Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/172

From Wikisource
This page has not been proofread.

ಶಾಲೆಯ ಜತೆಗೆ ಡೇ ಕೇರ್ ಸೆಂಟರ್ ಒಂದು ಕಾರ್ಯ ನಿರ್ವಹಿಸುತ್ತದೆ. ಉದ್ಯಾವರ:- ಉಡುಪಿ ತಾಲೂಕಿನಲ್ಲಿರುವ ಉದ್ಯಾವರದಲ್ಲಿ ಶಾಲೆ ಮತ್ತು ದೇವಾಲಯ ಒಂದೇ ಕಟ್ಟಡದಲ್ಲಿದ್ದು ಸಭಾಪಾಲಕರ ಮನೆ ಹಾಗೂ ಒಂದು ಸಣ್ಣ ವಾಣಿಜ್ಯ ಸಂಕೀರ್ಣವಿರುವ ನಿವೇಶವಿದೆ. ಮಿಶನ್ ಅಸ್ತಿಯಲ್ಲಿ ಮನೆಗಳಿಲ್ಲ. ಸರಕಾರದ ಮಂಗಳೂರಿನ 4 ಸಭೆಗಳ ಹೆಚ್ಚಿನ ಕ್ರೈಸ್ತರು ಮಿಶನ್‌ ಆಸ್ತಿಯಲ್ಲಿಯೇ ವಾಸ ಮಾಡುತ್ತಿದ್ದರೂ ಉಳುವವನೇ ಹೊಲದೊಡೆಯ ಕಾನೂನು/ಡಿಕ್ಲರೇಶನ್/ ಒತ್ತುವರಿ/ ಅಕ್ರಮ ಸಕ್ರಮ ದೇಶೀಯ ನಾಯಕತ್ವ ಸರ್ವಿಸ್ ಕ್ವಾಟರ್ಸ್ ಬಿಡದೇ ಇದ್ದದ್ದು ಸೇವೆಯಲ್ಲಿದ್ದವರು ಕೃಷಿಕರಲ್ಲದವರೂ ಡಿಕ್ಲರೇಶನ್ ಹಾಕಿದ್ದು ಕೃಷಿಕರಲ್ಲದವರು ಡಿಕ್ಲರೇಶನ್ ಹಾಕಿದಾಗ ಕಾನೂನು ಪ್ರಕಾರ ತಿರಸ್ಕೃತಗೊಂಡರೂ ಮಿಶನ್ ಸುಮ್ಮನೆ ತಟಸ್ಥವಾದದ್ದು ಮತ್ತಿತರ ಕಾರಣಗಳಿಂದ ಮಿಶನರಿಗಳು ಮಾಡಿದ ನೂರಾರು ಎಕ್ರೆ ಸ್ಥಳಗಳು ಪರಾಭಾರೆಯಾಗಿವೆ. 160 ಈ ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...