪಯೋಗಿಸಲಾಗುತ್ತಿತ್ತು. ಹಿರಿಯರು ಹೇಳುವಂತೆ ಆಶ್ರಮದಲ್ಲಿಯೇ 18 ಮುಡಿ ಬೀಜದ ಗದ್ದೆಗಳನ್ನು ಬೇಸಾಯ ಮಾಡಲಾಗುತ್ತಿತ್ತು. 3 ಬೆಳೆ ವ್ಯವಸಾಯ ನಡೆಯುತ್ತಿದ್ದುದಲ್ಲದೆ, ಬತ್ತ, ಮೆಣಸು, ಗುಳ್ಳ, ದಾನ್ಯ, ಮುಂತಾದವುಗಳನ್ನು ಬೆಳೆಸಲಾಗುತ್ತಿತ್ತು. ಗೋರಿ ಸ್ಥಳದಲ್ಲಿ ಬೆಳೆಯುವ ಮುಳಿ ಹುಲ್ಲನ್ನು ಸ್ಥಳೀಕರಿಗೆ ಅಥವಾ ಅನಾಥಶಾಲೆಗೆ ಏಲಂ ಮೂಲಕ ಕೊಡಲಾಗುತ್ತಿತ್ತು. ಮರ ಮಟ್ಟುಗಳನ್ನು ಕಡಿದರೆ ಶಾಲೆ, ದೇವಾಲಯ, ಆಶ್ರಮ ಮುಂತಾದ ಕಡೆಗಳಿಗೆ ಉಪಯೋಗಿಸಲಾಗುತ್ತಿತ್ತು. ಮರವನ್ನು ಯಾವ ರೀತಿ ಉಪಯೋಗಿಸುತ್ತಿದ್ದರು ಎನ್ನುವುದಕ್ಕೆ ಸಾಕ್ಷಿಯಾಗಿ ತುಳುವಿನಲ್ಲಿ ಹೀಗೆ ವರದಿ ಮಾಡಲಾಗಿದೆ.

"ದೊರೆ ಕಟ್ಟಾದ್ ದೀಯಿ 14 ಕೋಲು ಉದ್ದದ ಪಾಲೆದ ಮರೊನು 12 ರುಪಾಯಿಗೆ ದೆತೊನ್ನು ಬಡವರೆ ಫಂಡ್ ಲೆಕ್ಕೊಡು ಉಂದೆನ್ ಪುಣತ್ತ ಪಟ್ಟಿಗೆ ಮತ್ತು ಪಲಯಿ ಆಪಿಲೆಕ್ಕ ತಿಗ್‌ತ್‌ದ್ ಸಾಲೆದ ಅಟೊಡು ಪಾಡೊಡು, ಕೇಣುನಗಲೆಗ್ ನಗದಿಯಾದ್ ಮಾರ್ದ್ ಐತ ಪಣವುನು ಬಡವೆರೆ ನಿಧಿಕ್ಟ್ ಪಾಡೊಡು." "ಕೊಡೆತ್ತೂರುಡುಪ್ಪು ಬಡವೆರೆ ಫಂಡ್‌ ಆಸ್ತಿಡ್ಜ್ ತಕ್ಕ ಆದಾಯ ಬರಂದೆ ನಷ್ಟ ಆಪುಂಡು ಅಂದ್‌ದ್ ತೋಜುನೆಸ್ಟ್ ಅವೆನ್ ಮಾರ್‌ಂಡ ಆವು ಇಲ್ಲಿ ಸೂಚನೆದ ಮಿತ್ತ ಆಲೋಚನೆ ಮಳ್‌ದ್ ಒಂಜಿ ಸಾವಿರ ರೂಪಾಯಿಡ್ ಮಿಫ್ ಕ್ರಯ ಐಕ್ ಬರ್ಪುಂಡ ಮಾತ್ರ ಮಾರೊಲಿ ಇಜ್ಜಿಡ ಬೊಡ್ಡಿ ಅಂದ್‌ ನಿರ್ಣಯ ಆಂಡ್" (1914)

"ಮುಂಡೇರ್ದ ಕಾಡ್‌ಡ್ ಮೂಜಿ ನಾಲ್ ಮುಡಿ ಕಂಡ ಮಳೆಗೆ ಪೊರ್ಲುದವು ಒಂಜಿ ಜಾಗ ಉಂಡು ಸತ್ಯಮಿತ್ರೆ(ಹೆಸರು ಬದಲಿಸಿದೆ) ಇನ್ನಿನಾಯಗ್ ದಿನ ಪೊವಂದೆ ಆಯೆ ಗಟ್ಟದ ಮಿತ್ತಲಾ ಬೇತೆ ಊರುಗುಲಾ ಪೋದು ಉಪೊಡು ಅಂದ್‌ ಪಣ್ಣಗ ಆಯನ್ ಮುಂಡೇರ್‌ಡ್ ಒಕ್ಕೆಲ್ ಒರಿಪೆರೆ ಯೆನಡ್ ಆ ಕಂಡ ಮಳ್ಳು ಆಲೋಚನೆ ಪುಟ್ಟುಂಡು, ಅಪಗನೇ ಬುನ್ಸ್ ದೊರೆಕ್ ಬರೆದ್ ಕೇಣ್‌ನಗ ಆರ್-ನಿಗುಳೆ ಫಂಡ್ ಎಕೌಂಟ್‌ಡ್ ಪಣವು ಉಂಡುಡ ಮಳ್ಳುಲೆ ಪಂಡೆರ್. ಈಯ್ಯೋಡು ಸುಮಾ‌ ಒಂಜೇ ಕಾಲ್ ಮುಡಿ ಮಾತ್ರ ಆಪಿಲೆಕ್ಕ ಮಲ್ನೋಡು ಅಂದ‌ ನೆನಕೆ, ಬೊಕ್ಕ ಐಕ್ ಬೋಡಾಯಿ ಖರ್ಚಿ ಆ ಜಾಗೆಡುಪ್ಪು ಮರನ್ ಕಡ್ಕ ಮಾರಂಡ ಪುಟ್ಟು ಇನ್ನಿ ಧೈರ್ಯ ಉಂಡು." ನೆಕ್ಕ ಹಿರಿಯಾಕುಳೆ ಒಪ್ಪಿಗೆ ತಿಕ್ಕುಂಡು”

ತುಳುನಾಡಿನಲ್ಲಿ ಬಾಸೆಲ್‌ ಮಿಶನ್‌ ಮತ್ತಿತರ ಲೇಖನಗಳು... 155 [ 156 ] “ಒಕ್ಕೆಲ್‌ಡ್ ಕುಲ್ಲಿನಾಯೆ ಬುಡೊಡಾಂಡ ಆತ್ ಕೊರೆ ಈತ್ ಕೊಲ್ಲೆ ಪಂಡ್‌ಂಡ ಸಭಾ ಪಂಡ್‌ ಒತ್ತು ಕೊರಿನಿ. ಐಕಾದ್ ಚರ್ಚ್ ಪಂಡ್‌ುಪ್ಪು ರಡ್ಡಿ ಒಕ್ಕೆಲ್ಲದಕುಲು ಇತ್ತೆ ಮಲ್ಲಿ ಕೃಷಿಗೆ ನಾಲ್ ಜನ ಗ್ರಹಸ್ಟೆರ್ ಪಂಡಿ ಬಿಲೆನ್ ಇತ್ತೆನೇ ಕೊರ್ದು ತೀರಿಸಾದ್ ಜಾಗ್‌ಲೆನ್ ನಮ ಸ್ವಾದೀನ ಮಣ್ಣು, ಆಕುಳು ಬೇತೆ ಚಾಲಗೇಣಿ ಒಕ್ಕೆಲುಳೆ ಲೆಕ್ಕನೆ ಕ್ರಮೊಟು ಗೇಣಿ ಚೀಟ್ ಬರೆದ್ ಕೊರ್ಪಿಲೆಕ್ಕನೆ ಮಳುನವು ಮಾತೆಡ್ ಎಡ್ಡೆಲಾ ಕ್ರಮಲಾ ಇ ಉಪಾಯ ಅಂದ್‌ದ್‌ ಯೆಂಕುಳೆಗ್ ತೋಜುಂಡು. ದೇವಾಲಯದ ಬೇಲೆದ ಪಣವುಗಾದ್ ಪಡಯಬಿಲ್ ಜಾಗೆನ್ ಬುನ್ಸ್ ದೊರೆ ಮದರ್‌‌ 10 ವರ್ಷಗು ಅಡವು ಪಾಡ್ ರೂಪಾಯಿ 800/- 500 ದೆತೊಂಡಿನವು. ಮುಂಡೇ‌ದ 15 ಎಕ್ರೆ ಜಾಗೆಡಿತ್ತಿ ಕಾಡನ್ ಎಕ್ರೆಗ್ 60 ರುಪಾಯಿ ಲೆಕ್ಕೊಡು ಮಾರ್‌ದ್ ಐತ ಕಾಸ್ರನ್ ಮುಲ್ಕಿ ದೇವಾಲಯ ದುರಸ್ತಿಗ್ ಖರ್ಚಿ ಮಲ್ಲಿನವು. ದೇವಾಲಯದ ಬಿತ್ತಲ್‌ಡ್ ಇತ್ತಿ ಮಲ್ಲ ಪಾಲೆದ ಮರೊನು ಕಟ್ಟಿ ಅವೆನ್ ಪಲಯಿ ಮಲ್ತ್‌ದ್ ಪಲಯಿಲೆನ್ ಅಟ್ರೊಡು ಪಾಡ್ ದೀದ್ ಸಭೆಟ್ ಏರಾಂಡಲಾ ಸೈತೆರ್ಡ ಪೆಟ್ಟಿಗೆ ಮಲ್ಲರೆ ಕಮ್ಮಿ ಕ್ರಯೊಕ್ಕು ಮಾರೊಡು. (ಸಭಾ ವರದಿಗಳು 1912)

ಸಂಕಲಕರಿಯದಲ್ಲಿ ಮಿಶನರಿಗಳು ಠಾಣ್ಯ ಸ್ಥಾಪಿಸಲೆಂದು ಖರೀದಿಸಿದ 34 ಎಕ್ರೆ ಸ್ಥಳದ ಹೆಚ್ಚಿನ ಭಾಗ ಗಿಡ ಮರಗಳು ಬೆಳೆದ ಸ್ಥಳವಾಗಿ ಕಾಡಿನಂತಿತ್ತು. ಈ ಪ್ರದೇಶದಲ್ಲಿ ಒಂದು ಶಾಲೆ ಮತ್ತು ಆರಾಧನೆಗೆ ವ್ಯವಸ್ಥೆ ಇದ್ದರೂ ಇದು ಸಭೆಯಾಗಿ ಬೆಳೆಯುವ ಲಕ್ಷಣವಿಲ್ಲದ್ದರಿಂದ ಈ ಸ್ಥಳವನ್ನು ಸಭಾಭಂಡಾರದ ಉತ್ತತ್ತಿ ಹೆಚ್ಚಿಸಲು ಉಪಯೋಗಿಸುವಂತೆ ಬದಲಾಯಿಸಲಾಯಿತು. ಇದರ ಬಗ್ಗೆ ಮಿಶನ್ ವರದಿಯಲ್ಲಿ 1912ರಲ್ಲಿ ಹೀಗೆ ವರದಿ ಮಾಡಲಾಗಿದೆ. ಕಾಡನ್ನು ಗದ್ದೆಯನ್ನಾಗಿ ಪರಿವರ್ತಿಸಿದ ನಂತರ ಇಲ್ಲಿನ ಬೇಸಾಯದಿಂದ ಉತ್ಪತಿ ಬರುತ್ತಿತ್ತು. ಕ್ರಮೇಣ ಇಲ್ಲಿ ಕೆಲಸ ಮಾಡುತ್ತಿರುವವರಿಗೆ ಇದರ ಉಸ್ತುವಾರಿ ವಹಿಸಲಾಯಿತು. ಇದರಿಂದ ಉತ್ಪತ್ತಿ ಕುಂಠಿತಗೊಂಡಿತು. ನಂತರದ ವರ್ಷಗಳಲ್ಲಿ ಸುಮಾರು ಹತ್ತು ಹನ್ನೆರಡು ಎಕೆಯ ವ್ಯವಸಾಯ ಭೂಮಿಯು ಮಿಶನ್ ಕೈತಪ್ಪಿ ಉಳುವವರ ಪಾಲಾಯಿತು. ಪ್ರಸ್ತುತ ಈ ಬೇಸಾಯ ಸ್ಥಳವು ಒಬ್ಬ ಕ್ರೈಸ್ತ ಕುಟುಂಬದಲ್ಲಿಯೂ ಮತ್ತೊಂದು ರೋಮನ್ ಕೆತೋಲಿಕ ಕುಟುಂಬದಲ್ಲಿಯೂ ಇದ್ದು ಅವರ ಸ್ವಂತ ಆಸ್ತಿಯಾಗಿ ಅದರಲ್ಲಿ ಬೇಸಾಯ ಈಗಲೂ ಮಾಡುತ್ತಿದ್ದಾರೆ. ಸುಮಾರು 1945 ರಲ್ಲಿ ಸಂಕಲಕರಿಯದಲ್ಲಿದ್ದ ಶಾಲೆ, ದೊರೆ ಬಂಗ್ಲೆ ಇದ್ದ ಸ್ಥಳವಾದ ಸುಮಾರು 1.37 ಎಕ್ರೆ ಸ್ಥಳವು ಶಾಲೆಯಲ್ಲಿ ಉಪಾಧ್ಯಾಯರಾಗಿದ್ದ ಮುಂಡೂರು ದೊಡ್ಡಮನೆ ವೆಂಕಣ್ಣ ಶೆಟ್ಟಿಯವರ

156

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು .. [ 157 ] ಪಾಲಾಯಿತು. ಪಸ್ತುತ ಆ ಸ್ಥಳದಲ್ಲಿ ಅವರ ಮನೆಯೂ ಸುಂದರ ಶಾಲೆಯೂ ಇದೆ. (ಶಾಲೆ ನಡೆಸಲು ನಮ್ಮ ತಂದೆಯವರಿಗೆ ಮಿಶನ್‌ ಸಂಸ್ಥೆಯು ಕೊಟ್ಟಿತು. ಅಲ್ಲದೆ ಅದರೊಂದಿಗಿದ್ದ ಈ ಸ್ಥಳವೂ ಡಿಕ್ಲರೇಶನ್ ಮೂಲಕ ನಮ್ಮ ಹೆಸರಿಗೆ ಆಗಿದೆ. ಇಲ್ಲಿ ದೊರೆಗಳು, ಶಿಕ್ಷಕರು ಇದ್ದ ದೊಡ್ಡ ಮನೆಯೊಂದಿತ್ತು ಮಣ್ಣಿನ ಗೋಡೆಯನ್ನು ಹೊಂದಿದ್ದ ಈ ಮನೆಗೆ ಬಂಗ್ಲೆ ಎಂಬ ಹೆಸರಿತ್ತು ಇದರಲ್ಲಿ ದೊರೆ ಕೋಣೆ ಒಂದಿತ್ತು. ದೊರೆಗಳು, ಉಪದೇಶಗಳು, ಶಿಕ್ಷಕರು ಸಂಕಲಕರಿಯಕ್ಕೆ ಬಂದಾಗ ವಾಸ ಮಾಡಿದ್ದ ಮನೆ ಇದು ಎಂದು ದಿ. ವೆಂಕಣ್ಣ ಶೆಟ್ಟಿಯವರ ಮಗ ಶ್ರೀ ಹೇಮನಾಥ ಶೆಟ್ಟಿಯವರು ನೆನಸಿಕೊಳ್ಳುತ್ತಾರೆ) ಇತ್ತೀಚೆಗೆ ನಾದುರಸ್ತಿಯಲ್ಲಿದ್ದ ಶಾಲೆಯ ಹಿಂಬದಿಯಲ್ಲಿದ್ದ ಬಂಗ್ಲೆಯನ್ನು ಕೆಡವಿ ತಾರಸೀ ಮನೆಯನ್ನು ಪಕ್ಕದಲ್ಲಿ ನಿರ್ಮಿಸಿಕೊಂಡಿದ್ದಾರೆ. ಇದರ ಪಕ್ಕದಲ್ಲಿಯೇ ಸ್ಮಶಾನ ಸ್ಥಳವೆಂದು ಕರೆಯಲ್ಪಡುವ ಸ್ಥಳವಿದೆ.

ಸಂಕಲಕರಿಯದಲ್ಲಿ ಈ ಹಿಂದೆ ಮಾಡಿದ್ದ ಬೇಸಾಯದ ಉತ್ಪತ್ತಿ ಕೈಬಿಟ್ಟು ಹೋದದರಿಂದ 1964ರಲ್ಲಿ ರೆವೆ. ಇ.ಪಿ. ಫೆರ್ನಾಂಡಿಸ್‌ರವರ ನಾಯಕತ್ವದಲ್ಲಿ ಮತ್ತೊಮ್ಮೆ ಉಳಿದ ಕಾಡನ್ನು ಅಂಶಿಕವಾಗಿ ಗದ್ದೆಯಾಗಿ ಪರಿವರ್ತಿಸುವ ಕಾರ್ಯ ಪ್ರಾರಂಭವಾಯಿತು. ಮೊದಲಿಗೆ ಸುಮಾರು 15 ಅಡಿ ಸುತ್ತಳತೆಯ ದೊಡ್ಡ ಬಾವಿಯೊಂದನ್ನು ನಿರ್ಮಿಸಿ ಉಸ್ತುವಾರಿ ನೋಡಿಕೊಳ್ಳುವವರಿಗಾಗಿ ಒಂದು ಮನೆಯನ್ನು ನಿರ್ಮಿಸಲಾಯಿತು. ಬೈಲೂರಿನಿಂದ ಒಂದು ಕುಟುಂಬ ಮುಡಾರಿನನಿಂದ ಒಂದು ಕುಟುಂಬವನ್ನು ಕರಕೊಂಡು ಬಂದು ಇಲ್ಲಿ ಇವರಿಗೆ ಉಳುಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಯಿತು. ಸುಮಾರು |0 ಮುಡಿ ಬೀಜ ಬಿತ್ತುವ ಗದ್ದೆಯನ್ನು ಮಾಡಲಾಯಿತು. ಹಟ್ಟಿ ಗೊಬ್ಬರಕ್ಕಾಗಿ ಜಾನುವಾರು, ಉಳುವ ಕೋಣಗಳನ್ನು ಸಾಕಲು ಆರಂಭಿಸಿ ವ್ಯವಸಾಯ ಭರದಿಂದ ಸಾಗಿತು. ಕಾರ್ತಿ, ಸುಗ್ಗಿ. ಇಡೆ ಕೊಳಕೆ. ಕೊಳಕೆ ಹೀಗೆ ನಾಲ್ಕು ಬೆಳೆ ತೆಗೆಯಲಾಗುತ್ತಿತ್ತು, ಬತ್ತ, ಉದ್ದು, ಹುರುಳಗಳನ್ನು ಬೆಳೆಸುತ್ತಿದ್ದರೆ ಇಡೆ ಬೆಳೆಯಾಗಿ ಸೌತೆ, ಶುಂಠಿ, ಮೆಣಸು ಮುಂತಾದವುಗಳನ್ನು ಬೆಳೆಸಲಾಗುತ್ತಿತ್ತು. ಅಲ್ಲದೆ ಇಲ್ಲಿ ಕಬ್ಬು ಬೆಳೆದು ಗಾಣ ತರಿಸಿ ಇಲ್ಲಿಯೇ ಬೆಲ್ಲ ತಯಾರಿಸಲಾಗುತ್ತಿತ್ತು. ಇಲ್ಲಿನ ಉತ್ಪತ್ತಿ ಎಷ್ಟಿತ್ತೆಂದು ಅಲ್ಲಿ ಸುಮಾರು 30 ವರ್ಷದಿಂದ ಸೇವೆ ಸಲ್ಲಿಸಿದ್ದು ಅಲ್ಲಿಯೇ ವಾಸಿಸುತ್ತಿರುವ ಶ್ರೀಮತಿ ಗುಲಾಬಿ ಅಮ್ಮನ್ನ ರವರಲ್ಲಿ ಕೇಳಿದಾಗ "ಏತ್‌ಂದ್ ಪನಿ ಮೂಲು ಬುಳೆಯಿನ ಬುಳೆನ್ ಗಾಡಿ ಗಾಡಿ ಅನಾಥ ಶಾಲೆಗೆ ಕೊಲೊವೊಂದಿತರ್‌” ಎನ್ನುತ್ತಾರೆ.

ಪ್ರಸ್ತುತ ಇಲ್ಲಿನ ಸುಮಾರು 20 ಎಕ್ರೆ ಗದ್ದೆ ಕಳೆದೆರಡು ವರ್ಷಗಳಿ೦ದ ಜಾನುವಾರು ಸಾಕುವ ಹಟ್ಟಿಯಲ್ಲಿ ಜೈಪಣೆಯಲ್ಲಿ ಅರ್ಕಂಜಿ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು 157 [ 158 ]ಕುಡಿಯುವ 6 ಹೊಂಡಗಳು ಮಾತ್ರ ಕಾಣುತ್ತವೆ. ಬತ್ತ ಕುಟ್ಟುವ ಕೋಣೆಯಲ್ಲಿ ಬತ್ತ ಕುಟ್ಟುವ 4 ಹೊಂಡಗಳು, ಒಂದು ದೊಡ್ಡ ಗೊಬ್ಬರ ಗುಂಡಿ, ಬೈಹುಲ್ಲು ಹಾಕುವ ಕಟ್ಟಡಗಳು ನೋಡಿ ನಮ್ಮನ್ನು ಅಣಕಿಸುವಂತಿದೆ. ಬೋಡಾಯಿನಾತ್ ನೀ‌ರ್ದ ವ್ಯವಸ್ತೆ ಉಂಡು ಮೂಜಿ ಬುಳೆ ಎಂಚಲಾ ದೆಪ್ಪೊಲಿ ಏಳ್ ಮುಡಿ ಬಿತ್ತ್ ಬಿತ್ತುನ ಪೊರ್ಲುದ ಕಂಡ ಉಂಡು, ಕೈಕಂಜಿ, ಜನ ಇತ್ತಂಡ ಎಂಚಲಾ ಬೆನೊಲಿ, ಆಂಡ ದಾನ್ಯ ಮಲ್ಪರೆ ಬಂಗ ಉಂಡು ದಾಯೆ ಪಂಡ ನವಿಲುದ ಉಪದ್ರ ಉಂಡು” ಎನ್ನುತ್ತಾರೆ ಅಲ್ಲಿ ಪ್ರಸ್ತುತ ಕೆಲಸ ಮಾಡುತ್ತಿರುವ ಶ್ರೀ ಅಂಬು, 2003 ತನಕ ಅನಾಥಶಾಲೆಯ ಮುಖ್ಯಸ್ಥರೇ ಇದರ ಉಸ್ತುವಾರಿಯಾಗಿದ್ದರು. ಪ್ರಸ್ತುತ ಸಂಕಲಕರಿಯದಲ್ಲಿ ತೆಂಗಿನ ತೋಟವನ್ನು ಪರಿವರ್ತಿಸಿ ರಬ್ಬರ್ ಬೆಳೆಯನ್ನು ಬೆಳೆಸಲಾಗುತ್ತಿದೆ.
ಉಚ್ಚಿಲ ಸಭೆ ಸ್ಥಾಪನೆಯಾದ ಮೂಲ ಸ್ಥಳ ಪರಬಾರೆಯಾಗಿದೆ. ಪ್ರಸ್ತುತವಿರುವ ನಿವೇಶನದಲ್ಲಿ ಸುಮಾರು ಎಕ್ರೆ ಸ್ಥಳವಿದ್ದು ದೇವಾಲಯ, ಶಾಲೆ, ಸಭಾಪಾಲಕರ ನಿವಾಸವಿದೆ. ಸುಮಾರು 30 ಕುಟುಂಬಗಳವರು ಮಿಶನ್‌ ಆಸ್ತಿಯಲ್ಲಿ ವಾಸ ಮಾಡುತ್ತಿದ್ದು ಸುಮಾರು 40 ಮನೆಗಳು ಕ್ರೈಸ್ತೇತರರದ್ದು ಇದೆ. ಇಲ್ಲಿ ಮಿಶನರಿಗಳು ಮಿಶನ್ ಆದಾಯಕ್ಕಾಗಿ ಬತ್ತ, ಹೊಗೆಸೊಪ್ಪು ಬೆಳೆಗಳನ್ನು ಬೆಳೆಸುತ್ತಿದ್ದರು.
ಹಳೆಯಂಗಡಿ-]1841ರಲ್ಲಿ ಸ್ಥಾಪನೆಯಾದಾಗ ಇದ್ದ ಕದಿಕೆ ಸ್ಥಳ ಪರಬಾರೆಯಾಗಿದೆ. ನಂತರ ಪಡುಹಿತ್ಲಿಗೆ ವರ್ಗಾವಣೆಯಾಗಿತ್ತು. ಆನಂತರ ಪ್ರಸ್ತುತವಿರುವ ಸ್ಥಳಕ್ಕೆ ವರ್ಗಾವಣೆಯಾಗಿದೆ. ಶಾಲೆ, ದೇವಾಲಯ, ಈ ಸ್ಥಳವೂ ಗೇಣಿಯವರಿಗೆ ಆಗಿದೆ. ಸುಮಾರು 30 ಕುಟುಂಬಗಳು ಮಿಶನ್ ಆಸ್ತಿಯಲ್ಲಿದ್ದು ಬೇರೆಯವರಿಗೂ ಸ್ಥಳಗಳು ಹೋಗಿವೆ. ಇಲ್ಲಿ ಮುಖ್ಯವಾಗಿ ಭತ್ತ ಮತ್ತು ತೆಂಗು ಬೆಳೆಸಲಾಗುತ್ತಿತ್ತು. ಸಸಿಹಿತ್ಲುವಿನಲ್ಲಿನ ಬೇಸಾಯವು ಮಿಶನರಿಗಳು ಇಲ್ಲಿ ಬಂದಾಗ ಪ್ರಾರಂಭವಾದದ್ದು. ಇಲ್ಲಿ ಹೊಳೆ ಬದಿಗೆ ಅಡ್ಡವಾಗಿ ಕಟ್ಟ ಕಟ್ಟಿ ಬೇಸಾಯಕ್ಕೆ ಅನುವು ಮಾಡಿರುವುದು ಅವರ ನಾಯಕತ್ವವೇ ಎಂಬ ಬಾಯ್ದೆರೆ ಹೇಳಿಕೆಗಳಿವೆ.
ಪಾದೂರು ಮತ್ತು ಸಾಂತೂರು ದೇವಾಲಯಗಳಿದ್ದ ಹಿಂದಿದ್ದ ನಿವೇಶನ ಪರಬಾರೆಯಾಗಿದೆ. ಈಗಿರುವ ಸ್ಥಳ ಅನಂತರ ಪಡೆದುಕೊಂಡದ್ದು, ಶಿರ್ವ ಕಟ್ಟಿಂಗೇರಿ, ಪಾದೂರು, ಕುತ್ಯಾರ್, ಸಾಂತೂರು ಸಭೆಗಳಲ್ಲಿ ನೂರಾರು ಎಕ್ರೆ ಸ್ಥಳವಿದೆ. ಪಾದೂರು, ಶಿರ್ವ, ಸಾಂತೂರು ಸಭೆಯ ವ್ಯಾಪ್ತಿಯಲ್ಲಿದ್ದ ಸುಮಾರು 20 ಎಕ್ರೆ ಸ್ಥಳ ಪೆಟ್ರೋಲಿಯಂ ಸಂಸ್ಥೆಗೆ ಮತ್ತು ಉಷ್ಣವಿದ್ಯುತ್ ಸ್ಥಾವರಕ್ಕೆ ಹೋಗಿದೆ. ಪಾದೂರಿನಲ್ಲಿ ಕ್ರೈಸ್ತರು ಮಿಶನ್‌ ಆಸ್ತಿಯಲ್ಲಿಲ್ಲ. ಶಿರ್ವ, ಕುತ್ಯಾರ್, ಸಾಂತೂರು ಕಡೆಗಳಲ್ಲಿ ಹಲವಾರು 158

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 159 ] ಎಕ್ರೆ ಸ್ಥಳ ಡಯಾಸಿಸ್ ಆಡಳಿತದಲ್ಲಿದ್ದರೂ ಹಲವಾರು ನಿವೇಶನಗಳು ಗೇಣಿದಾರರ/ ಬಾಡಿಗೆದಾರರ ಹತ್ತರ ಇದೆ. ಸಾಂತೂರಿನಲ್ಲಿ ಮಿಶನರಿಗಳು ಕಾಡನ್ನು ಕಡಿದು ಗದ್ದೆಯನ್ನಾಗಿ ಪರಿವರ್ತಿಸಿ ಕೃಷಿ ಮಾಡಿದ ನಿದರ್ಶನಗಳಿವೆ.

ಗುಡ್ಡೆ- ಚರ್ಚ್, ಶಾಲೆ, ಬೋಧಕರ ಮನೆಯ ನಿವೇಶನಗಳಲ್ಲದೆ 4 ಕುಟುಂಬಗಳು ಮಿಶನ್ ಆಸ್ತಿಯಲ್ಲಿ ವಸತಿ ಹೊಂದಿದ್ದಾರೆ.

ಉಡುಪಿಯಲ್ಲಿ ದೇವಾಲಯವಲ್ಲದೆ ಮಿಶನ್ ಬಂಗ್ಲೆ, ಕ್ರಿಶ್ಚನ್ ಹೈಸ್ಕೂಲು, ಮತ್ತು ಪದವಿ ಪೂರ್ವ ಕಾಲೇಜು, ಯು.ಬಿ.ಎಂ. ಸಿ. ಶಾಲೆ, ಬೋರ್ಡಿಂಗ್ ಹೋಮ್, ವೈ.ಎಂ.ಸಿ.ಎ. ಆಶಾನಿಲಯ, ಮಿಶನ್ ಆಸ್ಪತ್ರೆಗಳಿರುವ ನೂರಾರು ಎಕ್ರೆ ಸ್ಥಳವಲ್ಲದೆ, ಬೋರ್ಡಿಂಗ್ ಹೋಮ್‌ನ ಗದ್ದೆಗಳು, ಶಾಲೆ ಕಾಲೇಜಿನ ಬೃಹತ್ ಮೈದಾನಗಳಲ್ಲದೆ ಕ್ರೈಸ್ತರು ವಾಸಿಸುವ ನೂರಕ್ಕೂ ಹೆಚ್ಚು ಮನೆಗಳು, ಪರಬಾರೆಯಾಗಿರುವ ನಿವೇಶನಗಳು, ಮಾರಾಟ ಮಾಡಿರುವ ನಿವೇಶನಗಳು ಮಿಶನ್ ಆಸ್ತಿಯಾಗಿವೆ. ಪರ್ಕಳ, ಪೆರ್ಡೂರಿನಲ್ಲಿ ಮಿಶನ್ ಶಾಲೆ ಇದ್ದು, ಮಿಶನ್ ಆಸ್ತಿ ಇದೆ. ಚೌರಾದಲ್ಲಿಯೂ ಮಿಶನ್ ಆಸ್ತಿ ಇದೆ.

ಕುಂದಾಪುರ ಮತ್ತು ಬಸೂರಿನಲ್ಲಿ ದೇವಾಲಯ ಶಾಲೆಗಳಿದ್ದು ಹಲವಾರು ಕ್ರೈಸ್ತರ ಮನೆಗಳು ಮಿಶನ್ ಆಸ್ತಿಯಲ್ಲಿದ್ದೆ ಬಸ್ರೂರು ಶಾಲೆಯನ್ನು ಖಾಸಗಿಯವರು ನಡೆಸುತ್ತಿದ್ದಾರೆ.

ಕಲ್ಯಾಣಪುರ-ಮಂಗಳೂರು-ಕುಂದಾಪುರ ಹೈವೆಯಲ್ಲಿರುವ ಸಂತೆಕಟ್ಟೆಯಿಂದ ಎಡಕ್ಕೆ 1 1/2 ಕಿ.ಮಿ. ದೂರದಲ್ಲಿ 1856 ಸುಮಾರಿಗೆ ಕ್ರೈಸ್ತ ಸಭೆಯೊಂದು ಸ್ಥಾಪನೆಯಾಗಿತ್ತು. ಸಣ್ಣ ದೇವಾಲಯ ಹಾಗೂ ಶಾಲೆ ಕಾರ್ಯ ವೆಸಗುತ್ತಿತ್ತು. 1925ರಲ್ಲಿ ದೇವಾಲಯ ನಿರ್ಮಿಸಲಾಗಿತ್ತು. 1962ರಲ್ಲಿ ಶಾಲೆ ಮುಚ್ಚಲ್ಪಟ್ಟರೂ 1986ರತನಕ ಇಲ್ಲಿ ಆರಾಧನೆ ನಡೆಸಲಾಗುತ್ತಿತ್ತು. ಬ್ರಹ್ಮಾವರ, ಪೇತ್ರಿ ಕಡೆಗಳಿಂದ ಕ್ರೈಸ್ತರು ಇಲ್ಲಿ ಆರಾಧನೆಗೆ ಸೇರಿ ಬರುತ್ತಿದ್ದರು. ಪ್ರಸ್ತುತ ಅಲ್ಲಿ 53 ಸೆಂಟ್ಸ್ ಗೋರಿಯ ಸ್ಥಳ ಹಾಗೂ 50 ಸೆಂಟ್ಸ್ ಮಿಶನ್ ಸ್ಥಳವಿದೆ. ಒಂದು ಕುಟುಂಬವು ಅದರಲ್ಲಿ ವಾಸವಿದೆ.

ಅಂಬಾಡಿ- ಈ ಸಭೆ ಸ್ಥಾಪನೆಯಾದ ಮೂಲ ಸ್ಥಳ ಪರಬಾರೆಯಾಗಿದೆ. ಪ್ರಸ್ತುತವಿರುವ ಸ್ಥಳದಲ್ಲಿ ಶಾಲೆ ಇತ್ತು. 2ಎಕ್ರೆ ಸ್ಥಳವಿತ್ತು. ಪ್ರಸ್ತುತ ಸಭೆಗೆ ಒಂದು ಎಕ್ರೆ ಸ್ಥಳ ಮಾತ್ರ ಇದ್ದು ಉಳಿದವುಗಳಲ್ಲಿ ಬಾಡಿಗೆಗಿದ್ದ ಕ್ರೈಸ್ತರು ಸುಮಾರು 4 ಕುಟುಂಬಗಳು ವಾಸ ಮಾಡುತ್ತಿದ್ದಾರೆ.

ಮಲ್ಪೆಯಲ್ಲಿ ದೇವಾಲಯ, ಶಾಲೆ ನಿವೇಶನ ಬಿಟ್ಟರೆ ಬೇರೆ ಆಸ್ತಿ ಇಲ್ಲ. ಹಂಚಿನ ಕಾರ್ಖಾನೆ ಕೋಮನ್‌ವೆಲ್ತ್ ಪಾಲಾಗಿದ್ದು ಅದನ್ನು ಅವರು ಪರಬಾರೆ ಮಾಡಿದ್ದಾರೆ.

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 159 [ 160 ] ಶಾಲೆಯ ಜತೆಗೆ ಡೇ ಕೇರ್ ಸೆಂಟರ್ ಒಂದು ಕಾರ್ಯ ನಿರ್ವಹಿಸುತ್ತದೆ.

ಉದ್ಯಾವರ:- ಉಡುಪಿ ತಾಲೂಕಿನಲ್ಲಿರುವ ಉದ್ಯಾವರದಲ್ಲಿ ಶಾಲೆ ಮತ್ತು ದೇವಾಲಯ ಒಂದೇ ಕಟ್ಟಡದಲ್ಲಿದ್ದು ಸಭಾಪಾಲಕರ ಮನೆ ಹಾಗೂ ಒಂದು ಸಣ್ಣ ವಾಣಿಜ್ಯ ಸಂಕೀರ್ಣವಿರುವ ನಿವೇಶವಿದೆ. ಮಿಶನ್ ಅಸ್ತಿಯಲ್ಲಿ ಮನೆಗಳಿಲ್ಲ.
ಸರಕಾರದ

ಮಂಗಳೂರಿನ 4 ಸಭೆಗಳ ಹೆಚ್ಚಿನ ಕ್ರೈಸ್ತರು ಮಿಶನ್‌ ಆಸ್ತಿಯಲ್ಲಿಯೇ ವಾಸ ಮಾಡುತ್ತಿದ್ದರೂ ಸರಕಾರದ ಉಳುವವನೇ ಹೊಲದೊಡೆಯ ಕಾನೂನು/ಡಿಕ್ಲರೇಶನ್/ ಒತ್ತುವರಿ/ ಅಕ್ರಮ ಸಕ್ರಮ ದೇಶೀಯ ನಾಯಕತ್ವ/ ಸರ್ವಿಸ್ ಕ್ವಾಟರ್ಸ್ ಬಿಡದೇ ಇದ್ದದ್ದು ಸೇವೆಯಲ್ಲಿದ್ದವರು ಕೃಷಿಕರಲ್ಲದವರೂ ಡಿಕ್ಲರೇಶನ್ ಹಾಕಿದ್ದು ಕೃಷಿಕರಲ್ಲದವರು ಡಿಕ್ಲರೇಶನ್ ಹಾಕಿದಾಗ ಕಾನೂನು ಪ್ರಕಾರ ತಿರಸ್ಕೃತಗೊಂಡರೂ ಮಿಶನ್ ಸುಮ್ಮನೆ ತಟಸ್ಥವಾದದ್ದು ಮತ್ತಿತರ ಕಾರಣಗಳಿಂದ ಮಿಶನರಿಗಳು ಮಾಡಿದ ನೂರಾರು ಎಕ್ರೆ ಸ್ಥಳಗಳು ಪರಾಭಾರೆಯಾಗಿವೆ.

160 ಈ ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 161 ]ಬಾಸೆಲ್ ಮಿಶನ್‌ನ ಸ್ವದೇಶಾಭಿಮಾನ

1834ರಲ್ಲಿ ಭಾರತ ದೇಶಕ್ಕೆ ಬಂದು ಸಾಹಿತ್ಯ ಸಂಸ್ಕೃತಿ, ಕೈಗಾರಿಕೆಗೆ, ವಿದ್ಯೆ ಮುಂತಾದ ಕ್ಷೇತ್ರಗಳಲ್ಲಿ ಮಾಡಿದ ಮಹತ್ತರವಾದ ಸೇವೆಯನ್ನು ನಾವೆಂದೂ ಮರೆಯುವಂತಿಲ್ಲ. ತುಳು, ಕನ್ನಡ, ಮಲಯಾಳಂ, ಮುಂತಾದ ಭಾಷೆಗಳಾಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅಪಾರ. ಅವರು ಸ್ಥಾಪಿಸಿದ ಕ್ರೈಸ್ತ ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸುವಾಗ ದೇಶಕ್ಕಾಗಿ, ನಮ್ಮನಾಳುವ ನಾಯಕರಿಗಾಗಿ ಪ್ರಾರ್ಥನೆಗಳನ್ನು ಮಾಡುವ ಕ್ರಮಗಳನ್ನು ರೂಡಿಗೆ ತಂದಿದೆ. ಈಗಲೂ ಈ ಕ್ರಮ ಕ್ರೈಸ್ತ ದೇವಾಲಯಗಳಲ್ಲಿದೆ. ದೇಶಾಭಿಮಾನ, ಕನ್ನಡ ಮತ್ತು ತುಳುವಿನಲ್ಲಿ ದೇಶಕ್ಕಾಗಿ ಪ್ರಾರ್ಥನೆ, 1947ರಲ್ಲಿ ಪ್ರಕಟಗೊಂಡ ಸ್ವಾತಂತ್ರ್ಯ ದಿನದ ಸಂದೇಶ - ಇವುಗಳೆಲ್ಲ ಬಾಸೆಲ್ ಮಿಶನ್ ಪ್ರೆಸ್ನಲ್ಲಿ ಪ್ರಕಟಗೊಂಡದ್ದು. 1907ರಲ್ಲಿ ಫೆಡರಿಕ್ ಜತ್ತನ್ನರವರು ಬರೆದ 'ಸ್ವದೇಶಾಭಿಮಾನ” ಎಂಬ ಪುಸ್ತಕದಲ್ಲಿ ಕೆಲವು ಸಾಲುಗಳು

“ಹಿಂದೂ ಜನರೊಳಗೆ ಇತ್ತಲಾಗೆ ಸ್ವದೇಶಾಭಿಮಾನದ ಆಸಕ್ತಿ ಎಂಬ ಬೆಂಕಿ ವಿಸ್ತರಿಸುತ್ತಾ ಬರುತ್ತದೆ. ಆದರೆ ನಿಜ ಸ್ವದೇಶಾಭಿಮಾನವೆ ದೇಶಕ್ಕೆ ಪ್ರಯೋಜನವನ್ನುಂಟುಮಾಡುವದು.

ಸರ್ವ ಜನರಲ್ಲಿ ಕಾಣುವ ಸ್ವದೇಶಾಭಿಮಾನದ ಬಲ- ಸ್ವಂತ ಮನೆ, ಊರು ಹ್ಯಾಗೋ ಹಾಗೆಯೇ ಸ್ವದೇಶವು ಜನರಿಗೆ ಬಹು ಪ್ರಿಯವಾಗಿರುವುದು. ವಿಷುವದ್ರೇಖೆಯಲ್ಲಿಯೇ ಹಾದು ಹೋಗುವ ಕಡು ಶೆಖೆಯುಳ್ಳ ಮರುಭೂಮಿಯಂಥಾ ಸ್ಥಳದಲ್ಲಿ ವಾಸಿಸುವ ನಿಗೋ ಮನುಷ್ಯನಾದರೂ ಕಡು ಶಕೆಯನ್ನು ಅನುಭವಿಸಿ, ಬಿಸಲಿನ ವೆಟ್ಟು ತಾಳಿ ಉಷ್ಣ ಪ್ರದೇಶದ ಉತ್ತಮವಾದ ಹಣ್ಣುಗಳನ್ನು ತಿಂದು ಬಂಗಾರಮಯವಾದ ಸರೋವರದ ತಿಳಿ ನೀರು ಕುಡಿದು, ಎಳೆ ನೀರಿನಿಂದ ಬಾಯಾರಿಕೆಯನ್ನು ತಣಿಸಿ, ತಂಗಾಳಿ ಬೀಸುವ ಚಲೋ ಆಲ ಅಶೋಕ ಮರಗಳ ನೆರಳಿನಲ್ಲಿ ವಿಶ್ರಮಿಸಿ, ಚಿಗುರಿದ ಎಲೆಗಳಿಂದ ಮಾಡಿದ ಚಲೋ ಪರ್ಣಶಾಲೆಯಲ್ಲಿ ಸೊಂಪು ನಿದ್ದೆಗೈದು, ಅದರಲ್ಲಿಯೇ ಸಂತೃಪ್ತನಾಗಿ, ತನ್ನ ದೇಶವೇ ಅತ್ಯುತ್ತಮ ದೇಶವೆಂತ ವಾದಿಸಿ ಪದಗಳನ್ನು ಕಟ್ಟ, ಇತರರನ್ನೂ ಇತರರ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 161 [ 162 ] ದೇಶಗಳನ್ನು ತುಚ್ಚಕರಿಸುವನು. ಅದೇ ರೀತಿಯಲ್ಲಿ ಉತ್ತರ ಧ್ರುವದತ್ತಲಾಗೆ ಅತಿ ವಿಶಾಲವಾದ ಹಿಮದ ಬೈಲಾಗಿರುವ ಗೀನ್‌ ಲ್ಯಾಂಡಿನಲ್ಲಿ ವಸ್ತಿಯಾಗಿದ್ದ ಎಸ್ಕಿಮೋ ಮನುಷ್ಯನು ಕಡು ಚಳಿಯ ತೀಕ್ಷ್ಯತೆಯನ್ನು ತಾಳಕೂಡದೆ ಅದರ ಪೆಟ್ಟನ್ನು ನಿವಾರಿಸಿಕೊಳ್ಳುವುದಕ್ಕಾಗಿ ಹಿಮದ ಕಲ್ಲಿನಿಂದಲೇ ಭೂಮಂಡಲಾಕರದ ಒಂದು ಗುಮಟವನ್ನು ನಿರ್ಮಿಸಿ, ಭೂಮಿಯ ಅಡಿಯಲ್ಲಿಯೇ ಬಿಲದೋಪಾದಿ ಮಾರ್ಗವನ್ನು ಉಂಟುಮಾಡಿ, ಹೆಗ್ಗಣದಂತ ಜೀವನವನ್ನು ಕಳೆಯುತ್ತಾ, ಮೀನು ಮೃಗಗಳ ಬೇಟೆಯಾಡಿ ಅದನ್ನು ಭಕ್ಷಿಸುತ್ತಾ ಅದರ ಚರ್ಮದ ದುಸ್ತುಗಳನ್ನು ಉಡುತ್ತಾ ಇರುವವನಾಗಿ ಇದ್ದರೂ, ಸುಧಾರಣೆ ಹೊಂದಿದ ಯುರೋಪದವರ ಜೀವನಕ್ಕಿಂತ ತನ್ನ ಜೀವನವೇ ಸೌಖ್ಯ, ತನ್ನ ಹಿಮ ಪ್ರದೇಶವೇ ಸ್ವರ್ಗ, ಅದನ್ನು ಬಿಡುವದು ಹುಚ್ಚುತನ ಅನ್ನುವನು. ಅದೇ ರೀತಿಯಲ್ಲಿ ಆಯಾ ಜನಾಂಗದವರು ತಮ್ಮ ತಮ್ಮ ದೇಶವನ್ನು ಕುರಿತು ದೊಡ್ಡ ದೊಡ್ಡ ಭಾವನೆಯುಳ್ಳವರಾಗಿರುವರು. ಹೀಗೆ ದೇಶಾಭಿಮಾನವಿಲ್ಲದ ಜನಾಂಗವು ಭೂಲೋಕದಲ್ಲಿ ಒಂದೂ ಇಲ್ಲ.

1965- ದೇವಾರಾಧನೆ ಪದ್ಧತಿ, ಕ್ರೈಸ್ತ ದೇವಾಲಯಗಳಲ್ಲಿ ದೇಶಕ್ಕಾಗಿ ಮಾಡುವ ಪ್ರಾರ್ಥನೆ

ಅತ್ಯಂತ ಕೃಪೆಯುಳ್ಳ ದೇವರೇ, ಒಡೆಯರ ಒಡೆಯನೇ, ನಮ್ಮ ಮೇಲೆ ದೊರೆತನ ನಡಿಸುವ ಅಧಿಕಾರಿಗಳನ್ನು ನಿನ್ನ ಪರಾಂಬರಿಕೆ ಕರುಣೆಗಳಿಗೆ ಒಪ್ಪಿಸಿಕೊಡುತ್ತೇವೆ. ನಮ್ಮ ರಾಷ್ಟ್ರಪತಿಯನ್ನು ಕಾಪಾಡಿ ನಡಿಸು. ಅಧಿಕಾರದಲ್ಲಿರುವವರೆಲ್ಲರಿಗೆ ಜ್ಞಾನವಿವೇಕಗಳನ್ನು ದಯಪಾಲಿಸಿ, ಅವರು ಪಕ್ಷಪಾತವಿಲ್ಲದೆ ನೀತಿನ್ಯಾಯದಿಂದ ನಮ್ಮನ್ನು ಆಳುವಂತೆ ಅನುಗ್ರಹಿಸು. ನಮ್ಮ ಈ ಭರತಖಂಡವನ್ನೂ ಇದರ ಎಲ್ಲಾ ನಿವಾಸಿಗಳನ್ನು ಆಶೀರ್ವದಿಸು. ಪರೋಪಕಾರ ಪ್ರಾಮಾಣಿಕತೆಗಳೂ ನೀತಿ ಸಮಾಧಾನಗಳೂ ನಮ್ಮಲ್ಲಿ ನೆಲೆಗೊಳ್ಳುವಂತೆ ದಯತೋರು ಎಂಬದಾಗಿ ಬಿನ್ನವಿಸುತ್ತೇವೆ.

1897, ದೇವಾರಾಧನೆದ ಕ್ರಮ ತುಳು ಭಾಷೆಯಲ್ಲಿ ಸರಕಾರಕ್ಕಾಗಿ ಪ್ರಾರ್ಥನೆ ಸರ್ವತ್ರಾಣದ ನಿತ್ಯ ದೇವರೇ. ಅರಸುಳೆನವು ಅಧಿಕಾರದಾಕುಳೆನವು ಹೃದಯ ನಿನ ಕೈಟ್ ಉಂಡು ಅಂದ್‌ದ್ಗಾ, ಈ ಅವೆನ್ ನೀರ್‌ದ ತೋಡುಳೆ ಲೆಕ್ಕನೆ ತಿ‌ಂಗಾದ್‌ ನಡಪಾವ ಅಂದ್‌ ನಿನ ಪರಿಶುದ್ಧ ವಾಕ್ಕೊಡ್ಡು ಪಿದುಕೊಣುದ, ಅಂಚಾಯಿನೆಡ್ ನಿನ ಸೇವಕೆ ಆಯ್ಕೆ ಎಂಕುಳೆ ಕೈಸರ ಹೃದಯೊನುಲಾ ಈ ದೇಶೂನು ಅಳು ಮಾತಾ ಅಧಿಕಾರದಾಕುಳೆ ಹೃದಯೊನುಲಾ ಈಯೇ ನಡಪುಡುದು ಆಟೊಡು ಅಂದ್‌ ತಗ್ಗದ ಮನಸ್‌ಡ್ ನಟ್ಟೋಣುವ, ಆಕುಳು


162 ತುಳುನಾಡಿನಲ್ಲಿ ಬಾಸೆಲ್ ಮಿಶನ್‌ ಮತ್ತಿತರ ಲೇಖನಗಳು... [ 163 ] ತನುಕುಳೆ ಮಾತ ಆಲೋಚನೆ ಪಾತೆರ ಕೆಲಸೊಳೆಡ್ ಯೇಪಲಾ ನಿನ ಪುದರ್‌ದ ಮಾನೊನು ಗಣ್ಯೊಡು ದೀವೊಣ್ಣು ತನುಕುಳೆಗೆ ವೊಚ್ಚಿದ್ ಕೊರ್ತಿ ನಿನ ಪ್ರಜೆಕ್ಕುಳೆ ಸುಖ ಸಮಾಧಾನೊಗು ಬೋಡಾದ್ ಸತ್ಯ ಭಕ್ತಿಡ್ ಚಿಂತೆ ಮಳ್ಪು ಲೆಕ್ಕ ಆಕುಳೆಗ್ ಬುದ್ಧಿ ಕೊರ್ಲ .

ದೇಶಕ್ಕಾಗಿ ಪ್ರಾರ್ಥನೆ: ಬಾಸೆಲ್ ಮಿಶನರಿಗಳು ತಮ್ಮ ಕ್ರೈಸ್ತ ದೇವಾಲಯಗಳಲ್ಲಿ ಉಪಯೋಗಿಸಲು 1841ರಲ್ಲಿ 50 ಸಂಗೀತಗಳೊಂದಿಗೆ ಮುದ್ರಿಸಲು ಪ್ರಾರಂಭಿಸಿದ ಸಂಗೀತ ಪುಸ್ತಕವು 1913ರವರೆಗೆ ಮರು ಮುದ್ರಣಗೊಂಡು ಪರಿಷ್ಕೃತಗೊಂಡು ಪ್ರಸ್ತುತ 410 ಕನ್ನಡ ಗೀತೆಗಳು ಇದರಲ್ಲಿವೆ. 1913 ರಿಂದ 1950 ತನಕ ಅದು ಮರುಮುದ್ರಣಗೊಳ್ಳುತ್ತಿತ್ತೇ ವಿನಹ ಪರಿಷ್ಕೃತಗೊಂಡಿಲ್ಲ. ಆದರೆ 1950ರ ಆವೃತ್ತಿಯಲ್ಲಿ ಒಂದು ಸಂಗೀತ ಮಾತ್ರ ಪರಿಷ್ಕೃತಗೊಂಡಿದೆ. ಈ ಸಂಗೀತದ ಶಿರೋನಾಮೆ ರಾಷ್ಟ್ರ ಸಂಗೀತ. 1947ರ ತನಕ ರಾಜರ ಆಡಳಿತದಲ್ಲಿದ್ದ ಭಾರತದ ಆಡಳಿತದಲ್ಲಿರುವವರಿಗೆ ದೇವರಿಗೆ ಸಲ್ಲಿಸುವ ಪ್ರಾರ್ಥನೆಗಾಗಿ ಹಾಡಲು ಸಿದ್ಧಪಡಿಸಿದ ಹಾಡು ಹಾಗೂ ಭಾರತ ದೇಶವು ಸ್ವಾತಂತ್ರ್ಯ ಪಡೆದ ನಂತರ ಹಾಡಲು ಸಿದ್ಧಪಡಿಸಿದ ಹಾಡು- ಇದರ ಬಗ್ಗೆ ತಿಳಿದುಕೊಳ್ಳುವುದೇ ಈ ಲೇಖನ.

1933ರ ಆವೃತ್ತಿ

1.

 ತಂದೆ ನಿನ್ನ ಆಶೀರ್ವಾದ ಚಕ್ರವರ್ತಿಗಾಗಲಿ
ಆತನಿಂದ ನಿನ್ನ ಶ್ರೇಷ್ಠ ಚಿತ್ರ ನೆರವೇರಲಿ
ನಿನ್ನ ಸಭಾ ರಕ್ಷಣೆ, ಶತ್ರು ಸೇನಾ ಶಿಕ್ಷಣೆ
ಆಗುವಂತೆ ದಯಮಾಡು, ಚಕ್ರವರ್ತಿಗಾಶೀರ್ವಾದ !

2.

 ಸದ್ವಿಶ್ವಾಸವೇ ಗುರಾಣಿ ಖಡ್ಗ ನಿನ್ನ ಆತ್ಮವೇ
ನ್ಯಾಯ, ನೀತಿ, ಶಾಂತಿ, ಪ್ರೀತರಿ ಇವು ರಾಜ ಭೂಷಣೆ,
ರಾಜ್ಯ ಕಾರ್ಯ ಸಿದ್ಧಿಯು, ದೇಶದೋಳ್ ಸಮೃದ್ಧಿಯು
ಇವನ್ನೆಲ್ಲಾ ದಯಮಾಡು ಚಕ್ರವರ್ತಿಗಾಶೀರ್ವಾದ !

3.<poem> ಜ್ಞಾನವುಳ್ಳ ಮಂತ್ರಿಸಭೆ, ಜಯಶಾಲಿ ಸೈನ್ಯವು ನಂಬಿಗಸ್ತ್ರ ಪರಿಚಾರ, ರಾಜ ನಿಷ್ಠಾ ಪ್ರಜೆಯು

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 163 [ 164 ] ರಾಜ್ಯದಲ್ಲಿ ಭದ್ರತೆ, ಕ್ಷೇಮ ರಾಜ ರಾಣಿಗೆ ಇರುವಂತೆ ದಯಮಾಡು ಚಕ್ರವರ್ತಿಗಾಶೀರ್ವಾದ !</poem>

4.

 ಕರ್ತಾ ನಮ್ಮ ರಾಜ್ಯದಲ್ಲಿ ನಿನ್ನ ರಾಜ್ಯ ಸ್ಥಾಪಿಸು
ರಾಜ ಪ್ರಜೆಯೆಲ್ಲರನ್ನು ಸ್ವರ್ಗವಾಸಕೈದಿಸು
ಸಿಕ್ಕಲಿ ಮನಶ್ಯಾಂತಿ ಅಲ್ಲಿ ನಿತ್ಯ ವಿಶ್ರಾಂತಿ
ಬೇಡಿದ್ದನ್ನು ದಯಮಾಡು ಚಕ್ರವರ್ತಿಗಾಶೀರ್ವಾದ !

1950ರ ಆವೃತ್ತಿ

1.

 ತಂದೆ ನಿನ್ನ ಆಶೀರ್ವಾದ ರಾಷ್ಟ್ರಪತಿಗಾಗಲಿ
ಆತನಿಂದ ನಿನ್ನ ಶ್ರೇಷ್ಠ ಚಿತ್ತ ನೆರವೇರಲಿ
ನಿನ್ನ ಸಭಾ ರಕ್ಷಣೆ, ಶತ್ರು ಸೇನಾ ಶಿಕ್ಷಣೆ
ಆಗುವಂತೆ ದಯಮಾಡು, ರಾಷ್ಟ್ರಪತಿಗಾಶೀರ್ವಾದ !

2.

ಸದ್ವಿಶ್ವಾಸವೇ ಗುರಾಣಿ ಖಡ್ಗ ನಿನ್ನ ಆತ್ಮವೇ
ನ್ಯಾಯ, ನೀತಿ, ಶಾಂತಿ, ಪ್ರೀತಿ ಇವು ರಾಜ ಭೂಷಣೆ,
ರಾಜ್ಯ ಕಾರ್ಯ ಸಿದ್ಧಿಯು, ದೇಶದೋಳ್ ಸಮೃದ್ಧಿಯು
ಇವನ್ನೆಲ್ಲಾ ದಯಮಾಡು ರಾಷ್ಟ್ರಪತಿಗಾಶೀರ್ವಾದ !

3.

 ಜ್ಞಾನವುಳ್ಳ ಮಂತ್ರಿಸಭೆ, ಜಯಶಾಲಿ ಸೈನ್ಯವು
ನಂಬಿಗಸ್ತ ಪರಿಚಾರ, ರಾಜ ನಿಷ್ಠಾ ಪ್ರಜೆಯು
ರಾಜ್ಯದಲ್ಲಿ ಭದ್ರತೆ, ಕ್ಷೇಮ ರಾಷ್ಟ್ರಪತಿಗೆ
ಇರುವಂತೆ ದಯಮಾಡು, ರಾಷ್ಟ್ರಪತಿಗಾಶೀರ್ವಾದ !

4.

 ಕರ್ತಾ ನಮ್ಮ ರಾಜ್ಯದಲ್ಲಿ ನಿನ್ನ ರಾಜ್ಯ ಸ್ಥಾಪಿಸು
ರಾಷ್ಟ್ರಪತಿ ಪ್ರಜೆಯನ್ನು ಸ್ವರ್ಗವಾಸಕೈದಿಸು
ಸಿಕ್ಕಲಿ ಮನಶ್ಯಾಂತಿ ಅಲ್ಲಿ ನಿತ್ಯ ವಿಶ್ರಾಂತಿ
ಬೇಡಿದ್ದನ್ನು ದಯಮಾಡು ರಾಷ್ಟ್ರಪತಿಗಾಶೀರ್ವಾದ!

ಈ ಸಂಗೀತವು 1913 ರ ಅವದಿಯಲ್ಲಿ ರಚಿಸಲ್ಪಟ್ಟಿದ್ದು ಜರ್ಮನ್

164 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 165 ] (Vater krone du mit Segen unsern Konig) ಭಾಷೆಯಿಂದ ತರ್ಜುಮೆಯಾದ ಸಂಗೀತವಾಗಿದೆ. ಇದನ್ನು ಕನ್ನಡ ಭಾಷೆಗೆ ತರ್ಜುಮೆ ಮಾಡಿದವರು ರೆವೆ. ಎಚ್. ರಿಷ್ (Rev. H. Risch) 1950ರಲ್ಲಿ ಪರಿಷ್ಕೃತಗೊಂಡ ಈ ಸಂಗೀತವು ಈಗಲೂ ಕ್ರೈಸ್ತ ದೇವಾಲಯಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ, ಹಾಗೂ ರಾಷ್ಟ್ರ ಹಬ್ಬಗಳನ್ನು ಅಚರಿಸುವಾಗ ಹಾಡಲಾಗುತ್ತದೆ.

ಈ ಸಂಗಿತವನ್ನು ಕನ್ನಡಕ್ಕೆ ಭಾಷಾಂತರಿಸಿದ ರೆವೆ. ಎಚ್, ರಿಪ್‌ರವರು 1863ರಲ್ಲಿ ಜನಿಸಿದವರು. 1888ರಲ್ಲಿ ಭಾರತಕ್ಕೆ ಆಗಮಿಸಿ ಬಾಸೆಲ್ ಮಿಶನ್ ಕೇಂದ್ರವಾಗಿದ್ದ ಉಡುಪಿ ಜಿಲ್ಲೆಯ ಬನ್ನೂರಿನಲ್ಲಿ ತಮ್ಮ ಮೊದಲ ಕಾರ್ಯಕ್ಷೇತ್ರದಲ್ಲಿದ್ದು 4 ಮೈಲು ದೂರದ ಕೈಲೈರಿ ಎಂಬ ಸ್ಥಳದಲ್ಲಿದ್ದುಕೊಂಡು ಸ್ಥಳೀಕ ಭಾಷೆಗಳನ್ನು ಕಲಿತು ಕಲ್ಯಾಣಪುರ, ಹೊನ್ನಾವರ, ಗದಗ, ಬೆಟಗೇರಿ, ಕೇಟಿ ಮುಂತಾದ ಸ್ಥಳಗಳಲ್ಲಿ ಕ್ರೈಸ್ತ ದೇವಾಲಯಗಳಲ್ಲಿ ಸೇವೆ ಸಲ್ಲಿಸಿದುದು ಮಾತ್ರವಲ್ಲದೆ 1908ರಲ್ಲಿ ಮಂಗಳೂರಿನ ಬಾಸೆಲ್ ಮಿಶನ್ ಕೇಂದ್ರದ ಅಧ್ಯಕ್ಷರಾಗಿ ಹಾಗೂ ಬಾಸೆಲ್ ಮಿಶನ್ ಸೆಮಿನೆರಿಯಲ್ಲಿ ಉಪನ್ಯಾಸಕರೂ ಆಗಿದ್ದರು. ಕನ್ನಡ ಸತ್ಯವೇದದ ಭಾಷಾಂತರ ಸಮಿತಿಯಲ್ಲಿ ಸೇವೆ ಸಲ್ಲಿಸಿದ ಇವರು 23 ಕ್ರೈಸ್ತ ಗೀತೆಗಳನ್ನೂ ಕನ್ನಡ ಗೀತೆಗಳನ್ನು ಬರೆದಿದ್ದಾರೆ. ಇವರು ಕನ್ನಡ ಭಾಷಾ ಪರಿಜ್ಞಾನವನ್ನು ಅರಿತವರಾಗಿದ್ದರು. 1914ರಲ್ಲಿ ನಡೆದ ಮಹಾಯುದ್ಧ ಸಂದರ್ಭದಲ್ಲಿ ಬಂಧಿಯಾಗಿ ಅಹಮದ್‌ನಗರದಲ್ಲಿ 3 ತಿಂಗಳುಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ಇವರು ತಮ್ಮ ಸ್ವದೇಶಕ್ಕೆ ತೆರಳಿದರು. ಮಿಶನರಿಗಳ ಕಾರ್ಯ ಮತ್ತೆ ಆರಂಭವಾದಗ ಭಾರತಕ್ಕೆ ಬಂದ ರಿಪ್‌ರವರು ಧಾರವಾಡ ಸಭೆ, ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾಗಲೇ 16-7- 1928ರಲ್ಲಿ ನಿಧನ ಹೊಂದಿದರು.

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 165 [ 166 ]{{gap}]ಕರಾವಳಿಯ ಕ್ರೈಸ್ತರ ಆರಾಧನೆಗಳಲ್ಲಿ ಸಾಂಸ್ಕೃತಿಕ ಪಲ್ಲಟ

ಕ್ರೈಸ್ತ ಧರ್ಮಕ್ಕೆ 2 ಸಾವಿರ ವರ್ಷಕ್ಕಿಂತಲೂ ಮಿಕ್ಕಿದ ಇತಿಹಾಸ. ಕರಾವಳಿ ಜಿಲ್ಲೆಯಲ್ಲಿರುವ ಕ್ರೈಸ್ತರಲ್ಲಿ ಎರಡು ವಿಭಾಗ ಮೊದಲನೆಯದು ಕೆಥೋಲಿಕ್ ಕ್ರೈಸ್ತರು ಎರಡನೆಯದು ಪ್ರೊಟೆಸ್ಟಂಟ್ ಕ್ರೈಸ್ತರು. ಕೆಥೋಲಿಕರ ಮಾತೃ ಭಾಷೆ ಕೊಂಕಣಿ ಯಾದರೂ ಕನ್ನಡ ತುಳು ಅವರ ವ್ಯವಹಾರಿಕ ಭಾಷೆಯೂ ಆಗಿದೆ. ಪ್ರೊಟೆಸ್ಟಂಟ್ ಕ್ರೈಸ್ತರ ಮಾತೃ ಭಾಷೆ ತುಳು ಕನ್ನಡ ವ್ಯವಹಾರಿಕ ಭಾಷೆಯಾಗಿದೆ.

ಕೆಥೋಲಿಕ್ ಮತ್ತು ಪ್ರೊಟೆಸ್ಟಂಟ್ ಆರಾಧನೆಗಳಲ್ಲಿ ಹೆಚ್ಚು ಮಹತ್ವವಾದದ್ದು 1) ಸತ್ಯವೇದ 2) ಪ್ರಾರ್ಥನೆ 3) ಸಂಗೀತ, ಕೆಥೋಲಿಕ ಕ್ರೈಸ್ತರಲ್ಲಿ ಮೊದಲಿಗೆ ಸತ್ಯವೇದ, ಪ್ರಾರ್ಥನೆ, ಸಂಗೀತ ಇವುಗಳು ಲ್ಯಾಟಿನ್ ಭಾಷೆಗಳಲ್ಲಿಯೇ ಇತ್ತು ಧರ್ಮಗುರುಗಳು ಓದಿ ಕೊಂಕಣಿ ಕನ್ನಡ, ಅಥವಾ ತುಳು ಭಾಷೆಯಲ್ಲಿ ವಿವರಿಸಬೇಕಿತ್ತು. ಇಡೀ ಬೈಬಲ್ ಧರ್ಮಗುರುಗಳು ಮಾತ್ರ ಅಧ್ಯಯನ ಮಾಡಿ ಬೋಧನೆ ಮಾಡಬೇಕಿತ್ತು. ಕೊಂಕಣಿ ಭಾಷೆಗೆ ಬೈಬಲ್ 1858ರಲ್ಲಿ ಭಾಷಾಂತರವಾದಾಗ ಹೊಸ ಒಡಂಬಡಿಕೆಯ 4 ಸುವಾರ್ತೆಗಳು ಮಾತ್ರ ಅವರಲ್ಲಿ ಬಳಕೆಯಲ್ಲಿತ್ತು. ಆದರೆ ಈಗ ಇಡೀ ಬೈಬಲ್ ಕೊಂಕಣಿಗೆ ಭಾಷಾಂತರವಾಗಿದ್ದು ಎಲ್ಲರೂ ಬಳಸುವಂತಾಗಿದೆ. ಇಂಗ್ಲಿಷ್, ಕನ್ನಡ, ತುಳು ಭಾಷೆಯ ಬೈಬಲ್ ಸಹಾ ಬಳಕೆಯಲ್ಲಿದೆ.

ಆರಾಧನೆಗಳಲ್ಲಿ ಪ್ರಾರ್ಥನೆಗಳು ಹಿಂದೆ ಹೆಚ್ಚು ಲ್ಯಾಟಿನ್ ಭಾಷೆಯಲ್ಲಿತ್ತು. ಧರ್ಮಗುರು ಹೇಳುವ ಪ್ರಾರ್ಥನೆಗಳು, ಮಣಿಸರ ಹಿಡುಕೊಂಡು ಬಾಯಿ ಪಾಠವಾಗಿ ಮಾಡುವ ಪ್ರಾರ್ಥನೆ ಲ್ಯಾಟಿನ್‌ನಲ್ಲಿತ್ತು. ಈಗ ಕೊಂಕಣಿ ಪ್ರಾರ್ಥನಾ ಪುಸ್ತಕಗಳು ಬಳಕೆಯಲ್ಲಿದೆ. ಮಕ್ಕಳಿಗೆ ಕ್ರೈಸ್ತ ಶಿಕ್ಷಣವು ಮೊದಲಿಗೆ ಹಲವು ಭಾಗಗಳಲ್ಲಿ ತುಳು ಬಳಕೆಯಲ್ಲಿತ್ತು. ಈಗ ಕೊಂಕಣಿಯಲ್ಲಿವೆ.

ಹಾಡುವ ಹಾಡುಗಳು ಹೆಚ್ಚಿನವು ಲ್ಯಾಟಿನ್ ಭಾಷೆಯಲ್ಲಿತ್ತು. ಆನಂತರದ ವರ್ಷಗಳಲ್ಲಿ ಕೊಂಕಣಿ ಹಾಡುಗಳು ಬಂದವು. ಇವುಗಳೆಲ್ಲವು ವಿದೇಶಿ ಸ್ವರಗಳಲ್ಲಿ ರಚಿತವಾದ ಹಾಡುಗಳು. ಹಲವು ವರ್ಷಗಳಿಗೊಮ್ಮೆ ಹೊಸ ಹೊಸ ಹಾಡುಗಳು

166 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು. [ 167 ] ಸೇರ್ಪಡೆಯಾಗುತ್ತಾ ಬರುತ್ತಿದೆ. ಇತ್ತೀಚೆಗೆ ಕನ್ನಡ ತುಳು ಇಂಗ್ಲಿಷ್ ಭಾಷೆಯ ದೇಶೀಯ ಸ್ವರಗಳ ಸಂಗೀತಗಳು ಬಳಕೆಯಾಗುತ್ತವೆ. ಒಮ್ಮೊಮ್ಮೆ ಧರ್ಮಗುರುಗಳು ಲ್ಯಾಟಿನ್ ಭಾಷೆಯಲ್ಲಿ ಪ್ರಾರ್ಥನೆ ಮಾಡುವುದಿದೆ. ಪ್ರಾಯಸ್ಥರಿದ್ದಲ್ಲಿ ಲ್ಯಾಟಿನ್ ಹಾಡುಗಳನ್ನೂ ಹಾಡುತ್ತಾರೆ.

ಪ್ರೊಟೆಸ್ಟಂಟ್ ಕ್ರೈಸ್ತರಲ್ಲಿ ಮೊದಲು ಭಾಷಾಂತರವಾದದ್ದು ತುಳು ಸತ್ಯವೇದ. ಇದೇ ಬಳಕೆಯಲ್ಲಿತ್ತು. ತುಳುವಿನಲ್ಲಿ ಬೈಬಲ್ ಪಠಣ ಬೋಧನೆ, ಸಂಗೀತ ಪ್ರಾರ್ಥನೆ ಎಲ್ಲವೂ ತುಳುವಿನಲ್ಲಿತ್ತು. ಸಭಾ ಮೀಟಿಂಗ್‌ಗಳೂ ಸಹಾ ತುಳುವಿನನಲ್ಲಿ ಬರೆಯಲಾಗುತ್ತಿತ್ತು. ಈಗ ತುಳು ಸ್ವಲ್ಪ ಹಿಂದೆ ಹೋಗಿ ಕನ್ನಡ ಬಳಕೆ ಹೆಚ್ಚಾಗಿದೆ ಪ್ರಸ್ತತ ದ.ಕ. ಉಡುಪಿ, ಕೊಡಗು, ಮುಂಬಯಿ ಆರಾಧನೆಗಳಲ್ಲಿ 2 ತುಳು ಸಂಗೀತವಾದರೂ ಹಾಡುತ್ತಾರೆ. ಒಮ್ಮೆಮ್ಮೆ ತುಳುವಿನಲ್ಲಿ ತುಳು ಪ್ರವಚನ ಕೊಡುವ ರೂಢಿಯಿದೆ.

ಸತ್ಯವೇದ 1824ರಿಂದ ಕನ್ನಡಕ್ಕೆ ಭಾಷಾಂತರಗೊಂಡು ಪರಿಷ್ಕೃತಗೊಂಡು ಈಗ ಬಳಕೆಯಲ್ಲಿದೆ. 1841ರಿಂದ ತುಳುವಿಗೆ ಬೈಬಲ್ ಭಾಷಾಂತರವಾಗತೊಡಗಿದೆ. 1847ರಲ್ಲಿ ಇಡೀ ಹೊಸ ಒಡಂಬಡಿಕೆ ತುಳುವಿಗೆ ಭಾಷಾಂತರವಾಗಿದ್ದು ಹಳೆ ಒಡಂಬಡಿಕೆಯ 5 ಪುಸ್ತಕಗಳು ಮಾತ್ರ ಭಾಷಾಂತರವಾಗಿದೆ. ಪ್ರಸ್ತುತ ಪ್ರೊಟೆಸ್ಟಂಟ್ ಕ್ರೈಸ್ತರ ಆರಾಧನೆಗಳು ಕನ್ನಡದಲ್ಲಿಯೇ ನಡೆಯುತ್ತಿರುವುದರಿಂದ ಕನ್ನಡ ಬೈಬಲ್ ಬಳಕೆಯಲ್ಲಿದೆ. ಆದರೂ 1847ರಲ್ಲಿ ಪ್ರಕಟಗೊಂಡ ತುಳು ಹೊಸ ಒಡಂಬಡಿಕೆ ಈಗಲೂ ಬಳಕೆಯಲ್ಲಿದೆ. ಕಳೆದೆರಡು ವರ್ಷಗಳಿಂದ ತುಳು ಭಾಷೆಯ ಬೈಬಲ್ ಹೊಸತಾಗಿ ಭಾಷಾಂತರವಾಗುತ್ತಿದೆ.

ಸಂಗೀತ ಪುಸ್ತಕವು ಕನ್ನಡ ಮತ್ತು ತುಳುವಿನಲ್ಲಿದ್ದು 1841ರಿಂದ ಪ್ರಕಟಗೊಳ್ಳಲು ಪ್ರಾರಂಭವಾಗಿ 1913 ತನಕ ಪರಿಷ್ಕೃತ ಕೃತಿಗಳು ಬಂದು ಕನ್ನಡದಲ್ಲಿ 410 ತುಳುವಿನಲ್ಲಿ 251 ಹಾಡುಗಳು ಇವೆ. (ಕನ್ನಡ ತುಳು ಭಾಷೆಯ ಹಾಡುಗಳು ಹಲವಾರು ಪರಿಷ್ಕರಣಗೊಂಡಿದೆ. ಇವುಗಳು ಎಲ್ಲವೂ ಜರ್ಮನ್ ದಾಟಿಯಲ್ಲಿದ್ದು ಹೆಚ್ಚಿನವು ಜರ್ಮನ್ ಭಾಷೆಯಿಂದ ವಿದೇಶಿಯರಿಂದ ಮತ್ತು ದೇಶೀಯರಿಂದ ತರ್ಜುಮೆಗೊಂಡವು. ಈಗ 1913 ಕೃತಿಯೇ ಬಳಕೆಯಲ್ಲಿದೆ. ತುಳುನಾಡಿನಲ್ಲಿ ಆರಾಧನೆಗಳಲ್ಲಿ ವಿದೇಶಿ ಸ್ವರಗಳ ಹಾಡನ್ನೇ ಹಾಡಲಾಗುತ್ತಿತ್ತು. ಆದರೆ ಈಗ ಕನ್ನಡ ತುಳು ಭಾಷೆಯ ದೇಶೀಯ ಹಾಡುಗಳು ಬಳಕೆಯಲ್ಲಿದ್ದು ಆರಾಧನೆಗಳಲ್ಲದ ಸಂಧರ್ಭಗಳಲ್ಲಿ ಹಾಡಲ್ಪಡುತ್ತದೆ. ತುಳುನಾಡಿನಾದ್ಯಂತ ತುಳುವಿನಲ್ಲಿ ಪ್ರಾರ್ಥನಾ ವಿಧಿವಿಧಾನಗಳ ಪುಸ್ತಕವಿದ್ದು ಇದನ್ನೇ ಬಳಸಲಾಗುತ್ತಿತ್ತು. ಜನನ, ಮದುವೆ, ಮರಣ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 167 [ 168 ] ಮುಂತಾದ ಎಲ್ಲಾ ವಿಧಾನಗಳು ಇವುಗಳಲ್ಲಿವೆ. ಆದರೆ ಈಗ ಪ್ರಾರ್ಥನಾ ವಿಧಿವಿಧಾನಗಳು ಕನ್ನಡದಲ್ಲಿ ನಡೆಯುತ್ತವೆ.

ಮದುವೆ ಕ್ರಮದಲ್ಲಿ ಈ ಹಿಂದೆ ಉಂಗುರ, ತಾಳೆ ಬಳಸುವ ಕ್ರಮವಿಲ್ಲ 1945 ನಂತರ ತಾಳಿ ಕಟ್ಟುವ ಕ್ರಮ ಬಂದಿದೆ. 1968 ನಂತರ ಉಂಗುರ ಧರಿಸುವಾಗ ಮದುಮಗ ಮಗಳು ಹೇಳುವ ಕ್ರಮ ಬದಲಾಗಿದೆ. ವಿಧವೆಯರು ಕರಿಮಣಿ ಧರಿಸುತ್ತಿರಲಿಲ್ಲ. ಈಗ ದರಿಸುತ್ತಾರೆ. ಕನೈಯರು ಸೀರೆ ಉಡಬೇಕು ಸೀರೆಯ ಸೆರಗನ್ನು ತಲೆಗೆ ಮುಚ್ಚಿಕೊಳ್ಳಬೇಕು ಇಲ್ಲವಾದರೆ ತಲೆಗೆ ಶಾಲುಗಳನ್ನಾದರೂ ಹೊದಿಸಬೇಕು ಎಂಬ ನಿಯಮವಿತ್ತು. ಆದರೆ ಈಗ ಹಿರಿಯರು ಬಳಸುತ್ತಾರೆ. ಯವನಸ್ಥರಲ್ಲಿ ಈ ಕ್ರಮ ಸ್ವಲ್ಪ ಕಮ್ಮಿಯಾಗಿದೆ.

ಕ್ರೈಸ್ತರಲ್ಲಿ ಬೇರೆ ಧರ್ಮವನ್ನು ಆದರಿಸುವುದು, ಕಣಿ ಕೇಳುವುದು, ಹರಕೆ ಹೇಳುವುದು, ವ್ಯಭಿಚಾರ, ಕಳ್ಳತನ ಮುಂತಾದವುಗಳಿಗೆ ಸಭಾ ಶಿಕ್ಷೆಯಿರುತ್ತಿತ್ತು. ಅಡ್ಡ ಬೆಂಚುಗಳಲ್ಲಿ ಕುಳಿತುಕೊಳ್ಳಬೇಕು/ ಪರಮ ಪ್ರಸಾದ ಸ್ವೀಕಾರವಿಲ್ಲ/ ಸತ್ತರೆ ಧರ್ಮಗುರು ಹೂಳುವಂತಿಲ್ಲ/ ಘಂಟೆ ಬಾರಿಸುವಂತಿಲ್ಲ/ಶಿಕ್ಷೆಗೊಳಗಾದವನ ಮನೆಗೆ ಯಾರೂ ಔತಣಕ್ಕೆ ಹೋಗುವಂತಿಲ್ಲ. ಜಿಲ್ಲೆಯಲ್ಲಿ ಪುರುಷರು ಮಾತ್ರ ಧರ್ಮಗುರುಗಳು/ ಸಭಾ ಹಿರಿಯರು ಆಗಬೇಕೆಂಬ ಕ್ರಮವಿತ್ತು 1947 ಸಭೆಗಳು ಭಾರತೀಕರಣವಾದ ಮೇಲೆ ಈ ಕ್ರಮವಿಲ್ಲ. ಸ್ತ್ರೀಪುರುಷರು ಯಾರೂ ಧರ್ಮಗುರು ಆಗಬಹುದು. ತುಳುನಾಡಿನಲ್ಲಿ ಈ ಕ್ರಮ ಬಂದುದು 1968ರ ನಂತರ, ಆದರೆ ಕೆಥೊಲಿಕ ಕ್ರೈಸ್ತರಲ್ಲಿ ಪುರುಷರು ಮಾತ್ರ ಧರ್ಮಗುರುಗಳಾಗುವ ಕ್ರಮವಿದೆ.

ಆರಾಧನೆಗಳಲ್ಲಿ ಹಬ್ಬದ ಆಚರಣೆಗಳಲ್ಲಿ ಈಗ ಹೆಚ್ಚಿನವು ದೇಶೀಯ ಆಚರಣೆಗಳೇ ಬಳಕೆಯಾಗುತ್ತವೆ. ಸುಗ್ಗಿ ಹಬ್ಬದಲ್ಲಿ ಕದಿರು ಕಟ್ಟುವಂತದ್ದು. ಮರಿಯಮ್ಮನ ಮೂರ್ತಿಗೆ ಹೂಗಳನ್ನು ಅರ್ಪಿಸುವಂತದ್ದು, ದೇಶೀಯ ತಿಂಡಿಗಳನ್ನು ಮಾಡುವಂತದ್ದು, ಉಡುಗೆ ತೊಡುಗೆಗಳಲ್ಲಿ ಗಂಡಸರು ಕಚ್ಚೆ, ಉದ್ದ ತೋಳಿನ ಅಂಗಿಗಳನ್ನು ಹಾಕಿ ಮುಂಡಾಸು ತೊಡುವುದು ಹೆಂಗಸರು ಉದ್ದ ತೋಳಿನ ರವಿಕೆ ಹಾಗೂ ಉದ್ದ ಲಂಗ ತೊಡುವುದು, ದೇವಾಲಯಕ್ಕೆ ಹೋಗುವಾಗ ಸ್ಮಾಫ್ ಧರಿಸುವ ಕ್ರಮ ಬಳಕೆಯಲ್ಲಿತ್ತು. ಆದರೆ ಅವೆಲ್ಲ ವಿದೇಶಿ ಶೈಲಿಗೆ ಬದಲಾಗಿದೆ. ಇತ್ತೀಚೆಗೆ ಕೆಲವು ದೇವಾಲಯಗಳಲ್ಲಿ ಡ್ರೆಸ್‌ ಕೋಡ್‌ಗಳು ಬಳಕೆಗೆ ಬಂದಿವೆ. ಪರಮ ಪ್ರಸಾದ ಪ್ರೊಟೆಸ್ಟಂಟರಲ್ಲಿ ಒಂದೇ ಪಾತ್ರೆಯಲ್ಲಿ ದ್ರಾಕ್ಷಾರಸವನ್ನು ಹಂಚುವ ಕ್ರಮವಿತ್ತು. ಈಗ ಸಿಂಗಲ್ ಕಪ್ ಬಳಕೆಯಾಗುತ್ತಿದೆ. ಕೆಥೋಲಿಕರಲ್ಲಿ ಧರ್ಮಗುರುಗಳು ಮಾತ್ರಾ ದ್ರಾಕ್ಷಾರಸ ಮತ್ತು ರೊಟ್ಟಿಯನ್ನು ಸಾಂಕೇತಿಕವಾಗಿ

168 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 169 ] ಸ್ವೀಕರಿಸುತ್ತಾರೆ. ಆನಂತರ ರೊಟ್ಟಿಯ ತುಂಡುಗಳನ್ನು ಸಭಿಕರಿಗೆ ಹಂಚುವ ಕ್ರಮವಿದೆ.

ನಿಶ್ಚಿತಾರ್ಥ ಕ್ರಮ ಹಿಂದೆ ಮನೆಯ ಸದಸ್ಯರು, ಕುಟುಂಬಿಕರು ಮತ್ತು ಚರ್ಚ್‌ನ ಗುರುಗಳು ಸೇರಿ ಮಾಡುವ ಸಂಪ್ರದಾಯವಾಗಿತ್ತು. ಆದರೆ ಈಗ 300- 500 ಜನರನ್ನು ಕರೆದು ಔತಣದ ವ್ಯವಸ್ಥೆ ಮಾಡುವ ಕ್ರಮ ಬಂದಿದೆ. ಹಿಂದೆ ಕೆಥೋಲಿಕರಲ್ಲಿ ನಿಶ್ಚಿತಾರ್ಥವು ದೇವಾಲಯದಲ್ಲಿ ನಡೆಯುತ್ತಿತ್ತು. ಪ್ರೊಟೆಸ್ಟಂಟ್ ಕ್ರೈಸ್ತರದ್ದು ಹಿಂದಿನಿಂದಲೂ ಮನೆಯಲ್ಲಿಯೇ ನಡೆಯುತಿತ್ತು ಈಗ ಹಾಲ್‌ಗಳಲ್ಲಿ ನಡೆಯುತ್ತದೆ.

ಮದುವೆ ಮುಂಚಿನ ದಿನ ಮದುಮಗ ಮತ್ತು ಮದುಮಗಳ ಮನೆಯಲ್ಲಿ ಕುಟುಂಬದ ಸದಸ್ಯರು, ನೆರೆಹೊರೆಯವರು, ಧರ್ಮಗುರುಗಳು ಮತ್ತು ಸಭೆಯ ಮುಖ್ಯಸ್ಥರು ಸೇರಿ ಪ್ರಾರ್ಥನಾ ಕೂಟ ನಡೆಸಿ ಮದುಮಕ್ಕಳಿಗೆ ತೆಂಗಿನೆಣ್ಣೆ, ಹಸಿ ಅರಸಿನ ಮಿಶ್ರಿತ ತೆಂಗಿನ ಹಾಲು ಹಚ್ಚುವ ಕ್ರಮವಿತ್ತು. ಕೊನೆಯಲ್ಲಿ ಬಂದವರಿಗೆಲ್ಲ ಊಟದ ವ್ಯವಸ್ಥೆಯಿತ್ತು. ಈ ಊಟದಲ್ಲಿ ಪಾಯಸ, ಕುಂಬಳಕಾಯಿ ಸೂ, ಕಡ್ಲೆ ಅರಿಸಿದ್ದು, ಉಪ್ಪಿನಕಾಯಿ ಹೊರತು, ಮೀನು ಮಾಂಸದ ತಯಾರಿ ಇಲ್ಲ. ಈ ಕ್ರಮ ಯಾಕಂದರೆ ಕುಟುಂಬವಾಗಿ ಸೇರಿ ಮದುಮಕ್ಕಳನ್ನು ಹರಸುವುದು ಮತ್ತು ಮರುದಿನ ನಡೆಯುವ ಮದುವೆ ಅಡುಗೆ, ದಿಬ್ಬಣ, ಮುಂತಾದ ತಯಾರಿಗೆ ಮೊದಲಿನ ದಿನ ಮನೆಯಲ್ಲಿ ಒಟ್ಟು ಸೇರುವುದು ಈ ಕಾರ್ಯಕ್ರಮಗಳೆಲ್ಲವೂ ದೇಶೀಯವಾಗಿಯೇ ನಡೆಯುತ್ತದೆ. ಮದುಮಕ್ಕಳಿಗೆ ಅರಸಿನ ಹಾಲು ಹಚ್ಚುವುದು, ಕುಶಾಲಿನ ಪದ್ಯಗಳನ್ನು ಹೇಳುವುದು ಇತ್ಯಾದಿ. (ಮೊದಲು ಒಳ್ಳೆ ಬುದ್ದಿಯ ಮಾತುಗಳನ್ನು ಹೇಳುವ ಕ್ರಮವಿತ್ತು) ಹಿಂದೂ ಧರ್ಮೀಯರಲ್ಲಿ ಆಮಂತ್ರಿತರೆಲ್ಲರೂ ಮದ್ರೆಂಗಿ ಹಚ್ಚುವ ಹಾಗೆ ಇವರಲ್ಲಿ ಅರಸಿನ ಹಾಲು ಹಚ್ಚುವ ಕ್ರಮವಿದೆ. ಆದರೆ ಈಗ 200-300 ಜನ ಸೇರಿಸಿ ಔತಣ ಕೂಟ ನಡೆಸುವ ಕಾರ್ಯಕ್ರಮವಾಗಿದೆ. ಔತಣಕ್ಕೆ ಮಾಂಸಾಹಾರಿ ಊಟವೇ ಆಗಬೇಕು, ಮಧುಪಾನದ ವ್ಯವಸ್ಥೆ ಇಲ್ಲವಾದರೆ ಮಂದ್ರಂಗಿ ಊಟವೇ ಆಗುವುದಿಲ್ಲ ಎಂಬ ಕ್ರಮಗಳು ಹೆಚ್ಚಿನ ಕಡೆ ಬರುತ್ತಿದೆ. ಇತ್ತೀಚೆಗೆ ಮದುವೆ ಮುಂಚಿನ ದಿನ ಮಾತ್ರವಿದ್ದ ಮಧ್ಯಪಾನ ಬಳಕೆಯ ಕ್ರಮ ಈಗ ಮೊದಲ ಪರಮ ಪ್ರಸಾದದ ದಿನ, ನಿಶ್ಚಿತಾರ್ಥ, ಬಯಕೆ, ನಾಮಕರಣದಲ್ಲೂ ಅಲ್ಲಲ್ಲಿ ಕಂಡುಬರುವುದು ಬೇಸರದ ಸಂಗತಿಯಾಗಿದೆ.

ಮದುಮಗ ಕಚ್ಚೆ, ಬಿಳಿ ಉದ್ದ ತೋಳಿನ ಶರ್ಟ್ ಬಳಸುತಿದ್ದರೆ ಈಗ ಸೂಟ್ ಬೂಟ್ ದರಿಸುವ ಕ್ರಮವಿದೆ. ಮದುಮಗಳು ಜರಿ ಸೀರೆ ಉಡುವ ಕ್ರಮವಿತ್ತು ಈಗ ಆ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 169 [ 170 ] ಸ್ಥಳಕ್ಕೆ ಬಿಳಿ ಗವನ್ ಬಂದಿವೆ. ಮಂಗಳ ಸೂತ್ರ ಹಿಂದೆ ಬಳಸುತ್ತಿರಲಿಲ್ಲ ಇದರ ಬದಲಾಗಿ ಒಂದು ಬಂಗಾರದ ದಪ್ಪದ ಚೈನ್ ಹಾಕುವ ಕ್ರಮವಿತ್ತು. ಈಗ ಮಂಗಳ ಸೂತ್ರ ಬಳಸುತ್ತಾರೆ. ಆದರೆ ಮಂಗಳ ಸೂತ್ರ ಕಟ್ಟುವುದು ಮದುವೆ ಚಪ್ಪರದಲ್ಲಿ. ಪ್ರೊಟೆಸ್ಟಂಟ್ ಕ್ರೈಸ್ತರಲ್ಲಿ ಮಂಗಳಸೂತ್ರವನ್ನು ದೇವಾಲಯದಲ್ಲಿಯೇ ಕಟ್ಟುವ ಕ್ರಮವಿದೆ. ಮಹಿಳೆಯರಿಗೆ ಆರಾಧನೆಯಲ್ಲಿ ಪ್ರತ್ಯೇಕ ಆಸನದ ವ್ಯವಸ್ಥೆ, ಅಂತಿಮ ಸಂಸ್ಕಾರಕ್ಕೆ ಮಹಿಳೆ ಹೋಗುವುದು ನಿಷಿದ್ದ ಮುಂತಾದ ಕ್ರಮಗಳು ಇತ್ತು. ಆದರೆ ಈ ಕ್ರಮಗಳೆಲ್ಲ ಹೋಗಿ ಮಹಿಳೆಯರೂ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ.

ದೇವಾಲಯಗಳಲ್ಲಿ ಬೈಬಲ್ ಪಠಣವಿದ್ದ ಹಾಗೇ ಇಂತಹ ಹಾಡುಗಳನ್ನೇ ಹಾಡಬೇಕು, ಮುದ್ರಿತ ಪ್ರಾರ್ಥನೆಗಳನ್ನೇ ಮಾಡಬೇಕು ಎನ್ನುವ ಕ್ರಮವಿತ್ತು. ಆದರೆ ಬೈಬಲ್ ಪಠಣ ಬಿಟ್ಟರೆ ಬೇರೆಲ್ಲಾ ಕ್ರಮಗಳು ಬದಲಾಗಿವೆ. ಹೊಸ ಹೊಸ ದೇಶಿಯ ಹಾಡುಗಳ ಬಳಕೆಯಾಗುತ್ತವೆ. ಬೆಳೆ ಹಬ್ಬದ ಮೆರವಣಿಗೆ, ಪರಮ ಪ್ರಸಾದ ಮೆರವಣಿಗೆ ಹೀಗೆ ಹೊಸ ಹೊಸ ಆರಾಧನೆಗಳನ್ನು ಆಯೋಜಿಸಲಾಗುತ್ತಿದೆ. ದೇಶಕ್ಕಾಗಿ, ದೇಶದ ನಾಯಕರುಗಳಿಗಾಗಿ, ಅತಿವೃಷ್ಟಿ, ಅನಾವೃಷ್ಟಿ, ಸಾಂಕ್ರಾಮಿಕ ರೋಗ. ಸಮಾಜಿಕ ಕೆಡುಕುಗಳು ಮುಂತಾದ ಪ್ರಾರ್ಥನೆಗಳು ಹೆಚ್ಚಾಗಿ ಬಳಸಿಕೊಳ್ಳಲಾಗುತ್ತಿದೆ. ನಂಬಿಕೆ ಒಂದಾದರೂ ಓದುವ ಬೈಬಲ್ ಒಂದಾದರೂ ಆಚರಣೆಗಳನ್ನು ಮಾತ್ರ ಕಾಲಕ್ಕೆ ತಕ್ಕಂತೆ ಬದಲಾಯಿಸಿಕೊಂಡು ಕ್ರೈಸ್ತರು ತುಳುನಾಡಿನಲ್ಲಿ ಸೌಹಾರ್ದ ಸಹಬಾಳ್ವೆಯಲ್ಲಿ ಜೀವನ ನಡೆಸುತ್ತಿದ್ದಾರೆ.


ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 171 ] ಕ್ರಿಸ್ತ ಹುಟ್ಟಿದ ಹಬ್ಬ ಕ್ರಿಸ್ಮಸ್

ಕ್ರಿಸ್ತ ಜಯಂತಿಯು ಬಹು ಸಂತೋಷದ ಹಬ್ಬ. ಮಹಾಮಹಿಮನಾದ ದೇವರು ಮಾನವನ ರಕ್ಷಣೆಗಾಗಿ ನರವತಾರವೆತ್ತಿ ಬಂದ ಶುಭ ದಿನದ ಆಚರಣೆ. ಜಗತ್ತಿನಾದ್ಯಂತ ಈ ಹಬ್ಬವನ್ನು ಜನರೆಲ್ಲರೂ ಆಚರಿಸುತ್ತಾರೆ. ಮಕ್ಕಳು ದೊಡ್ಡವರೂ ತಮ್ಮ ತಮ್ಮ ಮನೆಗಳಲ್ಲಿ ಕ್ರಿಸ್ತ ಜಯಂತಿಯ ಸಂತೋಷದಲ್ಲಿ ಪಾಲುದಾರರಾಗುತ್ತಾರೆ.

ಕ್ರಿಸ್ಮಸ್ ಎಂಬ ಪದ ಕ್ರೈಸ್ಟ್ ಮಾಸ್‌ (ಕ್ರಿಸನಿಗೆ ಸಂಬಂಧಿಸಿದ ಆರಾಧನೆ) ಇದರ ಸಂಕ್ಷಿಪ್ತ ರೂಪ. ಕ್ರಿಸ್ತನು ಹುಟ್ಟಿದ ತಾರೀಕಿನ ಬಗೆಗೆ ಹಲವು ಭಿನ್ನಾಭಿಪ್ರಾಯಗಳಿವೆ. ಕ್ರಿಸ್ತನು ಹುಟ್ಟಿ 300 ವರ್ಷಗಳ ತನಕ ಕ್ರಿಸ್ಮಸ್ ಹಬ್ಬವನ್ನು ಆಚರಿಸಿದ ಪುರಾವೆಗಳು ಕಂಡುಬರುತ್ತಿಲ್ಲ. ಆದರೂ ಪುರಾತನ ಸಭೆಗಳಲ್ಲಿ ಲೋಕರಕ್ಶಕನ ಜನನದ ಹಬ್ಬವನ್ನು ಆಚರಿಸುತ್ತಿದ್ದರು ಎಂದು ತಿಳಿದು ಬರುತ್ತದೆ. ಕ್ರಿ.ಶ. 336ಕ್ಕಿಂತ ಮೊದಲು ರೋಮಿನ ಪೇಗನರು ಡಿಸೆಂಬರ್ 25ರಂದು ಸೂರ್ಯನ ಹಬ್ಬವನ್ನು ಅಚರಿಸುತ್ತಿದ್ದರು. ಜೂಲಿಯನ್ ಪಂಚಾಂಗದ ಪ್ರಕಾರ ಈ ತಾರೀಕಿನಂದು ಸೂರ್ಯನು ದಕ್ಷಿಣಾರ್ಧಗೋಳದ ಮಕರ ಸಂಕ್ರಾಂತಿಯಿಂದ ಉತ್ತರಕ್ಕೆ ಹಿಂದಿರುಗಲು ತೊಡಗುವನು. ರೋಮನರಿಗೆ ಇದು ಅಜೇಯನಾದ ಸೂರ್ಯನು ಹುಟ್ಟಿದ ಹಬ್ಬ. ಆದ್ದರಿಂದಲೇ ರೋಂ ಚಕ್ರವರ್ತಿ ಅರೇಲಿಯನ್ ಎಂಬಾತನು ಡಿಸೆಂಬರ್ 25ನ್ನು ಸೂರ್ಯದೇವರನ್ನು ಪೂಜಿಸುವ ದಿನ ಸೂರ್ಯದೇವನು ತನ್ನ ಚಕ್ರಾದಿಪತ್ಯದ ಪ್ರಮುಖಪಾಲಕನೆಂದು ಘೋಷಿಸಿದ ಎಂಬ ಪ್ರತೀತಿ ಇದೆ. ಸೂರ್ಯಾರಾಧನೆ ಹಲವ ಪುರಾತನ ಸಂಸ್ಕೃತಿಗಳಲ್ಲಿ ಸರ್ವೆಸಾಮಾನ್ಯ. ಕಾಲಕ್ರಮೇಣ ಕಾನ್ಸ್ಟೆಂಟೈನ್ ಚಕ್ರವರ್ತಿಯು ಕೈಸ್ತನಾದಾಗ ಈ ಎಲ್ಲಾ ಸಂಪ್ರದಾಯಗಳಿಗೆ ತೆರೆ ಬಿತ್ತು. ಆದರೆ ಜನರ ಐಕ್ಯತೆಗೆ ಹಬ್ಬಗಳು ಅನಿವಾರ್ಯವಾದ್ದರಿಂದ ಅಜೇಯ ಸೂರ್ಯನ ಹಬ್ಬದ ದಿನದ ಸ್ಥಾನವನ್ನು ಕ್ರಿಸ್ತನು ಪಡೆದ.

ಕ್ರಿಸ್ತನು ಹುಟ್ಟಿದ ದಿನಾಂಕವು ಸತ್ಯವೇದದಲ್ಲಿ ಇಂತಹದೇ ದಿನವೆಂದು ನಿಗದಿಯಾದ ದಾಖಲಾಗದೇ ಇರುವುದರಿಂದ ಕ್ರಿಸ್ತನ ಹಿಂಬಾಲಕರಾದ ಕ್ರೈಸ್ತರು ಹಲವಾರು ವರ್ಷಗಳಲ್ಲಿ ಜನವರಿ 6, ಮಾರ್ಚ್ 28, ಎಪ್ರಿಲ್ 19 ಮತ್ತು 20,

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 171 [ 172 ] ನವೆಂಬರ್ 17, ಹೀಗೆ 13 ಬೇರೆ ಬೇರೆ ತಾರೀಕುಗಳಲ್ಲಿ ಕ್ರಿಸ್ತನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರು. ಆದರೆ ಎಲ್ಲಿಯ ಡಿಸೆ೦ಬರ್ 25ರ೦ದು ಆಚರಿಸುತ್ತಿದ್ದಾರೆಂಬುದಕ್ಕೆ ಪುರಾವೆಗಳು ಕಂಡುಬರುವುದಿಲ್ಲ.

ಕ್ರಿ.ಶ. 361ರಲ್ಲಿ ಪೋಪ್ತರಾಗಿದ ಜೂಲಿಯಸ್‌ ಎಂಬವರು ಡಿಸೆಂಬ‌ 25ನ್ನು ಕ್ರಿಸ್ತನ ಜನನದ ದಿನವನ್ನಾಗಿ ನೇಮಿಸಿದರು. ಕ್ರಿ. ಶ. 500ರಲ್ಲಿ ಅದನ್ನು ಹೆಚ್ಚಿನ ಸಭೆಗಳು ಜಾರಿಗೆ ತಂದವು. ಆದರೂ ಈ ದಿನಾಂಕವನ್ನು ಒಪ್ಪದೆ ಗ್ರೀಕಿನ ಅರ್ಥೊಡಕ್ಸ್ ಮತ್ತು ಅಮೇರಿಕದ ಸಭೆಗಳು ಕ್ರಿಸ್ತನ ಹುಟ್ಟು ಹಬ್ಬವನ್ನು ಜನವರಿ 6 ಮತ್ತು ಜನವರಿ 18ಕ್ಕೆ ಆಚರಿಸುತ್ತಿದ್ದರು. ಆದರೆ ಇಂಗ್ಲಿಷ್ ಭಾಷೆ ಇರುವ ದೇಶಗಳು ಮತ್ತು ರೋಮನ್ ಕೆಥೋಲಿಕರ ಪ್ರಭಾವವಿರುವ ಎಲ್ಲಾ ಸಭೆಗಳು ಡಿಸೆಂಬರ್ 25ರಂದೇ ಈ ಹಬ್ಬವನ್ನು ಆಚರಿಸುತ್ತಿದ್ದರು. ಲಿಬಿಸಿಯಾ ಹಿಂಬಾಲಕರು ಏಸುವಿನ ಹುಟ್ಟುಹಬ್ಬವನ್ನು ವರ್ಷಕ್ಕೆ 11ಬಾರಿ ಅಂದರೆ ಮಾರ್ಚ್ ತಿಂಗಳೊಂದು ಬಿಟ್ಟು ಉಳಿದ ಪ್ರತಿ ತಿಂಗಳೂ ಆಚರಿಸುತ್ತಾರೆ. ಬೆಲ್ಲೆಹೇಮಿನ ಏಸು ಹುಟ್ಟಿದ ಸ್ಥಳದಲ್ಲಿ ದೇವಾಲಯದಲ್ಲಿ ಬೇರೆ ಬೇರೆ ಸಭೆಗಳವರು ಬೇರೆ ಬೇರೆ ದಿವಸಗಳಲ್ಲಿ ಈ ಹಬ್ಬವನ್ನು ಆಚರಿಸುತ್ತಿದ್ದರು.

ರಾಜರುಗಳ ಮತ್ತು ಜನಸಾಮಾನ್ಯರ ಪ್ರೋತ್ಸಾಹ ದೊರೆಯಲು ಪ್ರಾರಂಬವಾದ ಮೇಲೆ ಕ್ರಿ. ಶ. ನಾಲ್ಕನೇ ಶತಮಾನದ ಉತ್ತರಾರ್ಧದಿಂದ ಈ ಕ್ರಿಸ್ಮಸ್ ಹಬ್ಬ ಅಸ್ತಿತ್ವಕ್ಕೆ ಬಂದಿದೆ ಎನ್ನಬಹುದು. ರೋಮನ್ ಕೆಥೋಲಿಕರು ಜನವರಿ 6 ರಂದು ಆಚರಿಸುತ್ತಿದ್ದ ಸೂರ್ಯನ ಹಬ್ಬವಾದ ಎಫಿಫನಿಯೂ ಕ್ರಿಸ್ತನ ಜನನವನ್ನು ಸ್ಮರಣೆಗೆ ತರುವಂತಹ ಹಬ್ಬವಾಗಿತ್ತು. ಇದರಿಂದ ಎರಡು ಬಿನ್ನವಾದ ದಿನಗಳಲ್ಲಿ ಈ ಹಬ್ಬವನ್ನು ಆಚರಿಸುವಂತಾಯಿತು. ಆದರೆ ಕ್ರಿಶ್ಚಿಯನ್ ಕ್ಯಾಲೆಂಡರ್ ಪ್ರಪಂಚದಾದ್ಯಂತ ಅಸ್ತಿತ್ವಕ್ಕೆ ಬಂದ ನಂತರ ಕ್ರಮೇಣ ಡಿಸೆಂಬರ್ 25ರಂದು ಎಲ್ಲಾ ದೇಶಗಳಲ್ಲಿ ಆಚರಣೆಗೆ ಬಂತು. ಕ್ರಿಸ್ತ ಹುಟ್ಟಿದ ಕೆಲವು ದಿನಗಳ ನಂತರ ಅಲ್ಲಿಗೆ ಬೇಟಿ ನೀಡಿದ ಮೂಡಣದ ಜೋಯಿಸರು ಬಂದು ಬಾಲ ಏಸುವನ್ನು ಲೋಕಕ್ಕೆ ಪರಿಚಯಿಸಿದ ದಿನವನ್ನು ಇಂದು ಎಫಿಫನಿ, ಜೋಯಿಸರ ಹಬ್ಬ, ಪಂಡಿತರ ಹಬ್ಬ ಎಂಬದಾಗಿ ಜನವರಿ 6ರಂದು ಆಚರಿಸಲಾಗುತ್ತಿದೆ.

ಕ್ರೈಸ್ತರೆನಿಸಿಕೊಂಡ ಈಗಿನ ಹೊಸ ಅನೇಕ ಪಂಗಡಗಳು ಈ ಕ್ರಿಸ್ಮಸ್ ಹಬ್ಬವನ್ನು ಆಚರಿಸುವುದಿಲ್ಲ. ಇದಕ್ಕೆ ಅವರು ಕೊಡುವ ಕಾರಣ ಸತ್ಯವೇದದಲ್ಲಿ ಈ ಹಬ್ಬವನ್ನು ಆಚರಿಸಬೇಕೆಂದು ಎಲ್ಲಿಯೂ ಹೇಳಿಲ್ಲ. ಅಲ್ಲದೆ ಡಿಸೆಂಬರ್ 25 ಅದು ಪೇಗನರು ಆಚರಿಸುವ ಸೂರ್ಯನ ಹಬ್ಬದ ದಿನವಾಗಿದೆ. ಕ್ರಿಸ್ತ ಯಾವ ದಿನ

172 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 173 ] ಹುಟ್ಟಿದ್ದಾನೆ ಎನ್ನುವುದಕ್ಕೆ ಆಧಾರವಿಲ್ಲ. ಹೀಗಿರುವಲ್ಲಿ ಡಿಸೆಂಬರ್ 25 ತಾರೀಕು ಯಾಕಾಗಬೇಕು ಎಂದು ಎಂದು ಅನೇಕ ಕಾರಣಗಳನ್ನು ಕೊಟ್ಟು ಈ ಆಚರಣೆಯನ್ನು ಖಂಡಿಸುತ್ತಾರೆ.

ಧರ್ಮಗ್ರಂಥಗಳು ಒಂದು ಮತ ಹುಟ್ಟಿದ ಹಲವು ವರ್ಷಗಳ ನಂತರ ರಚಿತವಾಗುತ್ತದೆ. ಬುದ್ಧ ಪೂರ್ಣಿಮಾ, ಕೃಷ್ಣ ಜಯಂತಿ, ರಾಮನವಮಿ ಮುಂತಾದ ಹಬ್ಬಗಳು ಅವರ ಗೌರವಾರ್ಥ ಆಚರಿಸಲ್ಪಡುತ್ತದೆ. ಇದಕ್ಕೆ ಚಂದ್ರಮಾನ ಪದ್ದತಿಯನ್ನು ಬಳಸುತ್ತಿರುವುದರಿಂದ ತಾರೀಕುಗಳಲ್ಲಿ ವ್ಯತ್ಯಾಸವಾಗುತ್ತದೆ. ಆದ್ದರಿಂದ ಆಚರಣೆಗಳ ದಿನಗಳು ಪ್ರತಿವರ್ಷವೂ ಒಂದೇ ಇರುವುದಿಲ್ಲ. ಇಲ್ಲಿ ತಾರೀಕು ಮುಖ್ಯವಲ್ಲ. ಮಹಾನ್ ವ್ಯಕ್ತಿಗಳು, ಲೋಕರಕ್ಷಕರು, ಶಾಂತಿದೂತರು ಹುಟ್ಟಿದ್ದು ನಿಜ. ಭಕ್ತಿಯಿಂದ ಹಬ್ಬವನ್ನು ಮುಖ್ಯ. ಯೇಸು. ರಾಮ, ಕೃಷ್ಣ, ಮಹಮದ್ ಪೈಗಂಬರ್ ಮುಂತಾದವರುಗಳು ತಮ್ಮ ಅನುಯಾಯಿಗಳಿಗೆ ತಮ್ಮ ಜನ್ಮದಿನವನ್ನು ಹಬ್ಬವಾಗಿ ಆಚರಿಸಲು ಹೇಳಿದ್ದರೇ ? ಖಂಡಿತಾ ಇಲ್ಲ. ಜನರೇ ಅವನ್ನು ಗುರುತಿಸಿ ಅವರ ಜನನ, ಜೀವನ, ಬೋಧನೆ, ಇವುಗಳ ಜ್ಞಾಪಕಾಥವಾಗಿ ಹಬ್ಬಗಳನ್ನು ಆಚರಿಸುತ್ತಾರೆ.

ಶಾಂತಿ, ಸಹನೆ, ಗೆಳೆತನ, ದಯೆ, ಕ್ಷಮೆ ಇವುಗಳನ್ನು ಸಾರಿ ತಿಳಿಸುವುದೇ ಧರ್ಮಗ್ರಂಥದ ತಿರುಳಾಗಿದೆಯೇ ವಿನಾ ಯಾವುದೇ ಧರ್ಮಗ್ರಂಥಗಳು ಹಬ್ಬವನ್ನು ಆಚರಿಸಲು ತಿಳಿಸುವುದಿಲ್ಲವೋ ಹಾಗೆಯೇ ಇನ್ನೊಬ್ಬರನ್ನು ನಿಂದಿಸಲು, ನೋಯಿಸಲು, ಹಂಗಿಸಲು ಹೇಳುವುದಿಲ್ಲ.

ಕ್ರಿಸ್ಮಸ್ ದಿನಗಳಲ್ಲಿ ನಮ್ಮ ಹೃದಯಗಳು ದೇವರು ನಮಗೆ ಮಾಡಿರುವ ಉಪಕಾರಗಳು ತುಂಬಿರುತ್ತವೆ. ಪ್ರತಿಯೊಂದು ಸಾರಿ ನಮ್ಮ ಕುಟುಂಬದಲ್ಲಿ ಮಗು ಹುಟ್ಟುವಾಗ ನಾವು ದೇವರ ನರಾವತಾರವನ್ನು ಅನುಭವಿಸುತ್ತೇವೆ. ಆದ್ದರಿಂದ ಕಿಸ್ಮಸ್‌ನ ಮಹತ್ವವೇನು, ಅದು ಅಂದು ಬೆತ್ಲೆಹೆಮ್ನಲ್ಲಿ ಕಂಡ ಅದ್ಭುತ ನಕ್ಷತ್ರವೋ ? ಕುರುಬರ ಮುಂದೆ ದೇವದೂತರು ಹಾಡಿದ ಗಾಯನವೋ ? ಪ್ರೀತಿ ತುಂಬಿದ ತಾಯಿಯೋ ಅಥವಾ ಗಲಿಬಿಲಿಗೊಂಡ ಅರಸುಗಳೋ ? ನಿಜವಾಗಿ ಅಲ್ಲ. ಕ್ರಿಸ್ಮಸ್‌ ಮಹತ್ವವೇನೆಂದರೆ ದೇವರು ನಮಗೆ ಅತ್ಯತ್ತಮವಾದುದನ್ನೇ ಕೊಟ್ಟಿದ್ದಾನೆ ಮತ್ತು ಇಂದೂ ನಮಗೆ ಅತ್ಯುತ್ತಮವಾದುದನ್ನೇ ಕೊಡಲು ಶಕ್ತನು. ಆ ದೇವರು ಆ ಉತ್ತಮ ಅಶೀರ್ವಾದಗಳನ್ನೇ ಸರ್ವ ಜನರಿಗೆ ದಯಪಾಲಿಸಲಿ.

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 173 [ 174 ] ಸಾಂತಾ ಕ್ಲಾಸ್- ಕ್ರಿಸ್ಮಸ್ ಫಾದರ್

ದಿನಂಪ್ರತಿ ಜಗತ್ತಿನ ಲಕ್ಷ ಲಕ್ಷ ಹೃದಯಗಳಲ್ಲಿ ಮಾನವಿಯ ಗುಣಗಳನ್ನು ಹುಟ್ಟಿಸಿ ಬೆಳೆಸಿಕೊಂಡು ಸಹಸ್ರಾರು ಸಂವತ್ಸರಗಳಲ್ಲಿ ಕೋಟ್ಯಾಂತರ ಮಾನವರ ಹೃದಯದ ಪರಿವರ್ತನೆಗೆ ಕಾರಣನಾಗಿ ಯೇಸು ಎಂಬ ನಾಮದಿಂದ ಭೂಮಿಗವತರಿಸಿದ ಯೇಸು ಕ್ರಿಸ್ತನ ಹುಟ್ಟು ಹಬ್ಬವನ್ನು ಕ್ರಿಸ್ಮಸ್ ಎಂಬ ಹೆಸರಿನಿಂದ ಡಿಸೆಂಬರ್ 25ನೇ ತಾರೀಕಿನಂದು ಜಗತ್ತಿನಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಕ್ರಿಸ್ಮಸ್ ಎಂಬುದು ಕ್ರೈಸ್ಟ್ ಮಾಸ್ (ಕ್ರಿಸ್ತನಿಗೆ ಸಂಬಂಧಿಸಿದ ಆರಾಧನೆ) ಎಂಬುದರ ಸಂಕ್ಷಿಪ್ತ ರೂಪ. ಕ್ರಿಸ್ತನು ಹುಟ್ಟಿ 2 ಸಾವಿರ ವರ್ಷಗಳಾದರೂ 4ನೇ ಶತಮಾನದಿಂದ ಕ್ರಿಸ್ಮಸ್ ಹಬ್ಬವನ್ನು ಡಿಸೆಂಬರ್ 25ಕ್ಕೆ ಆಚರಿಸಿಕೊಂಡು ಬರಲಾಗುತ್ತಿದೆ. ಕ್ರಿಸ್ಮಸ್ ಆಚರಣೆಯ ಪೂರ್ವ ತಯಾರಿಯು ಡಿಸೆಂಬರ್ ಮೊದಲ ವಾರದಿಂದಲೇ ಆರಂಭವಾಗುತ್ತದೆ. ದೇವಾಲಯಗಳಲ್ಲಿ ಮಕ್ಕಳ ಕಾರ್ಯಕ್ರಮ, ಕ್ಯಾರಲ್ಸ್ಗಳಿಗಾಗಿ ಸಿದ್ಧತೆ, ಬೇಕರಿಗಳಲ್ಲಿ ಕುಸ್ವಾರ್, ಕೇಕ್ ತಯಾರಿ, ಅಂಗಡಿಗಳಲ್ಲಿ ಗೂಡುದೀಪ, ಅಲಂಕಾರಿಕ ವಸ್ತುಗಳು, ಗೋದಲಿಯ ಗೊಂಬೆಗಳು, ಪಟಾಕಿ, ಮೇಣದ ಬತ್ತಿ, ಬಣ್ಣ ಬಣ್ಣದ ಲೈಟಿಂಗ್ಸ್‌ಗಳು, ಶುಭಾಶಯ ಪತ್ರ ಇವುಗಳು ಮಾರಾಟಕ್ಕೆ ಸಿದ್ಧವಾಗುತ್ತದೆ. ಮಕ್ಕಳೆಲ್ಲರಿಗೆ ಈ ತಿಂಗಳು ಬಂತೆಂದರೆ ಎಲ್ಲಿಲ್ಲದ ಸಂತಸ, ತಂದೆ ತಾಯಂದಿರು ತಮಗೆ ನೀಡಲಿರುವ ಉಡುಗೊರೆ, ಹೊಲಿಸಲಿರುವ ಹೊಸ ಬಣ್ಣ ಬಣ್ಣದ ಬಟ್ಟೆಗಳು, ರುಚಿ ರುಚಿಯ ತಿಂಡಿ ಇದಕ್ಕಾಗಿ ಎದುರು ನೋಡುತ್ತಿದ್ದಾರೆ. ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೀತಿಯಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ಇದು ಜಗತ್ತಿನಾದ್ಯಂತ ಆಚರಿಸಲ್ಪಡುವ ಹಬ್ಬವಾದ್ದರಿಂದ ಇದನ್ನು ಬಹು ಗಂಭೀರವಾಗಿ, ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ಹಬ್ಬದ ಆಚರಣೆಯಲ್ಲಿ ನಮ್ಮ ನೆನಪಿನಂಗಳದಲ್ಲಿ ಮೂಡಿ ಬರುವುದು ಕ್ರಿಸ್ಮಸ್ ತಾತ ಅಥವಾ ಕ್ರಿಸ್ಮಸ್ ಫಾದರ್- ಯಾರು ಕ್ರಿಸ್ಮಸ್ ತಾತ ?. ಈತನನ್ನೇಕೆ ವರ್ಷವೂ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಜ್ಞಾಪಿಸಿಕೊಳ್ಳಲಾಗುತ್ತಿದೆ ಎಂದು ತಿಳಿದುಕೊಳ್ಳುವುದೇ ಈ ಲೇಖನ.

174 ತುಳುನಾಡಿನಲ್ಲಿ ಬಾಸೆಲ್‌ ಮಿಶನ್‌ ಮತ್ತಿತರ ಲೇಖನಗಳು [ 175 ] ಸಂತ ನಿಕೊಲಸ್ ಸಾಂತಾ ಕ್ಲಾಸ್: ಸಾಂತಾಕ್ಲಾಸ್ ఎంబ ಹೆಸರು ಸಂತ ನಿಕೋಲಸ್ ಎಂಬ ಹೆಸರಿನ ರೂಪಾಂತರ, ಯುರೋಪಿನ ಮೈರಾ ನಗರಕ್ಕೆ ಸೇರಿದ ಪಟಾರ ರೇವು ಪಟ್ಟಣದಲ್ಲಿ ವಾಸಿಸುತ್ತಿದ್ದ ಒಂದು ಶ್ರೀಮಂತ ಕುಟುಂಬದಲ್ಲಿ ಈತನು ನಾಲ್ಕನೇ ಶತಮಾನದಲ್ಲಿ ಜನಿಸಿದ. ಒಬ್ಬ ಪ್ರಖ್ಯಾತ ಸಂತನೆಂದು ಕರೆಯಲ್ಪಟ್ಟ ಈತನ ಬಾಲ್ಯ ಹಾಗೂ ಜೀವನದ ಬಗ್ಗೆ ಈ ತನಕ ಚರಿತ್ರೆಗಳು ಲಭ್ಯವಾಗಿರದಿದ್ದರೂ ಯೌವನಸ್ಥನಾಗಿದ್ದಾಗ ಈತನು ಪ್ಯಾಲೆಸ್ತೀನ್, ಈಜಿಪ್ಟ್ ಮುಂತಾದ ಕಡೆ ಪ್ರಯಾಣ ಮಾಡಿದ. ಈ ಪ್ರಯಾಣವು ಈತನು ಧರ್ಮ ಬೋಧಕನಾಗಿದ್ದುಕೊಂಡು ಮಾಡಿದ್ದ ಪ್ರಯಾಣವಾಗಿರುತ್ತದೆ. ಈತನು ಮೈರಾ ಪ್ರಾಂತ್ಯದ ಲಿಸಿಯಾ ಎಂಬಲ್ಲಿ ಬಿಷಪ್ (ಧರ್ಮಾಧ್ಯಕ್ಷನಾಗಿದ್ದನು ಎಂದು ಚರಿತ್ರೆ ಪುಟಗಳಲ್ಲಿ ಕಂಡು ಬರುತ್ತದೆ. ರೋಮಾಯ ಚಕ್ರವರ್ತಿಯ ಆಳ್ವಿಕೆಯ ಕಾಲದಲ್ಲಿ ರಾಜನಾಗಿದ್ದ ಡಯಾಕ್ಸೆಟಿಯಾನ್ ಎಂಬುವನು ಈತನಿಗೆ ಜೈಲು ಶಿಕ್ಷೆ ವಿಧಿಸಿದ್ದನು. ಕಾಲ್ಪನಿಕ ದೇವತೆಯನ್ನು ಬಿಟ್ಟು ಕ್ರಿಸ್ತನನ್ನು ಪೂಜಿಬೇಕೆಂದು ಜನರಿಗೆ ಬೋಧಿಸಿದ್ದೇ ಈತನು ಮಾಡಿದ ಅಪರಾಧವಾಗಿತ್ತು. ಆದರೆ ಕಾನ್ಸ್ಟಂಟೈನ್ ಎಂಬವನು ರಾಜನಾದಾಗ ಕ್ರೈಸ್ತ ಧರ್ಮವನ್ನು ರಾಷ್ಟ್ರೀಯ ಧರ್ಮವನ್ನಾಗಿ ಮಾಡಿ ಸಂತ ನಿಕೊಲಸ್‌ನನ್ನು ಬಿಡುಗಡೆ ಮಾಡಿ ಬಿಷಪ್ ಹುದ್ದೆಯಲ್ಲಿ ಮುಂದುವರಿಸಿದನು. ಈತನ ಬದುಕು ಮತ್ತು ಸೇವೆ ಬಡಬಗ್ಗರ ನಡುವೆ ಆಗಿತ್ತು. ಈತನಿಗೆ ಅಸಹಾಯಕ ಮಕ್ಕಳನ್ನು, ದೀನ ದಲಿತರನ್ನು ಯಾವ ರೀತಿ ಸಂತೈಸುವುವದೇ ಚಿಂತೆ. ಕಷ್ಟದಲ್ಲಿದ್ದವರನ್ನು ಪರಾಂಬರಿಸಿ ಅವರಿಗೆ ಸಹಾಯ ಮಾಡುವುದು ಅವನ ಮುಖ್ಯ ಕೆಲಸವಾಗಿತ್ತು. ಇಂತಹ ಮಹತ್ಕಾರ್ಯಗಳಿಂದ ಆತ ಹೆಸರುವಾಸಿ ಧರ್ಮಾಧ್ಯಕ್ಷನಾಗಿದ್ದನು. ಕ್ರಿ.ಶ. 342ನೇ ಇಸವಿ ಡಿಸೆಂಬರ್ 6ರಲ್ಲಿ ಕಾಲವಾದ ಈ ಸಂತ ನಿಕೊಲಸ್ ತನ್ನ ಬದುಕಿನ ಬೆಳಕನ್ನು ಇಲ್ಲಿ ಬಿಟ್ಟು ಹೋಗಿದ್ದ. ಈತನ ಮರಣಾನಂತರ ಡಿಸೆಂಬರ್ ಆರರಂದು ಪ್ರತಿ ವರ್ಷವೂ ಅತನ ಹೆಸರಿನಲ್ಲಿ ಮಕ್ಕಳಿಗೆ ಉಡುಗೊರೆ ಕೊಡುವ ಸಂಪ್ರದಾಯ ಆರಂಭವಾಯಿತು. ಕ್ರಮೇಣ ಈ ಕ್ರಮವು ಡಿಸೆಂಬರ್ 25ಕ್ಕೆ ಬಂದು ಕ್ರಿಸ್ಮಸ್ ಆಚರಣೆಯ ಸಂಸ್ಕೃತಿಯಲ್ಲಿ ಒಂದಾಗಿದೆ.

ಸಾಂತಾಕ್ಲಾಸ್ ನೆನಪು ಚರಿತ್ರೆಯಲ್ಲಿ : ಆತನ ಹೆಸರಿನಲ್ಲಿ ಸಾವಿರಾರು ದಂತಕತೆಗಳು ಹುಟ್ಟಿಕೊಂಡಿದ್ದು ಅವುಗಳಲ್ಲಿ ನಿಜ ಯಾವುದು ? ದಂತಕತೆಗಳಾವುದು ಎಂಬುದಾಗಿ ಪ್ರತ್ಯೇಕಿಸುವುದು ಕಷ್ಟ

ಟರ್ಕಿ ದೇಶದಲ್ಲಿ ಈ ಸಂತನ ನೆನಪಿಗೆ ಹಲವಾರು ಅಂಚೆ ಚೀಟಿಗಳನ್ನು ಹೊರ ತಂದಿದ್ದರು. ಮೈರಾದಲ್ಲಿ ಆತನ ಸಮಾಧಿ ಇಂದಿಗೂ ಸುರಕ್ಷಿತವಾಗಿದೆ. ಅವನ ಅವಶೇಷಗಳನ್ನು 11ನೇ ಶತಮಾನದಲ್ಲಿ ಇಟಲಿಯಲ್ಲಿ ಬಾರಿ ಎಂಬ ಸ್ಥಳಕ್ಕೆ ಒಯ್ದು

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 175 [ 176 ] ಅಲ್ಲಿ ಅವರನಿಗೆ ಸ್ಮಾರಕವೊಂದನ್ನು ನಿರ್ಮಿಸಿದ್ದಾರೆ. ಅಮೆರಿಕಾದಲ್ಲಿ ಸೈಂಟ್ ನಿಕೊಲಸ್ ಎಂಬ ಹೆಸರಿರುವ ಚಿಕ್ಕದೊಂದು ಊರಿದೆ. ಈ ಊರಿಂದ ಪ್ರತಿ ವರ್ಷವೂ ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಅಮೂಲ್ಯ ಉಡುಗೊರೆಗಳನ್ನು ಜಗತ್ತಿನ ಎಲ್ಲಾ ಕಡೆಗಳಲ್ಲಿರುವ ಅಸಂಖ್ಯಾತ ಬಡ ಮಕ್ಕಳಿಗೆ ಕಳುಹಿಸುತ್ತಿದ್ದರು. ಆತನ ಹುಟ್ಟೂರಿನಲ್ಲಿ ಆತನ ಗೌರವಾರ್ಥ ದೇವಾಲಯವೊಂದನ್ನು ನಿರ್ಮಿಸಿದ್ದು ಅದು ಸುಪ್ರಸಿದ್ಧ ಯಾತ್ರಾ ಸ್ಥಳವೂ ಆಗಿತ್ತು. ಹಲವಾರು ದೇವಾಲಯಗಳನ್ನು ಆತನ ಹೆಸರಿನಲ್ಲಿ ಕಟ್ಟಿಸಲಾಗಿತ್ತು. ಈತ ವ್ಯಾಪಾರಿಗಳ ಮತ್ತು ಸಮುದ್ರಯಾನ ಕೈಗೊಳ್ಳುವವರ ಪೋಷಕನಾಗಿದ್ದಾನೆ ಎಂಬ ನಂಬಿಕೆಯೂ ಬೆಳೆದು ಬಂದಿದ್ದು ಪ್ರಯಾಣಿಕರು ಕಳ್ಳರಿಂದ ತಮ್ಮನ್ನು ರಕ್ಷಿಸಬೇಕೆಂದು ಈತನಲ್ಲಿ ಪ್ರಾರ್ಥಿಸುತ್ತಿದ್ದರು.

ಕ್ರಿಸ್ಮಸ್ ಆಚರಣೆಯಲ್ಲಿ ಕ್ರಿಸ್ಮಸ್ ತಾತ: ಪ್ರಾರಂಭದಲ್ಲಿ ಡಿಸೆಂಬರ್ 6ರಂದು ಇಂಗ್ಲೆಂಡಿನ ಶಾಲೆಗಳಲ್ಲಿ ಮತ್ತು ದೇವಾಲಯಗಳಲ್ಲಿ ಈತನ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಿದ್ದರು. ಜರ್ಮನಿಯಲ್ಲಿ ವ್ಯಕ್ತಿಯೊಬ್ಬ ಕೆಂಪು ಬಣ್ಣದ ಬಿಷಪನ ವೇಷ ಧರಿಸಿ ಪುಟ್ಟ ಮಕ್ಕಳಿಗೆ ಉಡುಗೊರೆ ಹಾಗೂ ತಿಂಡಿ ತಿನಸುಗಳನ್ನು ಹಂಚುತ್ತಿದ್ದ. ಇಂಗ್ಲೆಂಡಿನಲ್ಲಿ ಹುಡುಗನೊಬ್ಬ ಸಾಂತಾಕ್ಲಾಸ್ ವೇಷ ಧರಿಸಿಕೊಂಡು ನಗರದ ಬೀದಿಗಳಲ್ಲಿ ಜನರನ್ನು ಆಕರ್ಷಿಸುತ್ತಾ ಮೆರವಣಿಗೆ ಹೋಗುವ ಪದ್ಧತಿ ಇತ್ತು. ಕ್ರಿಸ್ಮಸ್ ದಿನದಂದು ಕಾರ್ಯಕ್ರಮಗಳನ್ನು ಅವನೇ ನೆರವೇರಿಸುತ್ತಿದ್ದ. ಕ್ರಮೇಣ ಈ ಪದ್ಧತಿಗಳು ಬೇರೆ ಬೇರೆ ದೇಶಗಳಲ್ಲಿ ಹಬ್ಬಿ ಕ್ರಿಸ್ಮಸ್ ಆಚರಣೆಯಲ್ಲಿ ಸಂಸ್ಕೃತಿಯ ಪ್ರತೀಕವಾಗಿ ಈ ಕ್ರಿಸ್ಮಸ್ ತಾತ ಬರತೊಡಗಿದ.

ಇಂಗ್ಲೆಂಡಿನ ರಾಜನಾದ 8ನೇ ಹೆನ್ರಿ 1542ರಲ್ಲಿ ಇದಕ್ಕೆ ತಡೆ ವಿಧಿಸಿದರೂ 1552ರಲ್ಲಿ ಅಧಿಕಾರಕ್ಕೆ ಬಂದ ರಾಣಿ ಮೇರಿ ಈ ಪದ್ಧತಿಯನ್ನು ಮತ್ತೆ ಜಾರಿಗೊಳಿಸಿದಳು. ಕೊನೆಗೆ ರಾಣಿ ಎಲಿಜಬೇತಳಿಂದ ಈ ಪದ್ಧತಿಯು ಶಾಶ್ವತವಾಗಿ ರದ್ದುಗೊಂಡಿದ್ದರೂ ಈಗಲೂ ಈ ಪದ್ಧತಿ ಜಗತ್ತಿನಾದ್ಯಂತ ಇದೆ. ಜರ್ಮನಿಯಲ್ಲಿ ಆಗಿಂದಲೇ ಈ ಪದ್ಧತಿ ಉಳಿದುಕೊಂಡಿತ್ತು. ಮತ್ತೊಂದು ಐತಿಹ್ಯದ ಪ್ರಕಾರ ಡಚ್ ನಿವಾಸಿಗಳು ಅಮೇರಿಕದಲ್ಲಿ ಕಾಲಿಡುವಾಗ ಸಾಂತಾಕ್ಲಾಸ್‌ನನ್ನು ನೆನಪಿಸುವ ಪದ್ಧತಿಯನ್ನು ಅಲ್ಲಿಗೆ ತಂದರಂತೆ. ಅಮೇರಿಕಾದ ಸಾಂತಾಕ್ಲಾಸ್ ದಪ್ಪ ದೇಹದ, ನೆರೆಕೂದಲಿನೊಂದಿಗೆ, ಬಿಳಿಯ ಗಡ್ಡವನ್ನು ಇಟ್ಟುಕೊಂಡು ಉಣ್ಣೆಯ ಬಟ್ಟೆಯನ್ನು ಧರಿಸಿದವನಾಗಿ ಕುದುರೆಯ ಮೇಲೆ ಸವಾರಿ ಮಾಡುತ್ತಾ ಉಡುಗೊರೆಯನ್ನು ಕೊಡಲು ಬರುತ್ತಾನೆ. ಕ್ರಿಸ್ಮಸ್ ಸಂಜೆಯಂದು ಡಚ್ಚರು ಸಾಂತಾಕ್ಲಾಸ್‌ನ ಉಡುಗೊರೆಗಾಗಿ ತಮ್ಮ ತಮ್ಮ ಮನೆಯ ಮುಂದೆ ಪೆಟ್ಟಿಗೆಗಳನ್ನು ತೂಗಿ ಬಿಡುತ್ತಾರೆ.

176 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 177 ] ಸ್ವಿಜರ್‌ಲ್ಯಾಂಡಿನಲ್ಲಿ ಸಾಂತಾಕ್ಲಾಸ್ ಶಿಷ್ಟರನ್ನು ರಕ್ಷಿಸುವ ದುಷ್ಟರನ್ನು ಶಿಕ್ಷಿಸುವ ಸಂತನಾಗಿದ್ದಾನೆ.

ಒಂದು ದಿನ ಬಡ ವಿಧವೆಯೋರ್ವಳು ಗೋಳಾಡುತ್ತಾ ಈತನಿಗೆ ಇದಿರಾದಳು ಮೂರು ಮಕ್ಕಳು ವಿದ್ಯಾರ್ಜನೆಗಾಗಿ ಅಥೇನ್ಸ್‌ಗೆ ಹೋಗುವ ದಾರಿಯಲ್ಲಿ ಹೋಟೇಲಿನವನೊಬ್ಬನ ಸಂಗಡ ತಂಗಿದ್ದಾಗ, ಅವನು ಆ ಮಕ್ಕಳನ್ನು ಕೊಂದು ಉಪ್ಪಿನಕಾಯಿ ಮಾಡಿ ಪಾತ್ರೆಯಲ್ಲಿಟ್ಟನಂತೆ ! ಬಿಷಪ್ ನಿಕೋಲಸ್‌ ಅವರಿಗಾಗಿ ದೇವರಲ್ಲಿ ಪ್ರಾರ್ಥಿಸಲು ಆ ಮಕ್ಕಳಿಗೆ ಮತ್ತೆ ಜೀವ ಬಂತಂತೆ ! ಇದುವೇ ನಿಕೋಲಸನು ಮಕ್ಕಳ ಮನ ಕದಿಯಲು ಕಾರಣವಾಯಿತಂತೆ.

ಮತ್ತೊಂದೆಡೆ ಮೂರು ಹೆಣ್ಣು ಮಕ್ಕಳ ಬಡವನೊಬ್ಬನು ಇದ್ದನಂತೆ. ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿಯಿಂದಾಗಿ ಆ ಮಕ್ಕಳನ್ನು ಮದುವೆ ಮಾಡಿಕೊಡಲು ನಿಶ್ಯಕ್ತನಾಗಿದ್ದನು. ಬಿಷಪ್ ನಿಕೋಲಾಸ್ ಆತನ ಸಹಾಯಕ್ಕೆ ಬಂದು ಮೂರು ಮಕ್ಕಳನ್ನೂ ಮದುವೆ ಮಾಡಿಸಿದನಂತೆ. ಆಗಿನಿಂದ ಬಿಷಪ್ ನಿಕೋಲಾಸ್ ಮಕ್ಕಳಿಗೆ ಉಡುಗೊರೆಗಳನ್ನು ಕೊಡುವುದುನ್ನು ಪ್ರಾರಂಭಿಸಿದನು. ಈತನ ಮರಣಾನಂತರ ಈತನನ್ನು ಸಂತನನ್ನಾಗಿ ಮಾಡಿದರು. ಬಿಷಪ್ ನಿಕೋಲಾಸ್‌ ಸೈಂಟ್ ನಿಕೋಲಾಸ್ ಆಗಿ, ನಂತರ 'ಸಾಂತಾಕ್ಲಾಸ್' ಆದನು.ಈತನ ಗೌರವಾರ್ಥ ದೇವಾಲಯವೊಂದನ್ನು ನಿರ್ಮಿಸಿದರು. ನಂತರ ಅದು ಸುಪ್ರಸಿದ್ಧ ಯಾತ್ರಾ ಸ್ಥಳವಾಯಿತು.

ಸಾಂತಾಕ್ಲಾಸ್ ಇಂದಿಗೂ ಕ್ರಿಸ್ಮಸ್ ಫಾದರ್ ಅಥವಾ ಕ್ರಿಸ್ಮಸ್ ತಾತನೆಂದು ಪ್ರಖ್ಯಾತವಾಗಿದ್ದಾನೆ. ಇಂದಿಗೂ ಕೂಡ ಅನೇಕ ಚರ್ಚುಗಳಲ್ಲಿ ಕ್ರಿಸ್ಮಸ್ ದಿನದಂದು ವ್ಯಕ್ತಿಯೊಬ್ಬ ಈತನ ವೇಷ ಧರಿಸಿಕೊಂಡು ಮಕ್ಕಳಿಗೆ ಉಡುಗೊರೆಗಳನ್ನು ಹಂಚುತ್ತಾನೆ. ಅನೇಕರು ಕ್ರಿಸ್ಮಸ್ ತಾತನ ಚಿತ್ರವಿರುವ ಶುಭಾಶಯ ಪತ್ರಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಒಟ್ಟಿನಲ್ಲಿ ಸಾಂತಾಕ್ಲಾಸ್ ಎಂದರೆ ಮಕ್ಕಳಿಗೆ ಚಿರಪರಿಚಿತವಾದ ದಯೆ ಹಾಗೂ ಕರುಣೆಯ ಸಾಕಾರಮೂರ್ತಿಯಾಗಿದ್ದಾನೆ. ಈತನಲ್ಲಿ ಮಾನವೀಯ ಗುಣಗಳು ತುಂಬಿ ತುಳುಕುತ್ತವೆ.

ಮಕ್ಕಳ, ದೀನದಲಿತರ ಮಿತ್ರ ಸಾಂತಾಕ್ಲಾಸ್ : ಯೇಸು ಸ್ವಾಮಿಯ ಶಿಷ್ಯರು ತಮ್ಮ ಗುರುವಿನ ಹತ್ತಿರ ಒಂದು ಪ್ರಶ್ನೆಯನ್ನು ಕೇಳುತ್ತಾರೆ. “ಗುರುವೇ ಪರಲೋಕದಲ್ಲಿ ಯಾವನು ಹೆಚ್ಚಿನವನು?” ಅದಕ್ಕೆ ಯೇಸು ಒಬ್ಬ ಚಿಕ್ಕ ಬಾಲಕನನ್ನು ಹತ್ತಿರಕ್ಕೆ ಕರೆದು ಅವರ ನಡುವೆ ನಿಲ್ಲಿಸಿ ಅವರಿಗೆ- “ನೀವು ತಿರುಗಿಕೊಂಡು ಚಿಕ್ಕ ಮಕ್ಕಳಂತೆ ಆಗದೆ ಹೋದರೆ ಪರಲೋಕ ರಾಜ್ಯದಲ್ಲಿ ಸೇರುವುದೇ ಇಲ್ಲವೆಂದು

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 177 [ 178 ] ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾವನು ಈ ಚಿಕ್ಕ ಮಗುವಿನಂತೆ ತನ್ನನ್ನು ತಗ್ಗಿಸಿಕೊಳ್ಳುತ್ತಾನೋ ಅವನೇ ಪರಲೋಕ ರಾಜ್ಯದಲ್ಲಿ ಹೆಚ್ಚಿನವನು” ಎಂದು ಹೇಳುತ್ತಾನೆ. ಯೇಸುವಿನ ಬೋಧನೆ ಈ ರೀತಿಯದ್ದಾಗಿತ್ತು. ಮಾನವನ ಹೃದಯ ಮನಸ್ಸು ಹೇಗಿರಬೇಕೆಂದರೆ ಅದು ಮಕ್ಕಳ ಮನಸ್ಸಿನಂತೆ ನಿಷ್ಕಪಟವಾಗಿದ್ದು,ನಿರ್ಮಲವಾಗಿರಬೇಕು. ಯೇಸುವಿನ ಈ ಬೋಧನೆಯ ಸಾರಾಂಶದಂತೆ ಸಾಂತಾಕ್ಲಾಸ್‌ನಿಗೆ ಮಕ್ಕಳ ಮೃದು ಸ್ವಭಾವ ಹೇಗೆ ಮೆಚ್ಚಿಗೆಯಾಗುತ್ತಿತ್ತು. ಮಕ್ಕಳನ್ನು ಆ ಸಂತನು ಹೇಗೆ ಸಂತೈಸುತಿದ್ದ ಎನ್ನುವ ಕತೆಯೊಂದು ಪ್ರಚಲಿತದಲ್ಲಿದೆ.

ಅಂದು ಕ್ರಿಸ್ಮಸ್ ರಾತ್ರಿ, ಮಂಜು ಬೀಳುತ್ತಿತ್ತು. ಮೈ ಕೊರೆಯುವ ಚಳಿಯ ವಾತಾವಾರಣ. ನಿಕೋಲಸನು ಈ ದಿನ ಅಗತ್ಯವಿದ್ದ. ನಿಷ್ಕಲ್ಮಷ ವ್ಯಕ್ತಿಗೆ ಸಹಾಯ ಮಾಡಬೇಕೆಂದು ನಿರ್ಧರಿಸಿ ಒಂದು ಉಪಾಯ ಮಾಡಿ ಬಡ ಮುದುಕನಂತೆ ವೇಷ ಧರಿಸಿಕೊಂಡು ಒಂದು ಭಾರವಾದ ಮೂಟೆಯನ್ನು ಹೊತ್ತುಕೊಂಡು ಜನನಿಬಿಡವಾದ ಮಾರ್ಗವಾಗಿ ಕುಂಟುತ್ತಾ ನಡೆಯಲಾರಂಭಿಸಿದ. ಜನರು ಕ್ರಿಸ್ಮಸ್ ಹಬ್ಬಕ್ಕಾಗಿ ಸಿದ್ಧತೆ ಮಾಡಲು ಬೇಕಾದ ಸಾಮಾಗ್ರಿಗಳನ್ನು ಕೊಳ್ಳುವ ತರಾತುರಿಯಲ್ಲಿದ್ದರು. ಆ ಮುದುಕನು ನಡೆಯುತ್ತಾ ಹೋಗುತ್ತಿರುವಾಗ ಒಬ್ಬನನ್ನು ತಡೆದು- “ಸಹೋದರನೇ ನನ್ನ ಹೊರೆಯನ್ನು ಹೊರಲು ಸ್ವಲ್ಪ ಸಹಾಯ ಮಾಡುವೆಯಾ? “ಎಂದ “ಕ್ಷಮಿಸಿ ನನಗೆ ತುರ್ತಾಗಿ ಕೆಲಸವಿದೆ” ಎಂದು ಆತ ಹೋಗಿಯೇ ಬಿಟ್ಟ. ಮುಂದಕ್ಕೆ ನಡೆಯುತ್ತಾ ಇರುವಾಗ ಒಬ್ಬ ಶ್ರೀಮಂತ ಮತ್ತು ಆತನೊಂದಿಗಿದ್ದ ಸೇವಕನನ್ನು ಕಂಡು ಮುದುಕನು ಆ ಶ್ರೀಮಂತನೊಂದಿಗೆ ದಯಾಳುವೇ ನನ್ನ ಭಾರವಾದ ಈ ಮೂಟೆಯನ್ನು ಹೊರಲು ತಮ್ಮ ಸೇವಕನಿಂದ ನನಗೆ ಸಹಾಯ ಮಾಡಿಸಬಹುದೇ” ಎಂದಾಗ ಆ ಶ್ರೀಮಂತನು “ಸೋಮಾರಿಯ ಹಾಗೆ ಮಾಡಬೇಡ ನಿನ್ನ ಹೊರೆಯನ್ನು ನೀನೆ ಹೊರಬೇಕು” ಎಂದು ಬಿರುಸಾಗಿ ಸೇವಕನೊಂದಿಗೆ ಮುಂದಕ್ಕೆ ನಡೆದ . ಮುದುಕ ಬಳಲುತ್ತಾ ಕುಂಟುತ್ತಾ ಮುಂದಕ್ಕೆ ಸಾಗುವಾಗ ಕೈಯಲ್ಲಿ ಕೋಳಿ ಹಿಡುಕೊಂಡು ಬರುವವನೊಬ್ಬನನ್ನು ಕಂಡು “ ಸ್ವಾಮಿ ನಾನು ತುಂಬಾ ಬಳಲಿದ್ದೇನೆ. ನನ್ನ ಈ ಮೂಟೆಯನ್ನು ಹೊರಲು ಸ್ವಲ್ಪ ಸಹಾಯ ಮಾಡುವೆಯಾ” ಎಂದಾಗ ಆ ಯೌವನಸ್ಥನು “ತಲೆ ನೆಟ್ಟಗಿಲ್ಲವೆ ನಿನಗೆ, ನಾನು ಹಿಡಿದುಕೊಂಡಿರುವ ಕೋಳಿಯನ್ನು ಕೆಳಗಿಟ್ಟು ನಿನಿಗೆ ಸಹಾಯ ಮಾಡಿದರೆ ನೀನು ಕೋಳಿಯನ್ನು ಹಿಡಿದುಕೊಂಡು ಓಡಿ ಹೋಗುತ್ತೀಯ, ಮತ್ತೆ ನಾನು ಕ್ರಿಸ್ಮಸ್ ಹಬ್ಬದೂಟಕ್ಕೆ ಹೇಗೆ ತಯಾರು ಮಾಡಲಿ” ಎಂದು ಮುಂದಕ್ಕೆ ಸಾಗಿದ. ಮುದುಕನು ಸಹಾಯಕ್ಕಾಗಿ ಕಾದನು, ಬೇಡಿದನು ಯಾರೂ ಸಿಕ್ಕಲಿಲ್ಲ. ಆ ಭಾರವಾದ

178 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 179 ]ಮೂಟೆಯನ್ನು ಹೆಗಲ ಮೇಲೆ ಇರಿಸಿಕೊಂಡು ಕಷ್ಟದಲ್ಲಿ ನಡೆಯಲಾರಂಭಿಸಿದನು. ಸ್ವಲ್ಪ ಮುಂದಕ್ಕೆ ಹೋಗುತ್ತಿರುವಾಗ ಒಬ್ಬ ಬಾಲಕನು ಆ ಮಾರ್ಗವಾಗಿ ಬರುತ್ತಿರುವುದನ್ನು ಕಂಡ. ಆತನ ತಲೆಯ ಮೇಲೆ ಕಟ್ಟಿಗೆಯ ಕಟ್ಟೊಂದು ಇತ್ತು. ಮುದುಕನು ಆ ಬಾಲಕನು ಹತ್ತಿರ ಬಂದಾಗ “ಪ್ರಿಯ ಸ್ನೇಹಿತನೇ ಈ ಮುದುಕನಿಗೆ ಸ್ವಲ್ಪ ಸಹಾಯ ಮಾಡಲಾರೆಯಾ?” ಎಂದಾಗ ಆ ಬಾಲಕನು 'ಯಾಕೆ ಮಾಡಬಾರದು? ಖಂಡಿತ ಮಾಡುತ್ತೇನೆ. ಆದರೆ ನಾನು ಈ ಕಟ್ಟಿಗೆಯನ್ನು ಪೇಟೆಗೆ ಮಾರಾಟಕ್ಕಾಗಿ ಒಯ್ಯುತ್ತಿದ್ದೇನೆ. ಅಷ್ಟರ ತನಕ ನೀವು ಕಾಯಬೇಕು, ಇಲ್ಲವಾದರೆ ನೀನು ನನ್ನೊಟ್ಟಿಗೆ ನನ್ನ ಮನೆಗೆ ಬಾ. ನಾನು ಕಟ್ಟಿಗೆಯನ್ನು ಮನೆಯಲ್ಲಿಟ್ಟು ಬಂದು ನಿಮಗೆ ಸಹಾಯ ಮಾಡುತ್ತೇನೆ. ಇಲ್ಲಿಯೇ ಹತ್ತಿರದಲ್ಲಿ ನನ್ನ ಮನೆ ಇದೆ.' ಎಂದಾಗ ಮುದುಕನು ಆ ಹುಡುಗನ ತಲೆಯ ಮೇಲಿದ್ದ ಕಟ್ಟಿಗೆಯ ಮೇಲೆ ತನ್ನ ಭಾರವಾದ ಹೊರೆಯನ್ನೂ ಇಟ್ಟು ಆ ಬಾಲಕನೊಂದಿಗೆ ಅವನ ಮನೆಕಡೆ ನಡೆದ. ಬಾಲಕನಿಗೆ ಹೊರಲಾರದ ಭಾರವಾಗಿದ್ದರೂ ಹೊತ್ತುಕೊ೦ಡು ನಡೆಯಲಾರಂಭಿಸಿದ. ಮೈ ನಡುಗುವ ಚಳಿ, ಮೈ ಮುಚ್ಚುವಷ್ಟು ಬಟ್ಟೆಯೂ ಆ ಹುಡುಗನ ಮೈಮೇಲಿಲ್ಲ. ದಾರಿಯಲ್ಲಿ ಮುದುಕನು ಆ ಹುಡುಗನೊಂದಿಗೆ “ ನೀನು ಎಲ್ಲಿಗೆ ಹೋಗುತ್ತಿದ್ದಿಯಾ ? ಕ್ರಿಸ್ಮಸ್ ಹಬ್ಬಕ್ಕೆ ತಿಂಡಿ ತಿನಿಸು ತರುವುದಕ್ಕಾಗಿಯೋ ? ಎಂದು ಕೇಳಿದ. ಅದಕ್ಕೆ ಆ ಹುಡುಗ, 'ನಾವು ಬಡವರು, ಕ್ರಿಸ್ಮಸ್‌ಗಾಗಿ ಅವನ್ನೆಲ್ಲ ತರಲು ನಾವು ಶಕ್ತರಾಗಿಲ್ಲ. ತಂದೆ ತೀರಿ ಹೋಗಿದ್ದಾರೆ. ನನಗೆ ಎರಡು ತಮ್ಮಂದಿರಿದ್ದಾರೆ, ಒಬ್ಬಳು ತಂಗಿ ಇದ್ದಾಳೆ. ಕಟ್ಟಿಗೆ ಮಾರಾಟ ಮಾಡಿ ನಮ್ಮ ಜೀವನ ಸಾಗಬೇಕಾಗಿದೆ. ತಾಯಿ ನನಗಾಗಿ ಮನೆಯಲ್ಲಿ ಕಾಯುತ್ತಿದ್ದಾರೆ. ಈ ಕಟ್ಟಿಗೆಯನ್ನು ಮಾರಿ ಮನೆಯ ಅಡಿಗೆಗಾಗಿ ಏನಾದರೂ ಪಡೆದುಕೊಳ್ಳಬೇಕಾಗಿದೆ' ಅದಕ್ಕೆ ಆ ಮುದುಕನು ಆದರೆ ಇಂದು ನೀನು ಮನೆಗೆ ಸಾಮಾನು ತೆಗೆದುಕೊಂಡು ಬರುವಾಗ ತಡವಾಗಬಹುದಲ್ಲ? ಆದರೂ ನೀನು ನನಗೆ ಸಹಾಯ ಮಾಡಲು ಬಂದಿದ್ದಿಯಲ್ಲ? ಎಂದಾಗ ಆ ಹುಡುಗನು “ತೊಂದರೆ ಏನು ಬಂತು? ನನ್ನ ತಾಯಿ ನಮಗೆ ಯಾವಾಗಲೂ ಹೇಳುತ್ತಿರುತ್ತಾರೆ ನಮ್ಮಿಂದ ಯಾರೂ ಸಹಾಯ ಬಯಸಿದರೂ ಅಲ್ಲಗಳೆಯಬಾರದೆಂದು. ನೋಡಿ ಇದೇ ನನ್ನ ಮನೆ ಸ್ವಾಮಿ ದಯವಿಟ್ಟು ನಿಮ್ಮ ಮೂಟೆಯನ್ನು ಕೆಳಗಿಳಿಸುವಿರಾ? ಈ ಕಟ್ಟಿಗೆಯನ್ನು ಮನೆಯೊಳಗೆ ಇಟ್ಟು ಬರುತ್ತೇನೆ” ಎಂದು ಒಳಹೊಕ್ಕು ಕಟ್ಟಿಗೆಯ ಕಟ್ಟನ್ನು ಒಳಗಿಟ್ಟು ಹೊರಬಂದು ಮುದುಕನ ಮೂಟೆಯನ್ನು ಬೆನ್ನ ಮೇಲೆ ಹೊತ್ತುಕೊಂಡು “ ಸ್ವಾಮಿ ನಡೆಯಿರಿ ಎಲ್ಲಿಗೆ ಹೋಗಬೇಕು ನಿಮಗೆ” ಎಂದ “ನಿನ್ನ ಮನೆಯ ಒಳಗೆ ಹೋಗು”- ಆ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...179
[ 180 ]ಮುದುಕ ಉತ್ತರಿಸಿದ. ಹುಡುಗ ಆಶ್ಚರ್ಯದಿಂದ ತನ್ನ ಮನೆಯೊಳಗೆ ಪ್ರವೇಶಿಸಿದ, ಆ ಮುದುಕನೂ ಅವನ್ನು ಅನುಸರಿಸಿ ಹೀಗೆಂದು ಹೇಳಿದ “ ಆ ಮೂಟೆಯನ್ನು ಕೆಳಗಿಳಿಸಿ ಅದರ ಕಟ್ಟುಗಳನ್ನು ಬಿಡಿಸು, ಅದರೊಳಗಿರುವುದನ್ನೆಲ್ಲವನ್ನು ತೆಗೆದು ಕೆಳಗಿಡು”. ಹುಡುಗನ ತಾಯಿ, ತಂಗಿ, ತಮ್ಮಂದಿರು ಸುತ್ತ ಸೇರಿ ಬಂದು ನಡೆಯುವ ಸಂಗತಿಯನ್ನು ನೋಡಲಾರಂಭಿಸಿದರು. ಹುಡುಗ ತೆಗೆಯಲಾರಂಭಿಸಿದ-ಹಣ್ಣು ಹಂಪಲು, ಸಿಹಿತಿಂಡಿ, ಬಣ್ಣ ಬಣ್ಣದ ಬಟ್ಟೆಗಳು, ಆಟಿಗೆಗಳು, ಇವೆಲ್ಲವನ್ನು ನೋಡಿ ಹುಡುಗನ ಕಣ್ಣಲ್ಲಿ ಆನಂದ ಬಾಷ್ಪ ಉಕ್ಕಿತು. ಇದು ಒಂದು ಸುಂದರ ಕನಸೋ ಎಂದುಕೊಂಡ. “ಸ್ವಾಮೀ ತಾವು ಯಾರು? ಹುಡುಗನ ಮನೆಯವರೆಲ್ಲರೂ ಒಕ್ಕೊರಲಿನಿಂದ ಪ್ರಶ್ನಿಸಿದರು. ಕೂಡಲೇ ಆ ಮುದುಕನು ತಾನು ತೊಟ್ಟಿದ್ದ ವೇಷವನ್ನು ಕಳಚಿ, ಬಿಷೊಪನ ಉಡುಪಿನಲ್ಲಿ ಅವರೆದುರು ಕಾಣಿಸಿಕೊಂಡ. ಆತ ಇನ್ನಾರು ಆಗಿರಲಿಲ್ಲ, ವೇಷ ಮರೆಸಿ ಬಂದ ಸಾಂತಾಕ್ಲಾಸ್‌ನಾಗಿದ್ದ.

ಸಂತನ ನೆನೆಪು ಸಾಂತಾಕ್ಲಾಸ್ ವೇಷದಲ್ಲಿ : ಇಂದಿಗೂ ಕೂಡಾ ಸಾಂತಾಕ್ಲಾಸ್ ಅಥವಾ ಕ್ರಿಸ್ಮಸ್ ಫಾದರ್, ಮುದಿ ಪ್ರಾಯದ ದೊಡ್ಡ ಹೊಟ್ಟೆ, ಬಿಳಿಯ ಉದ್ದದ ಗಡ್ಡ, ತಲೆಗೆ ಕೆಂಪು ಟೊಪ್ಪಿ, ಕೈಗೆ ಬಿಳಿ ಕೈಚೀಲ, ಕಾಲಿಗೆ ಕಪ್ಪು ಶೂ ಧರಿಸುತ್ತಾ, ಕೈಯಲ್ಲಿ ಬಹುಮಾನಗಳ ದೊಡ್ಡ ಮೂಟೆ ಹೊತ್ತಿರುವ, ತ್ಯಾಗ ಪ್ರೀತಿಗಳ ಪ್ರತೀಕವಾಗಿರುವ ಕ್ರಿಸ್ಮಸ್ ತಾತ ನಮ್ಮ ಕಣ್ಣ ಮುಂದೆ ಶೋಭಿಸುತ್ತಾನೆ. ಕ್ರಿಸ್ಮಸ್ ದಿನದಂದು ಹೆಚ್ಚಿನ ಚರ್ಚುಗಳಲ್ಲಿ ಸಾಂತಾಕ್ಲಾಸ್ ವೇಷ ಧರಿಸಿ ಮಕ್ಕಳಿಗೆ ಉಡುಗೊರೆ ಹಂಚುತ್ತಾನೆ. ಚಿಕ್ಕ ಮಕ್ಕಳೊಂದಿಗೆ ನರ್ತಿಸುತ್ತಾ ಎಲ್ಲರನ್ನೂ ಮನರಂಜಿಸುತ್ತಾನೆ. ಮನೆ ಮನೆಗೆ ಕ್ರಿಸ್ಮಸ್ ಕ್ಯಾರಲ್ಸ್ ಹೋಗುವಾಗ ಕ್ರಿಸ್ಮಸ್ ತಾತನ ವೇಷದಾರಿಯೊಬ್ಬ ಆ ಗುಂಪಿನೊಂದಿಗಿರುತ್ತಾನೆ. ಅನೇಕರು ಕ್ರಿಸ್ಮಸ್ ತಾತನ ಚಿತ್ರವಿರುವ ಶುಭಾಶಯ ಪತ್ರಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಕ್ರಿಸ್ಮಸ್ ಮರದಲ್ಲಿ ಕ್ರಿಸ್ಮಸ್ ತಾತನ ದೊಡ್ಡ ಚಿತ್ರವನ್ನು ನೇತುಹಾಕುತ್ತಾರೆ. ಒಟ್ಟಿನಲ್ಲಿ ಕ್ರಿಸ್ಮಸ್ ಸಂಸ್ಕೃತಿಯಲ್ಲಿ ಕ್ರಿಸ್ಮಸ್ ಮರ, ಶುಭಾಶಯ ಪತ್ರ, ಕ್ರಿಸ್ಮಸ್ ತಿಂಡಿಗಳು, ಕ್ರಿಸ್ಮಸ್ ಕ್ಯಾರಲ್ಸ್, ಬಣ್ಣ ಬಣ್ಣದ ಮೇಣದಬತ್ತಿಗಳು, ವಿವಿಧ ಗೂಡುದೀಪಗಳು ಇವುಗಳಿಗೆ ಹೇಗೆ ಪ್ರಾಶಸ್ತ್ರವಿದೆಯೋ ಹಾಗೆಯೇ ಈ ಸಾಂತಾಕ್ಲಾಸ್ ಅಥವಾ ಕ್ರಿಸ್ಮಸ್ ತಾತನ ನೆನೆಪನ್ನು ಪ್ರತಿ ಕ್ರೈಸ್ತರೂ ಮಾಡುತ್ತಾರೆ. ಮಕ್ಕಳಿಗೆ ಚಿರಪರಿಚಿತನಾದ ಸಾಂತಾಕ್ಲಾಸ್ ದಯೆ ಹಾಗೂ ಕರುಣೆಯ ಸಾಕಾರಮೂರ್ತಿಯಾಗಿದ್ದಾನೆ. ಈತನಲ್ಲಿ ಮಾನವೀಯ ಗುಣಗಳು ತುಂಬಿ ತುಳುಕುತ್ತವೆ. ಈ ಲೊಕದಲ್ಲಿ ಜೀವಿಸುವ ನಮಗೆಲ್ಲರಿಗೂ ಒಳ್ಳೆಯ ಮಾನವೀಯ ಗುಣಗಳಿರಬೇಕೆಂಬುದು ನಮ್ಮೆಲ್ಲರನ್ನು ಸೃಷ್ಟಿಸಿದ ದೇವರ ಬಯಕೆಯಾಗಿದೆ. ಪ್ರತಿ

180 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು. [ 181 ]ಈ ವರ್ಷವೂ ಕ್ರಿಸ್ಮಸ್ ಹಬ್ಬದ ಆಚರಣೆಯ ತಿಂಗಳಲ್ಲಿ ಈ ಸಂತನ ನೆನಪನ್ನು ಮಾಡುವಾಗ ಈ ಸಂಸ್ಕೃತಿಯ ಮೂಲ ಉದ್ದೇಶವನ್ನು ಮನವರಿಕೆ ಮಾಡಿಕೊಂಡು ಹಾಸ್ಯಾಸ್ಪದವಾಗಿ ವರ್ತಿಸದೆ ಗಂಭೀರವಾಗಿ ಈ ಸಂತನ ನೆನಪನ್ನು ಮಾಡೋಣ. ಕ್ರಿಸ್ಮಸ್ ಹಬ್ಬದ ಆಚರಣೆಯಲ್ಲಿ ಸಂತ ಕ್ಲಾಸ್‌ನ ಅಥವಾ ಕ್ರಿಸ್ಮಸ್ ಫಾದರ್‌ನ ನೆನಪು ಮಾಡುವುದು ಯಾಕೆ, ಆತನ ನನ್ನ ಪ್ರತಿಬಿಂಬಿಸುವ ಉಡುಪು, ಕೆಂಪು ಟೊಪ್ಪಿಯನ್ನು ಯಾಕೆ ಧರಿಸುವುದು ಎನ್ನುವುದನ್ನು ಅರಿತುಕೊಂಡು ಆತನನ್ನು ಜೋಕರ್‌ನಂತೆ ಪ್ರತಿಬಿಂಬಿಸದೇ ಇರೋಣ. ಸಂತ ಕ್ಲಾಸ್‌ನ ಬದುಕಿನ ಬಗ್ಗೆ ಅರಿತುಕೊಂಡು ಪ್ರತಿ ವರ್ಷವೂ ಕ್ರಿಸ್ಮಸ್ ಹಬ್ಬವನ್ನು ಆಚರಿಸೋಣ. ಈ ಮೂಲಕ ಸಾಂತಾಕ್ಲಾಸ್‌ನ ಮಾನವೀಯ ಗುಣಗಳು ನಮ್ಮಲ್ಲಿಯೂ ಹಾಸುಹೊಕ್ಕಾಗಿರಲಿ.





ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...181 [ 182 ]

ನವೋದಯ ಪದ್ಯಗಳಲ್ಲಿ ಕ್ರಿಸ್ತ ಜಯಂತಿ

ಕ್ರಿಸ್ತ ಜಯಂತಿಯು ಬಹು ಸಂತೋಷದ ಹಬ್ಬ ಮಹಾಮಹಿಮನಾದ ದೇವರು ಮಾನವರ ರಕ್ಷಣೆಗಾಗಿ ನರಾವತಾರವನ್ನೆತ್ತಿ ಬಂದ ಶುಭದಿನದ ಆಚರಣೆ. ಜಗತ್ತಿನಾದ್ಯಂತ ಈ ಹಬ್ಬವನ್ನು ಆಚರಿಸುತ್ತಾರೆ. ಪ್ರತಿಯೊಬ್ಬರೂ ಇದರಲ್ಲಿ ಸಂತೋಷಪಡುತ್ತಾರೆ.
ಕ್ರಿಸ್ಮಸ್ ಆಚರಣೆಯಲ್ಲಿ ಸಂಗೀತಕ್ಕೆ ವಿಶೇಷ ಪ್ರಾಧಾನ್ಯತೆ ಇದೆ. ಯಾಕಂದರೆ ಕ್ರಿಸ್ತನು ಹುಟ್ಟಿದ ದಿನದಲ್ಲಿ ದೂತರ ಗಾಯನವಿತ್ತು. ಅಂದಿನಿಂದ ಇಂದಿನವರೆಗೆ ಎಲ್ಲೆಲ್ಲಿ ಈ ಹಬ್ಬವನ್ನು ಆಚರಿಸಲ್ಪಡುತ್ತಾರೋ ಅಲ್ಲಲ್ಲಿ ಈ ಹಬ್ಬದ ಶುಭವಾರ್ತೆಯನ್ನು ಸಂಗೀತಗಳ ಮೂಲಕ ಕ್ರೈಸ್ತರು ಪ್ರಕಟಪಡಿಸುತ್ತಾರೆ.
ಕ್ರಿಸ್ಮಸ್ ಸಂಸ್ಕೃತಿಯಲ್ಲಿ ನೂರಾರು ಸಂಗೀತಗಳು ಹುಟ್ಟಿ ಚರಿತ್ರೆ ಸೇರಿವೆ. ಅಲ್ಲದೆ ಹೆಸರುವಾಸಿಯೂ ಆಗಿದೆ. ಹಲವಾರು ಸಂಗೀತಗಳು ಈಗಲೂ ಹಾಡಲ್ಪಡುತ್ತದೆ. ವರ್ಷವೂ ಹೊಸ ಹೊಸ ಸಂಗೀತಗಳು ರಚಿಸಲ್ಪಡುತ್ತದೆ.
ಆದರೆ ಈ ಲೇಖನದಲ್ಲಿ ನೂರಾರು ವರ್ಷಗಳ ಹಿಂದೆ ಕನ್ನಡ ಸಂಗೀತಗಳಲ್ಲಿ ಮೂಡಿ ಬಂದ ಕ್ರಿಸ್ತನ ಜನನದ ಶುಭ ಸಂದೇಶವನ್ನು ಸಾರುವ ಕೆಲವು ಸಂಗೀತಗಳ ಸಾಲುಗಳನ್ನು ಇಲ್ಲಿ ಪರಿಚಯಿಸಲು ಪ್ರಯತ್ನಿಸಲಾಗಿದೆ.
ಕುರುಬರಿಗೆ ಶುಭವಾರ್ತೆ.

(ರಾಗ- ಚೌಪದಿ, ತಾಳ ಉಡಾಪಿ ಝಂಪೆ,
ಯೇಸು ಕ್ರಿಸ್ತನ ಜನನ ಚೌಪದನಗಳು: 1894)


ನರನಂದನಾಯ ನವೋ, ನರನಂದನಾಯ
ನರರಂದನಾಯ ನವೋ, ನರರಕ್ಷಕಾಯ;


ಶ್ರೀಮದಲಾನಂದ ಕ್ರಿಸ್ತನ ಜಯಂತಿ
ಭೂಮಿಯೊಳಗಿರುವ ಮನುಜರಿಗೆ ಸುಖಶಾಂತಿ,
ನಾಮುದದಿ ಪೇಳ್ವೆ ಚೌಪದನದಿ ವಿನಂತಿ


182 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 183 ]

ಪ್ರೇಮಧರ್ಭಕರೋದಲಹುದು ವಿಶ್ರಾಂತಿ
ಅತ್ತಲಾ ಶೀಮೆಯೊಳಗಾ ರಾತ್ರಿಯೊಳಗೆ
ಮೊತ್ತ ಕುರಿಮಂದೆಯನು ಕಾವ ಕುರುಬರಿಗೆ
ಪ್ರತ್ಯಕ್ಷನಭದಿ ದೇವರ ದೂತ ನಿಲಲೂ;
ಸುತ್ತಲೂ ಪ್ರಕಾಶಿಸಿತು ದೇವ ಮಹಿಮೆಗಳು.


ದೂತ ನುಡಿದನು. ಇಗೋ ನಿರ್ಭಯವು ನಿಮಗೆ
ಪ್ರೀತಿಯ ಪ್ರಸಂಗ ಹೇಳುವೆ ಸರ್ವಜನಕೆ
ನಾಥನೀ ದಿನ ಕ್ರಿಸ್ತನೆಂಬ ರಕ್ಷಕನೂ
ಖ್ಯಾತದಾವಿದ ಪಟ್ಟಣದಿ ಪುಟ್ಟಿಹನೂ.


ನಿಮಗಿದೋ ಗುರುತು ಶಿಶು ಗೋದಲಿಯ ಮದ್ಯಾ
ವಿಮಲ ವಸ್ತ್ರದಿ ಸುತ್ತಿ ಮಲಗಿಹುದು ಸದ್ಯಾ
ಅಮಿತ ಪರಲೋಕ ಸೈನ್ಯವು ತತೂಕ್ಷಣಕೆ
ನಮಿಸಿದುದು ದೂತನೊಡನಧಿಕ ಕರ್ತನಿಗೆ.


ಕರ್ತಗೆ ಮಹೋನ್ನದಿ ಮಹಿಮೆ, ಧಾತ್ರಿಯಲಿ
ವರ್ತಿಪ ಸಮಾಧಾನ, ದಯವು ಮರ್ತ್ಯರಲ್ಲಿ
ಮತ್ತವರು ಹಾಡಿ ತೆರಳಲು ಕುರುಬರಾಗಾ
ಬೆತ್ಲೆಹೇಮಿಗೆ ಬಂದು ಕಂಡರಿತಿ ಬೇಗಾ.


ಮೂಡಣದ ಪಂಡಿತರು ಬಾಲಯೇಸುವ ಕಾಣಲು ಬಂದದ್ದು.
(ಭಾಮಿನಿ ಷಟ್ನದಿ, ಫ. ಕಿಟೆಲ್, ಕಥಾಮಾಲೆ. 1862)


ಯೇಸು ಕನ್ನಿಕೆಯಿಂದ ಹುಟ್ಟಿರೆ
ಲೇಸುವಾಹಿತು ಲೋಕಕಾದರು
ಕೂಸ ಮನ್ನಿಸುವದಕೆ ಬಾರರೆರೂಸಲೇಮವರೂ
ಆಸರೆನ್ನದೆ ಪಯಣ ಮಾಡುತೆ-
ರೂಸಲೇಮಿಗೆ ಕೂಸ ನೋಡಲಿ-

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 183 [ 184 ] ಕೋಸುಗೋದಗಿದರೊಲೆದು ಮೂಡಣ ದೆಸೆಯ ಪಂಡಿತರೂ</poem>

ನಗರ ಬಿಟ್ಟಾ ಮೂಡಲವರಿಗೆ
ಲಗುವು ಬಡೆಯಿತು ಹೃದವು, ತೋರಲು
ಗಗನಮುಖದಲ್ಲಿ ಮರಿಯುದಿಸಿದ ಪೂರ್ವ ಹೊಂತಾರೆ
ಜಗದ ಪತಿಯವತರಿಸಿದೆಡೆಯದು
ಮಿಗುಲು ಚಂದದಿ ಮೇಲೆ ನಿದ್ದರೆ,
ಚಿಗಿತ ಹೃತ್ಕಮಲಾತ್ಮರತಿ ಸುಕದಿಂದೊಳ್ಳೆದಿದರೂ
ಆಗ ಕಂಡ ದಿವ್ಯ ಕೂಸನು
ತೂಗಿ ಶಿರಸವನಡ್ಡ ಬಿದ್ದವ
ರಾಗಿ, ಗಂಟನು ಬಿಚ್ಚಿ, ಗುಗ್ಗುಳ ಧೂಪ ಹೇಮವನೂ
ಬೇಗವರ್ಪಿಸಿ ಬಹಳ ಹರುಷದ
ರಾಗ ಪಡುತಲೆ ಕಷ್ಟದಧ್ವದಿ
ಸಾಗಿ ಬಂದದನೆಲ್ಲ ಮರೆತರು ಕಂಡ ದರ್ಶನಕೇ.

ಕೂಸ ನೋಡೋಣ ಬನ್ನಿ (ರಾಗ: ಶಂಕರಾಭರಣ- ಅಟ್ಟತಾಳ, ಯೋಸೇಫಪ್ಪ ದಲಭಂಜನ, ಕ್ರಿಸ್ತದಾದರ ಪದಗಳು, 1932)

ಕೂಸ ನೋಡೋಣ ಬನ್ನಿ ಯೇಸು ಸ್ವಾಮಿ
ಕೂಸ ನೋಡೊಣ ಬನ್ನಿ.
ಕೂಸ ನೋಡೋನ ಬನ್ನಿ ಮಾಸಿದ ಬಟ್ಟೆಯಲ್ಲಿ
ಹಾಸಿದ ಅರವೆಯಲಿ- ಮಾಸದ ಹಸಕೂಸ
ದೂತನು ಪೇಳಲಿಲ್ಲೇ-ಹುಟ್ಟಿದ ಶಿಶು
ಬೇತಲಹೇಮಿನಲ್ಲೇ
ಬೇತಲಹೇಮದಿ-ನಾಥನು ಜನಿಸಿದ
ನೂತನ ಜೀವದ-ಬಾತನು ಆದಂಥಾ.

184 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 185 ] ಮಾನವ ನಿನಗಾಗಿಯೇ-ಬಾನವ ಬಿಟ್ಟ ಮಾನವ ನಿನಗಾಗಿಯೇ ಮಾನವ ನಿಗಾಗಿ-ಮಾನಿನಿಯುದರದಿ ದಾನವ ಕೊಡ ಬಂದ-ಮಾನವನಾದೇಸು.</poem>

ಮರಿಯಾಂಬಾ ಪುತ್ರ ಅತಿ ಸುಂದರಾಂಗ (ರಾಗ: ಶಂಕರಾಭರಣ, ಕೀರ್ತನೆಗಳು 1906.)

ಕೂಡಿ ದೂತರಿಂದು ಧರಣಿ ಗೋಡಿ ಸೇರಿದರು ಪರನ
ಹಾಡಿಪಾಡಿದರು ಗುರುವ ನೋಡ ಸಾರಿದರು.
ಕೂಡಿಂದು ಬನ್ನಿರಿ ಹಾಡನ್ನು ತನ್ನಿರಿ

ಪಿತನ ನೇಮಕದ ದಿನವ ಸುತನು ತಪ್ಪಿಸದೆ ಇಳಿದು
ಬೆತಲೆಹೇಮಿನೊಳು ಇಂದು ಹಿತನು ಹುಟ್ಟಿದನು
ಪತನೇಕಪುತ್ತನು ಅತಿ ಸುಂದರಾಂಗನು

ಪರಮ ಲೋಕವನ್ನು ಬಿಟ್ಟು ಧರಣಿ ಸೇರಿದನು ಹೀಗೆ
ನರನು ಆದಮನು ದಿವ್ಯ ಕರುಣೆ ತೋರಿದನು
ಮರಿಯಾಂಬಾ ಪುತ್ರನು ಪರಿಪೂರ್ಣ ಮಿತ್ತನು.

ಯೇಸು ಬಂದ ಹಬ್ಬ (ಬಾಲಕರ ಗೀತಗಳು. 1904)

ಯೇಸು ಬಂದ ಹಬ್ಬ ವರ್ಷ ವರ್ಷಕ್ಕು
ಮಾಡುತ್ತೇವೆ ಅಬ್ಬ ಎಷ್ಟುಲ್ಲಾಸವು

ಪ್ರತಿಹಬ್ಬದಲ್ಲಿ ಯೇಸು ಮಗುವು
ಮನೆಮನೆಯಲ್ಲಿ ಇಳಿಯುವದು

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.

185 [ 186 ]

ಎಲ್ಲ ಜನರನ್ನು ದೃಷ್ಟಿಸುತ್ತದೆ
ಶುದ್ಧ ಮಕ್ಕಳನ್ನು ಪ್ರೀತಿಸುತ್ತದೆ.
ಯೇಸು ಪ್ರೀಯ ಯೇಸು ಬಾ ಬಾ ನನ್ನೊಳು
ಬಂದರೆಂಗೆ ಲೇಸು ಇಂದು ಎಂದಿಗೂ

ಕ್ರಿಸ್ತ ಹುಟ್ಟಿದ್ದಾನೆ. (200. 20. Zones. 1922)

ಇಂದು ಬಂದು ನಲಿದಾಡಿ
ಮಕ್ಕಳೇ ವೃದ್ಧರೇ
ನರರೆಲ್ಲ ಹಾಡಿ
ಇಂದು ಸರ್ವ ವಿಶ್ವ ಶಾನೆ
ಹಾಡುತೆ ಪಾಡುತೆ
ಕ್ರಿಸ್ತ ಹುಟ್ಟಿದ್ದಾನೆ.

ದಿವ್ಯ ಪ್ರಭೆಯೊಳಗಿಂದ
ಇಳಿದ ಒಡೆಯ
ಕನಿಕರದಿಂದ
ಎಂಥಾ ದಿವ್ಯ ಮಮಕಾರ
ನೋಡಿರಿ ನಂಬಿರಿ
ದೇವರವತಾರ.

186 ಈ ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 187 ] ತುಳುನಾಡ್‌ ಸಾಹಿತ್ಯ ಚರಿತ್ರೆಡ್ ನೆಂಪು ಸಂಚಿಕೆ ಪಾತ್ರ

ತುಳುನಾಡ್‌ದ ಸಾಹಿತ್ಯ ಚರಿತ್ರೆಡ್ ಪುದರ್ ಪೋಯಿ ಸಾಹಿತಿಳೆ ನೆಂಪುಗಾದ್‌ ಸುಮಾರ್ ವರ್ಸೊಡ್ಡಿಂಚಿ ಮಸ್ತ್ ಗ್ರಂಥೋಳು ಪ್ರಕಟ ಆವೊಂದುಳ್ಳ. ಐವ, ಅಜ್ಜ, ಎಲ್ಲತೈನ್ ವರ್ಷದ ಹುಟ್ಟು ಪರ್ಬದ ನೆಂಪುದಪಗ, ಮಲ್ಲ ಸಾಧನೆ ಮಳ್ತಿನದಗ ಈ ಸಂಚಿಳು ಅಭಿನಂದನ ಸಂಪುಟ, ಸಂಸ್ಕರಣ ಗ್ರಂಥ, ನೆನಪಿನ ಗ್ರಂಥ ಇಂಚ ಬೇತೆ ಬೇತೆ ಪುದರ್‌ಡ್ ಪ್ರಕಟ ಆವೊಂದುಂಡು.

ಊರ, ಪರವೂರ, ಹಿತೈಷಿಳೆ, ಶಿಷ್ಯರೆ, ಕುಟುಂಬ ವರ್ಗದಕಲ್ನ ಸಹಕಾರೊಡು ಗ್ರಂಥೋನು ಪ್ರಕಟ ಮಳ್ಪು ಮಲ್ಲ ಸಾಧನೆಗೆ ಕೈ ಪಾಡುನವು ಸಾಹಸದ ಬೇಲೆ ಆಂಡಲಾ ಮದಪೆರೆ ಆವಂದಿ ಸಾಹಿತಿಳೆನ ವಿಚಾರೊನು ದಾಖಲ್ ಮಲ್ತ್ ದ್ ಅಗಲೆಗ್ ಪುಗರ್ತೆ ಕೊರ್ತಿನವು ಮಲ್ಲ ಸಂಗತಿ ಆದುಂಡು.

ಉಂದು ದಾಲಾ ಸುಲಭದ ಬೇಲೆ ಅತ್, ಸಂಪಾದಕೆರ್‌ನಗ ಒಂಜಿ ಮಂಡಳಿನ್ ಮತ್ತೊಂದು ಎರೆ ನೆಂಪುಗಾದ್ ಸಂಚಿ ತಯಾರ್‌ ಆಪುಂಡಾ ಅಗಲ್ಪ ಒಪ್ಪಿಗೆ ದೆತೊನುಡು, ಅಗಲ್ನ ಪಾಸಡಿದಕಲೆನ್, ಕುಟುಂಬದಕಲೆನ್ ನೆಂಪು ಮಲ್ಲೊಡಾಯಿನರೆನ ಸಾಹಿತ್ಯ, ಬರವು, ಸೇವೆ, ನೆತ್ತ ಸರಿಯಾಯಿನ ಪೊಲಬು ಇತ್ತಿ ಶಿಷ್ಯ ಮಂಡಳಿನ್ ಒಟ್ಟು ಮಳ್ತೊಂದು ಎನ್ನ ಅಣ್ಣೆ, ಎನ್ನ ದೋಸ್ತಿ, ಪುಸ್ತಕ ಪ್ರೇಮಿ, ಯಾನ್ ತೂಯಿಲೆಕ್ಕ, ಮದಪೆರೆ ಆವಂದಿನಾ‌, ಚರಿತ್ರೆಡ್ ಪುದರ್ ಮತ್ತಿನಾರ್, ಅತ್ತಂದೆ ನೆಂಪು ಮಡಾಯಿನರೆಗ್ ಸಂಬಂಧ ಪಡೆಯಿ ಕ್ಷೇತ್ರದ ಲೇಖನೊಳು, ಚರಿತ್ರೆ, ಸಂಸ್ಕೃತಿ, ಭಾಷೆ ಇಂಚಿತ್ತಿ ಎಡ್ಡೆ ಗುಣ ಮಟ್ಟದ ಲೇಖನ ಅಗಲೆಡ್ ಬರೆಪಾದ್ ಮಸ್ತ್ ಕಾಸ್ ಪಾಡ್ ಉಂದೆನ್ ಬೊಳುಗು ಕನವೊಡಾಪುಂಡು.

ಇಂಚಿತ್ತಿ ನೆಂಪು ಸಂಚಿಡ್ಜ್ ತುಳುನಾಡ್‌ದ ಸಾಹಿತಿಳೆನ ಪರಿಚಯ ಅಗಲ್ನ ಪ್ರಕಟ ಆಯಿ ಸಾಹಿತ್ಯದ ಪೊರ್ಲು ಪ್ರಕಟ ಆವಂದಿ ಸಾಹಿತ್ಯದ ತಿರ್ಲ್ ಮಾತ್ರ ನಂಕ್ ತೆರಿವುನತ್ತಂದೆ ಚರಿತ್ರೆ, ಸಂಸ್ಕೃತಿ, ಸಾಹಿತ್ಯ, ಜನಜೀವನ, ಪಿರವುದ ಕಾಲದ ಸ್ಥಿತಿ, ಇಂಚ ತುಳು ಜಿಲ್ಲೆದ ಮಾತಾ ಕ್ಷೇತ್ರದ ವಿಚಾರದ ಅಧ್ಯಯನ ಲೇಖನೊಳು ನೆಟ್ ತಿಕ್ಕುಂಡು. ಇಂಚಿತ್ತಿ ನೆಂಪು ಸಂಚಿಲು ಬರೆಪಿನಗಲೆಗ್, ಓದುನಗಲೆಗ್

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 187 [ 188 ] ಮಾರ್ಗದರ್ಶನ ಕೊರ್ಪಿನವು ಆದಿತ್ತಿನೆಡ್ ಉಂದೆತ್ತ ಸಂಗ್ರಹ ಮನೊಡು. ನೆತ್ತ ಸಹಾಯ ಪಡೆಪಿನವು ಮದಪೆರಾವಂದಿನಗಲೆನ್ ಮಾನಾದಿಗೆ ಮತ್ತೊಂದು ತೆರಿವೊನ್ನವು ಮಾತ್ರ ಅತ್ತೆ ನಮನ್, ನಮ್ಮ ನಾಡ್‌ನ್ ತೆರಿಯೊಂಡಿಲೆಕ್ಕ ಆಪುಂಡು.

ಪ್ರಕಟ ಆಯ್ಕೆ ಕೆಲವು ನೆಂಪು ಸಂಚಿಕೆ ಪರಿಚಯ ಮತ್ತೊಂಡ ಐತ ಪೊರ್ಲು, ಐತ ಬಿಲೆ, ಐತ ವಿಚಾರ ಎಂಚಿನವು ಪಂಡ್ಸ್ ನಂಕ್ ತೆರಿವು .

ಸುದರ್ಶನ- ಉಂದು ಡಾ. ತೋನ್ಸೆ ಮಾದವ ಅನಂತ ಪೈ ಮೆರೆನ ನೆಂಪುದ ಸಂಚಿ. 1977ಟ್ಸ್ ಪ್ರಕಟ ಆಯಿ 594 ಪುಟತ್ತ ಈ ಸಂಚಿದ ಸಂಪಾದಕ‌ ಅಡ್ಯನಡ್ಕ ಕೃಷ್ಣ ಭಟ್. ಜೀವನದರ್ಶನ, ರಂಗದರ್ಶನ, ಹಿನ್ನೆಲೆ- ಈ ವಿಭಾಗೊಳೆಡ್ ಅರೆ ಬದ್‌ಕ್‌ ವಿಚಾರ ಇತ್ತಂಡ, ತುಳುನಾಡ ಚರಿತ್ರೆ, ಸಾಹಿತ್ಯ, ಭೂತಾರಾದನೆ, ಸಂಸ್ಕೃತಿ, ಬ್ಯಾಂಕ್, ಶಿಕ್ಷಣ, ವೈದ್ಯಕೀಯ, ಪ್ರಕೃತಿ ಇಂಚ ಬೇತೆ ಬೇತೆ ವಿಚಾರದ ಸುಮಾರ್ 120 ಸಾಹಿತಿ ಲೇಖನೊಲು ನೆಟ್ಟುಂಡು.

ಲೋಕ ಮಿತ್ರ- ಉಂದು ಪ್ರೊ. ಕು.ಶಿ ಹರಿದಾಸ ಭಟ್‌ ಮೆರೆನ ನೆಂಪು ಸಂಚಿ. ನೆತ್ತ ಸಂಪಾದಕೆರ್ ದೇ ಜವರೇ ಗೌಡ. 1989 ಪ್ರಕಟ ಆಯಿ ಬೂಕುಡು 335 ಪುಟೊಕ್ಕುಲು ಇತ್ತ ಆಗುಲು ಮೊಗುಲು ತೂಯಿಲೆಕ್ಕ, ಕು.ಶಿ ಸಾಹಿತ್ಯದ ನಿಲೆ ಬಿಲೆ, ಸಾಧನೆ, ಸಿದ್ದಿ, ಈ ಮೂಜಿ ವಿಭಾಗೊಡು ಅರೆನ ಬೊಕ್ಕ ಅರೆನ ಸಾಹಿತ್ಯದ ವಿಚಾರ ಇತ್ತಂಡ ಧಾರ್ಮಿಕ ಆಚರಣೆ, ಉಡುಪಿದ ರಂಗಕಲೆ ಅಧ್ಯಯನ ಕೇಂದ್ರದ ವಿಚಾರ ಇಂಚಿತ್ತಿ ಸುಮಾರ್ 35 ಲೇಖಕೆರೆ ಬೇತೆ ಬೇತೆ ಲೇಖನೊಳು ಉಂಡು.

ಸೂರ್ಯಕೀರ್ತಿ- ಉಂದು ಡಾ. ಸೂರ್ಯನಾಥ ಕಾಮತೆರೆನ ನೆಂಪುದ ಸಂಚಿ, ನೆತ್ತ ಸಂಪಾದಕೆರ್‌ ಪಿ.ವಿ ಕೃಷ್ಣಮೂರ್ತಿ ಬೊಕ್ಕ ಡಾ. ಕೆ. ವಸಂತಲಕ್ಷ್ಮಿ, 635 ಪುಟತ್ತ ಈ ಬೂಕು 2000ಟ್ಸ್ ಪ್ರಕಟ ಆತ್‌ಂಡ್. ಸುರುಟ್ಟು ಇತಿಹಾಸ, ಸಂಸ್ಕೃತಿ, ಪುರಾತತ್ವ, ಶಾಸನ, ವಾಸ್ತುಶಿಲ್ಪ, ಕಡೆಕ್ ಬದಕ್ ಬರವು ಇಂಚಿತ್ತಿ ಸುಮಾರ್ 70 ಲೇಖಕೆರ್‌ನಗಲ್ಲ ಲೇಖನ ಉಂಡು.

ಏರ -ಉಂದು ಏರ ಲಕ್ಷ್ಮಿನಾರಾಯಣ ಆಳ್ವೆರೆ ನೆಂಪುದ ಸಂಚಿ. 1999ಟ್ಸ್ ಪ್ರಕಟ ಆತಿ ಈ ಬೂಕುಡು 588 ಪುಟ ಇತ್ತ್ದ್ ಸರ್ವ ಶ್ರೀ ಅಮೃತ ಸೋಮೇಶ್ವರ, ಬಿ.ಎ. ವಿವೇಕ ರೈ, ಎಂ. ರಾಮಚಂದ್ರ, ಪ್ರಭಾಕರ ಜೋಶಿ, ಪಾದೆಕಲ್ಲು ವಿಷ್ಣು ಭಟ್ಟ, ಜಿ. ಎನ್. ಭಟ್, ನಾಗರಾಜ ಜವಳಿ ಮೊಗಲ್ನ ಸಂಪಾದಕ ಮಂಡಲಿಡ್ ಈ ಸಂಚಿ ತಯಾರಾತ್‌ಂಡ್. ಮೂಜಿ ಭಾಗೊಡು ಏರ ಮೆರೆನ ವಿಚಾರ ಸಾಹಿತ್ಯ ಇತ್ತೆಂಡ ನಾಲನೇ ಭಾಗೊಡು ಸಾಂಸ್ಕೃತಿಕ ತುಳುನಾಡು, ಕುಣಿತ, ಸಾಹಿತ್ಯ, ಯಕ್ಷಗಾನ ಇಂಚ ಸುಮಾರ್ 60 ಲೇಖಕೆರ್‌ನಗ ಲೇಖನೊಳು ಉಂಡು.

188 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 189 ]ಸಿರಿ- ಉಂದು ಪ್ರೊ. ಅಮೃತ ಸೋಮೇಶ್ವರ ಮೆರೆನ ನೆಂಪುದ ಸಂಚಿ. ಡಾ. ಪುರುಷೋತ್ತಮ ಬಿಳಿಮಲೆ, ಶ್ರೀ ಎ.ವಿ. ನಾವಡ, ವಿದ್ವಾನ್ ರಾಮಚಂದ್ರ ಉಚ್ಚಿಲ ಮೊಗುಲು ಈ ಬೂಕುದ ಸಂಪಾದಕೆರ್‌ನಗುಲು, 1995ಟ್ಟ್ ಪ್ರಕಟ ಆಯಿ ಈ ಬೂಕುಡು 476 ಪುಟೊಕ್ಕುಲು ಇತ್ತ್‌ದ್ ಆಜಿ ವಿಭಾಗೊಡು ಸುಮಾರ್ 70 ಲೇಖಕೆರ್‌ನಗಲ್ನ ಅಮೃತೆರೆ ಬೊಕ್ಕ ತುಳುನಾಡ್‌ದ ವಿಚಾರೊಡು ಬೇತೆ ಬೇತೆ ಲೇಖನೊಳು ನೆಟ್ಟುಂಡು.
ನುಡಿ ಒಸಗೆ- ಉಂದು ಡಾ ಕೆ. ಕುಶಾಲಪ್ಪ ಗೌಡ ಮೆರೆನ ನೆಂಪುದ ಸಂಚಿ. ನೆತ್ತ ಸಂಪಾದಕೆ‌ರ್ ಡಾ. ಕೆ. ಚಿನ್ನಪ್ಪ ಗೌಡ, 2005ಟ್ಟ್ ಪ್ರಕಟ ಆಯಿ ಈ ಬೂಕುಡು 328 ಪುಟೊಕ್ಕುಲು ಇತ್ತ್‌ದ್ ನೆಟ್ಟ್ ಬದುಕಿನೊಸಗೆ, ಬರಹದೊಸಗೆ, ಸಿರಿಯೊಸಗೆ ಮನದೊಸಗೆ, ಮನೆಯೊಸಗೆ, ಪತ್ನಿ ವಿಭಾಗೊಳು ಇತ್ತ್‌ದ್ 56 ಬೇತೆ ಬೇತೆ ಲೇಖಕರ್‌ನಗಲ್ನ ಲೇಖನೊಳು ನೆಟ್ಟುಂಡು.
ಸ್ವರ್ಣಕಮಲ- ಉಂದು ಅರ್ಕುಳ ಸುಬ್ರಾಯ ಆಚಾರ್ಯ ಮೆರೆನ ನೆಂಪುದ ಸಂಚಿ. 1988 ಟ್ಟ್ ಪ್ರಕಟ ಆಯಿ ಈ ಬೂಕುಡು 437 ಪುಟೊಕ್ಕುಲು ಇತ್ತ್‌ದ್ ಪ್ರೊ. ಎಂ.ಆರ್. ಶಾಸ್ತ್ರಿ ಮೇರ್‌ ಗೌರವ ಸಂಪಾದಕೆರಾದ್, ಮುಳಿಯ ಮಹಾಬಲ ಭಟ್ಟ ಮೇ‌ರ್ ಪ್ರಧಾನ ಸಂಪಾದಕೆರಾದ್ ಉಂದೆನ್ ತಯಾರ್ ಮಳ್ತ್‌ದೆರ್, ನೆಟ್ಟ್ ಬದ್‌ಕ್‌‌ದ ವಿಚಾರದೊಟ್ಟುಗು ಯಕ್ಷಗಾನೊಗು ಸಂಬಂದ ಪಡೆಯಿ ಸುಮಾರ್ 46 ಲೇಖಕೆರ್‌ನಗಲ್ನ ಲೇಖನೊಳು ಉಂಡು.
ಸಹಸ್ರ ಚಂದ್ರ-ಉಂದು ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟ ಮೆರೆನ ನೆಂಪುದ ಸಂಚಿ, 1999ಟ್ಟ್ ಪ್ರಕಟ ಆಯಿ ಬೂಕುಡು258 ಪುಟ ಇತ್ತ್‌ದ್ ನೆತ್ತ ಸಂಪಾದಕ ಮಂಡಳಿಡ್ ಪೆರ್ಲ ಯಸ್. ಕೃಷ್ಣ ಭಟ್ ವಿದ್ವಾನ್, ಹಿರಣ್ಯ ವೆಂಕಟೇಶ್ವರ ಭಟ್ಟ, ಭಾಸ್ಕರ ರೈ ಕುಕ್ಕುವಳ್ಳಿ, ಜಿ. ಕೆ. ಭಟ್ ಸೇರಾಜೆ, ಯಸ್, ವಾಸುದೇವರಾಜ್ ಮೊಗುಲು ಬೇಲೆ ಮಲ್ತ್‌ದೆರ್, ಶೇಣಿ ಪ್ರತಿಭಾಲೋಕ, ಶೇಣಿ ದರ್ಶನಾಲೋಕ, ಯಕ್ಷಗಾನಲೋಕ, ಜ್ಞಾನಲೋಕ, ಇಂಚ ನಾಲ್ ಭಾಗೊಳೆಡ್ ಲೇಖನೊಳು ಇತ್ತಂಡ ಐನನೆ ಬಾಗೊಡು ಯಕ್ಷಗಾನ ಪ್ರಸಂಗಾಲೋಕ ಪನ್ನಿ ವಿಭಾಗೊದ ಯಕ್ಷಗಾನ ಪ್ರಸಂಗ ಸೂಚಿ ಪನ್ಸಿ ಲೇಖನೊಡು ಸುಮಾರ್ ರಡ್ಜ್ ಸಾರ ಯಕ್ಷಗಾನೊಳೆ ಮಲ್ಲ ಪಟ್ಟಿಯೇ ಇತ್ತ್‌ದ್ ಐಟ್ ಐತ ಪ್ರಸಂಗ ಕರ್ತುಳೆನ ಪುದ ರ್‌ದ ಒಟ್ಟುಗು ಉಂಡು.
ಕೆಲವು ನೆಂಪುದ ಸಂಚಿಲು ಸಾಹಿತಿಳನೆ ಸಮಗ್ರ ಸಂಪುಟದ ಲೆಕ್ಕಲಾ ಬರೊಂದುಂಡು. ಅಂತೂ ಈ ನೆಂಪು ಸಂಚಿಲು ಅದ್ಯಯನೊಗು ಯೋಗ್ಯದವು

ತುಳುನಾಡಿನಲ್ಲಿ ಬಾಸೆಲ್ ಮಿಶನ್‌ ಮತ್ತಿತರ ಲೇಖನಗಳು.189 [ 190 ] ಆದಿತ್ತ ಸಾಹಿತ್ಯಾಭ್ಯಾಸಿಳೆಗೆ ನೆತ್ತ ಪ್ರಯೋಜನ ಜಾಸ್ತಿ.

ಅಕ್ಕರೆ-ಉಂದು ವ್ಯಾಸರಾಯ ಬಲ್ಲಾಳ ಮೆರೆನ ನೆಂಪುದ ಸಂಚಿ.1999

ಸಿರಿ ನಿವಾಸ ಉಂದು ಯು. ಶ್ರೀನಿವಾಸ ಮಲ್ಯ ಮೆರೆನ ನೆಂಪುದ ಸಂಚಿ, ಸಂ. ನಾ ದಾಮೋದರ ಶೆಟ್ಟಿ.

ತುಳುವಾಲ- ಉಂದು ನಂದಳಿಕೆ ಅಮುಣಂಜೆಗುತ್ತು ಶೀನಪ್ಪ ಹೆಗ್ಡೆ ಪೊಳಲಿ ಮೆರೆನ ನೆಂಪುದ ಸಂಚಿ, 1990 ಕೆರೋಡಿ ಸುಬ್ಬರಾಯರು- 1989. ಕಟ್ಟಿಂಗೇರಿ ಕೃಷ್ಣ ಹೆಬ್ಬಾರ 1988.

ರಂಗವೈಖರಿ- ಉಂದು ಶ್ರೀ ಮಾಂಬಾಡಿ ನಾರಾಯಣ ಭಾಗವತೆರೆ ನೆಂಪುದ 03. 1981.

ಮುಳಿಯ ಮಹಾಬಲ ಭಟ್ಟ- 2001

ಶತಾಂಜಲಿ- ಉಂದು ಸೇಡಿಯಾಪು ಕೃಷ್ಣ ಭಟ್ಟ ಮೆರೆನ ನೆಂಪುದ ಸಂಚಿ. 2002

ಸಾರ್ಥಕ- ಉಂದು ಪ್ರೊ. ಎಂ. ಮರಿಯಪ್ಪ ಭಟ್ ಮೆರೆನ ನೆಂಪುದ ಸಂಚಿ, 1995

ಪ್ರವರ್ಧಮಾನ- ಉಂದು ಶ್ರೀ ವೀರೇಂದ್ರ ಹೆಗ್ಗಡೆ ಮೆರೆನ ನೆಂಪುದ ಸಂಚಿ. 1993

ದೀವಿಗೆ- ಉಂದು ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಮೆರೆನ ನೆಂಪುದ 023, 1999.

ಉಂದು ಕೆಲವು ನೆನೆಪು ಸಂಚಲನ ಪರಿಚಯ. ಇತ್ತಿತ್ತೆ ಯಕ್ಷಗಾನ, ನಾಟಕ, ಸಾಹಿತಿ, ಸಮಾಜ ಸೇವೆ, ರಾಜಕೀಯ, ಶೈಕ್ಷಣಿಕ, ವೈದ್ಯಕೀಯ ಇಂಚ ಮಾತಾ ಕ್ಷೇತೊಲೆಡ್ ಸಾದನೆ ಮಲ್ತಿನಕಲ್ಪ ಮದೆಪೆರಾವಂದಿ ಮಹನೀಯೆರ್‌ನಕಲ್ಪ ನೆಂಪು ಸಂಚನ್ ಸಂಗ್ರಹೊಲೆನ್ ಒಟ್ಟು ಮಲ್ಲೊನ್ನು ಓದೊಯ್ದು ಚರಿತ್ರೆ ತೆರಿಪಾವುನ ಇಂಚಿತ್ತಿ ಸಂಚಲೆನ್ ಅಧ್ಯಯನ ಮಲ್ಲುಗ.

190

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 191 ]

ತುಳುನಾಡ್‌ದ ಕ್ರೈಸ್ತೆರ್ ಒರಿಪಾವೊಂದು

ಬತ್ತಿ ಪಾರಂಪರಿಕ ಗೇನ

ತುಳುನಾಡ್‌ಡುಪ್ಪುನ ಕ್ರೈಸ್ತರೆ ಆಚಾರ ವಿಚಾರೊಲು ತುಳುನಾಡ್‌ದ ಸಂಸ್ಕೃತಿಗ್ ಹೊಂದೊಂದು ಪೊವೊಂದುಂಡು, ಕ್ರೈಸ್ತರೆ ನಂಬಿಕೆ ಆರಾಧನೆ ಬೇತೆ ಆದುಪ್ಪು. ಆಂಡ ಓದುನ ಧರ್ಮಶಾಸ್ತ್ರ ಅವು ತುಳುನಾಡ್‌‌ಡ್ ಪಾತೆರುನ ಕನ್ನಡ, ತುಳು, ಕೊಂಕಣಿಡ್ ಉಂಡು. ಅಂಚಾದ್ ಮೂಜಿ ಬಾಷೆನ್‌ಲಾ ಧರ್ಮಶಾಸ್ತ್ರ ಓದರೆ ಕಲ್ಪೆರೆ ಬಳಕೆ ಮಲ್ಲುವೆರ್. ಆರಾಧನೆಡ್ ಬೊಕ್ಕ ಇಲ್ಲಲೆಡ್ ಮಲ್ಪುನ ಭಜನೆ, ಸಂಗೀತೊಲೆಡ್ ಹೆಚ್ಚಿನವು ಜರ್ಮನ್ ಬೊಕ್ಕ ಪೋರ್ಚ್‌ಗೀಸ್ ಶೈಲಿದವು ಆಂಡಲಾ ಇತ್ತೆ ದೇಶಿಯ ಬೊಕ್ಕ ಜಾನಪದ ಶೈಲಿದ ಪದೊಕ್ಲೆನ್ ಹೆಚ್ಚ ಬಳಕೆ ಮಲ್ಪುನ ಕ್ರಮ ಬೈದ್‌ಂಡ್.
ತುಳುನಾಡ್‌ ಪ್ರೊಟೆಸ್ಟಂಟ್‌ ಕ್ರೈಸ್ತರೆ ಅರಾಧನೆಲೆಡ್ ತುಳು ಹೆಚ್ಚ ಬಳಕೆಡ್ ಉಂಡು. ತುಳುಟ್ಟು ಬೈಬಲ್ ಪಠನ ಇತ್ತೆಲಾ ನಡಪುಂಡು, ಬೊಕ್ಕ ಪ್ರವಚನಲಾ ತುಳುಟ್ಟು ಕೊರ್ಪೆರ್, ಅಂಚಾದ್ ಕ್ರೈಸ್ತರೆ ದೇವಾಲಯೊಲೆಡ್ ಬಳಕೆ ಮಲ್ಪೆರೆ 251 ರಾಗೋಲು ಉಪ್ಪುನ ತುಳುತ್ತ ಬೂಕು ಉಂಡು.ಈ ಬೂಕು 1864ಡ್ದ್ ಪ್ರಕಟ ಆವರೆ ಸುರು ಆತ್‌ಂಡ್, ಉಂದುವೇ ಬೂಕುಡು 440 ಕನ್ನಡ ರಾಗೊಲುಲಾ ಉಂಡು. ಈ ರಾಗೊಲು ಮಾತಲಾ ಜರ್ಮನ್ ಬಾಸೆಡ್ದ್ ಕನ್ನಡ ಬೊಕ್ಕ ತುಳುಕ್ಕು ತರ್ಜುಮೆ ಆತಿನವು ಆದುಂಡು. ಅತ್ತಂದೆ ಐಕ್ ಮಾತೆಕ್ಕ್‌ಲಾ ಜರ್ಮನ್ ಸ್ವರೊಕ್ಕುಲೇ ಉಂಡು. ತುಳು ಕೀರ್ತನೆಲು ಬೊಕ್ಕ ಜಾನಪದ ಶೈಲಿದ ತುಳು ಪದೊಕ್ಕುಲುಲಾ ಇಲ್ಲೆಲೆಡ್ ಬೊಕ್ಕ ದೇವಾಲಯೊಲೆಡ್ ಬಳಕೆ ಆವೊಂದುಂಡು.
ತುಳುಟ್ಟು ಸತ್ಯವೇದದ ಒಂಜಿ ಭಾಗ ಆಯಿ ಹೊಸ ಒಡಂಬಡಿಕೆ ಪನ್ನಿ ಗ್ರಂಥ ಉಂಡು, ಉಂದು 1847ಟ್ಟ್ ಸುರುಟ್ಟು ಮುದ್ರಣ ಆದಿತ್ತ್‌ದ್ ಮಸ್ತ್ ಸರಿ ಪರಿಷ್ಕರಣೆ ಆದಿತ್ತಂಡ್. ಉಂದುವೇ ಹೊಸ ಒಡಂಬಡಿಕೆ ಇತ್ತೆ ಬಳಕೆಡುಪ್ಪು ತುಳುಕ್ಕು ತರ್ಜುಮೆ ಮಲ್ಪು ಕಜ್ಜ ನಡತೊಂದುಂಡು. ತುಳುನಾಡ್‌ಡ್ ಕ್ರೈಸ್ತ ಸಭೆ ಸ್ಥಾಪನೆ ಆಯಿನೆಡ್ಡಿಂಚಿ ಆರಾಧನೆಡ್ ಬಳಕೆಡಿತ್ತಿ ಬಾಸೆ ಅವು ತುಳು, ಅಂಡ ಇತ್ತೆ ಪೇಂಟೆದ ದೇವಾಲಯೊಲೆಡ್ ಕನ್ನಡದಕುಲು ಬತ್ತದ್ ಸೇರೊನ್ನೆಡ್ದ್ ಪೇಂಟೆಲೆಡ್ ಹೆಚ್ಚ


ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...191 [ 192 ]ಕನ್ನಡನೇ ಬಳಕೆ ಆವೊಂದುಂಡು, ಅತ್ತಂದೆ ಇಂಗ್ಲಿಷ್ ಲಾ ಬಳಕೆ ಆಪುಂಡು.
ಹಳ್ಳಿಲೆಡ್ ಹೆಚ್ಚ ತುಳು ಬಳಕೆ ಆಪುಂಡು. ಕೆಥೊಲಿಕ್ ಕ್ರೈಸ್ತೆರೆಡ್ ದುಂಬು ಲ್ಯಾಟಿನ್ ಬಾಸೆದ ಪ್ರಾರ್ಥನೆಲು, ಪದೊಕ್ಕುಲು ಬಳಕೆಡ್ ಇತ್ತಂಡ್, ಸತ್ಯವೇದಲಾ ಲ್ಯಾಟಿನ್ ಬಾಸೆಡೇ ಇತ್ತಂಡ್, ಆಂಡ ಇಂಚಿಪ್ಪ ಕೊಂಕಣಿಗ್ ತರ್ಜುಮೆ ಆದ್ ಇಡೀ ಬೈಬಲ್ ಕೊಂಕಣಿ ಬಾಸೆಡ್ ತಿಕ್ಕುಂಡು. ಅತ್ತಂದೆ ಕನ್ನಡ, ತುಳು, ಕೊಂಕಣಿ, ಇಂಗ್ಲಿಷ್‌ಡ್ ಪದೊಕ್ಲೆನ್ ಪನ್ಪೆರ್ . ರಾಗೊಲೆ ದಾಟಿಲು ಮಾತಲಾ ಪೋರ್ಚ್‌ಗೀಸ್ ಶೈಲಿಡ್ ಉಂಡು, ಆಂಡ ಪದೊಕ್ಕುಲು ದೇಶೀಯ ಶೈಲಿಡ್, ಜಾನಪದ ಶೈಲಿಡ್ ಉಂಡು.
ತುಳುನಾಡ್‌ಡುಪ್ಪು ಕ್ರೈಸ್ತರೆ ಮಾತೃ ಭಾಷೆ ತುಳು. ಅಂಚಾದ್ ಬಾಸೆಲ್ ಮಿಶನರಿನಕುಲು ದೇಶೀಯ ಬಾಸೆಗ್ ಹೆಚ್ಚ ಒತ್ತು ಕೊರ್ತರ್, ತುಳುನಾಡ್‌ಡ್ ಮುದ್ರಣ ವ್ಯವಸ್ಥೆ ಇಜ್ಜಾಂದೆ ತುಳು ಸಾಹಿತೈಲೆನ್ ಕನ್ನಡ ಲಿಪಿನ್ ಬಳಕೆ ಮಲ್ತೊಂದಿತ್ತಿ ಕ್ರಮೊನು ತೂದು ಮಿಶನರಿನಕುಲು ಕನ್ನಡ ಲಿಪಿಟ್ಸ್ ತುಳುನು ಮುದ್ರಣ ಮಲ್ಪೆರೆ ಸುರು ಮಳ್ತೆರ್ . ಅಂಚಾದ್ ತುಳು ಬಾಸೆಡ್ 180ವರ್ಸೊಡು ದುಂಬೇ ತುಳು ಸಾಹಿತ್ಯ ಸುರು ಅಂಚಾದ್ ತುಳು ಬಾಸೆಡ್, ಶಿಕ್ಷಣ, ಧರ್ಮ, ಭೂತಾರಾದನೆ, ಪಾಡ್ಡನ, ಗಾದೆ, ನಿಘಂಟು, ವ್ಯಾಕರಣ, ಸಂಗೀತ, ಕ್ಷೇತ್ರ ಪರಿಚಯ, ಪುಲಮರ್ದ್ ಇಂಚ ಪ್ರತಿ ವಿಭಾಗೊಡುಲಾ ತುಳು ಸಾಹಿತ್ಯದ ಬುಳೆಚ್ಚಿಲ್ ಸುರು ಆದ್ ಈತ್ ಮಲ್ಲ ಮಟ್ಟೊಡು ಬುಲೆಂಡ್, ಅಪಗ ಪ್ರಾರಂಭ ಆಯಿ ತುಳು ಸಾಹಿತ್ಯದ ಬುಳೆಚ್ಚಿಲ್‌ಡ್ ನಂಕ್ ಇತ್ತೆ 200 ವರ್ಷಡ್ದ್ ಪಿರವುಡು ಇತ್ತಿ ತುಳುತ್ತ ಪೊರ್ಲುದ ಗೇನೊನು ನೆನೆಪು ಮಲ್ತ್ ಕೊರ್ಪುಂಡು ಅತ್ತಂದೆ ಮದತ್ ಪೋಪಿ ಶಬ್ದಲೆ ಬಳಕೆನ್ ನಂಕ್ ನೆನೆಪು ಮಲ್ಪುoಡು.
1841ಟ್ಟ್ ಬಾಸೆಲ್ ಮಿಶನ್ ಪ್ರೆಸ್‌ಡ್‌ ಕ್ರೈಸ್ತರೆ ಧರ್ಮಗ್ರಂಥೋಲು, ಸಂಗೀತದ ಪುಸ್ತಕೊಲು ಪ್ರಕಟ ಅವೊಂದಿತ್ತ್ಂಡ್, ಅಪಗ ತುಳುತ್ತ ಬಳಕೆ ಹೆಚ್ಚ ಆದಿತ್ತಂಡ್. ದಾಯೆಪಂಡ ಅಪಗ ತುಳುನಾಡ್‌ಡ್ ತುಳು ಬಾಷೆ ಅತ್ತ್ ಡ ವಾ ಬಾಸೆಲಾ ಬಳಕೆಡ್ ಇತ್ತ್ ಜಿ , ದೇವಾಲಯೊಲೆಡ್ ಓದುನ ಬಾಸೆ ತುಳುವೇ ಆದಿತ್ತಂಡ್. ಪ್ರಾರ್ಥನೆ, ಬೋಧನೆ, ಸಂಗೀತ ಮಾತಲಾ ತುಳುಟ್ಟೇ ಇತ್ತಂಡ್ಡ್ , ದೇವಾಲಯದ ಮದಿಪುಕೂಟದ ಮೀಟಿಂಗ್ ಮಾತಲಾ ತುಳುಟ್ಟೇ ನಡತೊಂದಿತ್ತ್ಂಡ್. ಅತ್ತಂದೆ ಐತ ದಾಖಲೆನ್ ತುಳುಟ್ಟೆ ಬರೆವೊಂದಿತ್ತೆರ್, 1836ಟ್ಟ್ ಕನ್ನಡ ಸಾಲೆಲು ಪ್ರಾರಂಭ ಅಂಡಲಾ ತುಳುವೆರೆಗ್ ಕನ್ನಡ ಅವು ಕರ್ಬದ ಕಡ್ಲೆ ಆದಿತ್ತ್ಂಡ್, ಐಕಾದ್ 1862ಡ್ದ್ ತುಳುನಾಡ್‌ದ ಶಾಲೆಲೆಡ್ ತುಳುಟ್ಟು ಕಲ್ಪಾರೆಗ್‌ಲಾ ಸುರು ಆಂಡ್. ಉಂದು 1890 192 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 3 [ 193 ] ಮುಟ್ಟ ನಡತ್‌ಂಡ್. ಆಂಡ ಉಂದು ದುಂಬರಿಜಿ ದಾಯೆಪಂಡ ಕರ್ನಾಟಕದ ಆಡಳಿತ ಬಾಷೆ ಕನ್ನಡ ತುಳುವೆರ್ ತುಳುಟ್ಟು ಕಲ್ತೆರಾಂಡ ಕನ್ನಡ ಬಾಸೆದ ಸರಕಾರೊಡು ಎಂಚ ಬೇಲೆ ತಿಕ್ಕುಂಡು ಪಂಡ್ದ್ ಎಂಕಲೆಗ್ ತುಳು ಬೊಡ್ಡಿ ಆಡಳಿತ ಬಾಷೆನೇ ಆವು ಪಂಡಿನೆಡ್ ತುಳುಟ್ಟು ಕಲ್ಲುನವು ಅಪಗನೆ ಬಂದ್ ಅಂಡ್.

ಕ್ರೈಸ್ತರೆಡ್ ಪಿರಾಕ್‌ದ ಕಾಲೊಡು ಮದಿಮೆಗ್ ತಾಳಿ ಉಂಗಿಲ ಬಳಕೆ ಮಲ್ಪುನ ಕ್ರಮ ಇತ್ತ್ ಜಿ. ಇಂಚಿಪ್ಪ 60 ವರ್ಸೊಡ್ಡು ಬೊಕ್ಕ ತುಳುನಾಡ್‌ದ ಸಂಸ್ಕೃತಿ ಬಳಕೆ ಆದ್ ತಾಳಿ, ಕರಿಯಮಣಿ, ಉಂಗಿಲ ಬಳಕೆ ಆಂಡ್. ಆಂಡ ನಿಜೊಕ್ಕು ಬಳಕೆ ಮಲ್ಪುನ ಉಂಗಿಲ ವಿದೇಶಿ ಶೈಲಿದವು ಇತ್ತೆಲಾ ಕ್ರೈಸ್ತೆರೆಡ್ ಉಂಡು, ಮದಿಮಯಗ್ ಕಚ್ಚ, ಅಂಗಿ ಇತ್ತಂಡ ಅವು ಇತ್ತೆ ಸೂಟು ಬೂಟು ಅತ್‌ಂಡ್, ಮದಿಮಲೆನ ಸೀರೆ ಪೋದು ಉದ್ದ ಗವನ್ ಪಾಡುನ ಕ್ರಮ ಬೈದ್‌ಂಡ್, ವಿದವೆನಕುಲು ಕರಿಮಣಿ ಪಾಡುನ ಕ್ರಮ ಇತ್ತ್ ಜಿ. ಆಂಡ ಇತ್ತೆ ಸಮಾಜೊಡು ಮಾತೆರ್‌ಲಾ ಕರಿಮಣಿ ಪಾಡುವೆರ್. ದೇವಾಲಯೊಗು ಸೀರೆನೇ ತುತ್ತೊಂದು ಪೋವೊಡು ಇಜ್ಜಾಂಡ ತರೆಕ್ ಮದೆ ಮಲ್ಲೊಂದು ಪೋವೊಡು ಪನ್ನ್ಪಿನ ಕ್ರಮ ಇತ್ತಂಡ್ ಆಂಡ ಇತ್ತೆ. ಪರಮ ಪ್ರಸಾದ ದೆತೊನ್ನಗ ಮಾತ್ರ ಹೆಚ್ಚಿನಕುಲು ಪಾಡುವೆರ್. ಮದಿಮೆಡ್ ತರೆ ಮುಚ್ಚುನ ಕ್ರಮೊಕ್ಕುಲೆನ್ ಒರಿತೊಂದೆರ್.

ಕ್ರೈಸ್ತೆರೆಡ್ ಅಕುಲು ವಾ ಪಿರವುದ ಮತೊಡ್ಡು ಬತ್ತಿತ್ತೆರ್ಡಲಾ ಪಿರ ಆ ಮತತ್ತ ಸಂಸ್ಕಾರೊಲೆನ್ ಆಚರಣೆ ಮಲ್ಪೆರೆ ಇಜ್ಜಿ. ಪರಕೆ ಪುನ್ಪುನವು, ಜೋತಿಷ್ಯ ಕೇನುನವು, ವ್ಯಭಿಚಾರ, ಮಾನ್ಯ, ಕೆರ್ಪಿನವು, ಕಂಡುನವು ತೋಜಿದ್ ಬಂಡ ದುಂಬುದ ಕಾಲೊಡು ಅಕಲೆಗ್ ಅಡ್ಡ ಬೆಂಚಿಡ್ ಕುಲ್ಲುನ ಶಿಕ್ಷೆ. ಪರಮ ಪ್ರಸಾದ ದೆತೊನೆ ಇಜ್ಜಂದಿ ಶಿಕ್ಷೆ. ಅಡ್ಡ ಕೋಂಪುನ ಶಿಕ್ಷೆಲು ಅತ್ತಂದೆ ಆಯನ ಇಲ್ಲಡೆಗ್ ಏರ್‌ಲಾ ಪೋದು ಉನಿಯೆರೆ ಬಲ್ಲಿ. ಆ ಇಲ್ಲಡ್ ಪೊಣ್ಣು ಇಜ್ಜಾಂಡ ಆಣ್ ಕನವೆರೆ ಬಲ್ಲಿ ಇಂಚಿತ್ತಿ ಶಿಕ್ಷೆಲು ಇತ್ತ್ಂಡ್. ಆಯೆ ಪಡೆಯಿನ ಶಿಕ್ಷೆನ್ ದಿನ ಕರಿಬೊಕ್ಕ ಮಲ್ಲ ಸಭೆ ಎದುರುಡು ಬತ್ತದ್ ಆಯೆ ಮಾತು ನಡ್ಕೊಡು. ಐಸ್ಟ್ ಬೊಕ್ಕ ಆಯನ ಶಿಕ್ಷೆ ಪೋಪುಂಡು. ಆಂಡ ಇಂಚಿನ ಶಿಕ್ಷೆದ ಕ್ರಮೊಕ್ಕುಲು ಇತ್ತೆ ಇಜ್ಜಿ. ಆಂಡ ಕ್ರೈಸ್ತ ಸಭೆತ್ತ ಒಡನಾಟೊಡು ಇಜ್ಜಾಂದೆ, ದೇವಾಲಯೊಗು ಪೋವಂದೆ ನಾಸ್ತಿಕೆರೆಲೆಕ್ಕ ಉಪ್ಪು ಕ್ರೈಸ್ತರೆ ಇಲ್ಲಡ್ ಪೊಣ್ಣು ಆಣ್ ಕನವೆರೆ ನಮ್ಗುವೆರ್.

ಕ್ರೈಸ್ತೆರೆ ಪರ್ಬೊದ ಆಚರಣೆಲೆಡ್ ಕೆಲವೆಟ್ ಪಿರವುದೆನೇ ಒರಿಪಾವೊಂದು ಬೈದರ್, ಪುದ್ದರ್, ಕುರಲ್ ಕಟ್ಟುನೆಕ್ ಕ್ರೈಸ್ತರ್ ಬುಳೆತ್ತ ಪರ್ಬಇಜ್ಜಾಂಡ ಕೊರಲ್ ಪರ್ಬ ಪಂಡ್ ಪನ್ಪೆರ್, ಕೊರಲ್ ಕನತ್ತ್ದ್ ಇಲ್ಲೆಲೆಡ್ ಕಟ್ಟುನ ಕ್ರಮ ಇತ್ತೆಲಾ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 193 [ 194 ]ಉಂಡು, ಆನಿ ಹೊಸ ಅರಿತ್ತ ಪೇರ್ ಪಾಯಸೊಗು ಪಾಡುವೆ‌, ಹೆಚ್ಚಿನಕುಲು ಇಲ್ಲ್ಲೆಡ್ ತರಕಾರಿ ಒಣಸೇ ಉನ್ಪೆರ್, ಕ್ರೈಸ್ತರೆ ಕುಟುಂಬದಕುಲು ಒಟ್ಟು ಸೇ‌ರ್ದ್ ಒಟ್ಟಿಗೆ ಕುಲ್ಲುದು ಬಾರೆದ ಇರೆಟ್ಟ್ ಉನ್ಪಿನ ಕ್ರಮ ಉಂಡುಡ ಅವು ಬುಲೆತ್ತ ಪರ್ಬೊಡು ಮಾತ್ರ,
ತುಳು ಜನೊಕ್ಲೆಡ್ ಮೆಹೆಂದಿ, ಮದ್ರೆಂಗಿ ಕಾರ್ಯಕ್ರಮೊಲು ಕ್ರೈಸ್ತೆರೆಡ್ ಪೇರ್‌ದ ಒಣಸ್, ರೋಸ್ ಪಂಡ್ದ್ ಆಚರಣೆಡ್ ಉಂಡು. ಆ ದಿನತ್ತಾನಿ ಮದಿಮಾಯೆ ಅತ್ತಡ ಮದಿಮಲೆ ಇಲ್ಲಡ್ ಕುಟುಂಬದಕುಲು ನಿರೆಕರೆತ್ತ ಕುಲು, ಸಭೆತ್ತಕುಲು ಒಟ್ಟು ಸೇರುವೆರ್, ಗುರುಕ್ಕುಲು ಬೈಬಲ್ ಓದುದು ಪ್ರಾರ್ಥನೆ ಆಯಿಬೊಕ್ಕ ಕುಟುಂಬದಕುಲು, ಮಾತೆರ್ ಪಜ್ಜಿ ಮಂಜೋಲು ಪಾಡ್ಡಿನ ತಾರಾಯಿದ ಪೇರ್‌ನ್ ಪೂಜುವೆರ್, ಐಡ್ದ್ ಬೊಕ್ಕ ತರಕಾರಿ ಒಣಸ್ ಪಾಯಸ ಒಣಸ್‌ ವ್ಯವಸ್ಥೆ ಉಪ್ಪುಂಡು. ಇತ್ತೆ ಕೆಲೆವರ್ ಮೀನ್ ಮಾಸದ ಲೇಸನ್‌ ಲಾ ಮಲ್ಲುವೆರ್. ಕೆಥೊಲಿಕ್ ಕ್ರೈಸ್ತೆರೆಡ್ ಒಂತೆ ಬಿನ್ನವಾದ್ ಈ ಕ್ರಮ ಉಂಡು ಲೇಸ್‌ಗ್ ಪುದೆ ಮೆರವಣಿಗೆಡ್ ಕನಪಿನಿ, ದೊಂಪೊಡು, ಕರ್‌ ಕುಂಬುಡ ತುಂಡು ಮಲ್ಪುನ, ತಾರಾಯಿ ಪೆರೆಪಿನ ಕ್ರಮೊನುಲಾ ಮಲ್ಲುವೆರ್, ಕುಟುಂಬದಕುಲು ಸೇರ್ ಕೊಂಕಣಿ ಇಜ್ಜಾಂಡ ತುಳುಟು ಕುಸಾಲ್‌ದ ಪದೊಕ್ಲೆನ್ಲಾ ಪನ್ಪೆರ್, ಲೇಸ್ ಇನ್ಸ್‌ಲೆಡ್ ದೆಪ್ಪುನಾಂಡ ಅಟಿಲ್ ಮಲ್ಪುನಗ, ನುಪ್ಪು ರಾಸಿ ಪಾಡ್ನಗ, ನುಪ್ಪು ಬಲಸನಗ, ಇಂಚ ಕೆಲವು ದೇಶೀಯ ಸಂಸ್ಕೃತಿಲೆನ್ ಇನಿಕ್ ಲಾ ಒರಿಪಾವೊಂದು ಬೈದೆರ್ .
6309 ಕ್ರೈಸ್ತೆರೆಡ್ ಹೆಚ್ಚ ಬಿಲ್ಲವ ಸಮಾಜೊಡ್ದ್ ಮತಾಂತರ ಅತಿನಕುಲು. ಅಕುಲು ವಂಶಪಾರಂಪರೊಡು ಬೈದಿನ ಮರ್ದ್ ಮಲ್ಪುನ ಕಮೊಕ್ಕುಲೆನ್ ಬುಡ್ತುಜೆರ್ ಜೋಕುಲ್ನ ಬಾಲಗ್ರಹ ತೈಲ, ತರೆಕ್ ಪಾಡುನ ನೀಲಿತಪ್ಪುದ ಎಣ್ಣೆ, ಬೇನೆಗ್ ಪೂಜುನ ಎಣ್ಣೆ, ಪೆದೆದಿ ಮರ್ದ್ ಉಂದೆನ್ ಇತ್ತೆಲಾ ಮಲ್ಲೊಂದುಲ್ಲೆರ್. ಪೆದಿ ಸಾಂಕುನಕುಲು ಇತ್ತೆಲಾ ಕೆಲೆವರ್ ಉಲ್ಲೆರ್ ಅಕಲೆಗ್ ಹೆಚ್ಚಿನಕಲೆಗ್ ಪೆದ್ಮೆದಿ ಮರ್ದ್‌ ಮಲ್ಪುನ ಕ್ರಮೊಕ್ಕುಲು ಗೊತ್ತುಂಡು, ಅತ್ತಂದೆ ಹಳ್ಳಿ ಪ್ರದೇಶೂಲೆಡುಪ್ಪು ಹೆಚ್ಚಿನಕಲೆಗ್ ಗಿಡಮೂಲಿಕೆ ಬಳಕೆ ಐತ ಮೊಲಬು ಇತ್ತೆಲಾ ಉಂಡು, ಕೆಲೆಂಜಿ ಸೊಪ್ಪು- ಕಿಲೆಂಜಿ ಗಿಡಪೆರೆ, ಬೆಸಮುಂಗುಲಿ= ಇಸ ಕಕ್ಕಾವರೆ, ನೆಕ್ಕಿಸೊಪ್ಪು, ತುಂಬೆ= ಕೆಪ್ಪಡೆಗ್, ತುಳಸಿ,ಪಂಚಪತ್ರೆ ಸಂಬರಬಳ್ಳಿ=ಜೋಕುಲೆ ಮರ್ದ್‌ಗ್, ಕೈಬೇವು, ಕಾಯೇರ್‌ತಪ್ಪು , ಪೊಂಗರೆ ತಪ್ಪು=ಜೋಕುಲೆನ್ ಮೀಪಾರೆ, ಮದ್ರೆಂಗಿ ಸೊಪ್ಪು= ಅರಸಿನ ಕುತ್ತೊಗು, ರೆಚ್ಚೆವುದ ದಂಡ್=ಮುಳ್ಳು ದೆಪ್ಪೆರೆ, ಕತ್ತಿದ ಮೊನೆಟ್ಸ್ ಮುಂಚಿಕಾಯಾಂಡ= ಉಗುರುಸುತ್ತುಗು, ನೀಲಿತಪ್ಪು= 194 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 195 ] ತರೆಕ್ ಎಣ್ಣೆ ಬೆಚ್ಚ ಮಲ್ಪೆರೆ, ಇಂಚ ಮಸ್ತ್ ಮರ್ದ್‌ದ ಕ್ರಮೊಕ್ಯುಲೆನ್ ಇತ್ತೆಲಾ ಬಳಕೆ ಮಲ್ಲೊಂದುಲ್ಲೆರ್.

ತುಳುನಾಡ್‌ಡುಪ್ಪು ಕ್ರೈಸ್ತರ್ ವಾ ಬರಿಡ್ಸ್ ಮತಾಂತರ ಆತಿನಕುಲು ಪಂಡ್ ದ್ ಇತ್ತೆ ಕ್ರೈಸ್ತರೆ ಪುದರ್‌ಲೆ ಒಟ್ಟುಗುಪ್ಪುನ ಬರಿ ಪುದರ್‌ಡ್ ಗೊತ್ತಾಪುಂದು. ಅಮೀನ್, ಅಮಣಣ್ಣ= ಅಮ್ಮನ್ನ, ಐಮನ್, ಕೋಟ್ಯನ್ನ, ಕೋಟಿಬನ್ನಾಯ= ಕೋಟ್ಯನ್ನ, ಕೈರನ್ನಾರ್ಯ ಕೈರನ್ನ, ಬಂಗೇರಣ್ಣ- ಬಂಗೇರ, ಕುಂದರಣ್ಣ= ಕುಂದ‌ರ್, ಗುಜ್ಜರಣ್ಣ- ಗೋಜರ್, ಉಪ್ಪಿಯನ್ನ= ಉಪ್ಪೆನ್ನ, ಮಾಬಿಯಾನ್= ಮಾಬೆನ್, ಪುಲ್ಯೂಟನ್=ಪಲ್ಲಟ್, ಪಾಲನಬನ್ನಾಯ=ಪಾಲನ್ನ, ಸಾಲ್ಯಾನ್ = ಸಾಲಿನ್ಸ್, ಕರ್ಕೇರ= ಕರ್ಕಡ, ಸೋಯೆನ್ನ= ಸೋನ್ಸ್, ಬುನ್ನನ್=ಬುನ್ಯನ್, ತಲ್ವಾರ್= ತೋಳಾರ್, ಶೆಟ್ಟಿ= ಶೆಟ್ಟಿಯಾನ್. ಉಂದು ಅತ್ತಂದೆ ಬರಿ ಇಜ್ಜಂದಿನಕಲೆಗ್ ಸತ್ಯಮಿತ್ರ, ದೇವಮಿತ್ರ, ದೇವಪುತ್ರ, ಇಂಚಿತ್ತಿ ಬರಿ ಮುದರ್‌ಲೆನ್ ದೀತಿನವು ತೋಜಿದ್ ಬರ್ಪುಂಡು.

ಇಂಚ ತುಳುನಾಡ್‌ಡುಪ್ಪು ಕ್ರೈಸ್ತ‌ ಬಾಕಿದಕುಲು ತೂಪೆರ್‌ಂದ್ ಅತ್ತ್ ನಮ್ಮ ಬದ್‌ಕ್ ಎಡ್ಡೆ ಇತ್ತಂಡ ಮಾತರ್‌ಾ ಎಡ್ಡೆಡುಪ್ಪುವೆರ್ ಪನ್ಸಿ ಮನಸ್ಸಡ್ ಎಡ್ಡೆಡುಪ್ಪೆರೆಗೆ ಪ್ರಯತ್ನ ಮಲ್ಪುವೆರ್. ತನ್ಕುಲೆ ಇಲ್ಲ್ ನಿರ್ಮಲ ದೀವೊಂದು, ನಮ ಪಾತೆರ ಎಡ್ಡೆ ಉಷ್ಟೊಡು ಮಾತೆರೆನ್‌ಲಾ ಪ್ರೀತಿ ಮಲ್ಪೊಡು. ಹಾಳ್ ಮಲ್ತಿನಾಯಗ್‌ಲಾ ದೇವೆರೆಡ ನಟ್ಟೋಡು, ದುರಬ್ಯಾಸೊಲೆನ್ ಬುಲೆಪಾವೊನ್ರೆ ಬಲ್ಲಿ. ಬದ್‌ಕ್‌ ಎಂಚಿನಾಂಡಲಾ ಸಾದನೆ ಮಲ್ಪೊಡು ಪಂಡ್ ದ್ ಬದುಕುವೆರ್. ಇಂಚಿತ್ತಿ ಮನಸ್ಸಿದೊಟ್ಟಿಗೆ ತುಳುನಾಡ್‌ಡ್ ಬದುಕೊಂದುಷ್ಟು ಕ್ರೈಸ್ತರ್ ತುಳು ಬಾಸೆನ್, ತುಳು ಸಂಸ್ಕೃತಿನ್ ಒರಿತೊಂದು ಪ್ರೀತಿ ಮಲ್ತ್‌ದ್ ಪಿರಾಕ್‌ದ ನಮ್ಮ ಹಿರಿಯಾಕ್ಲು ನಡತೊಂದು ಬೈದಿ ಸಾದಿನ್ ತೂವೊಂದು ತೆರಿವೊಂದು ಬದ್‌ಕೆರೆ ಪ್ರಯತ್ನ ಮಲ್ಪುವೆರ್. ಇಂಚ ಇತ್ತಂಡ ಮಾತ್ರ ತುಳುನಾಡ್‌ಡ್ ತುಳುವೆರಾದ್ ನಮ ಒಂಜಾದ್ ಬದ್‌ಕೆರೆ ಸಾದ್ಯ.

ತುಳುನಾಡ್‌ಡ್ ಪಿರಾಕ್‌ಡ್ಡಿಂಚಿ ಆಚರಣೆ ಮಲ್ಲೊಂದು ಬರ್ಪಿ ಕ್ರೈಸ್ತ‌ ಐಟ್‌ಲಾ ಕೃಷಿ ಸಂಸ್ಕೃತಿದಕುಲು, ಆಯುದ ಪೂಜೆ, ಪಶುಪಾಲನೆ, ಕೃಷಿ ಬದ್‌ಕ್, ಕಂಬುಳ, ಕೋರಿಕಟ್ಟ, ತಾರಾಯಿ ಕಟ್ಟುನವು, ಇಂಚಿನಟ್ಸ್ ಪಾಲ್ ದೆತೊನೊಂದೇ ಉಲ್ಲೆರ್, ಪೇಂಟೆದಕುಲು ಉಂದೆನ್‌ ಆಚರಣೆ ಮಲ್ತ್‌ಜೆಲಾ ಐತ ಗೇನ ಕೊರಿಯರ ಹಿರಿಯಾಕ್ಲು ಉಲ್ಲೆರ್, ಜೋಕುಲೇ ಹಿರಿಯಾಕ್ಲಡ ಕೇನ್ಸ್ ಉಂದು ದಾಯ ಮಲ್ಲೊಡು ಅಜ್ಜಾ ಉಂದು ದಾಯೆ ತಿನ್ನಿನಿ ಅಜ್ಜಿ ಪನ್ನಿನ ಪುಲ್ಯಾಲ್ಲು ಇತ್ತೆಲಾ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 195 [ 196 ] ಉಲ್ಲೆರ್ ಪನಿಯೆರೆ ಬಾರಿ ಸಂತೋಸು ಆಪುಂಡು.

ಕ್ರೈಸ್ತ ಮಿಶನರಿಲು ಪ್ರಾರಂಭ ಮಲ್ತಿನ ತುಳು ಸಾಹಿತ್ಕಲು ಇನಿಕ್ಕ್ ಲ ಸಂಶೋಧನೆಗೆ ಯೋಗ್ಯಾದುಂಡು. ದಾಯೆಪಂಡ ನೂದು ವರ್ಷಡು ಪಾಡೊನೊಲು, ಬಳಕೆದ ಶಬ್ಬೊಲು, ಪದೊಕ್ಕುಲು ಎಂಚ ಉಂಡು. ಇತ್ತೆ ಎಂಚ ಬದಲಾತ್ಂಡ್, ಪಂಡ್ ದ್ ತೆರಿಯೊನ್ರೆ ಪಿರಾಕ್‌ಡ್ ಪ್ರಕಟ ಆಯಿ ಪ್ರತಿಯೊಂಜಿ ಅಕರೊಲೆನ್ತಾ ಸಂಶೋದಕೆ‌ರ್ ಸಂಶೋಧನೆ ಮಲ್ಪುನವು ಇತ್ತೆದ ಕಾಲೊಗು ಬೊಕ್ಕ ತುಳು ಸಾಹಿತ್ಯದ ಬುಳೆಚೆಲ್‌ಗ್ ಅಗತ್ಯದವು ಆದುಂಡು.

196 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 197 ] ಪರಂಪರೆಡ್ಡಿ ಆಧುನಿಕತೆತ್ತಂಚಿ ಕೈಕಸುಬುಲು

ಕಾಯಕನೇ ಕೈಲಾಸ ಪನ್ಪಿ ಬಸವಣ್ಣನ ತತ್ವದ ಅರ್ಥ ನರಮಾನಿ ಲೋಕೊಡು ಆಯಾಯಗ್ ಹೊಂದುನ ಉದ್ಯೋಗೊನು ಮಲ್ಪುನವೇ ಕಾಯಕ. ಆ ಉದ್ಯೋಗನೇ ಕೈಲಾಸ.

ಕಾಯಕೊಡ್ಡು ಅಂದ್‌ಂಡ ಬೇಲೆಡ್ ಸಂಪತ್ತ್ದ ಸೃಷ್ಟಿ ಆಪುಂಡು. ಈ ಸಂಪತ್ ನಂಕ್ ಮಾತ್ರ ಅತ್ತೆ ಅವು ಸಮಾಜದ ಒಂಜಿ ಅಂಗ, ಬಾಕಿದಕಲೆಡ ಕೈನೀಡಂದೆ ಪ್ರತಿಯೊರಿಲಾ ತನ್ನ, ತನ್ನ ಕುಟುಂಬೊಗಾದ್ ಒವ್ವಾಂಡಲಾ ಒಂಜಿ ಬೇಲೆ ಮಲ್ಲೊಡು, ಆ ಕಾಯಕಡ್ ತಿಕ್ಕುನ ಸಂಪಾದನೆನೇ ಪ್ರಸಾದ ಪಂಡ್ ಪನ್ನಿನವು ಬಸವಣ್ಣನ ಬೋಧನೆ

ಇಂಚಾದ್ ನಮ ಬದ್‌ಕ್‌ ಒಂಜಿ ಬೇಲೆ ಬೋಡು ಇಜ್ಜಾಂಡ ಒಂಜಿ ಕಸುಬು ಬೋಡು. ಐಕಾದೇ ನಮ್ಮ ಸೃಷ್ಟಿ ಆನಗ ನಂಕ್ ಬೋಡಿತ್ತಿನೆನ್ ನಾಡೊನ್ನೆ ಬೋಂಟೆ ಬೊಕ್ಕ ಕೃಷಿ ಸಂಸ್ಕೃತಿ ನಮ್ಮ ಬ‌ದುಕ್ ಡೆ ಬೈದ್‌ಂಡ್, ಉಂದುವೇ ದುಂಬರಿತ್‌ ಕುಲಕಸುಬು ಇಜ್ಜಾಂಡ ಉಪಕಸುಬುಲು ನಮ್ಮ ಬದ್‌ಕ್‌ ಮುಖ್ಯವಾಯಿನವು ಆಂಡ್.

ಕೈಕಸುಬು ಇಜ್ಜಾಂಡ ಕುಲಕಸಬುಲೆಡ್ಜ್, ಪರಂಪರೆಡ್ ನಂಕ್ ತಿಕ್ಕೊಂದಿತ್ತಿ ನಮ ಗಳಸೊಂದಿತ್ತಿ ವಸ್ತುಲು ಇತ್ತೆದ ಆದುನಿಕತೆತ ಲೋಕೊಡು ಮದೆ ಆವೊಂದುಂಡು. ನಮ್ಮ ಆದುನಿಕತೆದ ಲೋಕೊಡು ತಿಕ್ಕುನ ವಸ್ತುಲೆನೇ ನಾಡೊಂದು ಪೋದು ನಮ್ಮ ಪರಂಪರೆನ್ ಮದತೊಂದುಲ್ಲ. ನೆಕ್ಕೆ ಕಾರಣ ದಾನೆ.

ಕಾಡ್‌ ತಿಕ್ಕು ಬೂರು, ಬೆದುರ್, ಇರೆಕ್ಕುಲೆಡ್ ಬಟ್ಟಿ, ಪುಡಯಿ, ಕಾಂಟ್ಯ ತಟ್ಟಿಕುಡುಪು,ಕುರ್ವೆ, ಪೇರರು ಕುರ್ವೆ, ತಡೆ, ಪಜೆ, ತತ್ತ, ಕೊರಂಬು, ಉಂದು ಮಾತ ನಮ್ಮ ಊರುಡೇ ನಮ್ಮಗುಲೇ ತಯಾರ್ ಮಲ್ತಿನವು ತಿಕ್ಕೊಂದಿತ್ತಂಡ್. ಆಂಡ ಇತ್ತೆ ಬೂರು, ಬೆದ್ರ ನಾಡ್ಯರೆ ಕಾಡ್ ನಾಶ ಆವೊಂದುಂಡು. ಬೋಡಿತ್ತಿನ ತಿಕ್ಕೊಂದಿಜ್ಜಿ ಬೇಲೆಗ್ ಬಿಲೆ ಇಜ್ಜಿ ಜವನೆ‌ ಪೇಂಟೆ ಸೇರಿಯೆ‌, ಗುರ್ತೊ ಮಲ್ಲೊನೆಲಾ ಮದತ್ ಬುಡಿಯ, ಬಂಗೊಡು ತಯಾರ್ ಮಲ್ತ್ಂಡಲಾ ಮಾರ್ಕೆಟ್ ಇಜ್ಜಿ.

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 197 ಬೂರುದ [ 198 ] ಎಲಿಮಿನಿದ ತಟ್ಟಿಕುಡ್ಡು, ನುಪ್ಪು ಕಬಿಡೆರೆ ಸ್ಟೀಲ್ ಇಜ್ಜಾಂಡ ಪಿತ್ತಳೆದ ಒಟ್ಟೆ ಒಟ್ಟೆ ಇತ್ತಿ ತಾಳ, ಪ್ಲಾಸ್ಟಿಕ್‌ ಬೀಡಿ ಕಟ್ಟುನ ಸೂಪು ಬೈದ್‌ಂಡ್‌ ಉಂದು ಇತ್ತೆ ತಟ್ಟೆಲಾ ಆಪುಂಡು. ಚಾ ಗಾಲಿಮುನ ಪ್ಲಾಸ್ಟಿಕ್‌ ಚಾಲ್ತಿ ಎಲ್ಲಿಡ್ ಮಲ್ಲೆ ಮುಟ್ಟಲಾ ಇತ್ತೆ ತಿಕ್ಕುಂಡು ತಾರಾಯಿದ ಪೇರ್‌ಲಾ ನೆಟ್ಟ ಅರಿಪೊಲಿ, ಮುಂಡೆವುದ ಪಜೆ ಬೇತೆ ಬೇತೆ ಸೈಜ್‌ ಬರೊಂದಿತ್ತ. ಇತ್ತೆ ಬಣ್ಣ ಬಣ್ಣದ ಪ್ಲಾಸ್ಟಿಕ್‌ ಪಜೆಕ್ಕುಲು ಬೈದ್‌ಂಡ್‌. ಪ್ಲಾಸ್ಟಿಕ್‌ ಇಜ್ಜಾಂಡ ಟಯರ್‌ದ ಪುಡಯಿ, ಕುರುವೆ, ಕಾಂಟ್ರೋಲು ಕಮ್ಮಿ ಬಿಲೆಕ್ಟ್ ತಿಕ್ಕುಂಡು, ತತ್ರದ ಜಾಗೆಗ್ ನಮೂನೆ ನಮೂನೆದ ಕೊಡೆಕ್ಕುಲು ಬೈದ, ಕೊರಂಬುದ ಬದಲ್‌ಗ್ ಪ್ಲಾಸ್ಟಿಕ್ ಶೀಟ್‌ನೇ ಪುದೆತೊನುವೆರ್ ಇಜ್ಜಾಂಡ ಪ್ಲಾಸ್ಟಿಕ್‌ದ ರೈನ್‌ ಕೋಟ್‌ನೇ ಕಂಡೊಗು ಪೋನಗ ಗಲಸುವೆರ್, ಇಂಚಾಂದ ಓಲುಂಡು ಬಿಲೆ ನಮ ಊರುದ ತಟ್ಟಿಕುಡುಪುಗು, ದೆತೊನುವೆರ್ ಏರ್ ಜೆಪೆರೆ ಒಲಿತ ಪಜೆ.

ಕರ್ಬ ಗುದ್ದುದು ಕೊಡಪಕ್ಕೊಡು ಮಲ್ಗೊಂದಿತ್ತಿ ಕತ್ತಿ, ಬಿಸತ್ತಿ, ಪಿಕ್ಕಾಸ್ – ಕೊಟ್ಟು, ಸಬ್ಬಲ್, ತಾಪಿ, ಬಾಜಿ, ಕುಡರಿ, ಸುತ್ತೆ, ಮುಟ್ಟಕತ್ತೆ, ಪೆರದನೆ, ಮಂಡಕತ್ತಿ, ಇಂಚಿತ್ತಿನವು ಒವು ಬೋಡಿಂತ್‌ಂಡಲಾ ಕೊಡಪಟ್ಟ ವಾ ಮುಲ್ಲೆಡ್ ಇತ್ತ್ಂಡಲಾ ನಾಡೊಂದು ಪೋದು ಮಲ್ಲಾವೊಂದಿತ್ತಿನ ಕಾಲ ಒಂಜಿ ಇತ್ತಂಡ್.

ಆಂಡ ಇತ್ತೆ ಪ್ಲಾಸ್ಟಿಕ್ ಪುಡಿ ಪಾಡ್ಡಿನ ಕಂಪೆನಿಡ್ ತಯಾರಾತಿನ ಸ್ಟೀಲ್‌ ಇಜ್ಜಾಂಡ ಕರ್ಬದ ಬಿಸತ್ತಿ, ಕತ್ತಿಲು ತಿಕ್ಕುಂಡು ಕೊಟ್ಟು ಪಿಕ್ಕಾಸ್‌ ಕಂಪೆನಿಡೇ ತಯಾರಾಪುಂಡು, ಓಲುಲಾ ಏಪಲಾ ತಿಕ್ಕುಂಡು, ಕರ್ಬದ ಬೇಲೆ ಮಲ್ಪುನಕುಲು- ಕಲ್ಪುನಕುಲುಲಾ ಇಜ್ಜೆರ್, ಕರ್ಬ ಗುದ್ದರೆ ಏಲ್ಲಾ ಇತ್ತೆ ತಯಾರ್‌ಲಾ ಇಚ್ಚೆರ್, ಪುಡಿ ಪಡ್ರೆ ಮರಲಾ ಎಡ್ಡೆ ತಿಕ್ಕುಜಿ ಪಂಡ್‌ ಉಂಡು. ಆಂಡಲಾ ಅಲ್ಪಲ್ಪ ಇತ್ತಿ ಕೊಡಪಟ್ರೊಲು ಬಂಗೊಡು ಬೇಲೆ ಮತ್ತೊಂದು ನಂಕ್ ತೂವರೆ ತಿಕ್ಕುಂಡು.

ಕರ, ಬಿಸಲೆ, ಅಡ್ಯರ, ಮಂಡೆ, ಓಡು, ಕಾವೊಲಿ, ಬಾವಡಿ, ಕಡ್ಡ, ಕೂಜೆ, ಬಟ್ಟಲ್ ಲೋಟೆ, ಇಂಚ ನಿಚ್ಚ ಇಲ್ಲಲೆಡ್ ಗಳಸುನ ವಸ್ತುಲು ಮಾತಲಾ ಮಣ್ಣಿಡೇ ಮನವು ತಿಕ್ಕೊಂದಿತ್ತಂಡ್. ಗ್ರಾಮೀಣ ಪ್ರದೇಶೂಲೆಡ್ ಇಡೀ ಊರೇ ಮಣ್‌ದ ಬಾಜನ ಮಲ್ತ ಊರಿಡೀ, ಜಾತ್ರೆ, ಸಂತೆಲೆಡ್ ಮಾರೊಂದಿತ್ತೆರ್. ಮಣ್ಣ ಬಿಸಲೆದ ಬಂಗುಡೆ ಪುಳಿಮುಂಚಿ ಎಡ್ಡೆ, ಕರಟ್ಸ್ ಬೆಯಾಯಿನ ಉರ್ಪೆಲರಿತ್ತ ಗಂಜಿ ಎಡ್ಡೆ ಪನ್ನಿನ ಕಾಲಲಾ ಅಪಗ ಇತ್ತಂಡ್.

ಆಂಡ ಇತ್ತೆ ಮಾತಲಾ ಸ್ಟೀಲ್, ಅಲಿಮಿನಿದವು ಬೈದ್‌ಂಡ್. ಅಡಿ ಪತ್ತೆಂದಿನ, ಎಣ್ಣೆ ಪಾಡಂದೆ ದೋಸೆ ಮಲ್ಲುನ ನಾನ್ ಸ್ಟಿಕ್ ಕಾವಲಿ, ಅಪ್ಪದ ಕಾವಲಿಲು ಕಂಪೆನಿದವು ಬೈದ್‌ಂಡ್. ನಾನ್ ಸ್ಟಿಕ್, ಅಲಿಮಿನಿದ ಬಾಜನೊಲು ಆರೋಗ್ಯಗ್

198 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 199 ] ಹಾಳ್ ಪಂಡ್ ಗೊತ್ತಿತ್ತ್ಂಡಲಾ ನಂಕ್ ಅವೇ ಬೋಡು. ಕಡ್ಯ ದರಿಯುಂಡು ಪಂಡ್ಸ್ ಪೋಡಿಗೆಲಾ ಇಜ್ಜಿ. ಇತ್ತೆ ನೀರ್ ಒಯ್ದೆರೆಲಾ ಇಜ್ಜಿ, ನೀರ್ ದೆಪ್ಪೆರೆ ಮಿಷನ್ ಬೈದ್‌ಂಡ್, ಮಿಶನ್ ಇಜ್ಜಾಂಡ ಅಲಿಮಿನಿದ, ಪ್ಲಾಸ್ಟಿಕ್‌, ಕೊಡಪಾನ ಬೈದ್‌ಂಡ್‌. ಕಲಿ ಕೊನವೆರೆ ಪ್ಲಾಸ್ಟಿಕ್‌ ಕ್ಯಾನ್ ಸುಲಭ ಆತ್‌ಂಡ್.


ಹಳ್ಳಿಲೆಡ್ ದಿಕ್ಕೆಲ್‌ಡ್ ಅಟಿಲ್ ಮಲ್ಲುನಕುಲು ಇತ್ತೆಲಾ ಮಣ್ಣಿದ ಬಾಜನ ಉಪಯೋಗ ಮಲ್ಪುವೆರ್ ಅತ್ತಂದೆ. ಪೇಂಟೆದಕಲೆಗ್ ಉಂದು ಒಪ್ಪುಲಾ ಬೊಡ್ಡಿ ದಾಯೆ ಪಂಡ ಮಣ್ಣಿದ ಓಡುದ ಕಪ್ಪರೊಟ್ಟಿ, ಬಿಸಲೆಡ್ ಮಲ್ಲಿನ ಮೀನ್‌ ಕಜಿಪುದ ರುಚಿ ಅಕಲೆಗ್ ತೂದೇ ಗೊತ್ತಿಜ್ಜಿ. ಅಂಚಾದ್ ಮಣ್ದ ಬಾಜನ ಗಳಸುನ ಕಮ್ಮಿ ಅತ್‌ಂಡ್. ಬೇಡಿಕೆ ಇತ್ತ್ಂಡಲಾ ಕರ ಮಲ್ಪೆರೆ ಎಡ್ಡೆ ಮಣ್ಣೆ ತಿಕ್ಕೊಂದುಲಾ ಇಜ್ಜಿ. ತಿಳ್ಕೊಂಡಲಾ ಮಲ್ಪುನಕುಲು ತೆರಿದಿನಕುಲು ಕಮ್ಮಿ ಆವೊಂದುಲ್ಲೆರ್. ಅಲ್ಪಲ್ಪ ಬಾಜನ ಮಲ್ಲು ಕುಟುಂಬೊಲು ಇತ್ತೆಲಾ ಬಂಗ ಆಂಡಲಾ ಗಳಸುನಕಲೆಗ್ ಕುಟುಂಬದಕುಲೇ ಬೇಲೆ ಮಲ್ಲೊಂದು ಇಲ್ಲಿಲ್ಲಗ್, ಜಾತ್ರೆದಲ್ಪ, ಸಂತೆದಲ್ಪ ಮಾರುನೆನ್ ಅಲ್ಪಲ್ಪ ತೂವೊಂದುಲ್ಲ. ಒಡೆ ಮುಟ್ಟ ಪಂಡ ಚೌತಿಗೆ ಮಣ್‌ಡೇ ಗಣಪತಿ ಮೂರ್ತಿ ಆವೊಡು ಪನೊಂದಿತ್ತಿ ನಮ್ಮ ಇತ್ತೆ ಪ್ಲಾಸ್ಟರ್ ಆಫ್ ಪ್ಯಾರಿಸ್‌ಲಾ ಆವು ಪನ್ನಿ ಕನ್ಸೆಷನ್‌ಗ್ ನಮ ಬೈದ.

ಕೆಬಿ ಕುತ್ತೆರೆ, ಮೂಕುತಿ ದೀಪಾರೆ ಬಂಗಾರ ಆಚಾರು ಓಲು ಇತ್ತ್ಂಡಲಾ ನಾಡೊಂದು ಪೋಪಿನ ಕಾಲ ಒಂಜಿ ಇತ್ತ್ಂಡ್, ತನ್ನುಲೆಗ್ ಬೋಡಿ, ಕೊತ್ತಂಬರಿ ಸರ, ಪಟ್ಟಿಸರ, ಕನಕ ಸರ, ಲಕ್ಷ್ಮಿ ಸರ, ಮಲ್ಲಿಗೆ ಸರ, ಮುತ್ತುದ ಸರ, ಸಕಲದ ಸರ, ಕಾಜಿ, ಕರಿಮಣಿ, ಇಂಚಿತ್ತಿ ಪದ್ದೆಯಿ ಬಂಗಾರ್‌ಲೆನ್ ಮಲ್ಪಾವೊಂದಿತ್ತೆರ್.

ಇತ್ತೆ ಕೆಬಿ ಕುತ್ತೆರೆ ಅಕುಲೇ ಬೋಡಿಂದಿಜ್ಜಿ. ಬಂಗಾರ್‌ದ ಅಂಗಡಿದಕುಲೇ ಒಂಜಿ ಪೆನ್‌ದಂಚಿ ವಸ್ತುಡು ಕೆಬಿ ಕುತ್ತಾವುನ ಕ್ರಮ ಬೈದ್‌ಂಡ್. ಅತ್ತಂದೆ ಇತ್ತೆ ಮಲ್ಲ ಮಲ್ಲ ಬಂಗಾರ ಅಂಗಡಿಲೆಡ್ ರೆಡಿಮೆಡ್ ಆದ್ ಡಿಸ್ಕೊ ಚೈನ್, ಟೆಂಪಲ್ ಜುವೆಲ್ಲರಿ, ಸ್ನೇಕ್ ಚೈನ್, ರೋಪ್ ಚೈನ್, ಸಿಂಗಾಪುರ್್ರ ಚೈನ್, ಬೀಟ್ ಚೈನ್, ಬಾಕ್ಸ್ ಚೈನ್, ಕಟ್‌ ಚೈನ್, ಬ್ರೇಸ್‌ಲೆಟ್ ಇಂಚಿತ್ತಿ ವಿಚಿತ್ರ ಪದರ್‌ದ ಬೇತೆ ಬೇತೆ ನಮೂನೆದ ಪದ್ದೆಯಿಲು ತಿಕ್ಕುಂಡು.

ಬಂಗಾರ ಬೇಲೆ ಕಲ್ಲಿನಕುಲು ಕಮ್ಮಿ, ಕಲ್ಪುನಕುಲುಲಾ ಕಮ್ಮಿ ಆವೊಂದುಲ್ಲೆರ್. ಬಂಗದ ಬೇಲೆ ಪಂಡ್ಸ್ ಕಲ್ಪರೆ ದುಂಬು ಬರುಜೆರ್. ಹಳ್ಳಿದ ಬಂಗಾರ್‌ದ ಅಂಗಡಿನ್ ಬುಡ್ಡು ಪೇಂಟೆದ ಅಂಗಡಿಲೆಡ್ ತಿಕ್ಕುನ ಹೊಸ ಹೊಸ ಡಿಸೈನ್‌ಲು ರೆಡಿಮೆಡ್

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 199 [ 200 ] ತಿಕ್ಕುನೆಡ್ ಜನೊಕ್ಕುಲು ಅವನೇ ಆಯ್ಕೆ ಮಲ್ಪುವೆರ್, ಬ್ಯಾಂಕ್‌ಡ್ ಬಂಗಾ‌ ಅಡವು ದೀವೊಡಾಂಡ ಅವು ಬಂಗಾರ್ ಪಂಡ್ಸ್ ತೂವರೇ ಬಂಗಾರ ಆಚಾರೆಗೇ ಲೆಪ್ಪು ಬರೊಂದಿತ್ತ್ಂಡ್. ಆಂಡ ಇತ್ತೆ ಕ್ಯಾರೆಟ್ ಏತ್ ಪಂಡ್ ತೂಪಿನ, ಏತ್ ಪಿತ್ತಲೆ ಮಿಕ್ಸ್ ಉಂಡು ತೂಪಿನ ಮಿಶನ್‌ಲಾ ಬೈದ್‌ಂಡ್, ಆಂಡಲಾ ಪಟ್ಟಿಯಿ ಬಂಗಾರ್ ಮಲ್ಲುನಕುಲು ಇಜ್ಜೆರ್ ಪಂಡ್ಸ್ ಇಜ್ಜಿ. ಅಲ್ಪಲ್ಪ ಉಲ್ಲೆರ್. ವಂಶ ಪಾರಂಪರವಾದ್ ಮತ್ತೊಂದಿತ್ತಿನಕುಲು ಈ ಉದ್ಯೋಗೊಡು ಕೆಲೆವೆ‌ ಅಲ್ಪಲ್ಪ ಉಪ್ಪುನೆನ್ ನಮ ತೂವೊಲಿ.

ಕುರ್ಚಿ, ಮೇಜ್, ಮಂಚ, ಬೆಂಚಿ, ಮಣೆ, ಸ್ಕೂಲ್, ಮುಟ್ಟದನೆ, ಪೆರದನೆ, ಲೆಂಚಿ, ಓಡ ಮರಯಿ, ಸಂಬರ ಮರಯಿ, ಕಂಡಿ ಬಾಕಿಲ್, ಪಕ್ಕಾಸ್ ರೀಪು, ದೂರಲಾ ಮರತ್ತನೇ ಆವೊಡು. ಅವೆನ್ ಮಲ್ಪುನಕುಲೇ ಇತ್ತೆರ್. ಕಡ್ಡಿಲ್ ಕೆತ್ತನೆಲು, ದೇವಸ್ಥಾನೊಲೆಡ್ ಮರತ್ತ ಕೆತ್ತನೆಲು ನಮೂನೆ ನಮೂನೆದ ಬೇಲೆ ಮಲ್ಪುನಕುಲು ನಮ್ಮ ಊರುಡಿತ್ತೆರ್.

ಇತ್ತೆ ಇಲ್ಲಗ್ ಬೋಡಿ ಮಾತಾ ವಸ್ತುಲು ಪ್ಲಾಸ್ಟಿಕ್‌ಡ್ ಇಜ್ಜಾಂಡ, ಕರ್ಬದ, ಸ್ಟೀಲ್‌ ಬರೊಂದುಂಡು. ಇಲ್ಲದ ಮಾಡ್‌ಗೆ ಕರ್ಬದ ರೀಪು ಪಕ್ಕಾಸ್ ಪಾಡೈರೆ ಸುರು ಆತ್‌ಂಡ್. ಕೈಟ್ ಮಲ್ಲೊಂದಿತ್ತಿ ಬೇಲೆ ಇತ್ತೆ ಪೂರಾ ಮಿಶನ್‌ಡ್ ಆಪುಂಡು ವಾ ಕಡ್ಡಿಲ್‌ದ ಡಿಸೈನ್‌ ಬೋಡು ಮಾತಲಾ ಮಿಶನ್‌ಡೇ ಆಪುಂಡು. ತಾರಾಯಿ ಪಿರೆಯೆರೆ ಇತ್ತೆ ಪೆರದನೆ ಬೊಡ್ಡಿ ಮಿಶಿನ್ ಬೈದ್‌ಂಡ್, ಮೀನ್ ಮಲ್ಲರೆ ಇತ್ತೆ ಕತ್ತೆರಿ ಇಯಾವು, ಕಡ್ಡರೆ, ಬುಡ್ಡಾರೆ ನಂಕ್ ಬೆನ್ನಿ ಸಾಗೋಳಿ ಕಮ್ಮಿ ಅಂಚ ಮಾತಲಾ ಬಳಕೆ ಕಮ್ಮಿ ಆವೊಂದುಂಡು, ಟ್ಯಾರಿಸ್‌ ಇಲ್ಲುಲು ದಿಂಜ್‌ದ್ ಪೋಂಡಲಾ ಕಟ್ಟುನ ಓಡುದ ಇಲ್ಲುಲು ಕಟ್ಟೋಣೆಲು ಕರ್ಬದ ಪಕ್ಕಾಸ್ ರೀಪು ಪಾಡ್ಯರೆ ಸುರು ಆತ್‌ಂಡ್. ಮರತ್ತ ಅಡ್ಡೆನು ತಿಗಿಪುನ, ರಡ್ಡೆ ರಡ್ ಜನ ಸೇರ್ ಕಿಸುಳಿ ಪಾಡುನ ಬಂಗ ಇಜ್ಜಿ. ಇತ್ತೆ ಓಡಲಾ ಮರತ್ತ ಆವೊಡಿಂದಿಜ್ಜಿ ಪೈಬರ್‌ದ ತಯಾರಾಪುಂಡು, ಪೊಸ ಇಲ್ಲ ಕಪ್ಪನಗ ಮರತ್ತ ಬೇಲೆ ಮಲ್ಪುನಗ ಕುತ್ತಿ ಪೂಜೆ ಮಲ್ಲುನ ಕ್ರಮ ಇತ್ತ್ಂಡ್. ಇತ್ತೆ ಅವು ಎಂಚಿನ ಪಂಡ್ಸ್ ಎರೆಲ್‌ಲಾ ಗೊತ್ತಿಜ್ಜಿ ದಾಯೆಪಂಡ ಎದುರುದ ಬಾಕಿಲ್ ಒಂಜಿ ಮರತ್ತ ಬುಡುಂಡ ಬೊಕ್ಕ ಮಾತಾ ಸಿಮೆಂಟ್‌ ದಾರಂದ ಫೈಬರ್‌ದ ಬಾಕಿಲ್, ಕುರ್ಚಿ, ಮೇಜಿ ಮಂಚವು ಸೋಫ ಮಲಾವುನ ಬುಡುಂಡ ಹೆಚ್ಚಿನ ಮರತ್ತ ಬೇಲೆ ಮಲ್ಪಾವುನ ಇತ್ತೆ ಬಾರಿ ಕಡಮೆ ಆವೊಂದುಂಡು. ಅಂಚಾದ್ ಹೆಚ್ಚದ ಮರತ್ತ ಬೇಲೆಗ್ ಏಲ್ಲಾ ದುಂಬು ಬರುಜೆರ್, ಇಂಚಾದ್ ಮರತ್ತ ಬೇಲೆಲು ಕಮ್ಮಿ ಆವೊಂದುಂಡು.

200 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 201 ] ಮಗ್ಗದನೇ ಸೀರೆ, ಕಚ್ಚ ತೋರ್ತು, ಮಂದಿರಿಲು ಮಗ್ಗದವೇ ಅವೊಡು ಪನ್ಪಿ ಒಂಜಿ ಕಾಲ ಇತ್ತ್ಂಡ್. ಆಂಡ ಇತ್ತೆ ಮಗ್ಗ ಪಂಡ ಎಂಚಿನ ಪಂಡ್ಸ್ ತೂವೊಡಾಂಡ ಪಿಲಿಕುಲಕ್ಸ್ ಪೋದು ತೂವೊಡಾಪುಂಡು. ನೂದು ವರ್ಷದ ಪಿರವುಡು ತುಳು ನಾಡ್‌ಡ್ ಎಚ್ಚಿನ ಇಲ್ಲೆಲೆಡ್ ಮಗ್ಗ ಇತ್ತ್ಂಡ್. ಬಾಸೆಲ್ ಮಿಶನ್‌ದಕಲ್ಪ ಹೊಸೈರಿ ಕಂಪಿನಿ ಬಸ್ತ್ಂಡಲಾ ತುಳುನಾಡ್‌ ಹೆಚ್ಚಿನ ಇಲ್ಲೆಲೆಡ್ ಇತ್ತಿನ ಮಗ್ಗೊಲೆಡ್ ಬೆನೊಂದಿತ್ತೆರ್. ಇತ್ತೆ ಮಾತಲಾ ಹೊಸ ನಮೂನೆದ ಬತ್ತಿನೆಡ್ಡಾದ್ , ನೇಯಿಗೆ ಕಲ್ಪು ಮನಸ್ಸೇ ಕಮ್ಮಿ ಆಯಿನೆಡ್ಡಿ ಕಡಮೆ ಆವೊಂದು ಬತ್ತ್ಂಡ್, ತುಳುನಾಡ್‌ಡ್ ಅಲ್ಪಲ್ಪ ಕೆಲವು ಮಗ್ಗೋಲು ಉಂಡು. ದುಂಬು ಕೊನೆವೆರೆ ನೇಕಾರ ಸಂಘಲು ಪ್ರಯತ್ನ ಮಲ್ಲೊಂದುಲ್ಲ.

ಉಂದು ಮಾತ್ರ ಅತ್ತಂದೆ, ಗಾಡ್ಡು ತಾರೆದ, ಎನ್ನೆದ, ಬೀಜದೆಣ್ಣೆ, ಉಂದು ಮಾತ ಅಳಿಯೊಂದು ಪೋದು ಮಿಲ್ ಡ್ ತಯಾರಾಪಿನವೇ ನಂಕ್ ಬರ್ಪುಂಡು. ಕುಂಟುಗು ಬಣ್ಣ ಪಾಡುನವು, ಕುಂಟು ಅರುನವುಲಾ ಒಂಜಿ ಕಸುಬು ಆದಿತ್ತಗಂಡ್. ಬಣ್ಣ ಪಾಡುನ, ಅರ್ದುನ ಮಾತಲಾ ಮಿಶನ್‌ಡೇ ಆಪುಂಡು, ಪಿತ್ತಲೆದ ಅಡ್ಯರ, ಕೊಡಪಾನ, ಮಂಡೆ, ಕಡಾಯಿ ಇಂಚಿತ್ತಿ ಬಾಜನೊಲೆನ್ ನಮ ಗಳಸುನೆನೇ ಬುಡ್ತ. ಅಂಚಾದ್ ಪಿತ್ತಳೆದ ಬೇಲೆ, ಕಲಾಯಿ ಪಾಡುನ ಬೇಲೆಲು ಇತ್ತಿತ್ತೆ ಕಮ್ಮಿ ಆವೊಂದುಂಡು.

ಓಲೆ ಬೆಲ್ಲ, ಗುಂಡು ಬೆಲ್ಲ, ಅಚ್ಚಿಬೆಲ್ಲ ಮಾತಲಾ ತಾರಾಯಿಡ್, ಕಂರ್ಬುಡು ನಮ್ಮ ಮಲ್ಲೊಂದಿತ್ತ, ಇತ್ತೆ ನಂಕ್ ಕಪ್ಪು ಇಜ್ಜಂದಿ ಬಣ್ಣ ಪಾಡ್ಡಿನ ಬೆಲ್ಲನೇ ಬೋಡು ಅಂಚಾದ್ ಕಂರ್ಬುದ ಗಾಣನೇ ನಂಕ್ ಓಲುಲಾ ತೂವರೆ ತಿಕ್ಕೂಜಿ.

ಬಜಿಲ್ ಎಡ್ಡುನ ಕುರ್ಲು ಪೊರಿ ತಯಾರಿದ ಕೊಟ್ಯೂಲೇ ನಮ್ಮ ಅಲ್ಪಲ್ಪ ಇತ್ತಂಡ್, ನೆತ್ತ ಬಳಕೆಲಾ ಕಮ್ಮಿ ಆತ್‌ಂಡ್ ಇತ್ತ್ಂಡಲಾ ನಂಕ್ ಮಿಶನ್‌ಡ್ ತಯರಾತಿನವು ಬರ್ಪುಂಡು. ನೆತ್ ಬದಲ್‌ಗ್ ನಮ್ಮ ಪಾಪ್ ಕಾರ್ನ್ದ ಪಿರವೇ ಪೋವೊಂದುಲ್ಲ. ಕಲಿ ಮೂರುನವು, ಕಲಿಟ್ಸ್ ಮರ್ದ್ ಓಲೆಬೆಲ್ಲ ತಯಾರ್ ಮಲ್ಪುನವು ತುಳುನಾಡ್‌ ಒಂಜಿ ಕಸುಬು. ಇತ್ತೆ ತಾರೆ, ತಾರಿಗ್ ಮಿತ್ತಾದ್ ಕಲಿ ದೆಪ್ಪುನಕುಲುಲಾ ಇಜ್ಜೆರ್. ಅಲ್ಪಲ್ಪ ಕಲಿತ್ತ ಗುತ್ತಿಗೆ ದೀದ್ ಮಾ‌ರೆ ವ್ಯವಸ್ಥೆಲಾ ಇದ್ದೆ ಅಂಚಾದ್‌ ಇತ್ತಿತ್ತೆ ಕಡಮೆ ಆವೊಂದುಂಡು.

ಗಿಡಮೂಲಿಕೆದ ಮರ್ದ್ ಕೊರ್ಪಿನವು ತುಳುನಾಡ್‌ದ ಮಲ್ಲ ಒಂಜಿ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 201 [ 202 ] ಕಸುಬು, ಚಿಹ್ನೆದ ಮಾತ್ರೆ, ವಾಯಿದ ಮಾತ್ರೆ, ಕೈಕ್ ಕಾರ್‌ಗ್ ಪೂಜುನ ಎಣ್ಣೆಲು, ಬೇತೆ ಬೇತೆ ಸೀಕ್‌ಗ್ ಮರ್ದ್‌ಲ್ ಕೊರೊಂದಿತ್ತೆರ್, ಇತ್ತೆ ಕಡಮೆ ಕಡಮೆ ಆವೊಂದುಂಡು. ನೆಕ್ಕ ಮರ್ದ್‌ ಕಂಪೆನಿಲೇ ಒಂಜಿ ಕಾರಣ ಅತ್ ಪಂಡ್ ಪನೊಲಿ. ಬೇರ್‌ದ, ಮರೊಕ್ಕೆ ಗುರ್ತ ಮಲ್ಪುನಕುಲು ಇಚ್ಛೆ‌, ಕಾಡ್ ನಾಶ ಆದ್ ಕೆಲವು ತಿಕ್ಕೊಂದಿಜ್ಜಿ, ಕೆಂಪು ಬೇರ್ ಪಂಡ್ಸ್ ಗೋಳಿ ಮರತ್ತ ಬೇರ್ ಮಾರುವೆರ್. ಇಂಚಾದ್ ಬಳಕೆ ಕಮ್ಮಿ ಆವೊಂದುಂಡು. ಆಂಡಲಾ ಜಿಲ್ಲೆಡ್ ಕೆಲವು ಅಯುರ್ವೆದ ಕಂಪೆನಿಲು, ಮರ್ದ್‌ದ ಗಿಡೊಕೆ ನರ್ಸರಿಲು, ಮರ್ದ್‌ ಅಂಗಡಿಲು ನಮ್ಮ ಗಿಡಮೂಲಿಕೆ ಮಹತ್ವನು ಒರಿತೊನ್ರೆ ಪ್ರಯತ್ನ ಮಲ್ತೊಂದುಲ್ಲೆರ್.

ತಾರೆದ ತೆಪ್ಪುದ ನಾರುಡ್ದ್ ಬಲ್ತ್. ಪುರಿಬಲ್ಲ್ ಕತ್ತವು ಮಲ್ಪುನವು.ಇತ್ತೆ ತಪ್ಪು ಗುದ್ದುನಕುಲುಲಾ ಇಜ್ಜಿ. ಆಂಡ ಕೇರಳೊಡು ಈ ಕ್ಷೇತ್ರೋಡು ಬೆನೊಂದುಲ್ಲೆರ್. ದುಂಬು ಕಸಿ ಕಟ್ಟರೆ ಮಣ್ಣೆನ್ ತಪ್ಪುದ ಕೂರುಡೇ ಕದ್ದೊಂದಿತ್ತೆರ್. ಐತ ಜಾಗೆಗ್ ಇತ್ತೆ ಕಪ್ಪು ತೊಟ್ಟೆ ಬೈದ್‌ಂಡ್.

ಅಂಚಾದ್ ಇತ್ತೆದ ಆಧುನಿಕತೆ ಬದ್‌ಕ್‌ಡ್‌ ಐಟ್ ಲಾ ಹೆಚ್ಚಾದ್ ಗ್ರಾಮೀಣ ಪ್ರದೇಶದ ಬದ್‌ಕ್‌ ಇತ್ತಿನ ಕೈ ಕಸುಬುಲು ಇಜ್ಜಾಂಡ ಕುಲ ಕಸುಬುಲು ಇತ್ತಿತ್ತೆ ಬರಿಕ್ ಸೇರೊಂದುಂಡು, ನೆಕ್ಕ ಮಸ್ಟ್ ಕಾರಣೋಲುಲಾ ಉಂಡು.

ಆದಾಯ ಕಮ್ಮಿ ಬರ್ಪಿನ ಕುಲಕಸುಬುಲೆಗ್ ಇತ್ತೆದ ಜವನೆ‌ ದುಂಬು ಬರುಜೆರ್. ಕಂಪೆನಿದ ವಸ್ತುಲು ಅಗ್ಗೋಡು ಓಲುಲಾ ತಿಕ್ಕುಂಡು ಪನ್ಪಿನವು ಬೊಕ್ಕೊಂಜಿ ವಾದ. ಬಂಗ ಬತ್ತ್ ದ್ ತಾಳ್ಮೆಡ್ ಬೇಲೆ ಮಲ್ಪುನಕುಲು ಕಮ್ಮಿ, ಮಲ್ತ್ಂಡಲಾ ದೆತ್ತೊನುನಕುಲು ಇಜ್ಜಿ. ಇಂಚಿತ್ತಿ ಪರಿಸ್ತಿತಿಟ್ಸ್ ತುಳುವೆರಾಯಿ ನಮ ನಮ ಉಪಕಸುಬುಲೆನ್, ಕುಲ ಕಸುಬುಲೆನ್ ಒರಿತೊನ್ರೆ ದಾದ ಮಲ್ಲೊಲಿ ಪನ್ನಿ ಪ್ರಶ್ನೆಲಾ ನಮಡ ಬರುಂಡು, ನಮ್ಮ ಪ್ರದೇಶೂಲೆಡ್ ಆಪಿ ಇಂಚಿತ್ತಿ ಕಸುಬುಲೆಗ್ ನಮ ಪ್ರೊತ್ಸಾಹ ಕೊರ್ಕ ನಮ ಪರಿಸರೊಟು ತಯಾರಾಪಿ ವಸ್ತುಲೆನ್ ನಮ ದೆತೊನುಗ, ಅವೆನ್ ಗಳಸುನೆಡ್ ಲಾಭ ದಾದ ಪಂಡ್ಸ್ ತೆರಿಯೊಂದು ಬೊಕ್ಕೊರಿಯ‌ ತೆರಿಪಾಗ ಪ್ಲಾಸ್ಟಿಕ್ ಮೈಸುಡ್ಡು, ಸಿಂಕಿರಿದ ಮೈಪು, ಕಪ್ಪರೊಟ್ಟಿಗೆ ಮಣ್ಣ ಓಡು, ಬಂಗುಡೆ ಪುಳಿಮುಂಚಿಗ್ ಮಣ್ಣೆ ಬಿಸಿಲೆ, ಗಾಣದ ಎಣ್ಣೆ. ಗಿಡಮೂಲಿಕೆ ಮರ್ದ್, ಮಗ್ಗದ ಕುಂಟು, ಕೊಡಪಟ್ಯಡ್ ಮಲ್ಲಿನ ಕತ್ತಿ, ಕಂಡೊಂಡು ಕೊರಂಬು, ಇಂಚ ಒಂಜೊಂಜೆನಾಂಡಲಾ ನಮ್ಮ ಮದಪಂದೆ ಅವೆನ್ ಗಳಸುನ ಪ್ರಯತ್ನ ಮಲ್ಲುಗ, ಉಂದೆನ್ ಮಲ್ಲುನಕ ಬೇಲೆಗ್ ಮತ್ಯಾದಿ ಕೊರ್ಕ ನೆಕ್ಕ ಮನೆಮನ ಸಹಕಾರ ಸಂಗೊಲೆಗ್ ಪ್ರೋತ್ಸಾಹ ಕೊರ್ಕ, ಅಂಚಾಂಡ ಮಾತ್ರ

202 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 203 ] ಮಹಾತ್ಮ ಗಾಂದಿ ವೇದವಾಕ್ಯ ಆಯಿನ ಗ್ರಾಮೋದ್ಯೋಗ ನಮ್ಮ ಬ‌ದ್ಕ್ನ್ ಒರಿಪಾವು ಪಂಡ್‌ಂಡ ತಪ್ಪಾವಂದ್‌.

ಬಸವಣ್ಣನ ಅನುಭವಮಂಟಪೊಡು ಕಲಿ ಮಾರುನ ಒರಿ ಶರಣನ ವಿಚಾರ ಬಪ್ಪುಂಡು. ಬಸವಣ್ಣಗ್ಲಾ ಕಲಿ ಮಾರುನಾಯಗ್‌ ಒಲ್ತ ಸಮ್ಮಂಧ ಪನ್ರಿ ಪ್ರಶ್ನೆ ನಮಡ ಬರಿಯೆರೆ ಸಾದ್ಯ ಉಂಡು. ಬಸವಣ್ಣೆ ಕಟ್ಟಿನ ಅನುಭವ ಮಂಟಪ ಜಾತಿ, ಬಣ್ಣ, ಲಿಂಗ, ಬೇದೊಲೆನ್ ದೆತ್ತ್ದ್ ಪಾಡ್ದ ದ್ ಎಡ್ಡೆ ಮನಸ್ಸದ ಸಮಾಜೊನು ನಿರ್ಮಾಣ ಮಲ್ಲುನ ಕಲ್ಪನೆನ್ ನಂಕ್ ತೋಜಾದ್ ಕೊರುಂಡು. ಉದ್ಯೋಗೊಡ್ಡು ನರಮಾನಿನ್ ಲಪ್ಪೆರೆ ಆವಂದ್. ವಾ ಉದ್ಯೋಗ ಆಂಡಲಾ ಅವು ಶ್ರೇಶ್ಟದವು. ನೂಲುದ ಬೇಲೆದ ನುಲಿಯ ಚಂದಯ್ಯ, ಕಣಕ್ ಮಾರುನ ಮೋಳಿಗೆ ಮಾರಯ್ಯ, ಸಮಗಾರೆ ಹರಳಯ್ಯ, ಸುಂಕದ ಬಂಕಣ್ಣ, ಮಡಿವಾಳೆ ಮಾಚಿತಂದೆ, ಅಂಬಿಗರ ಚೌಡಯ್ಯ, ಹೆಂಡದ ಮಾರಯ್ಯ, ಇಂಚ ಮಾತ ವೃತ್ತಿಲೆಗ್ ಐತ್ತವೇ ಬಿಲೆ ಇತ್ತಂಡ್.

ಕುಲ ಕಸುಬು ಇಜ್ಜಾಂಡ ಉಪ ಕಸುಬುಲು ಹೆಚ್ಚ ಬಂಡವಾಳ ದಾಂತೆ ಮಲ್ಪುನವು, ಐಕ್ ಬೋಡಿತ್ತಿ ಕಚ್ಚಾ ವಸ್ತುಲು ಪಿದಯಿಡ್ಸ್ ಬಲ್ಪನವು ಅತ್ತೆ ನಮ್ಮಲೆ ತಿಕ್ಕುನವು, ಮಾರಾಟೊಗುಲಾ ಪಿದಯಿ ಕೊನೊದು ಮಾರೊಡಿಂದಿಜ್ಜಿ. ನಮ್ಮಲೆ ಮಾರೊಲಿ, ಆರೋಗ್ಯ ದೃಷ್ಟಿಡ್ ನಮ ಮಲ್ತಿನ ಏತ್ ಎಡ್ಡೆನಾ ಅಂಚನೇ ನಮ್ಮ ಊರುಡು ಆಪಿನ ಇಂಚಿತ್ತಿ ಕೈ ಕಸುಬುಲು ನಮ್ಮ ಆರ್ಥಿಕ ವ್ಯವಸ್ಥೆಗ್ ಬುನಾದಿಯಾದುಂಡು. ಇಂಚಾದ್ ಇಂಚಿತ್ತಿ ಕಸುಬುಲೆಗ್ ಬಿಲೆ ಕೊರ್ಕ, ಪ್ರೋತ್ಸಾಹ ಮಲ್ಪುಗ, ಮದಪಂದಿಲೆಕ್ಕ ತೂಕ.

ನಮ್ಮ ಭಾರತ ದೇಶ ಹಳ್ಳಿಲು ಉಪ್ಪು ದೇಶ. ಗ್ರಾಮ ಸ್ವರಾಜ್ಯ, ಗುಡಿಕೈಗಾರಿಕೆ, ಖಾದಿ ಗ್ರಾಮೋದ್ಯೋಗೋ ಉಂದು ಮಹಾತ್ಮ ಗಾಂಧೀಜಿನ ಕನ. ಉಂದೆಕ್ಕಾದ್ ಸರಕಾರಲಾ ಕುಲ ಕಸುಬುಲೆಗ್, ಗುಡಿ ಕೈಕಾರಿಕೆಲೆಗ್, ಉಪ ಕಸುಬುಲೆಗ್ ಬೆರಿ ಸಾಯ ಕೊರೊಂದುಂಡು. ಇತ್ತಿತ್ತೆ ನೇಕಾರ ಸಂಘ, ಮೂರ್ತೆದಾರರ ಸಂಘ, ಕುಂಬಾರರ ಸಂಘ, ಮೀನುಗಾರರ ಸಂಘ, ಇಂಚ ಬೇತೆ ಕುಲ ಕಸುಬುಲೆಗ್ ಗುಡಿ ಕೈಗಾರಿಕೆಲೆಗ್ ಸಂಘ ಸಂಸ್ಥೆಲು ಪುಟೊಂದು ಬೆನೊಂದುಂಡು. ಇಂಚಿತ್ತಿ ಸಂಘ ಸಂಸ್ಥೆಲೆಗ್ ನಮ್ ಬೆರಿ ಸಾಯ್ ಕೊರೊಂದಿತ್ತ ನಮ್ ಬದ್‌ಕ್‌ ನಮ ಗುಡಿಕೈಗಾರಿಕೆಲು, ಕುಲಕಸುಬುಲು, ಉಪ ಕಸುಬುಲು ಒರಿಯಡ್ ಪನವೇ ನಮ್ಮ ಆಶಯ ಆವಡ್,

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 2 203 [ 204 ] ಪುಸ್ತಕ ಪ್ರೀತಿ, ಸಂಗ್ರಹ ಯಾಕೆ ಹೇಗೆ ?

ಗ್ರಂಥವಿಲ್ಲದ ಕೋಣೆ ಆತ್ಮವಿಲ್ಲದ ದೇಹವಿದ್ದಂತೆ- ಸಿಸಿರೋ ಶಾಸನಗಳು ಸಾಯುತ್ತವೆ ಗ್ರಂಥಗಳಿಗೆ ಸಾವಿಲ್ಲ- ಬುಲ್‌ವರ್ ಲಿಟ್ಟನ್ ಸುಖವನ್ನು ಸಂಗ್ರಹಿಸಬೇಕಾದರೆ ಪುಸ್ತಕವನ್ನು ಸಂಗ್ರಹಿಸು- ಎ. ಸ್ಟಾರೆಟ್ ಒಳ್ಳೆಯ ಪುಸ್ತಕಗಳ ಸಂಗ್ರಹವೇ ಒಂದು ವಿಶ್ವವಿದ್ಯಾಲಯ- ಥಾಮಸ್‌ ಕಾಲ್‌ರೈಟ್ ಪುಸ್ತಕವನ್ನು ನಿಜವಾಗಿ ಪ್ರೀತಿಸುವವರಿಗೆ ಒಳ್ಳೆಯ ಸ್ನೇಹಿತರ ಅಗತ್ಯ ಕೂಡಾ ಇಲ್ಲ-ಬರೋ

ಮಾನವ ಕುಲದ ಇತಿಹಾಸದಷ್ಟೇ ಗ್ರಂಥಗಳ ಇತಿಹಾಸವೂ ಪ್ರಾಚೀನವಾದುದು. ಬೇಟೆ ಮಾಡುತ್ತಿದ್ದ ఆది ಮಾನವನಿಗೆ ತನ್ನ ಸಹಪಾಠಿಗಳೊಂದಿಗೆ ಮಾತನಾಡಲು ಭಾಷೆ ಇರಲಿಲ್ಲ. ಸಂಗ್ಜ್ನೆಯಿಂದಲೇ ಅವನ ವಿಚಾರ ವಿನಿಮಯ ಆಗುತ್ತಿತ್ತು. ತಾನು ಕಂಡ ಭಾವನೆಗಳನ್ನು ಗುಹೆಗಳ ಗೋಡೆಯ ಮೇಲೆ, ಮರದ ತೊಗಟೆಯ ಮೇಲೆ ಮೂಡಿಸಲು ಪ್ರಾರಂಭಿಸಿದ. ಅವುಗಳು ಹೆಚ್ಚಾಗಿ ಚಿತ್ರಗಳಾಗಿದ್ದವು. ಆ ಚಿತ್ರಗಳೇ ಅಕ್ಷರ ವಿಚಾರಗಳಾಗಿ ಭಾಷೆಯ ಉಗಮವಾಯಿತು. ಮೊದಲು ಚಿತ್ರರೂಪವಾಗಿ ಜನ್ಮತಳೆದ ಲಿಪಿ ಅಕ್ಷರ ಮಾಲೆಯಾಗಿ ಬೆಳೆದು ಬಂದಿತು. ಕಾಲಕ್ರಮೇಣ ಜಗತ್ತಿನ ಜ್ಞಾನವನ್ನು ಸಂಗ್ರಹಿಸಿ ಬಿತ್ತರಿಸುವಲ್ಲಿ ಸಹಾಯಕವಾಯಿತು. ವೇದಗಳ ಕಾಲದಲ್ಲಿ ಜ್ಞಾನಪ್ರಸಾರವು ತಂದೆಯಿಂದ ಮಗುವಿಗೆ, ಗುರುವಿನಿಂದ ಶಿಷ್ಯನಿಗೆ ಬಾಯಿಂದ ಬಾಯಿಗೆ ಆಗುತ್ತಿತ್ತು. ಜನಸಾಮಾನ್ಯರಿಗೆ ಗ್ರಂಥರೂಪದಲ್ಲಿ ಜ್ಞಾನ ಸಂಗ್ರಹಿಸುವ ಅವಶ್ಯಕತೆ ಕಂಡು ಬರಲಿಲ್ಲ. ಆದರೆ ಜ್ಞಾನದ ರಾಶಿ ಬೆಳೆಯುತ್ತಾ ಹೋಯಿತು. ಎಲ್ಲವನ್ನೂ ನೆನಪಿನಲ್ಲಿಡಲು ಸಾದ್ಯವಾಗಲಿಲ್ಲ. ನೆನಪಿನ ಶಕ್ತಿ ಕೈಕೊಟ್ಟಾಗ ಯಾವುದಾದರೂ ಒಂದು ಸಾಧನದ ಮೇಲೆ ಅದನ್ನು ಮೂಡಿಸಲು ಪ್ರಯತ್ನಿಸಿದ. ಆಗ ಶಿಲೆ, ಇಟ್ಟಿಗೆ, ಚರ್ಮ, ತೊಗಟೆ, ತಾಡ ಓಲೆ, ತಾಮ್ರ ಮುಂತಾದವುಗಳನ್ನು ಬಳಸಿ ಅವುಗಳಲ್ಲಿ ಜ್ಞಾನದ ನಿಧಿಯನ್ನು ಸಂಗ್ರಹಿಸಿದ.

204 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 205 ] ವಿಶ್ವದ ಸಮಸ್ತ ಬೌದ್ಧಿಕ ವ್ಯಾಪಾರಗಳಿಗೆಲ್ಲ ಮನುಷ್ಯನೇ ಕೇಂದ್ರಬಿಂದು. ಮನುಷ್ಯನಿಗೆ ಮನುಷ್ಯತ್ವ ಬಂದುದು ಬುದ್ಧಿಯ ಬೆಂಬಲದಿಂದ. ಈ ಬುದ್ದಿಯನ್ನು ವಿದ್ಯೆ ಪರಿಷ್ಕರಣಗೊಳಿಸುತ್ತದೆ. ಈ ಬುದ್ಧಿ ವಿದ್ಯೆಗಳು(1)ಸ್ವಾನುಭವ (2) ನಿಸರ್ಗ(3)ಗುರು (4)ಗ್ರಂಥ- ಹೀಗೆ ನಾಲ್ಕು ವಿಧದಿಂದ ಬಲಗೊಳ್ಳುತ್ತದೆ. ಸ್ವಾನುಭವ ತಿಳುವಳಿಕೆಯು ವ್ಯಕ್ತಿಗತವಾದುದು. ನಿಸರ್ಗ ತಿಳುವಳಿಕೆಯು ಸ್ಥಳಬದ್ಧವಾದದ್ದು, ಗುರುವಿನಿಂದ ಬರುವ ತಿಳುವಳಿಕೆಯು ಕಾಲಬದ್ಧವಾದದ್ದು. ಆದರೆ ಗ್ರಂಥದಿಂದ ಬರುವ ಜ್ಞಾನವು ಎಲ್ಲಾ ಜ್ಞಾನಗಳನ್ನು ಒಳಗೊಂಡ ಜ್ಞಾನಜ್ಯೋತಿಯಾಗಿರುತ್ತದೆ.

ಉತ್ತಮ ಗ್ರಂಥವು ಒಬ್ಬ ತಪಸ್ವಿಯ, ಮೇಧಾವಿಯ ಇಡೀ ಜೀವನದ ಚಿಂತನದ ಫಲ, ಅನುಭವಾಮೃತ, ಜೀವನದಲ್ಲಿ ಬಂದ ಎಡರು ತೊಡರುಗಳನ್ನು ಎದುರಿಸಲು ಇತರರ ಸಲಹೆ ಕೇಳುವುದಕ್ಕಿಂತ ಗ್ರಂಥಗಳ ಮೊರೆಹೋಗುವುದೇ ಲೇಸು. ಗ್ರಂಥಗುರು ನಮ್ಮೆಲ್ಲ ಸಮಸ್ಯೆಗಳಿಗೂ ಉತ್ತರಿಸಬಲ್ಲ. ದಾರಿ ತೋರಿಸಬಲ್ಲನಲ್ಲದೆ ಸನ್ಮಾರ್ಗದಲ್ಲಿ ನಡೆಸಬಲ್ಲವನಾಗಿದ್ದಾನೆ. ಹಿರಿಯರ ಸಲಹೆ ಕೇಳಿದಾಗ ಸ್ವಾರ್ಥ ಸಾಧನೆಯಲ್ಲಿ ತಪ್ಪು ಬೋಧನೆ ಮಾಡಬಹುದು. ಆದರೆ ಗ್ರಂಥಗುರು ಎಂದಿಗೂ ಮೋಸ ಮಾಡುವುದಿಲ್ಲ. ಒಂದು ಉತ್ತಮ ಗ್ರಂಥವನ್ನು ಮತ್ತೆ ಮತ್ತೆ ಓದುವುದೆಂದರೆ ಸ್ನೇಹಿತನ ಸ್ನೇಹವನ್ನು ಇನ್ನು ಹೆಚ್ಚುಗೊಳಿಸಿದಂತೆ. ಗ್ರಂಥಗಳು ಓದಲಿಕ್ಕಾಗಿ ಇವೆ. ಮುಚ್ಚಿಡಲಿಕ್ಕಾಗಿ ಅಲ್ಲ.ಅವುಗಳ ಉಪಯೋಗವನ್ನು ನಾವು ಸರಿಯಾಗಿ ಮಾಡಿಕೊಳ್ಳಬೇಕು. ಪ್ರಕಟವಾದ ಪ್ರತಿಯೊಂದು ಗ್ರಂಥಕ್ಕೂ ಅದರ ಓದುಗನು ಇದ್ದೇ ಇರುತ್ತಾನೆ. ಆದ್ದರಿಂದ ಯಾವುದೇ ಪುಸ್ತಕವನ್ನು ಅಲಕ್ಷ್ಯ ಮಾಡಬಾರದು.

ಓದುವುದು : ಲಿಖಿತ ಅಥವ ಮುದ್ರಿತ ಸಂಕೇತಗಳ ಮೂಲಕ ವ್ಯಕ್ತವಾಗುವ ಕೃತಿಕಾರನ ಅಬಿಪ್ರಾಯವನ್ನು ಗ್ರಹಿಸುವ ಮತ್ತು ಅದಕ್ಕೆ ಅನುಗುಣವಾಗಿ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುವ / ಮಾನವನ ಅನುಭವ ಸಂಪತ್ತನ್ನು ಹೆಚ್ಚಿಸಿಕೊಳ್ಳಲು ಇರುವ ಬಹು ಮುಖ್ಯ ಸಾಧನ. ಪ್ರತಿ ವ್ಯಕ್ತಿಯೂ ಶಿಕ್ಷಣದಿಂದ ತನ್ನ ವ್ಯಕ್ತಿತ್ವವನ್ನು ಪರಿಪೂರ್ಣವಾಗಿ ವಿಕಸಿಸುವಂತೆ ಮಾಡಿಕೊಳ್ಳುವುದು ಅಗತ್ಯವೆಂಬ ಅಬಿಪ್ರಾಯವಿರುವ ಈ ಕಾಲದಲ್ಲಿ ಓದುವುದಕ್ಕೆ ವ್ಯಾಸಂಗ ಕ್ರಮಗಳಲ್ಲಿ ಪ್ರಧಾನ ಸ್ಥಾನವನ್ನು ಕೊಟ್ಟಿದೆ. ಶಾಲಾ ಜೀವನದಲ್ಲಿ ವಿದ್ಯಾರ್ಥಿ ಈ ಕಲೆಯನ್ನು ಬೆಳೆಸಿಕೊಳ್ಳುವ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 205 [ 206 ] ಸಾಕಷ್ಟು ಅವಕಾಶವಿದೆ, ವಿವಿಧ ಕ್ಷೇತ್ರಗಳಿಗೆ ಸಂಬಂಧಪಟ್ಟ ವಿಷಯಗಳನ್ನು ಪಠ್ಯ ಪುಸ್ತಕಗಳ ಮೂಲಕ, ಆಟಪಾಠಗಳ ಮೂಲಕ, ವಿಚಾರ ಗೋಷ್ಠಿಗಳ ಮೂಲಕ ಅರಿಯಲು ಅನುಕೂಲವಿದೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಅತ್ಯಗತ್ಯವಾಗಿ ಬೇಕಾದುದು ಓದಿನ ನೈಪುಣ್ಯ, ಹೀಗಾಗಿ ಶಾಲೆಗಳಲ್ಲಿ ಕಲಿಯುವ ಚರಿತ್ರೆ, ಭೂಗೋಳ, ಸಾಹಿತ್ಯ, ವಿಜ್ಞಾನ, ಗಣಿತ, ಮುಂತಾದ ವಿಷಯಗಳಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಬೇಕಾದರೆ ಒಳ್ಳೆಯ ಓದುಗಾರಿಕೆಯನ್ನು ಸಾಧಿಸಬೇಕು.

ಪುಸ್ತಕ ಸಂಗ್ರಹ ಯಾಕೆ, ಭಾರತೀಯರ ಮನೆಗಳಲ್ಲಿ ಒಂದು ಕಾಲಕ್ಕೆ ಅಜ್ಜ ಅಜ್ಜಿಯರ ಪಾತ್ರ ಹಿರಿದಾಗಿತ್ತು ಅವರು ಸಂಜೆಯ ಹೊತ್ತು ಮೊಮ್ಮಕ್ಕಳನ್ನು ಒಂದು ಕಡೆ ಕಲೆಹಾಕಿ ಅವುಗಳಿಗೆ ಬಾಯಿ ಪಾಠ ಹೇಳಿಕೊಡುವುದು ರೂಢಿಯಲ್ಲಿತ್ತು. ಅಕ್ಷರ, ಮಗ್ಗಿ, ತಿಥಿ, ವಾರ, ನಕ್ಷತ್ರ, ಮುಂತಾದವುಗಳನ್ನು ಬಾಯಿ ಪಾಠ ಮಾಡಿಸುತ್ತಿದ್ದರು. ಮಕ್ಕಳಿಗೆ ಒಳ್ಳೆಯ ಶ್ಲೋಕಗಳನ್ನು ಕಲಿಸುತ್ತಿದ್ದರು. ಮಕ್ಕಳು ನಿಶಬ್ಬರಾಗಿ ಕುಳಿತು ಅಜ್ಜ ಅಜ್ಜಿ ಹೇಳುತ್ತಿದ್ದ ಕತೆಗಳನ್ನು ಕೇಳುತ್ತಿದ್ದರು. ಕೆಲವು ಮಕ್ಕಳು ಕತೆಗಳನ್ನು ಕೇಳುತ್ತಿರುವಾಗಲೇ ನಿದ್ದೆ ಮಾಡುತ್ತಿದ್ದರು. ಈ ಪರಿಪಾಟ ಈಗಲೂ ಹಿರಿಯರು ಇರುವ ಮನೆಗಳಲ್ಲಿ ನಡೆಯುತ್ತಿದೆ. ಆದರೂ ಈ ಬಗ್ಗೆ ಮೊದಲಿದ್ದ ಪ್ರಾಶಸ್ತ್ರ ಕಡಿಮೆ ಆಗಿದೆ. ಕಾರಣ ದೊಡ್ಡ ಕುಟುಂಬಗಳ ಬದಲಿಗೆ ಚಿಕ್ಕ ಚಿಕ್ಕ ಕುಟುಂಬಗಳು ಬಾಳುವ ವ್ಯವಸ್ಥೆ ರೂಢಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಜ್ಜ ಅಜ್ಜಿಯರ ಸ್ಥಾನವನ್ನು ನರ್ಸರಿ ಶಾಲೆಗಳು ಮತ್ತು ಅಚ್ಚಾದ ಪುಸ್ತಕಗಳು ಆಕ್ರಮಿಸಿವೆ.

ಜ್ಞಾನವು ತೊಟ್ಟಿಲಿನಿಂದ ಸಮಾಧಿವರೆಗೆ ಸಾಗುವ ನಿರಂತರ ಕಾರ್ಯ ಚಟುವಟಿಕೆ ಎಂಬ ಅಂಶವನ್ನು ಎಲ್ಲರೂ ಒಪ್ಪತಕ್ಕದ್ದು, ಓದುಗಾರಿಕೆಯು ಮಕ್ಕಳಿಗೆ ಆರನೇ ವರ್ಷದಿಂದ ಆರಂಭವಾಗುತ್ತದೆ. ಅರು ವರ್ಷದಿಂದ ಹಿಡಿದು ವೃದ್ಧಾಪ್ಯದವರೆಗೂ ಓದಬಹುದು. ಆದ್ದರಿಂದ ಪ್ರತಿಮನೆಯಲ್ಲಿಯೂ ಒಂದೊಂದು ಪುಟ್ಟ ಗ್ರಂಥಾಲಯವಿರಬೇಕು. ನಮ್ಮ ಮನೆಯ ಪುಟ್ಟ ಗ್ರಂಥಾಲಯಗಳಲ್ಲಿ ಎಲ್ಲ ಧರ್ಮಗಳನ್ನು ತಿಳಿದುಕೊಳ್ಳುವ ಧಾರ್ಮಿಕ ಗ್ರಂಥಗಳು, ವಿಷಯ ವಿಶ್ವಕೋಶ. ನಿಘಂಟುಗಳು, ಮನೆಮದ್ದು, ಔಷಧ, ಕ್ರೀಡೆ, ಭಾಷೆ, ಅಡಿಗೆ, ಪರಿಸರ, ಚರಿತ್ರೆ, ವಿಜ್ಞಾನ, ಕತೆ, ಕಾದಂಬರಿ, ಕವನ, ಸಂಸ್ಕೃತಿ ಇಂತಹ ಮುಖ್ಯ ವಿಭಾಗಗಳಲ್ಲಿ ಕೆಲವಾದರೂ ಇರಬೇಕು. ಇಂತಹ ಸಂಗ್ರಹಗಳು ನಮ್ಮ ಮನೆಗಳಲ್ಲಿದ್ದರೆ ಮನೆ ಮಂದಿಯೆಲ್ಲರೂ ಪುಸ್ತಕ ಜ್ಞಾನವನ್ನು ಪಡೆಯಲು ಖಂಡಿತ ಸಾಧ್ಯ.

206 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... [ 207 ] ಜೋಡಣೆ ಹೇಗೆ. ಪುಸ್ತಕ ಸಂಗ್ರಹ ಹೆಚ್ಚಾದಂತೆ ಅವುಗಳನ್ನು ಜೋಡಿಸುವುದು ಸಮಸ್ಯೆಯಾಗಬಹುದು. ಪುಸ್ತಕಗಳ ಸಂಗ್ರಹದ ರಾಶಿಯಲ್ಲಿ ಬೇಕೆಂದಾಗ ಕೈಗೆ ಸಿಕ್ಕುವಂತಾದರೆ ಮಾತ್ರ ಅದರ ಉಪಯೋಗ ಹೆಚ್ಚು. ಗ್ರಂಥಾಲಯಗಳಲ್ಲಿ ವರ್ಗೀಕರಣ ಪದ್ದತಿ ಪ್ರಕಾರ ಪುಸ್ತಕ ಜೋಡಣೆ ಮಾಡಲಾಗುತ್ತದೆ. ಯಾಕಂದರೆ ಅಲ್ಲಿ ಸಾವಿರಾರು ಪುಸ್ತಕಗಳಿರುತ್ತದೆ. ಆದರೆ ಮನೆಗಳ ಪುಸ್ತಕ ಸಂಗ್ರಹದಲ್ಲಿ ಸ್ವಲ್ಪ ಪುಸ್ತಕಗಳು ಮಾತ್ರ ಇರುವುದರಿಂದ ವಿಷಯಗಳಿಗನುಗುಣವಾಗಿ ಜೋಡಿಸಿಡಬೇಕು. ಸಂಗ್ರಹ ಹೆಚ್ಚಾದಂತೆ ಜೋಡಣೆಯ ಸಮಸ್ಯೆ ಖಂಡಿತ. ಮನೆಯಲ್ಲಿ ಸಂಗ್ರಹ ಮಾಡುವವರು 1) ಸಾಮಾನ್ಯ 2) ತತ್ವಶಾಸ್ತ್ರ 3) ಸಮಾಜ 4)ಭಾಷೆ 5) ವಿಜ್ಞಾನ 6) ತಂತ್ರಜ್ಞಾನ 7) ಕಲೆ 8) ಸಾಹಿತ್ಯ 9) ಚರಿತ್ರೆ ಹೀಗೆ 10 ವಿಭಾಗಳಾಗಿ ವಿಂಗಡಿಸಿ ಜೋಡಿಸಿಟ್ಟರೆ ಬೇಕಾದಾಗ ಬೇಕಿದ್ದ ಪುಸ್ತಕಗಳನ್ನು ಉಪಯೋಗ ಮಾಡಬಹುದು. ನಮಗೆ ಅಗತ್ಯವಿಲ್ಲದ ಪುಸ್ತಕಗಳು ಇದ್ದರೆ ಹತ್ತಿರದ ಗ್ರಂಥಾಲಯಗಳಿಗೆ ಅವುಗಳನ್ನು ದಾನ ಮಾಡಿ ಆ ಗ್ರಂಥಾಲಯದೊಂದಿಗೆ ಸಂಬಂಧವನ್ನು ಹೆಚ್ಚಿಸಿಕೊಳ್ಳಬೇಕು. ಈ ವ್ಯವಸ್ಥೆಯಿಂದ ನಮಗೆ ಬೇಕಿದ್ದ ಗ್ರಂಥಗಳಿಗಾಗಿ ಆ ಗ್ರಂಥಾಲಯಗಳ ಪ್ರಯೋಜನ ಪಡೆಯಬಹುದು.

ಪುಸ್ತಕ ಜೋಪಾನ ಸಂಗ್ರಹಕ್ಕೆ ಪುಸ್ತಕಗಳನ್ನು ಸೇರಿಸುವಾಗ ಅದನ್ನು ಉತ್ತಮ ರೀತಿಯಲ್ಲಿ ಸೇರಿಸಬೇಕು. ಉತ್ತಮವಾದ ಬೈಂಡ್ ಮಾಡಿಸಬೇಕು ಪುಸ್ತಕದಲ್ಲಿದ್ದ ಪಿನ್ನನ್ನು ತೆಗೆದು ಅದರ ಸ್ಥಾನದಲ್ಲಿ ದಾರ ಹಾಕಬೇಕು. ಪಿನ್ನುಗಳಿದ್ದರೆ ಅವುಗಳು ತುಕ್ಕು ಹಿಡಿದು ಪುಸ್ತಕವನ್ನು ಹಾಳು ಮಾಡುತ್ತವೆ. ಹರಿದ ಹಾಳೆಗಳನ್ನು ಸೆಲ್ಯೂಟೇಪಿನಿಂದ ಅಂಟಿಸಬಾರದು. ಸೆಲ್ಯೂಟೇಪ್ ಅಂಟಿಸಿದ ಸ್ಥಳದಲ್ಲಿ ಕೆಂಪಾಗಿ ಅಲ್ಲಿದ್ದ ಅಕ್ಷರಗಳು ಓದಲು ಕಷ್ಟವಾಗುತ್ತದೆ. ಹರಿದ ಕಾಗದಗಳನ್ನು ಬಟರ್ ಪೇಪರ್ ಅಂಟಿಸಿ ಸರಿಪಡಿಸಬಹುದು. ಮನೆಯಲ್ಲಿಯೇ ಪುಸ್ತಕಗಳನ್ನು ದುರಸ್ತಿ ಮಾಡುವುದಿದ್ದರೆ ಪ್ರೆಸ್‌ನಲ್ಲಿ ತಯಾರಿಸಿದ ಅಂಟುಗಳನ್ನೇ ಬಳಸಬೇಕು ವಿನಾ ಮನೆಯಲ್ಲಿ ತಯಾರಿಸಿದ ಗೋದಿ, ಮೈದಾ ಹಿಟ್ಟಿನ ಅಂಟನ್ನು ಅಥವಾ ಅಂಟೆಗಾಗಿ ಅನ್ನವನ್ನು ಬಳಸಬಾರದು.

ಗ್ರಂಥ ಸಂರಕ್ಷಣೆ: ಗ್ರಂಥಗಳು ಹಾಳಾಗಲು ಹಲವಾರು ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾದುದು ಅವನ್ನು ನಾವು ಉಪಯೋಗಿಸುವ ಕ್ರಮ ಹಾಗೂ ಸಂಗ್ರಹಿಸುವ ಕ್ರಮ. ಜಾಗ್ರತೆಯಿಂದ ಪುಸ್ತಕಗಳನ್ನು ಬಳಸುವುದರಿಂದ ಅವು

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 207 [ 208 ]ಬಹುಕಾಲ ಬಾಳಿಕೆ ಬರುತ್ತವೆ. ಪುಸ್ತಕಗಳನ್ನು ಸಂಗ್ರಹದಿಂದ ತೆಗೆಯುವಾಗ ಅದರ ಬೆನ್ನನ್ನು ಹಿಡಿದೆಳೆಯದೇ ಸರಿಯಾಗಿ ಪುಸ್ತಕವನ್ನು ಹಿಡಿದುಕೊಂಡು ತೆಗೆಯಬೇಕು. ಕೆಳಗೆ ಬೀಳಿಸುವುದಾಗಲೀ, ಅವುಗಳ ಮೇಲೆ ಕುಳಿತುಕೊಳ್ಳುವುದಾಗಲೀ, ತಲೆದಿಂಬಿನ ಹಾಗೆ ಉಪಯೋಗಿಸುವುದಾಗಲೀ,ಪೆನ್ನು , ಪೆನ್ಸಿಲಿನಿಂದ ಬರೆಯುವುದಾಗಲೀ, ಹಾಳೆಗಳ ಕಿವಿ ಮಡಿಚಿ ಇಡುವುದಾದಲೀ ಬೆನ್ನು ಕೆಳಗೆ ಮುರಿಯುವುದಾಗಲೀ ನಿಷಿದ್ಧ.
ಬೆಳಕು, ಕತ್ತಲೆ ಹಾಗೂ ಗಾಳಿಯಿಂದಲೂ ಪುಸ್ತಕಗಳು ನಶಿಸುತ್ತವೆ. ಸೂರ್ಯನ ಬೆಳಕು ಮತ್ತು ಶಾಖದಿಂದ ಕಿರಣಗಳು ನೇರವಾಗಿ ಗ್ರಂಥಗಳ ಮೇಲೆ ಬೀಳದಂತೆ ಜಾಗ್ರತೆ ವಹಿಸಬೇಕು. ಸೂರ್ಯನ ಬೆಳಕು ಹಾಗೂ ಶಾಖದಿಂದ ಹಲವಾರು ಕ್ರಿಮಿಕೀಟಗಳನ್ನು ದೂರವಿಡಬಹುದಾದರೂ ಸೂರ್ಯನ ಶಾಖದಿಂದ ಹಾಳೆಗಳು ಸತ್ವಹೀನವಾಗುತ್ತದೆ. ಹಾಗೆಯೇ ಕತ್ತಲಿನಲ್ಲಿ ಗ್ರಂಥಗಳನ್ನಿಟ್ಟರೆ ಶೀತಾಂಶ ಹೆಚ್ಚಿ ಬೂಷ್ಟು ಬರಲು ಅವಕಾಶವಾಗುತ್ತದೆ. ಅಲ್ಲದೆ ಕ್ರಿಮಿಕೀಟಗಳು ಹೆಚ್ಚಲು ಸಹಾಯವಾಗುತ್ತದೆ. ಗಾಳಿಯಿಂದಲೂ ಗ್ರಂಥಗಳಿಗೆ ಕೆಡುಕಾಗುತ್ತದೆ. ಗಾಳಿಯು ಹೆಚ್ಚು ಉಷ್ಣತೆಯಿಂದಾಗಲೀ ಇಲ್ಲವೇ ಹೆಚ್ಚು ಶೀತದಿಂದಾಗಲೀ ಕೂಡಿದ್ದರೆ ಗ್ರಂಥಗಳಿಗೆ ಅಪಾಯ ತಪ್ಪಿದ್ದಲ್ಲ. ಉಷ್ಣತೆ ಜಾಸ್ತಿಯಾದರೆ ಗ್ರಂಥಗಳ ಕಾಗದ, ಹೊದಿಕೆಯ ರಟ್ಟು ಮೊದಲಾದವುಗಳು ಒಣಗಿ ಒರಟಾಗಿ ಒರಟಾಗಿ ಹರಿಯುವಂತಾಗಬಹುದು. ಶೀತ ಹೆಚ್ಚಿ ಬೂಷ್ಟು ಬಂದರೆ ಗ್ರಂಥಗಳಿಗೆ ಉಪಯೋಗಿಸಿದ ಅಂಟು ಸಡಿಲವಾಗುತ್ತದೆ. ಅಲ್ಲದೆ ಕಾಗದ ಮತ್ತು ಹೊದಿಕೆ ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಹಾಗೆಯೇ ಗಾಳಿಯಲ್ಲಿನ ಕೆಲವು ಅನಿಲಗಳು ಕಾಗದದ ಕ್ಷೀಣತೆಗೆ ದಾರಿಮಾಡಿಕೊಡುತ್ತದೆ. ಧೂಳಿನಿಂದ ಗ್ರಂಥಗಳಿಗೆ ಆಗುವ ಅನಾಹುತ ಅಲ್ಪವಲ್ಲ. ಧೂಳಿನ ಮೂಲಕವಾಗಿಯೇ ಕೀಟಗಳ ಅಂಡಾಣುಗಳು ಹೊರಗಿನಿಂದ ಬಂದು ಗ್ರಂಥದಲ್ಲಿ ಸೇರಲು ಸಹಾಯವಾಗುತ್ತದೆ. ಆದ್ದರಿಂದ ಗಾಳಿಯ ಮೂಲಕ ಬರುವ ಧೂಳನ್ನು ತುಂಬ ಅಚ್ಚು ಕಟ್ಟಾಗಿ ಹೊರತೆಗೆಯುವ ಪ್ರಯತ್ನ ಮಾಡಬೇಕು. ಬಟ್ಟೆಯಿಂದ ಪುಸ್ತಕದ ಎಲ್ಲಾ ಭಾಗಗಳನ್ನು ಒರೆಸುವುದರಿಂದಲೂ, ಮೃದುವಾಗ ಮೊರಕೆಯಿಂದಲೂ ಸಾಕಷ್ಟು ದೂಳನ್ನು ತೆಗೆಯಬಹುದು. ಕಪಾಟುಗಳಲ್ಲಿ ಪುಸ್ತಕಗಳನ್ನು ಸಂಗ್ರಹಿಸುವಾಗ ಒಟೊಟ್ಟಿಗೆ ಪುಸ್ತಕಗಳನ್ನಿಡಬೇಕು. ದೊಡ್ಡ ಗಾತ್ರದ ಪುಸ್ತಕಗಳನ್ನು ನಿಲ್ಲಿಸಿಡುವುದಕ್ಕಿಂತ ಮಲಗಿಸಿಡುವುದು ಒಳ್ಳೆಯದು. ಯಾಕೆಂದರೆ

208 ತುಳುನಾಡಿನಲ್ಲಿ ಬಾಸೆಲ್ ಮಿಷನ್ ಮತ್ತಿತರ ಲೇಖನಗಳು.. [ 209 ]ನಿಲ್ಲಿಸಿಟ್ಟರೆ ಬೈಂಡು ಸಡಿಲವಾಗಿ, ಹೊಲಿಗೆ ಬಿಟ್ಟು ರಟ್ಟು ಕಿತ್ತುಬಂದು ಗ್ರಂಥವು ಹಾಳಾಗಬಹುದು. ಆದ್ದರಿಂದ ಪುಸ್ತಕಗಳನ್ನು ಒತ್ತೊತ್ತಿ ಇಡಬೇಕು (ಬುಕ್ ಸಪೋರ್ಟ್ ಸಹಾಯ ಪಡೆಯಬಹುದು)
ಗ್ರಂಥಪ್ರಿಯರಿಗೆ ಗ್ರಂಥಸಂರಕ್ಷಣೆ ಮಾಡುವುದು ದೊಡ್ಡ ಸಮಸ್ಯೆ. ಕೆಲವು ವೇಳೆ ಗ್ರಂಥಗಳನ್ನು ಶೇಖರಿಸುವುದು ಸುಲಭ ಸಾಧ್ಯವಾಗಬಹುದು. ಆದರೆ ಶೇಖರಿಸಿದ ರಾಶಿಯನ್ನು ಮುಂದಿನ ಪೀಳಿಗೆಗಳ ಉಪಯೋಗಕ್ಕಾಗಿ ಕಾದಿರಿಸುವುದು ಅತ್ಯಂತ ಕಷ್ಟದ ಕೆಲಸ. ಜಗತ್ತಿನಲ್ಲಿರುವ ಪ್ರತಿಯೊಂದು ವಸ್ತುವಿಗೂ ಒಂದೊಂದು ನಿಯಮಿತ ವೇಳಾ ಪರಿಮಿತಿ ಇರುವಂತೆ ಕಾಗದಗಳಿಗೂ ಒಂದು ಕಾಲದ ಪರಿಮಿತಿ ಇದೆ. ಈ ಪರಿಮಿತಿ ಮೀರಿದ ನಂತರ ಕಾಗದವು ತನ್ನ ಆಯುಷ್ಯವನ್ನು ಕಳೆದುಕೊಳ್ಳುತ್ತದೆ. ಅಂತಹ ಹಾಳೆಗಳನ್ನು ಎಷ್ಟು ಜಾಗ್ರತೆಯಿಂದ ಉಪಯೋಗಿಸಿದರೂ ಕಾಗದ ಪುಡಿಪುಡಿಯಾಗುತ್ತದೆ. ಈಚೆಗೆ ವೈಜ್ಞಾನಿಕ ಸಂಶೋಧನೆಗಳೂ ಹೆಚ್ಚು ಮುಂದುವರಿದಿರುವುದರಿ೦ದ ಕಾಗದ ತಯಾರಿಸುವಾಗಲೇ ಮುಂಜಾಗ್ರತೆ ವಹಿಸಿ ಇದರ ಆಯುಷ್ಯವನ್ನು ಹೆಚ್ಚಿಸುವ ಪ್ರಯತ್ನ ನಡೆದಿದೆ. ಗ್ರಂಥಗಳ ದೊಡ್ಡ ಹಾಗೂ ಭಯಾನಕ ಶತ್ರು ಎಂದರೆ ಕ್ರಿಮಿ ಕೀಟಗಳು. ಈ ಕ್ರಿಮಿ ಕೀಟಗಳ ಹಾವಳಿಯಿಂದ ಗ್ರಂಥಗಳನ್ನು ರಕ್ಷಿಸುವುದು ಅಷ್ಟು ಸುಲಭವಲ್ಲ. ಹಲವಾರು ದಿನ ಒಂದೇ ಕಡೆ ಗ್ರಂಥಗಳನ್ನು ನಿರುಪಯುಕ್ತವಾಗಿ ಇಟ್ಟುಬಿಟ್ಟರೆ ಅಲ್ಲಿ ಕೀಟಗಳು ದಾಳಿಮಾಡಿ ಗ್ರಂಥಗಳನ್ನು ನಾಶಮಾಡುತ್ತದೆ. ಈ ಕೀಟಗಳಲ್ಲಿ ಹಲವಾರು ವಿಧಗಳಿವೆ. ಗಂಡ ಕೊರೆಯುವ ಹುಳುಗಳು, ಜಿರಳೆ, ಗೆದ್ದಲು, ಸಿಲ್ವರ್ ಫಿಶ್, ಇವುಗಳಲ್ಲಿ ಗ್ರಂಥಕೀಟ, ಗೆದ್ದಲು ಮತ್ತು ಜಿರಳೆಗಳು ಗ್ರಂಥಗಳ ಅತ್ಯಂತ ವಿನಾಶಕಾರಿ ಶತ್ರುಗಳಾಗಿವೆ. ಪ್ರಾಚೀನ ಗ್ರಂಥಗಳ ಅನೇಕ ಹಸ್ತಪ್ರತಿಗಳ ಹೆಸರುಗಳನ್ನು ಇಂದು ನಾವು ಕೇಳುತ್ತೇವಾದರೂ ನೋಡಲಾಗುತ್ತಿಲ್ಲ. ಎಂದರೆ ಈ ಬಗ್ಗೆ ಹಿಂದಿನವರು ಎಚ್ಚರ ವಹಿಸುತ್ತಿರಲಿಲ್ಲವೆಂದಲ್ಲ. ಆದರೂ ಅನೇಕ ರೀತಿಯ ಶಾಸ್ತ್ರೀಯ ಗ್ರಂಥಗಳು ಹಾಗೂ ಹಸ್ತಪ್ರತಿಗಳು ಕಾಲನ ತುಳಿತಕ್ಕೆ ಬಲಿಯಾಗಿ ಅವುಗಳು ನಮಗೆ ಲಭ್ಯವಾಗದೇ ಹೋಗಿವೆ. ಗೆದ್ದಲು ಹುಳುವಿನಲ್ಲಿ 2 ವಿಧ. ನೆಲಗೆದ್ದಲು, ಮತ್ತೊಂದು ಮರದಿಂದ ಬರುವ ಗೆದ್ದಲು. ಇದಕ್ಕಾಗಿಯೇ ಗೆದ್ದಲು ಹಿಡಿಯುವಂತ ಮರದ ಕಬಾಟುಗಳಲ್ಲಿ ಪುಸ್ತಕಗಳನ್ನಿಡಬಾರದು. ಅಲ್ಲದೆ ಮಣ್ಣಿನ ಗೆದ್ದಲಿನಿಂದ ದೂರವಿರಬೇಕಾದರೆ ಮಣ್ಣಿನ ಗೋಡೆಗೆ ತಾಗಿಸಿ ಪುಸ್ತಕದ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...209 [ 210 ]ಕಬಾಟುಗಳನ್ನಿಡಬಾರದು. ಗ್ರಂಥ ಸಂಗ್ರಹಕ್ಕೆ ಕಬ್ಬಿಣದ ಕಬಾಟುಗಳು ಸೂಕ್ತ (ತುಕ್ಕು ಹಿಡಿಯದಂತೆ ಜಾಗ್ರತೆವಹಿಸಬೇಕು) ಇತ್ತೀಚೆಗೆ ಮಾರ್ಬಲ್ ಹಲಗೆಗಳ ಕಬಾಟುಗಳನ್ನು ದೊಡ್ಡ ದೊಡ್ಡ ಗ್ರಂಥಾಲಯಗಳಲ್ಲಿ ಉಪಯೋಗಿಸುತ್ತಾರೆ.
ಗ್ರಂಥಗಳು ಕ್ರಿಮಿಗಳಿಂದ ದೂರವಿರಬೇಕಾದರೆ ಯಾವಾಗಲೂ ಪುಸ್ತಕವನ್ನು ಉಪಯೋಗಿಸುತ್ತಿರಬೇಕು. ಉಪಯೋಗಿಸದ ಪುಸ್ತಕಗಳನ್ನು ವರ್ಷಕ್ಕೆರಡು ಬಾರಿಯಾದರೂ ತೆಗೆದು ಧೂಳು ಜಾಡಿಸಿ ತಿರುಗಿ ಕಪಾಟಿನಲ್ಲಿ ಜೋಡಿಸಬೇಕು. ಗ್ರಂಥಾಲಯಕ್ಕೆ ದಾನವಾಗಿ ಬರುವ ಹಳೆಯ ಪುಸ್ತಕಗಳನ್ನು ಸೇರಿಸುವಾಗ ಹುಳುಗಳು ಇಲ್ಲವೆಂದು ಖಾತ್ರಿಮಾಡಿಕೊಳ್ಳಬೇಕು. ಬೇವಿನ ಎಲೆ, ಹೊಗೆಸೊಪ್ಪು, ನೆಕ್ಕಿಸೊಪ್ಪು ಇಡುವುದರಿಂದ ಕ್ರಿಮಿಕೀಟದಿಂದ ದೂರವಿರಬಹುದು(ಪುಸ್ತಕಕ್ಕೆ ತಾಗದಂತೆ ಜಾಗ್ರತೆ ವಹಿಸಬೇಕು) ಬಜೆ-ಕೆತ್ತೆ, ಕಾಳುಜೀರಿಗೆ-ಕರ್ಪೂರ ಇವುಗಳ ಮಿಶ್ರಣದ ಪುಡಿಯನ್ನು ಬಟ್ಟೆಯಲ್ಲಿ ಕಟ್ಟಿ ಕಪಾಟಿನಲ್ಲಿಡುವುದೂ ಒಂದು ವಿಧಾನ. ಕ್ರಿಮಿನಾಶಕ ಸಿಂಪಡಿಸಿ ಕ್ರಿಮಿಗಳನ್ನು ಕೊಲ್ಲುವ ವಿಧಾನವೂ ಕೆಲವು ಗ್ರಂಥಾಲಯಗಳಲ್ಲಿವೆ. (ಆದರೆ ಕ್ರಿಮಿನಾಶಕದ ಪ್ರಮಾಣ ಹೆಚ್ಚಾದರೆ ಸಿಬ೦ದಿವರ್ಗದವರು,ಓದುಗರು ಉಸಿರಾಟದ ತೊಂದರೆಯನ್ನು ಅನುಭವಿಸಬೇಕಾದೀತು.)
ಹಸ್ತಪ್ರತಿ, ಕಡತ, ಫೋಟೋಗಳ ಸಂರಕ್ಷಣೆ: ಹಸ್ತಪ್ರತಿಗಳು ಪುಸ್ತಕ ರೀತಿಯಲ್ಲಿದ್ದರೆ ಮೇಲಿನ ರೀತಿಯಲ್ಲಿಯೇ ಜೋಪಾನ ಮಾಡುವುದು. ನೆಟ್ಟಗೆ ನಿಲ್ಲಿಸುವುದಕ್ಕಿಂತ ಮಲಗಿಸಿಡುವುದು ಉತ್ತಮ. ಕಡತಗಳಲ್ಲಿರುವ ತುಕ್ಕು ಹಿಡಿದ ಎಲ್ಲಾ ಪಿನ್ನುಗಳನ್ನು ತೆಗೆದು ಹರಿದ ಹಾಳೆಗಳಿದ್ದಲ್ಲಿ ಒಂದೊಂದು ಬಿಳಿ ಹಾಳೆಗಳನ್ನು ಸೇರಿಸುವುದರಿಂದ ಬಾಳಿಕೆಯೂ ಬರುತ್ತದೆ, ಉಪಯೋಗಿಸಲೂ ಬರುತ್ತದೆ. ಕಡತಗಳನ್ನು ಪಿನ್, ಕಬ್ಬಿಣದ ಕ್ಲಿಪ್‌ಗಳಿರದ ಉತ್ತಮ ಫೈಲ್‌ಗಳಲ್ಲಿ ಹಾಕಿ ಬಟ್ಟೆ ನೂಲಿನಿಂದ ಕಟ್ಟಿಡಬೇಕು. ಪ್ಲಾಸ್ಟಿಕ್ ಹಾಳೆಗಳಲ್ಲಿ ಹಾಕಲೇಬಾರದು. ಫೋಟೋಗಳನ್ನು ಆಲ್ಬಂನಿಂದ ಬೇರ್ಪಡಿಸಿ ಪ್ರತಿಯೊಂದು ಫೋಟೋವಿಗೂ ಬಟರ್ ಪೇಪರ್ ಲಕೋಟೆಯನ್ನು ಹಾಕಬೇಕು. ಒಂದರ ಮೇಲೆ ಒಂದು ಫೋಟೋಗಳನ್ನು ಇಡಬಾರದು. ಪ್ಲಾಸ್ಟಿಕ್ ಲಕೋಟೆಗಳಲ್ಲಿ ಹಾಕಬಾರದು.
ಪುಸ್ತಕ ಜ್ಞಾನ ಮಾತೃ ಸ್ವರೂಪ, ಅದು ಒಂದು ಗೊತ್ತಾದ ಆಯಕಟ್ಟಿನಲ್ಲಿ ಜ್ಞಾನವನ್ನು ಸಂಘಟನೆಗೊಳಿಸುತ್ತದೆ. ಜ್ಞಾನ ಹೆಚ್ಚಿಸುವ ಪುಸ್ತಕಗಳಲ್ಲಿ ಚಿಕ್ಕದು

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...210 [ 211 ]ದೊಡ್ಡದು ಎಂಬ ತಾರತಮ್ಯವಿಲ್ಲ, ಶೈಕ್ಷಣಿಕ ಅಥವಾ ವೈಜ್ಞಾನಿಕ ಎಂಬ ಬೇಧವಿಲ್ಲ. ಗ್ರಂಥ ಓದುವವರಿಗೆ ಯಾವುದೇ ನಿಬಂಧನೆಗಳಿಲ್ಲ. ಇದರಲ್ಲಿ ಅವರು ಸಂಪೂರ್ಣ ಸ್ವತಂತ್ರರು, ಕಣ್ಣಿಗೆ ಕಂಡ, ಮನಸ್ಸು ಬಯಸಿದ ಪುಸ್ತಕಗಳನ್ನು ಓದಬಹುದು. ವಿದ್ಯೆ ಕಲಿಯಲು ಒಂದು ಕ್ರಮವಿದೆ. ಶಿಕ್ಷಕ ಕೊಟ್ಟ ಪಾತ್ರೆಯಲ್ಲಿ ವಿದ್ಯಾರ್ಥಿ ಅನಿವಾರ್ಯವಾಗಿ ಮುಳುಗಿ ತನ್ನ ಜ್ಞಾನ ತೃಷೆಯನ್ನು ನೀಗಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ.

ಪುಸ್ತಕಗಳನ್ನು ಪ್ರೀತಿಸಿರಿ, ಜ್ಞಾನವನ್ನು ಹೆಚ್ಚಿಸಿಕೊಳ್ಳಿರಿ ಮತ್ತು
ಮುಂದಿನವರಿಗಾಗಿ ಉಳಿಸಿ ಸಂರಕ್ಷಿಸಿರಿ.









ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.
211
 
[ back cover ]


ಶ್ರೀಯುತ ಬೆನೆಟ್ ಜಿ. ಅಮನ್ನರವರು ಕಳೆದ 38 ವರ್ಷಗಳಿಂದ ಮಂಗಳೂರಿನ ಕರ್ನಾಟಕ ತಿಯೊಲಾಜಿಲ್ ಕಾಲೇಜಿನ ಗ್ರಂಥಾಲಯ ಮತ್ತು ಪತ್ರಾಗಾರದಲ್ಲಿ ಸೇವೆ ಸಲ್ಲಿಸುತ್ತಿರುವವರು. ನೂರಾರು ಸಂಶೋಧನೆಗೆ ನೆರವಾಗುವುದರೊಂದಿಗೆ ನಿರಂತರವಾಗಿ ಸಂಶೋಧನಾತ್ಮಕ ಬರವಣಿಕೆಗಳ ಮೂಲಕ ಗುರುತಿಸಿಕೊಂಡಿರುವವರು. ಮಿಶನರಿಗಳ ಬರವಣಿಗೆಗಳ ಮೂಲಕ ಸಂಬಂಧಪಟ್ಟಂತೆ ಅವರೊಂದು ಮಾಹಿತಿ ಕೋಶ. ಅವರ ಲೇಖನಗಳು ಇದೀಗ "ತುಳುನಾಡಿನಲ್ಲಿ ಬಾಸೆಲ್ ಮಿಶನ್-ಮತ್ತಿತರ ಲೇಖನಗಳು" ಎಂಬ ಹೆಸರಿನ ಕೃತಿಯಾಗಿ ಲೋಕಾರ್ಪಣೆಯಾಗುತ್ತಿದೆ.

ನಿರಂತರ ಸಂಶೋಧನೆಯೊಂದಿಗೆ 'ಕುರಲ್ ಇಷ್ಟೆರ್ ಕುಡ್ಡ', 'ತುಳು ಪರಿಷತ್' 'ತುಳು ಬೈಬಲ್ ತರ್ಜುಮೆ ಸಮಿತಿ', ಸದಸ್ಯರಾಗಿ, ತುಳು ವಿಕಿಪಿಡಿಯಾ' ಸಂಪಾದಕರಾಗಿ, "ಬಲ್ಮಕೊ'ದ ನಿರ್ದೇಶಕರಾಗಿಯೂ ಇವರು ಸೇವೆ ಸಲ್ಲಿಸುತ್ತಿದ್ದಾರೆ. 2015-2017 ಸಾಲಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದು ಅಕಾಡೆಮಿಯ ಗ್ರಂಥಾಲಯ ಮತ್ತು ಪತ್ರಾಗಾರವನ್ನು ವ್ಯವಸ್ಥಿತವಾಗಿ ರೂಪಿಸಿದ್ದಾರೆ. 'ಮದಿಪು' ಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ. 'ಚಿಗುರಿದ ಬದುಕು' (ಕಿರು ಕಾದಂಬರಿ) (1996), 'ಬಿಲ್ಲವರು ಮತ್ತು ಬಾಸೆಲ್ ಮಿಶನ್'(2005), 'ಗಾನ ಗೊಂಚಲು' (ಸಂ.2006), 'ಜಾನ್ ಜೇಮ್ಸ್ ಬ್ರಿಗೆಲ್'(2012, ಕನ್ನಡ ವಿ.ವಿ., ಹಂಪಿ) ಕೃತಿಗಳನ್ನು ಬರೆದು ಪ್ರಕಟಿಸಿರುವುದಲ್ಲದೆ, 'ಬಾಸೆಲ್ ಮಿಶನರಿಗಳ ತುಳು ಟಿಪ್ಪಣಿಗಳು (2015) ಮತ್ತು 'ತುಳು ವಿಕ್ರಮಾರ್ಕ ಕತೆ' (2014) ಕೃತಿಗಳನ್ನು ಡಾ. ದುರ್ಗಾಪ್ರವೀಣ್‌ರರೊಂದಿಗೆ ಸಂಪಾದಿಸಿರುತ್ತಾರೆ. ಮಿಶನ್ -200 ಮತ್ತು 2009ರಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ಪುಸ್ತಕ ಪ್ರಕಟಣೆಗಳ ಸಂಪಾದಕ ಮಂಡಳಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಪ್ರಸ್ತುತ ಕೃತಿಯ ಶಿರೋನಾಮೆಯು ಅತ್ಯಂತ ಸೂಕ್ತವಾಗಿದ್ದು ಇಲ್ಲಿನ ಇಪ್ಪತ್ತೇಳು ಲೇಖನಗಳಲ್ಲಿ ಇಪ್ಪತ್ತು ಲೇಖನಗಳು ಬಾಸೆಲ್ ಮಿಶನ್‌ನ ವಿವಿಧ ಆಯಾಮಗಳ ಕೊಡುಗೆಗೆ ಸಂಬಂಧಪಟ್ಟವುಗಳಾಗಿವೆ. ಈ ಲೇಖನಗಳಲ್ಲಿ ಅವರು ಬಾಸೆಲ್ ಮಿಶನ್ ಸಂಸ್ಥೆಯು ಮುದ್ರಣ, ಸಂಸ್ಕೃತಿ, ಶಿಕ್ಷಣ, ಮಾಧ್ಯಮ, ಕನ್ನಡ ತುಳು ಸಾಹಿತ್ಯ, ಕೃಷಿ, ಮುಂತಾದ ಕ್ಷೇತ್ರದಲ್ಲಿ ನೀಡಿದ ಕೊಡುಗೆಯನ್ನು ವಿವರವಾಗಿ ಚರ್ಚಿಸಿದ್ದಾರೆ. ತುಳುನಾಡಿನಲ್ಲಿ ಬಿಲ್ಲವರು ಕ್ರೈಸ್ತರಾಗಲು ಕಾರಣವೇನು, ಮಹಿಳೆಯರ, ಶೈಕ್ಷಣಿಕವಾಗಿ ಹಿಂದುಳಿದವರ ಅಭಿವೃದ್ಧಿ, ಸ್ವದೇಶಾಭಿಮಾನ, ಸ್ವಾವಲಂಬನೆ, ವಿದೇಶಿಯರೊಂದಿಗೆ ದೇಶಿಯರು, ಸ್ವಾತಂತ್ರ್ಯ ಚಳುವಳಿ ಮುಂತಾದ ವಿಚಾರಗಳನ್ನು ಅನೇಕ ಅನನ್ಯ ಅಂಶಗಳೊಂದಿಗೆ ಅವರು ದಾಖಲಿಸಿದ್ದಾರೆ. ಇದರೊಂದಿಗೆ ಸಾಂದರ್ಭಿಕವಾಗಿ ಕ್ರಿಸ್ಮಸ್ ಹಬ್ಬದ ಆಚರಣೆ, ಕ್ರೈಸ್ತರ ಪಾರಂಪರಿಕ ಜ್ಞಾನ, ಆಧುನಿಕತೆಯಿಂದ ನಶಿಸುತ್ತಿರುವ ಕಸುಬುಗಳು, ಚರಿತ್ರೆಯಲ್ಲಿ ಸ್ಮರಣ ಸಂಚಿಕೆಗಳ ಪಾತ್ರ ಓದುವಿಕೆ ಮತ್ತು ಗ್ರಂಥ ಸಂರಕ್ಷಣೆಯ ವಿಧಾನ ಮೊದಲಾದ ವೈಶಿಷ್ಟ್ಯಪೂರ್ಣ ಲೇಖನಗಳು ಇಲ್ಲಿವೆ. ತುಳುನಾಡಿನ ಹಲವು ಮೊದಲುಗಳ ಬಗ್ಗೆ ಬೆಳಕು ಚೆಲ್ಲುವ ಈ ಕೃತಿ ವಿದೇಶಿಯರ ಕೊಡುಗೆಗಳ ಬಗೆಗಿನ ಹತ್ತುಹಲವು ಅಕರಗಳನ್ನು ತೆರೆದಿಡುತ್ತದೆ.

 
ಅಂಕನಹಳ್ಳಿ ಪ್ರಕಾಶನ
ಅಂಕನಹಳ್ಳಿ, ಬನ್ನಿಕುಪ್ಪೆ ಅಂಚೆ, ಕೈಲಾಂಚ ಹೋಬಳಿ
ರಾಮನಗರ ತಾ/ಜಿಲ್ಲೆ, ಮೊ: 9632497558